Homeಎಚ್.ಎಸ್.ದೊರೆಸ್ವಾಮಿಮದ್ಯದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಸರ್ಕಾರ ಮಾಡಬಾರದು.

ಮದ್ಯದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಸರ್ಕಾರ ಮಾಡಬಾರದು.

- Advertisement -
- Advertisement -

ಮಾಧ್ಯಮಗಳು ಜನರನ್ನು ಎಚ್ಚರಿಸುವಂತ ಕೆಲಸ, ಸರ್ಕಾರಕ್ಕೆ ತಿಳಿವಳಿಕೆ ಹೇಳುವಂತಹ ಕೆಲಸ ಅಗತ್ಯವಾಗಿ ಮಾಡಬೇಕು. ಅವರು ಆ ಕೆಲಸವನ್ನು ಬಿಟ್ಟು ಮಿಕ್ಕೆದ್ದೆಲ್ಲ ಮಾಡ್ತಾರೆ. ಕಾಲಹರಣ ಮಾಡ್ತಾರೆ. ಎಲ್ಲೊ ಒಂದು ಕಡೆ ಸಾವಾಯಿತು ಅಂದ್ರೆ ಐದು ಸರಿ ಅದನ್ನು ಹಾಕ್ತಾರೆ.. ಎಲ್ಲಾದರೂ ಕೊಲೆ ಆದರೂ ಅದನ್ನೆ ಪುನಃ ರಿಪೀಟ್ ಮಾಡಿ ಹಾಕ್ತಾರೆ. ಬರೀ ಈ ತರಹದ ಚರ್ಚೆ ಆಗ್ತಿದೆ ಹೊರತು ಪ್ರಜಾಪ್ರಭುತ್ವವನ್ನು ಮಜಭೂತುಪಡಿಸುವುದಕ್ಕೆ ಮತ್ತು ಸಮಾಜವನ್ನು ತಿದ್ದುವುದಕ್ಕೆ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ದುಷ್ಟ ವಿಚಾರಗಳನ್ನು ಅಳಿಸಲು ಕೆಲಸ ಮಾಡುತ್ತಿಲ್ಲ.

ಒಳ್ಳೇಯದಕ್ಕೆ ಸಮಯ ಕೊಟ್ಟು ಜನರ ಪ್ರಜ್ಞೆಯನ್ನು ಬಳಸಿ, ಅವರಲ್ಲಿ ಹೋರಾಟದ ಮನೋಭಾವವನ್ನು ಬೆಳೆಸಿ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವಂತಹ ಕೆಲಸ ಮಾಡಬೇಕಾದಂತಹ ಮಾಧ್ಯಮಗಳು ಕಾಲಹರಣ ಮಾಡುತ್ತಿವೆ. ಇದನ್ನು ನಾವು ನಾಲ್ಕಾರು ವರ್ಷಗಳಿಂದ ನೋಡ್ತ ಬಂದಿದ್ದೇವೆ.. ಇದರ ಬಗ್ಗೆ ಮಾತಾನಾಡುವ ಜನ ಕೂಡ ಇಲ್ಲ. ನಾವು ಸ್ವತಂತ್ರ ಪೂರ್ವದಲ್ಲಿ ಈ ಮಾದ್ಯಮಗಳನ್ನು ಹೇಗೆ ಉಪಯೋಗ ಮಾಡ್ತಿದ್ದೆವು, ಬ್ರಿಟೀಷರ ವಿರೋಧವಾಗಿ ನಾವು ಗುಲಾಮಗಿರಿಯಿಂದ ಹೊರಗೆ ಬರುವುದ್ದಕ್ಕಾಗಿ, ಶತ್ರುಗಳನ್ನು ಹೊಡೆದು ಓಡಿಸುವುದಕ್ಕಾಗಿ, ಪ್ರಜೆಗಳಲ್ಲಿ ಪ್ರಜ್ಞೆಯನ್ನು ತುಂಬಿಸುವಂತಹ ಕೆಲಸವನ್ನು ಮಾಡ್ತಾ ಇದ್ವಿ. ಈವತ್ತಿನ ಪತ್ರಿಕೆಗಳು ಅಂತಹ ಕೆಲಸ ಮಾಡಬೇಕು.

ಪ್ರಜಾಪ್ರಭುತ್ವವನ್ನು ಉಳಿಸುವಂತಹ ಕೆಲಸ, ನಮ್ಮ ಸಂವಿಧಾನವನ್ನು ಉಳಿಸುವಂತಹ ಕೆಲಸ ಮಾಡಬೇಕೇ ಹೊರೆತು ಕಾಲಹರಣ ಮಾಡುವುದು ಸರಿಯಲ್ಲ. ಈವತ್ತಿನ ದಿವಸ ಕರೋನ ಸಂದರ್ಭದಲ್ಲಿ ಹೆಂಡದ ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಯಾವಾಗ ಅಂಗಡಿ ತೆಗೀತಾರೆ ಯಾವಾಗ, ಕುಡಿಯೋಣ ಅಂತ. ಅವರಿಗೆ ಈ ಮಾಧ್ಯಮದವರು ಹೇಳುವುದು ದೂರ ದೂರ ನಿಂತುಕೊಳ್ಳಿ ಅಂತ. ಇವರ ಮಾತು ಕೇಳ್ತಾರೇನ್ರಿ ಕುಡಿಯುವ ಆತುರದಲ್ಲಿ ಇರುವಂತಹ ಜನ?

ಅಂಗಡಿ ತೆಗಯಬೇಡಿ ಅಂತ ಹೇಳುವುದು ಮಾದ್ಯಮದವರ ಕರ್ತವ್ಯವಾಗಿತ್ತು. ಯಾಕೆಂದರೆ ಅದರಿಂದ ಅನಾಹುತ ಆಗುತ್ತೆ, ಕರೋನ ಮತ್ತೆ ಜಾಸ್ತಿ ಆಗುತ್ತೆ ಅಂತ ಹೇಳಬೇಕಾಗಿತ್ತೆ ಹೊರೆತು, ಇವರು ತಿಳುವಳಿಕೆ ಕೊಡುವಂತಹ ರೀತಿಯಲ್ಲಿ ಅಲ್ಲ. ಈ ಮಾಧ್ಯಮದವರು ಏನೇನೋ ಮಾತಾಡ್ತಾರೆ, ಆದರೆ ಇದು ಸರಿ ಅಲ್ಲ. ನೀವು ದೂರ ದೂರ ನಿಂತಿಕೊಳ್ಳಿ ಅಂತ ಮಾತು ಬೇರೆ ಸಂದರ್ಭದಲ್ಲಿ ಹೇಳಲಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೆಂಡದಂಗಡಿ ಹತ್ತಿರ ನೀವು ಉಪದೇಶ ಮಾಡ್ತಿದೀರಿ. ಇದು ಆಗುತ್ತೇನ್ರಿ? ಇದು ಆಗದೇ ಇರುವಂತಹದು. ಈವತ್ತು ಕುಡಿಯಲು ನೂಕು ನುಗ್ಗಲು ಮಾಡಿದ್ದರಿಂದ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಆದ್ದರಿಂದ ನೀವು ವ್ಯವಹಾರಿಕವಾಗಿ ನಡೀಬೇಕು. ಈವತ್ತು ಸಮಸ್ಯೆ ಏನಿದೆ ಅದರ ಬಗ್ಗೆ ಪರಿಗಣಿಸಬೇಕು.

ಕರೊನ ಕಾರಣದಿಂದ ಈಗ ಜನ ಕುಡಿಯುವುದನ್ನು ನಿಲ್ಲಿಸಿದ್ದಾರೆ. ಯಾರೋ ಕುಡುಕರು ತುಂಬಾ ದಿನಾ ಕುಡೀದೇ ಇದ್ದರೆ ಆಗುವುದೇ ಇಲ್ಲ ಅನ್ನುವ ಜನರಿಗೆ ಬೇಕಾದರೆ ಪರ್ಮಿಟ್ಟು ಕೊಡಿ. ಆದರೆ ಸಾಮನ್ಯ ಜನರು ಕುಡಿಯುವುದನ್ನು ಬಿಡುವುದಕ್ಕೆ ತಯಾರು ಇರಬೇಕಾದ್ರೆ, ಅವರುಗಳಿಗೆ ಅಂಗಡಿಗಳು ಇಲ್ಲದೇ ಇರುವ ಹಾಗೆ ಮಾಡಿದರೆ ಬಿಟ್ಟೇ ಬಿಡ್ತಾರೆ… ಗುಜರಾತ್ ನಲ್ಲಿ ಈ ಕೆಲಸ ಮಾಡಿದ್ದಾರೆ. ತುಂಬಾ ಕುಡಿಯುವ ಚಟ ಇರುವ ಬೆರಳೆಣಿಕೆಯಷ್ಟು ಕುಡಕರಿಗೆ ಪರ್ಮಿಟ್ ಕೊಟ್ಟಿದ್ದಾರೆ, ಉಳಿದವರಿಗೆ ಅಂಗಡಿಗಳಿಲ್ಲ.

ಆ ರೀತಿಯ ವ್ಯವಸ್ಥೆ ಇಲ್ಲಿ ಆಗಬೇಕೇ ಹೊರೆತು ಸಾಲಾಗಿ ನಿಲ್ಲಿಸಿ ಲಾಠಿ ಚಾರ್ಜ್ ಆಗುವಂತೆ ಮಾಡುವುದು ವಿವೇಕವಲ್ಲ. ರೆಡ್ ಜೋನ್‌ನಲ್ಲಿ ಇರುವ ಕುಡುಕರು ಅಲ್ಲಿ ಕುಡಿತದ ಅಂಗಡಿಗಳು ಇಲ್ಲವಾದ್ದರಿಂದ ಕುಡಿತದ ಅಂಗಡಿಗಳು ತೆಗೆದಿರುವ ಬಡಾವಣೆಗಳಿಗೆ ನುಗ್ಗಿ ಬರುತ್ತಿದ್ದಾರೆ. ಮೊದಲು ಅದನ್ನು ತಡೆಗಟ್ಟಿ ಎಂದು ಪೋಲಿಸರಿಗೆ ಮತ್ತು ಮಾಧ್ಯಮಗಳಿಗೆ ಮನವಿ ಮಾಡಿಕೊಳ್ಳುತ್ತೇನೆ.

ಸರ್ಕಾರ ಆತುರದಲ್ಲಿ ಕುಡಿತದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಮಾಡಬಾರದು.


ಇದನ್ನೂ ಓದಿ: ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ


ನಮ್ಮ ಇಂಗ್ಲಿಷ್ ವೆಬ್ಸೈಟಿಗೆ ಭೇಟಿ ನೀಡಿ

https://gaurilankeshnews.com/


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...