ಯಾದ್ರಾದ್ರಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಜೊತೆ ಭೇಟಿ ನೀಡಿದ್ದ ವೇಳೆ ತೆಲಂಗಾಣದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರನ್ನು ನೆಲದ ಮೇಲೆ ಕೂರಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಯಾದ್ರಾದ್ರಿ ಗುಟ್ಟದ ಶ್ರೀ ಲಕ್ಷೀ ನರಸಿಂಹ ಸ್ವಾಮಿ ದೇವಸ್ಥಾನದ ಬ್ರಹ್ಮತ್ಸೋವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ತೆರಳಿದ್ದರು. ರೇವಂತ್ ರೆಡ್ಡಿ ಸಿಎಂ ಆದ ಬಳಿಕ ಮೊದಲ ಬಾರಿಗೆ ಯಾದಾದ್ರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು.
ದೇವಸ್ಥಾನದಲ್ಲಿ ವಿಶೇಷ ಪೂಜೆ ವೇಳೆ ಮುಖ್ಯಮಂತ್ರಿ, ಅವರ ಪತ್ನಿ ಮತ್ತು ಇನ್ನಿಬ್ಬರು ಸಚಿವರು ಖುರ್ಚಿಯಲ್ಲಿ ಕುಳಿತಿದ್ದರು. ಆದರೆ, ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಅವರನ್ನು ನೆಲದ ಮೇಲೆ ಕೂರಿಸಲಾಗಿದೆ. ಈ ಕುರಿತ ಫೋಟೋ, ವಿಡಿಯೋಗಳು ವೈರಲ್ ಆಗಿದ್ದು, “ಭಟ್ಟಿ ವಿಕ್ರಮಾರ್ಕ ಅವರು ದಲಿತರಾದ ಕಾರಣ ಕೆಳಗೆ ಕೂರಿಸಿ ಅವಮಾನಿಸಲಾಗಿದೆ” ಎಂಬ ಆರೋಪ ಕೇಳಿ ಬಂದಿದೆ.
Sorry for coming back on this painful photograph again. This is not going to be erased from Indian memory that easily. @RahulGandhi ji – is this what your #BharatJodoYatra for???
The person who is sitting on the extreme left on a tiny bench is none other than hon’ble Dy CM of… pic.twitter.com/bDcCTLQgEP
— Dr.RS Praveen Kumar (@RSPraveenSwaero) March 11, 2024
ಶಿಷ್ಟಾಚಾರ ಉಲ್ಲಂಘನೆಯನ್ನು ಉಲ್ಲೇಖಿಸಿರುವ ಪ್ರತಿಪಕ್ಷ ಬಿಆರ್ಎಸ್, ಕಾಂಗ್ರೆಸ್ ಭಟ್ಟಿ ವಿಕ್ರಮಾರ್ಕ ಅವರನ್ನು ಕ್ರೂರವಾಗಿ ಅವಮಾನಿಸಿದೆ ಎಂದು ಆರೋಪಿಸಿದೆ.
ನಲ್ಗೊಂಡದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬಿಆರ್ಎಸ್ ಎಂಎಲ್ಸಿ ಕವಿತಾ, ಭಟ್ಟಿ ವಿಕ್ರಮಾರ್ಕ ಮತ್ತು ಕೊಂಡ ಸುರೇಖಾ ಇಬ್ಬರನ್ನೂ ದೇವಸ್ಥಾನದ ಗರ್ಭಗುಡಿಯಲ್ಲಿ ನೆಲದ ಮೇಲೆ ಕೂರಿಸುವ ಮೂಲಕ ಜಾತಿ ತಾರತಮ್ಯ ಎಸಗಲಾಗಿದೆ. ಈ ಪ್ರಮಾದಕ್ಕಾಗಿ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಬಾಲ್ಕ ಸುಮನ್ ಮತ್ತು ಇತರ ಬಿಆರ್ಎಸ್ ಮುಖಂಡರು ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಮಾತನಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಬಿಎಸ್ಪಿ ತೆಲಂಗಾಣದ ಅಧ್ಯಕ್ಷ ಆರ್ಎಸ್ ಪ್ರವೀಣ್ಕುಮಾರ್ ಅವರು, “ಲಕ್ಷ್ಮೀ ನರಸಿಂಹ ಸ್ವಾಮಿಯ ಸಮ್ಮುಖದಲ್ಲಿ ಭಟ್ಟಿ ವಿಕ್ರಮಾರ್ಕ ಅವರಿಗೆ ಅವಮಾನ ಮಾಡಲಾಗಿದೆ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ. ಇಡೀ ದಲಿತ ಸಮುದಾಯಕ್ಕೆ ನೋವುಂಟು ಮಾಡಿರುವ ಕಾಂಗ್ರೆಸ್ನ ಅಸಲಿ ಮುಖ ಬಯಲಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ದಲಿತ ಸಮುದಾಯದ ಕ್ಷಮೆಯಾಚಿಸಬೇಕು ಮತ್ತು ಆಸನ ವ್ಯವಸ್ಥೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಕೇವಲ ಮತಕ್ಕಾಗಿ ದಲಿತ ಸಮುದಾಯದ ಮೇಲೆ ಪ್ರೀತಿಯ ಸುರಿಮಳೆ ಸುರಿಸುತ್ತದೆ. ಆದರೆ, ಅದನ್ನು ಆಚರಣೆಯಲ್ಲಿ ಜಾರಿಗೆ ತರುವಲ್ಲಿ ವಿಫಲವಾಗಿದೆ” ಕಿಡಿಕಾರಿದ್ದಾರೆ.
ಕರ್ನಾಟಕ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ” ಇದು ನಿಜವಾಗಿದ್ದರೆ ಸ್ವೀಕಾರಾರ್ಹವಲ್ಲ. ಒಬ್ಬರು ಸಾಂವಿಧಾನಿಕ ಹುದ್ದೆಯಲ್ಲಿರುವವರಿಂದ, ವಿಶೇಷವಾಗಿ ಮುಖ್ಯಮಂತ್ರಿಯಿಂದ ನಾವು ಇದನ್ನು ನೀರೀಕ್ಷಿಸಿರಲಿಲ್ಲ. ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ.
If this is true it is just NOT ACCEPTABLE @revanth_anumula .. As someone holding a constitutional position this is not what we expected especially from a Chief Minister of @incindia. ..
Right action must be taken against everyone involved. https://t.co/EIEdRcrrsQ
— Bhavya Narasimhamurthy (@Bhavyanmurthy) March 12, 2024
ಇದನ್ನೂ ಓದಿ : ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಸಚಿವ ಸಂಪುಟ ರಾಜೀನಾಮೆ