Homeಮುಖಪುಟಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ...

ಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ…

ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ.

- Advertisement -
- Advertisement -

(ಆಕಾಶ ವೀಕ್ಷಣೆ: ಡಿಸೆಂಬರ್ 09-16)

ಸೈಕ್ಲೋನ್ ಇಲ್ಲದ ಸಮಯದಲ್ಲಿ ಆಕಾಶ ಸ್ಪಷ್ಟವಾಗಿ ಕಾಣುತ್ತದೆ ಎಂಬುದು ಡಿಸೆಂಬರ್ ತಿಂಗಳು ಆಕಾಶ ವೀಕ್ಷಣೆಗೆ ಪ್ರಶಸ್ತ ಕಾಲ ಎಂಬುದು ಒಂದು ಕಾರಣವಾದರೆ, ಈ ತಿಂಗಳ ರಾತ್ರಿಯ ಆಕಾಶದಲ್ಲಿ ವರ್ಷದ ಹೆಚ್ಚು ಪ್ರಕಾಶಮಾನವಾದ ಉಲ್ಕಾಪಾತವನ್ನು (Meteor Shower) ಕಣ್ತುಂಬಿಕೊಳ್ಳುವ ಸದವಕಾಶವಿರುವುದು ಮತ್ತೊಂದು ಕಾರಣ. ಈ ಉಲ್ಕಾಪಾತವನ್ನು ನೋಡುವುದಕ್ಕೆ ಯಾವ ಉಪಕರಣವು ಬೇಡ, ಬರಿಗಣ್ಣಿನಿಂದಲೇ ನೋಡಬಹುದು. ಆಕಾಶ ವೀಕ್ಷಣೆಯಲ್ಲಿ ಉಲ್ಕಾಪಾತದ ವೀಕ್ಷಣೆಯು ಬಹಳ ಉಲ್ಲಾಸದ ಮತ್ತು ಎಲ್ಲರೂ ಒಟ್ಟುಗೂಡಿ ನೋಡುವ ಒಂದು ವಿದ್ಯಮಾನ.

ಉಲ್ಕೆಗಳು, ಉಲ್ಕಾಪಾತ ಎಂದರೇನು?

ಸೂರ್ಯನ ಸುತ್ತ ಗ್ರಹಗಳು ಹೇಗೆ ಸುತ್ತುತ್ತಿವೆಯೋ, ಹಾಗೆಯೇ ಅನೇಕ ಧೂಮಕೇತುಗಳು ಮತ್ತು ಗಾತ್ರದಲ್ಲಿ ಚಿಕ್ಕದಾಗಿರುವ ಆಕಾಶಕಾಯಗಳು ಕೂಡ ಸುತ್ತುತ್ತಿವೆ. ಇವುಗಳಲ್ಲಿ ಧೂಮಕೇತುಗಳು ವಿಶೇಷವಾದವು. ಧೂಮಕೇತುಗಳು ದೀರ್ಘ ಅಂಡಾಕಾರದ ವೃತ್ತದಲ್ಲಿ, ಸೌರಮಂಡಲದ ಹೊರಭಾಗದಿಂದ ಸೂರ್ಯನ ಬಳಿ ಬಂದುಹೋಗುತ್ತವೆ. ಹೀಗೆ ಧೂಮಕೇತುಗಳು ಸೂರ್ಯನ ಬಳಿ ಬಂದಾಗ, ಸೂರ್ಯನ ಶಾಖದಿಂದ ಅವುಗಳಲ್ಲಿ ಇರುವ ವಸ್ತುಗಳು ಆವಿಯಾಗಿ ಸೂರ್ಯ ಇರುವ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಇದು, ಧೂಮಕೇತುವಿಗೆ ಬಾಲವಾಗುತ್ತದೆ. ಧೂಮಕೇತು ಹೆಚ್ಚು ಹೆಚ್ಚು ಸೂರ್ಯನ ಹತ್ತಿರ ಸಮೀಪಿಸಿದಂತೆ, ಅದರ ಬಾಲವು ದೊಡ್ಡದಾಗುತ್ತಾ ಹೋಗುತ್ತದೆ. ಭೂಮಿಯಿಂದ ಆಕಾಶದಲ್ಲಿ ಈ ಬಾಲಾಂಕೃತ ಅತಿಥಿಗಳನ್ನು ಬರಿಗಣ್ಣಿನಿಂದ ಕಾಣಬಹುದಾಗಿರುತ್ತದೆ. ಹೀಗೆ ಸೂರ್ಯನ ಬಳಿ ಬಂದು ಹೋದ ಧೂಮಕೇತುಗಳು, ಅದರ ಕಕ್ಷೆಯಲ್ಲಿ ಚಿಕ್ಕಚಿಕ್ಕ ಶಿಲೆಗಳನ್ನು (ಹೆಚ್ಚಾಗಿ ಧೂಮಕೇತುವಿನ ಧೂಳಿನ ಕಣಗಳು, icy bodies, ಕ್ಷುದ್ರ ಗ್ರಹಗಳ ಸಣ್ಣಸಣ್ಣ ಕಲ್ಲು) ಚದುರಿಸಿ ಹೋಗಿರುತ್ತವೆ. ಇವನ್ನು ಉಲ್ಕೆಗಳು(Metor) ಎಂದು ಕರೆಯುತ್ತೇವೆ.

ಭೂಮಿಯು ಸೂರ್ಯನ ಸುತ್ತ ಸುತ್ತುವ ಪಥದಲ್ಲಿ ಇಂತಹ ಚದುರಿದ ಉಲ್ಕೆಗಳಿರುವ ಪ್ರದೇಶದ ಮೋಡದೊಳಗೆ ಹಾದುಹೋದಾಗ, ಈ ಉಲ್ಕೆಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ, ವಾತಾವರಣದ ಘರ್ಷಣೆಯ ಕಾರಣದಿಂದ ಉರಿದು ಬೂದಿಯಾಗುತ್ತವೆ. ಈ ಪ್ರಕ್ರಿಯೆ, ಭೂಮಿಯ ಆಕಾಶದಲ್ಲಿ, ನಕ್ಷತ್ರವು ಕೆಳಗೆ ಬಿದ್ದಿತೇನೋ ಎಂಬಂತೆ, ಮಿಂಚಿನ ಒಂದು ಸಣ್ಣ ಬೆಂಕಿಯಗೆರೆಯಂತೆ ಗೋಚರಿಸುತ್ತದೆ. ಇಂತಹ ಹಲವು ಬೆಂಕಿಯ ಗೆರೆಗಳು ಆಕಾಶದಲ್ಲಿ ಗೋಚರಿಸಿದರೆ ಅದನ್ನು ಉಲ್ಕಾಪಾತ (Metor Shower) ಎಂದು ಕರೆಯುತ್ತೇವೆ. ಇಂಗ್ಲಿಷ್‌ನಲ್ಲಿ ಶೂಟಿಂಗ್ ಸ್ಟಾರ್ ಎಂದೂ ಹೆಸರಿದೆ. ಆದರೆ, ನಕ್ಷತ್ರಗಳಿಗೂ ಇವಕ್ಕೂ ಯಾವುದೇ ಸಂಬಂಧವಿಲ್ಲ.

ಉಲ್ಕಾಪಾತವನ್ನು ಹೇಗೆ ನೋಡುವುದು?

ಆಕಾಶ ವೀಕ್ಷಕರಿಗೆ ಉಲ್ಕಾಪಾತ ನೋಡುವುದು ಒಂದು ವಿಶೇಷ ಅನುಭವ. ಉಲ್ಕಾಪಾತ ನೋಡಲು ಯಾವ ಉಪಕರಣದ (ಟೆಲಿಸ್ಕೋಪ್, ಬೈನಾಕ್ಯೂಲರ್) ಅಗತ್ಯವು ಇರುವುದಿಲ್ಲ. ಇದು ಬರಿಗಣ್ಣಿನಲ್ಲಿ ನೋಡಬಹುದಾದ ವಿದ್ಯಮಾನ. ನಗರ ಪ್ರದೇಶದಲ್ಲಿದ್ದರೆ, ಕಟ್ಟಡದ ತಾರಸಿಯ ಮೇಲೋ ಅಥವಾ ಯಾವುದೇ ಅಡೆತಡೆಯಿಲ್ಲದೆ ಆಕಾಶ ಕಾಣುವ ಜಾಗದಲ್ಲಿ ಆಕಾಶಕ್ಕೆ ಮುಖ ಮಾಡಿ ಮಲಗಿ ನೋಡುತ್ತಿದ್ದರೆ, ಉಲ್ಕಾಪಾತವನ್ನು ಸವಿಯಬಹುದು ಮತ್ತು ಎಷ್ಟು ಬೆಂಕಿಯ ಗೆರೆಗಳನ್ನು ನೋಡಿದಿರಿ ಎಂದು ಎಣಿಸಲೂಬಹುದು. ಉಲ್ಕಾಪಾತ ರಾತ್ರಿ ಪೂರ್ತಿ ಕಾಣುವ ವಿದ್ಯಮಾನ. ಅಲ್ಲದೆ, ಉಲ್ಕಾಪಾತವನ್ನು ಅಳೆಯಲು ಒಂದು ಮಾಪನವಿದೆ. ಇದೇನೆಂದರೆ, ಒಂದು ಗಂಟೆಗೆ ಸರಿಸುಮಾರು ಎಷ್ಟು ಉಲ್ಕೆಗಳು ಬೀಳುವುದನ್ನು ನೋಡಬಹುದಾಗಿದೆ ಎಂಬುದು. ಕೆಲವು ಉಲ್ಕಾಪಾತದಲ್ಲಿ ಈ ಸಂಖ್ಯೆ ಬಹಳ ಕಡಿಮೆ ಇರುತ್ತದೆ- 10ರಿಂದ 20. 100ರಿಂದ 150 ಇದ್ದರೆ, ಅದು ಪ್ರಕಾಶಮಾನವಾದ ಉಲ್ಕಾಪಾತ. ರಾತ್ರಿಯ ಆಕಾಶದಲ್ಲಿ ಉಲ್ಕಾಪಾತವನ್ನು ನೋಡುವ ಅವಕಾಶ ಹೆಚ್ಚಿರುತ್ತದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸುವಂತಾದ್ದು ಅಂತಹದ್ದೇ ಪ್ರಕಾಶಮಾನವಾದ ಉಲ್ಕಾಪಾತ, ಗಂಟೆಗೆ 100ರಿಂದ 150 ಉಲ್ಕೆಗಳನ್ನು ನೋಡಬಹುದು!

ಉಲ್ಕಾಪಾತಕ್ಕೆ ಹೆಸರುಗಳಿವೆಯೇ?

ಭೂಮಿಯು, ಸೂರ್ಯನ ಸುತ್ತ ಸುತ್ತುವ ಕಕ್ಷೆಯಲ್ಲಿ, ಧೂಮಕೇತುಗಳು ಬಿಟ್ಟುಹೋದ ಹಲವು ಚದರಿದ ಮೋಡವಿರುವ ಪ್ರದೇಶದ ಮೂಲಕ ಹಾದುಹೋಗುತ್ತದೆ. ವರ್ಷಕ್ಕೆ ಸರಿಸುಮಾರು ಆರರಿಂದ ಏಳು ಉಲ್ಕಾಪಾತಗಳನ್ನು ನೋಡಬಹುದು. ಈ ಉಲ್ಕಾಪಾತಗಳ ವಿಶೇಷವೆಂದರೆ, ಉಲ್ಕಾಪಾತದ ಸಂದರ್ಭದಲ್ಲಿ ಕಾಣುವ ಬೆಂಕಿಗೆರೆಗಳ ಬಾಲವನ್ನು ಕಲ್ಪಿಸಿಕೊಂಡು, ಹಿಮ್ಮುಖವಾಗಿ ಚಲಿಸಿಕೊಂಡು ಅವು ಎಲ್ಲಿಂದ ಬರುತ್ತಿವೆಯೆಂದು ಗಮನಿಸಿದರೆ, ಪ್ರತಿಯೊಂದು ಬೆಂಕಿಗೆರೆಯು ಒಂದೇ ಪ್ರದೇಶದಿಂದ ಪ್ರಾರಂಭಿಸುತ್ತಿರುವಂತೆ ಕಾಣುತ್ತದೆ. ಈ ಪ್ರದೇಶ ಯಾವ ನಕ್ಷತ್ರಪುಂಜದಲ್ಲಿದೆಯೋ ಆ ನಕ್ಷತ್ರ ಪುಂಜದ ಹೆಸರನ್ನೆ ಉಲ್ಕಾಪಾತಕ್ಕೆ ಹೆಸರಿಸಲಾಗಿದೆ. ಉದಾಹರಣೆಗೆ, ನಾವು ಒರಿಯಾನ್ ನಕ್ಷತ್ರಪುಂಜವನ್ನು ಗುರುತಿಸುವುದನ್ನು ಈಗಾಗಲೇ ತಿಳಿದಿದ್ದೇವೆ. ಉಲ್ಕಾಪಾತದ ಬೆಂಕಿಯ ಗೆರೆಗಳ ಬಾಲಗಳನ್ನು ಹಿಮ್ಮುಖವಾಗಿ ಚಲಿಸಿದಾಗ, ಎಲ್ಲಾ ಬೆಂಕಿಯ ಗೆರೆಗಳು ಒರಿಯಾನ್ ನಕ್ಷತ್ರಪುಂಜದಿಂದ ಪ್ರಾರಂಭಿಸಿದಂತೆ ಗೋಚರಿಸಿದರೆ, ಅದನ್ನು ಒರಿಯಾನೈಡ್ ಉಲ್ಕಾಪಾತ ಎಂದು ಕರೆಯುತ್ತಾರೆ. ಪ್ರಸ್ತುತ ಡಿಸೆಂಬರ್‌ನ ಉಲ್ಕಾಪಾತದ ಹೆಸರು, ಜಮಿನಾಯ್ಡ್ಸ್ ಎಂದು ಕರೆಯುತ್ತಾರೆ. ಅಂದರೆ, ಈ ತಿಂಗಳ ಆಗಸದಲ್ಲಿ ಕಾಣುವ ಎಲ್ಲಾ ಉಲ್ಕೆಗಳ ಬೆಂಕಿಗೆರೆಯ ಬಾಲಗಳು ಜಮಿನಿ ನಕ್ಷತ್ರಪುಂಜದಿಂದ ಪ್ರಾರಂಭವಾಗುವಂತೆ ಗೋಚರಿಸುತ್ತವೆ. ಅಲ್ಲದೆ ಈ ಜಮಿನಾಯ್ಡ್ಸ್ ಉಂಟಾಗಲು ಕಾರಣ ಫ್ಯಾತನ್ 3200 ಎಂಬ ಕ್ಷುದ್ರಗ್ರಹ ಎಂದು ಕೂಡ ತಿಳಿಯಲಾಗಿದೆ.

ಡಿಸೆಂಬಂರ್ ತಿಂಗಳ ಜಮಿನಾಯ್ಡ್ಸ್ ವಿಶೇಷ

ಜಮಿನಾಯ್ಡ್ಸ್‌ಉಲ್ಕಾಪಾತ | ಚಿತ್ರ ಕೃಪೆ: ಜೆಫ್‌ಡೈ/ ಅರಿಜ಼ೋನಾ ಸ್ಟೇಟ್‌ಯುನಿವರ್ಸಿಟಿ

ವರ್ಷದಲ್ಲಿ ಕಾಣುವ ಉಳಿದೆಲ್ಲಾ ಉಲ್ಕಾಪಾತುಗಳಿಗೆ ಹೋಲಿಸಿದರೆ, ಜಮಿನಾಯ್ಡ್ಸ್ ಅತ್ಯಂತ ಪ್ರಕಾಶಮಾನವಾದದು ಮತ್ತು ಗಂಟೆಗೆ 100ರಿಂದ 150 ಬೆಂಕಿಯ ಗೆರೆಗಳನ್ನು ನೋಡುವ ಅವಕಾಶವಿರುತ್ತದೆ. ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ. ಡಿಸೆಂಬರ್ 14ರಂದು ಅಮಾವಾಸ್ಯೆಯೂ ಇರುವುದರಿಂದ, ಚಂದ್ರನಿಲ್ಲದ ರಾತ್ರಿಯಲ್ಲಿ, ಈ ಉಲ್ಕಾಪಾತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಉಲ್ಕಾಪಾತವನ್ನು, ಬರಿಗಣ್ಣಿನಲ್ಲಿ ನೋಡುವ ಜೊತೆಗೆ, ಕ್ಯಾಮರಾದಲ್ಲೂ ಸೆರೆಹಿಡಿಯಬಹುದು. ನಿಮ್ಮ ಬಳಿ ಹೆಚ್ಚು ಎಕ್ಸ್‌ಪೋಶರ್ ಸೆಟ್ಟಿಂಗ್ ಬದಲಿಸುವ ಕ್ಯಾಮರಾ ಇದ್ದರೆ, ಆಗಸದ ದಿಕ್ಕಿಗೆ ವೈಡ್‌ಅಂಗಲ್‌ನಲ್ಲಿ ಇಟ್ಟು ರೆಕಾರ್ಡ್ ಮಾಡಿ. ಉಲ್ಕಾಪಾತವನ್ನು ನೋಡುವಾಗ ರಾತ್ರಿಯ ಚಳಿಗೆ ರಕ್ಷಣೆ ಪಡೆಯಲು ಮರೆಯದಿರಿ.

ಈ ವರ್ಷದ ಕೊನೆಯ ಗ್ರಹಣ: ಸಂಪೂರ್ಣ ಸೂರ್ಯಗ್ರಹಣ

ಡಿಸೆಂಬರ್ 14ರಂದು ಸಂಪೂರ್ಣ ಸೂರ್ಯಗ್ರಹಣವಿದ್ದು, ಇದು ಈ ವರ್ಷದ ಕೊನೆಯ ಗ್ರಹಣವಾಗಿದೆ. ಈ ಗ್ರಹಣವನ್ನು ದಕ್ಷಿಣ ಅಮೆರಿಕ, ಚಿಲಿ, ಅರ್ಜೆಂಟೀನಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಕಾಣಬಹುದು. ಈ ಗ್ರಹಣವನ್ನು ಭಾರತದ ಯಾವ ಭಾಗದಿಂದಲೂ ನೋಡಲು ಸಾಧ್ಯವಿರುವುದಿಲ್ಲ. ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆಮಾಚಿರುತ್ತಾನೆ. ನಿರ್ದಿಷ್ಟ ಸ್ಥಳಗಳಲ್ಲಿ, ಸೂರ್ಯ ಕೆಲವು ಸಮಯಗಳ ಕಾಲ (ನಿಮಿಷಗಳಲ್ಲಿ) ಆಗಸದಲ್ಲಿ ಕಾಣುವುದಿಲ್ಲ. ಅಂದಹಾಗೆ, ಏಕೆ ಸೂರ್ಯಗ್ರಹಣ ಅಮಾವಾಸ್ಯೆಯಂದೇ ಮತ್ತು ಚಂದ್ರಗ್ರಹಣ ಹುಣ್ಣಿಮೆಯಂದೇ ಘಟಿಸುತ್ತವೆ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಯೋಚಿಸಿ, ಮುಂದಿನ ದಿನಗಳಲ್ಲಿ ಇವನ್ನು ಚರ್ಚಿಸೋಣ.

  • ವಿಶ್ವ ಕೀರ್ತಿ ಎಸ್

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...