Homeಮುಖಪುಟಬಂಧನದ ಆಧಾರ ಹಿಂದಿಯಲ್ಲಿ ಒದಗಿಸಿದ ಕಾರಣ ವಿದೇಶಿ ಪ್ರಜೆಯನ್ನು ಬಿಡುಗಡೆ ಆದೇಶಿಸಿದ ಬಾಂಬೆ ಹೈಕೋರ್ಟ್!

ಬಂಧನದ ಆಧಾರ ಹಿಂದಿಯಲ್ಲಿ ಒದಗಿಸಿದ ಕಾರಣ ವಿದೇಶಿ ಪ್ರಜೆಯನ್ನು ಬಿಡುಗಡೆ ಆದೇಶಿಸಿದ ಬಾಂಬೆ ಹೈಕೋರ್ಟ್!

- Advertisement -
- Advertisement -

ಬಂಧಿಸಲು ನೀಡಿದ ಕಾರಣಗಳು ಆರೋಪಿಗೆ ಅರ್ಥವಾಗದ ಹಿಂದಿ ಭಾಷೆಯಲ್ಲಿವೆ ಎಂದು ಕಂಡುಕೊಂಡಿರುವ ಬಾಂಬೆ ಹೈಕೋರ್ಟ್ ಮಾದಕವಸ್ತು ಪ್ರಕರಣದಲ್ಲಿ ಸಿಲುಕಿದ್ದ ವಿದೇಶಿ ಪ್ರಜೆಯೊಬ್ಬರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ಪೀಠವು ಬಂಧನದ ಆಧಾರವನ್ನು ಒದಗಿಸುವುದು ಬಹಳ ಅಮೂಲ್ಯವಾದ ಸಾಂವಿಧಾನಿಕ ಹಕ್ಕು ಎಂದು ಅಭಿಪ್ರಾಯಪಟ್ಟಿದೆ.

“ಯಾಕೆ ಬಂಧಿಸಲಾಗಿದೆ ಎಂಬ ಅನುವಾದಿತ ಆವೃತ್ತಿಯನ್ನು ಆರೋಪಿಗೆ ನೀಡದಿರುವುದು ವಾಸ್ತವವಾಗಿ ಬಂಧನದ ಆಧಾರವನ್ನು ಬಂಧಿತನಿಗೆ ಪೂರೈಸದಂತಾಗುತ್ತದೆ. ಹೀಗಾಗಿ ಬಂಧನವು ದುರ್ಬಲಗೊಳ್ಳುತ್ತದೆ” ಎಂದು ಪೀಠವು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರ ಪಾಲುದಾರರ ಸಹೋದರ ಅಗಿಸಿಲಾಸ್ ಡಿಮೆಟ್ರಿಯಾಡ್ಸ್ ಆರೋಪಿಯಾಗಿದ್ದು ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಶಕ್ಕೆ ಪಡೆದಿತ್ತು. ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಅಕ್ರಮ ಸಾಗಾಟವನ್ನು ತಡೆಗಟ್ಟುವ ಕಾಯ್ದೆ (ಪಿಐಟಿಎನ್‌ಪಿಎಸ್‌ಎ) ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಶಿಕ್ಷಣ ಮಾಧ್ಯಮದಲ್ಲಿ ಹಿಂದಿ ಹೇರಿಕೆ: ಕೇಂದ್ರದ ನಡೆ ವಿರೋಧಿಸಿದ ಸ್ಟಾಲಿನ್ ಜೊತೆಗೂಡಿದ ಕೇರಳ ಸಿಎಂ

ಒಂದು ತಿಂಗಳ ನಂತರ ಅವರಿಗೆ ಜಾಮೀನು ನೀಡಲಾಯಿತು ಮತ್ತು ಸೆಪ್ಟೆಂಬರ್ 2021 ರಲ್ಲಿ ಕಂದಾಯ ಇಲಾಖೆ (ಪಿಐಟಿಎನ್‌ಡಿಪಿಎಸ್ ಘಟಕ) ಬಂಧನ ಆದೇಶವನ್ನು ಜಾರಿಗೊಳಿಸಿತು.

ವಕೀಲ ಕುಶಾಲ್ ಮೋರ್ ಮೂಲಕ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿದ ಆರೋಪಿ, ತಾನು ವಿದೇಶಿ ಪ್ರಜೆಯಾಗಿರುವುದರಿಂದ ತನಗೆ ಹಿಂದಿ ಭಾಷೆಯ ಅರಿವಿಲ್ಲ ಎಂದು ಸೂಚಿಸಿದ್ದಾರೆ. ಈ ಕಾರಣದಿಂದಾಗಿ, ಹಿಂದಿಯನ್ನು ಓದಲು, ಬರೆಯಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ಬಂಧನದ ದಾಖಲೆಗಳು ಹಿಂದಿಯಲ್ಲಿದ್ದು, ಅದಕ್ಕೆ ಯಾವುದೇ ಅನುವಾದವನ್ನು ಒದಗಿಸಲಾಗಿಲ್ಲ. ಇದರಿಂದಾಗಿ ಪರಿಣಾಮಕಾರಿ ಮತ್ತು ಸಂಪೂರ್ಣ ಪ್ರಾತಿನಿಧ್ಯವನ್ನು ನೀಡುವಲ್ಲಿ ವಿಫಲರಾಗಿದ್ದೇನೆ ಎಂದು ವಾದಿಸಿದ್ದರು.

ಎನ್‌ಸಿಬಿ ಪರ ವಕೀಲ ಶ್ರೀರಾಮ್ ಶಿರ್ಸಾತ್ ವಾದ ಮಂಡಿಸಿ, ಅರ್ಜಿದಾರರ ಪರ ವಕೀಲರೊಬ್ಬರು ಹಿಂದಿ ದಾಖಲೆಗಳನ್ನು ಭಾಷಾಂತರಿಸಿದ್ದಾರೆ ಎಂದು ವಾದಿಸಿದರು. ಆದರೆ ಆರೋಪಿಯು ಪಂಚನಾಮದಲ್ಲಿನ ಪುಟಗಳಿಗೆ ಸಹಿ ಹಾಕಲು ನಿರಾಕರಿಸಿದ್ದನ್ನು ಗಮನಿಸಿದ ನ್ಯಾಯಾಲಯವು, ಎನ್‌ಸಿಬಿಯ ವಾದವನ್ನು ಸುಳ್ಳು ಎಂದು ನಿರ್ಧಾರಿಸಿದೆ.

ಇದನ್ನೂ ಓದಿ: ಬೋಧನಾ ಮಾಧ್ಯಮವಾಗಿ ಹಿಂದಿ ಹೇರಿಕೆ; ದಕ್ಷಿಣದ ರಾಜ್ಯಗಳು ಪ್ರತಿಭಟನೆ ನಡೆಸುತ್ತಿದ್ದರೂ ಒಕ್ಕೂಟ ಸರ್ಕಾರ ಮೌನ!

ನ್ಯಾಯಾಲಯವು ಸೆಪ್ಟೆಂಬರ್ 2021 ರ ಬಂಧನ ಆದೇಶವನ್ನು ರದ್ದುಗೊಳಿಸಿ, ಆರೋಪಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...