Homeಕರ್ನಾಟಕಕರ್ನಾಟಕಕ್ಕೂ ಬಂತು ವಿಸ್ಟಾಡೋಮ್ ರೈಲು: ಮಂಗಳೂರು-ಬೆಂಗಳೂರು ನಡುವೆ ಮೊದಲ ಓಡಾಟ

ಕರ್ನಾಟಕಕ್ಕೂ ಬಂತು ವಿಸ್ಟಾಡೋಮ್ ರೈಲು: ಮಂಗಳೂರು-ಬೆಂಗಳೂರು ನಡುವೆ ಮೊದಲ ಓಡಾಟ

- Advertisement -
- Advertisement -

ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಿರುವವರಿಗೆ ಅಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ಹೇಳ ಬೇಕೆಂದಿಲ್ಲ. ಸಕಲೇಶಪುರ, ಮೂಡಿಗೆರೆ, ಸುಬ್ರಹ್ಮಣ್ಯ ವ್ಯಾಪ್ತಿಯ ಝರಿ ತೊರೆ ಗಿರಿ ಗಹ್ವರಗಳ ರುದ್ರ ರಮಣೀಯತೆಯೇ ಅಂತಹದ್ದು. ಪ್ರತಿವರ್ಷ ಪ್ರವಾಸಿಗರನ್ನು ಪಶ್ಚಿಮ ಘಟ್ಟದ ಈ ತಾಣ ತನ್ನತ್ತ ಕೈಬೀಸಿ ಕರೆಯುತ್ತದೆ.  ಪಶ್ಚಿಮ ಘಟ್ಟದ ವಿಶೇಷ ಪರಿಸರವನ್ನು ಸವಿಯಲಿಕ್ಕೆ ಈಗ ಹೊಸ ಹೊಸ ಸಾಧ್ಯತೆಗಳು ಆರಂಭವಾಗಿವೆ. ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಪಶ್ಚಿಮ ಘಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇನ್ನು ಬೈಕ್ ಅಥವಾ ಕಾರಿನಲ್ಲಿಯೇ ತೆರಳ ಬೇಕೆಂದಿಲ್ಲ. ರೈಲಿನಲ್ಲಿ ಕೂಡ ಪ್ರವಾಸದ ಅದ್ಭುತ ಕ್ಷಣಗಳನ್ನು ಸವಿಯುವ ಅವಕಾಶ ಒದಗಿ ಬಂದಿದೆ. ರೈಲಿನಲ್ಲಿ ಪ್ರವಾಸ ಪಶ್ಚಿಮ ಘಟ್ಟ ಪ್ರವಾಸ ಏನಿದು ವಿಶೇಷ ಎಂಬ ಕುತೂಹಲವೇ?

ಹೌದು ರೈಲ್ವೆ ಇಲಖೆ ವಿಸ್ಟೊಡೋಮ್ ರೈಲ್ವೆ ಸೇವೆಯನ್ನು ಕರ್ನಾಟಕಕ್ಕೂ ವಿಸ್ತರಿಸಿದೆ. ಅದೂ ಮಂಗಳೂರು ಬೆಂಗಳೂರು ಮಾರ್ಗದಲ್ಲಿ. ವಿಸ್ಟೋಡಾಮ್ ಎಂಬ ಹೊಸ ಮಾದರಿಯ ರೈಲು ಈಗಾಗಲೇ ಡಾರ್ಜಿಲಿಂಗ್, ಶಿಮ್ಲಾ ಸೇರಿದಂತೆ ರಮ್ಯ ಮನೋಹರ ಪ್ರವಾಸಿ ತಾಣಗಳಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿವೆ. ದಕ್ಷಿಣ ಭಾರತದಲ್ಲಿ ಇದುವರೆಗೆ ಇಂತಹ ರೈಲಿನ ವ್ಯವಸ್ಥೆ ಇದುವರೆಗೆ ಇರಲಿಲ್ಲ. ಮಂಗಳೂರು ಬೆಂಗಳೂರು ಮಾರ್ಗದಲ್ಲಿ ಈ ಹೊಸ ಮಾದರಿಯ ಪ್ರವಾಸಿ ವಶೇಷ ರೈಲಿನ ವ್ಯವಸ್ಥೆ ಭಾನುವಾರ ಆರಂಭವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜುಲೈ 11 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು ಜಂಕ್ಷನ್‌ ನಿಲ್ಧಾಣದಲ್ಲಿ ಈ ರೈಲಿಗೆ ಹಸಿರು ನಿಶಾನೆಯನ್ನು ನೀಡಲಿದ್ದಾರೆ. ಈ ರೈಲು ವಾರದಲ್ಲಿ ಒಮ್ಮೆ ಮಂಗಳೂರು-ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.

ವಿಸ್ಟಾಡೋಮ್ ಬೋಗಿಯ ವಿಶೇಷ 

ವಿಸ್ಟಾಡೋಮ್ ಬೋಗಿಗಳು ಸಂಪೂರ್ಣ ಪಾರದರ್ಶಕ ಗಾಜಿನಿಂದ ಮಾಡಲ್ಪಟ್ಟಿರುತ್ತವೆ. ವಿಶೇಷ ಪಾರದರ್ಶಕ ಗಾಜಿನ ಮೇಲ್ಛಾವಣಿ, ವಿಶೇಷ ಗಾಜಿನ ಕಿಟಕಿಗಳು, ಹೊರ ದೃಶ್ಯವನ್ನು ಬಿತ್ತರಿಸುವ ವಿಶೇಷ ಪರದೆ ಹೀಗೆ ಪ್ರಕೃತಿ ಸೌಂದರ್ಯವನ್ನು ಸವಿಯುವ ವಿಶೇಷ ವಿನ್ಯಾಸವನ್ನು ಹೊಂದಿದೆ. ವಿಸ್ಟಾಡೋಮ್  ಬೋಗಿಯಲ್ಲಿ ವಿಶೇಷ ಸಿಸಿಟಿವಿ, ಏಸಿ, ರೆಫ್ರಿಜಿರೇಟರ್‌, ಓವನ್, ಅಗ್ನಿಶಾಮಕ ಉಪಕರಣಗಳು, ಮೊಬೈಲ್ ಚಾರ್ಜಿಂಗ್ ಸಾಕೆಟ್, ಸ್ಟೀಲ್ ಲಗೇಜ್ ಕಪಾಟುಗಳು, ಮಿನಿ ಪ್ಯಾಂಟ್ರಿ, ಜೈವಿಕ ಶೌಚಾಲಯ ಸೇರಿದಂತೆ ಇನ್ನಿತರ ಅತ್ಯಾಧುನಿಕ ಸೌಲಭ್ಯ ಲಭ್ಯವಿದೆ.

ಸದ್ಯ ಬೆಂಗಳೂರು ಮಂಗಳೂರು ನಡುವಿನ ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿಗೆ ಎರಡು ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸಲಾಗಿದ್ದು ಪ್ರತಿ ಬೋಗಿಯಲ್ಲಿ 44 ಜನರಿಗೆ ಪ್ರಯಾಣಿಸುವ ಅವಕಾಶವಿದೆ.

ಇದನ್ನೂ ಓದಿ: ಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುತ್ತಿರುವ ಜಲಪಾತಗಳ ನಡುವೆ ಬಣಗುಡುತ್ತಿರುವ ಮಲೆನಾಡಿನ ಪ್ರವಾಸಿ ತಾಣಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...