Homeಚಳವಳಿನಮಗೆ ನಾವೇ ಮಾಧ್ಯಮವಾಗಬೇಕಾದ ಹೊತ್ತಿದು : ನಜ್ಮಾ ನಜೀರ್

ನಮಗೆ ನಾವೇ ಮಾಧ್ಯಮವಾಗಬೇಕಾದ ಹೊತ್ತಿದು : ನಜ್ಮಾ ನಜೀರ್

- Advertisement -
- Advertisement -

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ನಜ್ಮಾ ನಜೀರ್ ಚಿಕ್ಕನೇರಳೆ ಬೆಂಗಳೂರಿನಲ್ಲಿ ಎಲ್ಲರಿಗೂ ಪರಿಚಯವಾಗಿದ್ದು, ಸಾಮಾಜಿಕ ಹೋರಾಟ ಮತ್ತು ಕಾರ್ಯಕ್ರಮಗಳಲ್ಲಿ ಚುರುಕಾಗಿ ಓಡಾಡುವ ಚಿನಕುರಳಿಯಾಗಿ. ವೈದ್ಯಕೀಯ ವಿದ್ಯಾರ್ಥಿನಿಯಾದ ನಜ್ಮಾ ರೇಡಿಯೋ ಜಾಕಿಯಾಗಿ, ಕಂಠದಾನ ಕಲಾವಿದೆಯಾಗಿಯೂ ಕೆಲಸ ಮಾಡುತ್ತಾರೆ. ಆಕೆಯ ಪಿವೋಟ್ ಪದ್ಯಗಳು ಕೃತಿ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ.

ಮೊನ್ನೆ ನನ್ನ ಶಾಲಾದಿನಗಳ ಜೂನಿಯರ್ ಒಬ್ಬ ವಾಟ್ಸಾಪಿನಲ್ಲಿ ದನ ರಕ್ಷಣೆಯ ಬಗ್ಗೆ ಮೆಸೇಜೊಂದನ್ನ ಕಳುಹಿಸಿದ್ದ. ದನದ ಮಾಂಸ ತಿನ್ನುವವರೆಲ್ಲ ದೇಶದ್ರೋಹಿಗಳು ಎಂದು ನೇರವಾಗಿಯೆ ಬರೆದ ಮೆಸೇಜದು. ಇಂತಹುದ್ದೆ ಸ್ವರೂಪದ ಫ್ಯಾಸಿಸ್ಟ್ ಸಮರ್ಥನೆಯ ಮೆಸೇಜುಗಳನ್ನು ಕಳುಹಿಸಿದ್ದ ಹುಡುಗ ನಮ್ಮ ಮನೆಯಲ್ಲೆ ಅಡ್ಡಾಡಿಕೊಂಡು, ತಿಂದುಂಡುಕೊಂಡು ನಮ್ಮೊಟ್ಟಿಗೆಯೆ ಬೆಳೆದವನು. ಡಿಪ್ಲೊಮಾ ಮುಗಿಸಿ ಬೆಂಗಳೂರಿನ ಕಾರ್ಖಾನೆಯೊಂದರ ನೌಕರನಾಗಿದ್ದ ಆತನನ್ನು ಆರ್ಥಿಕ ಕುಸಿತದ ಕಾರಣ ಕಾಸ್ಟ್ ಕಟ್ಟಿಂಗ್ ನೆಪದಲ್ಲಿ ಕೆಲಸದಿಂದ ತೆಗೆದಿದ್ದಾರೆ. ಕೆಲಸವಿಲ್ಲದ ಕಾರಣ ವಾಟ್ಸಾಪ್ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿ ಬಲ ಭಜನೆಯಲ್ಲಿ ಪ್ರತಿದಿನ ಮಿಂದೇಳುತ್ತಿದ್ದಾನೆ.

ಬಲಪಂಥೀಯ ಮೇನಿಯಾ ಈ ಮಟ್ಟಿಗೆ ಮಕ್ಕಳಿಂದ ಮುದಿಯರವರೆಗು ಹರಡಲು ಇವರು ಬಳಸಿಕೊಂಡ ಮುಖ್ಯವಾದ ಅಸ್ತ್ರ ‘ಧರ್ಮ’. ಭಾರತವಷ್ಟೆ ಅಲ್ಲ ಯುನೈಟೆಡ್ ಸ್ಟೇಟ್ಸ್‌ನ ಡೊನಾಲ್ಡ್ ಟ್ರಂಪ್‍ನಿಂದ ಹಿಡಿದು ಇಟಲಿಯ ಮ್ಯಾಟಿಯೊ ಸಾಲ್ವಿನಿ ಮತ್ತು ಬ್ರೆಜಿಲ್‍ನ ಜೈರ್ ಬೋಲ್ಸನಾರೊರವರೆಗೂ ಬಲಪಂಥೀಯವಾದಿಗಳು ಧರ್ಮ, ಏಕಸಂಸ್ಕೃತಿ, ಹುಸಿ ದೇಶಪ್ರೇಮದ ಸಿದ್ಧಾಂತಗಳನ್ನೆ ಪ್ರತಿಪಾದಿಸುತ್ತ ಜನರನ್ನು ಎಮೋಶನಲ್ ಬ್ಲಾಕ್‌ಮೇಲ್ ಮಾಡುತ್ತಲೆ ಎಂದಿಗಿಂತಲೂ ಉತ್ತಮವಾಗಿ ಚುನಾವಣಾ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೆ ಚಾಲಾಕಿತನದಿಂದ ಅಧಿಕಾರ ಪಡೆಯುತ್ತಿದ್ದಾರೆ. ಇಂತಹ ಈ ಸಂದರ್ಭದಲ್ಲಿ ಪ್ರಸಕ್ತ ಸರ್ಕಾರದ ಸ್ತುತಿಗೀತೆ ಹಾಡುತ್ತ ಕುಳಿತರೆ ಮಾತ್ರ ನೀವು ದೇಶದಲ್ಲಿ ಬದುಕಲು ಅರ್ಹ, ಒಂದೇ ಒಂದು ಮಾತು ತುಟಿಕ್‍ಪಿಟಿಕ್ ಎಂದರು ಸೆಕ್ಷನ್ ಮೇಲೆ ಸೆಕ್ಷನ್ ಹಾಕಿ ನಿಮ್ಮ ಅಭಿವ್ಯಕ್ತಿಯ ದಮನವನ್ನು ಮಾಡಲಾಗುತ್ತಿದೆ. ಹೆಚ್ಚು ಮಾತನಾಡಿದರೆ ಪ್ರಾಣ ತೆಗೆಯಲು ಸಿದ್ಧವಾಗಿ ಕುಂತಿದೆ ಬಲಪಂಥಿಯ ಫ್ಯಾಸಿಸ್ಟ್ ಶಕ್ತಿಗಳು.

ಗೋಲ್ವಾಲ್ಕರ್ ಮೊಘಲ್ ಆಳ್ವಿಕೆಯನ್ನು ಮುಸ್ಲಿಮ್ ಆಳ್ವಿಕೆಯೆಂದು ಪ್ರತಿಪಾದಿಸಿದ್ದ ಸಿದ್ಧಾಂತದ ಕಾಪಿ-ಪೇಸ್ಟ್ ಪ್ರಸಕ್ತ ಸರ್ಕಾರದ ಸಿದ್ಧಾಂತ. 2014ರ ಚುನಾವಣೆಯ ವಿಜಯೋತ್ಸವ ಭಾಷಣದಲ್ಲಿ ನರೇಂದ್ರ ಮೋದಿ “ಸಾವಿರ ವರ್ಷಗಳ ಗುಲಾಮಗಿರಿಯಿಂದ ಭಾರತವನ್ನು ಸ್ವತಂತ್ರಗೊಳಿಸಿದ್ದೇನೆ” ಎಂದು ಹೇಳಿಕೆ ನೀಡಿದ್ದರು. ಮುಸಲ್ಮಾನರನ್ನು ಇಂದಿಗೂ ಪರಕೀಯರೆಂದೇ, ಆಕ್ರಮಣಕಾರರೆಂದೇ ಸರ್ಕಾರ ಬಿಂಬಿಸುತ್ತಿದೆ. ಮುಸಲ್ಮಾನರ ಆಡಳಿತವನ್ನು ದಬ್ಬಾಳಿಕೆಯ ಕಾಲವೆಂದೇ ನಂಬಿಸಲಾಗುತ್ತಿದೆ.

ಬಹುಸಂಖ್ಯಾತರ ನಡುವೆ ಬಲ ಸಿದ್ಧಾಂತವು ಮುಸಲ್ಮಾನರ ಬಗ್ಗೆ ಅಸಹನೆ ಬೆಳೆಸಿಕೊಳ್ಳುವಂತಹ ವಾತಾವರಣ ನಿರ್ಮಿಸಿದ್ದು, ಕೋಮುವಾದ ಸೃಷ್ಟಿಸಿದ ದ್ವೇಷಾಸೂಯೆ ಅಪಪ್ರಚಾರಗಳನ್ನು ತೀವ್ರರೀತಿಯಲ್ಲಿ ಮಾಡುತ್ತಿದೆ. ಇಂತಹುದರ ಫಲವಾಗಿಯೆ ಕಾಶ್ಮೀರದ ಆಸಿಫಾ ಅತ್ಯಾಚಾರ ಪ್ರಕರಣದಲ್ಲಿ ಶಾಸಕನೊಬ್ಬ ಜನರ ಹಿಂಡಿನೊಂದಿಗೆ ಆರೋಪಿಯ ಪರ ಬೀದಿಗಿಳಿದು ಹೋರಾಡುವ ಉದಾಹರಣೆಯನ್ನು ನಾವು ಕಣ್ಣಿಂದ ಕಾಣಬೇಕಾಯ್ತು.

ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷ ಹಿಂಸೆ ಅಪಪ್ರಚಾರದ ನಾನಾ ಸ್ವರೂಪಗಳು ಪ್ರಕಟವಾಗುತ್ತಿವೆ. ಇಷ್ಟಪಡುವ ಆಹಾರ ತಿನ್ನುವಂತಿಲ್ಲ, ಮಾತನಾಡುವ ಸ್ವಾತಂತ್ರ್ಯವಿಲ್ಲ, ಸಮಾನತೆಯೊಂದಿಗೆ ಶಿಕ್ಷಣವಿಲ್ಲ, ಉತ್ತಮ ಉದ್ಯೋಗವಿಲ್ಲ. ಕಷ್ಟಪಟ್ಟು ಬದುಕಬೇಕೆಂದು ಹೊರಟರೆ ನೆಮ್ಮದಿಯ ವಾತಾವರಣವಿಲ್ಲ, ರಕ್ಷಣೆಯೂ ಇಲ್ಲ. ಘನತೆಯ ಬದುಕೊಂದನ್ನ ಬದುಕುವ ಹಾಗೂ ಇಲ್ಲ ಎಂಬಂಥ ಪರಿಸ್ಥಿತಿ ಮುಸಲ್ಮಾನ, ದಲಿತ ಮತ್ತು ಹಿಂದುಳಿದ ಸಮುದಾಯಗಳದ್ದಾಗಿದೆ.

ಹಿಂದೆ ಜರ್ಮನಿಯಲ್ಲಿ ಯಹೂದಿಗಳ ಮೇಲಾದಂತೆಯೆ ಇಂದು ಭಾರತದಲ್ಲಿಯೂ ಅಲ್ಪಸಂಖ್ಯಾತರು, ತಳಸಮುದಾಯಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನದ ದಹನ ನಡೆಯುತ್ತಿರುವ ಈ ಹೊತ್ತು ಬಹು ಕಠಿಣವಾದ ಕಾಲ. ಅನ್‌ಅಫಿಶಿಯಲಿ ಎಮರ್ಜೆನ್ಸಿ ಘೋಷಣೆಯಾಗಿರುವ ಕಾಲ.

ಈಗ ಪ್ರಗತಿಪರ ಜಾತ್ಯತೀತವಾದಿಗಳೆಲ್ಲ ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ದೇಶವನ್ನು ಕಾಪಾಡಲು ಒಂದಾಗಲೇಬೇಕಾದ ಹೊತ್ತು. ಕಷ್ಟಪಟ್ಟು ಸಂಪಾದಿಸಿರುವ ಸ್ವಾತಂತ್ರ್ಯ ಸಂವಿಧಾನ, ಪ್ರಜಾಪ್ರಭುತ್ವ ಎಲ್ಲವೂ ಮಣ್ಣು ಪಾಲಾಗುವುದನ್ನು ತಪ್ಪಿಸಲು ಚಳವಳಿಗಳು ಮನೆಮನಗಳಿಗೆ ತಲುಪಬೇಕಾಗಿದೆ. ಮಾಧ್ಯಮಗಳು ಮಾರಾಟವಾಗಿರುವ ಈ ಕಾಲದಲ್ಲಿ ನಾವೇ ನಮಗೆ ಮಾಧ್ಯಮವಾಗಬೇಕಾಗಿರುವ ಕಾಲವೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...