Homeದಲಿತ್ ಫೈಲ್ಸ್ವಿಗ್ರಹ ಕದ್ದಿದ್ದಾನೆಂದು ಶಂಕಿಸಿ ದಲಿತ ವ್ಯಕ್ತಿಯ ಹತ್ಯೆ: ಮೂವರ ಬಂಧನ

ವಿಗ್ರಹ ಕದ್ದಿದ್ದಾನೆಂದು ಶಂಕಿಸಿ ದಲಿತ ವ್ಯಕ್ತಿಯ ಹತ್ಯೆ: ಮೂವರ ಬಂಧನ

- Advertisement -
- Advertisement -

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ದೇವಸ್ಥಾನದ ವಿಗ್ರಹ ಕದ್ದಿದ್ದಾನೆ ಎಂದು ಶಂಕಿಸಿ ದಲಿತ ವ್ಯಕ್ತಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತಂಗರೈ ಪೊಲೀಸರು ಬುಧವಾರ ಸಂಜೆ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಎಸ್. ಗೋಕುಲ್ (23), ವಿ.ಪೆರುಮಾಳ್ (24) ಮತ್ತು ಟಿ. ಸುರೇಶ್ (23) ಎಂದು ಗುರುತಿಸಲಾಗಿದೆ. ಪ್ರಬಲ ಜಾತಿಯವರಾದ ಇವರು ಚಿನ್ನ ಕಣಕ್ಕನಪಟ್ಟಿಯ ದಲಿತ ಸಮುದಾಯದ ಸೇಕರ್ (70) ಎಂಬವರನ್ನು ಹತ್ಯೆಗೈದ ಆರೋಪವಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಪುತ್ರಿ ಪಿ ಮುರುಗವಲ್ಲಿ (35) ಬಂಧಿತ ಇಬ್ಬರು ಮಹಿಳೆಯರನ್ನು ಬಿಡುಗಡೆ ಮಾಡುವಂತೆ ಕೃಷ್ಣಗಿರಿ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ. ತನ್ನ ತಾಯಿಯ ಮೌಖಿಕ ದೂರನ್ನು ಉತ್ತಂಗರೈ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ, ಪ್ರಬಲ ಜಾತಿಯ ಹಿಂದೂ ಯುವಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ನನ್ನ ತಂದೆಯ ಮೇಲೆ 15 ಕ್ಕೂ ಹೆಚ್ಚು ಪ್ರಬಲ ಜಾತಿಯ ಹಿಂದೂಗಳು ಹಲ್ಲೆ ನಡೆಸಿದ್ದಾರೆ ಎಂದು ನಾನು ಪೊಲೀಸರಿಗೆ ಹೇಳಿದ್ದೇನೆ. ಆದರೆ, ಅವರು ಇಬ್ಬರು ಮಹಿಳೆಯರನ್ನು ಮಾತ್ರ ಬಂಧಿಸಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು” ಎಂದು ಮುರುಗವಲ್ಲಿ ಆಗ್ರಹಿಸಿದ್ದಾರೆ.

ಉತ್ತಂಗರೈ ಪೊಲೀಸರು ಮುರುಗವಲ್ಲಿಯ ಆರೋಪವನ್ನು ನಿರಾಕರಿಸಿದ್ದಾರೆ. ಸೇಕರ್ ಅವರ ಪತ್ನಿ ಶಿವಗಾಮಿ ಅವರು ತಮ್ಮ ಮಗಳು ಕಾಣೆಯಾಗಿದ್ದಾರೆ ಎಂದು ಮಾತ್ರ ದೂರು ನೀಡಿದ್ದರು. ಅವರು ತನ್ನ ಪತಿಯ ಬಗ್ಗೆ ಉಲ್ಲೇಖಿಸಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಪನ್ನುನ್ ಹತ್ಯೆ ಸಂಚಿನಲ್ಲಿ ಗುಜರಾತ್‌ನ ವ್ಯಕ್ತಿ: ಅಮೆರಿಕದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...