Homeಮುಖಪುಟಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ...

ಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ…

ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ.

- Advertisement -
- Advertisement -

(ಆಕಾಶ ವೀಕ್ಷಣೆ: ಡಿಸೆಂಬರ್ 09-16)

ಸೈಕ್ಲೋನ್ ಇಲ್ಲದ ಸಮಯದಲ್ಲಿ ಆಕಾಶ ಸ್ಪಷ್ಟವಾಗಿ ಕಾಣುತ್ತದೆ ಎಂಬುದು ಡಿಸೆಂಬರ್ ತಿಂಗಳು ಆಕಾಶ ವೀಕ್ಷಣೆಗೆ ಪ್ರಶಸ್ತ ಕಾಲ ಎಂಬುದು ಒಂದು ಕಾರಣವಾದರೆ, ಈ ತಿಂಗಳ ರಾತ್ರಿಯ ಆಕಾಶದಲ್ಲಿ ವರ್ಷದ ಹೆಚ್ಚು ಪ್ರಕಾಶಮಾನವಾದ ಉಲ್ಕಾಪಾತವನ್ನು (Meteor Shower) ಕಣ್ತುಂಬಿಕೊಳ್ಳುವ ಸದವಕಾಶವಿರುವುದು ಮತ್ತೊಂದು ಕಾರಣ. ಈ ಉಲ್ಕಾಪಾತವನ್ನು ನೋಡುವುದಕ್ಕೆ ಯಾವ ಉಪಕರಣವು ಬೇಡ, ಬರಿಗಣ್ಣಿನಿಂದಲೇ ನೋಡಬಹುದು. ಆಕಾಶ ವೀಕ್ಷಣೆಯಲ್ಲಿ ಉಲ್ಕಾಪಾತದ ವೀಕ್ಷಣೆಯು ಬಹಳ ಉಲ್ಲಾಸದ ಮತ್ತು ಎಲ್ಲರೂ ಒಟ್ಟುಗೂಡಿ ನೋಡುವ ಒಂದು ವಿದ್ಯಮಾನ.

ಉಲ್ಕೆಗಳು, ಉಲ್ಕಾಪಾತ ಎಂದರೇನು?

ಸೂರ್ಯನ ಸುತ್ತ ಗ್ರಹಗಳು ಹೇಗೆ ಸುತ್ತುತ್ತಿವೆಯೋ, ಹಾಗೆಯೇ ಅನೇಕ ಧೂಮಕೇತುಗಳು ಮತ್ತು ಗಾತ್ರದಲ್ಲಿ ಚಿಕ್ಕದಾಗಿರುವ ಆಕಾಶಕಾಯಗಳು ಕೂಡ ಸುತ್ತುತ್ತಿವೆ. ಇವುಗಳಲ್ಲಿ ಧೂಮಕೇತುಗಳು ವಿಶೇಷವಾದವು. ಧೂಮಕೇತುಗಳು ದೀರ್ಘ ಅಂಡಾಕಾರದ ವೃತ್ತದಲ್ಲಿ, ಸೌರಮಂಡಲದ ಹೊರಭಾಗದಿಂದ ಸೂರ್ಯನ ಬಳಿ ಬಂದುಹೋಗುತ್ತವೆ. ಹೀಗೆ ಧೂಮಕೇತುಗಳು ಸೂರ್ಯನ ಬಳಿ ಬಂದಾಗ, ಸೂರ್ಯನ ಶಾಖದಿಂದ ಅವುಗಳಲ್ಲಿ ಇರುವ ವಸ್ತುಗಳು ಆವಿಯಾಗಿ ಸೂರ್ಯ ಇರುವ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಇದು, ಧೂಮಕೇತುವಿಗೆ ಬಾಲವಾಗುತ್ತದೆ. ಧೂಮಕೇತು ಹೆಚ್ಚು ಹೆಚ್ಚು ಸೂರ್ಯನ ಹತ್ತಿರ ಸಮೀಪಿಸಿದಂತೆ, ಅದರ ಬಾಲವು ದೊಡ್ಡದಾಗುತ್ತಾ ಹೋಗುತ್ತದೆ. ಭೂಮಿಯಿಂದ ಆಕಾಶದಲ್ಲಿ ಈ ಬಾಲಾಂಕೃತ ಅತಿಥಿಗಳನ್ನು ಬರಿಗಣ್ಣಿನಿಂದ ಕಾಣಬಹುದಾಗಿರುತ್ತದೆ. ಹೀಗೆ ಸೂರ್ಯನ ಬಳಿ ಬಂದು ಹೋದ ಧೂಮಕೇತುಗಳು, ಅದರ ಕಕ್ಷೆಯಲ್ಲಿ ಚಿಕ್ಕಚಿಕ್ಕ ಶಿಲೆಗಳನ್ನು (ಹೆಚ್ಚಾಗಿ ಧೂಮಕೇತುವಿನ ಧೂಳಿನ ಕಣಗಳು, icy bodies, ಕ್ಷುದ್ರ ಗ್ರಹಗಳ ಸಣ್ಣಸಣ್ಣ ಕಲ್ಲು) ಚದುರಿಸಿ ಹೋಗಿರುತ್ತವೆ. ಇವನ್ನು ಉಲ್ಕೆಗಳು(Metor) ಎಂದು ಕರೆಯುತ್ತೇವೆ.

ಭೂಮಿಯು ಸೂರ್ಯನ ಸುತ್ತ ಸುತ್ತುವ ಪಥದಲ್ಲಿ ಇಂತಹ ಚದುರಿದ ಉಲ್ಕೆಗಳಿರುವ ಪ್ರದೇಶದ ಮೋಡದೊಳಗೆ ಹಾದುಹೋದಾಗ, ಈ ಉಲ್ಕೆಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ, ವಾತಾವರಣದ ಘರ್ಷಣೆಯ ಕಾರಣದಿಂದ ಉರಿದು ಬೂದಿಯಾಗುತ್ತವೆ. ಈ ಪ್ರಕ್ರಿಯೆ, ಭೂಮಿಯ ಆಕಾಶದಲ್ಲಿ, ನಕ್ಷತ್ರವು ಕೆಳಗೆ ಬಿದ್ದಿತೇನೋ ಎಂಬಂತೆ, ಮಿಂಚಿನ ಒಂದು ಸಣ್ಣ ಬೆಂಕಿಯಗೆರೆಯಂತೆ ಗೋಚರಿಸುತ್ತದೆ. ಇಂತಹ ಹಲವು ಬೆಂಕಿಯ ಗೆರೆಗಳು ಆಕಾಶದಲ್ಲಿ ಗೋಚರಿಸಿದರೆ ಅದನ್ನು ಉಲ್ಕಾಪಾತ (Metor Shower) ಎಂದು ಕರೆಯುತ್ತೇವೆ. ಇಂಗ್ಲಿಷ್‌ನಲ್ಲಿ ಶೂಟಿಂಗ್ ಸ್ಟಾರ್ ಎಂದೂ ಹೆಸರಿದೆ. ಆದರೆ, ನಕ್ಷತ್ರಗಳಿಗೂ ಇವಕ್ಕೂ ಯಾವುದೇ ಸಂಬಂಧವಿಲ್ಲ.

ಉಲ್ಕಾಪಾತವನ್ನು ಹೇಗೆ ನೋಡುವುದು?

ಆಕಾಶ ವೀಕ್ಷಕರಿಗೆ ಉಲ್ಕಾಪಾತ ನೋಡುವುದು ಒಂದು ವಿಶೇಷ ಅನುಭವ. ಉಲ್ಕಾಪಾತ ನೋಡಲು ಯಾವ ಉಪಕರಣದ (ಟೆಲಿಸ್ಕೋಪ್, ಬೈನಾಕ್ಯೂಲರ್) ಅಗತ್ಯವು ಇರುವುದಿಲ್ಲ. ಇದು ಬರಿಗಣ್ಣಿನಲ್ಲಿ ನೋಡಬಹುದಾದ ವಿದ್ಯಮಾನ. ನಗರ ಪ್ರದೇಶದಲ್ಲಿದ್ದರೆ, ಕಟ್ಟಡದ ತಾರಸಿಯ ಮೇಲೋ ಅಥವಾ ಯಾವುದೇ ಅಡೆತಡೆಯಿಲ್ಲದೆ ಆಕಾಶ ಕಾಣುವ ಜಾಗದಲ್ಲಿ ಆಕಾಶಕ್ಕೆ ಮುಖ ಮಾಡಿ ಮಲಗಿ ನೋಡುತ್ತಿದ್ದರೆ, ಉಲ್ಕಾಪಾತವನ್ನು ಸವಿಯಬಹುದು ಮತ್ತು ಎಷ್ಟು ಬೆಂಕಿಯ ಗೆರೆಗಳನ್ನು ನೋಡಿದಿರಿ ಎಂದು ಎಣಿಸಲೂಬಹುದು. ಉಲ್ಕಾಪಾತ ರಾತ್ರಿ ಪೂರ್ತಿ ಕಾಣುವ ವಿದ್ಯಮಾನ. ಅಲ್ಲದೆ, ಉಲ್ಕಾಪಾತವನ್ನು ಅಳೆಯಲು ಒಂದು ಮಾಪನವಿದೆ. ಇದೇನೆಂದರೆ, ಒಂದು ಗಂಟೆಗೆ ಸರಿಸುಮಾರು ಎಷ್ಟು ಉಲ್ಕೆಗಳು ಬೀಳುವುದನ್ನು ನೋಡಬಹುದಾಗಿದೆ ಎಂಬುದು. ಕೆಲವು ಉಲ್ಕಾಪಾತದಲ್ಲಿ ಈ ಸಂಖ್ಯೆ ಬಹಳ ಕಡಿಮೆ ಇರುತ್ತದೆ- 10ರಿಂದ 20. 100ರಿಂದ 150 ಇದ್ದರೆ, ಅದು ಪ್ರಕಾಶಮಾನವಾದ ಉಲ್ಕಾಪಾತ. ರಾತ್ರಿಯ ಆಕಾಶದಲ್ಲಿ ಉಲ್ಕಾಪಾತವನ್ನು ನೋಡುವ ಅವಕಾಶ ಹೆಚ್ಚಿರುತ್ತದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸುವಂತಾದ್ದು ಅಂತಹದ್ದೇ ಪ್ರಕಾಶಮಾನವಾದ ಉಲ್ಕಾಪಾತ, ಗಂಟೆಗೆ 100ರಿಂದ 150 ಉಲ್ಕೆಗಳನ್ನು ನೋಡಬಹುದು!

ಉಲ್ಕಾಪಾತಕ್ಕೆ ಹೆಸರುಗಳಿವೆಯೇ?

ಭೂಮಿಯು, ಸೂರ್ಯನ ಸುತ್ತ ಸುತ್ತುವ ಕಕ್ಷೆಯಲ್ಲಿ, ಧೂಮಕೇತುಗಳು ಬಿಟ್ಟುಹೋದ ಹಲವು ಚದರಿದ ಮೋಡವಿರುವ ಪ್ರದೇಶದ ಮೂಲಕ ಹಾದುಹೋಗುತ್ತದೆ. ವರ್ಷಕ್ಕೆ ಸರಿಸುಮಾರು ಆರರಿಂದ ಏಳು ಉಲ್ಕಾಪಾತಗಳನ್ನು ನೋಡಬಹುದು. ಈ ಉಲ್ಕಾಪಾತಗಳ ವಿಶೇಷವೆಂದರೆ, ಉಲ್ಕಾಪಾತದ ಸಂದರ್ಭದಲ್ಲಿ ಕಾಣುವ ಬೆಂಕಿಗೆರೆಗಳ ಬಾಲವನ್ನು ಕಲ್ಪಿಸಿಕೊಂಡು, ಹಿಮ್ಮುಖವಾಗಿ ಚಲಿಸಿಕೊಂಡು ಅವು ಎಲ್ಲಿಂದ ಬರುತ್ತಿವೆಯೆಂದು ಗಮನಿಸಿದರೆ, ಪ್ರತಿಯೊಂದು ಬೆಂಕಿಗೆರೆಯು ಒಂದೇ ಪ್ರದೇಶದಿಂದ ಪ್ರಾರಂಭಿಸುತ್ತಿರುವಂತೆ ಕಾಣುತ್ತದೆ. ಈ ಪ್ರದೇಶ ಯಾವ ನಕ್ಷತ್ರಪುಂಜದಲ್ಲಿದೆಯೋ ಆ ನಕ್ಷತ್ರ ಪುಂಜದ ಹೆಸರನ್ನೆ ಉಲ್ಕಾಪಾತಕ್ಕೆ ಹೆಸರಿಸಲಾಗಿದೆ. ಉದಾಹರಣೆಗೆ, ನಾವು ಒರಿಯಾನ್ ನಕ್ಷತ್ರಪುಂಜವನ್ನು ಗುರುತಿಸುವುದನ್ನು ಈಗಾಗಲೇ ತಿಳಿದಿದ್ದೇವೆ. ಉಲ್ಕಾಪಾತದ ಬೆಂಕಿಯ ಗೆರೆಗಳ ಬಾಲಗಳನ್ನು ಹಿಮ್ಮುಖವಾಗಿ ಚಲಿಸಿದಾಗ, ಎಲ್ಲಾ ಬೆಂಕಿಯ ಗೆರೆಗಳು ಒರಿಯಾನ್ ನಕ್ಷತ್ರಪುಂಜದಿಂದ ಪ್ರಾರಂಭಿಸಿದಂತೆ ಗೋಚರಿಸಿದರೆ, ಅದನ್ನು ಒರಿಯಾನೈಡ್ ಉಲ್ಕಾಪಾತ ಎಂದು ಕರೆಯುತ್ತಾರೆ. ಪ್ರಸ್ತುತ ಡಿಸೆಂಬರ್‌ನ ಉಲ್ಕಾಪಾತದ ಹೆಸರು, ಜಮಿನಾಯ್ಡ್ಸ್ ಎಂದು ಕರೆಯುತ್ತಾರೆ. ಅಂದರೆ, ಈ ತಿಂಗಳ ಆಗಸದಲ್ಲಿ ಕಾಣುವ ಎಲ್ಲಾ ಉಲ್ಕೆಗಳ ಬೆಂಕಿಗೆರೆಯ ಬಾಲಗಳು ಜಮಿನಿ ನಕ್ಷತ್ರಪುಂಜದಿಂದ ಪ್ರಾರಂಭವಾಗುವಂತೆ ಗೋಚರಿಸುತ್ತವೆ. ಅಲ್ಲದೆ ಈ ಜಮಿನಾಯ್ಡ್ಸ್ ಉಂಟಾಗಲು ಕಾರಣ ಫ್ಯಾತನ್ 3200 ಎಂಬ ಕ್ಷುದ್ರಗ್ರಹ ಎಂದು ಕೂಡ ತಿಳಿಯಲಾಗಿದೆ.

ಡಿಸೆಂಬಂರ್ ತಿಂಗಳ ಜಮಿನಾಯ್ಡ್ಸ್ ವಿಶೇಷ

ಜಮಿನಾಯ್ಡ್ಸ್‌ಉಲ್ಕಾಪಾತ | ಚಿತ್ರ ಕೃಪೆ: ಜೆಫ್‌ಡೈ/ ಅರಿಜ಼ೋನಾ ಸ್ಟೇಟ್‌ಯುನಿವರ್ಸಿಟಿ

ವರ್ಷದಲ್ಲಿ ಕಾಣುವ ಉಳಿದೆಲ್ಲಾ ಉಲ್ಕಾಪಾತುಗಳಿಗೆ ಹೋಲಿಸಿದರೆ, ಜಮಿನಾಯ್ಡ್ಸ್ ಅತ್ಯಂತ ಪ್ರಕಾಶಮಾನವಾದದು ಮತ್ತು ಗಂಟೆಗೆ 100ರಿಂದ 150 ಬೆಂಕಿಯ ಗೆರೆಗಳನ್ನು ನೋಡುವ ಅವಕಾಶವಿರುತ್ತದೆ. ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ. ಡಿಸೆಂಬರ್ 14ರಂದು ಅಮಾವಾಸ್ಯೆಯೂ ಇರುವುದರಿಂದ, ಚಂದ್ರನಿಲ್ಲದ ರಾತ್ರಿಯಲ್ಲಿ, ಈ ಉಲ್ಕಾಪಾತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಉಲ್ಕಾಪಾತವನ್ನು, ಬರಿಗಣ್ಣಿನಲ್ಲಿ ನೋಡುವ ಜೊತೆಗೆ, ಕ್ಯಾಮರಾದಲ್ಲೂ ಸೆರೆಹಿಡಿಯಬಹುದು. ನಿಮ್ಮ ಬಳಿ ಹೆಚ್ಚು ಎಕ್ಸ್‌ಪೋಶರ್ ಸೆಟ್ಟಿಂಗ್ ಬದಲಿಸುವ ಕ್ಯಾಮರಾ ಇದ್ದರೆ, ಆಗಸದ ದಿಕ್ಕಿಗೆ ವೈಡ್‌ಅಂಗಲ್‌ನಲ್ಲಿ ಇಟ್ಟು ರೆಕಾರ್ಡ್ ಮಾಡಿ. ಉಲ್ಕಾಪಾತವನ್ನು ನೋಡುವಾಗ ರಾತ್ರಿಯ ಚಳಿಗೆ ರಕ್ಷಣೆ ಪಡೆಯಲು ಮರೆಯದಿರಿ.

ಈ ವರ್ಷದ ಕೊನೆಯ ಗ್ರಹಣ: ಸಂಪೂರ್ಣ ಸೂರ್ಯಗ್ರಹಣ

ಡಿಸೆಂಬರ್ 14ರಂದು ಸಂಪೂರ್ಣ ಸೂರ್ಯಗ್ರಹಣವಿದ್ದು, ಇದು ಈ ವರ್ಷದ ಕೊನೆಯ ಗ್ರಹಣವಾಗಿದೆ. ಈ ಗ್ರಹಣವನ್ನು ದಕ್ಷಿಣ ಅಮೆರಿಕ, ಚಿಲಿ, ಅರ್ಜೆಂಟೀನಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಕಾಣಬಹುದು. ಈ ಗ್ರಹಣವನ್ನು ಭಾರತದ ಯಾವ ಭಾಗದಿಂದಲೂ ನೋಡಲು ಸಾಧ್ಯವಿರುವುದಿಲ್ಲ. ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆಮಾಚಿರುತ್ತಾನೆ. ನಿರ್ದಿಷ್ಟ ಸ್ಥಳಗಳಲ್ಲಿ, ಸೂರ್ಯ ಕೆಲವು ಸಮಯಗಳ ಕಾಲ (ನಿಮಿಷಗಳಲ್ಲಿ) ಆಗಸದಲ್ಲಿ ಕಾಣುವುದಿಲ್ಲ. ಅಂದಹಾಗೆ, ಏಕೆ ಸೂರ್ಯಗ್ರಹಣ ಅಮಾವಾಸ್ಯೆಯಂದೇ ಮತ್ತು ಚಂದ್ರಗ್ರಹಣ ಹುಣ್ಣಿಮೆಯಂದೇ ಘಟಿಸುತ್ತವೆ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಯೋಚಿಸಿ, ಮುಂದಿನ ದಿನಗಳಲ್ಲಿ ಇವನ್ನು ಚರ್ಚಿಸೋಣ.

  • ವಿಶ್ವ ಕೀರ್ತಿ ಎಸ್

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....