Homeಮುಖಪುಟನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಪ್ತಪದಿ ತುಳಿಯಿರಿ: ಇದು ತಮಾಷೆಯಲ್ಲ ಸತ್ಯ

ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಪ್ತಪದಿ ತುಳಿಯಿರಿ: ಇದು ತಮಾಷೆಯಲ್ಲ ಸತ್ಯ

ಈ ಏಳು ಹೆಜ್ಜೆಗಳನ್ನು ಸಾಮಾನ್ಯವಾಗಿ ವೈಯುಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ಮನೋಶಾಸ್ತ್ರ ತಜ್ಞರು ಮತ್ತು ವ್ಯಾವಹಾರಿಕ ಸಮಸ್ಯೆಯ ಪರಿಹಾರಕ್ಕೆ ಕಂಪನಿಯ ವ್ಯವಸ್ಥಾಪಕರು ಬಳಸುತ್ತಾರೆ.

- Advertisement -
- Advertisement -

ರೀ ಸ್ವಾಮಿ, ಮದುವೆ ಮಾಡಿಕೊಳ್ಳುವುದರಿಂದ ಒಂದು ಸಮಸ್ಯೆ ಬಗೆಹರಿದರೆ ಇನ್ನೇಳು ಸಮಸ್ಯೆ ಹುಟ್ಟಿಕೊಳ್ಳುತ್ತವಲ್ಲಾ, ಅದಕ್ಕೇನು ಎಂದು ನೀವು ಕೇಳಬಹುದು, ಕೇಳಿ. ಆದರೆ ನಾನು ಮದುವೆಯ ಸಪ್ತ-ಪದಿಯ ಬಗ್ಗೆ ಹೇಳಲು ಹೊರಟಿಲ್ಲ. ನಾನು ಹೇಳುತ್ತಿರುವುದು ಸಮಸ್ಯೆಗಳ ಪರಿಹಾರಕ್ಕೆ ಇರುವ ಏಳು ಸರಳ ಹೆಜ್ಜೆಗಳ ಬಗ್ಗೆ. ಎಲ್ಲಾ ಸಮಸ್ಯೆಗಳಿಗೂ ಇದೇ ಪರಿಹಾರ ಎಂದು ಹೇಳುವಷ್ಟು ಧಾರ್ಷ್ಟ್ಯತೆ ನನಗಿಲ್ಲ. ಆದರೆ ಬಹುತೇಕ ಸಮಸ್ಯೆಗೆ ಇದರಿಂದ ಪರಿಹಾರ ಕಂಡುಕೊಳ್ಳಬಹುದು ಎಂಬ ನಂಬಿಕೆ ಇದೆ. ಯಾವುದೋ ಸಮಸ್ಯೆ ಉದ್ಭವಿಸಿದಾಗ, ನಮಗೇನೂ ತೋಚದಿದ್ದಾಗ, ವಿಷಯ ಜ್ಞಾನ ಇಲ್ಲದಿದ್ದಾಗ, ಪರಿಣಿತರ ಸಲಹೆ ಪಡೆಯುವುದು ಸ್ವಾಭಾವಿಕ ಮತ್ತು ಅವಶ್ಯಕ. ಆದರೆ, ಕೊನೆಯಲ್ಲಿ ಅವರು ಕೊಟ್ಟ ಸಲಹೆಯನ್ನು ಪಾಲಿಸಬೇಕೋ ಬೇಡವೋ ಆ ನಿರ್ಧಾರ ನಾವೇ ಮಾಡಬೇಕಾಗುತ್ತದೆ.

ಇತರರಿಗೆ ಬೇಕೋ, ಬೇಡವೋ, ಕೇಳದೇ ಪುಗಸಟ್ಟೆ ಸಲಹೆ ನೀಡುವುದು ನಮ್ಮೆಲ್ಲರ ಹವ್ಯಾಸ. ಅದೇ ರೀತಿ ಸಲಹೆ ಇತರರಿಂದ ಬಂದಾಗ ನಮಗೆ ಕೋಪ ಬರುವುದೂ ಸಹಜ. ಆದ್ದರಿಂದ ಸಮಸ್ಯೆ ಪರಿಹಾರಕ್ಕೆ ತಜ್ಞರ ಸಲಹೆ ಪಡೆಯುವುದು ಅವಶ್ಯಕ. ಈ ಕೆಳಕಂಡ ಸಪ್ತಪದಿಯನ್ನು ನೀವು ಪಾಲಿಸಿದ್ದೇ ಆದಲ್ಲಿ ತಜ್ಞರ ಸಲಹೆ ಪಡೆಯುವುದೂ ಸಹ ಸುಲಭ ಆಗುತ್ತದೆ. ಆದರೆ ಮೊದಲೇ ಹೇಳಿದಂತೆ ಸಲಹೆಯನ್ನು ಅನುಷ್ಠಾನಗೊಳಿಸುವುದು ಮತ್ತು ಸಲಹೆ ಪರಿಣಾಮಕಾರಿಯಾಗದೇ ಇದ್ದಲ್ಲಿ, ಅದನ್ನು ಪಾಲಿಸಿದ್ದಕ್ಕಾಗಿ ಜವಾಬ್ದಾರಿ ಹೊರುವುದು ನಿಮ್ಮ ಕರ್ತವ್ಯವೇ ಆಗಿರುತ್ತದೆ. ಈ ಏಳು ಹೆಜ್ಜೆಗಳನ್ನು ಸಾಮಾನ್ಯವಾಗಿ ವೈಯುಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ಮನೋಶಾಸ್ತ್ರ ತಜ್ಞರು ಮತ್ತು ವ್ಯಾವಹಾರಿಕ ಸಮಸ್ಯೆಯ ಪರಿಹಾರಕ್ಕೆ ಕಂಪನಿಯ ವ್ಯವಸ್ಥಾಪಕರು ಬಳಸುತ್ತಾರೆ.

ಸಪ್ತ-ಪದಿ ಪರಿಹಾರಗಳು

  1. ಸಮಸ್ಯೆ ಏನೆಂದು ಸರಿಯಾಗಿ ಅರ್ಥ ಮಾಡಿಕೊಳ್ಳಿ: ಮುಕ್ಕಾಲು ಮೂರು ಪಾಲು ನಮಗೆ ಸಮಸ್ಯೆ ಏನೆಂದೇ ತಿಳಿದಿರುವುದಿಲ್ಲ. ಹಾಗಾಗಿ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸಿ ಬರೆದುಕೊಳ್ಳಿ. ಸಮಸ್ಯೆಗೂ ಅದರ ಲಕ್ಷಣಕ್ಕೂ ವ್ಯತ್ಯಾಸವಿರುತ್ತದೆ. ಉದಾಹರಣೆ ನಿಮಗೆ ತಲೆ ನೋಯುತ್ತಿದೆ ಅಥವಾ ಆಗ್ಗಾಗ್ಗೆ ತಲೆನೋವು ಬರುತ್ತಿರುತ್ತದೆ ಎಂದರೆ ತಲೆನೋವು ನಿಮ್ಮ ಸಮಸ್ಯೆ ಅಲ್ಲ, ಅದು ಕೇವಲ ಒಂದು ಲಕ್ಷಣ ಮಾತ್ರ. ಅದಕ್ಕೆ ನಿಜವಾದ ಕಾರಣ ಏನೆಂದು ತಿಳಿದುಕೊಳ್ಳಬೇಕು. ತಲೆನೋವಿಗೆ ಇರುವ ಕಾರಣ ನಿಜವಾದ ಸಮಸ್ಯೆ, ತಲೆನೋವಲ್ಲ. ಮೂಲ ಸಮಸ್ಯೆ ಏನೆಂದು ಸರಿಯಾಗಿ ತಿಳಿದಾಗ ಪರಿಹಾರ ಹುಡುಕುವುದು ಸುಲಭವಾಗುತ್ತದೆ. ಮೂಲ ಸಮಸ್ಯೆ ಹುಡುಕಲು ಮ್ಯಾನೇಜ್ಮೆಂಟ್ ಟೆಕ್ನಿಕ್ನಲ್ಲಿ ರೂಟ್ ಕಾಸ್ ಎನಾಲಿಸಿಸ್ (Management Technique – Root Cause Analysis) ಅಡಿಯಲ್ಲಿ ಫೈವ್-ವೈ (Five Why) ಎಂಬ ಒಂದು ವಿಧಾನ ಅನುಸರಿಸುತ್ತಾರೆ. ಇದರನ್ವಯ ಐದು ಬಾರಿ “ಏಕೆ” ಎಂದು ಪ್ರಶ್ನಿಸುವುದು. ಇದರಿಂದ ಮೂಲ ಸಮಸ್ಯೆಯ ಹತ್ತಿರ ತಲುಪಲು ಅನುಕೂಲವಾಗುತ್ತದೆ. ಸಣ್ಣ ಮಕ್ಕಳಲ್ಲಿ, ಎಲ್ಲವನ್ನೂ ತಿಳಿಯಬೇಕೆಂಬ ಕುತೂಹಲದಿಂದ, ನಾವು ಅವರಿಗೆ ನಾವು ಏನು ಹೇಳಿದರೂ ಅವರು “ಏಕೆ” ಎಂದು ಪ್ರಶ್ನಿಸುವುದನ್ನು ನಾವು ನೋಡಿರಬಹುದು. ಇದು ನೈಸರ್ಗಿಕ ಜಾಣತನದ ಲಕ್ಷಣ. ಇದನ್ನು ಮಕ್ಕಳಲ್ಲಿ ಬೆಳೆಯಲು ಬಿಡಬೇಕು. ನಮ್ಮ ದುರದೃಷ್ಟವೆಂದರೆ ಈ ಚಿಕ್ಕ ಮಕ್ಕಳ ತಿಳಿಯುವ ಕುತೂಹಲದಿಂದ ಬೇಸತ್ತು, ಅವರ ತಲೆಯ ಮೇಲೆ ಮಟ್ಟಿ, ಪ್ರಶ್ನೆಯನ್ನು ಮೊಟಕುಗೊಳಿಸಿ, ಅದೇ ಪಾಠವನ್ನು ಮ್ಯಾನೇಜ್ಮೆಂಟ್ ಟೆಕ್ನಿಕ್ ಎಂದು ಅವರು ಎಂ.ಬಿ.ಎ. ತರಗತಿಗೆ ಬಂದಾಗ ಕಲಿಸಲು ಪ್ರಯತ್ನಿಸುತ್ತೇವೆ.

2. ನಿಮಗೆ ಏನು ಪರಿಹಾರ ಬೇಕಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ: ನಿಮ್ಮ ಪರಿಹಾರದ ಗುರಿ ಖಚಿತವಾಗಿರಬೇಕು ಮತ್ತು ಕೈಗೆಟುಕುವಂತಾಗಿರಬೇಕು. ಪದೇ ಪದೇ ನೆಗಡಿ ಬರುತ್ತಿದೆ ಅಂದರೆ ಅದಕ್ಕೆ ಮೂಗು ಕುಯ್ದುಕೊಳ್ಳುವುದು ಪರಿಹಾರವಲ್ಲ. ನಿಮ್ಮ ಸಮಸ್ಯೆಯ ಲಕ್ಷಣಗಳನ್ನು ಆಧರಿಸಿ ಪರಿಹಾರದ ಗುರಿಯನ್ನೂ ನಿರ್ಧರಿಸಬಹುದು. ಉದಾಹರಣೆಗೆ, ಮೂಗಿನಿಂದ ನೀರು ಸೋರುವುದು ನಿಲ್ಲಬೇಕು, ತಲೆ ಭಾರವಾಗಿರುವುದು ಹಗುರವಾಗಬೇಕು, ದೇಹದ ತಾಪಮಾನ ಸುಸ್ಥಿತಿಗೆ ಬರಬೇಕು, ಇತ್ಯಾದಿ.

3. ಬ್ರೇನ್ ಸ್ಟಾರ್ಮಿಂಗ್: ಸಮಸ್ಯೆಗೆ ಇರುವ ಎಲ್ಲಾ ಉಪಾಯಗಳನ್ನು, ಪರಿಹಾರ ಕೊಡಬಲ್ಲ ವ್ಯಕ್ತಿಗಳನ್ನು, ಸಮಸ್ಯೆಯಿಂದ ಬಾಧಿತರಾದವರನ್ನು ಸಾಧ್ಯವಾದಲ್ಲಿ ಒಂದೆಡೆ ಕಲೆ ಹಾಕಿ. ನಿಮ್ಮ ಟೀಕೆ/ಟಿಪ್ಪಣಿ/ಅನಿಸಿಕೆ/ಉಪಾಯಗಳನ್ನು ತಿಳಿದಷ್ಟು ಮಟ್ಟಿಗೆ, ವಿಸ್ತಾರವಾಗಿ ಬರೆದುಕೊಳ್ಳಿ. ಬೇರೆಯವರಿಂದ ಬಂದ ಸಲಹೆಗಳನ್ನೂ ಅದೇ ಕಾಗದದಲ್ಲಿ ಬರೆಯುತ್ತಾ ಹೋಗಿ. ಅದು ಎಷ್ಟೇ ಮೂರ್ಖತನ ಎನಿಸಿದರೂ ಪರವಾಗಿಲ್ಲ, ಪಟ್ಟಿಯಲ್ಲಿ ಬರೆದುಕೊಳ್ಳಿ.

ಅಮೇರಿಕಾ ದೇಶದಲ್ಲಿ ಕ್ಯಾಂಪ್ಬೆಲ್ ಎಂಬ, ಸಾಕಷ್ಟು ಹೆಸರುವಾಸಿಯಾದ, ಸೂಪ್ ತಯಾರಿಕೆ ಕಂಪನಿ ಇದೆ. ನಿಮಗೆ ತಿಳಿದಂತೆ ವಿದೇಶಿಯರು ಫೋರ್ಕ್-ನೈಫ್-ಸ್ಪೂನ್ (ಮುಳ್ಳು-ಚಾಕು-ಚಮಚ) ಸಂಸ್ಕೃತಿಯವರು, ಊಟಕ್ಕೆ ಮುನ್ನ ಅಥವಾ ಊಟಕ್ಕೆ ಇನ್ನೂ ಸ್ವಲ್ಪ ಸಮಯವಿದೆ, ಅಲ್ಲಿಯವರೆಗೆ ಹೊಟ್ಟೆ ಹಸಿವನ್ನು ನಿಯಂತ್ರಿಸಬಹುದು  ಎಂದು ಹಗುರವಾದ ಆಹಾರವಾಗಿ ಸೂಪ್ ಕುಡಿಯುತ್ತಾರೆ. ಕಂಪನಿಯವರು ಇದರ ಮಾರಾಟ ಹಾಗೂ ಮಾರುಕಟ್ಟೆ ಹೆಚ್ಚಿಸಲು ಸೌಲಭೋಪಾಯಗಳನ್ನು ಹುಡುಕುತಿದ್ದರು. ಅದಕ್ಕಾಗಿ ಏರ್ಪಡಿಸಿದ ಒಂದು ಬ್ರೇನ್ ಸ್ಟಾರ್ಮಿಂಗ್ ಕಾರ್ಯಾಗಾರದಲ್ಲಿ ಬಂದ ಒಂದು ಟೀಕೆ/ಅನಿಸಿಕೆ ಎಂದರೆ “ಸೂಪನ್ನು ಚಮಚದಿಂದ ಕುಡಿಯಬಹುದೇ ವಿನ: ಫೋರ್ಕಿನಿಂದ ಅಲ್ಲ”. ಇದೆಂತಹ ಅಸಂಬದ್ಧ ಟೀಕೆ ಎಂದು ಅನಿಸಿದರೂ ಸಹ ಬ್ರೇನ್ ಸ್ಟಾರ್ಮಿಂಗ್ ಗುಂಪಿನ ನಾಯಕ ಅದನ್ನು ತೆಗೆದುಹಾಕಲಿಲ್ಲ. ಹಾಗಾದರೆ ಸೂಪನ್ನು ಫೋರ್ಕಿನಿಂದ ತಿನ್ನುವಂತಾದರೆ ಅದರಲ್ಲಿ ಏನೋ ಹೊಸತನ ತರಬಹುದು ಎಂದು ನಿರ್ಧರಿಸಿ ತಯಾರಿಸಿದುದೇ “ಚಂಕೀ ಸೂಪ್” ಅಂದರೆ ತಿನ್ನುವ ತುಣುಕುಗಳುಳ್ಳ – ತರಕಾರಿ, ಚಿಕನ್, ಮಟನ್, ಫಿಷ್ ತುಣುಕುಗಳನ್ನು ಜೊತೆಗೂಡಿಸಿದ ಗಟ್ಟಿಯಾದ ಸೂಪ್. ಇದು ಕಂಪನಿಯ ವ್ಯಾಪಾರಕ್ಕೆ ಸಾಕಷ್ಟು ಲಾಭದಾಯಕವಾಯಿತು.

4. ಪರ್ಯಾಯ ಉಪಾಯ/ಮಾರ್ಗಗಳನ್ನು ಹುಡುಕಿ: ಮೇಲೆ ತಿಳಿಸಿದಂತೆ ಪ್ರತಿಯೊಂದು ವಿಧಾನದ ಸಾಧಕ-ಬಾಧಕ/ಪರ-ವಿರುದ್ಧದ ಚರ್ಚೆಯಲ್ಲಿ ಭಾಗವಹಿಸಿ. ಆಗು/ಹೋಗುಗಳನ್ನು ಸರಿಯಾಗಿ ವಿಶ್ಲೇಷಿಸಿ. ನೀವು ಪರಿಣಿತರ ಬಳಿಗೆ ಹೋಗುವ ಮುನ್ನ, ಮೇಲೆ ಹೇಳಿದ ಮೂರು ಹೆಜ್ಜೆ ಈಗಾಗಲೇ ಹಾಕಿದ್ದಲ್ಲಿ, ಸಮಸ್ಯೆಯನ್ನು ಸರಿಯಾಗಿ ತಜ್ಞರೊಡನೆ ಚರ್ಚಿಸುವುದೂ ಸಹ ನಿಮಗೆ ಸುಲಭವಾಗುತ್ತದೆ. ಅವರು ನೀಡಿದ ಸಲಹೆಯನ್ನೂ ನಿಮ್ಮ ಪಟ್ಟಿಗೆ ಸೇರಿಸಿ ಪ್ರತಿಯೊಂದರ ಸಾಧಕ-ಬಾಧಕ ಗಹನವಾಗಿ ವಿಶ್ಲೇಷಿಸಿ. ಬರಬಹುದಾದ ಅಡಚಣೆಗಳು ಏನು ಎಂಬುದನ್ನು ಪಟ್ಟಿಮಾಡಿ, ಅದಕ್ಕೆ ಪರಿಹಾರ/ಪರ್ಯಾಯ ಏನು ಎಂಬುದನ್ನೂ ಈಗಲೇ ತಿಳಿದುಕೊಳ್ಳಿ. ಉದಾಹರಣೆಗೆ, ಹಣದ ಅಡಚಣೆಯಾಗಬಹುದೇ, ಸ್ಥಳದ ಸಮಸ್ಯೆ ಉದ್ಭವಿಸಬಹುದೇ, ನೀರು/ವಿದ್ಯುತ್ ಅಥವಾ ಇತರ ಸಂಪನ್ಮೂಲಗಳ ಕೊರತೆಯಾಗಬಹುದೇ, ಕಾನೂನಿನ ತೊಡಕು ಬರಬಹುದೇ ಎಂದೆಲ್ಲಾ ಯೋಚಿಸಿ ಅದಕ್ಕೆ ಪರಿಹಾರವನ್ನೂ ಬರೆದುಕೊಳ್ಳಿ.

5. ಸರಿಯಾದ ಪರಿಹಾರದ ಆಯ್ಕೆ ಮಾಡಿ:ನಿಮ್ಮ ಸ್ವಂತ ಇಚ್ಛೆ/ಇಷ್ಟಕ್ಕನುಗುಣವಾಗಿ ಯಾವ ಪರಿಹಾರ ಸೂಕ್ತ ಎನಿಸುತ್ತದೋ ಅದನ್ನು ಮೊದಲು ಪರಿಗಣಿಸಿ. ಕೇವಲ ಯಾವುದರಿಂದ ಅತ್ಯಂತ ಹೆಚ್ಚು ಲಾಭ, ಕಡಿಮೆ ಹಾನಿ ಅಥವಾ ಅನುಷ್ಠಾನಕ್ಕೆ ಸುಲಭ ಎನಿಸುತ್ತದೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದೇನೂ ಇಲ್ಲ. ಯಾವ ಆಯ್ಕೆಯನ್ನು ನೀವು ಮುಂದೆ ಸಮರ್ಥಿಕೊಳ್ಳಲು ಸಾಧ್ಯವಾಗುತ್ತದೋ ಅದಕ್ಕೆ ಅದ್ಯತೆ ನೀಡಿ. ಪರಿಹಾರದ ಆಯ್ಕೆ ಮಾಡಿಕೊಂಡ ನಂತರ ಅದರ ಅನುಷ್ಠಾನಕ್ಕೆ ಕಟ್ಟುನಿಟ್ಟಾದ ಸಮಯ ಸಾರಿಣಿ ಮತ್ತು ಬೇಕಾದ ಸಾಧನ/ಸಂಪನ್ಮೂಲಗಳನ್ನು ಕಲೆ ಹಾಕುವುದೂ ಅಷ್ಟೇ ಮುಖ್ಯ. ನಿಗದಿತ ಸಮಯಕ್ಕೆ ಹಾಕಿಕೊಂಡ ನಿರ್ದಿಷ್ಟ ಗುರಿ ನೀವು ತಲುಪಲೇ ಬೇಕು. ಸಮಸ್ಯೆಯಿಂದ ಬಾಧಿತರಾದ, ಪರಿಹಾರದ ಅನುಷ್ಠಾನದಲ್ಲಿ ಸಹಭಾಗಿಯಾಗುವವರ ಸಭೆ ಕರೆದು ನಿಮ್ಮ ನಿರ್ಧಾರ ತಿಳಿಸಿ, ಅನುಷ್ಠಾನದ ಸಮಯ ಸಾರಿಣಿ, ಅವರ ಪಾತ್ರ ಇವುಗಳನ್ನು ಸ್ಪಷ್ಟವಾಗಿ ತಿಳಿಸಿ, ಅವರ ಸಹಕಾರ ಕೋರಿ.

6. ಅನುಷ್ಠಾನಗೊಳಿಸಿ: ನೀವು ಹಾಕಿಕೊಂಡ ಸಮಯಸಾರಿಣಿಯನ್ನು ಅನುಸರಿಸಿ ನಿಮ್ಮ ಪರಿಹಾರವನ್ನು ಅನುಷ್ಠಾನಗೊಳಿಸಿ. ಈ ಹಂತದಲ್ಲಿ ಪರಿಹಾರ ಸಫಲವಾಗುತ್ತದೋ ಇಲ್ಲವೋ ಅದರ ಚಿಂತೆ ಬಿಡಿ. ರಸ್ತೆಯ ಮೇಲೆ ನಿಗಾ ಇಡಿ. ಅನಾವಶ್ಯಕ ಒತ್ತಡಕ್ಕೆ ಒಳಗಾಗಬೇಡಿ, ಇತರರಿಗೂ ಒತ್ತಡ ಹೇರಬೇಡಿ ಆದರೆ ಪ್ರಗತಿಯ ಬಗ್ಗೆ ಸೂಕ್ಷ್ಮವಾಗಿ ಕಣ್ಣಿಡಿ.

7. ಮೌಲ್ಯಮಾಪನ: ನಿಮ್ಮ ಪರಿಹಾರದ ಸಫಲತೆಯನ್ನು ಒರೆ ಹಚ್ಚಿ ನೋಡಿ. ಮೂಲ ಸಮಸ್ಯೆ ಪರಿಹಾರವಾಗಿದ್ದಲ್ಲಿ, ಅಭಿನಂದನೆಗಳು. ಆಗಿಲ್ಲದಿದ್ದರೂ ಚಿಂತೆಯಿಲ್ಲ, ಮತ್ತೊಮ್ಮೆ ಸಮಸ್ಯೆಯ ಲಕ್ಷಣಗಳನ್ನು ಅವಲೋಕಿಸಿ. ಬಹುಶಃ ನಿಮ್ಮ ಆಯ್ಕೆ ಸಮರ್ಪಕವಾಗಿರಲಿಲ್ಲವೋ ಅಥವಾ ವಸ್ತುಸ್ಥಿತಿ ಬದಲಾಗಿರಬಹುದು. ಆದರೆ ನಿಮ್ಮ ಕಲಿಕೆ ಎಂದೂ ವ್ಯರ್ಥವಾಗುವುದಿಲ್ಲ, ಮರುಪ್ರಯತ್ನ ಮಾಡಲು ನೀವು ಈಗ ಸಜ್ಜಾಗಿದ್ದೀರಿ. ಮರಳಿ ಯತ್ನವ ಮಾಡು ನೀ ಮನುಜ ಗುರಿ ಮುಟ್ಟುವ ತನಕ, ಇರುವುದೊಂದು ಬದುಕು ಬಿಡಬೇಡ ನೀ ಗೆಲ್ಲುವ ತವಕ.


ಇದನ್ನೂ ಓದಿ: ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿಯವರ ಲೇಖನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...

ತಿರುವನಂತಪುರಂ | 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧು : ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳಿಗೆ ನಾಲ್ಕು ವಾರಗಳ ಒಳಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ಜೂ.24) ಆದೇಶಿಸಿದೆ. ಜನವರಿ ತಿಂಗಳಲ್ಲಿ ಕೌನ್ಸಿಲರ್‌ಗಳ ಪ್ರಮಾಣವಚನ ನಡೆದಿತ್ತು. ಡೆಪ್ಯುಟಿ ಮೇಯರ್...

ಎಸ್‌ಐಆರ್‌ನಿಂದ ಹೊರಗಿಡಲಾದ ಜನರಿಗೆ ಪಡಿತರ ನಿರಾಕರಣೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸೂಚನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಸೌಲಭ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುತ್ತಿರುವ ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...