Homeಮುಖಪುಟ'ಸಣ್ಣ ಪಿಕಾ-ಒಂದುವರೆ ರುಪಾಯಿ' - ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

‘ಸಣ್ಣ ಪಿಕಾ-ಒಂದುವರೆ ರುಪಾಯಿ’ – ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

ಇದು ‘ಅಲ್ಲಾಹ್ರ್ ಜೊಮಿತೆ ಪಾ’ (ಸೆಟಿಂಗ್ ಫುಟ್ ಆನ್ ಅಲ್ಲಾಹ್ಸ್ ಲ್ಯಾಂಡ್) ಎಂಬ ಪುಸ್ತಕದ ಆಯ್ದ ಭಾಗ. ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ. ಇದನ್ನು ಇಂಗ್ಲಿಷಿಗೆ ವಿ. ರಾಮಸ್ವಾಮಿ ಅವರು ಅನುವಾದಿಸಿದ್ದಾರೆ.

- Advertisement -
- Advertisement -

ಕಿನ್ನೋರ್ ರಾಯ್ ನನ್ನನ್ನು ಬೊಯ್‍ಪಾರಾಗೆ ಕರೆದುಕೊಂಡು ಹೋಗಿದ್ದರು. ಅವರ ಇನ್ನೊಂದು ಹೆಸರು ಝುಪು. ಬಾಸುಮತಿ ಪತ್ರಿಕೆಯ ಕಲ್ಯಾಣ್‍ದಾ ಅವರು ಅವರನ್ನು ಆ ಹೆಸರಿನಿಂದ ಕರೆಯುತ್ತಿದ್ದರು. ಅವರು ನನಗೂ ಒಂದು ಹೆಸರನ್ನು ಇಟ್ಟಿದ್ದರು; ನನ್ನ ಅನಾರೋಗ್ಯದ ಕಾರಣಕ್ಕಾಗಿ ಪೀಲಯ್ ಅಥವಾ ಸ್ಪ್ಲೀನ್(ಗುಲ್ಮ/ಪ್ಲೀಹ) ಎಂದು ಕರೆಯುತ್ತಿದ್ದರು.

70 ದಶಕದಲ್ಲಿ ನನ್ನ ಬೆಂಬಲಕ್ಕೆ ನಿಂತವರಲ್ಲಿ ಕೇವಲ ಕಿನ್ನೋರ್ ರಾಯ್ ಒಬ್ಬರೇ ಆಗಿರಲಿಲ್ಲ. ಕಲ್ಯಾಣ್ ದಾ, ಪ್ರೊಲೊಯ್ ದಾಸ್, ಸುಭಾಶ್ ಮೈತ್ರಾ ಕೂಡ ಇದ್ದರು. ಕಲ್ಯಾಣ್ ದಾ ಅಂದರೆ ಕಲ್ಯಾಣಕ್ಷಾ ಬಂಡೋಪಾಧ್ಯಾಯ ಅವರು ಟಾಗೋರ್ ಕುಟುಂಬಕ್ಕೆ ಸೇರಿದವರು. ಅವರು ಬಾಸುಮತಿ ಎಂಬ ನಿಯತಕಾಲಿಕೆಯ ಸಂಪಾದಕರಾಗಿದ್ದರು. ನನ್ನ ಕಥೆಗಳನ್ನು ಆ ಪತ್ರಿಕೆಯಲ್ಲಿ ಆಗಾಗ ಪ್ರಕಟಿಸಿ ನನ್ನ ಕುಟುಂಬದ ಬೆಂಗಾವಲಾಗಿ ನಿಂತಿದ್ದರು ಎಂದು ಹೇಳಬಹುದು. ಅದರ ಹೊರತಾಗಿ ನಾನು ಆ ನಿಯತಕಾಲಿಕೆಯ ‘ಇಲ್ಲಿ ಮತ್ತು ಅಲ್ಲಿ’ (ಹಿಯರ್ ಆ್ಯಂಡ್ ದೇರ್) ವಿಭಾಗಕ್ಕೂ ನಾನು ಬರೆಯುತ್ತಿದ್ದೆ. ಅದು ಇಪ್ಪತ್ತರಿಂದ ಇಪ್ಪತೈದು ಪದಗಳ ಒಂದು ಪುಟ್ಟ ಬರಹ, ಆ ಪ್ರತಿಯೊಂದು ಬರಹಕ್ಕೂ ವಾರಾಂತ್ಯದಲ್ಲಿ ನನಗೆ ಹತ್ತು ರೂಪಾಯಿಗಳು ಸಿಗುತ್ತಿದ್ದವು.

ಇದನ್ನೂ ಓದಿ: ಅಧೀರ್ ಬಿಸ್ವಾಸ್: ತಳಸ್ಥರೀಯ ನೆನಪಿನ ಪ್ರಜ್ಞೆ

ಕಿನ್ನೋರ್ ಅವರಿಗೂ ನನ್ನ ಮನೆಯ ಪರಿಸ್ಥಿತಿಯ ಬಗ್ಗೆ ಅರಿವಿತ್ತು. ಪೋತಿಕ್-ದಾ ಅಂದರೆ ಪೋತಿಕ್ ಗುಹಾ ಅವರಿಗೆ ಕೂಡ ತಿಳಿದಿತ್ತು. ಒಂದು ಸಲ ಪೋತಿಕ್ ದಾ ‘ನನ್ನ ಜೊತೆ ಬಾ’ ಕರೆದು, ಪ್ರೊನೊಬೇಶ್ ಚಕ್ರೊಬೊರ್ತಿ ಅವರಿಗೆ ನನ್ನನ್ನು ಪರಿಚಯಿಸಿದರು. ಪ್ರೊನೊಬೇಶ್ ಬಾಬು ಅವರು ಬಾಸುಮತಿ ಪತ್ರಿಕೆಯ ಹೊರಸಂಪಾದಕೀಯದ(op-ed) ಜವಾಬ್ದಾರಿ ವಹಿಸಿಕೊಂಡಿದ್ದರು. ಪೋತಿಕ್ ದಾ ಅವರು ನನ್ನ ಕಡೆ ಬೊಟ್ಟು ಮಾಡಿ, “ಈ ಹುಡುಗನಿಗೆ ಹಳ್ಳಿಯ ಜೀವನದ ಬಗ್ಗೆ ಚೆನ್ನಾಗಿ ಗೊತ್ತು, ಇವನಿಂದ ನೀವು ಬರೆಸಬಹುದು ಪ್ರೊನಬೇಶ್ ದಾ. ಇವನಿಗೆ ತುಂಬಾ ಅವಶ್ಯಕತೆಯಿದೆ” ಎಂದರು.

ಒಂದು ಸಲ, ನಾನು ‘ಇಲ್ಲಿ ಮತ್ತು ಅಲ್ಲಿ’ ಬರಹದ ಸಂಭಾವನೆಯನ್ನು ಪಡೆಯಲು ಹೋದಾಗ, ದಿಢೀರನೆ ಕಿನ್ನೋರ್ ನನ್ನ ಬಳಿ ಬಂದರು. ಮೂರು ಬರಹಗಳ, ಒಟ್ಟು ಮೂವತ್ತು ರೂಪಾಯಿಗಳನ್ನು ಪಡೆದನಂತರ ಅವರು ಹೇಳಿದರು, “ನಿನಗೆ ಕರಡು ತಿದ್ದುವುದು ಗೊತ್ತಾ ಅಧೀರ್?” ‘ಇಲ್ಲ’ ಎಂದು ನಾನು ಹೇಳಿದೆ. ಆಗ ಅವರು, “ನಾನು ನಿನಗೆ ಕಲಿಸುವೆ. ನೀನು ಕರಡು ತಿದ್ದುವುದಕ್ಕೆ ಪ್ರಾರಂಭಿಸಿದರೆ, ಅದು ನಿನ್ನ ಬರಹದ ಪ್ರಯೋಗಗಳಿಗೆ ಅಡ್ಡಿ ಮಾಡುವುದಿಲ್ಲ. ನೀನು ಈ ಕೆಲಸ ಮಾಡಬಹುದು. ಇದರಿಂದ ನಿನ್ನ ಕುಟುಂಬಕ್ಕೆ ಸಹಾಯವಾಗುವುದು” ಎಂದರು.

ಆಗ ಕಿನ್ನೋರ್ ನನಗೆ ಕರಡು ತಿದ್ದುವುದನ್ನು ಹೇಳಿಕೊಟ್ಟರು. ಅವರ ಹೆಗಲಿಗೆ ಜೋತಿರುವ ಚೀಲವು ಕರಡುತಿದ್ದಲು ಕಾದಿರುವ ಕಾಲೇಜ್ ಸ್ಟ್ರೀಟ್‍ನ ಅನೇಕ ಪ್ರಕಾಶಕರ ಅನೇಕ ಹಸ್ತಪ್ರತಿಗಳನ್ನು ಹೊಂದಿರುತ್ತಿತ್ತು. ಬಾಸುಮತಿ ಪತ್ರಿಕೆಗೆ ಅದನ್ನು ಇದನ್ನು ಬರೆಯುತ್ತಲೇ, ಹಸ್ತಪ್ರತಿಗಳ ರಾಶಿಯಿಂದ ಒಂದನ್ನು ತೆಗೆದು, “ಇದನ್ನು ನೋಡು, ಇದನ್ನು ನೋಡಿದರೆ, ನಿನಗೆ ಬಳಸಿದ ಚಿಹ್ನೆಗಳು ಅರ್ಥವಾಗುತ್ತವೆ” ಎಂದರು.

ಇದನ್ನೂ ಓದಿ: “ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

ಆಗಿನಿಂದ, ಕಿನ್ನೋರ್ ಅವರ ಪ್ರೂಫ್‍ಗಳನ್ನು ಗಮನಿಸುತ್ತ ನಾನು ಕರಡು ತಿದ್ದುವುದನ್ನು ಕಲಿತುಕೊಂಡೆ. ಕಿನ್ನೋರ್ ಅವರಿಂದ ನನ್ನ ಬಗ್ಗೆ ಕೇಳಿ ತಿಳಿದಿದ್ದ ಪ್ರೊಲೊಯ್-ದಾ ಅವರು ಬೆಂಗಾಳ್ ಪಬ್ಲಿಷರ್‌ನ ಮಯುಖ್ ಬಸು ಅವರಿಗೆ ಒಂದು ಪತ್ರ ಬರೆದರು.

ನಾನು ಮಯುಖ್ ಬಸು ಅವರನ್ನು ಭೇಟಿಯಾಗಲು ಹೋದೆ. ಆ ದಿನ ಒಂದು ಪ್ರೂಫ್ ನನಗಾಗಿಯೇ ಕಾಯುತ್ತಿತ್ತು ಅನಿಸುತ್ತೆ. ಟೇಬಲ್ ಮೇಲೆ ನನ್ನ ಸಲುವಾಗಿಯೇ ಇಟ್ಟಂತಿದ್ದ ಒಂದು ಹಸ್ತಪ್ರತಿಯನ್ನು ತೆಗೆದುಕೊಂಡು, ಮಯುಖ್-ದಾ ಹೇಳಿದರು, “ಯಾರೋ ಒಬ್ಬರು ಬರಬೇಕಾಗಿತ್ತು, ಅವನಿನ್ನೂ ಬಂದಿಲ್ಲ. ನೀನು ಮಾಡುತ್ತೀಯಾ? ತುಂಬಾ ತುರ್ತು ಇದೆ. ಆದರೆ, ನಾಳೆಯೊಳಗಾಗಿ ನೀನು ಇದನ್ನು ತಿದ್ದಿ ಹಿಂದಿರುಗಿಸಬೇಕು.” ನಾನೂ ಆಗಲಿ ಎಂದು ತಲೆಯಾಡಿಸಿದೆ.

‘ಅಲ್ಲಾಹ್ರ್ ಜೊಮಿತೆ ಪಾ’ ಪುಸ್ತಕ (PC: Bookiecart)

ಇದು ನನಗೊಂದು ಮಹತ್ವದ ಅವಕಾಶವಾಗಿತ್ತು. ನನಗಿನ್ನೂ ನೆನಪಿದೆ, ತಿದ್ದುಪಡಿಗಾಗಿ ಬಂದ ಪುಸ್ತಕ ಮನೋಜ್ ಬಸು ಅವರ ‘ಬೋನ್ ಕೇಟೆ ಬೋಸೊಟ್’ (ಅರಣ್ಯದಿಂದ ಆವಾಸಕ್ಕೆ) ಎಂಬ ಕಾದಂಬರಿಯಾಗಿತ್ತು. ಕೈಯಿಂದಲೇ ಟೈಪ್‍ಸೆಟ್ ಮಾಡಿ, ನ್ಯೂಸ್‍ಪ್ರಿಂಟ್ ಮೇಲೆ ಅಚ್ಚುಮೊಳೆ(ಗ್ಯಾಲಿ-ಪ್ರೂಫ್) ಪ್ರಿಂಟ್ ಮಾಡಲಾಗಿತ್ತು. ಅಕ್ಷರಗಳು ಇನ್ನೂ ಒದ್ದೆಯಾಗಿಯೇ ಇದ್ದವು. ಒಂದಿಷ್ಟು ಹೊತ್ತಿನ ಮುಂಚೆಯೇ ಮುದ್ರಣಾಲಯದಿಂದ ತಂದಿಟ್ಟುಹೋಗಿದ್ದಾರ ಎನಿಸಿತು ನನಗೆ.

ಇದರೊಂದಿಗೆ ನನ್ನ ಹೊಸ ಜೀವನ ಶುರು ಆಯಿತು. ನಾನು ಪ್ರೂಫ್ ಅನ್ನು ಹಿಂದಿರುಗಿಸಿ, ಒಂದು ಪುಸ್ತಕದಲ್ಲಿ ನಮೂದಿಸಬೇಕಿತ್ತು. ವಾರದ ಕೊನೆಯಲ್ಲಿ ನನಗೆ ಸಿಗುತ್ತಿದ್ದ ದುಡ್ಡು; ‘ಚಿಕ್ಕ ಪಿಕಾ’. ಅಂದರೆ ಒಂದು ‘ಫಾರ್ಮಾ’ಗೆ ಒಂದೂವರೆ ರೂಪಾಯಿ. ಒಂದು ಪೂರ್ಣ ಪಿಕಾ ಆಗಿದ್ದರೆ, ಅದು ಐದು ಕಾಲು ನಾಣ್ಯಗಳಾಗಿರುತ್ತಿತ್ತು. ಫಾರ್ಮಾ ಎಂದರೆ, ಸಾಧಾರಣ ಆಕಾರದ ಹದಿನಾರು ಪುಟಗಳು. ಬೆಂಗಾಳ್ ಪಬ್ಲಿಷರ್ಸ್‍ನ ಹೆಸರು ಹೇಳಿಕೊಂಡು, ವಿಶ್ವವಾಣಿ ಮತ್ತು ಇತರ ಎರಡು ಪ್ರಕಾಶಕರಿಂದಲೂ ಕೆಲಸ ಗಿಟ್ಟಿಸಿಕೊಂಡೆ. ಆಗ ವಿಶ್ವವಾಣಿಯಲ್ಲಿ ಬ್ರೊಜೊ ಕಿಶೋರ್ ಮಂಡಲ್ ಇದ್ದರು. ಅವರಿಗೆ ಪೊದೆ ಮೀಸೆ ಇತ್ತು.

ನಾನು ಎಷ್ಟೇ ಕಷ್ಟಪಟ್ಟರೂ, ಒಂದು ವಾರದಲ್ಲಿ ಹತ್ತು ಫಾರ್ಮಾಗಳಿಗಿಂತ ಹೆಚ್ಚು ನೋಡಲಾಗುತ್ತಿದ್ದಿಲ್ಲ. ರೈಲಿನಲ್ಲಿ ಪಯಾಣಕ್ಕೆ ನಾಲ್ಕು ಗಂಟೆ ವ್ಯಯಿಸುತ್ತಿದ್ದೆ. ಕೆಲಸ ಮಾಡಲು ರಾತ್ರಿಯೂ ಕುಳಿತುಕೊಳ್ಳುತ್ತಿದ್ದೆ. ಈ ಕೆಲಸದಲ್ಲಿ ದುಡ್ಡು ಸಿಗುತ್ತಿತ್ತಾದುದರಿಂದ ಮುಂಚಿನಂತೆ ನಿಯಮಿತವಾಗಿ ಕಾಲೇಜಿಗೆ ಹೋಗಲು ಆಗುತ್ತಿರಲಿಲ್ಲ.

ಇದನ್ನೂ ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು: ಮೇಲ್ಚಲನೆಯೋ ಅಥವಾ ಮೂಲೆಗುಂಪೋ? – ಪುಸ್ತಕ ಸಂವಾದ

ನನಗೆ ಪದವೀಧರ ಆಗಬೇಕು ಎಂಬ ಮಹದಾಸೆಯಿತ್ತು. ಪುರಬಿ ಸಿನೆಮಾ ಎಂಬ ಹೆಸರಿನ ಥಿಯೇಟರ್ ಪಕ್ಕ ಹಾದುಹೋಗುತ್ತಿದ್ದಾಗ, ಹಶಿಮುಖ ಎಂಬ ಫೋಟೋ ಸ್ಟುಡಿಯೋ ಇತ್ತು. ಅಲ್ಲಿ ಅನೇಕರು ತೆಗೆಸಿಕೊಂಡ ‘ಗ್ರ್ಯಾಜುಯೇಷನ್’ನ ಛಾಯಾಚಿತ್ರಗಳನ್ನು ನೋಡಿದೆ. ವಿಶ್ವವಿದ್ಯಾಲಯದ ಮೊದಲ ಭಾಗದ ಪರೀಕ್ಷೆಗಳು ನನ್ನ ಮುಂದಿದ್ದವು. ಅಲ್ಲಿ ಪಾಸಾದರೆ, ಭಾಗ 2 ರ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು. ಕಾಲೇಜು ಬೀದಿಗೆ ಹೋಗಬೇಕಾದರೆ ಆ ಫೋಟೊ ಸ್ಟುಡಿಯೋ ಹಾದು ಹೋಗಲೇಬೇಕಿತ್ತು. ಅಲ್ಲಿ ಪ್ರತಿನಿತ್ಯ ಕಾಣಿಸುತ್ತಿದ್ದು; ತಲೆಯ ಮೇಲೊಂದು ಟೋಪಿ, ಮೈಮೇಲೊಂದು ಗೌನ್, ಕೈಯಲ್ಲಿ ನೀಟಾಗಿ ಸುತ್ತಿದ ಸರ್ಟಿಫಿಕೇಟು.., ರೆಡಿ, ಒನ್, ಟೂ.., ಕ್ಲಿಕ್..!

ಕರಡು ತಿದ್ದಲು ಕೆಲವು ಪುಟಗಳನ್ನು ತಿರುವಿಹಾಕುತ್ತಿದ್ದಂತೆ ನನ್ನ ಕಣ್ಣಗಳು ಉರಿಯತೊಡಗುತ್ತಿದ್ದವು. ಹಾಗೆ ಮುಂಚೆ ಆಗುತ್ತಿದ್ದಿಲ್ಲ. ಕಂದೀಲಿನ ಬೆಳಕಿನಲ್ಲಿ ಚಿಕ್ಕ ಅಕ್ಷರಗಳನ್ನು ಓದುವುದು ಸುಲಭವಾಗಿದ್ದಿಲ್ಲ. ಬೆಳಕಿನಿಂದ ಕತ್ತಲೆಯೆಡೆಗೆ ಕಣ್ಣು ಹಾಯಿಸಿದ ಕೂಡಲೇ, ತಲೆನೋವು ಶುರುವಾಗಿ, ಕಣ್ಣುಗಳು ಭಾರವೆನಿಸುತ್ತಿದ್ದವು. ನನಗೆಷ್ಟು ಸಾಧ್ಯವಾಗುತ್ತೋ ಅಷ್ಟು ಕೆಲಸ ಮಾಡುತ್ತಿದ್ದೆ. ಮುಖದ ಮೇಲೆ ನೀರು ಚಿಮುಕಿಸಿ ಮತ್ತೆ ಪ್ರಯತ್ನ ಶುರು ಮಾಡುತ್ತಿದ್ದೆ. ಪಟ್ಟ ಕಷ್ಟಕ್ಕೆ ಸಿಗುತ್ತಿದ್ದ ದುಡ್ಡು ಅತ್ಯಲ್ಪವಾಗಿತ್ತು. ಯಾರಿಗೂ ಹೇಳುವ ಸ್ಥಿತಿಯಲ್ಲೂ ಇರಲಿಲ್ಲ. ಏನು ಹೇಳಬೇಕೆಂಬುದೂ ನನಗೆ ತಿಳಿಯುತ್ತಿದ್ದಿಲ್ಲ. ನಾನು ಶಾಲೆಯಲ್ಲಿ ಮೂರನೇ ದರ್ಜೆಯಲ್ಲಿ ಪಾಸು ಮಾಡಿ ಆಗ ಬಿ.ಎ ಓದುತ್ತಿದ್ದೆ. ಆಮೇಲೆ ನನಗೆ ತಿಳಿದಿದ್ದೇನೆಂದರೆ, ನಾನು ಮಾಡುತ್ತಿದ್ದ ಕೆಲಸಕ್ಕೆ ಬೊಯಿಪಾರಾದಲ್ಲಿ ಅಷ್ಟು ಗೌರವ ಸಿಗುತ್ತಿದ್ದಿಲ್ಲ ಹಾಗೂ ಕೆಲಸದಲ್ಲಿ ದುಡ್ಡೂ ಇದ್ದಿಲ್ಲ ಎಂದು. ಆದರೆ, ಅದು ದೇವರ ವಿನೋದವಾಗಿತ್ತು, ಈ ಕೆಲಸವೇ ನನ್ನ ವಿಧಿಯಾಗಿತ್ತು.

ಇದು ‘ಅಲ್ಲಾಹ್ರ್ ಜೊಮಿತೆ ಪಾ’ (ಸೆಟಿಂಗ್ ಫುಟ್ ಆನ್ ಅಲ್ಲಾಹ್ಸ್ ಲ್ಯಾಂಡ್) ಎಂಬ ಪುಸ್ತಕದ ಆಯ್ದ ಭಾಗ. ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ. ಇದನ್ನು ಇಂಗ್ಲಿಷಿಗೆ ವಿ. ರಾಮಸ್ವಾಮಿ ಅವರು ಅನುವಾದಿಸಿದ್ದಾರೆ.


ಇದನ್ನೂ ಓದಿ: ಬಾಬರಿ ಮಸೀದಿ ಪ್ರಕರಣದಲ್ಲಿ ಗಲ್ಲಿಗೇರಿಸಲಿ, ಜಾಮೀನು ಪಡೆಯುವುದಿಲ್ಲ- ಉಮಾ ಭಾರತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...