Homeಮುಖಪುಟಕಾರ್ಮಿಕರಿಗೆ ಕೂಲಿ | ಕೇರಳ, ಜಮ್ಮುಕಾಶ್ಮೀರ ಟಾಪ್‌‌; ಗುಜರಾತ್‌, ಮಧ್ಯಪ್ರದೇಶ ಅತ್ಯಂತ ಕಡಿಮೆ - RBI...

ಕಾರ್ಮಿಕರಿಗೆ ಕೂಲಿ | ಕೇರಳ, ಜಮ್ಮುಕಾಶ್ಮೀರ ಟಾಪ್‌‌; ಗುಜರಾತ್‌, ಮಧ್ಯಪ್ರದೇಶ ಅತ್ಯಂತ ಕಡಿಮೆ – RBI ವರದಿ

- Advertisement -
- Advertisement -

ಹಣದುಬ್ಬರ ಮತ್ತು ಬಡ್ಡಿದರಗಳು ಹೆಚ್ಚಾಗುತ್ತಿರುವ ವೇಳೆಯಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿನ ಕೃಷಿ ಕಾರ್ಮಿಕರು ದೇಶದಲ್ಲೆ ಅತ್ಯಂತ ಕಡಿಮೆ ದೈನಂದಿನ ಕೂಲಿ ಪಡೆಯುತ್ತಾರೆ ಹಾಗೂ ಕೇರಳ ಮತ್ತು ಜಮ್ಮು ಕಾಶ್ಮೀರದ ಕೃಷಿ ಕಾರ್ಮಿಕರು ಅತ್ಯಂತ ಹೆಚ್ಚಿನ ದೈನಂದಿನ ಕೂಲಿ ಪಡೆಯುತ್ತಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌‌ಬಿಐ) ವರದಿ ಹೇಳಿದೆ.

ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷದಲ್ಲಿ ಆರ್‌‌ಬಿಐ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶದ ಗ್ರಾಮೀಣ ಪ್ರದೇಶದ ಪುರುಷ ಕೃಷಿ ಕಾರ್ಮಿಕರು ಕೇವಲ 217.8 ರೂ. ದೈನಂದಿನ ಕೂಲಿ ಪಡೆದರೆ, ಗುಜರಾತ್‌ನಲ್ಲಿ ಕೃಷಿ ಕಾರ್ಮಿಕ 220.3 ರೂ. ಪಡೆಯುತ್ತಾನೆ. ಅದಾಗ್ಯೂ ಈ ಎರಡೂ ರಾಜ್ಯಗಳಲ್ಲಿ ನೀಡುವ ದೈನಂದಿನ ಕೂಲಿ ರಾಷ್ಟ್ರೀಯ ಸರಾಸರಿ 323.2 ರೂ.ಗಿಂತ ಕ್ಕಿಂತ ಕಡಿಮೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಜರಾತಿನಲ್ಲಿ ಒಬ್ಬ ಗ್ರಾಮೀಣ ಕೃಷಿ ಕಾರ್ಮಿಕನಿಗೆ ತಿಂಗಳಿಗೆ 25 ದಿನ ಕೆಲಸ ಸಿಕ್ಕಿದರೆ, ಅವನ ಮಾಸಿಕ ಸಂಪಾದನೆಯು ತಿಂಗಳಿಗೆ ಸುಮಾರು 5,500 ರೂಪಾಯಿಗಳಷ್ಟಿರುತ್ತದೆ, ಇದು ನಾಲ್ಕೈದು ಜನರಿರುವ ಕುಟುಂಬದ ವೆಚ್ಚವನ್ನು ಪೂರೈಸಲು ಸಾಕಾಗುವುದಿಲ್ಲ. ಆದರೆ ಅತಿ ಹೆಚ್ಚು ವೇತನ ನೀಡುವ ಕೇರಳದ ಗ್ರಾಮೀಣ ಕೃಷಿ ಕಾರ್ಮಿಕರು ತಿಂಗಳಿಗೆ 25 ದಿನಗಳ ಕೆಲಸಕ್ಕೆ ಸರಾಸರಿ 18,170 ರೂ. ಪಡೆಯುತ್ತಾರೆ.

ಇದನ್ನೂ ಓದಿ: ‘ನೀನು ಕೂಲಿ ಕೆಲಸ ಮಾಡಬೇಕು, ಶಾಲೆಯಲ್ಲಿ ಅಡುಗೆಯನ್ನಲ್ಲ’: 6 ತಿಂಗಳಾದರೂ ದಲಿತ ಮಹಿಳೆಗೆ ನಿಲ್ಲದ ಕಿರುಕುಳ

2021-22 ರ ಆರ್ಥಿಕ ವರ್ಷವು ಗ್ರಾಮೀಣ ಆರ್ಥಿಕತೆಗೆ ಕೆಟ್ಟದ್ದಾಗಿ ಪರಿಣಮಿಸಿದ್ದು, ಕೋವಿಡ್ ಸಾಂಕ್ರಾಮಿಕವು ಉದ್ಯೋಗಗಳು ಮತ್ತು ಆದಾಯದ ಮಟ್ಟದ ಮೇಲೆ ಹೊಡೆತ ನೀಡಿದೆ. ಮಧ್ಯಪ್ರದೇಶದಲ್ಲಿ ಕೃಷಿ ಕಾರ್ಮಿಕರ ಮಾಸಿಕ ಕೂಲಿ ಸುಮಾರು 5,445 ರೂ. ಆಗಿದೆ. ಕೃಷಿ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡುವ ಇತರ ರಾಜ್ಯಗಳಲ್ಲಿ ಉತ್ತರ ಪ್ರದೇಶ ( ಗ್ರಾಮೀಣ ಕೃಷಿ ಕಾರ್ಮಿಕರು ಸರಾಸರಿ ದಿನಗೂಲಿ 270 ರೂ ) ಮಹಾರಾಷ್ಟ್ರ (284.2 ರೂ.) ಒಡಿಶಾ (269.5 ರೂ.) ಸೇರಿದೆ.

ಪ್ರತಿ ಕೃಷಿ ಕಾರ್ಮಿಕರಿಗೆ ಸರಾಸರಿ 726.8 ರೂ. ಕೂಲಿ ನೀಡುವುದರೊಂದಿಗೆ ಹೆಚ್ಚು ವೇತನ ನೀಡುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರ ಸ್ಥಾನದಲ್ಲಿದೆ. ಕೇರಳದಲ್ಲಿನ ಹೆಚ್ಚಿನ ಕೂಲಿ ಇತರ ಕಳಪೆ ವೇತನ ನೀಡುವ ರಾಜ್ಯಗಳ ಕೃಷಿ ಕಾರ್ಮಿಕರನ್ನು ಆಕರ್ಷಿಸಿದ್ದು, ಹೀಗಾಗಿ ಸುಮಾರು 25 ಲಕ್ಷ ವಲಸೆ ಕಾರ್ಮಿಕರು ರಾಜ್ಯದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ, ಕೃಷಿ ಕಾರ್ಮಿಕರು ಪ್ರತಿ ವ್ಯಕ್ತಿಗೆ ಸರಾಸರಿ 524.6 ರೂ., ಹಿಮಾಚಲ ಪ್ರದೇಶ 457.6 ರೂ. ಮತ್ತು ತಮಿಳುನಾಡು 445.6 ರೂ. ಕೂಲಿ ಪಡೆಯುತ್ತಾರೆ.

ಕರ್ನಾಟಕದಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಸರಾಸರಿ 335.5 ರೂ. ಸಿಗುತ್ತದೆ ಎಂದು ಅಂಕಿ-ಅಂಶ ಹೇಳಿದೆ.

ಇದನ್ನೂ ಓದಿ: ದಲಿತ್‌ ಫೈಲ್ಸ್‌‌: ಕೂಲಿ ಕೇಳಿದ ದಲಿತ ಬಾಲಕನಿಗೆ ಹಲ್ಲೆ ನಡೆಸಿ ಪಾದ ನೆಕ್ಕಿಸಿದ ದುಷ್ಕರ್ಮಿಗಳು

ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಕೃಷಿಯೇತರ ಪುರುಷ ಕಾರ್ಮಿಕರ ಕೂಲಿ ನೀಡುವ ವಿಚಾರದಲ್ಲಿ, ಮಧ್ಯಪ್ರದೇಶ ಕಡಿಮೆ ವೇತನ ನೀಡುತ್ತಿದ್ದು, ಅಲ್ಲಿ ಸರಾಸರಿ 230.3 ರೂ. ರಷ್ಟಿದ್ದರೆ, ಗುಜರಾತ್ ಕಾರ್ಮಿಕರು 252.5 ರೂ. ಮತ್ತು ತ್ರಿಪುರಾದಲ್ಲಿ 250 ರೂ. ದೈನಂದಿನ ವೇತನವನ್ನು ನೀಡಲಾಗುತ್ತದೆ. ಇವೆಲ್ಲವೂ ರಾಷ್ಟ್ರೀಯ ಸರಾಸರಿಗಿಂತ 326.6. ರೂ. ಗಿಂತಲೂ ಕಡಿಮೆಯಾಗಿದೆ.

ಮತ್ತೊಂದೆಡೆ, ಕೇರಳವು ಕೃಷಿಯೇತರ ಕಾರ್ಮಿಕರ ಕೂಲಿಯ ವಿಚಾರದಲ್ಲಿ ಕೂಡಾ ಮುಂಚೂಣಿಯಲ್ಲಿದ್ದು, ಅಲ್ಲಿ ಪ್ರತಿ ವ್ಯಕ್ತಿಗೆ 681.8 ರೂ. ಕೂಲಿ ನೀಡುತ್ತಾರೆ. ಇದರ ನಂತರ ನಂತರ ಜಮ್ಮುಕಾಶ್ಮೀರ 500.8 ರೂ., ತಮಿಳುನಾಡು 462.3 ರೂ. ಮತ್ತು ಹರಿಯಾಣ 409.3 ರೂ. ಕೂಲಿ ನೀಡುತ್ತದೆ.

ಕರ್ನಾಟಕವು ಕೃಷಿಯೇತರ ಕೂಲಿ ಕಾರ್ಮಿಕರಿಗೆ 297.9 ರೂ. ಸರಾಸರಿ ಕೂಲಿ ನೀಡುತ್ತದೆ. ಇದು ರಾಷ್ಟ್ರೀಯ ಸರಾಸರಿಗಿಂತ 326.6. ರೂ. ಗಿಂತಲೂ ಕಡಿಮೆಯಾಗಿದೆ.

ಇದನ್ನೂ ಓದಿ: ‘ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ, ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು’

ಗ್ರಾಮೀಣ ಪುರುಷ ಕಟ್ಟಡ ಕಾರ್ಮಿಕ ಕೂಲಿ ವಿಷಯದಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶವು ರಾಷ್ಟ್ರೀಯ ಸರಾಸರಿ ರೂ 373.3 ಕ್ಕಿಂತ ಕಡಿಮೆ ಕೂಲಿಯನ್ನು ನೀಡುತ್ತದೆ. ಗುಜರಾತ್ ಗ್ರಾಮೀಣ ಕಟ್ಟಡ ಕಾರ್ಮಿಕರು ಸರಾಸರಿ 295.9 ರೂ. ಇದ್ದರೆ, ಮಧ್ಯಪ್ರದೇಶ 266.7 ರೂ. ಮತ್ತು ತ್ರಿಪುರಾ 250 ರೂ. ನೀಡುತ್ತದೆ.

ಆರ್‌ಬಿಐ ಅಂಕಿಅಂಶಗಳ ಪ್ರಕಾರ ಗ್ರಾಮೀಣ ಕಟ್ಟಡ ಕಾರ್ಮಿಕರಿಗೆ ಕೇರಳದಲ್ಲಿ 837.7 ರೂ. ಕೂಲಿ ನೀಡಿದರೆ, ಜಮ್ಮು ಕಾಶ್ಮೀರದಲ್ಲಿ 519.8 ರೂ., ತಮಿಳುನಾಡಿನಲ್ಲಿ 478.6 ರೂ. ಮತ್ತು ಹಿಮಾಚಲ ಪ್ರದೇಶದಲ್ಲಿ 462.7 ರೂ. ನೀಡಲಾಗುತ್ತದೆ.

ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರಿಗೆ ಸರಾಸರಿ 383.5 ರೂ. ಕೂಲಿ ನೀಡಲಾಗುತ್ತಿದ್ದು, ಇದು ರಾಷ್ಟ್ರೀಯ ಸರಾಸರಿ ಕೂಲಿಗಿಂತ ತುಸುವೆ ಹೆಚ್ಚಾಗಿದೆ.

ಇದನ್ನೂ ಓದಿ: ದೌರ್ಜನ್ಯ ಶೋಷಣೆಗಳ ಸುಗ್ಗಿ! ಕಬ್ಬು ಕಟಾವು ಕೂಲಿಗಾರರ ಜೀತವಿಮುಕ್ತಿಯೆಂದು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...