Homeಅಂಕಣಗಳುಹಿರೋಷಿಮಾ ಮೇಲೆ ಅಣುಬಾಂಬ್‌ ದಾಳಿಗೆ 80 ವರ್ಷ: ಯುದ್ಧ ಮುಗಿಸಿದ್ದು ಮಾತ್ರವಲ್ಲ, ಶೀತಲ ಸಮರವನ್ನೂ ಆರಂಭಿಸಿತ್ತು

ಹಿರೋಷಿಮಾ ಮೇಲೆ ಅಣುಬಾಂಬ್‌ ದಾಳಿಗೆ 80 ವರ್ಷ: ಯುದ್ಧ ಮುಗಿಸಿದ್ದು ಮಾತ್ರವಲ್ಲ, ಶೀತಲ ಸಮರವನ್ನೂ ಆರಂಭಿಸಿತ್ತು

- Advertisement -
- Advertisement -

ಇಂದಿಗೆ ಸರಿಯಾಗಿ 80 ವರ್ಷಗಳ ಹಿಂದೆ, 1945ರ ಆಗಸ್ಟ್ 6ರಂದು, ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ ಒಂದು ಘಟನೆ ನಡೆಯಿತು. ಜಪಾನ್‌ನ ಹಿರೋಷಿಮಾ ನಗರವು ಕ್ಷಣಮಾತ್ರದಲ್ಲಿ ಧೂಳಾಗಿ ಪರಿವರ್ತನೆಯಾಯಿತು. ಇಡೀ ವಿಶ್ವವೇ ಕಂಡ ಮೊದಲ ಅಣುಬಾಂಬ್ ದಾಳಿ ಇದಾಗಿತ್ತು. ಈ ದಾಳಿಯ ಹಿಂದೆ ಕೇವಲ ಸೇಡು ಅಥವಾ ಯುದ್ಧ ತಂತ್ರವಿರಲಿಲ್ಲ, ಬದಲಿಗೆ ವೇಗವಾಗಿ ಬದಲಾಗುತ್ತಿದ್ದ ವಿಶ್ವ ರಾಜಕೀಯದಲ್ಲಿ ಅಮೆರಿಕದ ಪ್ರಭುತ್ವವನ್ನು ಸ್ಥಾಪಿಸುವ ರಾಜಕೀಯ ನಡೆ ಇದಾಗಿತ್ತು ಎಂದು ಇತಿಹಾಸಕಾರರು ವಾದಿಸುತ್ತಾರೆ. ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ, ಈ ದಾಳಿಯು ಜಪಾನ್‌ಗೆ ಮಾತ್ರವಲ್ಲದೆ, ಆಗ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದ ಸೋವಿಯತ್ ಒಕ್ಕೂಟಕ್ಕೂ ಒಂದು ಸ್ಪಷ್ಟ ಸಂದೇಶವಾಗಿತ್ತು.

ಜಪಾನ್‌ನ ದುರ್ಬಲ ಸ್ಥಿತಿ ಮತ್ತು ಅಮೆರಿಕದ ನಿರ್ಧಾರ

1945ರ ಮಧ್ಯಭಾಗದ ಹೊತ್ತಿಗೆ, ಆರು ವರ್ಷಗಳ ಕಾಲ ನಡೆದ ಎರಡನೇ ಮಹಾಯುದ್ಧ ಕೊನೆಯ ಹಂತಕ್ಕೆ ಬಂದಿತ್ತು. ಹಿಟ್ಲರ್‌ನ ನಾಜಿ ಜರ್ಮನಿ ಈಗಾಗಲೇ ಶರಣಾಗಿತ್ತು. ಪೂರ್ವದಲ್ಲಿ ಜಪಾನ್ ತನ್ನ ಬಹುತೇಕ ಸೈನ್ಯವನ್ನು ಕಳೆದುಕೊಂಡು ದುರ್ಬಲವಾಗಿತ್ತು. ಅಮೆರಿಕದ ವೈಮಾನಿಕ ದಾಳಿಗಳಿಂದ ಟೋಕಿಯೊ ಸೇರಿದಂತೆ ಅನೇಕ ನಗರಗಳು ನಾಶವಾಗಿದ್ದವು. ಜಪಾನ್‌ನ ಶರಣಾಗತಿ ಕೇವಲ ಸಮಯದ ಪ್ರಶ್ನೆಯಾಗಿತ್ತು. ಆದರೂ, ಅಮೆರಿಕವು ಹೊಸ ಮತ್ತು ಅತ್ಯಂತ ವಿನಾಶಕಾರಿ ಅಸ್ತ್ರವನ್ನು ಬಳಸಲು ನಿರ್ಧರಿಸಿತು.

ಅಣುಬಾಂಬ್ ಮತ್ತು ವಿಜ್ಞಾನಿಗಳ ದುಗುಡ

ನಾಜಿ ಜರ್ಮನಿಯಿಂದ ತಪ್ಪಿಸಿಕೊಂಡು ಅಮೆರಿಕಗೆ ವಲಸೆ ಬಂದ ಅನೇಕ ವಿಜ್ಞಾನಿಗಳು ಗುಪ್ತವಾಗಿ ಮ್ಯಾನ್‌ಹ್ಯಾಟನ್ ಯೋಜನೆಯಡಿಯಲ್ಲಿ ಅಣುಬಾಂಬ್ ತಯಾರಿಸುತ್ತಿದ್ದರು. ಯೋಜನೆಯ ಪ್ರಮುಖ ವಿಜ್ಞಾನಿ ಜೆ. ರಾಬರ್ಟ್ ಓಪನ್ಹೈಮರ್ ಬಾಂಬ್ ಯಶಸ್ವಿಯಾಗಿ ಪರೀಕ್ಷೆಗೊಂಡಾಗ, “ನಾನು ಈಗ ಲೋಕಗಳ ಸಂಹಾರಕನಾದ ಮೃತ್ಯುವಾಗಿದ್ದೇನೆ” ಎಂಬ ಶ್ಲೋಕವನ್ನು ಉಲ್ಲೇಖಿಸಿ, ತಮ್ಮ ಮನಸ್ಸಿನ ದುಗುಡವನ್ನು ಹೊರಹಾಕಿದ್ದರು. ಅಣುಬಾಂಬ್ ಅಂದು ನಿರೀಕ್ಷೆಗಿಂತಲೂ ಹೆಚ್ಚು ವಿನಾಶಕಾರಿಯಾಗಿತ್ತು. ಅಮೆರಿಕ ಈ ಯೋಜನೆಯನ್ನು ವೇಗವಾಗಿ ಮುಗಿಸಲು ಕಾರಣ ಜಪಾನ್ ಅನ್ನು ಸೋಲಿಸುವುದಲ್ಲ, ಬದಲಿಗೆ ಜರ್ಮನಿ ಮೊದಲು ಬಾಂಬ್ ತಯಾರಿಸಬಹುದೆಂಬ ಭಯ. ಆದರೆ ಅಣುಬಾಂಬ್ ಸಿದ್ಧವಾಗುವ ಹೊತ್ತಿಗೆ ಜರ್ಮನಿ ಶರಣಾಗಿತ್ತು.

ಯುದ್ಧದ ಆಚೆಗಿನ ರಾಜಕೀಯ ಆಟ

ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ದಾಳಿ ನಡೆಸಿದ ಪ್ರಮುಖ ಕಾರಣ ಕೇವಲ ಯುದ್ಧವನ್ನು ಕೊನೆಗೊಳಿಸುವುದಲ್ಲ, ಬದಲಾಗಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವೆ ಪ್ರಾರಂಭವಾಗುತ್ತಿದ್ದ ಶೀತಲ ಸಮರಕ್ಕಾಗಿ ಅಮೆರಿಕದ ಶಕ್ತಿಯನ್ನು ಪ್ರದರ್ಶಿಸುವುದು ಎಂದು ಅನೇಕ ಇತಿಹಾಸಕಾರರು ವಾದಿಸುತ್ತಾರೆ. ಇತಿಹಾಸಕಾರ ಗಾರ್ ಆಲ್ಪೆರೋವಿಟ್ಜ್ ತಮ್ಮ ಪುಸ್ತಕದಲ್ಲಿ ಈ ಅಣುಬಾಂಬ್ ದಾಳಿಯ ಮುಖ್ಯ ಉದ್ದೇಶ ಸೋವಿಯತ್ ಒಕ್ಕೂಟಕ್ಕೆ ತಮ್ಮ ಪ್ರಾಬಲ್ಯವನ್ನು ತೋರಿಸುವುದಾಗಿತ್ತು ಎಂದು ಬರೆದಿದ್ದಾರೆ. ಅಂದಿನ ಜನರಲ್ ಡ್ವೈಟ್ ಡಿ. ಐಸೆನ್‌ಹೋವರ್ ಸಹ ಯುದ್ಧ ಮುಗಿಸಲು ಅಣುಬಾಂಬ್ ದಾಳಿ ಅಗತ್ಯವಿರಲಿಲ್ಲ ಎಂದು ನಂತರ ಹೇಳಿದ್ದರು.

ಹಿರೋಷಿಮಾದ ದುರಂತ ಮತ್ತು ಅದರ ಪರಿಣಾಮ

1945ರ ಆಗಸ್ಟ್ 6ರಂದು ಬೆಳಿಗ್ಗೆ 8:15ಕ್ಕೆ ಅಮೆರಿಕದ ‘ಎನೋಲಾ ಗೇ’ ಎಂಬ ವಿಮಾನ ‘ಲಿಟಲ್ ಬಾಯ್’ ಎಂಬ ಅಣುಬಾಂಬ್ ಅನ್ನು ಹಿರೋಷಿಮಾ ಮೇಲೆ ಬೀಳಿಸಿತು. ಇದರಿಂದಾಗಿ ಕ್ಷಣಾರ್ಧದಲ್ಲಿ ಸುಮಾರು 80,000 ಜನರು ಸಾವನ್ನಪ್ಪಿದರು. ಮೂರು ದಿನಗಳ ನಂತರ, ನಾಗಸಾಕಿ ಮೇಲೆ ಮತ್ತೊಂದು ಅಣುಬಾಂಬ್ ದಾಳಿ ನಡೆಯಿತು. ಈ ಎರಡೂ ದಾಳಿಗಳಿಂದ ಒಟ್ಟು 2 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟರು. ಈ ದಾಳಿಗಳ ನಂತರ ಜಪಾನ್ ಬೇಷರತ್ತಾಗಿ ಶರಣಾಯಿತು.

ವಿಜ್ಞಾನಿಗಳ ಪಶ್ಚಾತ್ತಾಪ ಮತ್ತು ಎಚ್ಚರಿಕೆ

ಅಣುಶಕ್ತಿಯ ಆಧಾರ ಸೂತ್ರಗಳನ್ನು ನೀಡಿದ್ದ ಆಲ್ಬರ್ಟ್ ಐನ್‌ಸ್ಟೀನ್ ಸಹ, ಜರ್ಮನಿಯು ಅಣುಬಾಂಬ್ ತಯಾರಿಸಬಹುದೆಂಬ ಭಯದಿಂದ ಅಮೆರಿಕ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಆದರೆ ಹಿರೋಷಿಮಾದ ಘಟನೆ ನಂತರ, ಅವರು ತಮ್ಮ ಈ ನಿರ್ಧಾರದ ಬಗ್ಗೆ ತೀವ್ರವಾಗಿ ವಿಷಾದಿಸಿದರು. “ನನ್ನ ಜೀವನದ ಒಂದು ದೊಡ್ಡ ತಪ್ಪು” ಎಂದು ತಮ್ಮ ಪತ್ರಕ್ಕೆ ಸಹಿ ಹಾಕಿದ್ದನ್ನು ವಿವರಿಸಿದ್ದರು. ಅಣುಬಾಂಬ್‌ನ ಜನಕ ಎಂದು ಕರೆಯಲ್ಪಡುವ ಓಪನ್‌ಹೈಮರ್ ಕೂಡಾ “ನನ್ನ ಕೈಗಳಲ್ಲಿ ರಕ್ತವಿದೆ” ಎಂದು ಅಧ್ಯಕ್ಷರ ಬಳಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು.

80 ವರ್ಷಗಳ ನಂತರವೂ ಅಣ್ವಸ್ತ್ರಗಳ ನೆರಳು

ಇಂದು ಹಿರೋಷಿಮಾ ಒಂದು ಸುಂದರ ನಗರವಾಗಿ ಅಭಿವೃದ್ಧಿ ಹೊಂದಿದ್ದರೂ, ಅದು ವಿಜ್ಞಾನ ಮತ್ತು ಅಧಿಕಾರದ ದುರುಪಯೋಗದಿಂದ ಆಗಬಹುದಾದ ದುರಂತಕ್ಕೆ ಸಾಕ್ಷಿಯಾಗಿದೆ. ಜಗತ್ತಿನಲ್ಲಿ ಇಂದಿಗೂ ಸುಮಾರು 12,500 ಅಣ್ವಸ್ತ್ರಗಳು ಅಸ್ತಿತ್ವದಲ್ಲಿವೆ. ಹಿರೋಷಿಮಾ ದಾಳಿಯು ಕೇವಲ ಒಂದು ಯುದ್ಧವನ್ನು ಮುಗಿಸಲಿಲ್ಲ, ಬದಲಾಗಿ ರಾಜಕೀಯ, ಭಯ ಮತ್ತು ನೈತಿಕ ಸಂಕಟಗಳನ್ನು ಒಂದೇ ಕ್ಷಣದಲ್ಲಿ ಹೆಣೆದುಕೊಂಡ ಒಂದು ಮಾರಕ ಅಧ್ಯಾಯವಾಗಿ ಇಂದಿಗೂ ಉಳಿದಿದೆ. ಈ ಘಟನೆ ಮಾನವಕುಲವನ್ನು ಪ್ರಶ್ನಿಸುತ್ತಿದೆ: ನಾವು ಸಾವನ್ನು ಬೆನ್ನಟ್ಟುತ್ತೇವೆಯೇ ಅಥವಾ ವಿಭಿನ್ನವಾಗಿ ಆಯ್ಕೆ ಮಾಡಿಕೊಳ್ಳುತ್ತೇವೆಯೇ?

ಆಧಾರ: ಇಂಡಿಯಾ ಟುಡೇ

ಕನ್ನಡಕ್ಕೆ: ಪೃಥ್ವಿ ಕಣಸೋಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...