Homeಮುಖಪುಟಪೊಲೀಸ್‌ ಎನ್‌ಕೌಂಟರ್‌ ಅನ್ನು ಪ್ರಶ್ನಿಸುತ್ತಿರುವ ಹತರಾದ ಆರೋಪಿಗಳ ಕುಟುಂಬಗಳು...

ಪೊಲೀಸ್‌ ಎನ್‌ಕೌಂಟರ್‌ ಅನ್ನು ಪ್ರಶ್ನಿಸುತ್ತಿರುವ ಹತರಾದ ಆರೋಪಿಗಳ ಕುಟುಂಬಗಳು…

- Advertisement -
- Advertisement -

ತೆಲಂಗಾಣ ಪಶುವೈದ್ಯೆ ಮೇಲಿನ ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ್ದಕ್ಕೆ ಪೊಲೀಸರನ್ನು ಬಹಳಷ್ಟು ಜನ ಶ್ಲಾಘಿಸುತ್ತಿದ್ದರೆ ಇತ್ತ ಹತರಾದ ಆರೋಪಿಗಳ ಕುಟುಂಬದವರು ಪೊಲೀಸರ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.

ಕೊಲ್ಲಲ್ಪಟ್ಟ ನಾಲ್ವರಲ್ಲಿ ಒಬ್ಬರಾದ ಚಿಂತಕುಂಟ ಚೆನ್ನಕೇಶವಲು ಅವರ ಪತ್ನಿ ಹದಿನೇಳು ವರ್ಷದ ರೇಣುಕಾ  “ನನ್ನನ್ನು ಅದೇ ಸ್ಥಳಕ್ಕೆ ಕರೆದುಕೊಂಡು ಹೋಗಿ ನನ್ನನ್ನೂ ಕೊಲ್ಲಿ. ಅವನು ಇಲ್ಲದೆ ನಾನು ಬದುಕಲು ಸಾಧ್ಯವಿಲ್ಲ. ನಾನು ಸಾಯಲು ಬಯಸುತ್ತೇನೆ” ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ನಾರಾಯಣಪೇಟೆ ಜಿಲ್ಲೆಯ ಮಕ್ತಾಲ್ ಬ್ಲಾಕ್‌ನ ಗುಡಿಗಂಡ್ಲಾ ಗ್ರಾಮದ ಚೆನ್ನಕೇಶವಲು (20) ಮದುವೆಯಾದ ನಾಲ್ವರು ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಎನ್‌ಕೌಂಟರ್‌ನಲ್ಲಿ ಅವರ ಸಾವಿನ ಬಗ್ಗೆ ತಿಳಿದ ನಂತರ ಅವರ ಕುಟುಂಬವು ಆಘಾತದ ಸ್ಥಿತಿಯಲ್ಲಿತ್ತು.

ಪೊಲೀಸರು ನನ್ನ ಪತಿಯನ್ನು ಕರೆದುಕೊಂಡು ಹೋಗಿದ್ದು, ವಿಚಾರಣೆ ನಡೆಸಿದ ನಂತರ ವಾಪಸ್ ಕರೆತರುವುದಾಗಿ ಭರವಸೆ ನೀಡಿದ್ದರು. “ಆದರೆ ಈಗ ಅವರು ಅವನನ್ನು ನಿರ್ದಯವಾಗಿ ಕೊಂದಿದ್ದಾರೆ. ನನ್ನ ಗಂಡನನ್ನು ಹಿಂತಿರುಗಿಸಲು ನಾನು ಬಯಸುತ್ತೇನೆ ಅಥವಾ ಪೊಲೀಸರು ನನ್ನನ್ನು ಅದೇ ಸ್ಥಳದಲ್ಲಿ ಕೊಲ್ಲಬೇಕು. ಆತನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ ”ಎಂದು ಅವರು ಗ್ರಾಮದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚೆನ್ನಕೇಶವಲು ಅವರನ್ನು ಮದುವೆಯಾಗಿ ಒಂದು ವರ್ಷವೂ ಆಗಿಲ್ಲ. “ಈಗ, ಪೊಲೀಸರು ನನ್ನ ಗಂಡನನ್ನು ನನ್ನಿಂದ ಇಲ್ಲವಾಗಿಸಿದ್ದಾರೆ” ಎಂದು ಗರ್ಭಧಾರಣೆಯ ಆರಂಭಿಕ ತಿಂಗಳುಗಳಲ್ಲಿರುವ ರೇಣುಕಾ ವಿಷಾದಿಸಿದ್ದಾರೆ.

ರೇಣುಕಾ ತನ್ನ ಪತಿ ಮೃದು ಮತ್ತು ಶಾಂತ ವ್ಯಕ್ತಿ ಎಂದು ಹೇಳಿದರು. “ಆದರೆ ಅವನು ಇತರರೊಂದಿಗೆ ಸಿಕ್ಕಿಬಿದ್ದಿ, ಆರೋಪಿಯಾಗಿದ್ದನು. ಅವನು ನಿಜವಾಗಿಯೂ ಅಪರಾಧ ಮಾಡಿದ್ದರೆ, ನ್ಯಾಯಾಲಯಗಳು ತೀರ್ಮಾನಿಸಿ ಅವನಿಗೆ ಮರಣದಂಡನೆ ವಿಧಿಸಲಿ. ನಾನು ಸಹ ಅತ್ಯಾಚಾರಕ್ಕೊಳಗಾದ ಮತ್ತು ಕೊಲ್ಲಲ್ಪಟ್ಟ ಪಶುವೈದ್ಯೆಯಂತೆಯೇ ಹೆಣ್ಣಲ್ಲವೇ?” ಎಂದು ಪ್ರಶ್ನಿಸಿದ್ದಾಳೆ.

ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಅದೇ ಹಳ್ಳಿಯ ಮತ್ತೊಬ್ಬ ಆರೋಪಿ ಜೊಲ್ಲು ಶಿವನ ತಂದೆ ಜೊಲ್ಲು ರಾಜಪ್ಪ, ತನ್ನ ಮಗನನ್ನು ಕೊಂದಿದ್ದಕ್ಕಾಗಿ ಪೊಲೀಸರಲ್ಲಿ ದೂಷಿಸುವುದಿಲ್ಲ ಎಂದಿದ್ದಾರೆ. “ನನ್ನ ಮಗ ಘೋರ ಅಪರಾಧ ಮಾಡಿದ್ದಾನೆಂದು ಇಡೀ ಜಗತ್ತು ಹೇಳುತ್ತಿದೆ. ನಾಲ್ವರಲ್ಲಿ ಒಬ್ಬರು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಂದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಈಗ, ನನ್ನ ಮಗನಿಗೆ ಶಿಕ್ಷೆ ಸಿಕ್ಕಿತು, ”ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಇದುವರೆಗೂ ಎಲ್ಲಾ ಅತ್ಯಾಚಾರಿಗಳು ಮತ್ತು ಕೊಲೆಗಡುಗರಿಕೆ ಪೊಲೀಸರು ಇದೇ ರೀತಿಯ ಶಿಕ್ಷೆಯನ್ನು ನೀಡಿದ್ದಾರೆಯೇ ಎಂದು ತಿಳಿಯಲು ರಾಜಪ್ಪ ಪ್ರಶ್ನಿಸಿದ್ದಾರೆ. “ನನ್ನ ಮಗ ಮಾಡಿದ ಅಪರಾಧಕ್ಕಾಗಿ ಆತನಿಗೆ ಪೊಲೀಸರು ಕೊಲ್ಲಲು ಸಾಧ್ಯವಾದರೆ, ಪೊಲೀಸರು ಇತರ ಅತ್ಯಾಚಾರಿಗಳಿಗೂ ಇದೇ ರೀತಿಯ ಶಿಕ್ಷೆಯನ್ನು ವಿಧಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಜೊಲ್ಲು ನವೀನ್ ಅವರ ತಂದೆ ಯೆಲ್ಲಪ್ಪ ಇದನ್ನು ಪೊಲೀಸರು ದ್ವೇಷದ ಹತ್ಯೆ ಎಂದು ಬಣ್ಣಿಸಿದ್ದಾರೆ. “ಇದುವರೆಗೂ ನನ್ನ ಮಗನನ್ನು ಭೇಟಿಯಾಗಲು ಮತ್ತು ಅವನೊಂದಿಗೆ ಮಾತನಾಡಲು ಪೊಲೀಸರು ನಮಗೆ ಅವಕಾಶ ನೀಡಲಿಲ್ಲ. ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಅವನು ಮತ್ತು ಇತರರು ತಪ್ಪಿತಸ್ಥರೆಂದು ಸಾಬೀತುಪಡಿಸಲು ಅವರಿಗೆ ಸಾಕಷ್ಟು ಸಮಯವಿತ್ತು. ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೊದಲೇ ಅವರು ಯಾಕೆ ಅವರನ್ನು ಶಿಕ್ಷಿಸಿದರು? ”ಎಂದು ಅವರು ಕೇಳಿದ್ದಾರೆ.

ಪ್ರಧಾನ ಆರೋಪಿ ಮೊಹಮ್ಮದ್ ಆರಿಫ್ ಅವರ ತಾಯಿ ಜಕ್ಕುಲಾರೆ ಗ್ರಾಮದ ಪುತ್ರನ ಸಾವಿನ ಸುದ್ದಿ ಕೇಳಿ ಕುಸಿದು ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...