Homeಪುಸ್ತಕ ವಿಮರ್ಶೆವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

ವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

- Advertisement -
- Advertisement -

“ಮಾನವ ಸಮಾಜ ಒಮ್ಮೆಲೇ ಇಂದಿನ ಪರಿಸ್ಥಿತಿಗೆ ತಲುಪಲಿಲ್ಲ. ಈ ಸ್ಥಿತಿಗೆ ತಲುಪಬೇಕಾದರೆ ಅದು ಅನೇಕಾನೇಕ ಸಂಘರ್ಷಗಳನ್ನು ಎದುರಿಸಬೇಕಾಯಿತು” ಎಂದೇ ಪ್ರಾರಂಭವಾಗುವ ಈ ಕೃತಿ ಕತೆಗಳೆಂದು ಕರೆಯಿಸಿಕೊಳ್ಳುವ ಮಾನವ ಸಮಾಜದ ಇತಿಹಾಸದ ಭಿತ್ತಿ ಚಿತ್ರಗಳು.

ಇಪ್ಪತ್ತು ಕತೆಗಳ ಸಂಕಲನ.
ಇಂದು ನಾವು ಕಾಣುತ್ತಿರುವಂತೆ ಸಮಾಜವಿರಲಿ, ಕುಟುಂಬವೂ ಇರಲಿಲ್ಲ ಮತ್ತು ಕುಟುಂಬದ ಸದಸ್ಯರ ಸಂಬಂಧವೂ ಇರಲಿಲ್ಲ. ತಾಯಿ, ಮಗು, ಸೋದರ, ಸೋದರಿಯರ ಇಂದಿನ ಶಿಷ್ಟ ಸಂಬಂಧದ ಕನ್ನಡಕದಿಂದ ಅಂದಿನ ನಮ್ಮ ಪೂರ್ವಜರ ನೈಸರ್ಗಿಕ ವರ್ತನೆಗಳನ್ನು ನೋಡಿದರೆ, ಅಶ್ಲೀಲವೆಂದೋ, ಅಕ್ರಮವೆಂದೋ, ಅಸಭ್ಯವೆಂದೋ ತುಚ್ಛೀಕರಿಸಬಹುದು. ಆದರೆ ಸಮಾಜದ ವ್ಯವಸ್ಥೆಯು ವಿಕಸಿತವಾದಂತೆ, ಕುಟುಂಬವೂ, ಅದರ ಸದಸ್ಯರ ಸಂಬಂಧಗಳ ರೂಪುರೇಷೆಗಳೂ ವಿಕಸಿತಗೊಳ್ಳುತ್ತಾ ಬಂತು ಎಂಬುದನ್ನು ನಿರಾಕರಿಸಲಾಗದು. ಮಾನವನ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳ ಸಿಕ್ಕ ತುಣುಕುಗಳನ್ನು ಕತೆಗಳ ರೂಪದಲ್ಲಿ ಕಟ್ಟಿಕೊಡುವ ಸಾಂಕೃತ್ಯಾಯನ ಬಹುದೊಡ್ಡ ಪಂಡಿತರು.

ತುಂಡುತುಂಡಾಗಿ ಸಿಕ್ಕಿರುವ ಇತಿಹಾಸದ ದಾಖಲೆಗಳನ್ನು ಜೋಡಿಸುವ ಕೊಂಡಿಗಳನ್ನು ಕಲ್ಪಿಸಿರುವ ಕತೆಗಾರನ ಕಲ್ಪನಾಶಕ್ತಿಗಿಂತ ಕಾಣದಿರುವ ಇತಿಹಾಸದ ಗ್ರಹಿಕೆ ತೋರುತ್ತದೆ.

ನಿಶಾ, ಮೊದಲ ಕತೆ. ವೋಲ್ಗಾ ನದಿಯ ತಟದಲ್ಲಿ ಕ್ರಿ.ಪೂ.600ರ ಜೀವನವನ್ನು ತೆರೆದಿಡುತ್ತದೆ.

ಹಾಗೆಯೇ ವೇದ, ಬ್ರಾಹ್ಮಣ, ಉಪನಿಷತ್ತುಗಳನ್ನೆಲ್ಲಾ ಜಾಲಾಡುವ ಸಾಂಕೃತ್ಯಾಯನ ವಿವಿಧ ಭೂಭಾಗಗಳಲ್ಲಿ ಮಾನವನ ವಿವಿಧ ಜನಾಂಗಗಳು ಬಾಳಿರುವ ರೀತಿಗಳನ್ನು, ಎದುರಿಸಿರುವ ಸಂಘರ್ಷಗಳನ್ನು ಮತ್ತು ಅಳವಡಿಸಿಕೊಂಡಿರುವ ವ್ಯವಸ್ಥೆಗಳನ್ನು ಕಥಿಸುತ್ತಾರೆ.
1942ರಲ್ಲಿ ಸಾಂಕೃತ್ಯಾಯನ ಬರೆದ ಈ ಕೃತಿಗೆ ಸನಾತನಿಗಳು ಕೆಂಡಕಾರಿದ್ದರು. ಬಹುವಾಗಿ ನಿಂದಿಸಿದ್ದರು. ಆದರೆ ಈ ಕೃತಿಯನ್ನು ಸಮರ್ಥಿಸಲು ಅಥವಾ ಖಂಡಿಸಲು ಯಾರಿಗಾದರೂ ಆಳವಾದ ಅಧ್ಯಯನವಿರಬೇಕು. ಏಕೆಂದರೆ ಇವರ ಅಗಾಧ ಓದಿನ ಹಿನ್ನೆಲೆ ಮತ್ತು ಅಧ್ಯಯನ ವ್ಯಾಪ್ತಿಯನ್ನು ನಗ್ನವಾದಿ ವೇದನಿಂದಕ ಎಂದು ದೂಷಿಸಿದರೆ ಅದೊಂದು ಪೂರ್ವಾಗ್ರಹ ಪೀಡಿತ ಮನಸ್ಕರ ಅಸಹನೆಯ ಪ್ರದರ್ಶನವಷ್ಟೇ ಆಗುತ್ತದೆ.

ಬರಿಯ ಗ್ರಂಥಾಧ್ಯಯನ ಮಾತ್ರವಲ್ಲದೇ ತಾವೇ ಅಲೆದಾಟದಲ್ಲಿ ತೊಡಗಿದ್ದರ ಪರಿಣಾಮ ಜೀವನವಿಧಾನ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳು ವೋಲ್ಗಾ ಗಂಗಾದಲ್ಲಿ ಹರಳುಗಟ್ಟಿದೆ. ಇತಿಹಾಸ, ತತ್ವಶಾಸ್ತ್ರ, ವಿಜ್ಞಾನ, ರಾಜನೀತಿ, ಸಂಸ್ಕೃತಿ, ಸಮಾಜ ವಿಜ್ಞಾನ ಎಲ್ಲವೂ ಕತೆಗಳ ತಳಪಾಯಗಳೇ. ಹಾಗಾಗಿ ತಿಳಿವಳಿಕೆಯ ಕೊರತೆಗಳು ಕತೆಗಳನ್ನು ಕ್ಲಿಷ್ಟಗೊಳಿಸುತ್ತವೆ. ತಲೆಬಾಲ ಅರ್ಥವಾಗದೇ ಹೋಗಬಹುದು. ಏಕೆಂದರೆ ಇಂದಿನ ಸಮಾಜದ ಕನ್ನಡಕದಿಂದ ನೋಡಲಾಗುವುದಿಲ್ಲವಲ್ಲ!

ಈ ಲೇಖನದ ಉದ್ದೇಶ ಅವರ ಕತೆಗಳಲ್ಲಿರುವ ಅಂಶಗಳನ್ನು ಚರ್ಚಿಸುವುದಾಗಲಿ, ವಿಷಯಗಳನ್ನು ಮುಂದಿಡುವುದಾಗಲಿ ಅಲ್ಲ. ಬರಿದೇ ಪ್ರವೇಶಿಕೆಯನ್ನು ಒದಗಿಸುವುದಕ್ಕೆ. ಕತೆಗಳ ನಾಟಕೀಯತೆಯನ್ನು ಊಹಿತಸತ್ಯ (ಹೈಪೋತಿಸೀಸ್) ರೀತಿಯಲ್ಲಿ ಗ್ರಹಿಸಬೇಕಾಗಿರುವ ಮುನ್ನೆಚ್ಚರಿಕೆಯನ್ನು ಹೊಂದುವುದಕ್ಕೆ.

ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ಕತೆಗಳ ರೂಪದ ಈ ಪುಸ್ತಕ ನವಕರ್ನಾಟಕದಲ್ಲಿ ಸಿಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...