Homeಅಂತರಾಷ್ಟ್ರೀಯಶೆರಿಬೇಬಿ ಮತ್ತು ನೊಬಡಿ’ಸ್ ಫೂಲ್: ಹಾಲಿವುಡ್ ನ ಎರಡು ಸರಳ ಚಿತ್ರಗಳು

ಶೆರಿಬೇಬಿ ಮತ್ತು ನೊಬಡಿ’ಸ್ ಫೂಲ್: ಹಾಲಿವುಡ್ ನ ಎರಡು ಸರಳ ಚಿತ್ರಗಳು

- Advertisement -
- Advertisement -

ಯಾವುದೋ ಒಂದು ಸಿನೆಮಾ ಏಕೆ ಇಷ್ಟವಾಗುವುದು ಎಂದು ಸರಳವಾಗಿ ಹೇಳುವುದು ಕಷ್ಟ. ಕೆಲವೊಮ್ಮೆ ನಮ್ಮ ಭಾವನೆಗಳನ್ನು, ನಮ್ಮ ತುಮುಲ ಸಂಕಷ್ಟಗಳನ್ನು ಪರದೆಯ ಮೇಲೆ ನೋಡಿದಾಗ, ಕೆಲವೊಮ್ಮೆ ನಮಗೆ ಗೊತ್ತಿರದ ಹೊಸ ಸಂಗತಿಗಳನ್ನು, ಹೊಸ ರೀತಿಯ ಸಂಬಂಧಗಳನ್ನು ನೋಡಿದಾಗ, ಇನ್ನೂ ಕೆಲವೊಮ್ಮೆ ನಾವು ಕಂಡಿದ್ದರೂ ಎಂದೂ ಗಮನಿಸದ ಸಂಗತಿಗಳನ್ನು ನೋಡಿದಾಗ ಆಯಾ ಚಿತ್ರಗಳು ಇಷ್ಟವಾಗುತ್ತವೆ. ಕೆಲವೊಮ್ಮೆ ಆಯಾ ಕಥೆಗಾರರು ಏನನ್ನು ಹೇಳಲು ಬಯಸುತ್ತಾರೆಯೋ ಅದನ್ನು ಮೀರಿ ಬೇರೆ ಕೆಲವು ಅಂಶಗಳ ಕಾರಣದಿಂದಲೂ ಚಿತ್ರಗಳು ಇಷ್ಟವಾಗುತ್ತವೆ.

ಕೌಟುಂಬಿಕ ಸಂಬಂಧಗಳ ಬಗ್ಗೆ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ ಎಂದು ನನಗನಿಸಿತ್ತು. ಕೌಟುಂಬಿಕ ಚಿತ್ರಗಳೆಂದರೆ ಹೆಚ್ಚಾಗಿ ದಂಪತಿಗಳ ಸಂಬಂಧ ಅಥವಾ ತಂದೆ ತಾಯಿ ಮತ್ತು ಮಕ್ಕಳ ಸಂಬಂಧದ ಚಿತ್ರಗಳು ಕಂಡುಬರುತ್ತವೆ. ನಾನು ನೋಡಿದ ಹಾಗೆ ಅಣ್ಣತಂಗಿಯರ ಸಂಬಂಧದ ಚಿತ್ರಗಳು ಬಂದಿದ್ದು ಸಾಪೇಕ್ಷವಾಗಿ ಕಡಿಮೆ. ಶೆರಿಬೇಬಿ (Sherrybaby)2006 ಎನ್ನುವ ಚಿತ್ರ ಮುಖ್ಯ ಅಂಶ ಅಣ್ಣತಂಗಿಯರ ಸಂಬಂಧವಂತೂ ಅಲ್ಲ ಆದರೆ ನನಗೆ ನೆನಪುಳಿದಿದ್ದು ಆ ಸಂಬಂಧ.

ಮಾದಕವ್ಯಸನಿಯಾಗಿದ್ದ ಶೆರಿ ಸ್ವಾನ್ಸನ್ ಈಗತಾನೇ ಯಾವುದೋ ಒಂದು ಅಪರಾಧಕ್ಕಾಗಿ ಸೆರೆವಾಸ ಅನುಭವಿಸಿ ಪರೋಲ್ ಮೇಲೆ ಹೊರಬಂದಿದ್ದಾಳೆ. ಅವಳಿಗೆ ಈಗ ತನ್ನ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕಿದೆ. ತನ್ನ ಪುಟ್ಟ ಮಗಳೊಂದಿಗೆ ಹೊಸದಾಗಿ ಸಂಬಂಧ ಬೆಸೆಯಬೇಕಿದೆ, ಕೆಲಸ ಮಾಡಬೇಕಿದೆ. ಮಾದಕವಸ್ತುವನ್ನು ಸೇವಿಸದರೆ ಮತ್ತೇ ಸೆರೆವಾಸ ಅನುಭವಿಸಬೇಕಾಗುತ್ತದೆ.

ಲಾರಿ ಕೋಲ್ಯರ್ ನಿರ್ದೇಶಿಸಿದ ಈ ಚಿತ್ರ ಮಾದಕವಸ್ತು, ಅದರ ಬಳಕೆಯ ಬಗ್ಗೆ ಆಗಿಲ್ಲ ಅಥವಾ ಬಳಕೆಯನ್ನು ತ್ಯಜಿಸಲು ಮಾಡುವ ಸಂಘರ್ಷದ ಬಗ್ಗೆಯೂ ಇಲ್ಲ. ನಾಯಕಿಯನ್ನು ಒಬ್ಬ ಸಂತ್ರಸ್ತೆಯಂತೆ ಚಿತ್ರಿಸದೇ, ಹೊರಗಡೆಯ ಜೀವನಕ್ಕೆ ಹೊಂದಿಕೊಳ್ಳಬೇಕಾದರೆ ಅವಳೇನೇನು ಮಾಡುತ್ತಾಳೆ ಎನ್ನುವುದನ್ನು ಸರಳವಾಗಿ ಚಿತ್ರಿಸಿದ್ದಾರೆ. ನಾಯಕಿ ಉದ್ಯೋಗವನ್ನು ಪಡೆಯಲು ತನ್ನ ಲೈಂಗಿಕತೆಯನ್ನು ಬಳಸುವಳು. ಬೇಟಿಯಾದ ಕೆಲವೇ ಸಮಯದಲ್ಲಿ ಇನ್ನೊಬ್ಬನೊಂದಿಗೆ ಲೈಂಗಿಕ ಸಂಪರ್ಕ ಮಾಡುವಳು. ಅವಳಿಗೆ ತಾನು ಮಾಡಿದ ತಪ್ಪಿನ ಅರಿವಿದೆ. ತನ್ನ ಅಣ್ಣ ಮತ್ತು ಅತ್ತಿಗೆಯ ಮನೆಯಲ್ಲಿ ಬೆಳೆಯುತ್ತಿರುವ ಮಗಳೊಂದಿಗೆ ಬಾಂಧ್ಯವ್ಯವನ್ನು ಮರುಸ್ಥಾಪಿಸಬೇಕಿದೆ. ಮಗಳನ್ನು ನೋಡಿಕೊಳ್ಳುತ್ತಿರುವ ಅತ್ತಿಗೆಗೆ ಇವಳು ತಾಯಿಯ ಜವಾಬ್ದಾರಿಯನ್ನು ನಿಭಾಯಿಸಬಲ್ಲಳೇ ಎನ್ನುವ ಸಂಶಯವಿದೆ. ಮಗಳು ಒಂದು ಸಲ ಮಮ್ಮಿ ಎಂದು ಕರೆದರೆ ಇನ್ನೊಂದು ಸಲ ಇವಳ ಹೆಸರನ್ನು ಹೇಳಿ ಕರೆಯುತ್ತಾಳೆ.

ತನ್ನ ಪರೋಲ್ ಸರಿಯಾಗಿ ನಿಭಾಯಿಸುವುದು, ಕೆಲಸ, ತನ್ನ ತಂದೆಯೊಂದಿಗಿನ ಸಂಕೀರ್ಣ ಸಂಬಂಧಗಳೆಲ್ಲವೂ ಇವಳ ಮೇಲೆ ಪರಿಣಾಮ ಬೀರದೇ ಇರುವುದಿಲ್ಲ. ಮಾದಕವಸ್ತುಗಳು ಸದಾಕಾಲ ಅವಳನ್ನು ಕರೆಯುತ್ತಲೇ ಇರುತ್ತವೆ. ಇವಳು ಯಶಸ್ವಿಯಾಗಿ ನಿಭಾಯಿಸಬಲ್ಲಳೆ ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತದೆ.

ಇಂತಹ ಪಾತ್ರಗಳನ್ನು ಅಭಿನಯಿಸುವುದೆಂದರೆ ಸಾಮಾನ್ಯವಾಗಿ ಹೆಚ್ಚಿನ ನಟರಿಗೆ ತಮ್ಮ ಅಭಿನಯ ಸಾಮಥ್ರ್ಯವನ್ನು ಪ್ರದರ್ಶಿಸುವ ಅವಕಾಶ ಸಿಕ್ಕಂತೆ. ಆದರೆ ಮ್ಯಾಗಿ ಜಿಲೆನ್‍ಹಾಲ್ ಎಂಬ ಅದ್ಭುತ ನಟಿಯು ನಾವೆಷ್ಟು ಸಲ ಈ ಚಿತ್ರವನ್ನು ನೋಡಿದರೂ ಅವರ ಅಭಿನಯವನ್ನು ವಿಶ್ಲೇಷಿಸಲು ಆಗದಂತೆ, ಕೇವಲ ಶೇರಿಯನ್ನು ಮಾತ್ರ ನೋಡುವಂತೆ ಸರಳವಾಗಿ ಅಭಿನಯಿಸಿದ್ದಾರೆ.

ಸಂಕೀರ್ಣ ಸಂಬಂಧಗಳನ್ನು ನೇರವಾಗಿ ಹೇಳುವ ಈ ಚಿತ್ರವನ್ನು ನೋಡುವುದು ಸುಲಭವಲ್ಲ ಎನ್ನುವುದು ಹಲವರ ಅಭಿಪ್ರಾಯ. ಸಂಕೀರ್ಣತೆಗಳ ಹುಡುಕಾಟ ಕತೆಗಾರನಿಗಾಗಲೀ, ನೋಡುಗನಿಗಾಗಲೀ ಸುಲಭ ಎಂದು ಯಾರೂ ಹೇಳಿಲ್ಲವಲ್ಲ.

ನೊಬಡಿ’ಸ್ ಫೂಲ್ (Nobody’s fool)1994. ರಾಬರ್ಟ್ ರುಸೊ ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ನೋಡಿದರೆ ‘ಈ ಚಿತ್ರದಲ್ಲಿ ಏನೂ ಆಗುವುದೇ ಇಲ್ಲವಲ್ಲ’ ಎಂದು ಕೆಲವರಿಗೆ ಅನಿಸಬಹುದು.

ಅಮೇರಿಕದ ಒಂದು ಸಣ್ಣ ನಗರದಲ್ಲಿ ಯಾವುದೇ ಜವಾಬ್ದಾರಿಗಳಿಲ್ಲದೇ ಜೀವನವನ್ನು ಸವೆಸುತ್ತಿರುವ ಡೊನಾಲ್ಡ್ ಸಲಿವಾನ್ ‘ಸಲಿ’(ಪಾಲ್ ನ್ಯೂಮನ್). ಅವನ ಗತಕಾಲ ವರ್ತಮಾನದೊಂದಿಗೆ ತಳಕಾಡುತ್ತದೆ. ತನ್ನ ಮಗ ಕೆಲವು ತಿಂಗಳಷ್ಟಿದ್ದಾಗಲೇ ಮಡದಿಯೊಂದಿಗೆ ಬೇರೆಯಾಗಿ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಲಿವಾನ್‍ಗೆ ಈಗಾಗಲೇ 60 ವರ್ಷ. ಇಲ್ಲಿ ಬರುವ ಪಾತ್ರಗಳು ಮತ್ತು ಅವುಗಳೊಡನೆ ಸಲಿವಾನ್‍ಗೆ ಇರುವ ಸಂಬಂಧಗಳು ಸಲಿವಾನ್‍ನ ತಪ್ಪು ಒಪ್ಪುಗಳ ಬಗ್ಗೆ ಹೇಳುತ್ತವೆ. ಒಂದು ದೃಷ್ಟಿಯಲ್ಲಿ ಇದು ಅವನ ಪಯಣ, ನೇರ ಸರಳ ಪಯಣ.

ತನಗೆ ಮನೆಯೆಂಬುದು ಇಲ್ಲ, ಸ್ಥಳೀಯ ಬಿಲ್ಡರ್‍ನೊಂದಿಗೆ ಚಿಕ್ಕಪುಟ್ಟ ಕೆಲಸ ಮಾಡುತ್ತಾನೆ, ಹಂಡತಿಯಿಲ್ಲ, ಮಗನನ್ನು ಕೆಲವು ತಿಂಗಳಿದ್ದಾಗ ಮಾತ್ರ ನೋಡಿದ್ದು, ಜವಾಬ್ದಾರಿ ಎನ್ನುವುದು ಇವನಿಗೆ ಗೊತ್ತೇ ಇಲ್ಲ. ಆದರೂ ಇವನನ್ನು ಇಷ್ಟಪಡದೇ ಇರಲಾರೆವು. ಹಬ್ಬಕ್ಕಾಗಿ ತಾಯಿಯ ಮನೆಗೆ ಬಂದ ಮಗ ಮತ್ತು ಅವನ ಕುಟುಂಬದಿಂದ ಸಲಿವಾನ್‍ಗೆ ತನ್ನ ತಪ್ಪುಗಳನ್ನು ಸರಿಪಡಿಸಲು ಒಂದು ಅವಕಾಶ ಸಿಕ್ಕಿದೆ. ಆದರೆ ಇವನು ಒಂದು ಅವಕಾಶ ಎಂದು ನೋಡುತ್ತಿಲ್ಲ; ತನಗೆ ತೋಚಿದ್ದನ್ನು ಮಾಡುತ್ತಿದ್ದಾನೆ. ಎಲ್ಲವನ್ನು ಕಳೆದುಕೊಂಡವನಿಗೆ ಪಡೆದುಕೊಳ್ಳುವುದು ಏನೂ ಇಲ್ಲ, ಆದರೂ ಜೀವನ ಬೆಂಬಿಡುವುದಿಲ್ಲ. ತನ್ನ ಜೊತೆಗೆ ಕೆಲಸ ಮಾಡುವ ರಬ್, ತನ್ನ ಮನೆಯ ಮಾಲಕಿ ಬೆರಿಲ್, ತಾನು ಪ್ರತಿನಿತ್ಯ ಕುಡಿಯುವ ಬಾರಿನ ಬರ್ಡಿ, ಜೊತೆಯಲ್ಲಿ ಜೂಜಾಡುವ ವಕೀಲ ಗೆಳೆಯ, ಪೊಲೀಸ್ ಅಧಿಕಾರಿ, ವೈದ್ಯ ಇವರೆಲ್ಲರಿಗೂ ಸಲಿವಾನ್‍ನ ಒಳ್ಳೆಯತನದ ಬಗ್ಗೆ ನಂಬಿಕೆಯಿದೆ. ಬಿಲ್ಡರ್ ಕಾರ್ಲ್‍ನೊಂದಿಗೆ (ಬ್ರೂಸ್ ವಿಲಿಸ್) ಜಗಳವಾಡುತ್ತಿದ್ದರೂ ಪರಸ್ಪರ ನಂಬಿಕೆಯಿದೆ. ಆ ಘಳಿಗೆಯಲ್ಲಿ ಅನಿಸಿದ್ದನ್ನು ಮಾಡುವ ಈತ ಒಬ್ಬ ಪೊಲೀಸ್ ಅಧಿಕಾರಿಗೆ ಗೂಸಾ ಕೊಟ್ಟು ಜೈಲಿಗೂ ಹೋಗಿ ಬರಬಲ್ಲ. ಕಾರ್ಲ್‍ನ ಮನೆಯಿಂದ ಕಳ್ಳತನವನ್ನೂ ಮಾಡಬಲ್ಲ, ಕಾರ್ಲ್‍ನ ಹೆಂಡತಿಯೊಂದಿಗೆ ಫ್ಲರ್ಟ್ ಕೂಡ ಮಾಡಬಲ್ಲ ಆದರೆ ಜವಾಬ್ದಾರಿ ತೆಗೆದುಕೊಳ್ಳಲು ಆಗುವುದಿಲ್ಲ.


ಇಲ್ಲಿ ಕಥೆಗಾರ ಇವನ ವ್ಯಕ್ತಿತ್ವಕ್ಕೆ, ಬೇಜವಾಬ್ದಾರಿಗೆ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಎದುರಾದ ಹೊಸ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾ ಹೋಗುತ್ತಾನೆ ಎನ್ನುವುದೇ ಈ ಚಿತ್ರದ ಪಯಣ. ಇವನಿಗೆ ತಾನು ಒಳ್ಳೆಯವನಾಗಬೇಕು ಅಥವಾ ಸರಿಯಾಗಿರಬೇಕು ಎನ್ನುವ ಯಾವ ಬಯಕೆಯೂ ಇಲ್ಲ. ತನ್ನ ಮಗ ಇಷ್ಟು ವರ್ಷಗಳ ನಂತರ ತನ್ನ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಭೇಟಿಯಾದಾಗ ಯಾರು ಯಾರಿಗೆ ಸಹಾಯ ಮಾಡುತ್ತಾರೆ ಎಂಬುವುದು ಸ್ಪಷ್ಟವಾಗುವುದಿಲ್ಲ. ಕೂಸಾಗಿದ್ದಲೇ ತನ್ನನ್ನು ಬಿಟ್ಟು ಹೋದ ಅಪ್ಪ ಎನ್ನುವ ಸಿಟ್ಟಿದೆ ಮಗನಿಗೆ. ಸದ್ಯಕ್ಕೆ ಅವನೂ ತನ್ನ ಕೆಲಸ ಕಳೆದುಕೊಂಡು, ತನ್ನ ಹೆಂಡತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾನೆ. ಗೆಳೆಯ ರಬ್‍ನಿಗೆ ಸಲಿವಾನ್ ಬಿಟ್ಟರೆ ಯಾರೂ ಇಲ್ಲ.

ಯಾವುದೇ ಜವಾಬ್ದಾರಿ ಇಲ್ಲದೇ ಸ್ವೇಚ್ಛಂಧವಾಗಿ ಜೀವಿಸಿದರೂ ಅವನಿಗೂ ಕಾಣದಂತೆ ಜವಾಬ್ದಾರಿಗಳು ಬರುತ್ತಿವೆ. ತನ್ನ ಪಾಪಗಳನ್ನು ಪರಿಹರಿಸುವ ಅವಕಾಶ ಸಿಕ್ಕಿದೆ. ಚಿತ್ರದ ಕೊನೆಯಲ್ಲಿ ಒಂದು ಸೋಫಾ ಮೇಲೆ ಕುಳಿತಲ್ಲಿಯೇ ನಿದ್ರೆಗೆ ಜಾರಿದಾಗ ತುಟಿಯ ಅಂಚಿನಲ್ಲಿ ಒಂದು ಕಿರುನಗೆ ಕಾಣಿಸಿಕೊಳ್ಳುತ್ತದೆ.

ರಾಬರ್ಟ್ ಬೆಂಟನ್ ನಿರ್ದೇಶಿಸಿದ ಈ ಚಿತ್ರದ ಜೀವಾಳ ನಟರ ಅಭಿನಯ. ಈ ಚಿತ್ರವನ್ನು ನಾವೆಷ್ಟೇ ಸಲ ನೋಡಿದರೂ ಪಾಲ್ ನ್ಯೂಮನ್ ಡೋನಾಲ್ಡ್ ಸಲಿವಾನ್ ಆಗಿಯೇ ಕಾಣುತ್ತಾನೆಯೇ ಹೊರತು ಪ್ರಸಿದ್ಧ ನಟನಾಗಿ ಅಲ್ಲ. ಸಲಿವಾನ್ ಆಗಿ ಯಾವುದೇ ಶ್ರಮವಿಲ್ಲದೇ ಸಹಜವಾಗಿ ಪಾಲ್ ನ್ಯೂಮನ್ ಅಭಿನಯಿಸಿದ್ದರೆ, ಅವರೊಂದಿಗೆ ಆ್ಯಕ್ಷನ್ ಹೀರೊ ಬ್ರೂಸ್ ವಿಲಿಸ್‍ನಿಂದ ಇತರ ಎಲ್ಲರೂ ಆಯಾ ಪಾತ್ರಗಳು, ಸನ್ನಿವೇಶಗಳನ್ನು ಸಹಜವಾಗಿಸುವಲ್ಲಿ ಅಷ್ಟೇ ಪ್ರಮುಖ ಪಾತ್ರ ವಹಿಸಿದ್ದಾರೆ. ಜೀವನದ ಒಂದು ಜೀವಂತ ತುಣುಕು ಪರದೆಯ ಮೇಲೆ ಬಂದ ಒಂದು ಉದಾಹರಣೆ ನೊಬಡಿ’ಸ್ ಫೂಲ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎರಡು ವರ್ಷದಲ್ಲಿ 532 ನಕ್ಸಲರ ಹತ್ಯೆ; 2004 ಜನರ ಬಂಧನ: ಛತ್ತೀಸ್‌ಗಢ ಉಪ ಮುಖ್ಯಮಂತ್ರಿ

2024 ರ ಜನವರಿಯಿಂದ ರಾಜ್ಯದಲ್ಲಿ 532 ನಕ್ಸಲರು ಸಾವನ್ನಪ್ಪಿದ್ದಾರೆ, 2004 ಜನರನ್ನು ಬಂಧಿಸಲಾಗಿದ್ದು, 2,700 ಜನರು ಶರಣಾಗಿದ್ದಾರೆ ಎಂದು ಛತ್ತೀಸ್‌ಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಶುಕ್ರವಾರ ಹೇಳಿದ್ದಾರೆ. 2026ರ ಮಾರ್ಚ್ 31 ರೊಳಗೆ...

ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ಒಪ್ಪಿದ ಪೋಕ್ಸೋ ಪ್ರಕರಣದ ಆರೋಪಿಗೆ ಜಾಮೀನು

ಅಸ್ಸಾಂ (ಬೊಂಗಾನ್): ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಕಳೊಂದಿಗೆ ಸ್ನೇಹ ಬೆಳೆಸಿದ ನಂತರ ಅವಳೊಂದಿಗೆ ಸಹವಾಸ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ 24 ವರ್ಷದ ಯುವಕನಿಗೆ ಇಲ್ಲಿನ ಬೊಂಗಾನ್ ಉಪ-ವಿಭಾಗೀಯ ನ್ಯಾಯಾಲಯವು ಜಾಮೀನು...

ಕೇರಳ: ಪಾದಚಾರಿ ಮಾರ್ಗದಲ್ಲಿ ಸ್ಕೂಟರ್ ಸವಾರನನ್ನು ತಡೆದ ವೃದ್ಧೆಗೆ ಸಾರಿಗೆ ಅಧಿಕಾರಿಗಳಿಂದ ಸನ್ಮಾನ

ಕಳೆದ ಶುಕ್ರವಾರ ಕೋಝಿಕ್ಕೋಡ್‌ನಲ್ಲಿ ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಬೈಕ್ ಚಾಲನೆ ಮಾಡುವುದುನ್ನು ತಡೆದ ವೃದ್ಧ ಮಹಿಳೆಯನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ಅಧಿಕಾರಿಗಳು ಸನ್ಮಾನಿಸಿದರು. ಮುಖ್ಯ ರಸ್ತೆಯಲ್ಲಿನ ದಟ್ಟಣೆಯನ್ನು ತಪ್ಪಿಸಲು ಎರಂಜಿಪಾಲಂನ...

ಫೆಬ್ರವರಿ 14, ಪ್ರೇಮಿಗಳ ದಿನದಂದು ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ: ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ 

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಫೆಬ್ರವರಿ 14 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ...

ಮೊಹಮ್ಮದ್ ದೀಪಕ್ ಜಿಮ್‌ನಲ್ಲಿ ಸದಸ್ಯತ್ವ ಪಡೆದ 15 ಜನ ಹಿರಿಯ ಸುಪ್ರೀಂ ಕೋರ್ಟ್ ವಕೀಲರು

ಉತ್ತರಾಖಂಡದ ಕೋಟ್ದ್ವಾರದ ದೀಪಕ್ ಅವರ ಜಿಮ್‌ ಈ ಹಿಂದೆ 150 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು, ಜನನಿಬಿಡ ಕೇಂದ್ರವಾಗಿದ್ದ ದೀಪಕ್ ಕುಮಾರ್ ಅವರ 'ಹಲ್ಕ್' ಜಿಮ್‌ಗೆ, ಮುಸ್ಲಿಂ ವ್ಯಾಪಾರಿ ಪರವಾಗಿ ನಿಂತ ಬಳಿಕ...

ಮೀರತ್‌ನಲ್ಲಿ ‘ಲವ್ ಜಿಹಾದ್’ ಕಾನೂನಿನಡಿಯಲ್ಲಿ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು; ಹಿಂದುತ್ವದ ಹೇಳಿಕೆಗಳನ್ನು ತಿರಸ್ಕರಿಸಿದ ಬೌದ್ಧ ವಧು

ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯೊಬ್ಬನ ವಿರುದ್ಧ ವಧುವಿನ ಚಿಕ್ಕಪ್ಪ ಆತನ ನಿಶ್ಚಿತಾರ್ಥದ ದಿನ ಅಂತರಧರ್ಮೀಯ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದ್ದು, ಶುಕ್ರವಾರ ನಡೆಯಬೇಕಿದ್ದ ವಿವಾಹದ ಸುತ್ತ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರಕರಣವು...

ತಮಿಳುನಾಡು: ವಿಧಾನಸಭಾ ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರ ಖಾತೆಗೆ 5000ರೂ ಜಮಾ ಮಾಡಿದ ಸ್ಟಾಲಿನ್ ಸರ್ಕಾರ

ಚೆನ್ನೈ: ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ಹೆಜ್ಜೆಯಾಗಿ, ತಮಿಳುನಾಡಿನ ಡಿಎಂಕೆ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಮಾಸಿಕ ರೂ.1,000 ಸಹಾಯ ಯೋಜನೆಯ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ರೂ.5,000 ಜಮಾ ಮಾಡಿದೆ. ಏಪ್ರಿಲ್-ಮೇ ವಿಧಾನಸಭಾ...

17 ವರ್ಷಗಳ ಗಡಿಪಾರಿನ ಬಳಿಕ ತಾರಿಕ್ ರೆಹಮಾನ್ ರಾಜಕೀಯ ಪುನರಾಗಮನ; ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ಪಿಗೆ ಬಹುಮತ

17 ವರ್ಷಗಳ ಗಡಿಪಾರಾದ ನಂತರ ತಾರಿಕ್ ರೆಹಮಾನ್ ರಾಜಕೀಯವಾಗಿ ಪುನರಾಗಮನ ಮಾಡಿದ್ದಾರೆ. 2026 ರ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಬಿಎನ್‌ಪಿ ಅಧ್ಯಕ್ಷರಾಗಿರುವ ತಾರಿಕ್ ಎರಡು ಕ್ಷೇತ್ರಗಳಿಂದ...

ಸುಡಾನ್: ನೈಲ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 21 ಸಾವು, ಹಲವರು ನಾಪತ್ತೆ!

ಉತ್ತರ ಸುಡಾನ್‌ನ ನೈಲ್ ರಾಜ್ಯದ ನೈಲ್ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ನಂತರ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ಯುದ್ಧ ಪೀಡಿತ ದೇಶದ ನಾಗರಿಕ ರಕ್ಷಣಾ...

ಹೊಸಕೋಟೆ ಭೀಕರ ಅಪಘಾತದಲ್ಲಿ 7 ಮಂದಿ ಸಾವು: ಮೃತರಲ್ಲಿ 6 ಮಂದಿ 17-18 ವರ್ಷದ ವಿದ್ಯಾರ್ಥಿಗಳು!

ಬೆಂಗಳೂರು: ಫೆಬ್ರವರಿ 13, ಶುಕ್ರವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹೊರವಲಯದಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ,...