ಕೊರೊನಾ ಭಯಕ್ಕೆ ಲಾಕ್ ಡೌನ್ ಆಗಿ ದೇಶದ ಭಾಗಶಃ ಜನರು ಮನೆಯೊಳಗೆ ಕುಳಿತಿರುವಾಗ ಇವರೊಬ್ಬರು ಮಾತ್ರ “ಹೆದ್ದಾರಿಗಳಲ್ಲಿ ಪಾದಗಳಲ್ಲಿ ರಕ್ತ ಸುರಿಸುತ್ತಾ ಹತಾಶರಾಗಿ ನಡೆಯುತ್ತಿರುವ ಕಾರ್ಮಿಕರ ಕಡೆಗೆ ತಮ್ಮ ಕ್ಯಾಮರಾ ಕಣ್ಣನ್ನು ತಿರುಗಿಸಿ, ವಲಸೆ ಕಾರ್ಮಿಕರ ದಾರುಣ ಕತೆಯನ್ನು ದೇಶದ ಎದುರಿಗೆ ಬಿಚ್ಚಿಡುತ್ತಿದ್ದಾರೆ. ಲಾಕ್ ಡೌನ್ ಆಗಿದಂದಿನಿಂದ 60 ದಿನಗಳಿಗಿಂತ ಹೆಚ್ಚು ಕಾಲ ರಸ್ತೆಯಲ್ಲೇ ಇದ್ದು ಪತ್ರಕರ್ತರಾಗಿ ತಮ್ಮ ಬದ್ದತೆಯನ್ನು ಎತ್ತಿ ಹಿಡಿದಿದ್ದಾರೆ. ಅವರೇ ಪ್ರಸಿದ್ದ ಪತ್ರಕರ್ತೆ “ಬರ್ಖಾ ದತ್.”
18 ಡಿಸೆಂಬರ್ 1971 ರಂದು ಜನಿಸಿದ ಬರ್ಖಾ ದತ್, ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಜನವರಿ 2017 ರವರೆಗೂ ಅವರು 21 ವರ್ಷಗಳ ಕಾಲ ಎನ್ಡಿಟಿವಿ ಯಲ್ಲಿ ಕಾರ್ಯ ನಿರ್ವಹಿಸಿದ್ದರು. 1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾರ್ಗಿಲ್ ಯುದ್ದದ ವರದಿಯನ್ನು ಯುದ್ದ ಭೂಮಿಯಲ್ಲಿದ್ದೇ ವರದಿ ಮಾಡಿದ ನಂತರ ಬರ್ಖಾ ದತ್ ಹೆಚ್ಚು ಪ್ರಸಿದ್ದಿ ಗಳಿಸಿದರು. ಇವರು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಸೇರಿದಂತೆ, ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸದ್ಯ ಬರ್ಖಾ ದತ್ ಅವರು ಮೋಜೊ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಾಕ್ ಡೌನ್ ಪ್ರಾರಂಭದಿಂದಲೂ ವಲಸೆ ಕಾರ್ಮಿಕರೊಂದಿಗೆ ಪ್ರಯಾಣಿಸಿ ಅವರ ಬಗೆಗಿನ ವರದಿಗಳನ್ನು ದೇಶದ ಮುಂದೆ ಇಡುತ್ತಿದ್ದಾರೆ.
ಕಳೆದ ಶನಿವಾರ, ಲಕ್ನೋದಿಂದ 200 ಕಿಲೋಮೀಟರ್ ದೂರದಲ್ಲಿರುವ ಔರಿಯಾದಲ್ಲಿ 26 ವಲಸೆ ಕಾರ್ಮಿಕರು ಮುಂಜಾನೆ 3.30 ರ ಸುಮಾರಿಗೆ ಅಫಘಾತವಾಗಿ ಸಾವನ್ನಪ್ಪಿದ್ದರು. ಘಟನೆಯಲ್ಲಿ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೆ ಉತ್ತರ ಪ್ರದೇಶ ಸರ್ಕಾರ ಈ ವಲಸೆ ಕಾರ್ಮಿಕರ ಶವಗಳನ್ನು ತೆರೆದ ಟ್ರಕ್ನಲ್ಲಿ ಐಸ್ ಚಪ್ಪಡಿಗಳ ಮೇಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿ ವಾರಸುದಾರರ ಮನೆಗೆ ಸಾಗಹಾಕಲು ನೋಡಿತು.
How UP was sending bodies of workers killed in #AuraiyaAccident home. Bags of plastic on ice slabs in open truck.. .. The ice melted. Will our hearts remain frozen? pic.twitter.com/Ue1K7IFtPT
— barkha dutt (@BDUTT) May 19, 2020
ಈ ವಿಷಯದ ಬಗ್ಗೆ ಬರ್ಖಾ ಅವರ ವರದಿಯ ನಂತರವೇ, ಸಾಮಾಜಿಕ ಜಾಲತಾಣಗಳು ಹಾಗೂ ಇತರ ಪ್ರಮುಖ ಸುದ್ದಿ ತಾಣಗಳು ಅದನ್ನು ವರದಿ ಮಾಡಿದವು. ಘಟನೆಯನ್ನು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕಟುವಾಗಿ ಟೀಕಿಸಿದ್ದರು. ಇವರ ವರದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ನಂತರ ಎಚ್ಚತ್ತ ಆಡಳಿತವನ್ನು ಶವವನ್ನು ಆಂಬುಲೆನ್ಸ್ಗಳಿಗೆ ಸ್ಥಳಾಂತರಿಸಿ ಕೊಂಡೊಯ್ಯಿತು.
The bodies of workers killed in #AuraiyaAccident were finally transferred into this ambulance after @HemantSorenJMM objected to victims bodies being bundled into plastic, thrown into the back of open truck, with those still alive and injured. No words some days. pic.twitter.com/2pBLIYcYKV
— barkha dutt (@BDUTT) May 19, 2020
ಟ್ರಕ್ನ ಹಿಂಭಾಗದಲ್ಲಿ ಆಸನಕ್ಕಾಗಿ ಒಬ್ಬ ಪ್ರಯಾಣಿಕರಿಗೆ 3,000 ರೂಪಾಯಿಗಳನ್ನು ವಿಧಿಸುವ ಕಥೆಯೊಂದಿಗೆ ವಲಸೆ ಕಾರ್ಮಿಕರು ಕತೆಯನ್ನು ಅವರು ದೇಶದ ಮುಂದೆ ಅವರು ತೆರೆದಿಟ್ಟಿದ್ದರು.
ಏಷ್ಯಾದಲ್ಲೇ ಅತ್ಯಂತ ದೊಡ್ಡ ಸ್ಲಂ ಆದ ಧಾರವಿಯಲ್ಲಿ, ಎರಡು ಬಾರಿ ಕೊರೊನಾ ನೆಗೆಟಿವ್ ಪರೀಕ್ಷೆಗೆ ಒಳಪಟ್ಟಿದ್ದರೂ ಬಿಎಂಸಿ ನೌಕರನೊಬ್ಬ ಸಾವನ್ನಪ್ಪಿದ್ದರು. ಅವರ ಮರಣದ 3 ದಿನಗಳ ನಂತರ, ಅವರು ಕೊರೊನಾ ಸೋಂಕಿತ ಎಂದು ಕಂಡುಬಂದಿತ್ತು. ಆ ಸಮಯದಲ್ಲಿ ಅವರ ಕುಟುಂಬದ ಇತರ ಇಬ್ಬರಿಗೂ ಸಹ ಕೊರೊನಾ ಸೋಂಕು ಇರುವುದು ದೃಡಪಟ್ಟಿತ್ತು. ಇದರ ಬಗ್ಗೆ ಬರ್ಖಾ ದತ್ ವಿಶೇಷ ತನಿಖಾ ವರದಿಯನ್ನು ಮಾಡಿದ್ದರು.
From Inside Dharavi, my report on the BMC Worker who tested negative twice for Coronavirus, his body was handed over to his family. 3 days after his death he tested positive. In that time, 2 others in the family tested positive. Our special investigation on @themojo_in pic.twitter.com/wN6lwsI7pt
— barkha dutt (@BDUTT) May 15, 2020
1947 ರಲ್ಲಿ ವಿಭಜನೆಯಾದ ನಂತರ ಭಾರತ ಕಂಡ ಅತಿದೊಡ್ಡ ಸಾಮೂಹಿಕ ವಲಸೆಯ ಹೃದಯ ಕಲಕುವ ಕಥೆಗಳನ್ನು ಮಾತ್ರ ಇವರು ನೀಡುತ್ತಿಲ್ಲ. ಕೊರೊನಾದಂತಹ ಬಿಕ್ಕಟ್ಟಿನಲ್ಲಿಯೂ ಕೆಲವು ಕೋಮುವಾದ ಹರಡುವ ನಿರೂಪಕರಿಗೆ ವಿರುದ್ದವಾಗಿ ಭರವಸೆ ತುಂಬುವ ಹಾಗೂ ಸೌಹಾರ್ಧದ ಹೃದಯಂಗಮ ಕಥೆಗಳನ್ನು ಸಹ ದೇಶದ ಮುಂದೆ ಇಡುತ್ತಿದ್ದಾರೆ.
From Hyderabad, my report on how a Hindu, Christian and Muslim came together with different religious rituals to welcome back their neighbour, who had got Corona from the Tablighi Jamaat meet in Delhi. This is India. Not what prime time anchors claim to show you. pic.twitter.com/ZYUujZr1Xs
— barkha dutt (@BDUTT) May 19, 2020
ಲಾಕ್ ಡೌನ್ ನಿಂದ ಉಂಟಾದ ಯುದ್ಧದಂತಹ ಪರಿಸ್ಥಿತಿಯಲ್ಲಿ, ಹಸಿವೆಂದರೆ ಏನೆಂದು ಕಂಡ 12 ವರ್ಷದ ಬಾಲಕಿಯ, “ತಾನು ದೊಡ್ಡವಳಾದರೆ ಹಸಿವು ತಣಿಸುತ್ತೇನೆ” ಎನ್ನುವ ಕನಸುಗಳ ಕತೆಯನ್ನು ಬರ್ಖಾ ದೇಶಕ್ಕೆ ಹೇಳುತ್ತಾರೆ.
On a Rainy windswept night, crammed at the back of a Truck, a girl of 12 still smiles and shares her dream of adulthood with me. "I will help the poor when I am older. I will give them food." This is the Story of Pallavi, a Migrant Worker's Child . My report for @themojo_in pic.twitter.com/EMe1k2zvwT
— barkha dutt (@BDUTT) May 17, 2020
ತಮ್ಮ 63 ದಿನಗಳ ಪ್ರಯಾಣದುದ್ದಕ್ಕೂ ಭರವಸೆ, ಹತಾಶೆ, ದುಃಖ, ಸಾವು ನೋವಿನ ಈ ರೀತಿಯ ನೂರಾರು ಕಥೆಗಳನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದಾಸೀನತೆಯನ್ನು ದೇಶದ ಮುಂದೆ ತೋರಿಸುತ್ತಾರೆ.
ಕೊರೊನಾದಂತಹ ಸಾಂಕ್ರಮಿಕ ರೋಗದ ಸಮಯದಲ್ಲಿ 60 ದಿನಗಳಿಗಿಂತ ಹೆಚ್ಚು ಕಾಲ ರಸ್ತೆಯಲ್ಲಿ ಇದ್ದು ವರದಿ ಮಾಡುವುದೆಂದರೆ ಅದು ಮನೆಯಲ್ಲಿದ್ದು ಓದಿದಂತೆ, ಕೇಳಿದಂತೆ ಸುಲಭ ಮಾತೇನಲ್ಲ ಎಂದು ಬಹಳಷ್ಟು ಜನರು ಇವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾಗರಿಕ ರಾಷ್ಟ್ರದ ಮುಖವಾಗಿದ್ದ ಬರ್ಖಾ ದತ್, ಕೊರೊನಾ ಕಾಲದ ಯುದ್ಧದಲ್ಲಿ ನಾಗರಿಕರ ಧ್ವನಿಯಾಗಿ ಮತ್ತೊಮ್ಮೆ ನಮ್ಮೆದುರಿಗೆ ನಿಂತದ್ದಾರೆ. ಆದರೆ ಕಿವುಡರಲ್ಲದ ಆದರೆ ಕಿವುಡರಂತೆ ನಟಿಸುತ್ತಿರುವ ಆಡಳಿತಗಾರರು ಇನ್ನೂ ಹಾಗೆಯೆ ಇದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕೃಪೆ:ಸ್ಕೂಪ್ ವೂಪ್
ಓದಿ: ಕೊರೊನಾ ಬಿಕ್ಕಟ್ಟು: ವಿರೋಧ ಪಕ್ಷವೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿತು?
ಓದಿ: ತಾನು ಮಾಡುವ ಮಹಾನ್ ತಪ್ಪುಗಳಿಗೆ ಮೋದಿ ಬೆಲೆತೆರದೆ ಉಳಿದುಕೊಳ್ಳುವುದಾದರೂ ಹೇಗೆ?