Homeಅಂಕಣಗಳುಎರಡೂ ಪಕ್ಷದವರು ಸೋಲುವ ಸಂಗ್ರಾಮ ಪಬ್ಲಿಕ್ ವರ್ಸಸ್ ರಿಪಬ್ಲಿಕ್

ಎರಡೂ ಪಕ್ಷದವರು ಸೋಲುವ ಸಂಗ್ರಾಮ ಪಬ್ಲಿಕ್ ವರ್ಸಸ್ ರಿಪಬ್ಲಿಕ್

- Advertisement -
- Advertisement -

ಇತ್ತೀಚೆಗೆ ಮಾತನಾಡಿದ ಪತ್ರಕರ್ತರೊಬ್ಬರು ಇಂದಿನ ದಿನಮಾನದ ವಾಸ್ತವದ ಪ್ರತೀಕವೆಂಬಂತೆ ತೋರಿದರು. ಜಾತಿಯ ಕಾರಣಕ್ಕೆ ಅವರು ಸಿದ್ದರಾಮಯ್ಯನವರ ವಿರುದ್ಧ ಕುದಿಯುತ್ತಿದ್ದರು. ಅದು ಯಾವ ಪ್ರಮಾಣಕ್ಕಿತ್ತೆಂದರೆ, ಅವರ ಜೊತೆ ಕೈ ಜೋಡಿಸಿದ್ದಕ್ಕಾಗಿ ಸ್ವಜಾತಿಯ ಗೌಡರ ಕುಟುಂಬದ ವಿರುದ್ಧವೂ ತೀವ್ರ ಅಸಹನೆ ಬೆಳೆಸಿಕೊಂಡಿದ್ದಾರೆ. ತಾನು ಪ್ರಜಾಪ್ರಭುತ್ವದ ಪರವಾಗಿ ಮಾತಾಡುತ್ತಿದ್ದೇನೆ ಎಂದು ತೋರಿಸಿಕೊಳ್ಳುವ ಅಗತ್ಯವೂ ಅವರಿಗಿರುವುದರಿಂದ, ತನಗೆ ಸಂಖ್ಯಾಬಲ ಇಲ್ಲದಿರುವ ಈ ಸರ್ಕಾರವು ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯಬಾರದು ಎಂದು ಗುಡುಗುತ್ತಿದ್ದರು. ಆದರೆ, ವಿಧಾನಸಭೆ ವಿಸರ್ಜನೆ ಆಗಲಿ ಎಂದು ಅವರು ಅಪ್ಪಿತಪ್ಪಿಯೂ ಹೇಳಲಿಲ್ಲ. ಯಡಿಯೂರಪ್ಪನವರು ಅಥವಾ ಬಿಜೆಪಿಯಿಂದ ಯಾರಾದರೂ ಮುಖ್ಯಮಂತ್ರಿಯಾಗುವುದೇ ನೈತಿಕವಾಗಿ ಸರಿ ಎಂಬುದು ಅವರ ಪ್ರತಿಪಾದನೆ.

ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರವು ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಬಲವನ್ನು ಕಳೆದುಕೊಂಡಿದೆಯೆಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ, ಆ ಸರ್ಕಾರವನ್ನು ರೂಪಿಸಿರುವ ಎರಡು ಪಕ್ಷಗಳಿಗೆ ಸೇರಿದ 15 ಜನ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇನ್ನೂ ಅಂಗೀಕಾರವಾಗದಿರುವುದು ತಾಂತ್ರಿಕ ಪ್ರಶ್ನೆ ಮಾತ್ರ. ಆಮಿಷ ಅಥವಾ ಒತ್ತಡಕ್ಕೆ ಒಳಗಾಗಿರಬಹುದಾದರೂ, ಅವರನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವವರೂ ಸಹಾ ಆಮಿಷವನ್ನೇ ಒಡ್ಡುತ್ತಿದ್ದಾರೆ. ಆದ್ದರಿಂದ ಸರ್ಕಾರವು ಒಂದು ವೇಳೆ ಉಳಿದುಕೊಂಡರೆ ಅದು ಬಹಳ ನೈತಿಕ ಶಕ್ತಿ ಹೊಂದಿರುವ ಸರ್ಕಾರ ಎಂದು ಯಾರೂ ಹೇಳಲಾಗದು.

ಆದರೆ, ಇದನ್ನು ವಿರೋಧಿಸುತ್ತಿರುವವರು ಸಹಾ ನೈತಿಕ ನಿಲುವನ್ನು ಹೊಂದಿಲ್ಲ. ರಾಮಲಿಂಗಾರೆಡ್ಡಿಯಂತಹ ಹಿರಿಯ ಶಾಸಕರು ರಾಜೀನಾಮೆ ಕೊಟ್ಟರು; ಆದರೆ ಮುಂಬೈಗೆ ಹೋಗಿ ಅವಿತುಕೊಳ್ಳಲಿಲ್ಲ. ಬಹುಶಃ ರೆಡ್ಡಿಯವರಷ್ಟೇ ಹಿರಿಯರಾದ, ಅವರಿಗಿಂತ ಹೆಚ್ಚು ಸಂವಿಧಾನ, ಪ್ರಜಾತಂತ್ರ ಇತ್ಯಾದಿಗಳ ಕುರಿತು ಮಾತನಾಡುವ, ಎರಡು ಪುಸ್ತಕಗಳನ್ನೂ ಬರೆದಿರುವ ಎಚ್.ವಿಶ್ವನಾಥ್ ಮಾತ್ರ ಮುಂಬೈ ಹೋಟೆಲ್‍ಗೆ ಹೋಗಿ ಅವಿತುಕೊಂಡರು. ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಬಂದು ಹೋಟೆಲ್ ಮೇಲೆ ದಾಳಿ ಮಾಡಬಹುದು, ಹಾಗಾಗಿ ರಕ್ಷಣೆ ಬೇಕು ಎಂದು ಪೊಲೀಸರಿಗೆ ಬರೆದ ದೂರಿಗೆ ಅವರ ಸಹಿಯೂ ಇತ್ತು. ಅಂದರೆ, ಆಡಳಿತ ನಡೆಸುತ್ತಿರುವ ಪಕ್ಷಗಳ ಬಲಾಢ್ಯರು ಬಂದು ಒತ್ತಾಯಿಸಿದರೆ ವಾಪಸ್ ಹೋಗಿಬಿಡಬಹುದು (ರಾಮಲಿಂಗಾರೆಡ್ಡಿಯವರ ರೀತಿ) ಎಂಬ ಹೆದರಿಕೆಯಿಂದ ಅವರನ್ನು ಬಚ್ಚಿಟ್ಟುಕೊಳ್ಳುತ್ತಿರುವ ಪಕ್ಷ ಬಿಜೆಪಿ.

ಇದರ ನಂತರದ ಪ್ರಶ್ನೆಯೆಂದರೆ ಸುಪ್ರೀಂಕೋರ್ಟಿನ ತೀರ್ಪಿನದು. ಮೇಲ್ನೋಟಕ್ಕೆ ‘ಶಾಸಕರನ್ನು ಸದನದಲ್ಲಿ ಭಾಗವಹಿಸಲೇಬೇಕೆಂಬ ಒತ್ತಾಯ ಮಾಡಬಾರದು’ ಎಂಬ ತೀರ್ಪಿನಲ್ಲಿ ಅಂತಹ ತಪ್ಪೇನಿಲ್ಲ. ಅದರಲ್ಲೂ ಅವರು ಈಗಾಗಲೇ ರಾಜೀನಾಮೆ ಕೊಟ್ಟಿರುವ ಶಾಸಕರು. ಆದರೆ ಇಲ್ಲಿ ಎರಡು ಪ್ರಶ್ನೆ ಉದ್ಭವಿಸುತ್ತದೆ. ಒಂದು, ಈಗಾಗಲೇ ಚರ್ಚಿತವಾಗಿರುವ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಶಾಸಕಾಂಗ ಪಕ್ಷದ ನಾಯಕರ ವಿಪ್ ಚಲಾಯಿಸುವ ಅಧಿಕಾರವನ್ನು ಮೊಟಕುಗೊಳಿಸುವುದು. ಎರಡು, ರಾಜ್ಯದ ಭವಿಷ್ಯಕ್ಕೆ ಸಂಬಂಧಿಸಿದ ಬಹುಮುಖ್ಯ ಸಂಗತಿ ಚರ್ಚೆಯಾಗಬೇಕಾದರೆ ಅಲ್ಲಿ ಹೋಗಿ ಚರ್ಚೆಯಲ್ಲಿ ಭಾಗವಹಿಸಿ (ಪರ ಅಥವಾ ವಿರೋಧವಾಗಿ) ಮತ ಹಾಕುವ ಜವಾಬ್ದಾರಿಯೂ ಈ ಶಾಸಕರಿಗೆ ಬೇಡವೇ? ಈ ಶಾಸಕರು ಅದರಿಂದ ತಪ್ಪಿಸಿಕೊಳ್ಳಲೆಂದೇ ಸುಪ್ರೀಂಕೋರ್ಟಿಗೆ ಬಂದಿದ್ದಾರೆಂದು ಕೋರ್ಟಿಗೆ ಗೊತ್ತಾಗಲಿಲ್ಲವೇ?

ಹೇಗಾದರೂ ಮಾಡಿ ಚುನಾವಣೆ ಗೆಲ್ಲುವುದು. ಒಂದು ವೇಳೆ ಅಗತ್ಯ ಬಹುಮತ ಇಲ್ಲದಿದ್ದಲ್ಲಿ ಹೇಗಾದರೂ ಮಾಡಿ ಸಂಖ್ಯಾಬಲವನ್ನು ಹೊಂದಿಸಿಕೊಳ್ಳುವುದು – ಇದು ಇಂದಿನ ‘ಪ್ರಜಾಪ್ರಭುತ್ವದ ರೀತಿ’ಯಾಗಿದೆ. ಚುನಾವಣೆಯಲ್ಲಿ ಜನರ ಬದುಕಿನ ವಿಚಾರಗಳನ್ನು ಮುಂದಿಡುವುದು ಅಥವಾ ವಿರೋಧ ಪಕ್ಷಗಳ ನೀತಿಗಳಲ್ಲಿನ ಜನವಿರೋಧಿತನವನ್ನು ಬಯಲುಗೊಳಿಸುವುದು ಇವೆಲ್ಲದರ ಅಗತ್ಯವೇ ಇಲ್ಲ. ಚುನಾವಣೆಗೆ ಮಾರ್ಕೆಟಿಂಗ್ ತಂತ್ರವನ್ನು ಹೊಸೆದು, ಪ್ಯಾಕೇಜ್ ರೂಪಿಸಿ ಜನರ ಮನಸ್ಸಿನಲ್ಲಿ ಗೊಂದಲವನ್ನೋ ಅಥವಾ ಭರವಸೆಯನ್ನೋ ಮೂಡಿಸಲು ಅದರಲ್ಲಿ ಪಳಗಿರುವ ಸಂಸ್ಥೆಗಳನ್ನು ನಿಯೋಜಿಸಿಕೊಳ್ಳುವ ಪ್ರಯತ್ನ ಶುರುವಾಗಿ ಬಹಳ ಕಾಲವಾಗಿದೆ. ಇವೆಲ್ಲವೂ ಪ್ರಜಾತಂತ್ರವನ್ನು ಸೋಲಿಸುತ್ತವೆ.

ಯಡಿಯೂರಪ್ಪನವರು ಸದನದಲ್ಲಿ ಸ್ಪೀಕರ್‍ರನ್ನು ಉದ್ದೇಶಿಸಿ, ‘ಆಡಳಿತ ಪಕ್ಷದವರಿಗೆ ವಿಶ್ವಾಸಮತದ ಮೇಲೆ ಚರ್ಚೆ ಮಾಡಲು ಎಷ್ಟು ಬೇಕಾದರೂ ಅವಕಾಶ ಕೊಡಿ. ನಾವ್ಯಾರೂ ಮಾತಾಡುವುದಿಲ್ಲ. ಒಂದೈದು ನಿಮಿಷ ಮಾತಾಡಬಹುದಷ್ಟೇ. ಬೇಗನೇ ಮತಕ್ಕೆ ಹಾಕಿ’ ಎಂದು ಹೇಳಿದುದರ ಅರ್ಥವೇನು? ಪ್ರಜಾತಂತ್ರವೆಂದರೆ ಸಂಖ್ಯೆಯಷ್ಟೇ, ಬೇರೇನೂ ಅಲ್ಲ ಎಂದು ಅವರು ಸ್ಪಷ್ಟಪಡಿಸುತ್ತಿದ್ದರು. ಆದರೆ, ಇದೇ ಸಂಖ್ಯೆ ಈ ಹಿಂದೆ ಅವರಿಗೆ ಮುಖ್ಯವಾಗಿರಲಿಲ್ಲ. ಅಂದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿದಾಗ ಅವರಿಗೆ ಬಹುಮತಕ್ಕೆ ಬೇಕಾದ 113 ಸಂಖ್ಯೆಯ ಶಾಸಕರ ಬೆಂಬಲ ಇತ್ತು. 104 ಶಾಸಕರನ್ನು ಹೊಂದಿದ್ದ ಬಿಜೆಪಿ ಮತ್ತದರ ನಾಯಕ ಯಡಿಯೂರಪ್ಪನವರಿಗೆ ಇರಲಿಲ್ಲ. ಆದರೂ ಇವೆರಡೂ ಪಕ್ಷಗಳು ಸೇರಿ ನಡೆಸಿದ ಸರ್ಕಾರವು ಸಂವಿಧಾನಬದ್ಧ ಎಂದು ಅವರಿಗೆ ಅನಿಸಿಯೇ ಇರಲಿಲ್ಲ. ಬದಲಿಗೆ ಅದು ಪರಸ್ಪರ ಸೆಣೆಸಾಡಿದ್ದ ಎರಡು ಪಕ್ಷಗಳು ಚುನಾವಣೋತ್ತರ ಕಾಲದಲ್ಲಿ ಮಾಡಿಕೊಂಡ ಅನೈತಿಕ ಮೈತ್ರಿ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಈಗ ಸಂಖ್ಯೆಯ ಜೊತೆಗೆ ನೈತಿಕ ಪ್ರಶ್ನೆಗಳನ್ನೆತ್ತಿ ಚರ್ಚಿಸುವುದೂ ಅವರಿಗೆ ಬೇಡವಾಗಿದೆ. ಕೇವಲ ಮತಕ್ಕೆ ಹಾಕುವುದು ಮಾತ್ರವೇ ಮುಖ್ಯ.

ಈ ಸಂದರ್ಭದಲ್ಲಿ ಇನ್ನೂ ಒಂದು ಅಂಶವನ್ನೂ ಗಮನಿಸಬೇಕು. ತಾನು ಸಭ್ಯ ಎಂದು ತೋರಿಸಿಕೊಳ್ಳಬಯಸುವ ರಾಜಾಜಿನಗರ ಶಾಸಕ ಸುರೇಶ್‍ಕುಮಾರ್‍ರ ಆಷಾಢಭೂತಿತನ ಸದನದಲ್ಲಿ ಬೆಳಕಿಗೆ ಬಂದಿತು. ಅವರು ಕುಮಾರಸ್ವಾಮಿಯವರು ಬಹುಮತದ ಕುರಿತು ಸಂದೇಹವಿರುವಾಗ ವಿಶ್ವಾಸಮತ ಯಾಚಿಸುವ ಪ್ರಸ್ತಾಪವನ್ನು ಮಾಡಿದ್ದುದರ ಕುರಿತು ಮಾತನಾಡಿದರು. ಅದನ್ನು ಪ್ರಸ್ತಾಪಿಸಿದ್ದ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಮುಖ್ಯವಾದ ಫೈಲ್‍ಗಳ ವಿಲೇವಾರಿ ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಸರಿಯಾದದ್ದು. ಕುಮಾರಸ್ವಾಮಿ ಮತ್ತವರ ಸೋದರ ರೇವಣ್ಣನವರ ಫೈಲ್ ವಿಲೇವಾರಿಯ ಹಿಂದೆ ಹಣದ ಲೂಟಿಯ ಉದ್ದೇಶ ಮಾತ್ರ ಇದೆಯೆಂದು ನಂಬಲು ಕಾರಣಗಳಿವೆ. ಆದರೆ, ಈ ವಿಧಾನಸಭೆಯು ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಬಹುಮತವೇ ಇಲ್ಲದೇ, ರಾಜ್ಯಪಾಲರ ಪಕ್ಷಪಾತದ ಕಾರಣದಿಂದಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರು ಮಾಡಿದ್ದು ನೆನಪೇ ಇಲ್ಲದಂತೆ ಸುರೇಶ್‍ಕುಮಾರ್ ವರ್ತಿಸುತ್ತಿದ್ದಾರೆ. ವಿಶ್ವಾಸಮತ ಯಾಚನೆಗೂ ಮುಂಚೆ ಯಡಿಯೂರಪ್ಪನವರು ಅಧಿಕಾರಿಗಳ ವರ್ಗಾವಣೆಯನ್ನೂ ಮಾಡಿದ್ದರು!

ಅಂದರೆ, ಪ್ರಜಾಪ್ರಭುತ್ವ, ಸಂವಿಧಾನ, ನೀತಿ ಸಂಹಿತೆ ಇತ್ಯಾದಿಗಳೆಲ್ಲವೂ ಅನುಕೂಲಸಿಂಧು ರಾಜಕಾರಣದ ಅಸ್ತ್ರಗಳಾಗಿ ಮಾತ್ರ ಬಳಕೆಯಾಗುತ್ತಿವೆ. ಇಂದು ಹೇಗಾದರೂ ಮಾಡಿ ಅಧಿಕಾರ ಹಿಡಿದಿರುವ ಬಿಜೆಪಿಯು ತನಗೆ ಜನರ (ಪಬ್ಲಿಕ್) ಬೆಂಬಲವಿದೆ ಎಂದು ಸಾರುತ್ತಿದೆ. ಈ ಜನರ ಬೆಂಬಲವನ್ನು ಗಣರಾಜ್ಯದ ಮೂಲ ಆಶಯಗಳಿಗೆ ವಿರುದ್ಧವಾಗಿ ಅದು ಬಳಸುತ್ತಿದೆ. ಈ ಕಾರಣಕ್ಕಾಗಿಯೇ ಮುಂದಿನ ದಿನಗಳಲ್ಲಿ ಪಬ್ಲಿಕ್ ವರ್ಸಸ್ ರಿಪಬ್ಲಿಕ್ ಆಗಲಿದೆ ಎಂದು ಖ್ಯಾತ ರಾಜಕೀಯ ಚಿಂತಕ ಯೋಗೇಂದ್ರ ಯಾದವ್ ಹೇಳಿದ್ದು.

ಈ ಪಬ್ಲಿಕ್ ಏನು ಯೋಚಿಸಬೇಕೆಂದು ನಿರ್ದೇಶಿಸುವ, ಏನು ಯೋಚಿಸುತ್ತಾರೆಂದು ಬಿಂಬಿಸುವ ಕೆಲಸ ಮಾಡುವ ಮಾಧ್ಯಮವೂ ರಿಪಬ್ಲಿಕ್‍ನ ಆಶಯಗಳಿಗೆ ಪೂರಕವಾಗಿಲ್ಲ. ಹಾಗಾಗಿ ಅಂತಿಮವಾಗಿ ಇದು ಯಾವ ಜನರು ಓಟು ಹಾಕಿ ಗೆಲ್ಲಿಸಿದ್ದಾರೋ ಆ ಜನರ ವಿರುದ್ಧವೇ ತಿರುಗುತ್ತದೆ. ಇದನ್ನು ಪರಿಹರಿಸುವ ನೈತಿಕ ಶಕ್ತಿಯಾಗಲೀ, ಸಾಧ್ಯತೆಯಾಗಲೀ ಈ ದೇಶದ ವಿರೋಧಪಕ್ಷಗಳಿಗಿಲ್ಲವಾಗಿದೆ. ಇದೇ ಈ ಹೊತ್ತಿನ ದುರಂತ. ಆದ್ದರಿಂದ ಪಬ್ಲಿಕ್ ಮತ್ತು ರಿಪಬ್ಲಿಕ್ ಎರಡೂ ಸೋಲುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...