Homeಕರ್ನಾಟಕತನ್ನನ್ನು ನಿಂದಿಸುತ್ತಿದ್ದಾರೆಂದು ಅಳುವ ಪ್ರಧಾನಿಯನ್ನು ನೋಡುತ್ತಿದ್ದೇವೆ: ಮೋದಿಯನ್ನು ಗೇಲಿ ಮಾಡಿದ ಪ್ರಿಯಾಂಕಾ

ತನ್ನನ್ನು ನಿಂದಿಸುತ್ತಿದ್ದಾರೆಂದು ಅಳುವ ಪ್ರಧಾನಿಯನ್ನು ನೋಡುತ್ತಿದ್ದೇವೆ: ಮೋದಿಯನ್ನು ಗೇಲಿ ಮಾಡಿದ ಪ್ರಿಯಾಂಕಾ

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ಪ್ರಧಾನಿಗೆ ಜನರ ಬಗ್ಗೆ ಕಾಳಜಿ ಇಲ್ಲ ಬದಲಿಗೆ ಅನುಕಂಪ ಪಡೆಯಲು ನಿಮ್ಮ ಬಳಿ ಅಳುತ್ತಾರೆ” ಎಂದು ಹೇಳಿದ್ದಾರೆ.

ಹೊಸಕೋಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ”ತನ್ನನ್ನು ನಿಂದಿಸುತ್ತಿದ್ದಾರೆ ಎಂದು ಜನರ ಬಳಿ ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಧಾನಿಯನ್ನು ಇದೇ ಮೊದಲಬಾರಿಗೆ ನೋಡುತ್ತಿದ್ದೇನೆ” ಎಂದು ಗೇಲಿ ಮಾಡಿದ್ದಾರೆ.

ಬಿಜೆಪಿಯನ್ನು ವ್ಯಂಗ್ಯವಾಡಿದ ಅವರು, ಕೇಸರಿ ಪಕ್ಷವು ಪ್ರಜಾಪ್ರಭುತ್ವವನ್ನೇ ಕದಿಯುತ್ತಿದೆ ಎಂದರು. ಹಳೆಯ ಪಕ್ಷವಾದ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

”ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಾನಾ ತರಹದ ಕಳ್ಳರಿದ್ದಾರೆ, ಕೆಲವರು ಮನೆಗಳಲ್ಲಿ ಕಳ್ಳತನ ಮಾಡುತ್ತಾರೆ… ಈಗ ಸರ್ಕಾರವನ್ನೇ ಕದಿಯುವ ಕಳ್ಳರು ಕೂಡ ಬಂದಿದ್ದಾರೆ, ಪ್ರಜಾಪ್ರಭುತ್ವವನ್ನೇ ಕದಿಯುತ್ತಿದ್ದಾರೆ… ಅದನ್ನು ತಡೆಯಿರಿ…,” ಎಂದು ಪ್ರಿಯಾಂಕಾ ಹೇಳಿದರು.

ಮಾಜಿ ಕಾಂಗ್ರೆಸ್ ಸಂಸದರು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧರಾಗಿದ್ದಾರೆ. ರಾಹುಲ್‌ ಗಾಂಧಿ ಅವರನ್ನು ನೋಡಿ ಪಾಠ ಕಲಿಯಿರಿ ಎಂದು ಈ ಹಿಂದೆ ಏಪ್ರಿಲ್ 30ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರೀಯಾಂಕಾ ಹೇಳಿದರು.

ಇದನ್ನೂ ಓದಿ: ‘ನೂರು ‘ಮನ್ ಕಿ ಬಾತ್’ ಮುಗಿಸಿದ್ದಕ್ಕೆ ಅಭಿನಂದನೆಗಳು, ಈಗಲಾದರೂ ‘ಜನ್ ಕಿ ಬಾತ್’ ಕೇಳುತ್ತಿರಾ?’: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ಜಮಖಂಡಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ”ಸಾರ್ವಜನಿಕರ ಮುಂದೆ ನಿಂದನೆಯಾಗುತ್ತಿದೆ ಎಂದು ಹೇಳುವ ಮೊದಲ ಪ್ರಧಾನಿಯನ್ನು ನಾನು ನೋಡಿದ್ದೇನೆ, ಪ್ರಧಾನಿ ಬಳಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿ ಇಲ್ಲ, ಆದರೆ ನಿಂದನೆಯ ಪಟ್ಟಿ ಇದೆ. ಮೋದಿಜೀ , ‘ಗಾಲಿ ಕ್ಯಾ ಮೇ ದೇಶ್ ಕೆ ಲಿಯೇ ಗೋಲಿ ಖಾ ಲುಂಗಾ’ ಎಂದು ಹೇಳುವ ನನ್ನ ಸಹೋದರನಿಂದ (ರಾಹುಲ್ ಗಾಂಧಿ) ಪಾಠ ಕಲಿಯಿರಿ” ಎಂದು ಹೇಳಿದರು.

”ನನ್ನ ಕುಟುಂಬದ ಮೇಲೆ ಎಸೆದಿರುವ ನಿಂದನೆಗಳ ಸಂಖ್ಯೆಯನ್ನು ನಾನು ಎಣಿಸಲು ಪ್ರಾರಂಭಿಸಿದರೆ ಮತ್ತು ಬಿಜೆಪಿಯ ಒಬ್ಬೊಬ್ಬರ ಹೆಸರ ಮೇಲೂ ನಾನು ಹಲವಾರು ಪುಸ್ತಕಗಳನ್ನು ಪ್ರಕಟಿಸಬೇಕಾಗಬಹುದು” ಎಂದು ಹೇಳಿದರು.

ಮೊನ್ನೆ ಭಾನುವಾರ ಬೆಳಗಾವಿಯ ಕುಡಚಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ರೋಡ್‌ಶೋ ನಡೆಸಿದರು. ಈ ವೇಳೆ, ”ಹಣದುಬ್ಬರವನ್ನು ತಂದವರು ಯಾರು? ಜನರನ್ನು ಲೂಟಿ ಮಾಡಿದವರು ಯಾರು? ಜಿಎಸ್‌ಟಿಯನ್ನು ತಂದು ನಿಮ್ಮನ್ನು ತೊಂದರೆಗೊಳಿಸಿದ್ದು ಯಾರು? 40% ಕಮಿಷನ್ ಸರ್ಕಾರವನ್ನು ನಡೆಸುವವರು ಯಾರು?” ಸರಣಿ ಪ್ರಶ್ನೆಗಳನ್ನು ಕೇಳಿದ್ದರು.

”ಬಿಜೆಪಿಯು ಸುಳ್ಳು ಭರವಸೆಗಳನ್ನು ನೀಡುತ್ತದೆ ಮತ್ತು ಎಂದಿಗೂ ಈಡೇರಿಸುವುದಿಲ್ಲ. ಆದರೆ ಕಾಂಗ್ರೆಸ್ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಕಾಂಗ್ರೆಸ್ ಯಾವಾಗಲೂ ಜನರಿಗಾಗಿ ಕೆಲಸ ಮಾಡುವ ಉದ್ದೇಶವನ್ನು ಹೊಂದಿದೆ ಮತ್ತು ಜನರಿಗೆ ದ್ರೋಹ ಮಾಡಬಾರದು” ಎಂದು ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...