Homeವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

- Advertisement -
- Advertisement -

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಬರೊಬ್ಬರಿ 108 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳ್ಳಿದೆ. ಈ ಐತಿಹಾಸಿಕ ಬದಲಾವಣೆಯ ಪ್ರಮುಖ ಅಂಶಗಳು ಇಲ್ಲಿವೆ.

ತಮಿಳುನಾಡು 2026ರ ಚುನಾವಣಾ ಫಲಿತಾಂಶ ಬಹುತೇಕರಲ್ಲಿ ಅಚ್ಚರಿ ಮೂಡಿಸಿರುವುದು ನಿಜ. ಏಕೆಂದರೆ ಆಕ್ಸೀಸ್ ಮೈ ಇಂಡಿಯಾ ಸಮೀಕ್ಷೆ ಹೊರತುಪಡಿಸಿ ಬಹುತೇಕ ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಡಿಎಂಕೆ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲಿದೆ ಅಥವಾ ಟಿವಿಕೆ ಕೇವಲ ಕೆಲವೇ ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಈ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಟಿವಿಕೆ ಪಕ್ಷವು ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತಿಗತಿಗಳಂತೆಯೇ, ತಮಿಳುನಾಡಿನಲ್ಲೂ ಈ ಬಾರಿ ವ್ಯವಸ್ಥಿತ ಬದಲಾವಣೆ ಕಂಡುಬಂದಿದೆ. ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಭೂತಪೂರ್ವ ಗೆಲುವಿನ ಹಿಂದೆ ಕೇವಲ ವಿಜಯ್ ಅವರ ವರ್ಚಸ್ಸು ಮಾತ್ರವಲ್ಲದೆ, ದ್ರಾವಿಡ ಪಕ್ಷಗಳ ಅನುಭವೀ ನಾಯಕರನ್ನು ತನ್ನತ್ತ ಸೆಳೆದುಕೊಂಡ ಚಾಣಾಕ್ಷತನವೂ ಅಡಗಿದೆ. ಇದು ಈ ಹಿಂದೆ ತಮಿಳುನಾಡಿನ ಎಂ.ಜಿ.ಆರ್ ಅಥವಾ ಅವಿಭಜಿತ ಆಂಧ್ರಪ್ರದೇಶದ ಎನ್.ಟಿ.ಆರ್ ಅವರಿಗೆ ಸಿಕ್ಕ ಬೆಂಬಲಕ್ಕಿಂತಲೂ ಭಿನ್ನವಾಗಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತ ಇಳಂಗೋವನ್ ರಾಜಶೇಖರನ್.

ಡಿಎಂಕೆ ಮತ್ತು ಎಐಎಡಿಎಂಕೆ ವಲಸೆ ನಾಯಕರಿಗೆ ಟಿಕೆಟ್:

ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಭೂತಪೂರ್ವ ಗೆಲುವಿಗೆ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯಿಂದ ಬಂದ ಅನುಭವೀ ನಾಯಕರ ವಲಸೆಯು ಅತ್ಯಂತ ಪ್ರಮುಖ ಕಾರಣವಾಗಿದೆ.

ಟಿವಿಕೆ ಪಕ್ಷವು 108 ಕ್ಷೇತ್ರಗಳಲ್ಲಿ ಜಯಗಳಿಸಲು ಸಾಮಾಜಿಕ ಮಾಧ್ಯಮಗಳ ಪ್ರಚಾರ, ಮಹಿಳಾ ಮತ್ತು ಯುವ ಮತದಾರರನ್ನು ಸೆಳೆದದ್ದು ಒಂದು ಕಾರಣವಾದರೆ, ಈ ಬಾರಿಯ ಚುನಾವಣೆಯಲ್ಲಿ ವಿಜಯ್ ಅವರು ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರೂ, ಕ್ಷೇತ್ರ ಮಟ್ಟದ ಸಮೀಕರಣಗಳನ್ನು ಸರಿದೂಗಿಸಲು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷದ ಮಾಜಿ ನಾಯಕರಿಗೆ ಗಮನಾರ್ಹ ಪ್ರಮಾಣದಲ್ಲಿ ಟಿಕೆಟ್ ನೀಡಿದ್ದು ಮತ್ತೊಂದು ಕಾರಣ.

ಡಿಎಂಕೆ ಪಕ್ಷದಲ್ಲಿ ಮುನಿಸಿಕೊಂಡಿದ್ದ ಸುಮಾರು 25ಕ್ಕೂ ಹೆಚ್ಚು ಪ್ರಮುಖ ನಾಯಕರು ಮತ್ತು ಮಾಜಿ ಪದಾಧಿಕಾರಿಗಳಿಗೆ ಟಿವಿಕೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಹಾಗೆಯೇ ಎಡಪ್ಪಾಡಿ ಪಳನಿಸ್ವಾಮಿ ಅವರ ನಾಯಕತ್ವದ ಮೇಲೆ ಅಸಮಾಧಾನ ಹೊಂದಿದ್ದ ಎಐಎಡಿಎಂಕೆ ಪಕ್ಷದ 30ಕ್ಕೂ ಹೆಚ್ಚು ಎರಡನೇ ಹಂತದ ನಾಯಕರು ವಿಜಯ್ ಅವರ ಪಕ್ಷ ಸೇರಿ ಸ್ಪರ್ಧಿಸಿದ್ದರು.

ಹೊಸದಾಗಿ ಸ್ಥಾಪನೆಯಾದ ಟಿವಿಕೆಗೆ ಪ್ರಬಲವಾದ ತಳಮಟ್ಟದ ಸಂಘಟನೆ (Ground level organization) ಇರಲಿಲ್ಲ. ಡಿಎಂಕೆ ಮತ್ತು ಎಐಎಡಿಎಂಕೆಯಿಂದ ಬಂದ ನಾಯಕರು ತಮ್ಮ ಜೊತೆಗೆ ಕಾರ್ಯಕರ್ತರ ಪಡೆ ಮತ್ತು ಬೂತ್ ಮಟ್ಟದ ಅನುಭವವನ್ನು ತಂದಿದ್ದು ವಿಜಯ್ ಅವರಿಗೆ ದೊಡ್ಡ ಬಲವಾಯಿತು. ದ್ರಾವಿಡ ಪಕ್ಷಗಳ ಮೂಲ ನಾಯಕರನ್ನೇ ಕಣಕ್ಕಿಳಿಸಿದ್ದರಿಂದ ಆ ಪಕ್ಷಗಳ ಸಾಂಪ್ರದಾಯಿಕ ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಟಿವಿಕೆ ಯಶಸ್ವಿಯಾಯಿತು.

ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸುವ ಉದ್ದೇಶದಿಂದ ವಿಜಯ್ ಅವರು ಹಳೆಯ ಪಕ್ಷಗಳ ಅನುಭವೀ ನಾಯಕರಿಗೆ ಮಣೆ ಹಾಕಿದ್ದರು. ಡಿಎಂಕೆ (DMK) ಪಕ್ಷದಿಂದ ಹೊರಬಂದು ಟಿವಿಕೆ ಸೇರಿದ್ದ 25ಕ್ಕೂ ಹೆಚ್ಚು ಪ್ರಮುಖ ನಾಯಕರಲ್ಲಿ 18 ಜನ ಭರ್ಜರಿ ಜಯ ಸಾಧಿಸಿದ್ದಾರೆ. ಡಿಎಂಕೆ ಹಿನ್ನೆಲೆಯಿಂದ ಬಂದವರ ಪೈಕಿ ಸುಮಾರು ಶೇ. 70 ಕ್ಕೂ ಹೆಚ್ಚು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದು ಟಿವಿಕೆ ಪಕ್ಷದ ಒಟ್ಟಾರೆ ಗೆಲುವಿನ ಸರಾಸರಿಗಿಂತಲೂ ಹೆಚ್ಚಿದೆ.

ತಮಿಳುನಾಡಿನಲ್ಲಿ ವಿಜಯ್ ನಾಯಕತ್ವದ ಟಿವಿಕೆ ಪಕ್ಷವು ಹೆಚ್ಚು ಸ್ಥಾನಗಳಿಸಲು ಕಾರಣವಾಗಿದ್ದು ವಿಜಯ್‌ಗೆ ಇದ್ದ ಜನಪ್ರಿಯತೆ ಕಾರಣ ಎಂಬುದು ಮಾತ್ರ ಅರ್ಧಸತ್ಯ. ಆದರೆ ವಾಸ್ತವ ಸಂಗತಿಗಳು ಬೇರೆಯದೇ ಇದ್ದು, ಅವುಗಳನ್ನು ಮರೆಮಾಚಿ ಜನಪ್ರಿಯತೆ, ಹೀರೋಯಿಸಂಗಳನ್ನು ಮುನ್ನಲೆಗೆ ತಂದರೆ ಪ್ರಜಾಪ್ರಭುತ್ವದ ನಿಜವಾದ ಅರ್ಥ ಮುಸುಕಾಗುವ ಅಪಾಯಗಳು ನಿಚ್ಚಳವಾಗಿವೆ.

ಡಿಎಂಕೆ ಯಿಂದ ಹೊರಬಂದು ಟಿವಿಕೆ ಪಕ್ಷ ಸೇರಿ ಗೆದ್ದ ಪ್ರಮುಖ ಕ್ಷೇತ್ರಗಳು:

ವಿಶೇಷವಾಗಿ ಉತ್ತರ ತಮಿಳುನಾಡು ಮತ್ತು ಡೆಲ್ಟಾ ಭಾಗದ ಕ್ಷೇತ್ರಗಳಲ್ಲಿ ಡಿಎಂಕೆಯಿಂದ ಬಂದ ಈ ನಾಯಕರು ಆ ಪಕ್ಷದ ಸಾಂಪ್ರದಾಯಿಕ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚೆನ್ನೈ ಭಾಗ:

ವಿ.ಎಸ್. ಬಾಬು (ಕೊಳಗತ್ತೂರು ಕ್ಷೇತ್ರ): ಇವರು ಸ್ವತಃ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನೇ ಸೋಲಿಸುವ ಮೂಲಕ ಈ ಚುನಾವಣೆಯ ‘ಜೈಂಟ್ ಕಿಲ್ಲರ್’ ಆಗಿ ಹೊರಹೊಮ್ಮಿದ್ದಾರೆ.

ಪಿ.ಕೆ. ಶೇಖರ್ ಬಾಬು (ಹಳೆ ರಾಯಪುರಂ): ಡಿಎಂಕೆಯ ಪ್ರಭಾವಿ ನಾಯಕರಾಗಿದ್ದ ಇವರು ಟಿವಿಕೆ ಸೇರಿ ಜಯಭೇರಿ ಬಾರಿಸಿದ್ದಾರೆ.

ಡೆಲ್ಟಾ ಮತ್ತು ಉತ್ತರ ತಮಿಳುನಾಡು:

ಎಸ್. ಆರ್. ರಾಜಾ (ತಾಂಬರಂ): ಚೆನ್ನೈನ ಉಪನಗರ ಭಾಗದಲ್ಲಿ ಡಿಎಂಕೆಯ ಸಾಂಪ್ರದಾಯಿಕ ಮತಗಳನ್ನು ಟಿವಿಕೆ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕುಂಭಕೋಣಂ ಮತ್ತು ತಂಜಾವೂರು ಭಾಗ: ಇಲ್ಲಿನ 3 ಕ್ಷೇತ್ರಗಳಲ್ಲಿ ಡಿಎಂಕೆ ಮಾಜಿ ಪದಾಧಿಕಾರಿಗಳು ಟಿವಿಕೆ ಚಿಹ್ನೆಯಡಿ ಗೆಲುವು ಸಾಧಿಸಿದ್ದಾರೆ. ಈ ನಾಯಕರಿಗೆ ತಮ್ಮ ಕ್ಷೇತ್ರದಲ್ಲಿ ಇದ್ದ ವೈಯಕ್ತಿಕ ವರ್ಚಸ್ಸು ಮತ್ತು ವಿಜಯ್ ಅವರ ಮೇಲಿದ್ದ ಯುವಜನತೆಯ ಕ್ರೇಜ್ ಒಟ್ಟಾದಾಗ, ಡಿಎಂಕೆ ಪಕ್ಷವನ್ನು ಸೋಲಿಸುವುದು ಸುಲಭವಾಯಿತು.

ಎಐಎಡಿಎಂಕೆಯಿಂದ ಬಂದು ಟಿವಿಕೆ ಪರ ಜಯಗಳಿಸಿದ ಪ್ರಮುಖರು

ಎಐಎಡಿಎಂಕೆಯಿಂದ ಬಂದ 30ಕ್ಕೂ ಹೆಚ್ಚು ನಾಯಕರಲ್ಲಿ 22 ಜನರು ಗೆಲುವು ಸಾಧಿಸಿದ್ದು, ಇವರು ಪ್ರಮುಖವಾಗಿ ‘ಕೊಂಗು ಬೆಲ್ಟ್’ನಲ್ಲಿ ಪಕ್ಷಕ್ಕೆ ಶಕ್ತಿ ನೀಡಿದ್ದಾರೆ:

ಕೊಂಗು ನಾಡು (ಪಶ್ಚಿಮ ತಮಿಳುನಾಡು):

ಸಿ.ವಿ. ಷಣ್ಮುಗಂ (ವಿಲ್ಲುಪುರಂ ಭಾಗ): ಎಐಎಡಿಎಂಕೆಯ ಗಟ್ಟಿಯಾಳಾಗಿದ್ದ ಇವರು ಉತ್ತರ ತಮಿಳುನಾಡಿನಲ್ಲಿ ಟಿವಿಕೆಗೆ ದೊಡ್ಡ ಬಲ ತಂದುಕೊಟ್ಟಿದ್ದಾರೆ.

ಪೊಲ್ಲಾಚಿ ಮತ್ತು ಈರೋಡ್ ಭಾಗ: ಇಲ್ಲಿನ 5 ಕ್ಷೇತ್ರಗಳಲ್ಲಿ ಎಐಎಡಿಎಂಕೆಯ ಮಾಜಿ ಶಾಸಕರು ಟಿವಿಕೆ ಅಭ್ಯರ್ಥಿಗಳಾಗಿ ಜಯಗಳಿಸಿದ್ದಾರೆ.

ದಕ್ಷಿಣ ತಮಿಳುನಾಡು:

ವಿ.ವಿ. ರಾಜನ್ ಚೆಲ್ಲಪ್ಪ (ಮಧುರೈ ಭಾಗ): ದಕ್ಷಿಣದ ಜಿಲ್ಲೆಗಳಲ್ಲಿ ಎಐಎಡಿಎಂಕೆಯ ವೋಟ್ ಬ್ಯಾಂಕ್‌ಗೆ ಕನ್ನ ಹಾಕಿ ಟಿವಿಕೆ ಬಾವುಟ ಹಾರಿಸಿದ್ದಾರೆ.

ತಿರುನಲ್ವೇಲಿ: ಇಲ್ಲಿನ 2 ಕ್ಷೇತ್ರಗಳಲ್ಲಿ ಎಐಎಡಿಎಂಕೆಯ ಪ್ರಮುಖ ನಾಯಕರು ಜಯ ಸಾಧಿಸಿದ್ದಾರೆ.

ಯಾವುದೇ ಒಂದು ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತ ಬಾರದೇ ಇರುವುದರಿಂದ, ತಮಿಳುನಾಡಿನಲ್ಲಿ ಮುಂದೆ ಏನಾಗಬಹುದು ಎಂಬ ಕುತೂಹಲ ಮೂಡುವುದು ಸಹಜ. 1967ರ ನಂತರ ಡಿಎಂಕೆ ಅಥವಾ ಎಐಎಡಿಎಂಕೆ ಅಲ್ಲದ ಮೊದಲ ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರಕ್ಕೇರಲು ಅವರು ಯಾರ ಜೊತೆ ಕೈಜೋಡಿಸಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿದೆ.

ಸಣ್ಣ ಪಕ್ಷಗಳ ಜೊತೆ ಟಿವಿಕೆ ಮೈತ್ರಿ

ಸರ್ಕಾರ ರಚಿಸಲು ವಿಜಯ್ ಅವರಿಗೆ ಕೇವಲ 10 ಶಾಸಕರ ಬೆಂಬಲ ಬೇಕಿದೆ. ಡಿಎಂಕೆ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ ಸೇರಿದಂತೆ ಸಣ್ಣ ಪಕ್ಷಗಳು ಒಟ್ಟು 14 ಸ್ಥಾನಗಳನ್ನು ಹೊಂದಿವೆ. ಒಂದು ವೇಳೆ ವಿಜಯ್ ಈ ಸಣ್ಣ ಪಕ್ಷಗಳನ್ನು ತಮ್ಮತ್ತ ಸೆಳೆದುಕೊಂಡರೆ ಸರ್ಕಾರ ರಚಿಸಬಹುದು. ಕಾಂಗ್ರೆಸ್‌ನ ಒಂದು ವರ್ಗವು ಮೊದಲೇ ಟಿವಿಕೆ ಜೊತೆ ಮೈತ್ರಿ ಬಯಸಿತ್ತು, ಹಾಗಾಗಿ ತನ್ನ 5 ಸದಸ್ಯರ ಬೆಂಬಲವನ್ನು ನೀಡುವ ಸಾಧ್ಯತೆಯಿದೆ. ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ತಲಾ ಇಬ್ಬರು ಶಾಸಕರನ್ನು ಹೊಂದಿವೆ. ಇವರೂ ವಿಜಯ್ ಜೊತೆ ಹೋದರೆ, ಸರ್ಕಾರ ರಚಿಸಲು ವಿಜಯ್‌ಗೆ ಕೇವಲ ಒಬ್ಬ ಶಾಸಕರ ಬೆಂಬಲ ಬೇಕಾಗುತ್ತದೆ, ಅದನ್ನು ದಲಿತ ಪರವಾದ ವಿಡುತಲೈ ಚಿರುತ್ತೈಗಳ್ ಕಚ್ಚಿ (VCK) ನೀಡಬಲ್ಲದು.

ಆದರೆ, ಇಲ್ಲಿರುವ ದೊಡ್ಡ ಸಮಸ್ಯೆ ಎಂದರೆ ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಕ್ಕೂಟದ (INDIA bloc) ಮೇಲೆ ಇದು ಬೀರುವ ಪ್ರಭಾವ. ಒಂದು ವೇಳೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ರಾಜ್ಯದಲ್ಲಿ ಡಿಎಂಕೆಯನ್ನು ಕೈಬಿಟ್ಟರೆ, ರಾಷ್ಟ್ರ ಮಟ್ಟದಲ್ಲಿ ಡಿಎಂಕೆ ಆ ಮೈತ್ರಿಕೂಟದಲ್ಲಿ ಮುಂದುವರಿಯುತ್ತದೆಯೇ ಎಂಬುದು ಸಧ್ಯದ ಪ್ರಶ್ನೆ? ಆದರೆ ರಾಜಕೀಯದಲ್ಲಿ ಯಾವುದು ಸಾಧ್ಯವಿಲ್ಲವೆಂದು ಹೇಳಲಾಗದು.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...