Homeಮುಖಪುಟ'ಸಣ್ಣ ಪಿಕಾ-ಒಂದುವರೆ ರುಪಾಯಿ' - ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

‘ಸಣ್ಣ ಪಿಕಾ-ಒಂದುವರೆ ರುಪಾಯಿ’ – ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

ಇದು ‘ಅಲ್ಲಾಹ್ರ್ ಜೊಮಿತೆ ಪಾ’ (ಸೆಟಿಂಗ್ ಫುಟ್ ಆನ್ ಅಲ್ಲಾಹ್ಸ್ ಲ್ಯಾಂಡ್) ಎಂಬ ಪುಸ್ತಕದ ಆಯ್ದ ಭಾಗ. ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ. ಇದನ್ನು ಇಂಗ್ಲಿಷಿಗೆ ವಿ. ರಾಮಸ್ವಾಮಿ ಅವರು ಅನುವಾದಿಸಿದ್ದಾರೆ.

- Advertisement -
- Advertisement -

ಕಿನ್ನೋರ್ ರಾಯ್ ನನ್ನನ್ನು ಬೊಯ್‍ಪಾರಾಗೆ ಕರೆದುಕೊಂಡು ಹೋಗಿದ್ದರು. ಅವರ ಇನ್ನೊಂದು ಹೆಸರು ಝುಪು. ಬಾಸುಮತಿ ಪತ್ರಿಕೆಯ ಕಲ್ಯಾಣ್‍ದಾ ಅವರು ಅವರನ್ನು ಆ ಹೆಸರಿನಿಂದ ಕರೆಯುತ್ತಿದ್ದರು. ಅವರು ನನಗೂ ಒಂದು ಹೆಸರನ್ನು ಇಟ್ಟಿದ್ದರು; ನನ್ನ ಅನಾರೋಗ್ಯದ ಕಾರಣಕ್ಕಾಗಿ ಪೀಲಯ್ ಅಥವಾ ಸ್ಪ್ಲೀನ್(ಗುಲ್ಮ/ಪ್ಲೀಹ) ಎಂದು ಕರೆಯುತ್ತಿದ್ದರು.

70 ದಶಕದಲ್ಲಿ ನನ್ನ ಬೆಂಬಲಕ್ಕೆ ನಿಂತವರಲ್ಲಿ ಕೇವಲ ಕಿನ್ನೋರ್ ರಾಯ್ ಒಬ್ಬರೇ ಆಗಿರಲಿಲ್ಲ. ಕಲ್ಯಾಣ್ ದಾ, ಪ್ರೊಲೊಯ್ ದಾಸ್, ಸುಭಾಶ್ ಮೈತ್ರಾ ಕೂಡ ಇದ್ದರು. ಕಲ್ಯಾಣ್ ದಾ ಅಂದರೆ ಕಲ್ಯಾಣಕ್ಷಾ ಬಂಡೋಪಾಧ್ಯಾಯ ಅವರು ಟಾಗೋರ್ ಕುಟುಂಬಕ್ಕೆ ಸೇರಿದವರು. ಅವರು ಬಾಸುಮತಿ ಎಂಬ ನಿಯತಕಾಲಿಕೆಯ ಸಂಪಾದಕರಾಗಿದ್ದರು. ನನ್ನ ಕಥೆಗಳನ್ನು ಆ ಪತ್ರಿಕೆಯಲ್ಲಿ ಆಗಾಗ ಪ್ರಕಟಿಸಿ ನನ್ನ ಕುಟುಂಬದ ಬೆಂಗಾವಲಾಗಿ ನಿಂತಿದ್ದರು ಎಂದು ಹೇಳಬಹುದು. ಅದರ ಹೊರತಾಗಿ ನಾನು ಆ ನಿಯತಕಾಲಿಕೆಯ ‘ಇಲ್ಲಿ ಮತ್ತು ಅಲ್ಲಿ’ (ಹಿಯರ್ ಆ್ಯಂಡ್ ದೇರ್) ವಿಭಾಗಕ್ಕೂ ನಾನು ಬರೆಯುತ್ತಿದ್ದೆ. ಅದು ಇಪ್ಪತ್ತರಿಂದ ಇಪ್ಪತೈದು ಪದಗಳ ಒಂದು ಪುಟ್ಟ ಬರಹ, ಆ ಪ್ರತಿಯೊಂದು ಬರಹಕ್ಕೂ ವಾರಾಂತ್ಯದಲ್ಲಿ ನನಗೆ ಹತ್ತು ರೂಪಾಯಿಗಳು ಸಿಗುತ್ತಿದ್ದವು.

ಇದನ್ನೂ ಓದಿ: ಅಧೀರ್ ಬಿಸ್ವಾಸ್: ತಳಸ್ಥರೀಯ ನೆನಪಿನ ಪ್ರಜ್ಞೆ

ಕಿನ್ನೋರ್ ಅವರಿಗೂ ನನ್ನ ಮನೆಯ ಪರಿಸ್ಥಿತಿಯ ಬಗ್ಗೆ ಅರಿವಿತ್ತು. ಪೋತಿಕ್-ದಾ ಅಂದರೆ ಪೋತಿಕ್ ಗುಹಾ ಅವರಿಗೆ ಕೂಡ ತಿಳಿದಿತ್ತು. ಒಂದು ಸಲ ಪೋತಿಕ್ ದಾ ‘ನನ್ನ ಜೊತೆ ಬಾ’ ಕರೆದು, ಪ್ರೊನೊಬೇಶ್ ಚಕ್ರೊಬೊರ್ತಿ ಅವರಿಗೆ ನನ್ನನ್ನು ಪರಿಚಯಿಸಿದರು. ಪ್ರೊನೊಬೇಶ್ ಬಾಬು ಅವರು ಬಾಸುಮತಿ ಪತ್ರಿಕೆಯ ಹೊರಸಂಪಾದಕೀಯದ(op-ed) ಜವಾಬ್ದಾರಿ ವಹಿಸಿಕೊಂಡಿದ್ದರು. ಪೋತಿಕ್ ದಾ ಅವರು ನನ್ನ ಕಡೆ ಬೊಟ್ಟು ಮಾಡಿ, “ಈ ಹುಡುಗನಿಗೆ ಹಳ್ಳಿಯ ಜೀವನದ ಬಗ್ಗೆ ಚೆನ್ನಾಗಿ ಗೊತ್ತು, ಇವನಿಂದ ನೀವು ಬರೆಸಬಹುದು ಪ್ರೊನಬೇಶ್ ದಾ. ಇವನಿಗೆ ತುಂಬಾ ಅವಶ್ಯಕತೆಯಿದೆ” ಎಂದರು.

ಒಂದು ಸಲ, ನಾನು ‘ಇಲ್ಲಿ ಮತ್ತು ಅಲ್ಲಿ’ ಬರಹದ ಸಂಭಾವನೆಯನ್ನು ಪಡೆಯಲು ಹೋದಾಗ, ದಿಢೀರನೆ ಕಿನ್ನೋರ್ ನನ್ನ ಬಳಿ ಬಂದರು. ಮೂರು ಬರಹಗಳ, ಒಟ್ಟು ಮೂವತ್ತು ರೂಪಾಯಿಗಳನ್ನು ಪಡೆದನಂತರ ಅವರು ಹೇಳಿದರು, “ನಿನಗೆ ಕರಡು ತಿದ್ದುವುದು ಗೊತ್ತಾ ಅಧೀರ್?” ‘ಇಲ್ಲ’ ಎಂದು ನಾನು ಹೇಳಿದೆ. ಆಗ ಅವರು, “ನಾನು ನಿನಗೆ ಕಲಿಸುವೆ. ನೀನು ಕರಡು ತಿದ್ದುವುದಕ್ಕೆ ಪ್ರಾರಂಭಿಸಿದರೆ, ಅದು ನಿನ್ನ ಬರಹದ ಪ್ರಯೋಗಗಳಿಗೆ ಅಡ್ಡಿ ಮಾಡುವುದಿಲ್ಲ. ನೀನು ಈ ಕೆಲಸ ಮಾಡಬಹುದು. ಇದರಿಂದ ನಿನ್ನ ಕುಟುಂಬಕ್ಕೆ ಸಹಾಯವಾಗುವುದು” ಎಂದರು.

ಆಗ ಕಿನ್ನೋರ್ ನನಗೆ ಕರಡು ತಿದ್ದುವುದನ್ನು ಹೇಳಿಕೊಟ್ಟರು. ಅವರ ಹೆಗಲಿಗೆ ಜೋತಿರುವ ಚೀಲವು ಕರಡುತಿದ್ದಲು ಕಾದಿರುವ ಕಾಲೇಜ್ ಸ್ಟ್ರೀಟ್‍ನ ಅನೇಕ ಪ್ರಕಾಶಕರ ಅನೇಕ ಹಸ್ತಪ್ರತಿಗಳನ್ನು ಹೊಂದಿರುತ್ತಿತ್ತು. ಬಾಸುಮತಿ ಪತ್ರಿಕೆಗೆ ಅದನ್ನು ಇದನ್ನು ಬರೆಯುತ್ತಲೇ, ಹಸ್ತಪ್ರತಿಗಳ ರಾಶಿಯಿಂದ ಒಂದನ್ನು ತೆಗೆದು, “ಇದನ್ನು ನೋಡು, ಇದನ್ನು ನೋಡಿದರೆ, ನಿನಗೆ ಬಳಸಿದ ಚಿಹ್ನೆಗಳು ಅರ್ಥವಾಗುತ್ತವೆ” ಎಂದರು.

ಇದನ್ನೂ ಓದಿ: “ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

ಆಗಿನಿಂದ, ಕಿನ್ನೋರ್ ಅವರ ಪ್ರೂಫ್‍ಗಳನ್ನು ಗಮನಿಸುತ್ತ ನಾನು ಕರಡು ತಿದ್ದುವುದನ್ನು ಕಲಿತುಕೊಂಡೆ. ಕಿನ್ನೋರ್ ಅವರಿಂದ ನನ್ನ ಬಗ್ಗೆ ಕೇಳಿ ತಿಳಿದಿದ್ದ ಪ್ರೊಲೊಯ್-ದಾ ಅವರು ಬೆಂಗಾಳ್ ಪಬ್ಲಿಷರ್‌ನ ಮಯುಖ್ ಬಸು ಅವರಿಗೆ ಒಂದು ಪತ್ರ ಬರೆದರು.

ನಾನು ಮಯುಖ್ ಬಸು ಅವರನ್ನು ಭೇಟಿಯಾಗಲು ಹೋದೆ. ಆ ದಿನ ಒಂದು ಪ್ರೂಫ್ ನನಗಾಗಿಯೇ ಕಾಯುತ್ತಿತ್ತು ಅನಿಸುತ್ತೆ. ಟೇಬಲ್ ಮೇಲೆ ನನ್ನ ಸಲುವಾಗಿಯೇ ಇಟ್ಟಂತಿದ್ದ ಒಂದು ಹಸ್ತಪ್ರತಿಯನ್ನು ತೆಗೆದುಕೊಂಡು, ಮಯುಖ್-ದಾ ಹೇಳಿದರು, “ಯಾರೋ ಒಬ್ಬರು ಬರಬೇಕಾಗಿತ್ತು, ಅವನಿನ್ನೂ ಬಂದಿಲ್ಲ. ನೀನು ಮಾಡುತ್ತೀಯಾ? ತುಂಬಾ ತುರ್ತು ಇದೆ. ಆದರೆ, ನಾಳೆಯೊಳಗಾಗಿ ನೀನು ಇದನ್ನು ತಿದ್ದಿ ಹಿಂದಿರುಗಿಸಬೇಕು.” ನಾನೂ ಆಗಲಿ ಎಂದು ತಲೆಯಾಡಿಸಿದೆ.

‘ಅಲ್ಲಾಹ್ರ್ ಜೊಮಿತೆ ಪಾ’ ಪುಸ್ತಕ (PC: Bookiecart)

ಇದು ನನಗೊಂದು ಮಹತ್ವದ ಅವಕಾಶವಾಗಿತ್ತು. ನನಗಿನ್ನೂ ನೆನಪಿದೆ, ತಿದ್ದುಪಡಿಗಾಗಿ ಬಂದ ಪುಸ್ತಕ ಮನೋಜ್ ಬಸು ಅವರ ‘ಬೋನ್ ಕೇಟೆ ಬೋಸೊಟ್’ (ಅರಣ್ಯದಿಂದ ಆವಾಸಕ್ಕೆ) ಎಂಬ ಕಾದಂಬರಿಯಾಗಿತ್ತು. ಕೈಯಿಂದಲೇ ಟೈಪ್‍ಸೆಟ್ ಮಾಡಿ, ನ್ಯೂಸ್‍ಪ್ರಿಂಟ್ ಮೇಲೆ ಅಚ್ಚುಮೊಳೆ(ಗ್ಯಾಲಿ-ಪ್ರೂಫ್) ಪ್ರಿಂಟ್ ಮಾಡಲಾಗಿತ್ತು. ಅಕ್ಷರಗಳು ಇನ್ನೂ ಒದ್ದೆಯಾಗಿಯೇ ಇದ್ದವು. ಒಂದಿಷ್ಟು ಹೊತ್ತಿನ ಮುಂಚೆಯೇ ಮುದ್ರಣಾಲಯದಿಂದ ತಂದಿಟ್ಟುಹೋಗಿದ್ದಾರ ಎನಿಸಿತು ನನಗೆ.

ಇದರೊಂದಿಗೆ ನನ್ನ ಹೊಸ ಜೀವನ ಶುರು ಆಯಿತು. ನಾನು ಪ್ರೂಫ್ ಅನ್ನು ಹಿಂದಿರುಗಿಸಿ, ಒಂದು ಪುಸ್ತಕದಲ್ಲಿ ನಮೂದಿಸಬೇಕಿತ್ತು. ವಾರದ ಕೊನೆಯಲ್ಲಿ ನನಗೆ ಸಿಗುತ್ತಿದ್ದ ದುಡ್ಡು; ‘ಚಿಕ್ಕ ಪಿಕಾ’. ಅಂದರೆ ಒಂದು ‘ಫಾರ್ಮಾ’ಗೆ ಒಂದೂವರೆ ರೂಪಾಯಿ. ಒಂದು ಪೂರ್ಣ ಪಿಕಾ ಆಗಿದ್ದರೆ, ಅದು ಐದು ಕಾಲು ನಾಣ್ಯಗಳಾಗಿರುತ್ತಿತ್ತು. ಫಾರ್ಮಾ ಎಂದರೆ, ಸಾಧಾರಣ ಆಕಾರದ ಹದಿನಾರು ಪುಟಗಳು. ಬೆಂಗಾಳ್ ಪಬ್ಲಿಷರ್ಸ್‍ನ ಹೆಸರು ಹೇಳಿಕೊಂಡು, ವಿಶ್ವವಾಣಿ ಮತ್ತು ಇತರ ಎರಡು ಪ್ರಕಾಶಕರಿಂದಲೂ ಕೆಲಸ ಗಿಟ್ಟಿಸಿಕೊಂಡೆ. ಆಗ ವಿಶ್ವವಾಣಿಯಲ್ಲಿ ಬ್ರೊಜೊ ಕಿಶೋರ್ ಮಂಡಲ್ ಇದ್ದರು. ಅವರಿಗೆ ಪೊದೆ ಮೀಸೆ ಇತ್ತು.

ನಾನು ಎಷ್ಟೇ ಕಷ್ಟಪಟ್ಟರೂ, ಒಂದು ವಾರದಲ್ಲಿ ಹತ್ತು ಫಾರ್ಮಾಗಳಿಗಿಂತ ಹೆಚ್ಚು ನೋಡಲಾಗುತ್ತಿದ್ದಿಲ್ಲ. ರೈಲಿನಲ್ಲಿ ಪಯಾಣಕ್ಕೆ ನಾಲ್ಕು ಗಂಟೆ ವ್ಯಯಿಸುತ್ತಿದ್ದೆ. ಕೆಲಸ ಮಾಡಲು ರಾತ್ರಿಯೂ ಕುಳಿತುಕೊಳ್ಳುತ್ತಿದ್ದೆ. ಈ ಕೆಲಸದಲ್ಲಿ ದುಡ್ಡು ಸಿಗುತ್ತಿತ್ತಾದುದರಿಂದ ಮುಂಚಿನಂತೆ ನಿಯಮಿತವಾಗಿ ಕಾಲೇಜಿಗೆ ಹೋಗಲು ಆಗುತ್ತಿರಲಿಲ್ಲ.

ಇದನ್ನೂ ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು: ಮೇಲ್ಚಲನೆಯೋ ಅಥವಾ ಮೂಲೆಗುಂಪೋ? – ಪುಸ್ತಕ ಸಂವಾದ

ನನಗೆ ಪದವೀಧರ ಆಗಬೇಕು ಎಂಬ ಮಹದಾಸೆಯಿತ್ತು. ಪುರಬಿ ಸಿನೆಮಾ ಎಂಬ ಹೆಸರಿನ ಥಿಯೇಟರ್ ಪಕ್ಕ ಹಾದುಹೋಗುತ್ತಿದ್ದಾಗ, ಹಶಿಮುಖ ಎಂಬ ಫೋಟೋ ಸ್ಟುಡಿಯೋ ಇತ್ತು. ಅಲ್ಲಿ ಅನೇಕರು ತೆಗೆಸಿಕೊಂಡ ‘ಗ್ರ್ಯಾಜುಯೇಷನ್’ನ ಛಾಯಾಚಿತ್ರಗಳನ್ನು ನೋಡಿದೆ. ವಿಶ್ವವಿದ್ಯಾಲಯದ ಮೊದಲ ಭಾಗದ ಪರೀಕ್ಷೆಗಳು ನನ್ನ ಮುಂದಿದ್ದವು. ಅಲ್ಲಿ ಪಾಸಾದರೆ, ಭಾಗ 2 ರ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು. ಕಾಲೇಜು ಬೀದಿಗೆ ಹೋಗಬೇಕಾದರೆ ಆ ಫೋಟೊ ಸ್ಟುಡಿಯೋ ಹಾದು ಹೋಗಲೇಬೇಕಿತ್ತು. ಅಲ್ಲಿ ಪ್ರತಿನಿತ್ಯ ಕಾಣಿಸುತ್ತಿದ್ದು; ತಲೆಯ ಮೇಲೊಂದು ಟೋಪಿ, ಮೈಮೇಲೊಂದು ಗೌನ್, ಕೈಯಲ್ಲಿ ನೀಟಾಗಿ ಸುತ್ತಿದ ಸರ್ಟಿಫಿಕೇಟು.., ರೆಡಿ, ಒನ್, ಟೂ.., ಕ್ಲಿಕ್..!

ಕರಡು ತಿದ್ದಲು ಕೆಲವು ಪುಟಗಳನ್ನು ತಿರುವಿಹಾಕುತ್ತಿದ್ದಂತೆ ನನ್ನ ಕಣ್ಣಗಳು ಉರಿಯತೊಡಗುತ್ತಿದ್ದವು. ಹಾಗೆ ಮುಂಚೆ ಆಗುತ್ತಿದ್ದಿಲ್ಲ. ಕಂದೀಲಿನ ಬೆಳಕಿನಲ್ಲಿ ಚಿಕ್ಕ ಅಕ್ಷರಗಳನ್ನು ಓದುವುದು ಸುಲಭವಾಗಿದ್ದಿಲ್ಲ. ಬೆಳಕಿನಿಂದ ಕತ್ತಲೆಯೆಡೆಗೆ ಕಣ್ಣು ಹಾಯಿಸಿದ ಕೂಡಲೇ, ತಲೆನೋವು ಶುರುವಾಗಿ, ಕಣ್ಣುಗಳು ಭಾರವೆನಿಸುತ್ತಿದ್ದವು. ನನಗೆಷ್ಟು ಸಾಧ್ಯವಾಗುತ್ತೋ ಅಷ್ಟು ಕೆಲಸ ಮಾಡುತ್ತಿದ್ದೆ. ಮುಖದ ಮೇಲೆ ನೀರು ಚಿಮುಕಿಸಿ ಮತ್ತೆ ಪ್ರಯತ್ನ ಶುರು ಮಾಡುತ್ತಿದ್ದೆ. ಪಟ್ಟ ಕಷ್ಟಕ್ಕೆ ಸಿಗುತ್ತಿದ್ದ ದುಡ್ಡು ಅತ್ಯಲ್ಪವಾಗಿತ್ತು. ಯಾರಿಗೂ ಹೇಳುವ ಸ್ಥಿತಿಯಲ್ಲೂ ಇರಲಿಲ್ಲ. ಏನು ಹೇಳಬೇಕೆಂಬುದೂ ನನಗೆ ತಿಳಿಯುತ್ತಿದ್ದಿಲ್ಲ. ನಾನು ಶಾಲೆಯಲ್ಲಿ ಮೂರನೇ ದರ್ಜೆಯಲ್ಲಿ ಪಾಸು ಮಾಡಿ ಆಗ ಬಿ.ಎ ಓದುತ್ತಿದ್ದೆ. ಆಮೇಲೆ ನನಗೆ ತಿಳಿದಿದ್ದೇನೆಂದರೆ, ನಾನು ಮಾಡುತ್ತಿದ್ದ ಕೆಲಸಕ್ಕೆ ಬೊಯಿಪಾರಾದಲ್ಲಿ ಅಷ್ಟು ಗೌರವ ಸಿಗುತ್ತಿದ್ದಿಲ್ಲ ಹಾಗೂ ಕೆಲಸದಲ್ಲಿ ದುಡ್ಡೂ ಇದ್ದಿಲ್ಲ ಎಂದು. ಆದರೆ, ಅದು ದೇವರ ವಿನೋದವಾಗಿತ್ತು, ಈ ಕೆಲಸವೇ ನನ್ನ ವಿಧಿಯಾಗಿತ್ತು.

ಇದು ‘ಅಲ್ಲಾಹ್ರ್ ಜೊಮಿತೆ ಪಾ’ (ಸೆಟಿಂಗ್ ಫುಟ್ ಆನ್ ಅಲ್ಲಾಹ್ಸ್ ಲ್ಯಾಂಡ್) ಎಂಬ ಪುಸ್ತಕದ ಆಯ್ದ ಭಾಗ. ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ. ಇದನ್ನು ಇಂಗ್ಲಿಷಿಗೆ ವಿ. ರಾಮಸ್ವಾಮಿ ಅವರು ಅನುವಾದಿಸಿದ್ದಾರೆ.


ಇದನ್ನೂ ಓದಿ: ಬಾಬರಿ ಮಸೀದಿ ಪ್ರಕರಣದಲ್ಲಿ ಗಲ್ಲಿಗೇರಿಸಲಿ, ಜಾಮೀನು ಪಡೆಯುವುದಿಲ್ಲ- ಉಮಾ ಭಾರತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...