Homeಕರ್ನಾಟಕಮಣ್ಣು ಉಳಿಸುತ್ತೇವೆ: ರಾಜ್ಯ ಸರ್ಕಾರದೊಂದಿಗೆ ಜ್ಞಾಪನಪತ್ರಕ್ಕೆ ಸಹಿ ಹಾಕಿದ ಈಶಾ ಫೌಂಡೇಷನ್‌

ಮಣ್ಣು ಉಳಿಸುತ್ತೇವೆ: ರಾಜ್ಯ ಸರ್ಕಾರದೊಂದಿಗೆ ಜ್ಞಾಪನಪತ್ರಕ್ಕೆ ಸಹಿ ಹಾಕಿದ ಈಶಾ ಫೌಂಡೇಷನ್‌

ಈ ಹಿಂದೆ ‘ಕಾವೇರಿ ಕೂಗು’ ನಡೆಸಿ ಗಿಡ ನೆಡುವುದಾಗಿ ಹೇಳಿದ್ದ ಜಗ್ಗಿ ವಾಸುದೇವ್‌ ಕೋಟ್ಯಂತರ ಹಣ ಸಂಗ್ರಹಿಸಿರುವ ಆರೋಪ ಎದುರಿಸುತ್ತಿದ್ದಾರೆ. ಈಗ ‘ಮಣ್ಣು ಉಳಿಸಿ’ ಅಭಿಯಾನ ನಡೆಸುತ್ತಿದ್ದಾರೆ.

- Advertisement -
- Advertisement -

ಈಶಾ ಫೌಂಡೇಶನ್ ತನ್ನ ಸೇವ್ ಸಾಯಿಲ್‌ (ಮಣ್ಣು ಉಳಿಸಿ) ಅಭಿಯಾನದ ಭಾಗವಾಗಿ ಮಣ್ಣಿನ ಆರೋಗ್ಯ ಸುಧಾರಿಸುತ್ತೇವೆ ಎಂದು ಕರ್ನಾಟಕ ಸರ್ಕಾರದೊಂದಿಗೆ ಭಾನುವಾರ ಜ್ಞಾಪನ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ.

ಜ್ಞಾಪಕ ಪತ್ರವು ಎರಡು ಅಥವಾ ಹೆಚ್ಚಿನ ಪಕ್ಷಗಳ ನಡುವಿನ ಒಪ್ಪಂದವಾಗಿದೆ. ಇದು ಕಾನೂನುಬದ್ಧ ಕ್ರಮವೇನೂ ಅಲ್ಲ. ಆದರೆ ಒಪ್ಪಂದದೊಂದಿಗೆ ಮುಂದುವರಿಯಲು ಉಭಯ ಪಕ್ಷಗಳ ಇಚ್ಛೆಯನ್ನು ಸಂಕೇತಿಸುತ್ತದೆ.

‘ಮಣ್ಣು ಉಳಿಸಿ’ ಅಭಿಯಾನ ಆರಂಭಿಸಿರುವ ಸ್ವಯಂ ಘೋಷಿತ ದೇವಗುರು ಜಗ್ಗಿ ವಾಸುದೇವ್ ತಮ್ಮ 100 ದಿನಗಳ ಮೋಟಾರ್ ಸೈಕಲ್ ಪ್ರಯಾಣದ ಅಂಗವಾಗಿ ಭಾನುವಾರ ಬೆಂಗಳೂರಿಗೆ ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗಿಯಾದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಲಂಡನ್ ನಿಂದ ಆರಂಭವಾದ ಅಭಿಯಾನ ಕೊನೆಗೂ ಕಾವೇರಿ ತಲುಪುತ್ತಿದೆ ಎಂದು ಜಗ್ಗಿ ಹೇಳಿದ್ದಾರೆ. ಅಭಿಯಾನದ ಭಾಗವಾಗಿ 27,278 ಕಿ.ಮೀ. ಕ್ರಮಿಸಿದ್ದಾರೆ. ಕಳೆದ 94 ದಿನಗಳಲ್ಲಿ ನಡೆದ 593 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಈಶಾ ಫೌಂಡೇಷನ್‌ ಪ್ರತಿ ದೇಶದ ವಿಶಿಷ್ಟತೆಗಳ ಆಧಾರದ ಮೇಲೆ 193 ರಾಷ್ಟ್ರಗಳಿಗೆ ಪ್ರತ್ಯೇಕ ‘ಮಣ್ಣು ಉಳಿಸಿ’ ನೀತಿಗಳನ್ನು ರೂಪಿಸಿದೆ. ಆ ದೇಶಗಳಿಗೆ ದಾಖಲೆಗಳನ್ನು ಹಸ್ತಾಂತರಿಸಿದೆ. ವಿವಿಧ ದೇಶಗಳು ಆ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸಿವೆ ಎಂದು ಜಗ್ಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿರಿ: ಪರಿಷ್ಕೃತ ಪಠ್ಯ ಪುಸ್ತಕಗಳನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆ ಚಿತ್ರಗಳಲ್ಲಿ ನೋಡಿ

74 ರಾಷ್ಟ್ರಗಳು ಶಿಫಾರಸುಗಳನ್ನು ಜಾರಿಗೆ ತರಲು ಒಪ್ಪಿಕೊಂಡಿವೆ. ಜ್ಞಾಪನ ಪತ್ರಕ್ಕೆ ಸಹಿಹಾಕಿವೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಏಳೆಂಟು ರಾಜ್ಯಗಳು ಜ್ಞಾಪನ ಪತ್ರಕ್ಕೆ ಸಹಿ ಹಾಕುತ್ತಿವೆ. ಕರ್ನಾಟಕವೂ ಸಹಿ ಹಾಕಿದೆ.

“ಯುಎನ್ ಏಜೆನ್ಸಿಗಳ ಪ್ರಕಾರ ಮಣ್ಣಿನಲ್ಲಿ ಸಾವಯವ ಪ್ರಮಾಣವು ಕನಿಷ್ಠ 3 ಪ್ರತಿಶತದಷ್ಟು ಇರಬೇಕು. ಆದರೆ, ವಿಶ್ವದ ಒಂದೇ ಒಂದು ದೇಶ ಈ ಗುರಿ ತಲುಪಿಲ್ಲ” ಎಂದು ಜಗ್ಗಿ ಪ್ರತಿಪಾದಿಸಿದ್ದಾರೆ.

ಅರಮನೆ ಮೈದಾನದಲ್ಲಿ ಜಗ್ಗಿಯವರ ‘ಮಣ್ಣು ಉಳಿಸಿ’ ಕಾರ್ಯಕ್ರಮವನ್ನು ವೀಕ್ಷಿಸಲು ನೂರಾರು ಜನರು ಭಾನುವಾರ ಆಗಮಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಗ್ಗಿ ವಾಸುದೇವ್‌ ಜ್ಞಾಪನ ಪತ್ರಗಳ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಂತೆ “ಮಣ್ಣು ಉಳಿಸಿ” ಎಂಬ ಘೋಷಣೆಗಳನ್ನು ಕೂಗಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿದ್ದರು.

ಯಡಿಯೂರಪ್ಪ ಅವರು ಜಗ್ಗಿಯವರ ಪಾದ ಮುಟ್ಟಿ ಅವರ ಆಶೀರ್ವಾದ ಪಡೆದುಕೊಂಡರು. 25 ಲಕ್ಷ ರೂ. ಬೆಲೆ ಬಾಳುವ BMW 1600 GT ಸೂಪರ್‌ಬೈಕ್‌ನಲ್ಲಿ ಸವಾರಿ ಮಾಡುವ ಮೂಲಕ ಜಗ್ಗಿ ವಾಸುದೇವ್‌ ಸ್ಥಳಕ್ಕೆ ಆಗಮಿಸಿದ್ದರು.

‘ಕಾವೇರಿ ಕೂಗು’ ಹೆಸರಲ್ಲಿ ಕೋಟಿ ಕೋಟಿ ರೂ. ವಂಚನೆ!?

’ಕಾವೇರಿ ಕೂಗು’ ಅಭಿಯಾನಕ್ಕಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹ ಮಾಡಿರುವ ಈಶಾ ಫೌಂಡೇಶನ್‌ ಸ್ಥಾಪಕ ಜಗ್ಗಿ ವಾಸುದೇವ್‌ ಅಫಿಡವಿಟ್‌ ಮೂಲಕ ಎಷ್ಟು ಹಣ ಸಂಗ್ರಹಿಸಿದ್ದಾರೆ, ಯಾವೆಲ್ಲಾ ವಿಧಾನಗಳ ಮೂಲಕ ಸಂಗ್ರಹಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕೆಂದು ಕರ್ನಾಟಕ ಹೈಕೋರ್ಟ್‌ ಈ ಹಿಂದೆ ಆದೇಶಿಸಿತ್ತು.

ಆಧ್ಯಾತ್ಮಕ ಸಂಘಟನೆಯಾದ ಕಾರಣಕ್ಕೆ ಯಾರೂ ಕೂಡ ಕಾನೂನಿಗಿಂತ ಮಿಗಿಲಲ್ಲ ಎಂದು ಒತ್ತಿ ಹೇಳಿದ್ದ ಮುಖ್ಯ ನ್ಯಾಯಮೂರ್ತಿ ಅಭಯ್‌ ಓಕ ಮತ್ತು ಹೇಮಂತ್‌ ಚಂದನ್‌ಗೌಡರ್‌ ಅವರಿದ್ದ ಪೀಠ, ಜಗ್ಗಿ ವಾಸುದೇವ್‌ ಸಂಗ್ರಹಿಸಿರುವ ಹಣದ ಲೆಕ್ಕ ಕೊಡಬೇಕು ಎಂದು ತಾಕೀತು ಮಾಡಿತ್ತು.

ಕಾವೇರಿ ಕೂಗು ಯೋಜನೆಗೆ ಯಾವ ಕಾರಣಕ್ಕೂ ಸಾರ್ವಜನಿಕರಿಂದ ಹಣ ಸಂಗ್ರಹಿಸಬಾರದು ಎಂದು ವಕೀಲ ಎ.ವಿ. ಅಮರನಾಥನ್ ಸಲ್ಲಿಸಿದ ಸಾರ್ವಜನಿಕ ಹಿತರಕ್ಷಣಾ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಮಾನಕ್ಕೆ ಬಂದಿತ್ತು.

ಯಾರಾದರೂ ಜನರಿಗೆ ಅರಿವು ಮೂಡಿಸಿದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದರ ನೆಪದಲ್ಲಿ ಜನರಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸುವುದನ್ನು ಒಪ್ಪುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತ್ತು.

ಅಕ್ರಮ ಕಟ್ಟಡ ಕುರಿತು ಪ್ರಶ್ನಿಸಿದ್ದಕ್ಕೆ ಸಂದರ್ಶನವನ್ನೇ ಬಿಟ್ಟು ಹೊರಟ ಜಗ್ಗಿ ವಾಸುದೇವ್‌

ಸ್ವಯಂಘೋಷಿತ ದೇವಮಾನವ, ಸದ್ಗುರು ಎಂದೂ ಕರೆಯಲ್ಪಡುವ ಜಗ್ಗಿ ವಾಸುದೇವ್ ಅವರು ತಾಳ್ಮೆಯ ಬಗ್ಗೆ ಅನೇಕ ಸಂದರ್ಭಗಳಲ್ಲಿ ಬೋಧನೆ ಮಾಡಿದ್ದಾರೆ. ಆದರೆ ಬಿಬಿಸಿ ತಮಿಳು ಮಾಧ್ಯಮಕ್ಕೆ ಸಂದರ್ಶನ ನೀಡುವ ವೇಳೆ ಸ್ವತಃ ಜಗ್ಗಿಯವರೇ ತಮ್ಮ ತಾಳ್ಮೆಯನ್ನು ಕಳೆದುಕೊಂಡ ಘಟನೆ ಇತ್ತೀಚೆಗೆ ನಡೆದಿತ್ತು.

ಸಂದರ್ಶನದ ಮಧ್ಯದಲ್ಲೇ ಕ್ಯಾಮೆರಾಗಳನ್ನು ಸ್ವಿಚ್ ಆಫ್ ಮಾಡಲು ಸೂಚಿಸಿದ್ದರು. ಬಿಬಿಸಿ ತಮಿಳಿನ ಕೆ.ಸುಬಗುಣಂ ಅವರು ಜಗ್ಗಿ ವಾಸುದೇವ್‌ ಅವರ ಸಂದರ್ಶನ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಸಂದರ್ಶನದ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪತ್ರಕರ್ತರ ಪ್ರಶ್ನೆಗಳಿಂದ ಜಗ್ಗಿ ವಿಚಲಿತರಾಗಿರುವುದು ಚರ್ಚೆಯಾಗುತ್ತಿದೆ.

ಜಗ್ಗಿ ಆರಂಭಿಸಿರುವ ‘ಮಣ್ಣು ಉಳಿಸಿ ಆಂದೋಲನ’ದ ಕುರಿತು ಸಂದರ್ಶನ ನಡೆಯುತ್ತಿತ್ತು. ಸ್ವಘೋಷಿತ ದೇವಮಾನವರಾದ ಜಗ್ಗಿ ತಮ್ಮ ದ್ವಿಚಕ್ರ ವಾಹನದಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣಿಸಿ ಈ ಅಭಿಯಾನ ನಡೆಸುತ್ತಿದ್ದಾರೆ. ಆದರೆ ಜಗ್ಗಿಯವರ ಇಶಾ ಫೌಂಡೇಶನ್‌ಗೆ ಸಂಬಂಧಿಸಿದಂತೆ ಪರಿಸರ ಅನುಮತಿಯ ವಿವಾದದ ಕುರಿತು ಪ್ರಶ್ನೆಗಳು ಬರುತ್ತಿದ್ದಂತೆ ಸಿಟ್ಟಿಗೆದ್ದಿದ್ದರು. ಅಂತಿಮವಾಗಿ ಸಂದರ್ಶನವನ್ನು ಮೊಟಕುಗೊಳಿಸಲು ಸೂಚಿಸಿದ್ದರು.

ಕೊಯಮತ್ತೂರು ಜಿಲ್ಲೆಯ ಬೂಲುವಾಪಟ್ಟಿ ಗ್ರಾಮದಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಪೂರ್ವಾನುಮತಿ ಪಡೆದಿಲ್ಲ. ನಿರ್ಮಾಣ ಮುಗಿದ ಸುಮಾರು ಮೂರು ವರ್ಷಗಳ ನಂತರ ಅಗತ್ಯವಿರುವ ಅನುಮತಿಗಳನ್ನು ಕೇಳಲಾಗಿದೆ ಎಂದು 2018ರಲ್ಲಿ ಸದ್ಗುರುಗಳ ಈಶಾ ಫೌಂಡೇಶನ್ ವಿರುದ್ಧ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌‌ (ಸಿಎಜೆ) ಗಂಭೀರ ಆರೋಪಗಳನ್ನು ಮಾಡಿದ್ದರು.

ಇದನ್ನೂ ಓದಿರಿ: ‘ಸಾಯಿ ಪಲ್ಲವಿ ಬಾಯಿ ಮುಚ್ಕೊಂಡ್‌ ಫಿಲ್ಮ್‌ ಮಾಡಲಿ’: ಎಚ್.ಆರ್‌.ರಂಗನಾಥ್‌ ಹೇಳಿಕೆಗೆ ಜನಾಕ್ರೋಶ

ಗ್ರಾಮದಲ್ಲಿ 32,856 ಚದರ ಅಡಿ ವಿಸ್ತೀರ್ಣದ ವಿವಿಧ ಕಟ್ಟಡಗಳನ್ನು 1994 ರಿಂದ 2008 ರ ನಡುವೆ ಸೂಕ್ತ ಅನುಮತಿಯೊಂದಿಗೆ ನಿರ್ಮಿಸಲಾಗಿದೆ ಎಂದು ಸಿಎಜಿ ಹೇಳಿದ್ದರು. ಆದರೆ 2005 ಮತ್ತು 2008ರ ನಡುವೆ ಗುಡ್ಡಗಾಡು ಪ್ರದೇಶ ಸಂರಕ್ಷಣಾ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯದೆ ಕಟ್ಟಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದರು. ಇಶಾ ಸಂಸ್ಥೆಯು 2011ರಲ್ಲಿ ನಿರ್ಮಾಣಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಮತ್ತು ಅನುಮೋದನೆ ನೀಡಬೇಕೆಂದು ಅರಣ್ಯ ಇಲಾಖೆಯನ್ನು ಕೋರಿತ್ತು.

“ಈಶಾ ಫೌಂಡೇಶನ್ ಈಗ ಪರಿಸರಕ್ಕಾಗಿ ಕೆಲಸ ಮಾಡುತ್ತಿದೆ” ಎಂದು ಬಿಬಿಸಿಯ ಸುಬಗುಣಂ ಪ್ರಸ್ತಾಪಿಸುತ್ತಾ “ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಯನ್ನು ಪಡೆದಿಲ್ಲ ಎಂಬ ಆರೋಪದ ಬಗ್ಗೆ ಸದ್ಗುರುಗಳ ಅಭಿಪ್ರಾಯವೇನು?” ಎಂದು ಕೇಳಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡು ಸಂದರ್ಶನ ಮೊಟುಕುಗೊಳಿಸಿದ್ದರು. (ಈ ಕುರಿತ ಪೂರ್ಣ ವಿವರ ಓದಲು ಇಲ್ಲಿ ಕ್ಲಿಕ್‌ ಮಾಡಿರಿ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...