Homeಮುಖಪುಟ'ಸಣ್ಣ ಪಿಕಾ-ಒಂದುವರೆ ರುಪಾಯಿ' - ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

‘ಸಣ್ಣ ಪಿಕಾ-ಒಂದುವರೆ ರುಪಾಯಿ’ – ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

ಇದು ‘ಅಲ್ಲಾಹ್ರ್ ಜೊಮಿತೆ ಪಾ’ (ಸೆಟಿಂಗ್ ಫುಟ್ ಆನ್ ಅಲ್ಲಾಹ್ಸ್ ಲ್ಯಾಂಡ್) ಎಂಬ ಪುಸ್ತಕದ ಆಯ್ದ ಭಾಗ. ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ. ಇದನ್ನು ಇಂಗ್ಲಿಷಿಗೆ ವಿ. ರಾಮಸ್ವಾಮಿ ಅವರು ಅನುವಾದಿಸಿದ್ದಾರೆ.

- Advertisement -
- Advertisement -

ಕಿನ್ನೋರ್ ರಾಯ್ ನನ್ನನ್ನು ಬೊಯ್‍ಪಾರಾಗೆ ಕರೆದುಕೊಂಡು ಹೋಗಿದ್ದರು. ಅವರ ಇನ್ನೊಂದು ಹೆಸರು ಝುಪು. ಬಾಸುಮತಿ ಪತ್ರಿಕೆಯ ಕಲ್ಯಾಣ್‍ದಾ ಅವರು ಅವರನ್ನು ಆ ಹೆಸರಿನಿಂದ ಕರೆಯುತ್ತಿದ್ದರು. ಅವರು ನನಗೂ ಒಂದು ಹೆಸರನ್ನು ಇಟ್ಟಿದ್ದರು; ನನ್ನ ಅನಾರೋಗ್ಯದ ಕಾರಣಕ್ಕಾಗಿ ಪೀಲಯ್ ಅಥವಾ ಸ್ಪ್ಲೀನ್(ಗುಲ್ಮ/ಪ್ಲೀಹ) ಎಂದು ಕರೆಯುತ್ತಿದ್ದರು.

70 ದಶಕದಲ್ಲಿ ನನ್ನ ಬೆಂಬಲಕ್ಕೆ ನಿಂತವರಲ್ಲಿ ಕೇವಲ ಕಿನ್ನೋರ್ ರಾಯ್ ಒಬ್ಬರೇ ಆಗಿರಲಿಲ್ಲ. ಕಲ್ಯಾಣ್ ದಾ, ಪ್ರೊಲೊಯ್ ದಾಸ್, ಸುಭಾಶ್ ಮೈತ್ರಾ ಕೂಡ ಇದ್ದರು. ಕಲ್ಯಾಣ್ ದಾ ಅಂದರೆ ಕಲ್ಯಾಣಕ್ಷಾ ಬಂಡೋಪಾಧ್ಯಾಯ ಅವರು ಟಾಗೋರ್ ಕುಟುಂಬಕ್ಕೆ ಸೇರಿದವರು. ಅವರು ಬಾಸುಮತಿ ಎಂಬ ನಿಯತಕಾಲಿಕೆಯ ಸಂಪಾದಕರಾಗಿದ್ದರು. ನನ್ನ ಕಥೆಗಳನ್ನು ಆ ಪತ್ರಿಕೆಯಲ್ಲಿ ಆಗಾಗ ಪ್ರಕಟಿಸಿ ನನ್ನ ಕುಟುಂಬದ ಬೆಂಗಾವಲಾಗಿ ನಿಂತಿದ್ದರು ಎಂದು ಹೇಳಬಹುದು. ಅದರ ಹೊರತಾಗಿ ನಾನು ಆ ನಿಯತಕಾಲಿಕೆಯ ‘ಇಲ್ಲಿ ಮತ್ತು ಅಲ್ಲಿ’ (ಹಿಯರ್ ಆ್ಯಂಡ್ ದೇರ್) ವಿಭಾಗಕ್ಕೂ ನಾನು ಬರೆಯುತ್ತಿದ್ದೆ. ಅದು ಇಪ್ಪತ್ತರಿಂದ ಇಪ್ಪತೈದು ಪದಗಳ ಒಂದು ಪುಟ್ಟ ಬರಹ, ಆ ಪ್ರತಿಯೊಂದು ಬರಹಕ್ಕೂ ವಾರಾಂತ್ಯದಲ್ಲಿ ನನಗೆ ಹತ್ತು ರೂಪಾಯಿಗಳು ಸಿಗುತ್ತಿದ್ದವು.

ಇದನ್ನೂ ಓದಿ: ಅಧೀರ್ ಬಿಸ್ವಾಸ್: ತಳಸ್ಥರೀಯ ನೆನಪಿನ ಪ್ರಜ್ಞೆ

ಕಿನ್ನೋರ್ ಅವರಿಗೂ ನನ್ನ ಮನೆಯ ಪರಿಸ್ಥಿತಿಯ ಬಗ್ಗೆ ಅರಿವಿತ್ತು. ಪೋತಿಕ್-ದಾ ಅಂದರೆ ಪೋತಿಕ್ ಗುಹಾ ಅವರಿಗೆ ಕೂಡ ತಿಳಿದಿತ್ತು. ಒಂದು ಸಲ ಪೋತಿಕ್ ದಾ ‘ನನ್ನ ಜೊತೆ ಬಾ’ ಕರೆದು, ಪ್ರೊನೊಬೇಶ್ ಚಕ್ರೊಬೊರ್ತಿ ಅವರಿಗೆ ನನ್ನನ್ನು ಪರಿಚಯಿಸಿದರು. ಪ್ರೊನೊಬೇಶ್ ಬಾಬು ಅವರು ಬಾಸುಮತಿ ಪತ್ರಿಕೆಯ ಹೊರಸಂಪಾದಕೀಯದ(op-ed) ಜವಾಬ್ದಾರಿ ವಹಿಸಿಕೊಂಡಿದ್ದರು. ಪೋತಿಕ್ ದಾ ಅವರು ನನ್ನ ಕಡೆ ಬೊಟ್ಟು ಮಾಡಿ, “ಈ ಹುಡುಗನಿಗೆ ಹಳ್ಳಿಯ ಜೀವನದ ಬಗ್ಗೆ ಚೆನ್ನಾಗಿ ಗೊತ್ತು, ಇವನಿಂದ ನೀವು ಬರೆಸಬಹುದು ಪ್ರೊನಬೇಶ್ ದಾ. ಇವನಿಗೆ ತುಂಬಾ ಅವಶ್ಯಕತೆಯಿದೆ” ಎಂದರು.

ಒಂದು ಸಲ, ನಾನು ‘ಇಲ್ಲಿ ಮತ್ತು ಅಲ್ಲಿ’ ಬರಹದ ಸಂಭಾವನೆಯನ್ನು ಪಡೆಯಲು ಹೋದಾಗ, ದಿಢೀರನೆ ಕಿನ್ನೋರ್ ನನ್ನ ಬಳಿ ಬಂದರು. ಮೂರು ಬರಹಗಳ, ಒಟ್ಟು ಮೂವತ್ತು ರೂಪಾಯಿಗಳನ್ನು ಪಡೆದನಂತರ ಅವರು ಹೇಳಿದರು, “ನಿನಗೆ ಕರಡು ತಿದ್ದುವುದು ಗೊತ್ತಾ ಅಧೀರ್?” ‘ಇಲ್ಲ’ ಎಂದು ನಾನು ಹೇಳಿದೆ. ಆಗ ಅವರು, “ನಾನು ನಿನಗೆ ಕಲಿಸುವೆ. ನೀನು ಕರಡು ತಿದ್ದುವುದಕ್ಕೆ ಪ್ರಾರಂಭಿಸಿದರೆ, ಅದು ನಿನ್ನ ಬರಹದ ಪ್ರಯೋಗಗಳಿಗೆ ಅಡ್ಡಿ ಮಾಡುವುದಿಲ್ಲ. ನೀನು ಈ ಕೆಲಸ ಮಾಡಬಹುದು. ಇದರಿಂದ ನಿನ್ನ ಕುಟುಂಬಕ್ಕೆ ಸಹಾಯವಾಗುವುದು” ಎಂದರು.

ಆಗ ಕಿನ್ನೋರ್ ನನಗೆ ಕರಡು ತಿದ್ದುವುದನ್ನು ಹೇಳಿಕೊಟ್ಟರು. ಅವರ ಹೆಗಲಿಗೆ ಜೋತಿರುವ ಚೀಲವು ಕರಡುತಿದ್ದಲು ಕಾದಿರುವ ಕಾಲೇಜ್ ಸ್ಟ್ರೀಟ್‍ನ ಅನೇಕ ಪ್ರಕಾಶಕರ ಅನೇಕ ಹಸ್ತಪ್ರತಿಗಳನ್ನು ಹೊಂದಿರುತ್ತಿತ್ತು. ಬಾಸುಮತಿ ಪತ್ರಿಕೆಗೆ ಅದನ್ನು ಇದನ್ನು ಬರೆಯುತ್ತಲೇ, ಹಸ್ತಪ್ರತಿಗಳ ರಾಶಿಯಿಂದ ಒಂದನ್ನು ತೆಗೆದು, “ಇದನ್ನು ನೋಡು, ಇದನ್ನು ನೋಡಿದರೆ, ನಿನಗೆ ಬಳಸಿದ ಚಿಹ್ನೆಗಳು ಅರ್ಥವಾಗುತ್ತವೆ” ಎಂದರು.

ಇದನ್ನೂ ಓದಿ: “ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

ಆಗಿನಿಂದ, ಕಿನ್ನೋರ್ ಅವರ ಪ್ರೂಫ್‍ಗಳನ್ನು ಗಮನಿಸುತ್ತ ನಾನು ಕರಡು ತಿದ್ದುವುದನ್ನು ಕಲಿತುಕೊಂಡೆ. ಕಿನ್ನೋರ್ ಅವರಿಂದ ನನ್ನ ಬಗ್ಗೆ ಕೇಳಿ ತಿಳಿದಿದ್ದ ಪ್ರೊಲೊಯ್-ದಾ ಅವರು ಬೆಂಗಾಳ್ ಪಬ್ಲಿಷರ್‌ನ ಮಯುಖ್ ಬಸು ಅವರಿಗೆ ಒಂದು ಪತ್ರ ಬರೆದರು.

ನಾನು ಮಯುಖ್ ಬಸು ಅವರನ್ನು ಭೇಟಿಯಾಗಲು ಹೋದೆ. ಆ ದಿನ ಒಂದು ಪ್ರೂಫ್ ನನಗಾಗಿಯೇ ಕಾಯುತ್ತಿತ್ತು ಅನಿಸುತ್ತೆ. ಟೇಬಲ್ ಮೇಲೆ ನನ್ನ ಸಲುವಾಗಿಯೇ ಇಟ್ಟಂತಿದ್ದ ಒಂದು ಹಸ್ತಪ್ರತಿಯನ್ನು ತೆಗೆದುಕೊಂಡು, ಮಯುಖ್-ದಾ ಹೇಳಿದರು, “ಯಾರೋ ಒಬ್ಬರು ಬರಬೇಕಾಗಿತ್ತು, ಅವನಿನ್ನೂ ಬಂದಿಲ್ಲ. ನೀನು ಮಾಡುತ್ತೀಯಾ? ತುಂಬಾ ತುರ್ತು ಇದೆ. ಆದರೆ, ನಾಳೆಯೊಳಗಾಗಿ ನೀನು ಇದನ್ನು ತಿದ್ದಿ ಹಿಂದಿರುಗಿಸಬೇಕು.” ನಾನೂ ಆಗಲಿ ಎಂದು ತಲೆಯಾಡಿಸಿದೆ.

‘ಅಲ್ಲಾಹ್ರ್ ಜೊಮಿತೆ ಪಾ’ ಪುಸ್ತಕ (PC: Bookiecart)

ಇದು ನನಗೊಂದು ಮಹತ್ವದ ಅವಕಾಶವಾಗಿತ್ತು. ನನಗಿನ್ನೂ ನೆನಪಿದೆ, ತಿದ್ದುಪಡಿಗಾಗಿ ಬಂದ ಪುಸ್ತಕ ಮನೋಜ್ ಬಸು ಅವರ ‘ಬೋನ್ ಕೇಟೆ ಬೋಸೊಟ್’ (ಅರಣ್ಯದಿಂದ ಆವಾಸಕ್ಕೆ) ಎಂಬ ಕಾದಂಬರಿಯಾಗಿತ್ತು. ಕೈಯಿಂದಲೇ ಟೈಪ್‍ಸೆಟ್ ಮಾಡಿ, ನ್ಯೂಸ್‍ಪ್ರಿಂಟ್ ಮೇಲೆ ಅಚ್ಚುಮೊಳೆ(ಗ್ಯಾಲಿ-ಪ್ರೂಫ್) ಪ್ರಿಂಟ್ ಮಾಡಲಾಗಿತ್ತು. ಅಕ್ಷರಗಳು ಇನ್ನೂ ಒದ್ದೆಯಾಗಿಯೇ ಇದ್ದವು. ಒಂದಿಷ್ಟು ಹೊತ್ತಿನ ಮುಂಚೆಯೇ ಮುದ್ರಣಾಲಯದಿಂದ ತಂದಿಟ್ಟುಹೋಗಿದ್ದಾರ ಎನಿಸಿತು ನನಗೆ.

ಇದರೊಂದಿಗೆ ನನ್ನ ಹೊಸ ಜೀವನ ಶುರು ಆಯಿತು. ನಾನು ಪ್ರೂಫ್ ಅನ್ನು ಹಿಂದಿರುಗಿಸಿ, ಒಂದು ಪುಸ್ತಕದಲ್ಲಿ ನಮೂದಿಸಬೇಕಿತ್ತು. ವಾರದ ಕೊನೆಯಲ್ಲಿ ನನಗೆ ಸಿಗುತ್ತಿದ್ದ ದುಡ್ಡು; ‘ಚಿಕ್ಕ ಪಿಕಾ’. ಅಂದರೆ ಒಂದು ‘ಫಾರ್ಮಾ’ಗೆ ಒಂದೂವರೆ ರೂಪಾಯಿ. ಒಂದು ಪೂರ್ಣ ಪಿಕಾ ಆಗಿದ್ದರೆ, ಅದು ಐದು ಕಾಲು ನಾಣ್ಯಗಳಾಗಿರುತ್ತಿತ್ತು. ಫಾರ್ಮಾ ಎಂದರೆ, ಸಾಧಾರಣ ಆಕಾರದ ಹದಿನಾರು ಪುಟಗಳು. ಬೆಂಗಾಳ್ ಪಬ್ಲಿಷರ್ಸ್‍ನ ಹೆಸರು ಹೇಳಿಕೊಂಡು, ವಿಶ್ವವಾಣಿ ಮತ್ತು ಇತರ ಎರಡು ಪ್ರಕಾಶಕರಿಂದಲೂ ಕೆಲಸ ಗಿಟ್ಟಿಸಿಕೊಂಡೆ. ಆಗ ವಿಶ್ವವಾಣಿಯಲ್ಲಿ ಬ್ರೊಜೊ ಕಿಶೋರ್ ಮಂಡಲ್ ಇದ್ದರು. ಅವರಿಗೆ ಪೊದೆ ಮೀಸೆ ಇತ್ತು.

ನಾನು ಎಷ್ಟೇ ಕಷ್ಟಪಟ್ಟರೂ, ಒಂದು ವಾರದಲ್ಲಿ ಹತ್ತು ಫಾರ್ಮಾಗಳಿಗಿಂತ ಹೆಚ್ಚು ನೋಡಲಾಗುತ್ತಿದ್ದಿಲ್ಲ. ರೈಲಿನಲ್ಲಿ ಪಯಾಣಕ್ಕೆ ನಾಲ್ಕು ಗಂಟೆ ವ್ಯಯಿಸುತ್ತಿದ್ದೆ. ಕೆಲಸ ಮಾಡಲು ರಾತ್ರಿಯೂ ಕುಳಿತುಕೊಳ್ಳುತ್ತಿದ್ದೆ. ಈ ಕೆಲಸದಲ್ಲಿ ದುಡ್ಡು ಸಿಗುತ್ತಿತ್ತಾದುದರಿಂದ ಮುಂಚಿನಂತೆ ನಿಯಮಿತವಾಗಿ ಕಾಲೇಜಿಗೆ ಹೋಗಲು ಆಗುತ್ತಿರಲಿಲ್ಲ.

ಇದನ್ನೂ ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು: ಮೇಲ್ಚಲನೆಯೋ ಅಥವಾ ಮೂಲೆಗುಂಪೋ? – ಪುಸ್ತಕ ಸಂವಾದ

ನನಗೆ ಪದವೀಧರ ಆಗಬೇಕು ಎಂಬ ಮಹದಾಸೆಯಿತ್ತು. ಪುರಬಿ ಸಿನೆಮಾ ಎಂಬ ಹೆಸರಿನ ಥಿಯೇಟರ್ ಪಕ್ಕ ಹಾದುಹೋಗುತ್ತಿದ್ದಾಗ, ಹಶಿಮುಖ ಎಂಬ ಫೋಟೋ ಸ್ಟುಡಿಯೋ ಇತ್ತು. ಅಲ್ಲಿ ಅನೇಕರು ತೆಗೆಸಿಕೊಂಡ ‘ಗ್ರ್ಯಾಜುಯೇಷನ್’ನ ಛಾಯಾಚಿತ್ರಗಳನ್ನು ನೋಡಿದೆ. ವಿಶ್ವವಿದ್ಯಾಲಯದ ಮೊದಲ ಭಾಗದ ಪರೀಕ್ಷೆಗಳು ನನ್ನ ಮುಂದಿದ್ದವು. ಅಲ್ಲಿ ಪಾಸಾದರೆ, ಭಾಗ 2 ರ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು. ಕಾಲೇಜು ಬೀದಿಗೆ ಹೋಗಬೇಕಾದರೆ ಆ ಫೋಟೊ ಸ್ಟುಡಿಯೋ ಹಾದು ಹೋಗಲೇಬೇಕಿತ್ತು. ಅಲ್ಲಿ ಪ್ರತಿನಿತ್ಯ ಕಾಣಿಸುತ್ತಿದ್ದು; ತಲೆಯ ಮೇಲೊಂದು ಟೋಪಿ, ಮೈಮೇಲೊಂದು ಗೌನ್, ಕೈಯಲ್ಲಿ ನೀಟಾಗಿ ಸುತ್ತಿದ ಸರ್ಟಿಫಿಕೇಟು.., ರೆಡಿ, ಒನ್, ಟೂ.., ಕ್ಲಿಕ್..!

ಕರಡು ತಿದ್ದಲು ಕೆಲವು ಪುಟಗಳನ್ನು ತಿರುವಿಹಾಕುತ್ತಿದ್ದಂತೆ ನನ್ನ ಕಣ್ಣಗಳು ಉರಿಯತೊಡಗುತ್ತಿದ್ದವು. ಹಾಗೆ ಮುಂಚೆ ಆಗುತ್ತಿದ್ದಿಲ್ಲ. ಕಂದೀಲಿನ ಬೆಳಕಿನಲ್ಲಿ ಚಿಕ್ಕ ಅಕ್ಷರಗಳನ್ನು ಓದುವುದು ಸುಲಭವಾಗಿದ್ದಿಲ್ಲ. ಬೆಳಕಿನಿಂದ ಕತ್ತಲೆಯೆಡೆಗೆ ಕಣ್ಣು ಹಾಯಿಸಿದ ಕೂಡಲೇ, ತಲೆನೋವು ಶುರುವಾಗಿ, ಕಣ್ಣುಗಳು ಭಾರವೆನಿಸುತ್ತಿದ್ದವು. ನನಗೆಷ್ಟು ಸಾಧ್ಯವಾಗುತ್ತೋ ಅಷ್ಟು ಕೆಲಸ ಮಾಡುತ್ತಿದ್ದೆ. ಮುಖದ ಮೇಲೆ ನೀರು ಚಿಮುಕಿಸಿ ಮತ್ತೆ ಪ್ರಯತ್ನ ಶುರು ಮಾಡುತ್ತಿದ್ದೆ. ಪಟ್ಟ ಕಷ್ಟಕ್ಕೆ ಸಿಗುತ್ತಿದ್ದ ದುಡ್ಡು ಅತ್ಯಲ್ಪವಾಗಿತ್ತು. ಯಾರಿಗೂ ಹೇಳುವ ಸ್ಥಿತಿಯಲ್ಲೂ ಇರಲಿಲ್ಲ. ಏನು ಹೇಳಬೇಕೆಂಬುದೂ ನನಗೆ ತಿಳಿಯುತ್ತಿದ್ದಿಲ್ಲ. ನಾನು ಶಾಲೆಯಲ್ಲಿ ಮೂರನೇ ದರ್ಜೆಯಲ್ಲಿ ಪಾಸು ಮಾಡಿ ಆಗ ಬಿ.ಎ ಓದುತ್ತಿದ್ದೆ. ಆಮೇಲೆ ನನಗೆ ತಿಳಿದಿದ್ದೇನೆಂದರೆ, ನಾನು ಮಾಡುತ್ತಿದ್ದ ಕೆಲಸಕ್ಕೆ ಬೊಯಿಪಾರಾದಲ್ಲಿ ಅಷ್ಟು ಗೌರವ ಸಿಗುತ್ತಿದ್ದಿಲ್ಲ ಹಾಗೂ ಕೆಲಸದಲ್ಲಿ ದುಡ್ಡೂ ಇದ್ದಿಲ್ಲ ಎಂದು. ಆದರೆ, ಅದು ದೇವರ ವಿನೋದವಾಗಿತ್ತು, ಈ ಕೆಲಸವೇ ನನ್ನ ವಿಧಿಯಾಗಿತ್ತು.

ಇದು ‘ಅಲ್ಲಾಹ್ರ್ ಜೊಮಿತೆ ಪಾ’ (ಸೆಟಿಂಗ್ ಫುಟ್ ಆನ್ ಅಲ್ಲಾಹ್ಸ್ ಲ್ಯಾಂಡ್) ಎಂಬ ಪುಸ್ತಕದ ಆಯ್ದ ಭಾಗ. ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ. ಇದನ್ನು ಇಂಗ್ಲಿಷಿಗೆ ವಿ. ರಾಮಸ್ವಾಮಿ ಅವರು ಅನುವಾದಿಸಿದ್ದಾರೆ.


ಇದನ್ನೂ ಓದಿ: ಬಾಬರಿ ಮಸೀದಿ ಪ್ರಕರಣದಲ್ಲಿ ಗಲ್ಲಿಗೇರಿಸಲಿ, ಜಾಮೀನು ಪಡೆಯುವುದಿಲ್ಲ- ಉಮಾ ಭಾರತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....