Homeಮುಖಪುಟನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

ನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

- Advertisement -
- Advertisement -

ಹರಿಯಾಣ ರಾಜ್ಯದ ಯೋಗೇಂದ್ರ ಯಾದವ್ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿರುತ್ತಲೇ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ, ಅವರ ರಾಜಕೀಯ ಶಾಸ್ತ್ರದ ಪರಿಣಿತಿ ಅವರನ್ನು ದೆಹಲಿಗೆ, ಅಲ್ಲಿನ ಸಿಎಸ್‍ಡಿಎಸ್, ಟಿವಿ ಚರ್ಚೆ ಮತ್ತು ಅಂತಿಮವಾಗಿ ನೇರ ರಾಜಕಾರಣಕ್ಕೇ ಎಳೆದು ತಂದಿತು. ರೈತರ ಸಂಕಷ್ಟದ ನಿವಾರಣೆಗೆ ದೇಶಾದ್ಯಂತ ಓಡಾಡಿ ಸಂಘಟಿಸಿದ ಬೃಹತ್ ಹೋರಾಟದ ರೂವಾರಿ ಅವರು. ಇದೀಗ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷರು.

ಭಾರತವೆಂಬ ಪರಿಕಲ್ಪನೆಯೇ ಹಿಂದೆಂದೂ ಕಾಣದಂತಹ ಸವಾಲನ್ನು ಎದುರಿಸುತ್ತಿದೆ. 2019ರ ಫಲಿತಾಂಶದ ನಂತರದಲ್ಲಿ ಭಾರತದ ಗಣತಂತ್ರವನ್ನು ಕೆಡವುವುದ ತಪ್ಪಿಸುವುದೇ ನಮ್ಮ ಕಾಲದ ಅತ್ಯಂತ ಜರೂರಿಯಾದ ಕಾರ್ಯವಾಗಿದೆ. ಇದು ನಮ್ಮ ಯುಗಧರ್ಮ. ಈ ತನಕ ಈ ಸವಾಲನ್ನು ಎದುರಿಸುತ್ತಿರುವ ರೀತಿಯಲ್ಲಿ ಒಂದೋ ಬೌದ್ಧಿಕ ಆಲಸ್ಯ, ರಾಜಕೀಯ ಪಕ್ಷಪಾತ ಅಥವಾ ಕೇವಲ ಮೋದಿ ವಿರೋಧದ ಗೀಳುಗಳು ಎದ್ದು ಕಾಣುತ್ತಿವೆ.

ಮೋದಿ ಸರಕಾರಕ್ಕೆ ಎದುರಾಗಿರುವ ವಿರೋಧದ ದೊಡ್ಡ ಸಮಸ್ಯೆಯೆಂದರೆ, ಈ ವಿರೋಧಿಗಳಲ್ಲಿ ಹೊಸ ಆಡಳಿತವು ಯಾವ ಮಟ್ಟಿಗೆ ಸವಾಲೊಡ್ಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವೇ ಇಲ್ಲ. ಈ ಪರಿವಾರದ ಆಳವಾದ ಬೇರುಗಳನ್ನು ಗುರುತಿಸದೆ, ತಕ್ಷಣದ ಪರಿಹಾರಗಳನ್ನು ಹುಡುಕುವುದರಾಚೆ ತಲೆ ಕೆಡಿಸಿಕೊಳ್ಳದಿರುವ ಸಮಸ್ಯೆ ಗಾಢವಾಗಿದೆ. ಇದುವರೆಗೆ, ಮೋದಿ ಆಡಳಿತಕ್ಕೆ ಬಂದಿರುವ ಪ್ರತಿಕ್ರಿಯೆಗಳು ಮುಂಚೆಯೇ ಊಹಿಸಬಹುದಾದಂಥವು ಮಾತ್ರವೇ ಆಗಿದೆ: ಮೋದಿ ಗುಳ್ಳೆ ತನ್ನಂತೆ ತಾನೇ ಒಡೆದು ಹೋಗಲಿ ಎಂದು ಬಯಸಿ ಕಾಯುವುದು; ಮೋದಿಯನ್ನು ವಿರೋಧಿಸುವುದಕ್ಕಾಗಿ ವಿರೋಧ ಎಂದು ತೋರುವಂತೆ ಪ್ರತಿಕ್ರಿಯಿಸುವುದು; ಅವರು ಯಾವುದರಲ್ಲಿ ಪ್ರಬಲರೋ ಅದೇರೀತಿಯಲ್ಲಿ ಎದುರಿಸುವ ಪ್ರಯತ್ನ; ಜನರ ಕಣ್ಣಲ್ಲಿ ಅಮಾನ್ಯರಾಗಿರುವ ಬಿಜೆಪಿ ವಿರೋಧಿ ಪಕ್ಷಗಳ ಮಹಾಕೂಟ ರಚಿಸುವುದು. ಇವ್ಯಾವುವೂ ಯಶಸ್ವಿಯಾಗುವ ಸಾಧ್ಯತೆಗಳಿಲ್ಲ. ಬಿಜೆಪಿ ವಿರೋಧಿ ಪಕ್ಷಗಳ ಮರ್ಯಾದೆ ಎಷ್ಟು ಹೋಗಿದೆ ಎಂದರೆ, ಈ ತನಕ ಇವರ ಯಾವುದೇ ಮೈತ್ರಿ ಯಶಸ್ವಿಯಾಗಿಲ್ಲ; ಇನ್ನೆಂದಿಗೂ ಯಶಸ್ವಿಯಾಗುವ ಸಾಧ್ಯತೆ ಇಲ್ಲ.

ನರೇಂದ್ರ ಮೋದಿ ಕುರಿತಾದ ಗೀಳಿನಲ್ಲಿ, ಆತನ ಟೀಕಾಕಾರರು, ಆತನನ್ನು ಇನ್ನೂ ದೊಡ್ಡವನನ್ನಾಗಿ ಮಾಡುತ್ತಾರೆ. ಸಕಾರಾತ್ಮಕವಾದ ಏನೇ ಕಂಡರೂ, ಅದರ ಹಿರಿಮೆಯನ್ನು ತನಗೇ ಆರೋಪಿಸಿಕೊಳ್ಳುವ ಮೋದಿಯನ್ನು ವಿರೋಧಿಸುವ ಭರದಲ್ಲಿ ಇವರೇನು ಮಾಡುತ್ತಿದ್ದಾರೆ ಗೊತ್ತೇ? ಕಂಡ ಸಮಸ್ಯೆಗಳಿಗೆಲ್ಲಾ ಮೋದಿಯೇ ಕಾರಣ ಎಂದು ಗೂಬೆ ಕೂರಿಸುತ್ತಾರೆ. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಗುಂಪು ಹತ್ಯೆ ಇರಲಿ, ಕೃಷಿ ನೀತಿಯ ವೈಫಲ್ಯ ಇರಲಿ, ಯಾವುದೇ ಸಮತೋಲನ, ಲೆಕ್ಕಾಚಾರ ಇಲ್ಲದ ಬಜೆಟ್ ಇರಲಿ- ಪ್ರತಿಯೊಂದನ್ನೂ ಪ್ರಧಾನಮಂತ್ರಿಯ ಮೇಲೆ ಹೇರಲಾಗುತ್ತಿದೆ. ಮೋದಿಗೆ ಆತನ ಭಕ್ತರು ಕೊಡುವಷ್ಟೇ ಪ್ರಚಾರವನ್ನು ಆತನ ಟೀಕಾಕಾರರು ಕೊಡುತ್ತಿದ್ದಾರೆ.

ಎರಡನೆಯದಾಗಿ, ಮೋದಿ ವಿರೋಧಿಗಳು ತಕ್ಷಣದ ಪ್ರತಿಕ್ರಿಯೆ (knee-jerk ರಿಯಾಕ್ಷನ್) ನೀಡುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ನೀತಿ ಅಥವಾ ಧೋರಣೆಯು ಅವರ ಸರ್ಕಾರಕ್ಕೇ ಸಂಬಂಧಿಸಿದ್ದಾದ್ದರಿಂದ ನಾವು ಅದನ್ನು ವಿರೋಧಿಸಲೇಬೇಕು. ಆದರೆ, ಈಗ ಅವರ ಸರ್ಕಾರದ ನೀತಿಗಳ ವಿರುದ್ಧ ಬರುತ್ತಿರುವ ವಿಮರ್ಶೆಯು ಆ ನೀತಿಗಳ ವಿರೋಧಕ್ಕಿಂತ ಮೋದಿ ಸರ್ಕಾರದ ಅಡಿಯಲ್ಲಿ ಈ ನೀತಿಗಳು ಬಂದಿವೆ ಎನ್ನುವ ಕಾರಣಕ್ಕೇ ಬರುತ್ತಿದೆ ಎಂದು ನನಗನ್ನಿಸುತ್ತದೆ. ಅಂದರೆ, ಮೋದಿ ಏನೋ ಒಂದನ್ನು ಮಾಡಿದರೆ ನಾವು ವಿಮರ್ಶೆ ಮಾಡುತ್ತೇವೆ. ಒಂದು ವೇಳೆ ಅದನ್ನು ಮಾಡದಿದ್ದರೆ ಇನ್ನೂ ತೀವ್ರವಾಗಿ ವಿಮರ್ಶೆ ಮಾಡುತ್ತೇವೆ. ಇಂತಹ ವಿರೋಧದಿಂದ ಆಗುವ ಸಮಸ್ಯೆಯೇನೆಂದರೆ, ಈ ವಿರೋಧವನ್ನು ಜನಸಾಮಾನ್ಯರು ಒಪ್ಪುವುದಿಲ್ಲ. ಇದು ವಿರೋಧದ ಸಲುವಾಗಿ ವಿರೋಧ ಎಂದು ಸಹಜವಾಗಿಯೇ ಭಾವಿಸುತ್ತಾರೆ.

ಮೂರನೆಯ ಮತ್ತು ಮುಖ್ಯವಾದ ಸಂಗತಿಯೆಂದರೆ, ಮೋದಿ ವಿರೋಧಿಗಳು ನಿರಾಕರಣೆಯ ಭಾವದಲ್ಲಿ ಬದುಕುತ್ತಾರೆ. ಅವರು ಮೋದಿ ಅತ್ಯಂತ ಜನಪ್ರಿಯರು ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ ಮತ್ತು ಹಾಗಾಗಿ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. 2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಮುಂಗಾಣುವುದರಲ್ಲಿನ ವೈಫಲ್ಯವು ಅದಕ್ಕೆ ದೊಡ್ಡ ಉದಾಹರಣೆ. 2018ರ ಉತ್ತರಾರ್ಧದಲ್ಲಿ ಮೋದಿಯ ಜನಪ್ರಿಯತೆ ಕುಗ್ಗಿದ್ದೇನೋ ನಿಜ. ಆದರೆ, ಪುಲ್ವಾಮಾ ಮತ್ತು ಬಾಲಾಕೋಟ್ ನಂತರ ಎಲ್ಲಾ ವಿರೋಧಿ ನಾಯಕರ ಒಟ್ಟು ಜನಪ್ರಿಯತೆಗಿಂತ ಎಷ್ಟೋ ಪಟ್ಟು ಮೋದಿಯ ಜನಪ್ರಿಯತೆ ಹೆಚ್ಚಾಗಿತ್ತು. ಆ ನಂತರ ಚುನಾವಣೆಯಲ್ಲಿ ಸ್ಪರ್ಧೆ ಎಂದೇ ಇರಲಿಲ್ಲ. ಆದರೆ, ಮೋದಿ ವಿರೋಧಿಗಳು ಈ ವಾಸ್ತವಕ್ಕೆ ಹತ್ತಿರವಿರಲಿಲ್ಲ. ಚುನಾವಣಾ ಫಲಿತಾಂಶದ ನಂತರವೂ ಅವರು ನಿರಾಕರಣೆಯಲ್ಲೇ ಇದ್ದಾರೆ. ಬಿಜೆಪಿಯು ಗೆದ್ದಿದೆ ಎಂಬುದನ್ನು ಒಪ್ಪಿಕೊಳ್ಳದೇ, ಜನರು ಮೋದಿಗೆ ಮತ್ತೊಂದು ಅವಕಾಶ ಕೊಡಲು ಬಯಸಿದ್ದಾರೆ ಎನ್ನುವುದಕ್ಕಿಂತ ಇವಿಎಂ ತಿರುಚಿದ್ದರಿಂದಲೇ ಗೆದ್ದಿರುವುದು ಎಂದು ಅವರು ನಂಬುತ್ತಾರೆ.

ಮೋದಿಯ ಜನಪ್ರಿಯತೆ ವಾಸ್ತವ ಎಂಬುದನ್ನು ಒಪ್ಪಿಕೊಳ್ಳುವುಲ್ಲಿನ ಈ ಪ್ರಮಾಣದ ವೈಫಲ್ಯವು ಅದಕ್ಕಿರುವ ಕಾರಣಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಜನಸಾಮಾನ್ಯ ಮತದಾರರು ಒಳ್ಳೆಯ ಕಾರಣಗಳಿಂದಲೇ ಅವರಿಗೆ ಮತ ಹಾಕಿರಬಹುದೆಂಬುದನ್ನು ಒಪ್ಪಿಕೊಳ್ಳಲು ಇವರಿಗೆ ಸಾಧ್ಯವೇ ಇಲ್ಲ. ಅಮೆರಿಕಾದ ಉದಾರವಾದಿಗಳು ಟ್ರಂಪ್‍ಗೆ ಜನರು ಮತ ಹಾಕುವುದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಬಗೆದಿರುವುದು ಹೇಗೋ, ಇಲ್ಲಿಯೂ ಸಾಮಾನ್ಯ ಭಾರತೀಯ ಮತದಾರರ ಇಂಗಿತವನ್ನು ಅರ್ಥೈಸಲೂ ಇಂಥವರಿಗೆ ಆಗುತ್ತಿಲ್ಲ. ಮೋದಿ ವಿರೋಧಿಗಳು ಸಮಾಜದ ಇತರರಿಂದ ಪ್ರತ್ಯೇಕಿಸಲ್ಪಟ್ಟು ಚಿಕ್ಕದಾದ ಮತ್ತು ಚಿಕ್ಕದಾಗುತ್ತಿರುವ ವರ್ತುಲದಲ್ಲೇ ಇರುತ್ತಾರೆ. ಇದರ ಫಲಿತವೆಂದರೆ ಅವಿಶ್ವಾಸ, ಆತಂಕ, ಕೋಪ ಮತ್ತು ನಿಷ್ಕ್ರಿಯತೆ. ರಾಜಕೀಯ ಪಕ್ಷವಾತಕ್ಕೆ ಇದು ದಾರಿ ಮಾಡಿಕೊಡುತ್ತದೆ.

ನಾವು ಹೊಸದಾಗಿಯೇ ಆರಂಭಿಸಬೇಕು. ನಾವು ಹೊಸ ರಾಜಕೀಯ ಯುಗವನ್ನು ಪ್ರವೇಶಿಸಿದ್ದೇವೆನ್ನುವುದನ್ನು ಒಪ್ಪಿಕೊಳ್ಳಬೇಕು. ನಾವು ಗುರುತಿಸಲಾಗದಷ್ಟು ಪ್ರಮಾಣಕ್ಕೆ ಜನರ ಆದ್ಯತೆಗಳು, ಅಭಿರುಚಿ ಮತ್ತು ಮಾನದಂಡಗಳು ಬದಲಾಗಿವೆ ಎಂಬುದನ್ನು ಗುರುತಿಸಬೇಕು. ನಮ್ಮ ಹಳೆಯ ಪರಿಭಾಷೆಗಳು ಹೊಸ ಪೀಳಿಗೆಯೊಂದಿಗೆ ಕೆಲಸ ಮಾಡುವುದಿಲ್ಲ ಎಂಬುದನ್ನು ಗಮನಿಸಿದರೆ, ನಮ್ಮೆಲ್ಲಾ ತಂತ್ರಗಳು ಆ ಪೀಳಿಗೆಯ ಮುಂದೆ ಬಕ್ಕಾಬೋರಲು ಮಲಗುತ್ತಿರುವುದು ಗೊತ್ತಾಗುತ್ತದೆ. ಈ ಹೊಸ ಪೀಳಿಗೆ ಅಸ್ತಿತ್ವದಲ್ಲಿರುವುದು ವಾಸ್ತವ ಮತ್ತು ನಾವು ಅದನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಲಾಗದು. ಹಾಗಾಗಿ ಉಳಿದಿರುವುದು ಒಂದೇ ದಾರಿ. ಅಪಾಯದ ಆಳ ಮತ್ತು ಅದೊಡ್ಡುತ್ತಿರುವ ಸವಾಲನ್ನು ಸರಿಯಾಗಿ ಅಂದಾಜಿಸಿ, ದೀರ್ಘಕಾಲದ ಮುನ್ನೋಟದೊಂದಿಗೆ ಅಲ್ಪಕಾಲೀನ ಮತ್ತು ಮಧ್ಯಕಾಲೀನ ವ್ಯೂಹತಂತ್ರವನ್ನೊಳಗೊಂಡ ಮಾರ್ಗನಕ್ಷೆಯನ್ನು ತಯಾರಿಸುವುದು. ವಿನೂತನ ಉಪಾಯಗಳು ಮತ್ತು ಸ್ಮಾರ್ಟ್ ಆದ ಸಂವಹನದೊಂದಿಗೆ ನಡೆಸಬೇಕಿರುವ ಸಾಂಸ್ಕೃತಿಕ ಸಂಗ್ರಾಮವದು ಎಂದು ಕಡೆಯದಾಗಿ ಹೇಳಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...