Homeಅಂಕಣಗಳುಇಬ್ರಾಹಿಂ ಏನು ಅಂತ ನಮಗೆ ಚನ್ನಾಗಿ ಗೊತ್ತು; ನಮ್ಮ ತಂದೆಯವರಿಗೆ ಇನ್ನೂ ಗೊತ್ತು..

ಇಬ್ರಾಹಿಂ ಏನು ಅಂತ ನಮಗೆ ಚನ್ನಾಗಿ ಗೊತ್ತು; ನಮ್ಮ ತಂದೆಯವರಿಗೆ ಇನ್ನೂ ಗೊತ್ತು..

- Advertisement -
- Advertisement -

ಕಾಂಗೈಗಳನ್ನು ಟೀಕಿಸುವ ಸಾಮಗ್ರಿಯನ್ನು ಖಾಲಿ ಮಾಡಿಕೊಂಡ ಈ ಬಿಜೆಪಿಗಳು ನಿಮ್ಮದು ರಾವಣನ ಪಕ್ಷ ನಮ್ಮದು ರಾಮನ ಪಕ್ಷ ಎಂದುಬಿಟ್ಟಿವೆಯಲ್ಲಾ. ಇದಕ್ಕೆ ತಕ್ಕ ಉತ್ತರ ಕೊಡಲು ತಡಕಾಡುತ್ತಿರುವ ಕಾಂಗೈಗಳು ಹಾಗೇ ಸ್ವಲ್ಪ ಯೋಚಿಸಿದ್ದರೆ ರಾವಣ ಎಂತವನು ಎಂಬುದು ಅರಿವಾಗುತ್ತಿತ್ತು. ರಾವಣನ ಹತ್ತು ತಲೆ ಅವನ ಶಕ್ತಿ ಸಾಮರ್ಥ್ಯದ ಸಂಕೇತ. ಆತ ಅಪ್ಪಟ ಶಿವಭಕ್ತ, ಸಂಗೀತಗಾರ, ಮಹಾವೈಣಿಕ, ನೃತ್ಯಪಟು, ಅಜೇಯ, ಒಳ್ಳೆ ಆಡಳಿತಗಾರ, ಕುಬೇರರನ್ನು ಸೋಲಿಸಿ ಪುಷ್ಪಕ ವಿಮಾನ ಪಡೆದವನು. ಭುಜಂಗ ಸ್ತೋತ್ರ ರಚಿಸಿದ ಕರ್ತೃ. ಜ್ವಲಿಸುವ ಅಗ್ನಿಯಂತಿದ್ದ ರಾಜಲಕ್ಷಣದಿಂದ ಶೋಭಿತನಾದ ಆತ ಈ ಪ್ರಪಂಚಕ್ಕೆ ಮೊದಲು ಮೀಸಲಾತಿ ತಂದವನು. ಲಂಕೆಯನ್ನು ರಕ್ಷಿಸಲು ಲಂಕಿಣಿ, ದಂಡಕಾರಣ್ಯ ರಕ್ಷಿಸಲು ತಾಟಕಿ, ಲಂಕೆ ಹೆಬ್ಬಾಗಿಲು ಕಾಯಲು ಸಿಂಹಿಣಿ, ಅಶೋಕವನ ನೋಡಿಕೊಳ್ಳಲು ತ್ರಿಜಟಿಯನ್ನು ನೇಮಿಸಿದ್ದ. ಹೆಣ್ಣನ್ನು ಮೋಸ ಮಾಡಿ ಕೊಂದವನಲ್ಲ. ಮರದ ಮರೆಯಲ್ಲಿ ನಿಂತು ಯುದ್ಧ ಮಾಡಿದವನಲ್ಲ. ಯಾರದೋ ಮಾತಿಗೆ ಮಡದಿಯನ್ನೇ ಕಾಡಿಗಟ್ಟಿದವನಲ್ಲ. ಹೆಂಡತಿ ಬಗ್ಗೆ ಸಂಶಯಗೊಂಡು ಬೆಂಕಿ ಮುಟ್ಟಲು ಹೇಳಿದವನಲ್ಲ ರಾವಣ. ಹೀಗೆ ರಾವಣನ ಗುಣಗಳನ್ನು ಪಟ್ಟಿಮಾಡಿ ಬಿಜೆಪಿಗೆ ಕಾಂಗೈಗಳು ಸವಾಲೆಸೆಯುವ ಬದಲು ಗೊಂದಲಕ್ಕೆ ಬಿದ್ದಿವೆಯಲ್ಲಾ. ಈ ಗೊಂದಲಕ್ಕೆ ಕಾರಣ ಬಿಜೆಪಿಗಳು ನಿಮ್ಮನ್ನು ರಾವಣ ಪಕ್ಷ ಎಂದ ಕೂಡಲೇ ನಮ್ಮಲ್ಲಿ ರಾವಣ ಸಿದ್ದರಾಮಯ್ಯನೊ ಅಥವಾ ಡಿ.ಕೆ ಶಿವಕುಮಾರನೊ ಎಂದು ಯೋಚಿಸುತ್ತ ಕುಳಿತಿವೆಯಂತಲ್ಲಾ ಥೂತ್ತೇರಿ.

ಕಾಂಗೈ ಮತ್ತು ಬಿಜೆಪಿಗಳ ಕತೆ ಹೀಗಿದ್ದರೆ ಇನ್ನ ಯಾತ್ರೆ ಆರಂಭಿಸಿದ ದಿನದಿಂದಲೂ ಹಲವಾರು ಅಡ್ಡಿ ಆತಂಕಗಳನ್ನು ಎದುರಿಸುತ್ತಿರುವ ನಮ್ಮ ಕುಮಾರಣ್ಣನನ್ನು ಮಾತನಾಡಿಸಿ ಬಹಳ ದಿನಗಳಾದವು. ಪಂಚರತ್ನ ಯಾತ್ರೆ ಸ್ಥಗಿತಗೊಳಿಸಿ ಸುಧಾರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಮಾತಿಗೆ ಸಿಕ್ಕಬಹುದೆಂದು ಪೋನ್ ಮಾಡಲಾಗಿ ಪೋನ್ ರಿಂಗಾಯ್ತು, ರಿಂಗ್ ಟೋನು “ಮುರುಳಿಯ ಮರೆಸಿ ನಗುತಿಹೆ ಸರಸಿ..” ಹಲೋ ಯಾರು?

“ನಾನು ಸಾರ್, ಯಾಹೂ.”

“ಏನ್ರಿ ಯಾಹೂ ಇತ್ತೀಚೆಗೆ ಪೋನ್ ಮಾಡದನ್ನು ಬಿಟ್ರಿ. ಭೇಟಿಯಾಗದನ್ನು ಬಿಟ್‌ರಲ್ರಿ.”

“ಅಂಗೇನು ಯಿಲ್ಲ ಸಾರ್, ನೀವು ಬಿಜಿಲಿದ್ರಿ. ಅದಕ್ಕಿಂತ್ಲೂ, ಎಷ್ಟೋ ದಿನ ನಾವು ಮುನಿಸಿಕೊಂಡಿದ್ರೂ ಸಹ ಪುನಹ ನಿಮ್ಮತ್ರ ಬರಬೇಕಾಗತ್ತೆ, ಜಿ.ಟಿ ದೇವೇಗೌಡರ ತರ.”

“ದೇವೇಗೌಡ್ರು ಮುನಿಸಿಕೊಂಡಿದ್ದಕ್ಕೆ ಹಲವಾರು ಕಾರಣಗಳು ಇವೆ. ಅವನ್ನೆಲ್ಲ ಮಾತನಾಡತಕ್ಕಂತ ತೀರ್ಮಾನ ತಗೊಳತಕ್ಕಂತ ಸಮಯ ಇದಲ್ಲ. ನಮ್ಮ ಮೈಸೂರು ಭಾಗದಲ್ಲಿ ಅವರು ದಳಕ್ಕೆ ಒಂದು ಶಕ್ತಿಯಾಗಿರತಕ್ಕಂತದ್ದು, ಈಗಾಗ್ಲೆ ತೀರ್ಮಾನ ಆಗಿರತಕ್ಕಂತ ವಿಚಾರ ಆದ್ದರಿಂದ ನಮ್ಮ ತಂದೆಯವರು, ಮಾಜಿ ಪ್ರಧಾನಿಗಳಾದ ಮಾನ್ಯ ದೇವೇಗೌಡ್ರು ಕರದ ಕೂಡಲೆ ಬಂದು ಅಳತೆ ಗೌರವ ತೋರಿರತಕ್ಕಂತ ವಿಷಯ ಏನಿದೆ ಅದ್ಯಲ್ಲ ಮುಗದು ಈಗ ಅವರು ದಳದ ಸಂಘಟನೆಲಿ ಸಕ್ರಿಯವಾಗಿರತಕ್ಕಂತದ್ದು ನೀವೆ ನೋಡಿದ್ದಿರಿ.”

“ಆದ್ರು ಜಿ.ಟಿ ದೇವೇಗೌಡ್ರ ನಂಬಿದ್ದೋರು ಐದು ಜನ ಕಾಂಗ್ರಸ್ಸಿಗೋದರಲ್ಲ ಸಾರ್?”

“ಅವುರ ಬಗ್ಗೆ ಹೆಚ್ಚಿಗೆ ಮಾತಾಡತಕ್ಕಂತ ವಿಷಯಕ್ಕೆ ಹೋಗಲ್ಲ. ಅಲ್ಲಿ ನಾಲ್ಕೆ ಜನ ಸಾಕು ಅನತಕ್ಕಂತ ತೀರ್ಮಾನವ ಅವರೇ ತಗಂಡು ಈಗಾಗ್ಲೆ ಒಬ್ಬ ವಾಪಸು ಪುನಹ ನಮ್ಮ ಪಾರ್ಟಿಗೆ ಬಂದವುರೆ, ನಾನು ಯಾವತ್ತು ಕೂಡ ನಮ್ಮ ಪಾರ್ಟಿ ಬಿಟ್ಟು ಹೋಗುವರ ಬಗ್ಗೆಯಾಗಲಿ ಬರತಕ್ಕಂತ ವ್ಯಕ್ತಿಗಳ ಬಗೆಯಾಗ್ಲಿ ಕಾಳಜಿ ವಹಿಸದೆ ಇರತಕ್ಕತಂದ್ದು ಮೊದಲಿನಿಂದಲೂ ನಾವು ರೂಢಿಸಿಕೊಂಡು ಬಂದಂತ ತೀರ್ಮಾನಗಳೇನಿವೆ ಅವನ್ನ ಪಾಲನೆ ಮಾಡತಕ್ಕಂತದ್ದು ನಮ್ಮ ಜವಾಬ್ದಾರಿ.”

“ಮತ್ತೆ ಜಿ.ಟಿ ದೇವೇಗೌಡ್ರನ್ನ ಕಾಡಿ ಬೇಡಿ ಕರಕೊಂಡ್ರಲ್ಲ ಸಾರ್?”

“ಅದು ನಮ್ಮ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನ. ಅವುರು ತೆಗೆದುಕೊಳ್ಳತಕ್ಕಂತ ತೀರ್ಮಾನ ಏನಿದೆ ಅವುನ್ನ ಗೌರವಿಸತಕ್ಕಂತದ್ದು ನಮ್ಮ ಕರ್ತವ್ಯ”

“ಇನ್ನೊಂದು ಗಂಭೀರ ವಿಷಯ ಸಾರ್, ನೀವು ಇಬ್ರಾಹಿಂ ಮುಖ್ಯಮಂತ್ರಿಯಾಗದರಲ್ಲಿ ತಪ್ಪೇನಿದೆ ಅವುರೇನು ಅಸ್ಪೃಶ್ಯರೆ ಅಂದುಬಿಟ್ಟಿದ್ದಿರಿ. ಈ ಮಾತಿಗೆ ಈಗಾಗ್ಲೆ ಕಂಪ್ಲೇಟು ಆಗಿದೆ, ಯಾಕಂಗದ್ರಿ ಸಾರ್?”

“ನಾನಂಗಂದಿರದು ಕಂಪ್ಲೇಟು ದಾಖಲಾಗಿರದನ್ನ ಗಮನಿಸಿದ್ದಿನಿ. ನಾನು ಹೇಳಿರತಕ್ಕಂತ ಮಾತೇನಿದೆ ಅದು ಕಾಂಗ್ರೆಸಿನವರಾಡೊ ಮಾತು; ಈ ದೇಶದಲ್ಲಿ ಅಸ್ಪೃಶ್ಯರು ಅವರೆ, ಅವುರು ಇನ್ನ ಇದ್ದಾರೆ ಅನ್ನದಾದ್ರೆ ಇಷ್ಟು ವರ್ಷ ದೇಶ ಆಳಿದ ಕಾಂಗ್ರೆಸಿನವರು ಅವರು ಇಲ್ದಂಗೆ ಮಾಡಬೇಕಾಗಿತ್ತು. ಅದು ಆಡಳಿತ ನ್ಯಡಸತಕ್ಕಂತ ಅವುರ ಜವಬ್ದಾರಿ ಆಗಿತ್ತು. ಅಸ್ಪೃಶ್ಯತೆ ಪದ ಹಿಡಕಂಡು ನಮ್ಮನ್ನ ಕೆಣಕತಕ್ಕಂತ ಸಾಹಸವ ಈ ಕಾಂಗ್ರೆಸ್ಸಿನವರು ಮಾಡ್ತ ಅವುರೆ. ಅವುರಿಗೆ ನಾನು ಈ ಮುಖಾಂತರ ಎಚ್ಚರಿಕೆ ಕೋಡ್ತಿನಿ.”

“ಪ್ರಶ್ನೆ ಕೇಳಿದ್ದು ಪತ್ರಿಕೆಯವರಲ್ಲವ ಸಾರ್?”

“ಇರಬಹುದು ಅವುರ್‍ಯಾರು ಎಂಬತಕ್ಕಂತ ಮಾಹಿತಿ ನಮ್ಮತ್ರ ಇದೆ. ನಾವು ಯಾವತ್ತೂ ಅಸ್ಪೃಶ್ಯರ ಬಗ್ಗೆ ಕೀಳಾಗಿ ನಡಕೊಂಡಿಲ್ಲ, ತಪ್ಪಾಗಿ ನ್ಯಡಕೊಂಡಿಲ್ಲ. ಅವರ ಭುಜದ ಮೇಲೆ ಕೈಹಾಕಿ ಮಾತನಾಡಿಸಿದ್ದೀನಿ. ರಾಮಕೃಷ್ಣ ಹೆಗಡೆ ಕಾಲದಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆ ಆದಾಗ ನಮ್ಮ ತಂದೆಯವರು ಒಬ್ಬ ದಲಿತರನ್ನು ಹಾಸನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರನ್ನಾಗಿ ಮಾಡಿದ್ರು. ಇದೇ ಕಾಂಗ್ರೆಸ್ಸಿಗರು ಮಾಡಿದ್ರಾ? ಅವುರಿಗೆ ಪವರ್ ಬಂದಾಗ ಪರಮೇಶ್ವರನ್ನ ಮಾಡಿದ್ರ? ಅದ್ಕೂ ಹಿಂದೆ ರಂಗನಾಥ ಬಸವಲಿಂಗಪ್ಪ ಇದ್ರಲ್ಲ ಮಾಡಿದ್ರಾ, ಖರ್ಗೆಯವರನ್ನ ಮಾಡಿದ್ರಾ?”

“ಖರ್ಗೆಯವರನ್ನ ಮಾಡದಂಗೆ ದೇವೇಗೌಡ್ರು ತಡೆಹಾಕಿದ್ರಲ್ಲ ಸಾರ್?”

“ದೇವೇಗೌಡ್ರು ಅಂತ ಕ್ಯಲಸ ಯಾವಾಗ್ಲು ಮಾಡಿಲ್ಲ.”

“ನಮ್ಮ ಕಣ್ಣೆದುರೆ ಮಾಡಿದ್ರಲ್ಲ ಸಾರ್. ಆಗ ಸಮ್ಮಿಶ್ರ ಸರಕಾರ ಮಾಡುವಾಗ ಸೋನಿಯಾ ಗಾಂಧಿ ಮುಖ್ಯಮಂತ್ರಿ ಪದವಿನೆ ತಗೊಳಿ ಅಂದ್ರು. ಆಗ ಗೌಡ್ರು ಬೇಡ ಬೇಡ ನಮಗೆ ಉಪಮುಖ್ಯಮಂತ್ರಿ ಸಾಕು ಅಂದ್ರು. ಯಾಕೆ ಅಂತ ಪತ್ತೆಹಚ್ಚಿದಾಗ, ಮುಂದೆ ಧರ್ಮಸಿಂಗ್‌ಗೆ ಕೊಟ್ಟ ಬೆಂಬಲ ವಾಪಸ್ ತಗಂಡಾಗ ಯಾರೂ ಪ್ರತಿಭಟಿಸಲಿಲ್ಲ; ಅದೇ ಖರ್ಗೆ ಮುಖ್ಯಮಂತ್ರಿಯಾಗಿದ್ದು ಬೆಂಬಲ ಹಿಂತಗಂಡ್ರೆ ಇಡೀ ಕರ್ನಾಟಕದ ದಲಿತರು ಪ್ರತಿಭಟಿಸತಿದ್ರು. ಇದು ಗೊತ್ತಾಗಿ ದೇವೇಗೌಡ್ರು ಧರ್ಮಸಿಂಗ್‌ಗೆ ಸಪೋರ್ಟ್ ಮಾಡಿ ವಾಪಸ್ ತಗೊ ಅಂತ ನಿಮಗೇಳೀದ್ರಂತೆ, ಪಾಪ ಗೌಡ್ರು ಪ್ಲಾನು ನಿಮಗೂ ಗೊತ್ತಾಗಲಿಲ್ಲ ಅಲವಾ ಸಾರ್?”

“ಇದ್ಯಲ್ಲ ಕಟ್ಟುಕತೆ ಕಂಡ್ರಿ, ಇದೇ ಡಿ.ಕೆ ಶಿವಕುಮಾರ ನಮ್ಮ ಪಾರ್ಟಿ ಜನನ ಯಳಿಯಕ್ಕೆ ನೋಡಿದಾಗ, ನಾನೇ ಪಾರ್ಟಿ ಉಳಿಸಿಗಳಕ್ಕೆ ಅಂಗೆ ಮಾಡಿದ್ದೆ.”

“ಈಗ್ಲು ಉಸಾರಾಗಿರಿ ಸಾರ್. ಇಬ್ರಾಹಿಂ ನಿಮ್ಮ ಬಗುಲಲ್ಲೇ ಅವುರೆ. ಆತ ಕಾಂಗ್ರೆಸ್‌ನಲ್ಲಿದ್ದು ಯಡಿಯೂರಪ್ಪನಿಗೆ ಮುವ್ವತ್ತು ಸಾವುರ ಓಟಾಕ್ಸಿದನಂತೆ. ಅವುರೆ ಅಂಗಂದವುರೆ. ನಿಮ್ಮ ಕ್ಷೇತ್ರದ ಮುಸ್ಲಿಮರು ಯಂಗವ್ರೆ ನೋಡಿಕಳಿ.”

“ಇಬ್ರಾಹಿಂ ಏನು ಅಂತ ನಮಗೆ ಚನ್ನಾಗಿ ಗೊತ್ತು. ನಮ್ಮ ತಂದೆಯವರಿಗೆ ಇನ್ನು ಗೊತ್ತು.”

“ಥೂತ್ತೇರಿ”


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...