Homeಅಂಕಣಗಳುಇಬ್ರಾಹಿಂ ಏನು ಅಂತ ನಮಗೆ ಚನ್ನಾಗಿ ಗೊತ್ತು; ನಮ್ಮ ತಂದೆಯವರಿಗೆ ಇನ್ನೂ ಗೊತ್ತು..

ಇಬ್ರಾಹಿಂ ಏನು ಅಂತ ನಮಗೆ ಚನ್ನಾಗಿ ಗೊತ್ತು; ನಮ್ಮ ತಂದೆಯವರಿಗೆ ಇನ್ನೂ ಗೊತ್ತು..

- Advertisement -
- Advertisement -

ಕಾಂಗೈಗಳನ್ನು ಟೀಕಿಸುವ ಸಾಮಗ್ರಿಯನ್ನು ಖಾಲಿ ಮಾಡಿಕೊಂಡ ಈ ಬಿಜೆಪಿಗಳು ನಿಮ್ಮದು ರಾವಣನ ಪಕ್ಷ ನಮ್ಮದು ರಾಮನ ಪಕ್ಷ ಎಂದುಬಿಟ್ಟಿವೆಯಲ್ಲಾ. ಇದಕ್ಕೆ ತಕ್ಕ ಉತ್ತರ ಕೊಡಲು ತಡಕಾಡುತ್ತಿರುವ ಕಾಂಗೈಗಳು ಹಾಗೇ ಸ್ವಲ್ಪ ಯೋಚಿಸಿದ್ದರೆ ರಾವಣ ಎಂತವನು ಎಂಬುದು ಅರಿವಾಗುತ್ತಿತ್ತು. ರಾವಣನ ಹತ್ತು ತಲೆ ಅವನ ಶಕ್ತಿ ಸಾಮರ್ಥ್ಯದ ಸಂಕೇತ. ಆತ ಅಪ್ಪಟ ಶಿವಭಕ್ತ, ಸಂಗೀತಗಾರ, ಮಹಾವೈಣಿಕ, ನೃತ್ಯಪಟು, ಅಜೇಯ, ಒಳ್ಳೆ ಆಡಳಿತಗಾರ, ಕುಬೇರರನ್ನು ಸೋಲಿಸಿ ಪುಷ್ಪಕ ವಿಮಾನ ಪಡೆದವನು. ಭುಜಂಗ ಸ್ತೋತ್ರ ರಚಿಸಿದ ಕರ್ತೃ. ಜ್ವಲಿಸುವ ಅಗ್ನಿಯಂತಿದ್ದ ರಾಜಲಕ್ಷಣದಿಂದ ಶೋಭಿತನಾದ ಆತ ಈ ಪ್ರಪಂಚಕ್ಕೆ ಮೊದಲು ಮೀಸಲಾತಿ ತಂದವನು. ಲಂಕೆಯನ್ನು ರಕ್ಷಿಸಲು ಲಂಕಿಣಿ, ದಂಡಕಾರಣ್ಯ ರಕ್ಷಿಸಲು ತಾಟಕಿ, ಲಂಕೆ ಹೆಬ್ಬಾಗಿಲು ಕಾಯಲು ಸಿಂಹಿಣಿ, ಅಶೋಕವನ ನೋಡಿಕೊಳ್ಳಲು ತ್ರಿಜಟಿಯನ್ನು ನೇಮಿಸಿದ್ದ. ಹೆಣ್ಣನ್ನು ಮೋಸ ಮಾಡಿ ಕೊಂದವನಲ್ಲ. ಮರದ ಮರೆಯಲ್ಲಿ ನಿಂತು ಯುದ್ಧ ಮಾಡಿದವನಲ್ಲ. ಯಾರದೋ ಮಾತಿಗೆ ಮಡದಿಯನ್ನೇ ಕಾಡಿಗಟ್ಟಿದವನಲ್ಲ. ಹೆಂಡತಿ ಬಗ್ಗೆ ಸಂಶಯಗೊಂಡು ಬೆಂಕಿ ಮುಟ್ಟಲು ಹೇಳಿದವನಲ್ಲ ರಾವಣ. ಹೀಗೆ ರಾವಣನ ಗುಣಗಳನ್ನು ಪಟ್ಟಿಮಾಡಿ ಬಿಜೆಪಿಗೆ ಕಾಂಗೈಗಳು ಸವಾಲೆಸೆಯುವ ಬದಲು ಗೊಂದಲಕ್ಕೆ ಬಿದ್ದಿವೆಯಲ್ಲಾ. ಈ ಗೊಂದಲಕ್ಕೆ ಕಾರಣ ಬಿಜೆಪಿಗಳು ನಿಮ್ಮನ್ನು ರಾವಣ ಪಕ್ಷ ಎಂದ ಕೂಡಲೇ ನಮ್ಮಲ್ಲಿ ರಾವಣ ಸಿದ್ದರಾಮಯ್ಯನೊ ಅಥವಾ ಡಿ.ಕೆ ಶಿವಕುಮಾರನೊ ಎಂದು ಯೋಚಿಸುತ್ತ ಕುಳಿತಿವೆಯಂತಲ್ಲಾ ಥೂತ್ತೇರಿ.

ಕಾಂಗೈ ಮತ್ತು ಬಿಜೆಪಿಗಳ ಕತೆ ಹೀಗಿದ್ದರೆ ಇನ್ನ ಯಾತ್ರೆ ಆರಂಭಿಸಿದ ದಿನದಿಂದಲೂ ಹಲವಾರು ಅಡ್ಡಿ ಆತಂಕಗಳನ್ನು ಎದುರಿಸುತ್ತಿರುವ ನಮ್ಮ ಕುಮಾರಣ್ಣನನ್ನು ಮಾತನಾಡಿಸಿ ಬಹಳ ದಿನಗಳಾದವು. ಪಂಚರತ್ನ ಯಾತ್ರೆ ಸ್ಥಗಿತಗೊಳಿಸಿ ಸುಧಾರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಮಾತಿಗೆ ಸಿಕ್ಕಬಹುದೆಂದು ಪೋನ್ ಮಾಡಲಾಗಿ ಪೋನ್ ರಿಂಗಾಯ್ತು, ರಿಂಗ್ ಟೋನು “ಮುರುಳಿಯ ಮರೆಸಿ ನಗುತಿಹೆ ಸರಸಿ..” ಹಲೋ ಯಾರು?

“ನಾನು ಸಾರ್, ಯಾಹೂ.”

“ಏನ್ರಿ ಯಾಹೂ ಇತ್ತೀಚೆಗೆ ಪೋನ್ ಮಾಡದನ್ನು ಬಿಟ್ರಿ. ಭೇಟಿಯಾಗದನ್ನು ಬಿಟ್‌ರಲ್ರಿ.”

“ಅಂಗೇನು ಯಿಲ್ಲ ಸಾರ್, ನೀವು ಬಿಜಿಲಿದ್ರಿ. ಅದಕ್ಕಿಂತ್ಲೂ, ಎಷ್ಟೋ ದಿನ ನಾವು ಮುನಿಸಿಕೊಂಡಿದ್ರೂ ಸಹ ಪುನಹ ನಿಮ್ಮತ್ರ ಬರಬೇಕಾಗತ್ತೆ, ಜಿ.ಟಿ ದೇವೇಗೌಡರ ತರ.”

“ದೇವೇಗೌಡ್ರು ಮುನಿಸಿಕೊಂಡಿದ್ದಕ್ಕೆ ಹಲವಾರು ಕಾರಣಗಳು ಇವೆ. ಅವನ್ನೆಲ್ಲ ಮಾತನಾಡತಕ್ಕಂತ ತೀರ್ಮಾನ ತಗೊಳತಕ್ಕಂತ ಸಮಯ ಇದಲ್ಲ. ನಮ್ಮ ಮೈಸೂರು ಭಾಗದಲ್ಲಿ ಅವರು ದಳಕ್ಕೆ ಒಂದು ಶಕ್ತಿಯಾಗಿರತಕ್ಕಂತದ್ದು, ಈಗಾಗ್ಲೆ ತೀರ್ಮಾನ ಆಗಿರತಕ್ಕಂತ ವಿಚಾರ ಆದ್ದರಿಂದ ನಮ್ಮ ತಂದೆಯವರು, ಮಾಜಿ ಪ್ರಧಾನಿಗಳಾದ ಮಾನ್ಯ ದೇವೇಗೌಡ್ರು ಕರದ ಕೂಡಲೆ ಬಂದು ಅಳತೆ ಗೌರವ ತೋರಿರತಕ್ಕಂತ ವಿಷಯ ಏನಿದೆ ಅದ್ಯಲ್ಲ ಮುಗದು ಈಗ ಅವರು ದಳದ ಸಂಘಟನೆಲಿ ಸಕ್ರಿಯವಾಗಿರತಕ್ಕಂತದ್ದು ನೀವೆ ನೋಡಿದ್ದಿರಿ.”

“ಆದ್ರು ಜಿ.ಟಿ ದೇವೇಗೌಡ್ರ ನಂಬಿದ್ದೋರು ಐದು ಜನ ಕಾಂಗ್ರಸ್ಸಿಗೋದರಲ್ಲ ಸಾರ್?”

“ಅವುರ ಬಗ್ಗೆ ಹೆಚ್ಚಿಗೆ ಮಾತಾಡತಕ್ಕಂತ ವಿಷಯಕ್ಕೆ ಹೋಗಲ್ಲ. ಅಲ್ಲಿ ನಾಲ್ಕೆ ಜನ ಸಾಕು ಅನತಕ್ಕಂತ ತೀರ್ಮಾನವ ಅವರೇ ತಗಂಡು ಈಗಾಗ್ಲೆ ಒಬ್ಬ ವಾಪಸು ಪುನಹ ನಮ್ಮ ಪಾರ್ಟಿಗೆ ಬಂದವುರೆ, ನಾನು ಯಾವತ್ತು ಕೂಡ ನಮ್ಮ ಪಾರ್ಟಿ ಬಿಟ್ಟು ಹೋಗುವರ ಬಗ್ಗೆಯಾಗಲಿ ಬರತಕ್ಕಂತ ವ್ಯಕ್ತಿಗಳ ಬಗೆಯಾಗ್ಲಿ ಕಾಳಜಿ ವಹಿಸದೆ ಇರತಕ್ಕತಂದ್ದು ಮೊದಲಿನಿಂದಲೂ ನಾವು ರೂಢಿಸಿಕೊಂಡು ಬಂದಂತ ತೀರ್ಮಾನಗಳೇನಿವೆ ಅವನ್ನ ಪಾಲನೆ ಮಾಡತಕ್ಕಂತದ್ದು ನಮ್ಮ ಜವಾಬ್ದಾರಿ.”

“ಮತ್ತೆ ಜಿ.ಟಿ ದೇವೇಗೌಡ್ರನ್ನ ಕಾಡಿ ಬೇಡಿ ಕರಕೊಂಡ್ರಲ್ಲ ಸಾರ್?”

“ಅದು ನಮ್ಮ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನ. ಅವುರು ತೆಗೆದುಕೊಳ್ಳತಕ್ಕಂತ ತೀರ್ಮಾನ ಏನಿದೆ ಅವುನ್ನ ಗೌರವಿಸತಕ್ಕಂತದ್ದು ನಮ್ಮ ಕರ್ತವ್ಯ”

“ಇನ್ನೊಂದು ಗಂಭೀರ ವಿಷಯ ಸಾರ್, ನೀವು ಇಬ್ರಾಹಿಂ ಮುಖ್ಯಮಂತ್ರಿಯಾಗದರಲ್ಲಿ ತಪ್ಪೇನಿದೆ ಅವುರೇನು ಅಸ್ಪೃಶ್ಯರೆ ಅಂದುಬಿಟ್ಟಿದ್ದಿರಿ. ಈ ಮಾತಿಗೆ ಈಗಾಗ್ಲೆ ಕಂಪ್ಲೇಟು ಆಗಿದೆ, ಯಾಕಂಗದ್ರಿ ಸಾರ್?”

“ನಾನಂಗಂದಿರದು ಕಂಪ್ಲೇಟು ದಾಖಲಾಗಿರದನ್ನ ಗಮನಿಸಿದ್ದಿನಿ. ನಾನು ಹೇಳಿರತಕ್ಕಂತ ಮಾತೇನಿದೆ ಅದು ಕಾಂಗ್ರೆಸಿನವರಾಡೊ ಮಾತು; ಈ ದೇಶದಲ್ಲಿ ಅಸ್ಪೃಶ್ಯರು ಅವರೆ, ಅವುರು ಇನ್ನ ಇದ್ದಾರೆ ಅನ್ನದಾದ್ರೆ ಇಷ್ಟು ವರ್ಷ ದೇಶ ಆಳಿದ ಕಾಂಗ್ರೆಸಿನವರು ಅವರು ಇಲ್ದಂಗೆ ಮಾಡಬೇಕಾಗಿತ್ತು. ಅದು ಆಡಳಿತ ನ್ಯಡಸತಕ್ಕಂತ ಅವುರ ಜವಬ್ದಾರಿ ಆಗಿತ್ತು. ಅಸ್ಪೃಶ್ಯತೆ ಪದ ಹಿಡಕಂಡು ನಮ್ಮನ್ನ ಕೆಣಕತಕ್ಕಂತ ಸಾಹಸವ ಈ ಕಾಂಗ್ರೆಸ್ಸಿನವರು ಮಾಡ್ತ ಅವುರೆ. ಅವುರಿಗೆ ನಾನು ಈ ಮುಖಾಂತರ ಎಚ್ಚರಿಕೆ ಕೋಡ್ತಿನಿ.”

“ಪ್ರಶ್ನೆ ಕೇಳಿದ್ದು ಪತ್ರಿಕೆಯವರಲ್ಲವ ಸಾರ್?”

“ಇರಬಹುದು ಅವುರ್‍ಯಾರು ಎಂಬತಕ್ಕಂತ ಮಾಹಿತಿ ನಮ್ಮತ್ರ ಇದೆ. ನಾವು ಯಾವತ್ತೂ ಅಸ್ಪೃಶ್ಯರ ಬಗ್ಗೆ ಕೀಳಾಗಿ ನಡಕೊಂಡಿಲ್ಲ, ತಪ್ಪಾಗಿ ನ್ಯಡಕೊಂಡಿಲ್ಲ. ಅವರ ಭುಜದ ಮೇಲೆ ಕೈಹಾಕಿ ಮಾತನಾಡಿಸಿದ್ದೀನಿ. ರಾಮಕೃಷ್ಣ ಹೆಗಡೆ ಕಾಲದಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆ ಆದಾಗ ನಮ್ಮ ತಂದೆಯವರು ಒಬ್ಬ ದಲಿತರನ್ನು ಹಾಸನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರನ್ನಾಗಿ ಮಾಡಿದ್ರು. ಇದೇ ಕಾಂಗ್ರೆಸ್ಸಿಗರು ಮಾಡಿದ್ರಾ? ಅವುರಿಗೆ ಪವರ್ ಬಂದಾಗ ಪರಮೇಶ್ವರನ್ನ ಮಾಡಿದ್ರ? ಅದ್ಕೂ ಹಿಂದೆ ರಂಗನಾಥ ಬಸವಲಿಂಗಪ್ಪ ಇದ್ರಲ್ಲ ಮಾಡಿದ್ರಾ, ಖರ್ಗೆಯವರನ್ನ ಮಾಡಿದ್ರಾ?”

“ಖರ್ಗೆಯವರನ್ನ ಮಾಡದಂಗೆ ದೇವೇಗೌಡ್ರು ತಡೆಹಾಕಿದ್ರಲ್ಲ ಸಾರ್?”

“ದೇವೇಗೌಡ್ರು ಅಂತ ಕ್ಯಲಸ ಯಾವಾಗ್ಲು ಮಾಡಿಲ್ಲ.”

“ನಮ್ಮ ಕಣ್ಣೆದುರೆ ಮಾಡಿದ್ರಲ್ಲ ಸಾರ್. ಆಗ ಸಮ್ಮಿಶ್ರ ಸರಕಾರ ಮಾಡುವಾಗ ಸೋನಿಯಾ ಗಾಂಧಿ ಮುಖ್ಯಮಂತ್ರಿ ಪದವಿನೆ ತಗೊಳಿ ಅಂದ್ರು. ಆಗ ಗೌಡ್ರು ಬೇಡ ಬೇಡ ನಮಗೆ ಉಪಮುಖ್ಯಮಂತ್ರಿ ಸಾಕು ಅಂದ್ರು. ಯಾಕೆ ಅಂತ ಪತ್ತೆಹಚ್ಚಿದಾಗ, ಮುಂದೆ ಧರ್ಮಸಿಂಗ್‌ಗೆ ಕೊಟ್ಟ ಬೆಂಬಲ ವಾಪಸ್ ತಗಂಡಾಗ ಯಾರೂ ಪ್ರತಿಭಟಿಸಲಿಲ್ಲ; ಅದೇ ಖರ್ಗೆ ಮುಖ್ಯಮಂತ್ರಿಯಾಗಿದ್ದು ಬೆಂಬಲ ಹಿಂತಗಂಡ್ರೆ ಇಡೀ ಕರ್ನಾಟಕದ ದಲಿತರು ಪ್ರತಿಭಟಿಸತಿದ್ರು. ಇದು ಗೊತ್ತಾಗಿ ದೇವೇಗೌಡ್ರು ಧರ್ಮಸಿಂಗ್‌ಗೆ ಸಪೋರ್ಟ್ ಮಾಡಿ ವಾಪಸ್ ತಗೊ ಅಂತ ನಿಮಗೇಳೀದ್ರಂತೆ, ಪಾಪ ಗೌಡ್ರು ಪ್ಲಾನು ನಿಮಗೂ ಗೊತ್ತಾಗಲಿಲ್ಲ ಅಲವಾ ಸಾರ್?”

“ಇದ್ಯಲ್ಲ ಕಟ್ಟುಕತೆ ಕಂಡ್ರಿ, ಇದೇ ಡಿ.ಕೆ ಶಿವಕುಮಾರ ನಮ್ಮ ಪಾರ್ಟಿ ಜನನ ಯಳಿಯಕ್ಕೆ ನೋಡಿದಾಗ, ನಾನೇ ಪಾರ್ಟಿ ಉಳಿಸಿಗಳಕ್ಕೆ ಅಂಗೆ ಮಾಡಿದ್ದೆ.”

“ಈಗ್ಲು ಉಸಾರಾಗಿರಿ ಸಾರ್. ಇಬ್ರಾಹಿಂ ನಿಮ್ಮ ಬಗುಲಲ್ಲೇ ಅವುರೆ. ಆತ ಕಾಂಗ್ರೆಸ್‌ನಲ್ಲಿದ್ದು ಯಡಿಯೂರಪ್ಪನಿಗೆ ಮುವ್ವತ್ತು ಸಾವುರ ಓಟಾಕ್ಸಿದನಂತೆ. ಅವುರೆ ಅಂಗಂದವುರೆ. ನಿಮ್ಮ ಕ್ಷೇತ್ರದ ಮುಸ್ಲಿಮರು ಯಂಗವ್ರೆ ನೋಡಿಕಳಿ.”

“ಇಬ್ರಾಹಿಂ ಏನು ಅಂತ ನಮಗೆ ಚನ್ನಾಗಿ ಗೊತ್ತು. ನಮ್ಮ ತಂದೆಯವರಿಗೆ ಇನ್ನು ಗೊತ್ತು.”

“ಥೂತ್ತೇರಿ”


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...