Homeಮುಖಪುಟಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ...

ಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ…

ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ.

- Advertisement -
- Advertisement -

(ಆಕಾಶ ವೀಕ್ಷಣೆ: ಡಿಸೆಂಬರ್ 09-16)

ಸೈಕ್ಲೋನ್ ಇಲ್ಲದ ಸಮಯದಲ್ಲಿ ಆಕಾಶ ಸ್ಪಷ್ಟವಾಗಿ ಕಾಣುತ್ತದೆ ಎಂಬುದು ಡಿಸೆಂಬರ್ ತಿಂಗಳು ಆಕಾಶ ವೀಕ್ಷಣೆಗೆ ಪ್ರಶಸ್ತ ಕಾಲ ಎಂಬುದು ಒಂದು ಕಾರಣವಾದರೆ, ಈ ತಿಂಗಳ ರಾತ್ರಿಯ ಆಕಾಶದಲ್ಲಿ ವರ್ಷದ ಹೆಚ್ಚು ಪ್ರಕಾಶಮಾನವಾದ ಉಲ್ಕಾಪಾತವನ್ನು (Meteor Shower) ಕಣ್ತುಂಬಿಕೊಳ್ಳುವ ಸದವಕಾಶವಿರುವುದು ಮತ್ತೊಂದು ಕಾರಣ. ಈ ಉಲ್ಕಾಪಾತವನ್ನು ನೋಡುವುದಕ್ಕೆ ಯಾವ ಉಪಕರಣವು ಬೇಡ, ಬರಿಗಣ್ಣಿನಿಂದಲೇ ನೋಡಬಹುದು. ಆಕಾಶ ವೀಕ್ಷಣೆಯಲ್ಲಿ ಉಲ್ಕಾಪಾತದ ವೀಕ್ಷಣೆಯು ಬಹಳ ಉಲ್ಲಾಸದ ಮತ್ತು ಎಲ್ಲರೂ ಒಟ್ಟುಗೂಡಿ ನೋಡುವ ಒಂದು ವಿದ್ಯಮಾನ.

ಉಲ್ಕೆಗಳು, ಉಲ್ಕಾಪಾತ ಎಂದರೇನು?

ಸೂರ್ಯನ ಸುತ್ತ ಗ್ರಹಗಳು ಹೇಗೆ ಸುತ್ತುತ್ತಿವೆಯೋ, ಹಾಗೆಯೇ ಅನೇಕ ಧೂಮಕೇತುಗಳು ಮತ್ತು ಗಾತ್ರದಲ್ಲಿ ಚಿಕ್ಕದಾಗಿರುವ ಆಕಾಶಕಾಯಗಳು ಕೂಡ ಸುತ್ತುತ್ತಿವೆ. ಇವುಗಳಲ್ಲಿ ಧೂಮಕೇತುಗಳು ವಿಶೇಷವಾದವು. ಧೂಮಕೇತುಗಳು ದೀರ್ಘ ಅಂಡಾಕಾರದ ವೃತ್ತದಲ್ಲಿ, ಸೌರಮಂಡಲದ ಹೊರಭಾಗದಿಂದ ಸೂರ್ಯನ ಬಳಿ ಬಂದುಹೋಗುತ್ತವೆ. ಹೀಗೆ ಧೂಮಕೇತುಗಳು ಸೂರ್ಯನ ಬಳಿ ಬಂದಾಗ, ಸೂರ್ಯನ ಶಾಖದಿಂದ ಅವುಗಳಲ್ಲಿ ಇರುವ ವಸ್ತುಗಳು ಆವಿಯಾಗಿ ಸೂರ್ಯ ಇರುವ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಇದು, ಧೂಮಕೇತುವಿಗೆ ಬಾಲವಾಗುತ್ತದೆ. ಧೂಮಕೇತು ಹೆಚ್ಚು ಹೆಚ್ಚು ಸೂರ್ಯನ ಹತ್ತಿರ ಸಮೀಪಿಸಿದಂತೆ, ಅದರ ಬಾಲವು ದೊಡ್ಡದಾಗುತ್ತಾ ಹೋಗುತ್ತದೆ. ಭೂಮಿಯಿಂದ ಆಕಾಶದಲ್ಲಿ ಈ ಬಾಲಾಂಕೃತ ಅತಿಥಿಗಳನ್ನು ಬರಿಗಣ್ಣಿನಿಂದ ಕಾಣಬಹುದಾಗಿರುತ್ತದೆ. ಹೀಗೆ ಸೂರ್ಯನ ಬಳಿ ಬಂದು ಹೋದ ಧೂಮಕೇತುಗಳು, ಅದರ ಕಕ್ಷೆಯಲ್ಲಿ ಚಿಕ್ಕಚಿಕ್ಕ ಶಿಲೆಗಳನ್ನು (ಹೆಚ್ಚಾಗಿ ಧೂಮಕೇತುವಿನ ಧೂಳಿನ ಕಣಗಳು, icy bodies, ಕ್ಷುದ್ರ ಗ್ರಹಗಳ ಸಣ್ಣಸಣ್ಣ ಕಲ್ಲು) ಚದುರಿಸಿ ಹೋಗಿರುತ್ತವೆ. ಇವನ್ನು ಉಲ್ಕೆಗಳು(Metor) ಎಂದು ಕರೆಯುತ್ತೇವೆ.

ಭೂಮಿಯು ಸೂರ್ಯನ ಸುತ್ತ ಸುತ್ತುವ ಪಥದಲ್ಲಿ ಇಂತಹ ಚದುರಿದ ಉಲ್ಕೆಗಳಿರುವ ಪ್ರದೇಶದ ಮೋಡದೊಳಗೆ ಹಾದುಹೋದಾಗ, ಈ ಉಲ್ಕೆಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ, ವಾತಾವರಣದ ಘರ್ಷಣೆಯ ಕಾರಣದಿಂದ ಉರಿದು ಬೂದಿಯಾಗುತ್ತವೆ. ಈ ಪ್ರಕ್ರಿಯೆ, ಭೂಮಿಯ ಆಕಾಶದಲ್ಲಿ, ನಕ್ಷತ್ರವು ಕೆಳಗೆ ಬಿದ್ದಿತೇನೋ ಎಂಬಂತೆ, ಮಿಂಚಿನ ಒಂದು ಸಣ್ಣ ಬೆಂಕಿಯಗೆರೆಯಂತೆ ಗೋಚರಿಸುತ್ತದೆ. ಇಂತಹ ಹಲವು ಬೆಂಕಿಯ ಗೆರೆಗಳು ಆಕಾಶದಲ್ಲಿ ಗೋಚರಿಸಿದರೆ ಅದನ್ನು ಉಲ್ಕಾಪಾತ (Metor Shower) ಎಂದು ಕರೆಯುತ್ತೇವೆ. ಇಂಗ್ಲಿಷ್‌ನಲ್ಲಿ ಶೂಟಿಂಗ್ ಸ್ಟಾರ್ ಎಂದೂ ಹೆಸರಿದೆ. ಆದರೆ, ನಕ್ಷತ್ರಗಳಿಗೂ ಇವಕ್ಕೂ ಯಾವುದೇ ಸಂಬಂಧವಿಲ್ಲ.

ಉಲ್ಕಾಪಾತವನ್ನು ಹೇಗೆ ನೋಡುವುದು?

ಆಕಾಶ ವೀಕ್ಷಕರಿಗೆ ಉಲ್ಕಾಪಾತ ನೋಡುವುದು ಒಂದು ವಿಶೇಷ ಅನುಭವ. ಉಲ್ಕಾಪಾತ ನೋಡಲು ಯಾವ ಉಪಕರಣದ (ಟೆಲಿಸ್ಕೋಪ್, ಬೈನಾಕ್ಯೂಲರ್) ಅಗತ್ಯವು ಇರುವುದಿಲ್ಲ. ಇದು ಬರಿಗಣ್ಣಿನಲ್ಲಿ ನೋಡಬಹುದಾದ ವಿದ್ಯಮಾನ. ನಗರ ಪ್ರದೇಶದಲ್ಲಿದ್ದರೆ, ಕಟ್ಟಡದ ತಾರಸಿಯ ಮೇಲೋ ಅಥವಾ ಯಾವುದೇ ಅಡೆತಡೆಯಿಲ್ಲದೆ ಆಕಾಶ ಕಾಣುವ ಜಾಗದಲ್ಲಿ ಆಕಾಶಕ್ಕೆ ಮುಖ ಮಾಡಿ ಮಲಗಿ ನೋಡುತ್ತಿದ್ದರೆ, ಉಲ್ಕಾಪಾತವನ್ನು ಸವಿಯಬಹುದು ಮತ್ತು ಎಷ್ಟು ಬೆಂಕಿಯ ಗೆರೆಗಳನ್ನು ನೋಡಿದಿರಿ ಎಂದು ಎಣಿಸಲೂಬಹುದು. ಉಲ್ಕಾಪಾತ ರಾತ್ರಿ ಪೂರ್ತಿ ಕಾಣುವ ವಿದ್ಯಮಾನ. ಅಲ್ಲದೆ, ಉಲ್ಕಾಪಾತವನ್ನು ಅಳೆಯಲು ಒಂದು ಮಾಪನವಿದೆ. ಇದೇನೆಂದರೆ, ಒಂದು ಗಂಟೆಗೆ ಸರಿಸುಮಾರು ಎಷ್ಟು ಉಲ್ಕೆಗಳು ಬೀಳುವುದನ್ನು ನೋಡಬಹುದಾಗಿದೆ ಎಂಬುದು. ಕೆಲವು ಉಲ್ಕಾಪಾತದಲ್ಲಿ ಈ ಸಂಖ್ಯೆ ಬಹಳ ಕಡಿಮೆ ಇರುತ್ತದೆ- 10ರಿಂದ 20. 100ರಿಂದ 150 ಇದ್ದರೆ, ಅದು ಪ್ರಕಾಶಮಾನವಾದ ಉಲ್ಕಾಪಾತ. ರಾತ್ರಿಯ ಆಕಾಶದಲ್ಲಿ ಉಲ್ಕಾಪಾತವನ್ನು ನೋಡುವ ಅವಕಾಶ ಹೆಚ್ಚಿರುತ್ತದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸುವಂತಾದ್ದು ಅಂತಹದ್ದೇ ಪ್ರಕಾಶಮಾನವಾದ ಉಲ್ಕಾಪಾತ, ಗಂಟೆಗೆ 100ರಿಂದ 150 ಉಲ್ಕೆಗಳನ್ನು ನೋಡಬಹುದು!

ಉಲ್ಕಾಪಾತಕ್ಕೆ ಹೆಸರುಗಳಿವೆಯೇ?

ಭೂಮಿಯು, ಸೂರ್ಯನ ಸುತ್ತ ಸುತ್ತುವ ಕಕ್ಷೆಯಲ್ಲಿ, ಧೂಮಕೇತುಗಳು ಬಿಟ್ಟುಹೋದ ಹಲವು ಚದರಿದ ಮೋಡವಿರುವ ಪ್ರದೇಶದ ಮೂಲಕ ಹಾದುಹೋಗುತ್ತದೆ. ವರ್ಷಕ್ಕೆ ಸರಿಸುಮಾರು ಆರರಿಂದ ಏಳು ಉಲ್ಕಾಪಾತಗಳನ್ನು ನೋಡಬಹುದು. ಈ ಉಲ್ಕಾಪಾತಗಳ ವಿಶೇಷವೆಂದರೆ, ಉಲ್ಕಾಪಾತದ ಸಂದರ್ಭದಲ್ಲಿ ಕಾಣುವ ಬೆಂಕಿಗೆರೆಗಳ ಬಾಲವನ್ನು ಕಲ್ಪಿಸಿಕೊಂಡು, ಹಿಮ್ಮುಖವಾಗಿ ಚಲಿಸಿಕೊಂಡು ಅವು ಎಲ್ಲಿಂದ ಬರುತ್ತಿವೆಯೆಂದು ಗಮನಿಸಿದರೆ, ಪ್ರತಿಯೊಂದು ಬೆಂಕಿಗೆರೆಯು ಒಂದೇ ಪ್ರದೇಶದಿಂದ ಪ್ರಾರಂಭಿಸುತ್ತಿರುವಂತೆ ಕಾಣುತ್ತದೆ. ಈ ಪ್ರದೇಶ ಯಾವ ನಕ್ಷತ್ರಪುಂಜದಲ್ಲಿದೆಯೋ ಆ ನಕ್ಷತ್ರ ಪುಂಜದ ಹೆಸರನ್ನೆ ಉಲ್ಕಾಪಾತಕ್ಕೆ ಹೆಸರಿಸಲಾಗಿದೆ. ಉದಾಹರಣೆಗೆ, ನಾವು ಒರಿಯಾನ್ ನಕ್ಷತ್ರಪುಂಜವನ್ನು ಗುರುತಿಸುವುದನ್ನು ಈಗಾಗಲೇ ತಿಳಿದಿದ್ದೇವೆ. ಉಲ್ಕಾಪಾತದ ಬೆಂಕಿಯ ಗೆರೆಗಳ ಬಾಲಗಳನ್ನು ಹಿಮ್ಮುಖವಾಗಿ ಚಲಿಸಿದಾಗ, ಎಲ್ಲಾ ಬೆಂಕಿಯ ಗೆರೆಗಳು ಒರಿಯಾನ್ ನಕ್ಷತ್ರಪುಂಜದಿಂದ ಪ್ರಾರಂಭಿಸಿದಂತೆ ಗೋಚರಿಸಿದರೆ, ಅದನ್ನು ಒರಿಯಾನೈಡ್ ಉಲ್ಕಾಪಾತ ಎಂದು ಕರೆಯುತ್ತಾರೆ. ಪ್ರಸ್ತುತ ಡಿಸೆಂಬರ್‌ನ ಉಲ್ಕಾಪಾತದ ಹೆಸರು, ಜಮಿನಾಯ್ಡ್ಸ್ ಎಂದು ಕರೆಯುತ್ತಾರೆ. ಅಂದರೆ, ಈ ತಿಂಗಳ ಆಗಸದಲ್ಲಿ ಕಾಣುವ ಎಲ್ಲಾ ಉಲ್ಕೆಗಳ ಬೆಂಕಿಗೆರೆಯ ಬಾಲಗಳು ಜಮಿನಿ ನಕ್ಷತ್ರಪುಂಜದಿಂದ ಪ್ರಾರಂಭವಾಗುವಂತೆ ಗೋಚರಿಸುತ್ತವೆ. ಅಲ್ಲದೆ ಈ ಜಮಿನಾಯ್ಡ್ಸ್ ಉಂಟಾಗಲು ಕಾರಣ ಫ್ಯಾತನ್ 3200 ಎಂಬ ಕ್ಷುದ್ರಗ್ರಹ ಎಂದು ಕೂಡ ತಿಳಿಯಲಾಗಿದೆ.

ಡಿಸೆಂಬಂರ್ ತಿಂಗಳ ಜಮಿನಾಯ್ಡ್ಸ್ ವಿಶೇಷ

ಜಮಿನಾಯ್ಡ್ಸ್‌ಉಲ್ಕಾಪಾತ | ಚಿತ್ರ ಕೃಪೆ: ಜೆಫ್‌ಡೈ/ ಅರಿಜ಼ೋನಾ ಸ್ಟೇಟ್‌ಯುನಿವರ್ಸಿಟಿ

ವರ್ಷದಲ್ಲಿ ಕಾಣುವ ಉಳಿದೆಲ್ಲಾ ಉಲ್ಕಾಪಾತುಗಳಿಗೆ ಹೋಲಿಸಿದರೆ, ಜಮಿನಾಯ್ಡ್ಸ್ ಅತ್ಯಂತ ಪ್ರಕಾಶಮಾನವಾದದು ಮತ್ತು ಗಂಟೆಗೆ 100ರಿಂದ 150 ಬೆಂಕಿಯ ಗೆರೆಗಳನ್ನು ನೋಡುವ ಅವಕಾಶವಿರುತ್ತದೆ. ಜಮಿನಾಯ್ಡ್ಸ್ ಈ ತಿಂಗಳ 20ರವರೆಗೂ ಪ್ರತಿರಾತ್ರಿ ಕಾಣಿಸುತ್ತಿದ್ದರೂ, ಹೆಚ್ಚು ತೀವ್ರವಾಗುವುದು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು. ಅದರಲ್ಲೂ, ಬೆಳಗಿನ ಜಾವದ 2 ಗಂಟೆಯ ಆಸುಪಾಸಿಗೆ. ಡಿಸೆಂಬರ್ 14ರಂದು ಅಮಾವಾಸ್ಯೆಯೂ ಇರುವುದರಿಂದ, ಚಂದ್ರನಿಲ್ಲದ ರಾತ್ರಿಯಲ್ಲಿ, ಈ ಉಲ್ಕಾಪಾತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಉಲ್ಕಾಪಾತವನ್ನು, ಬರಿಗಣ್ಣಿನಲ್ಲಿ ನೋಡುವ ಜೊತೆಗೆ, ಕ್ಯಾಮರಾದಲ್ಲೂ ಸೆರೆಹಿಡಿಯಬಹುದು. ನಿಮ್ಮ ಬಳಿ ಹೆಚ್ಚು ಎಕ್ಸ್‌ಪೋಶರ್ ಸೆಟ್ಟಿಂಗ್ ಬದಲಿಸುವ ಕ್ಯಾಮರಾ ಇದ್ದರೆ, ಆಗಸದ ದಿಕ್ಕಿಗೆ ವೈಡ್‌ಅಂಗಲ್‌ನಲ್ಲಿ ಇಟ್ಟು ರೆಕಾರ್ಡ್ ಮಾಡಿ. ಉಲ್ಕಾಪಾತವನ್ನು ನೋಡುವಾಗ ರಾತ್ರಿಯ ಚಳಿಗೆ ರಕ್ಷಣೆ ಪಡೆಯಲು ಮರೆಯದಿರಿ.

ಈ ವರ್ಷದ ಕೊನೆಯ ಗ್ರಹಣ: ಸಂಪೂರ್ಣ ಸೂರ್ಯಗ್ರಹಣ

ಡಿಸೆಂಬರ್ 14ರಂದು ಸಂಪೂರ್ಣ ಸೂರ್ಯಗ್ರಹಣವಿದ್ದು, ಇದು ಈ ವರ್ಷದ ಕೊನೆಯ ಗ್ರಹಣವಾಗಿದೆ. ಈ ಗ್ರಹಣವನ್ನು ದಕ್ಷಿಣ ಅಮೆರಿಕ, ಚಿಲಿ, ಅರ್ಜೆಂಟೀನಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಕಾಣಬಹುದು. ಈ ಗ್ರಹಣವನ್ನು ಭಾರತದ ಯಾವ ಭಾಗದಿಂದಲೂ ನೋಡಲು ಸಾಧ್ಯವಿರುವುದಿಲ್ಲ. ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆಮಾಚಿರುತ್ತಾನೆ. ನಿರ್ದಿಷ್ಟ ಸ್ಥಳಗಳಲ್ಲಿ, ಸೂರ್ಯ ಕೆಲವು ಸಮಯಗಳ ಕಾಲ (ನಿಮಿಷಗಳಲ್ಲಿ) ಆಗಸದಲ್ಲಿ ಕಾಣುವುದಿಲ್ಲ. ಅಂದಹಾಗೆ, ಏಕೆ ಸೂರ್ಯಗ್ರಹಣ ಅಮಾವಾಸ್ಯೆಯಂದೇ ಮತ್ತು ಚಂದ್ರಗ್ರಹಣ ಹುಣ್ಣಿಮೆಯಂದೇ ಘಟಿಸುತ್ತವೆ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಯೋಚಿಸಿ, ಮುಂದಿನ ದಿನಗಳಲ್ಲಿ ಇವನ್ನು ಚರ್ಚಿಸೋಣ.

  • ವಿಶ್ವ ಕೀರ್ತಿ ಎಸ್

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...