Homeಮುಖಪುಟಬಿಲ್ಕಿಸ್ ಬಾನು ಪ್ರಕರಣ: ಜೈಲಿಗೆ ಮರಳಿದ ಎರಡೇ ವಾರಕ್ಕೆ ಓರ್ವ ಅಪರಾಧಿಗೆ ಪೆರೋಲ್ ನೀಡಿದ ಕೋರ್ಟ್‌

ಬಿಲ್ಕಿಸ್ ಬಾನು ಪ್ರಕರಣ: ಜೈಲಿಗೆ ಮರಳಿದ ಎರಡೇ ವಾರಕ್ಕೆ ಓರ್ವ ಅಪರಾಧಿಗೆ ಪೆರೋಲ್ ನೀಡಿದ ಕೋರ್ಟ್‌

- Advertisement -
- Advertisement -

ಜೈಲಿಗೆ ಶರಣಾದ ಎರಡೇ ವಾರಕ್ಕೆ ಬಿಲ್ಕಿಸ್ ಬಾನು ಅತ್ಯಾಚಾರಿಗಳ ಪೈಕಿ ಒಬ್ಬನಿಗೆ ಗುಜರಾತ್ ಹೈಕೋರ್ಟ್‌ ಪೆರೋಲ್ ನೀಡಿದೆ. ಒಟ್ಟು 11 ಅತ್ಯಾಚಾರ ಅಪರಾಧಿಗಳ ಪೈಕಿ ಪ್ರದೀಪ್ ಮೋಧಿಯಾ ಎಂಬಾತನಿಗೆ ಐದು ದಿನಗಳ ಪೆರೋಲ್ ನೀಡಲಾಗಿದ್ದು, ಆತನ ಮಾವ ನಿಧನರಾಗಿರುವ ಹಿನ್ನೆಲೆ ಗುಜರಾತ್‌ನ ದಾಹೋದ್‌ ಜಿಲ್ಲೆಯ ರಣಧೀಕ್‌ಪುರದ ಮನೆಗೆ ತೆರಳಲು ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಪೆರೋಲ್ ಪಡೆದಿರುವ ಅತ್ಯಾಚಾರಿ ಪ್ರದೀಪ್ ಮೋಧಿಯಾ ಜನವರಿ 21ರಂದು ತಡರಾತ್ರಿ ಜೈಲಿಗೆ ಶರಣಾಗಿದ್ದ. ಈತ ಸೇರಿದಂತೆ 11 ಅಪರಾಧಿಗಳಿಗೆ ಜೈಲಿಗೆ ಮರಳುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ನ್ಯಾಯಮೂರ್ತಿ ಎಂ.ಆರ್‌ ಮೆಂಗ್ಡೆ ಅವರು ಫೆಬ್ರವರಿ 5 ರಂದು ಫೆಬ್ರವರಿ 7 ರಿಂದ 11 ರವರೆಗೆ ಮೋಧಿಯಾಗೆ ಪೆರೋಲ್ ನೀಡಿದ್ದಾರೆ. ಮೋಧಿಯಾ ಸುಪ್ರೀಂ ಕೋರ್ಟ್‌ ಹೇಳಿದಂತೆ ಸರಿಯಾದ ಸಮಯಕ್ಕೆ ಜೈಲಿಗೆ ಮರಳಿದ್ದಾನೆ. ಅಲ್ಲದೆ ಜೈಲಿನ ಆತನ ಗುಣ ನಡತೆ ಚೆನ್ನಾಗಿದೆ. ಹಾಗಾಗಿ, 30 ದಿನಗಳ ಪೆರೋಲ್ ನೀಡುವಂತೆ ಅತನ ಪರ ವಕೀಲರು ಮನವಿ ಮಾಡಿದ್ದರು.

“ಹೈಕೋರ್ಟ್ ಅಪರಾಧಿ ಮೋಧಿಯಾಗೆ ಮನೆಗೆ ತೆರಳಲು ಐದು ದಿನಗಳ ಪೆರೋಲ್ ನೀಡಿದೆ. ಪೆರೋಲ್ ಷರತ್ತುಗಳ ಪ್ರಕಾರ, ಆತ ರಣಧೀಕ್‌ಪುರ ಪೊಲೀಸ್ ಠಾಣೆಗೆ ವರದಿ ಮಾಡುವ ಅಗತ್ಯವಿಲ್ಲ. ಪೆರೋಲ್ ಅವಧಿಯಲ್ಲಿ ಪೊಲೀಸರು ಆತನ ಮೇಲೆ ನಿಗಾ ಇಡಬೇಕಾಗಿಲ್ಲ. ಆತ ತಾನೇ ಜೈಲಿಗೆ ಹಿಂದಿರಿಗಬೇಕು ಎಂದು ಹೈಕೋರ್ಟ್‌ ಹೇಳಿದ್ದಾಗಿ ದಾಹೋದ್‌ನ ಲಿಮ್ಖೇಡಾದ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಶಾಖ ಜೈನ್ ಅವರನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವರದಿ ಮಾಡಿದೆ.

ಗುಜರಾತ್‌ ಸರ್ಕಾರ ಎಲ್ಲಾ 11 ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವ ಮುನ್ನ, 2008ರಿಂದ ಪೇರೋಲ್‌ನಲ್ಲಿ 1041 ಮತ್ತು ಫರ್ಲೋದಲ್ಲಿ 223 ದಿನಗಳ ಕಾಲ ಮೋಧಿಯಾ ಜೈಲಿನಿಂದ ಹೊರಗಿದ್ದ.

ಜನವರಿಯಲ್ಲಿ, 11 ಅಪರಾಧಿಗಳಿಗೆ ಅವಧಿ ಪೂರ್ವ ಬಿಡುಗಡೆಯನ್ನು ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಗುಜರಾತ್ ರಾಜ್ಯವು “ಅಪರಾಧಿಗಳೊಂದಿಗೆ ಸಹಕರಿಸಿದೆ” ಎಂದು ಪೀಠ ಹೇಳಿತ್ತು. ಈ ಭಯದಿಂದಲೇ ನ್ಯಾಯಾಲಯವು ಬಿಲ್ಕಿಸ್ ಬಾನು ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿದ್ದು ಎಂದು ಹೇಳಿತ್ತು.

ಬಿಲ್ಕಿಸ್‌ ಬಾನು ಅತ್ಯಾಚಾರ ನಡೆಯುವಾಗ 2002ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವಿತ್ತು. ಎಲ್ಲಾ 11 ಅತ್ಯಾಚಾರಿಗಳನ್ನು ಸನ್ನಡೆತೆಯ ಕಾರಣ ನೀಡಿ 2022ರ ಆಗಸ್ಟ್ 15 ರಂದು ಬಿಜೆಪಿ ಸರ್ಕಾರವೇ ಬಿಡುಗಡೆ ಮಾಡಿತ್ತು. ಅತ್ಯಾಚಾರ ಅಪರಾಧಿಗಳು ಎಲ್ಲರೂ ಬಿಜೆಪಿ ಸದಸ್ಯರು ಅಥವಾ ಅದರೊಂದಿಗೆ ಸಂಪರ್ಕ ಇರುವವರು ಎಂದು ಹೇಳಲಾಗ್ತಿದೆ. ಈ ಹಿಂದೆ ತಾತ್ಕಾಲಿಕ ಪೆರೋಲ್ ಮೇಲೆ ಇದ್ದಾಗ ಅಪರಾಧಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಇದೆ. ಅಪರಾಧಿಗಳ ಬಿಡುಗಡೆ ಕುರಿತು ನಿರ್ಧಿರಿಸಲು ಸರ್ಕಾರ ರಚಿಸಿದ್ದ ಸಮಿತಿ ಸದಸ್ಯರಲ್ಲಿ ಒಬ್ಬರಾದ ಬಿಜೆಪಿ ಶಾಸಕ “ಅತ್ಯಾಚಾರಿಗಳು ಬಿಡುಗಡೆಗೆ ಅರ್ಹರು, ಏಕೆಂದರೆ ಅವರೆಲ್ಲ ಉತ್ತಮ ಸಂಸ್ಕಾರ ಅಥವಾ ಮೌಲ್ಯಗಳನ್ನು ಹೊಂದಿರುವ ಬ್ರಾಹ್ಮಣರು” ಎಂದಿದ್ದರು.

ಇದನ್ನೂ ಓದಿ : ಉದ್ಧವ್ ಠಾಕ್ರೆ ಬಣದ ನಾಯಕನ ಹತ್ಯೆ ಆರೋಪಿ ನಾಲ್ಕು ದಿನಗಳ ಹಿಂದೆ ಸಿಎಂ ಏಕನಾಥ್ ಶಿಂದೆಯನ್ನು ಭೇಟಿಯಾಗಿದ್ದ: ಸಂಜಯ್ ರಾವುತ್ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...