Homeಕರ್ನಾಟಕಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

ಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

- Advertisement -
- Advertisement -

| ಶುದ್ಧೋಧನ |

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಶಿರಸಿಯ ‘ಸು’ಪ್ರಸಿದ್ಧ ಸ್ವಯಂಘೋಷಿತ ಪರಿಸರ ಪರಾಕ್ರಮಿ ಅನಂತ ಹೆಗಡೆ ಆಶೀಸರ್‍ಗೆ ನಿಗಮ-ಮಂಡಳಿ ಹುದ್ದೆ ದಕ್ಕುತ್ತಿದೆ. ಅಂಥದೊಂದು ಗದ್ದುಗೆ ಏರುವ ಯಾವ ಯೋಗ್ಯತೆ ಇಲ್ಲದಿದ್ದರೂ ಆಶೀಸರ ಮಾಣಿಗೆ ಯೋಗ ಖುಲಾಯಿಸುತ್ತಿರುವುದು ಪಕ್ಕಾಚೆಡ್ಡಿ ಚಮತ್ಕಾರದಿಂದಷ್ಟೇ! ತಾನೊಬ್ಬ ಹುಟ್ಟಾ ಸಂಘಿ ಸರದಾರನೆಂತಲೂ ಪರಿಸರ ಬಚಾವಾಗಿರುವುದೇ ತನ್ನ ಮೂರೂವರೆ ದಶಕದ ಹಗಲಿರುಳಿನ ಹಾರಾಟದಿಂದೆಂತಲೂ ಎಂಬಂತೆ ಆರೆಸ್ಸೆಸ್‍ನ ಆಯಕಟ್ಟಿನ ರಿಂಗ್‍ಮಾಸ್ಟರ್‍ಗಳೆದುರು ಅದ್ಭುತ ಪ್ರದರ್ಶನ ಕೊಡಬಲ್ಲ ಆಶೀಸರ್ ಗೂಟದ ಕಾರು ಪಟಾಯಿಸುತ್ತಿದ್ದಾನೆ. ಬಿಜೆಪಿ-ಆರೆಸ್ಸೆಸ್‍ನ ಬ್ರಾಹ್ಮಣ ಲಾಬಿ 2008ರಲ್ಲಿ ಆಶೀಸರ್‍ಗೆ ಬಳುವಳಿಯಾಗಿ ಕೊಟ್ಟಿತ್ತು. ಈಗ ಅದೇ ಆಶೀಸರ್‍ಗೆ ಅದೇ ಕೇಸರಿ ಜನಿವಾರ ಕೂಟ ಜೀವ ವೈವಿಧ್ಯ ಮಂಡಳಿಯಲ್ಲಿ “ಪುನರ್ವಸತಿ” ಕಲ್ಪಿಸಿದೆ!

ಇದು ಉತ್ತರ ಕನ್ನಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನ್ನು ಕಿಚಾಯಿಸುತ್ತಿದೆ. ಸಹಜವಾಗೇ ಪಕ್ಷಕಟ್ಟಿದ ಹಿಂದುಳಿದ ವರ್ಗದ ಎರಡನೇ ಸ್ತರದ ಮರಿಮುಖಂಡರು ಕೆರಳಿದ್ದಾರೆ; ಪಕ್ಷಕ್ಕಾಗಿ ತಮ್ಮನ್ನು ದುಡಿಸಿಕೊಂಡು ಮಹತ್ವದ ಲಾಭದ ಸ್ಥಾನ-ಮಾನವೆಲ್ಲ ಬ್ರಾಹ್ಮಣರಿಗೆ ಕೊಡಬೇಕಾಗುತ್ತಿದೆ ಎಂಬ ಅಸಮಾಧಾನ ಭುಗಿಲೆದ್ದಿದೆ. ಎಂಪಿ ಅನಂತ್ಮಾಣಿ, ಸ್ಪೀಕರ್ ಕಾಗೇರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಮೀಸಲಿಡಲ್ಪಟ್ಟಿರುವ “ಅನರ್ಹ” ಶಿವರಾಮ ಹೆಬ್ಬಾರ್ ಮತ್ತು ನಿಗಮ-ಮಂಡಳಿಗೆ ವಕ್ಕರಿಸಿರುವ ಆಶೀಸರ ಎಲ್ಲರೂ ಹವ್ಯಕ ಬ್ರಾಹ್ಮಣ ಸಮುದಾಯದವರು. ಜಿಲ್ಲಾ ಬಿಜೆಪಿ ಅಧ್ಯಕ್ಷತೆ ಕೊಂಕಣಿ ಬ್ರಾಹ್ಮಣ ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗ್ಡೆಗೆ ಕೊಡಲು ರಹಸ್ಯ ತಯಾರಿ ಮತ್ತೊಂದೆಡೆ ನಡೆದಿದೆ. ಒಟ್ಟಿನಲ್ಲಿ ಬ್ರಾಹ್ಮಣರ ಹಿಂದೂತ್ವದ ಅಧಿಕಾರ ರಾಜಕಾರಣದ ಯುದ್ಧದಲ್ಲಿ ದೀವರು, ಮೀನುಗಾರರು, ಹಾಲಕ್ಕಿ ಒಕ್ಕಲಿಗರೇ ಮುಂದಾದ ಶೂದ್ರರು ಬರೀ ಕಾಲಾಳುಗಳು ಮಾತ್ರ.

ಶೂದ್ರರ ಕೈಲಿ ಲಾಠಿಕೊಟ್ಟು ಶೀಟಿ ಊದುತ್ತಾ ಬೇಳೆ ಬೇಯಿಸಿಕೊಳ್ಳುವ ಜನಿವಾರ ಪಡೆಯ ತೆರೆಮರೆ ತಂತ್ರಗಾರರಲ್ಲಿ ಆಶೀಸರನೂ ಒಬ್ಬನೆಂಬುದಕ್ಕೆ ಅನುಮಾನವೇ ಇಲ್ಲ. ಸ್ವಜಾತಿ ಅನಂತ್ಮಾಣಿಗೇ ಟಾಂಗುಕೊಟ್ಟು ಎಂಪಿಗಿರಿ ಟಿಕೆಟ್ ಪಡೆಯಲು ಈತ ಚೆಡ್ಡಿ ಬಿಡಾರದಲ್ಲಿ ವಶೀಲಿ ಕಾರ್ಯಾಚರಣೆ ಮಾಡಿದ್ದೂ ಇದೆ. ಹಾಗಂತ ಉತ್ತರ ಕನ್ನಡ ಬಿಜೆಪಿಗೆ ಈತನಿಂದ ನಯಾಪೈಸೆ ಫಾಯ್ದೆಯಿಲ್ಲ. ಬ್ರಾಹ್ಮಣೇತರ ಕಾರ್ಯಕರ್ತರು ಕಟ್ಟಿದ ಹುತ್ತದಲ್ಲಿ ಸದ್ದಿಲ್ಲದೆ ಸೇರಿಕೊಳ್ಳುವ ಘಟಸರ್ಪವೆಂಬ ಚರ್ಚೆ ಸ್ಥಳೀಯ ಬಿಜೆಪಿಯಲ್ಲೀಗ ಜೋರಾಗಿದೆ. ಈತನ ಪರಿಸರ ಧೋರಣೆಯೂ ಇಬ್ಬಂದಿ ಸ್ವಜಾತಿ ಅಡಿಕೆ ತೋಟಿಗರಿಗೆ ಸರ್ಕಾರಿ ಯೋಜನೆಗಳಿಂದ ತೊಂದರೆ ಆಗುತ್ತದೆಂದಾಗ ಆಶೀಸರ್‍ನಲ್ಲಿ ಅತ್ಯುಗ್ರ ಪರಿಸರ ಕಾಳಜಿ ಶುರುಹೊಡೆಯುತ್ತದೆ! ಉತ್ತರ ಕನ್ನಡದ ಅಭಿವೃದ್ಧಿಯ ಭಾಗ್ಯದ ಬಾಗಿಲನ್ನೇ ತೆರೆಯಬಲ್ಲ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಆಶೀಸರ್ ನೇತೃತ್ವದ ಪರಿಸರವಾಧಿ ತಂಡ ಕಲ್ಲು ಹಾಕುತ್ತಲೇ ಬಂದಿದೆ!!

ಈ ರೈಲು ಹಳಿಯಿಂದ ಅರಣ್ಯ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ, ಪರಿಸರ ಸರ್ವನಾಶವಾಗುತ್ತದೆಂದು ಬೊಬ್ಬಿರಿವ ಆಶೀಸರ್‍ಗೆ ತನ್ನ ಸಮುದಾಯಕ್ಕೆ ಅನುಕೂಲವಾಗುವ ಹಾವೇರಿ-ಶಿರಸಿ ರೈಲು ಮಾರ್ಗದ ಪರಿಸರ ಹಾನಿ ಗೌಣ! ಕುಮಟಾ-ಶಿರಸಿ ರಸ್ತೆ ಅಗಲಗೊಂಡು ರಾಷ್ಟ್ರೀಯ ಹೆದ್ದಾರಿಯಾದರೆ ಜೀವ ವೈವಿಧ್ಯಕ್ಕೆ ಧಕ್ಕೆ ಎಂಬ ವಾದ ಈ ಪರಿಸರ “ತಜ್ಞ”ನದು. ಆನರ ಬಹುಬೇಡಿಕೆಯ ಜಿಲ್ಲೆಯ ಮಹತ್ವದ ಯೋಜನೆಯಿದು. ಆಶೀಸರ್ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷನಾಗುತ್ತಲೇ ಶಿರಸಿ-ಕುಮಟಾ ರಸ್ತೆ ಅಗಲೀಕರಣ ಯೋಜನೆಗೆ ಎಳ್ಳು-ನೀರು ಬಿಟ್ಟಂತಾಗಿದೆ!! ಪರಿಸರ ಸಂರಕ್ಷಣೆ ಕುರಿತು ಉದ್ದುದ್ದ ಭಾಷಣ ಬಿಗಿಯುವ ಈ ಪರಿಸರ ದುರಂಧರ ಎಕರೆಗಟ್ಟಲೆ ಅರಣ್ಯ ಕಬಳಿಸಿ ಸಮೃದ್ಧ ಅಡಿಕೆ ತೋಟ ಮಾಡಿಕೊಂಡಿರುವ ಅಪವಾದಕ್ಕೆ ತುತ್ತಾಗಿರುವುದು ವಿಪರ್ಯಾಸವೇ ಸರಿ!!

ಕಾಡು ನುಂಗಿರುವ “ಕ್ಯಾತಿ”ಯ ಆಶೀಸರ ಸ್ವರ್ಣವಲ್ಲಿ ಮಠದ ಹುಸಿ ಹಸಿರು ಸ್ವಾಮಿಯ ಆಸ್ಥಾನದ ಪರಿಸರ ಪಂಡಿತ. ಕಾವಿ-ಚೆಡ್ಡಿ ಪ್ರಭಾವದಿಂದ ರಾಜ್ಯ ಬಿಜೆಪಿಯ ಪರಮೋಚ್ಚ ನಾಯಕ ಸಂತೋಷ್‍ಜೀ ಕೃಪಾಕಟಾಕ್ಷಕ್ಕೆ ಪಾತ್ರನಾಗಿರುವ ಆಶೀಸರ್ ಮಾಣಿಗೆ ರಾಜ್ಯ ಜೀವ ವೈವಿಧ್ಯ ಮಂಡಳಿ ಪಡೆಯುವುದಕ್ಕೆ ತ್ರಾಸೇನೂ ಆಗಿಲ್ಲ! ಆಶೀಸರ್ ನೇಮಕಾತಿ ಘೋಷಣೆ ಆಗುತ್ತಲೇ ಉತ್ತರ ಕನ್ನಡ ಬಿಜೆಪಿ ಬಣ ಬಡಿದಾಟಕ್ಕೆ ಬಣ್ಣ ಬಂದುಬಿಟ್ಟಿದೆ. ಎಂಪಿ ಅನಂತ್ಮಾಣಿಗೆ ಮಂಡಳಿ ಅಧ್ಯಕ್ಷತೆ ಆಶೀಸರ್‍ಗೆ ಕೊಟ್ಟಿರುವುದು ಇಷ್ಟವಾಗಿಲ್ಲ. ಅನಂತ್ಮಾಣಿ ಎದುರಾಳಿ ಸ್ಪೀಕರ್ ಕಾಗೇರಿ- “ಪಾಪ, ಆಶೀಸರ್‍ಗೆ ಗೂಟದ ಕಾರೊಂದು ಕೊಡೋದ್ರಿಂದ ತೊಂದ್ರೆಂತದೂ ಇಲ್ಲೆ” ಎಂದು ಸಮಾಧಾನ ಮಂತ್ರ ಪಠಿಸುತ್ತಿದ್ದಾರೆ. ಆಶೀಸರ್ ನೇಮಕಾತಿಯನ್ನ ದೊಡ್ಡದೊಂದು ವರ್ಗ ಬಲವಾಗಿ ವಿರೋಧಿಸುತ್ತಿದೆ.

ಪಕ್ಷಕ್ಕಾಗಿ ಹಲವು ವರ್ಷದಿಂದ ನಿಷ್ಠೆಯಿಂದ ದುಡಿದ ಶೂದ್ರರನ್ನು ಕಡೆಗಣಿಸಿ ಜನಿವಾರ ಲಾಬಿ ಮಾಡೋರಿಗೆ ಅವಕಾಶ ಕೊಡುವ ಹೈಕಮಾಂಡ್ ವಿರುದ್ಧ ಕೂಗೆದ್ದಿದೆ. ಆಶೀಸರ್ ನೇಮಕಾತಿ ರದ್ದು ಮಾಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ಗೆ ಲಗ್ಗೆ ಹಾಕಲು ಕಾರ್ಯಕರ್ತರು ಸ್ಕೆಚ್ ಹಾಕುತ್ತಿದ್ದಾರೆ. ಅಸಮಾನಿತರ ಬೆನ್ನಿಗೆ ಅನಂತ್ಮಾಣಿ ಬಲವಿರುವುದರಿಂದ ಆಶೀಸರ್ ಮುಖ ಸಪ್ಪಗಾಗಿದೆ. ಬಿಜೆಪಿಯ ಗ್ಯಾಂಗ್‍ವಾರ್ ಬೀದಿಗೆ ಬರುವ ಸೂಚನೆಗಳು ಗೋಚರಿಸುತ್ತಿವೆ. ತನ್ನ ಎಂಪಿ ಸೀಟಿಗೇ ಕೈಹಾಕಿದ್ದ, ಮುಂದೂ ಹಾಕಲಿರುವ ಆಶೀಸರ್‍ಗೆ ಅನಂತ್ಮಾಣಿ ಸುಮ್ಮನೆ ಬಿಡಲು ಸಾಧ್ಯವಾ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...