Homeಅಂಕಣಗಳುಚರ್ಚಿಲ್ ಮಾತು ನಿಜವಾಯಿತು ಎನ್ನುವ ಸ್ಥಿತಿ ಭಾರತಕ್ಕೆ ಬರಬಾರದು..

ಚರ್ಚಿಲ್ ಮಾತು ನಿಜವಾಯಿತು ಎನ್ನುವ ಸ್ಥಿತಿ ಭಾರತಕ್ಕೆ ಬರಬಾರದು..

ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಇಂಗ್ಲೆಂಡಿನ ಮಾಜಿ ಪ್ರಧಾನಿ ಚರ್ಚಿಲ್ ಆಗಿನ ಪ್ರಧಾನಮಂತ್ರಿಯಾಗಿದ್ದ ಲಾರ್ಡ್ ಅಟ್ಲೀ ಅವರಿಗೆ ಹೇಳುವ ಮಾತು ಇದು. ‘ಸ್ಕೌಂಡ್ರಲ್ಸ್ ಮತ್ತು ಥಗ್ಸ್ ಕೈಯಲ್ಲಿ ಭಾರತವನ್ನು ಕೊಟ್ಟು ಬಂದಿದ್ದೀರಿ’ ಎಂದು

- Advertisement -
- Advertisement -

ಬಿಜೆಪಿಯ ಅಧ್ಯಕ್ಷರು ಮತ್ತು ಕೇಂದ್ರ ಗೃಹಮಂತ್ರಿಗಳೂ ಆದ ಅಮಿತ್ ಷಾ ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆ (Coup) ಒಂದು ರಾಜಕೀಯ ಕ್ರೀಡೆ ಎನ್ನುತ್ತಾರೆ. ರಾಜಕೀಯ ಒಂದು ಚದುರಂಗದಾಟ ಎಂದು ಷಾ ಭಾವಿಸಿರುವಂತಿದೆ. ರಾಜಮಹಾರಾಜರ ಕಾಲದಲ್ಲಿ ರಾಜಕೀಯ ಒಂದು ಚದುರಂಗದಾಟ ಆಗಿತ್ತು. ಷಾ ಇನ್ನೂ ರಾಜರ ಕಾಲದಲ್ಲೆ ಇದ್ದಾರೆ. ಮೋದಿ ಮತ್ತು ಷಾ ಜೋಡಿ ಗುಜರಾತಿನಲ್ಲಿ ಮಾಡಿದ್ದೂ ಅದನ್ನೇ. ಅವರು ಆ ಆಟದಲ್ಲಿ ಗೆಲುವು ಸಾಧಿಸಿದ್ದರಿಂದ ಅದೇ ಚದುರಂಗದಾಟದಿಂದ ಹುರುಪುಗೊಂಡು ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲು ತೊಡಗಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ಚದುರಂಗದಾಟ ಆಡಲು ಹೋಗಿ ಪ್ರಥಮ ಚುಂಬನದಲ್ಲೇ ದಂತಭಗ್ನ ಮಾಡಿಕೊಂಡಿದ್ದಾರೆ. ಮೋದಿ ಮತ್ತು ಷಾ ಪ್ರಜಾಪ್ರಭುತ್ವದ ವಿರೋಧಿಗಳು, ಅಧಿಕಾರ ಹಿಡಿಯುವ ಅಮಲಿನಲ್ಲಿ ಅವರು ಮಾಡಬಾರದ್ದನ್ನು ಮಾಡುತ್ತಾರೆ. ರಾಜಕೀಯ ತನ್ನ ಪವಿತ್ರತೆಯನ್ನು ಉಳಿಸಿಕೊಳ್ಳಬೇಕು, ರಾಜ್ಯಾಂಗವನ್ನು ಗೌರವಿಸಬೇಕು. ಅದು ಬಿಟ್ಟು ರಾಜಕೀಯ ಅಪಮಾರ್ಗ ಹಿಡಿಯುವುದು ಆತಂಕಕಾರಿ ವಿಷಯ.

ಚುನಾವಣೆ ಒಂದು ಆಟ ಅಲ್ಲ. ಹುಡುಗಾಟ ಅಲ್ಲವೇ ಅಲ್ಲ. ದೇಶದ ಭವಿಷ್ಯವನ್ನು ರೂಪಿಸುವ ಜನಪ್ರತಿನಿಧಿಗಳನ್ನು ಮುತುವರ್ಜಿಯಿಂದ ಆಯ್ಕೆ ಮಾಡುವ ಸಾಧನ ಚುನಾವಣೆ. ಅದು ಹುಡುಗಾಟವಾದರೆ ಗೂಂಡಾಗಳು, ಸಮಯಸಾಧಕರು, ಪಟ್ಟಭದ್ರರು ಸರ್ಕಾರವನ್ನು ಕಬ್ಜಾ ಮಾಡುತ್ತಾರೆ. ಅವರು ಈ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಈಗ ಮಹಾರಾಷ್ಟ್ರದಲ್ಲಿ ಆ ಪ್ರಯೋಗವನ್ನು ಮೋದಿ, ಷಾಗಳು ರೂಪಿಸಿದರು.

ಈ ಸಾರಿಯ ಚುನಾವಣೆಯಲ್ಲಿ, ಬಿಜೆಪಿ ಬಹುಮತ ಪಡೆಯಲಿಲ್ಲ. ಶರದ್ ಪವಾರರ ಎನ್.ಸಿ.ಪಿ., ಶಿವಸೇನೆ ಯಾವುದಕ್ಕೂ ಬಹುಮತ ಬರಲಿಲ್ಲ. ಎಂದಿನಂತೆ ಬಿಜೆಪಿ ಶಿವಸೇನಾ ಜೊತೆ ಸೇರಿಕೊಂಡು ಮಂತ್ರಿಮಂಡಲ ರಚಿಸುವ ನಿರೀಕ್ಷೆ ಇತ್ತು. ಆದರೆ ಶಿವಸೇನೆ ತನಗೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡಬೇಕೆಂದು ಷರತ್ತು ಹಾಕಿತು. ಬಿಜೆಪಿಯು ಶಿವಸೇನೆಯ ಈ ಡಿಮ್ಯಾಂಡನ್ನು ಒಪ್ಪಿಕೊಳ್ಳಲಿಲ್ಲ. ಆಗ ಶಿವಸೇನಾ, ಎನ್.ಸಿ.ಪಿ ಮತ್ತು ಕಾಂಗ್ರೆಸ್ ಬೆಂಬಲದಿಂದ ಸರ್ಕಾರ ರಚಿಸುವ ಪ್ರಸ್ತಾವನೆಯನ್ನು ಶರದ್ ಪವಾರ್ ಮುಂದೆ ಇಟ್ಟಿತು.

ಶರದ್ ಪವಾರ್, ಶಿವಸೇನೆಯೊಡನೆ ಕೈಜೋಡಿಸಲು ಒಪ್ಪಿ ಕಾಂಗ್ರೆಸ್‍ನ ನೆರವನ್ನು ಪಡೆಯಲು ಮುಂದಾದರು. ಆದರೆ ಕಾಂಗ್ರೆಸ್ಸಿಗೆ, ಶಿವಸೇನೆಯೊಡನೆ ಕೂಡಿಕೊಂಡು ಸರ್ಕಾರ ನಡೆಸುವುದು ಕಷ್ಟಸಾಧ್ಯವೆನಿಸಿತು. ಏಕೆಂದರೆ ಶಿವಸೇನೆ ಬಿಜೆಪಿಯಂತೆಯೇ ಕೋಮುವಾದಿ ಪಕ್ಷ. ಬಿಜೆಪಿ ಜೊತೆಗೆ ಇದ್ದುಕೊಂಡು ಸಮಸ್ಯೆಗಳನ್ನೂ ಸೃಷ್ಟಿಸಿ ಸದಾ ಗುದ್ದಾಡುತ್ತಲೇ ಕಾಲಕಳೆಯುವ ಪಕ್ಷ. ಈ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಳ್ಳುವುದು ಅಸಾಧ್ಯ ಎಂಬುದು ಕಾಂಗ್ರೆಸ್ಸಿನ ನಿಲುವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ದೂರ ಇಡಲು ಇದು ಸದವಕಾಶ ಎಂಬ ದೃಷ್ಟಿಯಿಂದ ಕಾಂಗ್ರೆಸ್ ಶರದ್ ಪವಾರ್ ಜೊತೆಗೂಡಲು ನಿರ್ಧರಿಸಿತು. ಇದನ್ನರಿತ ಮೋದಿ, ಷಾದ್ವಯರು ಎನ್.ಸಿ.ಪಿಯಲ್ಲಿ ಒಂದು ಕ್ಷಿಪ್ರ ಕಾರ್ಯಾಚರಣೆ (Coup) ನಡೆಸಲು ಮುಂದಾದರು.

ಎನ್.ಸಿ.ಪಿಯ ಅಧ್ಯಕ್ಷ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್‍ಪವಾರರನ್ನು ಬಳಸಿಕೊಂಡು ಎನ್.ಸಿ.ಪಿಯನ್ನು ಒಡೆಯುವ ಯತ್ನ ನಡೆಯಿತು. ಫಡ್ನವಿಸ್‍ಗೆ ಮುಖ್ಯಮಂತ್ರಿ ಅಜಿತ್ ಪವಾರ್‍ಗೆ ಉಪಮುಖ್ಯಮಂತ್ರಿ ಪದವಿ ನೀಡುವ ಹುನ್ನಾರಕ್ಕೆ ಕೈ ಹಾಕಿತು, ರಾಜಕೀಯ ಒಂದು ಚದುರಂಗದಾಟ ಎನ್ನುವ ಅಮಿತ್ ಷಾ ಈ ‘ಕ್ಷಿಪ್ರ ಕಾರ್ಯಾಚರಣೆ’ಗೆ ಅಧ್ವರ್ಯುವಾಗಿ ನಿಂತರು.

ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್, ಕಾಂಗ್ರೆಸ್ಸಿನೊಡನೆ ಸಂಧಾನ ನಡೆಸುತ್ತಿದ್ದಾಗಲೇ ರಾತ್ರೋರಾತ್ರಿ ರಾಷ್ಟ್ರಾಧ್ಯಕ್ಷರ ಆಡಳಿತ ರದ್ದುಗೊಳಿಸಿ, ಬಿಜೆಪಿಯ ಫಡ್ನವೀಸರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದೂ ಅಜಿತ್ ಪವಾರರನ್ನು ಉಪಮುಖ್ಯಮಂತ್ರಿಯೆಂದೂ ಹೆಸರಿಸಿ ಅವರಿಗೆ ಬೆಳಗಿನ ಜಾವ ಪಟ್ಟ ಕಟ್ಟಿಯೇ ಬಿಟ್ಟರು. ಈ ಸುದ್ದಿ ತಿಳಿದ ಶರದ್ ಪವಾರ್‍ಗೆ ಶಾಕ್ ಆಯಿತು.

ಶರದ್ ಪವಾರ್ ತಡಮಾಡದೆ ತನ್ನ ಪಕ್ಷದ ಶಾಸಕರನ್ನು ತನ್ನೊಂದಿಗಿಟ್ಟುಕೊಳ್ಳಲು ತೊಡಗಿದರು. ಶಿವಸೇನೆ ಎನ್.ಸಿ.ಪಿ. ಕಾಂಗ್ರೆಸ್ ಒಟ್ಟುಗೂಡಿ ಸರ್ವೋಚ್ಚ ನ್ಯಾಯಾಲಯಕ್ಕೆ ಇದರ ಕುರಿತು ತನಿಖೆ ಮಾಡಲು ಅರ್ಜಿ ಸಲ್ಲಿಸಿದರು. 24 ಗಂಟೆಯೊಳಗೆ ಶಾಸನಸಭೆ ಕರೆದು ತಮಗೆ ಬಹುಮತ ಇದೆಯೆಂದು ಸಾಬೀತು ಮಾಡಬೇಕೆಂದು ನ್ಯಾಯಾಲಯ ತೀರ್ಮಾನಿಸಿತು. ಫಡ್ನವಿಸ್ ತನಗೆ ಬಹುಮತವಿಲ್ಲವೆಂದು ಅರಿತು ಶಾಸನಸಭೆ ಕರೆಯದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇತ್ತರು.

ಬಿಜೆಪಿಗೆ ಅದರಲ್ಲೂ ಮುಖ್ಯವಾಗಿ ಮೋದಿ ಮತ್ತು ಷಾ ಅವರಿಗೆ ತಮ್ಮ ಆಟ ನಡೆಯದಿದ್ದಕ್ಕೆ ನಿರಾಸೆ ಆಯಿತು. ಅರ್ಥಾತ್ ಷಾ ಮತ್ತು ಮೋದಿಯವರ ಭಾರತೀಯ ಜನತಾ ಪಕ್ಷದ ಮಧ್ಯರಾತ್ರಿಯ ತಂತ್ರಗಾರಿಕೆ ಇಂತಿದೆ. ಕಳೆದ ಭಾನುವಾರ ರಾತ್ರಿ 11.45ಕ್ಕೆ ಬಿಜೆಪಿಯು ಎನ್‍ಸಿಪಿ ಲೀಡರ್ ಅಜಿತ್ ಪವಾರ್ ಜೊತೆಗೆ ಡೀಲ್ ಮಾಡುತ್ತದೆ. 11.55ಕ್ಕೆ ಬಿಜೆಪಿ ನಾಯಕ ಫಡ್ನವೀಸ್ ತನ್ನ ನಾಯಕರಿಗೆ ಬೆಳಗ್ಗೆ ಪ್ರತಿಜ್ಞಾವಿಧಿ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ರಾತ್ರಿ 12.30ಕ್ಕೆ ಗೌರ್ನರ್ ಬಿ.ಎಸ್.ಕೋಶ್ಯಾನಿ ತನ್ನ ಡೆಲ್ಲಿಗೆ ಹೋಗುವ ಪ್ರಯಾಣವನ್ನು ರದ್ದುಗೊಳಿಸುತ್ತಾರೆ.

ಬೆಳಗಿನ ಜಾವ 5.47ಕ್ಕೆ ರಾಷ್ಟ್ರಪತಿ ಆಡಳಿತ ರದ್ದುಗೊಳಿಸುವ ನೋಟಿಫಿಕೇಷನ್ ಜಾರಿಗೊಳಿಸುವಂತೆ ರಾತ್ರಿ 2.10 ರಲ್ಲಿ ಸೂಚನೆ ನೀಡಲಾಗುತ್ತದೆ. ಪ್ರತಿಜ್ಞಾವಿಧಿ ಸ್ವೀಕರಿಸಲು ಬೆಳಗಿನ 7.30ರ ಸಮಯವನ್ನು ನಿಗದಿಮಾಡಿರುವುದಾಗಿ ಕಾರ್ಯದರ್ಶಿ ಬೆಳಗಿನ 2.30ರಲ್ಲಿ ರಾಜ್ಯಪಾಲರಿಗೆ ತಿಳಿಸುತ್ತಾರೆ.

ಫಡ್ನವೀಸ್ ಮತ್ತು ಅಜಿತ್‍ಪವಾರ್ ಬೆಳಗಿನ ಜಾವ 5.30ಕ್ಕೆ ರಾಜಭವನಕ್ಕೆ ಆಗಮಿಸುತ್ತಾರೆ. 5.47ಕ್ಕೆ ಅಧ್ಯಕ್ಷರ ಆಡಳಿತದ ಆಜ್ಞೆಯನ್ನು ಹಿಂಪಡೆಯಲಾಗುತ್ತದೆ. 7.30ಕ್ಕೆ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಜಿತ್‍ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ.

ಈ ಎಲ್ಲ ಬೆಳವಣಿಗೆಯನ್ನು ಫಡ್ನವೀಸ್‍ರಿಂದಲೂ ಮುಚ್ಚಿಡಲಾಗಿತ್ತು ದೆಹಲಿಯಲ್ಲೆ ಈ Coup ಜನ್ಮತಳೆದದ್ದು. ಈ ‘ಚಾಣಕ್ಯ ರಾಜಕೀಯ’ ಷಾರವರ ಕೊಡುಗೆ. ಷಾರವರ ಆಪ್ತರೂ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಗಳೂ ಆದ ಭೂಪೇಂದ್ರಯಾದವ್‍ರವರು ಶುಕ್ರವಾರ ರಾತ್ರಿಯೇ ಮುಂಬೈಗೆ ತೆರಳಿ ಈ ಪ್ರಹಸನಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನು ಮಾಡಿದರು. ಪ್ರಧಾನಿ ಮೋದಿಯವರಿಗೆ ಈ ಹುನ್ನಾರದ ವಿವರಗಳೆಲ್ಲಾ ತಿಳಿದಿತ್ತು.

ಈ ಪ್ಲಾನ್ ಪರಾಭವಗೊಂಡದ್ದರಿಂದ ಮೋದಿ ಮತ್ತು ಷಾರವರು ಇತರ ರಾಜ್ಯಗಳಿಗೂ ಈ ವ್ಯಾಧಿ ಹರಡುವಂತೆ ಮಾಡುವ ಪ್ರಯತ್ನಗಳಿಗೆ ಕಲ್ಲುಬಿದ್ದಂತೆ ಆಗಿದೆ.

ಮಹಾರಾಷ್ಟ್ರದಲ್ಲಿ ಆದ ಈ ಪರಾಭವ, ದೇಶದ ಎಲ್ಲ ಮತದಾರರನ್ನೂ ಬಿಜೆಪಿಯ ನಡವಳಿಕೆಯ ಬಗೆಗೆ ಚಿಂತಿಸುವಂತೆ ಮಾಡಿದೆ. ಮುಂದೆ ನಡೆಯುವ ರಾಜ್ಯಗಳಲ್ಲಿನ ಚುನಾವಣೆಗಳಲ್ಲೂ, 2024ರಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲೂ ಇಂತಹ ಕುತಂತ್ರಿಗಳಿಗೆ ಮತಹಾಕಿ ದೇಶವನ್ನು ಅಧೋಗತಿಗೆ ತರಲು ಸಹಕಾರಿಗಳಾಗಬೇಕೇ ಎಂದು ಚಿಂತಿಸುವ ಹಾಗೆ ಮಾಡಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಇಂಗ್ಲೆಂಡಿನ ಮಾಜಿ ಪ್ರಧಾನಿ ಚರ್ಚಿಲ್ ಆಗಿನ ಪ್ರಧಾನಮಂತ್ರಿಯಾಗಿದ್ದ ಲಾರ್ಡ್ ಅಟ್ಲೀ ಅವರಿಗೆ ಹೇಳುವ ಮಾತು ಇದು. ‘ಸ್ಕೌಂಡ್ರಲ್ಸ್ ಮತ್ತು ಥಗ್ಸ್ ಕೈಯಲ್ಲಿ ಭಾರತವನ್ನು ಕೊಟ್ಟು ಬಂದಿದ್ದೀರಿ’ ಎಂದು. ಆದರೆ ಅಂದು ರಾಜಕೀಯದಲ್ಲಿ ಇದ್ದವರು ಸ್ಕೌಂಡ್ರಲ್ಸ್ ಮತ್ತು ಥಗ್ಸ್ ಆಗಿರಲಿಲ್ಲ. ಏನೇ ಕೊರತೆಗಳಿದ್ದರೂ, ಭಾರತವು ಒಂದು ಪ್ರಜಾತಂತ್ರ ದೇಶವಾಗಿ ಸ್ಥಿರಗೊಳ್ಳುತ್ತಾ ಸಾಗಿತ್ತು. ಇಂದಿನ ರಾಜಕೀಯದಲ್ಲಿ ಅಂತಹ ಬದಲಾವಣೆ ಆಗಿದೆಯೆ? ಎಂಬ ಸಂದೇಹ ಮೂಡುತ್ತದೆ. ಅದಕ್ಕೆ ಒಂದು ಕಾರಣ ಮಹಾರಾಷ್ಟ್ರದ ರಾಜಕೀಯದಲ್ಲಿ ಇತ್ತೀಚೆಗೆ ಆಗಿರುವ ರಾಜಕೀಯ ಗೋಲ್ ಮಾಲ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಹಾರಾಷ್ಟ್ರದಲ್ಲಿ ಮನುವಾದಿಗಳ ಕುತಂತ್ರಕ್ಕೆ ಸೋಲುಂಟಾಗಿರುವುದು ಆಶಾದಾಯಕ ಬೆಳವಣಿಗೆ.

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...