Homeಕರ್ನಾಟಕಲಾಕ್‌ಡೌನ್ ಸಮಯದಲ್ಲಿ ಪಡಿತರ ವ್ಯವಸ್ಥೆಯ ವಿಸ್ತರಣೆ ಮತ್ತು ಸಾರ್ವತ್ರೀಕರಣವೊಂದೇ ದಾರಿ

ಲಾಕ್‌ಡೌನ್ ಸಮಯದಲ್ಲಿ ಪಡಿತರ ವ್ಯವಸ್ಥೆಯ ವಿಸ್ತರಣೆ ಮತ್ತು ಸಾರ್ವತ್ರೀಕರಣವೊಂದೇ ದಾರಿ

- Advertisement -
- Advertisement -

ಲಾಕ್‌ಡೌನ್ ಅನ್ನುವ ಪದ ದೇಶದ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ. ಆದರೆ ಸರ್ಕಾರಕ್ಕೆ ಯಾರೆಲ್ಲರ ಬದುಕು ಹೇಗೆ ಲಾಕ್‌ಡೌನ್ ಆಗುತ್ತಿದೆ ಎಂಬ ಅಂದಾಜಿಲ್ಲ ಎನಿಸುತ್ತಿದೆ. ಮೇಲ್ನೋಟಕ್ಕೆ ಹಲವಾರು ಉತ್ತಮವಾದ ಘೋಷಣೆಗಳನ್ನು ಸರ್ಕಾರವು ಮಾಡಿದೆ. ಆದರೆ ತಳಮಟ್ಟದಲ್ಲಿನ ಅನುಷ್ಠಾನದ ಸಮಸ್ಯೆ ನೋಡಿದರೆ ಜನಸಾಮಾನ್ಯರ ಬದುಕಿನ ಬಗ್ಗೆ ಅರಿವು ಇಲ್ಲದ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ಪಡಿತರ ವಿತರಣೆ ಮಾಡುವುದಾಗಿ ಘೋಷಿಸಿವೆ. ಆದರೆ ಎಷ್ಟು ಪ್ರಮಾಣದ ಜನಕ್ಕೆ ತಲುಪುತ್ತದೆ ಎಂಬುದು ದೊಡ್ಡ ಪ್ರಶ್ನೆ ಆಗಿದೆ. ಜನರ ಅನ್ನದ ಪ್ರಶ್ನೆಯನ್ನು ಸರಿಯಾಗಿ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಜನರು ಜೀವನಾಧಾರ ಕೆಲಸಗಳನ್ನು ನಿಲ್ಲಿಸಿ ಮನೆಯಲ್ಲಿ ಕುಳಿತಿರುವ ಈ ಸಂದರ್ಭದಲ್ಲಿ ಅವರಿಗೆ ಸರಿಯಾದ ಪಡಿತರ ವ್ಯವಸ್ಥೆ ಮಾಡಬೇಕಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅನ್ನಭಾಗ್ಯ ಯೋಜನೆಯಾಗಿ ಪಡಿತರ ವಿತರಕ ವ್ಯವಸ್ಥೆಯನ್ನು ವಿಸ್ತರಿಸಿದ ನಂತರ ಸಾಮಾನ್ಯವಾಗಿ ಪ್ರತಿ ತಿಂಗಳೂ ಒಬ್ಬ ವ್ಯಕ್ತಿಗೆ 7 ಕೆ.ಜಿ ಅಕ್ಕಿ ಕೊಡುತ್ತಿದ್ದರು. ಆದರೆ ಈಗ ಪ್ರತಿ ವ್ಯಕ್ತಿಗೆ ೫ ಕೆ.ಜಿ ಅಕ್ಕಿ ಕೊಡುತ್ತಿದ್ದಾರೆ. ಹಾಗೇನೂ ಇಲ್ಲ, ನಾವು ಅದರ ಜೊತೆಗೆ 2 ಕೆ.ಜಿ. ಗೋಧಿ ನೀಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಒಬ್ಬ ವ್ಯಕ್ತಿಗಲ್ಲಾ, ಒಂದು ಕುಟುಂಬಕ್ಕೆ 2 ಕೆಜಿ ಗೋಧಿ ಕೊಡುತ್ತಾರೆ.

ಆದರೆ ಬಡಜನರ ಹೊಟ್ಟೆ ತುಂಬಿಸಲು ಇಷ್ಟು ಸಾಕಾಗುವುದಿಲ್ಲ. ಪೂರ್ತಿ ಲಾಕ್‌ಡೌನ್ ಮಾಡಿದಾಗ ಅವರ ಜೀವನ ಅವಶ್ಯಕತೆಗಳಿಗೆ ಬೇಕಾಗುವ ಇತರ ಆಹಾರ ವಸ್ತುಗಳ ಪೂರೈಕೆ ಸರಿಯಾಗಿ ಮಾಡಲೇಬೇಕಿದೆ. ಇಲ್ಲವಾದರೆ ಅನಿವಾರ್ಯವಾಗಿ ಲಾಕ್‌ಡೌನ್ ಮುರಿದು ಹೊರಗೆ ಹೋಗುವ ಪರಿಸ್ಥಿತಿ ಉದ್ಭವವಾಗುತ್ತದೆ. ಇದು ಕೂಡ ಮತ್ತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆಯೆಂಬುದು ಆಹಾರದ ಹಕ್ಕಿನ ಕಾರ್ಯಕರ್ತರ ಒಕ್ಕೊರಲಿನ ಅಭಿಪ್ರಾಯವಾಗಿದೆ.

ಈ ಕುರಿತು ಆಹಾರದ ಹಕ್ಕಿಗಾಗಿ ಆಂದೋಲನದ ಧಾರವಾಡದ ಶಾರದ ಗೋಪಾಲ್‌ರವರನ್ನು ಮಾತಾಡಿಸಿದಾಗ ‘ಪಡಿತರ ವಿತರಣೆಗೆ ಸಂಬಂಧಿಸಿದಂತೆ ನಾವು ಈ ಹಿಂದೆ ಸರ್ಕಾರಕ್ಕೆ ನಮಗೆ ಗೋಧಿ ಬೇಡ ಅಕ್ಕಿಯ ಜೊತೆಗೆ ಉತ್ತರ ಕರ್ನಾಟಕದ ಮಂದಿಗೆ ಜೋಳ, ದಕ್ಷಿಣ ಕರ್ನಾಟಕದ ಕಡೆ ರಾಗಿ ಈ ರೀತಿ ಕೊಡಿ ಎಂದು ಹೇಳಿದ್ದೆವು. ಸರ್ಕಾರ ಬೇಡ ಎಂದದ್ದನ್ನು ಮಾತ್ರ ತೆಗೆದುಕೊಂಡು ಗೋಧಿಯನ್ನು ಕಡಿಮೆ ಮಾಡಿತ್ತು. ಆದರೆ ಈಗ ಅಕ್ಕಿಯ ಜೊತೆ ಒಂದು ಕಾರ್ಡಿಗೆ ೨ ಕೆಜಿ ಗೋಧಿ ಕೊಡುತ್ತಿದ್ದಾರೆ. ಈ ಪಂಜಾಬ್‌ನಲ್ಲಿ ಅಧಿಕವಾಗಿ ಹೊಸ ಸ್ಟಾಕ್ ಬಂದಿದೆ. ಹಾಗಾಗಿ ಹಳೆಯ ಸ್ಟಾಕ್ ಖಾಲಿ ಮಾಡಬೇಕಾಗಿದೆ. ಗೋಧಿಯನ್ನ ಕೊಡುತ್ತಿದ್ದಾರೆ. ಕೊಡುವುದನ್ನೇ ಸರಿಯಾಗಿ ಕೊಡದ ಸರ್ಕಾರವು ಜನಗಳಿಗೆ ಇದು ಸಾಕಾಗುವುದೋ ಇಲ್ವೋ ಅನ್ನೋದನ್ನು ಯೋಚನೆ ಮಾಡುವುದಿಲ್ಲ. ಇನ್ನು ಏಪ್ರಿಲ್ ೨೦ರಿಂದ ಕೇಂದ್ರ ಸರ್ಕಾರವು ಒಬ್ಬ ವ್ಯಕ್ತಿಗೆ 5 ಕೆ.ಜಿ ಅಕ್ಕಿ, ಒಂದು ಕಾರ್ಡ್ಗೆ ಒಂದು ಕೆ.ಜಿ ಬೇಳೆ, ಮೂರು ತಿಂಗಳ ಸಾಮಗ್ರಿ ಕೊಡುವುದಾಗಿ ನಿರ್ಮಲ ಸೀತಾರಾಮನ್ ಘೋಷಿಸಿದ್ದಾರೆ. ಅದನ್ನು ಕೊಡುತ್ತಾರೋ ಇಲ್ಲವೋ ಇದುವರೆಗೆ ಜನರಿಗೆ ಸ್ಪಷ್ಟವಾಗಿಲ್ಲ.

ಇನ್ನು ವಿತರಣೆಯ ಸಮಸ್ಯೆಗಳನ್ನು ನೋಡಿದರೆ ರಾಜ್ಯಸರ್ಕಾರವು ಒಟಿಪಿ ತಗೊಂಡು ವಿತರಿಸುತ್ತೇವೆ ಎಂದು ಮೊದಲು ಹೇಳಿದ್ದರು. ನಂತರ ಒಟಿಪಿ ಇಲ್ಲದೆಯೇ ವಿತರಿಸಬೇಕೆಂದು ಸರ್ಕಾರ ಹೇಳಿದೆ. ಆದರೆ ಸರ್ಕಾರದ ಸೂಚನೆಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ಹುಕ್ಕೇರಿ, ಖಾನಾಪುರ ಭಾಗದಲ್ಲಿ ಒಟಿಪಿ ಇದ್ದರೆ ಮಾತ್ರ ಕೊಡುತ್ತೇವೆ ಎನ್ನುತ್ತಿದ್ದಾರೆ. ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಗಳಲ್ಲಿ ಮಾತ್ರ ಒಟಿಪಿ ಇಲ್ಲದೆ ಕೊಡುತ್ತಿದ್ದಾರೆ. ಹಾಗೂ ಹಳ್ಳಿಗಳಲ್ಲಿ ತಿಂಗಳಿಗೆ ಕನಿಷ್ಟ ಹತ್ತು ಕಾರ್ಡ್ ಡಿಲಿಟ್ ಆಗುತ್ತಿವೆ. ಇದಕ್ಕೆ ಕಾರಣ ಏನೆಂದು ಇದುವರೆಗೂ ಅಧಿಕಾರಿಗಳ ಬಳಿ ಉತ್ತರವಿಲ್ಲ. ಜನ ಕಾರ್ಡ್ನ್ನು ಮಾಡಿಸಲು ಇಡೀ ವರ್ಷ ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದಾರೆ. ಎಪಿಎಲ್ ಅವರಿಗೆ ಅಂತೂ ಏನು ಕೊಡುತ್ತಿಲ್ಲ. ಹಾಗಾಗಿ ಈಗಾಗಲೇ ಕೊಡುವುದರಲ್ಲೇ ಲೋಪ ಇರುವುದರಿಂದ ನಾವು ಈ ಪಡಿತರ ಹಂಚಿಕೆಯನ್ನು ಲಾಕ್‌ಡೌನ್ ವಿಚಾರವನ್ನು ದೃಷ್ಟಿಯಲ್ಲಿಟ್ಟಕೊಂಡು ಸಾರ್ವತ್ರಿಕರಣಗೊಳಿಸಬೇಕೆಂದು ನಮ್ಮ ಆಂದೋಲನದ ಒತ್ತಾಯವಾಗಿದೆ. ಎಂದು ಹೇಳಿದರು.

ಲೋಡಿಂಗ್ ಕಾರ್ಮಿಕರ ಸಂಘಟನೆಯಿಂದ ಸಿಕ್ಕ ಮಾಹಿತಿ

ಅನ್ನಭಾಗ್ಯ ಲೋಡಿಂಗ್ ಕಾರ್ಮಿಕರನ್ನು ಸಂಘಟಿಸುತ್ತಿರುವ ಶ್ರಮಿಕ ಶಕ್ತಿ ಸಂಘಟನೆಯ ಅಧ್ಯಕ್ಷರಾದ ವರದರಾಜೇಂದ್ರ ಅವರನ್ನೂ ಮಾತಾಡಿಸಲಾಯಿತು. ಕೇಂದ್ರ ಸರ್ಕಾರದಿಂದ ಬಂದಿರುವ ರೇಷನ್ ಈಗ ಸ್ಟಾಕ್ ಮಾಡುತ್ತಿದ್ದಾರೆ ಇಷ್ಟರಲ್ಲೇ ವಿತರಣೆಯಾಗಲಿದೆ, ಇದರಲ್ಲಿ ನಮ್ಮ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ವಲಸೆ ಕಾರ್ಮಿಕರೇನು ಹೇಳುತ್ತಾರೆ?

ಯಾದಗಿರಿ ಜಿಲ್ಲೆಯಿಂದ ಬೆಂಗಳೂರಿಗೆ ಬಂದಿರುವ ದಿನಗೂಲಿ ಕಾರ್ಮಿಕರಾದ ದೇವಮ್ಮ ಮಾತನಾಡಿ ಈ ಸಮಯದಲ್ಲಿ ಮಕ್ಕಳು ಮರಿ ಇರೋ ನಾವು ಸರ್ಕಾರ ಕೊಡುತ್ತಿರುವ ರೇಷನ್ ಕೆಲವು ದಿನಗಳು ಮಾತ್ರ ನಡೆಯಲಿದೆ ಮತ್ತು ಅಕ್ಕಿ, ಗೋಧಿ ಅಷ್ಟೇ ಕೊಡದೆ ಬೇರೆ ಸಾಮಗ್ರಿಗಳನ್ನು ಕೊಟ್ಟರೆ ಸ್ವಲ್ಪ ಮಟ್ಟಿಗೆ ಉಸಿರಾಡುವ ಸ್ಥಿತಿಯಲ್ಲಿ ಇರುತ್ತೇವೆ. ಇಲ್ಲವಾದರೆ ನಮಗೆ ಕಷ್ಟವಾಗಲಿದೆ ಎಂದರು. ನಮ್ಮ ಕಂಟ್ರಾಕ್ಟರ್ ಮೂರನೇ ದಿನದಿಂದ ಪತ್ತೆ ಇಲ್ಲ. ಇಲ್ಲಿ ನಮಗೆ ಬೇರೆ ಅಗತ್ಯಗಳಿಗೆ ದುಡ್ಡು ಕೋಡೋರ್ಯಾರು? ನಾವೂ ಊರಿಗೆ ಹೋಗಿಬಿಟ್ಟಿದ್ದರೆ ಒಳ್ಳೇದಿತ್ತು ಎಂದರು. ಕಟ್ಟಡ ಕಾರ್ಮಿಕರಿಗೆ ಮತ್ತು ಮಹಿಳೆಯರ ಜನಧನ್ ಅಕೌಂಟಿಗೆ ಹಣ ಬಂದಿದೆಯಲ್ಲಾ ಎಂಬ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಪರಿಸ್ಥಿತಿಯನ್ನು ಬಿಚ್ಚಿಟ್ಟಿತ್ತು. ‘ಆ ಕಾರ್ಡ್ ಮಾಡಿಸ್ತೀವಿ ಅಂತ ನಮ್ ಹತ್ರ ಯಾರೋ ೫೦೦ ರೂ. ಇಸ್ಕೊಂಡು ಹೋದ್ರು. ಆಮೇಲೆ ಏನಾಯ್ತು ಗೊತ್ತಿಲ್ಲ. ದುಡ್ಡು ಬಂದ್ರೆ ಹೇಗೆ ಗೊತ್ತಾಗುತ್ತೆ?’, ‘ನಿಮ್ಮ ಫೋನಿಗೆ ಮೆಸೇಜು ಬರುತ್ತೆ ನೋಡಿ’, ‘ಮೆಸೇಜು ನೋಡೋದು ನನಗೂ ಗೊತ್ತಿಲ್ಲ, ನನ್ನ ಗಂಡಂಗೂ ಗೊತ್ತಿಲ್ಲ’.

ಪಡಿತರ ವಿತರಕರ ಅನಿಸಿಕೆ

ಮಂಡ್ಯ ಜಿಲ್ಲೆಯ ಪಡಿತರ ವಿತರಕ ಶಿವಣ್ಣ ಅವರನ್ನು ಮಾತಾಡಿಸಿದಾಗ ಈ ಬಾರಿ ಕಳೆದ ಬಾರಿಗಿಂತ ವ್ಯಕ್ತಿಗೆ ಎರಡು ಕೆಜಿ ಅಕ್ಕಿ ಕಮ್ಮಿ ಮಾಡಿದ್ದಾರೆ. ಇಲ್ಲಿ ಬೆಂಗಳೂರಿನಿAದ ಸಾಕಷ್ಟು ಜನ ಹಳ್ಳಿಗೆ ಬಂದಿರುವುದರಿAದ ಹೆಚ್ಚು ಅಕ್ಕಿ ಬೇಕಾಗುತ್ತದೆ ಮತ್ತು ಈಗ ಬೇರೆ ಜಿಲ್ಲೆಯವರೂ ಇಲ್ಲಿ ಬಂದು ಲಾಕ್ ಆಗಿರುತ್ತಾರೆ. ಅಂತಹವರಿಗೂ ನಾವು ಅಕ್ಕಿ ಕೊಡಬೇಕಾಗುತ್ತದೆ. ಆದರೆ ಸರ್ಕಾರ ಹೆಚ್ಚಿನ ಅಕ್ಕಿ ಮಾತ್ರ ಕೊಡುವುದಿಲ್ಲ. ಪಡಿತರ ಲೈಸನ್ಸ್ದಾರರು ಹಣ ಹೊಡೆಯುತ್ತಾರೆ ಎಂಬ ಮಾತು ಮಾತ್ರ ಬರುತ್ತದೆ. ಆದರೆ ಲೈಸನ್ಸ್ದಾರರ ಸಮಸ್ಯೆಗಳು ಸಾಕಷ್ಟಿವೆ. ಸರ್ಕಾರ ಕೊಡುವ ಕಮಿಷನ್ ಅತಿ ಕಡಿಮೆ ಪ್ರಮಾಣದ್ದಾಗಿದ್ದು ದುರಾಸೆ ಮೂಡಿಸುವಂತೆ ಪ್ರೇರೇಪಿಸುತ್ತಿದೆ. ಆಹಾರ ವಿತರಣೆ ಪ್ರಮುಖವಾದಂತಹ ಕೆಲಸ. ಇದನ್ನ ಗಂಭೀರವಾಗಿ ಮಾಡುವಂತಹ ವಾತಾವರಣ ಇಲಾಖೆ ಕಲ್ಪಿಸಬೇಕು ಎಂದಿದ್ದಾರೆ.

ಅಧಿಕಾರಿಗಳ ಪ್ರತಿಕ್ರಿಯೆ

ಈ ಬಗ್ಗೆ ಆಹಾರ ಇಲಾಖೆ ಆಯುಕ್ತರಾದ ಶಮ್ಲಾ ಇಕ್ಬಾಲ್ ಅವರಿಗೆ ಕರೆಮಾಡಿದಾಗ ‘ನಾವು 10 ಕೆಜಿ ಕೊಡ್ತಿದ್ದೀವಿ’ ಅಂದವರೇ ಫೋನ್ ಕಟ್ ಮಾಡಿದರು. ಮತ್ತೆ ಕರೆ ಮಾಡಿದರೂ ರಿಸೀವ್ ಮಾಡಲಿಲ್ಲ.

ಇದೇ ಇಲಾಖೆಯ ಅಪರ ನಿರ್ದೇಶಕರಾದ ಗಂಗಾಧರ್‌ರವರನ್ನು ಮಾತನಾಡಿಸಿದಾಗ ‘ಬಜೆಟ್‌ನ ತೀರ್ಮಾನದಂತೆ ಎರಡು ಕೆ.ಜಿ ಕಡಿಮೆ ಆಗಿದೆ. ಬೇರೆ ಬೇರೆ ಜಿಲ್ಲೆಯವರಿಗೂ ಆಧಾರ್ ಕಾರ್ಡಿನ ದಾಖಲೆಯಂತೆ ಲಭ್ಯವಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಕೊಡುತ್ತಾರೆ. ಮುಖ್ಯಮಂತ್ರಿಗಳ ತೀರ್ಮಾನದಂತೆ ಪಡಿತರ ಚೀಟಿ ಇಲ್ಲದ ಹೊಸ ಅರ್ಜಿ ಹಾಕಿರುವ 1.85 ಲಕ್ಷ ಜನಕ್ಕೆ ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಅದು ಇನ್ನು ಎರಡು ದಿನದಲ್ಲಿ ಕಾರ್ಯರೂಪಕ್ಕೆ ಬರುತ್ತೆ’ ಎಂದರು.

ಆಹಾರ ಸರಬರಾಜು ಕೆಲಸದಲ್ಲಿರುವ ಸ್ವಯಂಸೇವಕರ ಅನಿಸಿಕೆ

ನಾವು ಮಾತನಾಡಿಸಿದಂತಹ ಸ್ವಯಂಸೇವಕರು ‘ಈ ಸಂದರ್ಭದಲ್ಲಿ ನಾವು ಸರ್ಕಾರದಿಂದ ಬರುವ ಸಾಮಗ್ರಿಗಳನ್ನು ತಲುಪಿಸುವುದಕ್ಕೂ ಆದ್ಯತೆ ನೀಡುತ್ತಿದ್ದೇವೆ. ಸಮಸ್ಯೆಗಳನ್ನು ಹೇಳುತ್ತೇವೆ. ನಮ್ಮ ಹೆಸರು ಹಾಕಬಾರದು’ ಎಂದು ಹೇಳಿ ಶುರು ಮಾಡಿದರು.

‘ಬಡವರು, ದಿನಗೂಲಿ ಕಾರ್ಮಿಕರು, ಮಹಿಳೆಯರು ತುಂಬಾ ಸಂಕಷ್ಟದಲ್ಲಿದ್ದಾರೆ. ಇವರಿಗೆ ಸರ್ಕಾರ ಈಗ ನೀಡುತ್ತಿರುವ ರೇಷನ್ ಯಾವುದೇ ಕಾರಣಕ್ಕೂ ಸಾಲುವುದಿಲ್ಲ. ಅಕ್ಕಿ ಗೋಧಿಯ ಜೊತೆ, ಪ್ರತಿ ದಿನ ಅಡುಗೆಗೆ ಬೇಕಾದಂತಹ ಮೂಲಭೂತ ಸಾಮಗ್ರಿಗಳನ್ನು ತಪ್ಪದೇ ನೀಡಬೇಕಿದೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯನ್ನು ಲಾಕ್‌ಡೌನ್ ಸಮಯದಲ್ಲಿ ಇನ್ನಷ್ಟು ಬಲಗೊಳಿಸುವ ಅವಶ್ಯಕತೆ ಇದೆ. ಆಹಾರ ವಿತರಣೆ ಮಾಡಲು ಸರಿಯಾದ ಮಾರ್ಗಸೂಚಿಗಳನ್ನು ಇಟ್ಟುಕೊಳ್ಳಬೇಕಿದೆ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಗಮನಕೊಟ್ಟು ಆಹಾರ ವಿತರಣೆ ಮಾಡಬೇಕಿದೆ ಎಂದು ಹೇಳಿದರು.

ಜೊತೆಗೆ ಎಲ್ಲರಿಗೂ ಆಹಾರದ ಖಾತರಿ ಇದೆ ಎಂದಾದಾಗ ಇರುವ ನೆಮ್ಮದಿಯು, ಬೇರೆ ಬೇರೆ ಕಾರಣಗಳಿಂದ ಕೆಲವರನ್ನು ಹೊರಗಿಡುವ ಪ್ರಕ್ರಿಯೆ ನಡೆದಾಗ ಇರುವುದಿಲ್ಲ. ಜನರು ಭೀತಿಗೊಳಗಾಗುತ್ತಾರೆ; ಸ್ವಲ್ಪ ಮಟ್ಟಿಗೆ ಉಳ್ಳವರೂ ಸಹಾ ಆಹಾರ ಪದಾರ್ಥಗಳನ್ನು ಸ್ಟಾಕ್ ಮಾಡಲು ತೊಡಗುತ್ತಾರೆ. ಆಗ ಬಿಕ್ಕಟ್ಟು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಕಾರ್ಡ್ ಯಾರಿಗಿದೆ ಯಾರಿಗಿಲ್ಲ ಎಂಬುದನ್ನೆಲ್ಲಾ ನೋಡಬಾರದು. ಬಹಳ ದೊಡ್ಡ ಆರ್ಥಿಕ ತಜ್ಞರೂ ಸಹಾ ಇದನ್ನೇ ಹೇಳಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರಿಗೂ ಸಮಾನವಾದ ರೀತಿಯಲ್ಲಿ ಅಗತ್ಯವಿರುವಷ್ಟೂ ಆಹಾರವನ್ನು ಒದಗಿಸುವುದಕ್ಕಿಂತ ಮಹತ್ವದ ಕೆಲಸ ಇನ್ನೊಂದಿಲ್ಲ. ಜೊತೆಗೆ ಜನರ ಕೈಯ್ಯಲ್ಲಿ ಹಣ ಓಡಾಡುವಂತೆ ಮಾಡಿದರೆ ಅವರ ಕೊಳ್ಳುವ ಶಕ್ತಿ ಸ್ವಲ್ಪಮಟ್ಟಿಗೆ ಉಳಿದುಕೊಂಡರೂ ಆರ್ಥಿಕತೆ ಪೂರ್ಣ ಕುಸಿಯದಂತೆ ತಡೆಯಬಹುದು. ಆದರೆ ನೀತಿ ನಿರೂಪಕರು ಮೇಲಿನಿಂದ ಜನರನ್ನು ಹೊರಗಿಡುವ ತೀರ್ಮಾನ ಘೋಷಿಸುತ್ತಾರೆ. ಕೆಳಗಿನವರು ಅದನ್ನು ಮತ್ತಷ್ಟು ಕ್ಲಿಷ್ಟಗೊಳಿಸಿ ಜನರಿಗೆ ತೊಂದರೆ ಕೊಡುತ್ತಾರೆ. ಹೀಗೆಯೇ ಮುಂದುವರೆದರೆ ಬೇರೆ ದೇಶಗಳಲ್ಲಿಯಂತೆ ಇಲ್ಲೂ ಆಹಾರ ದಂಗೆಗಳು ಏರ್ಪಡುತ್ತವೆ.’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...