Homeನ್ಯಾಯ ಪಥಜಾಗೃತಿ ಮತ್ತು ಬದಲಾವಣೆಗಾಗಿ ಹಾಡುವುದನ್ನೆ ಅಸ್ತ್ರವಾಗಿಸಿಕೊಂಡ ಭೂಮ್ತಾಯಿ ಬಳಗ

ಜಾಗೃತಿ ಮತ್ತು ಬದಲಾವಣೆಗಾಗಿ ಹಾಡುವುದನ್ನೆ ಅಸ್ತ್ರವಾಗಿಸಿಕೊಂಡ ಭೂಮ್ತಾಯಿ ಬಳಗ

- Advertisement -
- Advertisement -

“ಪ್ರೀತಿಯ ಗಾಳಿ ಬೀಸುತಿದೆ!
ಅಟ್ಟಿಮೊಹಲ್ಲಗಳಾ ನಡುವೆ!
ಗಡಿಗಳ ಮೀರಿ ಗೆಳೆತನವಾ ಮಾಡೋಣ ಬಾ
ನನ್ನ ಸಂಗಾತಿಯೇ….”

ಪರಿಸರ, ಮಕ್ಕಳ-ಮಾನವ ಹಕ್ಕುಗಳು, ಸೌಹಾರ್ದತೆಯ ಸಂರಕ್ಷಣೆ ಹಾಗೂ ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಡಲು ಹಲವು ಮಂದಿ ಸಂಘಸಂಸ್ಥೆಗಳನ್ನು ಕಟ್ಟಿಕೊಂಡು ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ. ಎಷ್ಟೋ ಬಾರಿ ಸರ್ಕಾರಗಳಿಗೆ ಸಾಧ್ಯವಾಗದ ಜನಪರ ಕೆಲಸಗಳನ್ನು ಈ ಸಂಸ್ಥೆಗಳು ಮಾಡಿಕೊಂಡು ಬರುತ್ತಿವೆ. ಒಂದೊಂದು ಗುಂಪುಗಳ ಆಲೋಚನೆ, ರೀತಿನೀತಿಗಳು ಬೇರೆ ಆದರೆ, ಗುರಿ ಮಾತ್ರ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸರ್ಕಾರಗಳ ಆಚೆಗೆ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವುದು. ಇಂತಹದ್ದೆ ಕೆಲಸಕ್ಕೆ ಕೈಹಾಕಿ ಹಾಡುಗಳ ಮೂಲಕ ವಿಭಿನ್ನವಾಗಿ ಜನಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಭೂಮ್ತಾಯಿ ಬಳಗ.

ಜನರ ಬಳಿಗೆ ತಲುಪಿ, ಅವರೊಂದಿಗೆ ಬೆರೆತು, ಜನಪರ ಮತ್ತು ಜನಪದ ಹಾಡುಗಳನ್ನು ಹಾಡುತ್ತಾ ತಿಳಿವು ಮೂಡಿಸಲು ಶ್ರಮಿಸುತ್ತಿರುವ ತಂಡ ’ಭೂಮ್ತಾಯಿ ಬಳಗ’. ಮನರಂಜನೆಗಾಗಿ ಹಾಡುವ ವೃತ್ತಿಪರ ಕಲಾತಂಡಗಳ ಮಧ್ಯೆ ಈ ತಂಡ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಹಾಡುಗಳನ್ನೆ ಅಸ್ತ್ರವಾಗಿಸಿಕೊಂಡು ಜಾಗೃತಿ ಮೂಡಿಸುವ, ಬದಲಾವಣೆಗಾಗಿ ಪ್ರಯತ್ನಿಸುವುದು ಈ ತಂಡದ ಮುಖ್ಯ ಕೆಲಸ. ಇನ್ನೊಂದು ವಿಷಯವೆಂದರೆ ಇಲ್ಲಿನ ಹಲವು ಹಾಡುಗಾರರು ಶಾಸ್ತ್ರೀಯವಾಗಿ ಅಥವಾ ಪಾರಂಪರಿಕವಾಗಿ ಸಂಗೀತ ಕಲಿತವರಲ್ಲ.

ಪರಿಸರಿ ಸಂರಕ್ಷಣೆ, ನೆಲ-ಜಲ, ಮಕ್ಕಳ ಹಕ್ಕುಗಳು, ಮಹಿಳಾ ಸಮಾನತೆ, ದಲಿತರ ಹಕ್ಕುಗಳು, ಜಾಗತಿಕ ವಿಷಯಗಳು, ಮಾನವ ಹಕ್ಕುಗಳ ಸಂರಕ್ಷಣೆ ಮುಂತಾದ ವಿಷಯಗಳನ್ನು ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಭೂಮ್ತಾಯಿ ಬಳಗ ಶ್ರಮಿಸುತ್ತಿದೆ.

ಗಂಗಮ್ಮನ ಹೊಕ್ಕಲು ಕಲಾ ತಂಡಕ್ಕೆ 2007ರಲ್ಲಿ ಭೂಮ್ತಾಯಿ ಬಳಗ ಎಂದು ಹೆಸರಿಡಲಾಗಿದೆ. ಈ ಬಳಗದ ಸಂಸ್ಥಾಪಕರಾದ ಜನಾರ್ದನ ಕೆಸರಗದ್ದೆ ಈ ಹೆಸರು ಇಟ್ಟಿದ್ದರು. ಸದ್ಯ ಈ ತಂಡವನ್ನು ಮುನ್ನಡೆಸುತ್ತಿರುವುದು 2017ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆಯಾಗಿದ್ದ, ಈ ತಂಡದ ಗಾಯಕಿ ನಿರ್ಮಲಾ ಡಿ.ಆರ್.

“ಭಾಷಣಗಳಲ್ಲಿ ವಿಷಯಗಳನ್ನು ಹೇಳಿ ಅರ್ಥ ಮಾಡಿಸುವುದಕ್ಕಿಂತ ಕಲೆಗಳ ಮೂಲಕ ಅದರಲ್ಲೂ ಹಾಡುಗಳ ಮೂಲಕ ಮತ್ತು ಸಂಗೀತದ ಮೂಲಕ ತಿಳಿಸಿದರೆ, ಜನರಿಗೆ ಹೆಚ್ಚು ಆಪ್ತವಾಗುತ್ತದೆ” ಎಂದು ಹೇಳುತ್ತಾರೆ ಗಾಯಕಿ ನಿರ್ಮಲಾ. “ಮೊದಲು ಹಾಡುಗಳ ಜೊತೆಗೆ ಬೀದಿನಾಟಕಗಳನ್ನು ಮಾಡುತ್ತಿದ್ದೆವು. ಈಗ ಕಲಾವಿದರ ಕೊರತೆಯಿದೆ. ಸದ್ಯ ತಂಡದಲ್ಲಿ 10 ಜನರಿದ್ದೇವೆ. ತಂಡದಲ್ಲಿದ್ದ ಹಳಬರು ಕೂಡ ಕಾರ್ಯಕ್ರಮಗಳಿಗೆ ಬರುತ್ತಾರೆ. ಮೊದಲಿಗೆ ವಾಲಂಟಿಯರ್ ಆಗಿದ್ದವರೆಲ್ಲಾ ಹತ್ತಿರದ ಕಾರ್ಯಕ್ರಮಗಳಿಗೆ ಬರುತ್ತಾರೆ. ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಬೇಕು ಎಂಬ ಆಶಯಕ್ಕೆ ಸದ್ಯ ಕೊರೊನಾ ಬ್ರೇಕ್ ಹಾಕಿದೆ” ಎನ್ನುತ್ತಾರೆ.

ನಮಗೆ ನಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿರುವ, ಜನಪದವನ್ನು, ಜನಪದ ಶೈಲಿಯನ್ನು ಇಟ್ಟುಕೊಂಡು ಹಾಡುಗಳನ್ನು ಕಟ್ಟುವುದು, ಅವುಗಳಿಗೆ ಸಂಗೀತ ಸಂಯೋಜಿಸುವುದು, ಜಾನಪದವನ್ನು ಉಳಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎನ್ನುತ್ತದೆ ಈ ಭೂಮ್ತಾಯಿ ಬಳಗ.

ಬೆಂಗಳೂರಿನಲ್ಲಿ ’ಹಾಡು ಬೆಂಗಳೂರು’ ಎನ್ನುವ ಕಾರ್ಯಕ್ರಮವನ್ನು ಎರಡು ಬಾರಿ ನಡೆಸಿ, ಮೂರು ತಿಂಗಳಲ್ಲಿ ಕರ್ನಾಟಕ ಹಲವು ಕಡೆ 100ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿರುವ ಕೀರ್ತಿ ಈ ತಂಡಕ್ಕೆ ಇದೆ.

“ಈ ’ಹಾಡು ಬೆಂಗಳೂರು’ ನಮಗೆ ಹೊಸ ಅನುಭವವಾಗಿತ್ತು. ಕಾಲೇಜುಗಳಲ್ಲಿ ಮತ್ತಿತರ ಕಡೆ ಸಾರ್ವಜನಿಕವಾಗಿ ತುಂಬಾ ಕಾರ್ಯಕ್ರಮ ಮಾಡಿದ್ದೆವು. ನೆಲ-ಜಲ, ಸಮಾನತೆ, ಮಹಿಳಾ ಪರ ವಿಚಾರಗಳು, ಪರಿಸರ, ಸಮಾನತೆ ಬಗ್ಗೆ ಹಾಡುಗಳನ್ನು ಹಾಡಿದ್ದೇವೆ. ಇವುಗಳಿಂದಾಗಿಯೇ ಹಾಡು ಕರ್ನಾಟಕ ಎಂಬ ಕಾರ್ಯಕ್ರಮ ಆರಂಭವಾಯಿತು. ಇಡೀ ಕರ್ನಾಟಕದಲ್ಲಿ ಹಾಡಿನ ಮೂಲಕ ಬದಲಾವಣೆಗೆ ಕರೆ ಕೊಡುವ ಆಶಯ ನಮ್ಮದಾಗಿತ್ತು. ಆದರೆ, ಹಾಸನ, ಚಿಕ್ಕಬಳ್ಳಾಪುರದಲ್ಲಿ ನಾಲ್ಕಾರು ಕಾರ್ಯಕ್ರಮ ನಡೆಸುವಷ್ಟರಲ್ಲಿ ಕೊರೊನಾ ಸಾಂಕ್ರಾಮಿಕ ಇದಕ್ಕೆ ತಡೆ ಹಾಕಿತು. ಇಡೀ ಕರ್ನಾಟಕ ಸುತ್ತುವ ನಮ್ಮ ಯೋಚನೆ ಸದ್ಯಕ್ಕೆ ಅಲ್ಲಿಗೆ ನಿಂತಿದೆ. ಆದರೆ ಹಾಡು ಕರ್ನಾಟಕ ಎಂಬುದು ನಾಲ್ಕಾರು ವರ್ಷಗಳ ಕನಸು. ಅದು ಈಗ ಸದ್ಯಕ್ಕೆ 2-3 ಜಿಲ್ಲೆಗಳಿಗೆ ನಿಂತು ಹೋಗಿದ್ದು ಬೇಸರ ಇದೆ. ಮುಂದಿನ ದಿನಗಳಲ್ಲಿ ಪುನರಾರಂಭಿಸುತ್ತೇವೆ” ಎನ್ನುತ್ತಾರೆ ನಿರ್ಮಲಾ.

“ಬಳಗದ ಸಂಸ್ಥಾಪಕರಾದ ಜನಾರ್ದನ ಕೆಸರುಗದ್ದೆ, ಗೊಲ್ಲಹಳ್ಳಿ ಶಿವಪ್ರಸಾದ, ಕೊಟಗಾನಹಳ್ಳಿ ರಾಮಯ್ಯ, ಗ್ಯಾರಂಟಿ ರಾಮಣ್ಣ ಅವರ ಜನಪರ ಮತ್ತು ಹೋರಾಟದ ಹಾಡುಗಳನ್ನು ಹೆಚ್ಚಾಗಿ ಹಾಡುತ್ತೇವೆ. ನಮ್ಮ ತಂಡದ ಗಾಯಕ ಅರುಣ್ ಕುಮಾರ್ ಕೂಡ ಹೋರಾಟದ, ರೈತಪರ ಹಾಡುಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಹೊಸ ಬಗೆಯ ಹಾಡುಗಳನ್ನು ರಚನೆ ಮಾಡಿ ಸಂಯೋಜಿಸಿ ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಮ್ಮ ಆಶಯಗಳನ್ನು” ನಿರ್ಮಲಾ ನ್ಯಾಯಪಥದ ಮುಂದಿಡುತ್ತಾರೆ.

“ಜನಪದವನ್ನು ಬೆಳೆಸಿ ಜನಪ್ರಿಯಗೊಳಿಸುವುದು ಕೂಡ ನಮ್ಮ ಕರ್ತವ್ಯ. ನಮ್ಮ ಹಾಡುಗಳು ಮತ್ತಷ್ಟು ಜನರಿಗೆ ತಲುಪಲಿ ಎನ್ನುವ ಉದ್ದೇಶದಿಂದಲೇ ನಾನು ಖಾಸಗಿ ಚಾನೆಲ್ ಒಂದರ ಸಂಗೀತ ಕಾರ್ಯಕ್ರಮದ ಸ್ಪರ್ಧಿಯಾಗಿದ್ದೆ. ನಮ್ಮ ಜನಪರ ಹಾಡುಗಳನ್ನು ಹಾಡಿಸುವುದಾಗಿಯೂ ಅವರು ಹೇಳಿದ್ದರು. ಆದರೆ, ಅದು ಸ್ಪರ್ಧೆ ಆಗಿದ್ದರಿಂದ ಹೆಚ್ಚಾಗಿ ಸಿನಿಮಾ ಹಾಡುಗಳಿಗೆ ಪ್ರಾಮುಖ್ಯತೆ ಇತ್ತು. ಚಾನೆಲ್‌ಗಳ ಪ್ರಾಮುಖ್ಯತೆ, ಅವುಗಳ ಮಾನದಂಡ ಬೇರೆಯೇ ಇರುವುದರಿಂದ ಅಲ್ಲಿ ನಮ್ಮ ಹಾಡುಗಳಿಗೆ ಅಷ್ಟೊಂದು ಸ್ಥಳ ಸಿಕ್ಕಲಿಲ್ಲ. ಆದರೂ,
ಕೆಲವು ಜನಪದ ಹಾಡುಗಳಿಗೆ ದನಿಯಾದೆ” ಎಂದು ನಿರ್ಮಲಾ ಹೇಳುತ್ತಾರೆ.

ತಂಡವನ್ನು ಮುನ್ನಡೆಸಲು ಆರ್ಥಿಕ ಸಹಾಯ ಬೇಕಲ್ಲವೇ ಹಾಗೂ ತಂಡದ ಸದಸ್ಯರ ಆರ್ಥಿಕ ಸ್ಥಿತಿಗತಿ ಕೂಡ ಮುಖ್ಯ ಅಲ್ಲವೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ನಿರ್ಮಲಾ, “ದಲಿತಪರ, ಮಹಿಳಾ ಪರ, ರೈತಪರ ಸಂಘಟನೆಗಳ ಕಾರ್ಯಕ್ರಮಗಳಿಗೆ ಕಡಿಮೆ ಗೌರವಧನ ಪಡೆಯುತ್ತೇವೆ. ಮೊದಲು ಅತಿ ಕಡಿಮೆ ಹಣ ಪಡೆಯುತ್ತಿದ್ದೇವು. ಆರ್ಥಿಕವಾಗಿ ಬಳಗದ ಮೇಲೆ ಅವಲಂಬಿಸಿರುವವರಿಗೆ ಸ್ಪಲ್ಪವಾದರೂ ಸಹಾಯ ಮಾಡಬೇಕು. ನಮ್ಮ ಓಡಾಟದ ಖರ್ಚು ಎಲ್ಲವನ್ನೂ ನೋಡಿಕೊಂಡು ಗೌರವಧನ ಫಿಕ್ಸ್ ಮಾಡುತ್ತೆವೆ. ಕೆಲವೊಮ್ಮೆ ಹಲವು ಸಂಘಟನೆಗಳ ಬಳಿ ಹಣವನ್ನೇ ತೆಗೆದುಕೊಂಡಿಲ್ಲ. ಹೋರಾಟಗಳಲ್ಲಿ ಹಾಗೆಯೇ ಹಾಡುತ್ತೇವೆ. ಕೇವಲ ಓಡಾಟದ ಖರ್ಚು ಪಡೆಯುತ್ತೇವೆ” ಎನ್ನುತ್ತಾರೆ.

“ತಂಡದ ಎಲ್ಲರಿಗೂ ಇದು ತಮ್ಮ ತಂಡ ಎಂಬ ಭಾವನೆ ಇದೆ. ಹೀಗಾಗಿ ತಂಡ ಇಷ್ಟು ವರ್ಷದಿಂದ ಉಳಿದುಕೊಂಡಿದೆ. ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡುತ್ತಾರೆ. ತಂಡದಲ್ಲಿ ಬರೀ ಹಣವೇ ಮುಖ್ಯ
ಅಂದುಕೊಂಡವರು ಯಾರೂ ಇಲ್ಲ. ತಂಡ ಬೆಳೆಯಬೇಕು, ಇನ್ನೂ ಹೆಚ್ಚೆಚ್ಚು ಹಾಡಬೇಕು ಎನ್ನುವವರೆ ಎಲ್ಲರೂ. ಮೊದಲು ಹಲವು ಹೆಣ್ಣು ಮಕ್ಕಳು ತಂಡದಲ್ಲಿದ್ದರು. ಆದರೆ ಅವರಲ್ಲಿ ಕೆಲವರು ಈಗ ಗೃಹಿಣಿಯರು, ಮತ್ತೆ ಕೆಲವರು ವೈಯಕ್ತಿಕ ಕಾರಣದಿಂದ ತಂಡದಲ್ಲಿ ಮುಂದುವರೆಯಲಿಲ್ಲ. ನನ್ನ ಪತಿ ರವಿಶಾಸ್ತ್ರಿ ನನ್ನನ್ನು ಅರ್ಥ ಮಾಡಿಕೊಂಡು ಜೊತೆಗೆ ಇರುತ್ತಾರೆ. ಅವರ ಬೆಂಬಲ ಹೆಚ್ಚಾಗಿರುವುದರಿಂದ ನಾನು ಈ ತಂಡವನ್ನು ಮುನ್ನಡೆಸಲು ಸಾಧ್ಯವಾಗುತ್ತಿದೆ” ಎನ್ನುತ್ತಾರೆ ನಿರ್ಮಲಾ.

“ನಮ್ಮ ತಂಡವನ್ನು ಜನ ಗುರುತಿಸುವ ರೀತಿಗೆ ಖುಷಿಯಾಗುತ್ತದೆ. ಮೊದಲಿಗಿಂತಲೂ ಈಗ ತಂಡಕ್ಕೆ ಬೇಡಿಕೆ ಹೆಚ್ಚಾಗಿದೆ. ನಿಮ್ಮ ತಂಡದ ಹಾಡುಗಳೇ ಬೇಕು ಎಂದು ಹಠ ಹಿಡಿದು ಕರೆಯುತ್ತಾರೆ. ಕೊರೊನಾ ಸೋಂಕು ಕಡಿಮೆಯಾದ ಬಳಿಕ ಹಲವು ಕಾರ್ಯಕ್ರಮಗಳ ಆಹ್ವಾನ ಬಂದಿದೆ. ಪ್ರತಿ ವರ್ಷವೂ ಒಂದೊಂದು ಶೀರ್ಷಿಕೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹಾಡು ಬೆಂಗಳೂರು, ಹಾಡು ಕರ್ನಾಟಕ ಕೂಡ ಇವುಗಳ ಒಂದು ಭಾಗ” ಎನ್ನುತ್ತಾರೆ.

ತಂಡದಲ್ಲಿ ಸದ್ಯಕ್ಕೆ ಮುಖ್ಯ ಗಾಯಕರಾಗಿ ಅರುಣ್ ಕುಮಾರ್, ಬಾಲು ಜಂಬೆ (ಜಂಬೆ ವಾದ್ಯ, ಅಂತಾರಾಷ್ಟ್ರೀಯ ಕಲಾವಿದ), ವಿವೇಕ್ ಮೌರ್ಯ (ಕೀಬೋರ್ಡ್), ಹೊಂಬೇಗೌಡ, ರವಿಶಾಸ್ತ್ರಿ, ನಾಗೇಶ್ (ರಿದಮ್ ಪ್ಯಾಡ್) ಇದ್ದಾರೆ. ಉಳಿದವರು ಕಾರ್ಯಕ್ರಮಗಳಿಗೆ ಸಾಥ್ ನೀಡುತ್ತಾರೆ.

ಬಿಎಸ್‌ಸಿ ಪದವಿ ಮುಗಿಸಿ, ಕಳೆದ 6 ವರ್ಷಗಳಿಂದ ತಂಡದ ಜೊತೆಗೆ ಗುರುತಿಸಿಕೊಂಡಿರುವ ದೇವನಹಳ್ಳಿಯ ಕಲಾವಿದ ಅರುಣ್ ಕುಮಾರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ.

“ಭೂಮ್ತಾಯಿ ಬಳಗ ತುಂಬಾ ಹಣಕಾಸು ಇರುವ ತಂಡವೇನಲ್ಲ. ಆದರೂ ಇಂದು ನಮ್ಮ ಮನೆಯಲ್ಲಿ ಮೂರು ಹೊತ್ತು ಊಟ ಸಿಗುತ್ತಿರುವುದು ಇದೇ ತಂಡದಿಂದ. ಬಡ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾರೆ. ತಂಡದವರಿಗೆ ಸಮಾನ ಮನಸ್ಥಿತಿ ಇದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಸಾಗುವ ಇವರ ಗುಣ ನನ್ನನ್ನು 6 ವರ್ಷಗಳಿಂದ ಇವರ ಜೊತೆಗೆ ಇರಿಸಿದೆ. ಬಡ ಕಲಾವಿದರಿಗೆ ಈ ತಂಡ ನೀಡುವ ಪ್ರೋತ್ಸಾಹ ಅನುಕರಣೀಯ” ಎನ್ನುತ್ತಾರೆ.

“ಬಳಗ ಹಲವು ಜನರಿಗೆ ಜೀವನ ನೀಡಿದೆ. ಮುಖ್ಯ ವೇದಿಕೆಗೆ ಬಡ ಕಲಾವಿದರು ಬರಲು ಹಲವು ವರ್ಷಗಳು ಬೇಕು. ಆದರೆ ಇಲ್ಲಿ ತಾವೇ ಹಾಡುಗಳನ್ನು ಕಲಿಸಿ, ಹಾಡಲು ಅವಕಾಶ ನೀಡಿದ್ದಾರೆ. 10 ವರ್ಷದ ಸಮಯದಲ್ಲಿ ಕಲಿಯುವಂತಾದನ್ನು ನನಗೆ ಇಲ್ಲಿ ಒಂದು ವರ್ಷಕ್ಕೆ ಕಲಿಸಿದ್ದಾರೆ. ಹಳಬರ ಜೊತೆಗೆ ಹೊಸಬರನ್ನು ಬೆಳೆಸುವ ತಂಡದ ಗುಣ ನನಗೆ ತುಂಬಾ ಇಷ್ಟ. ನಾನು ಕೂಡ ಈಗ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮತ್ತಷ್ಟು ಉತ್ತಮ ಹಾಡುಗಳನ್ನು ಸಂಯೋಜಿಸಬೇಕು” ಎನ್ನುತ್ತಾರೆ ಅರುಣ್ ಕುಮಾರ್. ಪ್ರತಿಭಟನೆಗಳು, ಜನಪರ ಚಳವಳಿಗಳ ಜೊತೆಗೆ ಹಾಡುಗಳ ಮೂಲಕವೂ ಜನರಲ್ಲಿ ಅರಿವು ಮೂಡಿಸಲು ಸಾಧ್ಯ. ಹಾಡುಗಳು ಕೇವಲ ಮನರಂಜನೆಗೆ ಮಾತ್ರವಲ್ಲ, ಜಾಗೃತಿಯಾಗಲೂ ಸಾಧ್ಯ. ಹಾಡುಗಳನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಮತ್ತಷ್ಟು ಬದಲಾವಣೆಗೆ ದುಡಿಯುತ್ತಿರುವ ಈ ತಂಡ ಭೂಮಿ ತಾಯಿಯ ಬಳಗವೇ ಸರಿ.

ಬಳಗ ಹಾಡುವ ಹಾಡೊಂದರ ಈ ಸಾಲುಗಳು “ಮಸಣದಲ್ಲಿ ಗಿಡವ ನೆಡು, ಬೆಳೆದು ಹಣ್ಣು ನೀಡುವುದು! ಎಲ್ಲ ಮಣ್ಣಿನಲ್ಲಿ ಹೊನ್ನು ಇದೇ..” ಇಂದಿನ ದಿನಕ್ಕೆ ಎಷ್ಟು ಸೂಕ್ತ ಅಲ್ಲವೇ!

  • ಮಮತ ಎಂ

ಇದನ್ನೂ ಓದಿ: 14 ವರ್ಷ ವನವಾಸದಿಂದ ಮರಳಿ ಬಂದಳೇ ಸೀತೆ?: ಕರೀನಾ, ಆಯಿಷಾ, ಭವ್ಯ ವಿರುದ್ಧ ನಿಂತ ಶಕ್ತಿಗಳು ಯಾವುವು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...