Homeಅಂಕಣಗಳುಈ ಬಡ ಭಾರತೀಯರು ಸರ್ಕಾರಕ್ಕೆ ಮೊದಲು ಕಾಣಬೇಕಿತ್ತು

ಈ ಬಡ ಭಾರತೀಯರು ಸರ್ಕಾರಕ್ಕೆ ಮೊದಲು ಕಾಣಬೇಕಿತ್ತು

- Advertisement -
- Advertisement -

ಬಡವರಿಗೆ ಕೊಡುವ ರೇಷನ್‍ನಲ್ಲಿ ಪೌಷ್ಟಿಕಾಂಶದ ಕೊರತೆ ಅತ್ಯಧಿಕ. ಆರೋಗ್ಯ ಇಲಾಖೆಯು ಕೋಟ್ಯಾಂತರ ರೂಪಾಯಿ ಖರ್ಚು ತೋರಿಸುತ್ತದೆ. ಆದರೆ ಬಡವರಿಗೆ ನೀಡುವ ಆಹಾರ ಪದಾರ್ಥ ಸತ್ವಹೀನವಾಗಿರುತ್ತವೆ. ಇದರ ಪರಿಣಾಮವಾಗಿ ಬಡವರಲ್ಲಿ ಅಪೌಷ್ಠಿಕತೆಯಿಂದ ನರಳುವ ಮತ್ತು ಸಾಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಆದರೆ ಆರೋಗ್ಯ ಇಲಾಖೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಒಬ್ಬ ವಿಧವೆ ಕೂಲಿ ಕಾಸು ಸಿಕ್ಕದೆ ತನ್ನ ತಲೆಗೂದಲನ್ನೆ ಮಾರಿಕೊಂಡಿದ್ದಾಳೆ. ಒಂದು ಬಡಕುಟುಂಬದವರು ಹೊಟ್ಟೆಪಾಡಿಗಾಗಿ ತಮ್ಮ ಮಗುವನ್ನೇ ಮಾರಿಕೊಂಡರು. ಒಂದು ಒಡಸಂಸಾರದ ಒಬ್ಬ 7 ವರ್ಷದ ಹುಡುಗ ಹಸಿವನ್ನು ತಾಳಲಾರದೇ ಮನೆಬಿಟ್ಟು ಓಡಿಹೋಗಿ ಬಸ್‍ಸ್ಟಾಂಡಿನಲ್ಲಿ ಭಿಕ್ಷೆ ಬೇಡುತ್ತಾನೆ. ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಾನೆ. ಅನೇಕ ಗರ್ಭಿಣಿ ಹೆಣ್ಣು ಮಕ್ಕಳು ಆಹಾರದ ಭದ್ರತೆ ಇಲ್ಲದೆ, ಅಪೌಷ್ಟಿಕತೆಯ ಕಾರಣದಿಂದ ಮಕ್ಕಳನ್ನು ಹಡೆದು ಸಾವನ್ನಪುತ್ತಾರೆ. ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ 12 ಮಕ್ಕಳು ಒಮ್ಮೆಗೇ ಸಾಯುತ್ತಾರೆ. ಅನೇಕ ಸಂಸಾರಗಳು ಊರುಬಿಟ್ಟು ಬಂದು ಬೆಂಗಳೂರಿನಲ್ಲಿ ಫುಟ್‍ಪಾತಿನ ಮೇಲೆ ವಾಸಿಸುತ್ತಾರೆ. ರಾತ್ರಿ ಮಲಗುತ್ತಾರೆ. ತಿರುಪೆ ಮಾಡಿ ಜೀವನ ನಿರ್ವಹಿಸುತ್ತಾರೆ. ಹಳ್ಳಿಗಳಲ್ಲಿ ರೈತ ಕಾರ್ಮಿಕರು, ಅನೇಕ ದಿನ ಹೊಟ್ಟೆಗಿಲ್ಲದೆ ಮಲಗುವುದು ಭೂಮಿ ವಸತಿ ವಂಚಿತರಾಗಿ ಬಾಳ್ವೆ ನಡೆಸುತ್ತಿರುವುದೂ ನಡೆದೇ ಇದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳೇ ಸಂದರೂ ಈ ಎಲ್ಲ ಬಡವರಿಗೆ ಮಾಡಲು ಉದ್ಯೋಗವಿಲ್ಲ. ಅವರ ಮಕ್ಕಳಿಗೆ ವಿದ್ಯೆ ಇಲ್ಲ. ಇನ್ನೊಂದು ಚಿತ್ರ ನೋಡಿ. ಭಾರತದಲ್ಲಿ ಲಕ್ಷ ಕೋಟ್ಯಾಧಿಪತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಅಂಬಾನಿ ಅದಾನಿ ಮುಂತಾದ ಕೋಟ್ಯಾಧಿಪತಿಗಳು ಕೋಟಿ ಕೋಟಿ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸುತ್ತದೆ. ಅವರ ಕೋಟಿ-ಕೋಟಿ ಹಳೆ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದೆ. ಬಡವ ಬಲ್ಲಿದರ ನಡುವಿನ ಕಂದಕ ದೊಡ್ಡದಾಗುತ್ತಿದೆ.

ಕೇಂದ್ರ ಸರ್ಕಾರ ಬಡ ಜನರಿಗಾಗಿ 30 ಯೋಜನೆಗಳನ್ನು ಜಾರಿಗೆ ತಂದಿದೆ. ರಾಷ್ಟೀಯ ಸಾಮಾಜಿಕ ಸೇವೆ ಒದಗಿಸುವ ಸಂಸ್ಥೆಯೂ ಅವುಗಳಲ್ಲಿ ಒಂದು. ಅದು ಸಮಾಜದಲ್ಲಿ ಊಟ, ಉದ್ಯೋಗಗಳಿಂದ ವಂಚಿತರಾಗಿ ಸಾವನ್ನಪ್ಪಲು ಹೊರಟವರನ್ನು ತಡೆಗಟ್ಟುವುದಕ್ಕಾಗಿಯೇ ಈ ಸಂಸ್ಥೆ ಇರುವುದು. ಈ ಯೋಜನೆ ಬಡತನದ ಸೀಮಾರೇಖೆಯ ಕೆಳಗಿರುವರಿಗಾಗಿಯೇ ಸಾಮಾಜಿಕ ಭದ್ರತೆಯ ಯೋಜನೆ. ಈ ಯೋಜನೆಯಡಿಯಲ್ಲಿ 5 ಪ್ರತ್ಯೇಕ ಒಳಿತನ್ನು ಕೋರುವ ಯೋಜನೆಗಳಿವೆ. ಇವುಗಳೆಂದರೆ ಇಂದಿರಾಗಾಂಧಿ ರಾಷ್ಟ್ರೀಯ ಮನೆ ತಪ್ಪಿದವರ ಪಿಂಚಣಿ ಯೋಜನೆ, ಇಂದಿರಾಗಾಂಧಿ ವೃದ್ಧರ ಪಿಂಚಣಿ ಯೋಜನೆ, ಇಂದಿರಾಗಾಂಧಿ ಅಶಕ್ತರ ಪಿಂಚಣಿ ಯೋಜನೆ, ರಾಷ್ಟೀಯ ಫ್ಯಾಮಿಲಿ ಬೆನಿಫಿಟ್ ಸ್ಕೀಂ ಮತ್ತು ಅನ್ನಪೂರ್ಣ ಯೋಜನೆಗಳಿವೆ.

ಭಾರತ ವಿಶ್ವದಲ್ಲೆ ದೊಡ್ಡದಾದ ಆಹಾರ ಭದ್ರತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದಕ್ಕಾಗಿ ವರ್ಷಕ್ಕೆ 1.8 ಲಕ್ಷಕೋಟಿ ವ್ಯಯ ಮಾಡುತ್ತಿದೆ. ಮಹಾತ್ಮಾಗಾಂಧಿ ಗ್ರಾಮೀಣ ರೋಜ್‍ಗಾರ್ ಯೋಜನೆಯ ಉಳಿವಿಗಾಗಿ ದಿನಗೂಲಿ ಒದಗಿಸಲು 2019-20ರಲ್ಲಿ ಭಾರತ ಸರ್ಕಾರ 60000 ಕೋಟಿ ಖರ್ಚು ಮಾಡಿದೆ. ಕೇಂದ್ರದ ಈ ವರ್ಷದ ಸಬ್ಸಿಡಿ ಬಿಲ್ 3.38 ಲಕ್ಷ ಕೋಟಿ ರೂಪಾಯಿಗಳು. ಅಂದರೆ ದಿನಕ್ಕೆ 900 ಕೋಟಿ. ಸಾಮಾಜಿಕ ಸೆಕ್ಟರ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಿಕೊಂಡು ಈ ವರ್ಷ 13.9 ಲಕ್ಷ ಕೋಟಿ ಖರ್ಚುಮಾಡುತ್ತಿವೆ. ಈ ಮೊತ್ತದಲ್ಲಿ ಪ್ರಾಕೃತಿಕ ವಿಕೋಪದಿಂದ ಜನಸಮುದಾಯಕ್ಕಾಗುವ ಹಾನಿಯನ್ನು ತುಂಬಿಕೊಡಲು 5.5 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ಬಡತನದ ಇಂಡೆಕ್ಸ್ 54ರಿಂದ 50ಕ್ಕೆ ಇಳಿದಿದೆ. ಆದರೆ ರಾಷ್ಟೀಯ ಸರಾಸರಿಗಿಂತ ಕಡಿಮೆ ಇರುವ ರಾಜ್ಯಗಳು ಹಿಂದೆ 10 ಇದ್ದದ್ದು ಈಗ 14ಕ್ಕೆ ಏರಿವೆ.

ದೊಡ್ಡ ರಾಜ್ಯಗಳ ಪೈಕಿ 10 ರಾಜ್ಯಗಳು ಬಡತನದ ಸೀಮಾರೇಖೆಯ ತಳಗಿದ್ದು ಅವುಗಳಲ್ಲಿ ಆರಂತೂ ತುಂಬಾ ದುರವಸ್ಥೆಯಲ್ಲಿವೆ. ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿರುವುದು ಬಡತನ ನಿವಾರಣಾ ಕಾರ್ಯಾಚರಣೆಯ ಯೋಜನೆ ಅಭಾವದಿಂದಲ್ಲ; ಅವು ಅಪಾರ ಸಂಖ್ಯೆಯಲ್ಲಿವೆ.

ಈ ಸಾಮಾಜಿಕ ಕಾರ್ಯಕ್ರಮಗಳ ಕಾರ್ಯ ಕ್ಷಮತೆಯ ಅಭಾವದಿಂದಾಗಿ ಬಡತನ ಹೆಚ್ಚುತ್ತಿದೆ. ರಾಜ್ಯಗಳ ಆಡಳಿತಗಾರರ ದಕ್ಷತೆಯ ಕೊರತೆಯಿಂದ ಆಡಳಿತದ ಜ್ಞಾನದ ಕೊರತೆಯಿಂದ ಬಡತನ ನಿವಾರಣೆಯ ಕೆಲಸ ಹಿಂದೆ ಬಿದ್ದಿದೆ.

ದೇಶದಲ್ಲಿ ಅನೇಕ ಕಡೆ ಬಡತನ ಹಸಿವು ಕಾಡುತ್ತಿದೆ. ಆಹಾರದ ಅಪೌಷ್ಠಿಕತೆ ಇಡೀ ದೇಶವನ್ನು ಕಾಡುತ್ತಿದೆ. ಭಾರತದಲ್ಲಿ 58.3 ದಶಲಕ್ಷ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ; ಭಾರತದಲ್ಲಿ ಹುಟ್ಟುವ ಮಕ್ಕಳಲ್ಲಿ ಶೇ.40ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ತಾಯಂದಿರಾಗುವ ಒಂದು ಲಕ್ಷ ಮಹಿಳೆಯರಲ್ಲಿ 122 ಹೆಣ್ಣು ಮಕ್ಕಳು ಸಾವಿಗೆ ಗುರಿಯಾಗುತ್ತಾರೆ. ಗರ್ಭಿಣಿಯರಲ್ಲಿ ಅರ್ಧದಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಗರ್ಭಿಣಿಯಲ್ಲಿ ಶೇ.36ರಷ್ಟು ಮಹಿಳೆಯರಿಗೆ ಮಾತ್ರ ತಾಯಿತನದ ಬೆನೆಫಿಟ್ ಸಿಕ್ಕುತ್ತಿದೆ.

ಬಡವರಿಗೆ ಕೊಡುವ ರೇಷನ್‍ನಲ್ಲಿ ಪೌಷ್ಟಿಕಾಂಶದ ಕೊರತೆ ಅತ್ಯಧಿಕ. ಆರೋಗ್ಯ ಇಲಾಖೆಯು ಕೋಟ್ಯಾಂತರ ರೂಪಾಯಿ ಖರ್ಚು ತೋರಿಸುತ್ತದೆ. ಆದರೆ ಬಡವರಿಗೆ ನೀಡುವ ಆಹಾರ ಪದಾರ್ಥ ಸತ್ವಹೀನವಾಗಿರುತ್ತವೆ. ಇದರ ಪರಿಣಾಮವಾಗಿ ಬಡವರಲ್ಲಿ ಅಪೌಷ್ಠಿಕತೆಯಿಂದ ನರಳುವ ಮತ್ತು ಸಾಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಆದರೆ ಆರೋಗ್ಯ ಇಲಾಖೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು ಅದನ್ನು ತಿನ್ನುವ ಇಲಾಖೆ ಹೊರತು ಜನತೆಯ ಒಳಿತಿಗಾಗಿ ಕಾರ್ಯ ನಿರ್ವಹಿಸುವ ಇಲಾಖೆ ಅಲ್ಲ ಎಂದು ಬಗೆದಂತಿದೆ.

ಇವೆಲ್ಲದರ ಅರ್ಥವೇನು? ಬಡತನ ನಿವಾರಣೆಗೆಂದು ಹಲವು ಬಗೆಯ ಯೋಜನೆಗಳನ್ನು ಇದುವರೆಗೆ ಆಳಿದ ವಿವಿಧ ಪಕ್ಷಗಳ ಸರ್ಕಾರಗಳು (ಪ್ರಧಾನವಾಗಿ ಕಾಂಗ್ರೆಸ್ಸು) ತಂದಿದ್ದಾರಾದರೂ, ಆ ನಿಟ್ಟಿನಲ್ಲಿ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಅವೆಲ್ಲವನ್ನೂ ಬಗೆಹರಿಸಿ ಎಂದು 2014ರಲ್ಲಿ ಮತ್ತು 2019ರಲ್ಲಿ ಎರಡೆರಡು ಬಾರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಅವರು ಮಾಡುತ್ತಿರುವುದೇನು? ಈ ಜನರನ್ನು ಬಡತನದ ಕೂಪದಿಂದ ಮೇಲೆತ್ತುವ ಬದಲು, ಜನರನ್ನು ಆತಂಕಕ್ಕೆ ದೂಡುವ ಕ್ರಮಗಳಿಗೆ ಮುಂದಾಗಿದೆ. ನೋಟು ರದ್ದತಿಯಿಂದ ಶುರುವಾಗಿ ಸಿಎಎ, ಎನ್‍ಆರ್‍ಸಿಯವರೆಗೆ ಎಲ್ಲವೂ ದೇಶವನ್ನು ಹಿಂಡುವ ಕ್ರಮಗಳಾಗಿವೆ. ದೇಶವನ್ನಾಳುವವರು ಭಾರತೀಯರ ಕುರಿತು ಕಾಳಜಿ ಇರುವವರೇ ಆಗಿದ್ದರೆ ಮೊದಲು ಬಡ ಭಾರತೀಯರ ಕುರಿತು ಗಮನಹರಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...