Homeಮುಖಪುಟಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ...

ಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ…

ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ.

- Advertisement -
- Advertisement -

(ಆಕಾಶ ವೀಕ್ಷಣೆ: ಡಿಸೆಂಬರ್ 09-16)

ಸೈಕ್ಲೋನ್ ಇಲ್ಲದ ಸಮಯದಲ್ಲಿ ಆಕಾಶ ಸ್ಪಷ್ಟವಾಗಿ ಕಾಣುತ್ತದೆ ಎಂಬುದು ಡಿಸೆಂಬರ್ ತಿಂಗಳು ಆಕಾಶ ವೀಕ್ಷಣೆಗೆ ಪ್ರಶಸ್ತ ಕಾಲ ಎಂಬುದು ಒಂದು ಕಾರಣವಾದರೆ, ಈ ತಿಂಗಳ ರಾತ್ರಿಯ ಆಕಾಶದಲ್ಲಿ ವರ್ಷದ ಹೆಚ್ಚು ಪ್ರಕಾಶಮಾನವಾದ ಉಲ್ಕಾಪಾತವನ್ನು (Meteor Shower) ಕಣ್ತುಂಬಿಕೊಳ್ಳುವ ಸದವಕಾಶವಿರುವುದು ಮತ್ತೊಂದು ಕಾರಣ. ಈ ಉಲ್ಕಾಪಾತವನ್ನು ನೋಡುವುದಕ್ಕೆ ಯಾವ ಉಪಕರಣವು ಬೇಡ, ಬರಿಗಣ್ಣಿನಿಂದಲೇ ನೋಡಬಹುದು. ಆಕಾಶ ವೀಕ್ಷಣೆಯಲ್ಲಿ ಉಲ್ಕಾಪಾತದ ವೀಕ್ಷಣೆಯು ಬಹಳ ಉಲ್ಲಾಸದ ಮತ್ತು ಎಲ್ಲರೂ ಒಟ್ಟುಗೂಡಿ ನೋಡುವ ಒಂದು ವಿದ್ಯಮಾನ.

ಉಲ್ಕೆಗಳು, ಉಲ್ಕಾಪಾತ ಎಂದರೇನು?

ಸೂರ್ಯನ ಸುತ್ತ ಗ್ರಹಗಳು ಹೇಗೆ ಸುತ್ತುತ್ತಿವೆಯೋ, ಹಾಗೆಯೇ ಅನೇಕ ಧೂಮಕೇತುಗಳು ಮತ್ತು ಗಾತ್ರದಲ್ಲಿ ಚಿಕ್ಕದಾಗಿರುವ ಆಕಾಶಕಾಯಗಳು ಕೂಡ ಸುತ್ತುತ್ತಿವೆ. ಇವುಗಳಲ್ಲಿ ಧೂಮಕೇತುಗಳು ವಿಶೇಷವಾದವು. ಧೂಮಕೇತುಗಳು ದೀರ್ಘ ಅಂಡಾಕಾರದ ವೃತ್ತದಲ್ಲಿ, ಸೌರಮಂಡಲದ ಹೊರಭಾಗದಿಂದ ಸೂರ್ಯನ ಬಳಿ ಬಂದುಹೋಗುತ್ತವೆ. ಹೀಗೆ ಧೂಮಕೇತುಗಳು ಸೂರ್ಯನ ಬಳಿ ಬಂದಾಗ, ಸೂರ್ಯನ ಶಾಖದಿಂದ ಅವುಗಳಲ್ಲಿ ಇರುವ ವಸ್ತುಗಳು ಆವಿಯಾಗಿ ಸೂರ್ಯ ಇರುವ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಇದು, ಧೂಮಕೇತುವಿಗೆ ಬಾಲವಾಗುತ್ತದೆ. ಧೂಮಕೇತು ಹೆಚ್ಚು ಹೆಚ್ಚು ಸೂರ್ಯನ ಹತ್ತಿರ ಸಮೀಪಿಸಿದಂತೆ, ಅದರ ಬಾಲವು ದೊಡ್ಡದಾಗುತ್ತಾ ಹೋಗುತ್ತದೆ. ಭೂಮಿಯಿಂದ ಆಕಾಶದಲ್ಲಿ ಈ ಬಾಲಾಂಕೃತ ಅತಿಥಿಗಳನ್ನು ಬರಿಗಣ್ಣಿನಿಂದ ಕಾಣಬಹುದಾಗಿರುತ್ತದೆ. ಹೀಗೆ ಸೂರ್ಯನ ಬಳಿ ಬಂದು ಹೋದ ಧೂಮಕೇತುಗಳು, ಅದರ ಕಕ್ಷೆಯಲ್ಲಿ ಚಿಕ್ಕಚಿಕ್ಕ ಶಿಲೆಗಳನ್ನು (ಹೆಚ್ಚಾಗಿ ಧೂಮಕೇತುವಿನ ಧೂಳಿನ ಕಣಗಳು, icy bodies, ಕ್ಷುದ್ರ ಗ್ರಹಗಳ ಸಣ್ಣಸಣ್ಣ ಕಲ್ಲು) ಚದುರಿಸಿ ಹೋಗಿರುತ್ತವೆ. ಇವನ್ನು ಉಲ್ಕೆಗಳು(Metor) ಎಂದು ಕರೆಯುತ್ತೇವೆ.

ಭೂಮಿಯು ಸೂರ್ಯನ ಸುತ್ತ ಸುತ್ತುವ ಪಥದಲ್ಲಿ ಇಂತಹ ಚದುರಿದ ಉಲ್ಕೆಗಳಿರುವ ಪ್ರದೇಶದ ಮೋಡದೊಳಗೆ ಹಾದುಹೋದಾಗ, ಈ ಉಲ್ಕೆಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ, ವಾತಾವರಣದ ಘರ್ಷಣೆಯ ಕಾರಣದಿಂದ ಉರಿದು ಬೂದಿಯಾಗುತ್ತವೆ. ಈ ಪ್ರಕ್ರಿಯೆ, ಭೂಮಿಯ ಆಕಾಶದಲ್ಲಿ, ನಕ್ಷತ್ರವು ಕೆಳಗೆ ಬಿದ್ದಿತೇನೋ ಎಂಬಂತೆ, ಮಿಂಚಿನ ಒಂದು ಸಣ್ಣ ಬೆಂಕಿಯಗೆರೆಯಂತೆ ಗೋಚರಿಸುತ್ತದೆ. ಇಂತಹ ಹಲವು ಬೆಂಕಿಯ ಗೆರೆಗಳು ಆಕಾಶದಲ್ಲಿ ಗೋಚರಿಸಿದರೆ ಅದನ್ನು ಉಲ್ಕಾಪಾತ (Metor Shower) ಎಂದು ಕರೆಯುತ್ತೇವೆ. ಇಂಗ್ಲಿಷ್‌ನಲ್ಲಿ ಶೂಟಿಂಗ್ ಸ್ಟಾರ್ ಎಂದೂ ಹೆಸರಿದೆ. ಆದರೆ, ನಕ್ಷತ್ರಗಳಿಗೂ ಇವಕ್ಕೂ ಯಾವುದೇ ಸಂಬಂಧವಿಲ್ಲ.

ಉಲ್ಕಾಪಾತವನ್ನು ಹೇಗೆ ನೋಡುವುದು?

ಆಕಾಶ ವೀಕ್ಷಕರಿಗೆ ಉಲ್ಕಾಪಾತ ನೋಡುವುದು ಒಂದು ವಿಶೇಷ ಅನುಭವ. ಉಲ್ಕಾಪಾತ ನೋಡಲು ಯಾವ ಉಪಕರಣದ (ಟೆಲಿಸ್ಕೋಪ್, ಬೈನಾಕ್ಯೂಲರ್) ಅಗತ್ಯವು ಇರುವುದಿಲ್ಲ. ಇದು ಬರಿಗಣ್ಣಿನಲ್ಲಿ ನೋಡಬಹುದಾದ ವಿದ್ಯಮಾನ. ನಗರ ಪ್ರದೇಶದಲ್ಲಿದ್ದರೆ, ಕಟ್ಟಡದ ತಾರಸಿಯ ಮೇಲೋ ಅಥವಾ ಯಾವುದೇ ಅಡೆತಡೆಯಿಲ್ಲದೆ ಆಕಾಶ ಕಾಣುವ ಜಾಗದಲ್ಲಿ ಆಕಾಶಕ್ಕೆ ಮುಖ ಮಾಡಿ ಮಲಗಿ ನೋಡುತ್ತಿದ್ದರೆ, ಉಲ್ಕಾಪಾತವನ್ನು ಸವಿಯಬಹುದು ಮತ್ತು ಎಷ್ಟು ಬೆಂಕಿಯ ಗೆರೆಗಳನ್ನು ನೋಡಿದಿರಿ ಎಂದು ಎಣಿಸಲೂಬಹುದು. ಉಲ್ಕಾಪಾತ ರಾತ್ರಿ ಪೂರ್ತಿ ಕಾಣುವ ವಿದ್ಯಮಾನ. ಅಲ್ಲದೆ, ಉಲ್ಕಾಪಾತವನ್ನು ಅಳೆಯಲು ಒಂದು ಮಾಪನವಿದೆ. ಇದೇನೆಂದರೆ, ಒಂದು ಗಂಟೆಗೆ ಸರಿಸುಮಾರು ಎಷ್ಟು ಉಲ್ಕೆಗಳು ಬೀಳುವುದನ್ನು ನೋಡಬಹುದಾಗಿದೆ ಎಂಬುದು. ಕೆಲವು ಉಲ್ಕಾಪಾತದಲ್ಲಿ ಈ ಸಂಖ್ಯೆ ಬಹಳ ಕಡಿಮೆ ಇರುತ್ತದೆ- 10ರಿಂದ 20. 100ರಿಂದ 150 ಇದ್ದರೆ, ಅದು ಪ್ರಕಾಶಮಾನವಾದ ಉಲ್ಕಾಪಾತ. ರಾತ್ರಿಯ ಆಕಾಶದಲ್ಲಿ ಉಲ್ಕಾಪಾತವನ್ನು ನೋಡುವ ಅವಕಾಶ ಹೆಚ್ಚಿರುತ್ತದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸುವಂತಾದ್ದು ಅಂತಹದ್ದೇ ಪ್ರಕಾಶಮಾನವಾದ ಉಲ್ಕಾಪಾತ, ಗಂಟೆಗೆ 100ರಿಂದ 150 ಉಲ್ಕೆಗಳನ್ನು ನೋಡಬಹುದು!

ಉಲ್ಕಾಪಾತಕ್ಕೆ ಹೆಸರುಗಳಿವೆಯೇ?

ಭೂಮಿಯು, ಸೂರ್ಯನ ಸುತ್ತ ಸುತ್ತುವ ಕಕ್ಷೆಯಲ್ಲಿ, ಧೂಮಕೇತುಗಳು ಬಿಟ್ಟುಹೋದ ಹಲವು ಚದರಿದ ಮೋಡವಿರುವ ಪ್ರದೇಶದ ಮೂಲಕ ಹಾದುಹೋಗುತ್ತದೆ. ವರ್ಷಕ್ಕೆ ಸರಿಸುಮಾರು ಆರರಿಂದ ಏಳು ಉಲ್ಕಾಪಾತಗಳನ್ನು ನೋಡಬಹುದು. ಈ ಉಲ್ಕಾಪಾತಗಳ ವಿಶೇಷವೆಂದರೆ, ಉಲ್ಕಾಪಾತದ ಸಂದರ್ಭದಲ್ಲಿ ಕಾಣುವ ಬೆಂಕಿಗೆರೆಗಳ ಬಾಲವನ್ನು ಕಲ್ಪಿಸಿಕೊಂಡು, ಹಿಮ್ಮುಖವಾಗಿ ಚಲಿಸಿಕೊಂಡು ಅವು ಎಲ್ಲಿಂದ ಬರುತ್ತಿವೆಯೆಂದು ಗಮನಿಸಿದರೆ, ಪ್ರತಿಯೊಂದು ಬೆಂಕಿಗೆರೆಯು ಒಂದೇ ಪ್ರದೇಶದಿಂದ ಪ್ರಾರಂಭಿಸುತ್ತಿರುವಂತೆ ಕಾಣುತ್ತದೆ. ಈ ಪ್ರದೇಶ ಯಾವ ನಕ್ಷತ್ರಪುಂಜದಲ್ಲಿದೆಯೋ ಆ ನಕ್ಷತ್ರ ಪುಂಜದ ಹೆಸರನ್ನೆ ಉಲ್ಕಾಪಾತಕ್ಕೆ ಹೆಸರಿಸಲಾಗಿದೆ. ಉದಾಹರಣೆಗೆ, ನಾವು ಒರಿಯಾನ್ ನಕ್ಷತ್ರಪುಂಜವನ್ನು ಗುರುತಿಸುವುದನ್ನು ಈಗಾಗಲೇ ತಿಳಿದಿದ್ದೇವೆ. ಉಲ್ಕಾಪಾತದ ಬೆಂಕಿಯ ಗೆರೆಗಳ ಬಾಲಗಳನ್ನು ಹಿಮ್ಮುಖವಾಗಿ ಚಲಿಸಿದಾಗ, ಎಲ್ಲಾ ಬೆಂಕಿಯ ಗೆರೆಗಳು ಒರಿಯಾನ್ ನಕ್ಷತ್ರಪುಂಜದಿಂದ ಪ್ರಾರಂಭಿಸಿದಂತೆ ಗೋಚರಿಸಿದರೆ, ಅದನ್ನು ಒರಿಯಾನೈಡ್ ಉಲ್ಕಾಪಾತ ಎಂದು ಕರೆಯುತ್ತಾರೆ. ಪ್ರಸ್ತುತ ಡಿಸೆಂಬರ್‌ನ ಉಲ್ಕಾಪಾತದ ಹೆಸರು, ಜಮಿನಾಯ್ಡ್ಸ್ ಎಂದು ಕರೆಯುತ್ತಾರೆ. ಅಂದರೆ, ಈ ತಿಂಗಳ ಆಗಸದಲ್ಲಿ ಕಾಣುವ ಎಲ್ಲಾ ಉಲ್ಕೆಗಳ ಬೆಂಕಿಗೆರೆಯ ಬಾಲಗಳು ಜಮಿನಿ ನಕ್ಷತ್ರಪುಂಜದಿಂದ ಪ್ರಾರಂಭವಾಗುವಂತೆ ಗೋಚರಿಸುತ್ತವೆ. ಅಲ್ಲದೆ ಈ ಜಮಿನಾಯ್ಡ್ಸ್ ಉಂಟಾಗಲು ಕಾರಣ ಫ್ಯಾತನ್ 3200 ಎಂಬ ಕ್ಷುದ್ರಗ್ರಹ ಎಂದು ಕೂಡ ತಿಳಿಯಲಾಗಿದೆ.

ಡಿಸೆಂಬಂರ್ ತಿಂಗಳ ಜಮಿನಾಯ್ಡ್ಸ್ ವಿಶೇಷ

ಜಮಿನಾಯ್ಡ್ಸ್‌ಉಲ್ಕಾಪಾತ | ಚಿತ್ರ ಕೃಪೆ: ಜೆಫ್‌ಡೈ/ ಅರಿಜ಼ೋನಾ ಸ್ಟೇಟ್‌ಯುನಿವರ್ಸಿಟಿ

ವರ್ಷದಲ್ಲಿ ಕಾಣುವ ಉಳಿದೆಲ್ಲಾ ಉಲ್ಕಾಪಾತುಗಳಿಗೆ ಹೋಲಿಸಿದರೆ, ಜಮಿನಾಯ್ಡ್ಸ್ ಅತ್ಯಂತ ಪ್ರಕಾಶಮಾನವಾದದು ಮತ್ತು ಗಂಟೆಗೆ 100ರಿಂದ 150 ಬೆಂಕಿಯ ಗೆರೆಗಳನ್ನು ನೋಡುವ ಅವಕಾಶವಿರುತ್ತದೆ. ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ. ಡಿಸೆಂಬರ್ 14ರಂದು ಅಮಾವಾಸ್ಯೆಯೂ ಇರುವುದರಿಂದ, ಚಂದ್ರನಿಲ್ಲದ ರಾತ್ರಿಯಲ್ಲಿ, ಈ ಉಲ್ಕಾಪಾತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಉಲ್ಕಾಪಾತವನ್ನು, ಬರಿಗಣ್ಣಿನಲ್ಲಿ ನೋಡುವ ಜೊತೆಗೆ, ಕ್ಯಾಮರಾದಲ್ಲೂ ಸೆರೆಹಿಡಿಯಬಹುದು. ನಿಮ್ಮ ಬಳಿ ಹೆಚ್ಚು ಎಕ್ಸ್‌ಪೋಶರ್ ಸೆಟ್ಟಿಂಗ್ ಬದಲಿಸುವ ಕ್ಯಾಮರಾ ಇದ್ದರೆ, ಆಗಸದ ದಿಕ್ಕಿಗೆ ವೈಡ್‌ಅಂಗಲ್‌ನಲ್ಲಿ ಇಟ್ಟು ರೆಕಾರ್ಡ್ ಮಾಡಿ. ಉಲ್ಕಾಪಾತವನ್ನು ನೋಡುವಾಗ ರಾತ್ರಿಯ ಚಳಿಗೆ ರಕ್ಷಣೆ ಪಡೆಯಲು ಮರೆಯದಿರಿ.

ಈ ವರ್ಷದ ಕೊನೆಯ ಗ್ರಹಣ: ಸಂಪೂರ್ಣ ಸೂರ್ಯಗ್ರಹಣ

ಡಿಸೆಂಬರ್ 14ರಂದು ಸಂಪೂರ್ಣ ಸೂರ್ಯಗ್ರಹಣವಿದ್ದು, ಇದು ಈ ವರ್ಷದ ಕೊನೆಯ ಗ್ರಹಣವಾಗಿದೆ. ಈ ಗ್ರಹಣವನ್ನು ದಕ್ಷಿಣ ಅಮೆರಿಕ, ಚಿಲಿ, ಅರ್ಜೆಂಟೀನಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಕಾಣಬಹುದು. ಈ ಗ್ರಹಣವನ್ನು ಭಾರತದ ಯಾವ ಭಾಗದಿಂದಲೂ ನೋಡಲು ಸಾಧ್ಯವಿರುವುದಿಲ್ಲ. ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆಮಾಚಿರುತ್ತಾನೆ. ನಿರ್ದಿಷ್ಟ ಸ್ಥಳಗಳಲ್ಲಿ, ಸೂರ್ಯ ಕೆಲವು ಸಮಯಗಳ ಕಾಲ (ನಿಮಿಷಗಳಲ್ಲಿ) ಆಗಸದಲ್ಲಿ ಕಾಣುವುದಿಲ್ಲ. ಅಂದಹಾಗೆ, ಏಕೆ ಸೂರ್ಯಗ್ರಹಣ ಅಮಾವಾಸ್ಯೆಯಂದೇ ಮತ್ತು ಚಂದ್ರಗ್ರಹಣ ಹುಣ್ಣಿಮೆಯಂದೇ ಘಟಿಸುತ್ತವೆ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಯೋಚಿಸಿ, ಮುಂದಿನ ದಿನಗಳಲ್ಲಿ ಇವನ್ನು ಚರ್ಚಿಸೋಣ.

  • ವಿಶ್ವ ಕೀರ್ತಿ ಎಸ್

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...