Homeಎಚ್.ಎಸ್.ದೊರೆಸ್ವಾಮಿಮದ್ಯದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಸರ್ಕಾರ ಮಾಡಬಾರದು.

ಮದ್ಯದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಸರ್ಕಾರ ಮಾಡಬಾರದು.

- Advertisement -
- Advertisement -

ಮಾಧ್ಯಮಗಳು ಜನರನ್ನು ಎಚ್ಚರಿಸುವಂತ ಕೆಲಸ, ಸರ್ಕಾರಕ್ಕೆ ತಿಳಿವಳಿಕೆ ಹೇಳುವಂತಹ ಕೆಲಸ ಅಗತ್ಯವಾಗಿ ಮಾಡಬೇಕು. ಅವರು ಆ ಕೆಲಸವನ್ನು ಬಿಟ್ಟು ಮಿಕ್ಕೆದ್ದೆಲ್ಲ ಮಾಡ್ತಾರೆ. ಕಾಲಹರಣ ಮಾಡ್ತಾರೆ. ಎಲ್ಲೊ ಒಂದು ಕಡೆ ಸಾವಾಯಿತು ಅಂದ್ರೆ ಐದು ಸರಿ ಅದನ್ನು ಹಾಕ್ತಾರೆ.. ಎಲ್ಲಾದರೂ ಕೊಲೆ ಆದರೂ ಅದನ್ನೆ ಪುನಃ ರಿಪೀಟ್ ಮಾಡಿ ಹಾಕ್ತಾರೆ. ಬರೀ ಈ ತರಹದ ಚರ್ಚೆ ಆಗ್ತಿದೆ ಹೊರತು ಪ್ರಜಾಪ್ರಭುತ್ವವನ್ನು ಮಜಭೂತುಪಡಿಸುವುದಕ್ಕೆ ಮತ್ತು ಸಮಾಜವನ್ನು ತಿದ್ದುವುದಕ್ಕೆ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ದುಷ್ಟ ವಿಚಾರಗಳನ್ನು ಅಳಿಸಲು ಕೆಲಸ ಮಾಡುತ್ತಿಲ್ಲ.

ಒಳ್ಳೇಯದಕ್ಕೆ ಸಮಯ ಕೊಟ್ಟು ಜನರ ಪ್ರಜ್ಞೆಯನ್ನು ಬಳಸಿ, ಅವರಲ್ಲಿ ಹೋರಾಟದ ಮನೋಭಾವವನ್ನು ಬೆಳೆಸಿ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವಂತಹ ಕೆಲಸ ಮಾಡಬೇಕಾದಂತಹ ಮಾಧ್ಯಮಗಳು ಕಾಲಹರಣ ಮಾಡುತ್ತಿವೆ. ಇದನ್ನು ನಾವು ನಾಲ್ಕಾರು ವರ್ಷಗಳಿಂದ ನೋಡ್ತ ಬಂದಿದ್ದೇವೆ.. ಇದರ ಬಗ್ಗೆ ಮಾತಾನಾಡುವ ಜನ ಕೂಡ ಇಲ್ಲ. ನಾವು ಸ್ವತಂತ್ರ ಪೂರ್ವದಲ್ಲಿ ಈ ಮಾದ್ಯಮಗಳನ್ನು ಹೇಗೆ ಉಪಯೋಗ ಮಾಡ್ತಿದ್ದೆವು, ಬ್ರಿಟೀಷರ ವಿರೋಧವಾಗಿ ನಾವು ಗುಲಾಮಗಿರಿಯಿಂದ ಹೊರಗೆ ಬರುವುದ್ದಕ್ಕಾಗಿ, ಶತ್ರುಗಳನ್ನು ಹೊಡೆದು ಓಡಿಸುವುದಕ್ಕಾಗಿ, ಪ್ರಜೆಗಳಲ್ಲಿ ಪ್ರಜ್ಞೆಯನ್ನು ತುಂಬಿಸುವಂತಹ ಕೆಲಸವನ್ನು ಮಾಡ್ತಾ ಇದ್ವಿ. ಈವತ್ತಿನ ಪತ್ರಿಕೆಗಳು ಅಂತಹ ಕೆಲಸ ಮಾಡಬೇಕು.

ಪ್ರಜಾಪ್ರಭುತ್ವವನ್ನು ಉಳಿಸುವಂತಹ ಕೆಲಸ, ನಮ್ಮ ಸಂವಿಧಾನವನ್ನು ಉಳಿಸುವಂತಹ ಕೆಲಸ ಮಾಡಬೇಕೇ ಹೊರೆತು ಕಾಲಹರಣ ಮಾಡುವುದು ಸರಿಯಲ್ಲ. ಈವತ್ತಿನ ದಿವಸ ಕರೋನ ಸಂದರ್ಭದಲ್ಲಿ ಹೆಂಡದ ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಯಾವಾಗ ಅಂಗಡಿ ತೆಗೀತಾರೆ ಯಾವಾಗ, ಕುಡಿಯೋಣ ಅಂತ. ಅವರಿಗೆ ಈ ಮಾಧ್ಯಮದವರು ಹೇಳುವುದು ದೂರ ದೂರ ನಿಂತುಕೊಳ್ಳಿ ಅಂತ. ಇವರ ಮಾತು ಕೇಳ್ತಾರೇನ್ರಿ ಕುಡಿಯುವ ಆತುರದಲ್ಲಿ ಇರುವಂತಹ ಜನ?

ಅಂಗಡಿ ತೆಗಯಬೇಡಿ ಅಂತ ಹೇಳುವುದು ಮಾದ್ಯಮದವರ ಕರ್ತವ್ಯವಾಗಿತ್ತು. ಯಾಕೆಂದರೆ ಅದರಿಂದ ಅನಾಹುತ ಆಗುತ್ತೆ, ಕರೋನ ಮತ್ತೆ ಜಾಸ್ತಿ ಆಗುತ್ತೆ ಅಂತ ಹೇಳಬೇಕಾಗಿತ್ತೆ ಹೊರೆತು, ಇವರು ತಿಳುವಳಿಕೆ ಕೊಡುವಂತಹ ರೀತಿಯಲ್ಲಿ ಅಲ್ಲ. ಈ ಮಾಧ್ಯಮದವರು ಏನೇನೋ ಮಾತಾಡ್ತಾರೆ, ಆದರೆ ಇದು ಸರಿ ಅಲ್ಲ. ನೀವು ದೂರ ದೂರ ನಿಂತಿಕೊಳ್ಳಿ ಅಂತ ಮಾತು ಬೇರೆ ಸಂದರ್ಭದಲ್ಲಿ ಹೇಳಲಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೆಂಡದಂಗಡಿ ಹತ್ತಿರ ನೀವು ಉಪದೇಶ ಮಾಡ್ತಿದೀರಿ. ಇದು ಆಗುತ್ತೇನ್ರಿ? ಇದು ಆಗದೇ ಇರುವಂತಹದು. ಈವತ್ತು ಕುಡಿಯಲು ನೂಕು ನುಗ್ಗಲು ಮಾಡಿದ್ದರಿಂದ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಆದ್ದರಿಂದ ನೀವು ವ್ಯವಹಾರಿಕವಾಗಿ ನಡೀಬೇಕು. ಈವತ್ತು ಸಮಸ್ಯೆ ಏನಿದೆ ಅದರ ಬಗ್ಗೆ ಪರಿಗಣಿಸಬೇಕು.

ಕರೊನ ಕಾರಣದಿಂದ ಈಗ ಜನ ಕುಡಿಯುವುದನ್ನು ನಿಲ್ಲಿಸಿದ್ದಾರೆ. ಯಾರೋ ಕುಡುಕರು ತುಂಬಾ ದಿನಾ ಕುಡೀದೇ ಇದ್ದರೆ ಆಗುವುದೇ ಇಲ್ಲ ಅನ್ನುವ ಜನರಿಗೆ ಬೇಕಾದರೆ ಪರ್ಮಿಟ್ಟು ಕೊಡಿ. ಆದರೆ ಸಾಮನ್ಯ ಜನರು ಕುಡಿಯುವುದನ್ನು ಬಿಡುವುದಕ್ಕೆ ತಯಾರು ಇರಬೇಕಾದ್ರೆ, ಅವರುಗಳಿಗೆ ಅಂಗಡಿಗಳು ಇಲ್ಲದೇ ಇರುವ ಹಾಗೆ ಮಾಡಿದರೆ ಬಿಟ್ಟೇ ಬಿಡ್ತಾರೆ… ಗುಜರಾತ್ ನಲ್ಲಿ ಈ ಕೆಲಸ ಮಾಡಿದ್ದಾರೆ. ತುಂಬಾ ಕುಡಿಯುವ ಚಟ ಇರುವ ಬೆರಳೆಣಿಕೆಯಷ್ಟು ಕುಡಕರಿಗೆ ಪರ್ಮಿಟ್ ಕೊಟ್ಟಿದ್ದಾರೆ, ಉಳಿದವರಿಗೆ ಅಂಗಡಿಗಳಿಲ್ಲ.

ಆ ರೀತಿಯ ವ್ಯವಸ್ಥೆ ಇಲ್ಲಿ ಆಗಬೇಕೇ ಹೊರೆತು ಸಾಲಾಗಿ ನಿಲ್ಲಿಸಿ ಲಾಠಿ ಚಾರ್ಜ್ ಆಗುವಂತೆ ಮಾಡುವುದು ವಿವೇಕವಲ್ಲ. ರೆಡ್ ಜೋನ್‌ನಲ್ಲಿ ಇರುವ ಕುಡುಕರು ಅಲ್ಲಿ ಕುಡಿತದ ಅಂಗಡಿಗಳು ಇಲ್ಲವಾದ್ದರಿಂದ ಕುಡಿತದ ಅಂಗಡಿಗಳು ತೆಗೆದಿರುವ ಬಡಾವಣೆಗಳಿಗೆ ನುಗ್ಗಿ ಬರುತ್ತಿದ್ದಾರೆ. ಮೊದಲು ಅದನ್ನು ತಡೆಗಟ್ಟಿ ಎಂದು ಪೋಲಿಸರಿಗೆ ಮತ್ತು ಮಾಧ್ಯಮಗಳಿಗೆ ಮನವಿ ಮಾಡಿಕೊಳ್ಳುತ್ತೇನೆ.

ಸರ್ಕಾರ ಆತುರದಲ್ಲಿ ಕುಡಿತದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಮಾಡಬಾರದು.


ಇದನ್ನೂ ಓದಿ: ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ


ನಮ್ಮ ಇಂಗ್ಲಿಷ್ ವೆಬ್ಸೈಟಿಗೆ ಭೇಟಿ ನೀಡಿ

https://gaurilankeshnews.com/


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...