Homeಅಂಕಣಗಳುಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

ಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

- Advertisement -
- Advertisement -

| ಯಾಹೂ |

ಹಠಾತ್ತನೆ ಮನೆ ಕುಸಿಯತೊಡಗಿ ಜೆಡಿಎಸ್ ಕುಟೀರದ ಗೋಡೆ ಬಿರುಕು ಕಾಣಿಸಿಕೊಂಡ ಕೂಡಲೇ ಅನಾಹುತದ ನಿಖರತೆಯನ್ನು ಗುರುತಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಎಂದು ಘೋಷಿಸಿಬಿಟ್ಟಿದ್ದಾರಲ್ಲಾ. ಅರೆ ಸಮ್ಮಿಶ್ರ ಸಂಸಾರ ಬಿಗಡಾಯಿಸಿಕೊಂಡು ಅಲ್ಲಿಂದ ಹೊರಬಿದ್ದವರೊಂದಿಗೆ ಕೂಡಿಕೆ ಮಾಡಿಕೊಂಡು ಸಂಸಾರ ಹೂಡುವ ಬಗ್ಗೆ, ಎಡೂರಪ್ಪನನ್ನು ತಡೆದವರಾರು. ಎಡೂರಪ್ಪನ ಬಾಯಲ್ಲಿ ಇಂತಹ ಮಾತು ಸುಮ್ಮಸುಮ್ಮನೆ ಬರಲಾರದು. ಯಾರೊ ಚಡ್ಡಿಗಳ ಪೈಕಿ ಎಡೂರಪ್ಪನಿಗೆ ವಯಸ್ಸಾಯ್ತು ಎಂದಿರಬಹುದು ಅಥವಾ ಅವರ ಸರದಿ ಮುಗಿಯಿತಲ್ಲಾ ಎಂದಿರಬಹುದು. ಈ ಎಲ್ಲಾ ವಾಸನೆ ಗ್ರಹಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಸಂಸಾರಿ ಎಂದಿರುವುದು. ಅದಿರಲಿ, ಎಡೂರಪ್ಪ ಆಧುನಿಕ ಜಗತ್ತಿನ ಸನ್ಯಾಸಿಗಳನ್ನ ನೋಡಿಲ್ಲ ಅನ್ನಿಸುತ್ತದೆ. ಅವರೆಲ್ಲಾ ಗುಪ್ತ ಸಮಾಲೋಚನಾ ಪ್ರಿಯರಾಗಿ ಬಹಳ ವರ್ಷಗಳಾದವು. ಉಡುಪಿ ಮಠಗಳನ್ನೆ ಆದರ್ಶವಾಗಿ ಗ್ರಹಿಸಿ ಬದುಕನ್ನು ಇಡಿಯಾಗಿ ಮುಕ್ಕುವ ಕಲೆಯನ್ನು ಕರಗತ ಮಾಡಿಕೊಂಡು ಶತಮಾನವೇ ಸರಿಯಿತು. ತೀರ ಇತ್ತೀಚಿನ ತಾಜಾ ಉದಾಹರಣೆಯೆಂದರೆ ನಮ್ಮ ಸಿರಿಗೆರೆಯ ಶಿವಾಚಾರ್ಯ ಮಹಾಸ್ವಾಮಿಗಳವರು ಪೀಠದ ಸಂವಿಧಾನದ ರೀತಿ ಅರವತ್ತು ವರ್ಷಕ್ಕೆ ಪೀಠಬಿಟ್ಟು, ಹಿಂದೆ ಬಂದ ಮರಿಯನ್ನ ಸ್ಥಾಪಿಸಿ ಪಕ್ಕಕ್ಕೆ ನಿಲ್ಲಬೇಕಿತ್ತು. ಆದರೇನು ಭೂಪ ಇನ್ನ ಅಲ್ಲಾಡಿಲ್ಲ. ಇಂತಿರುವಾಗ ಎಡೂರಪ್ಪ ತಮ್ಮ ರಾಜಕಾರಣದ ಉದಾಹರಣೆಗೆ ನಾನು ಸನ್ಯಾಸಿಯಲ್ಲ ಎಂದಿದ್ದಾರಲ್ಲಾ, ಥೂತ್ತೇರಿ..

ಕರ್ನಾಟಕದ ಇವತ್ತಿನ ಸ್ಥಿತಿಯ ಬಗ್ಗೆ ಯಾರಿಗೆ ಫೋನು ಮಾಡಲಿ, ಕುಮಾರಣ್ಣ ಕನಲಿ ಕೆಂಡವಾಗಿದ್ದಾರೆ, ಸಿದ್ದು ಆತಂಕ ತೋರಿಕೆಯಂತೆ ಕಾಣುತ್ತಿದೆ. ಬಿಜೆಪಿಗಳು ಶುದ್ಧ ಕಿಡಿಗೇಡಿಗಳಂತೆ ಕಾಣುತ್ತಿದ್ದಾರೆ. ವಿಶ್ವನಾಥ್ ಈ ಶತಮಾನದ ಮೀರ್‍ಸಾದಿಕನಂತೆ ಗೋಚರಿಸಿದರೆ, ಕೆ.ಆರ್.ಪೇಟೆ ನಾರಾಯಣಗೌಡ ನಿಜಕ್ಕೂ ನೊಂದಂತೆ ಕಾಣುತ್ತಿದ್ದಾನೆ. ಇವೆಲ್ಲಾ ಸಂಗತಿಗಳನ್ನ ಚರ್ಚಿಸಲು ಸೂಕ್ತ ವ್ಯಕ್ತಿಗಾಗಿ ತಪಾಸಣೆ ಮಾಡುತ್ತಿದ್ದಾಗ ವಾಟಿಸ್ಸೆ ಹೆಸರು ಹೊಳೆಯಬೇಕೆ? ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು…

ರಿಂಗ್‍ಟೋನ್ “ಹೋಗದಿರೀ ಸೋದರರೇ.. ಹೋಗದಿರೀ ಬಂಧುಗಳೇ.. ಮನೆಯನು ತೊರೆದು ಹೋಗುವಿರಾ?” ಹಲೊ ಗುಡಾಪ್ಟರ್ ನೂನ್ ಸರ್”
“ವಾಟಿಸ್ಸೆ ಎಲ್ಲಿದ್ದೀ”
“ಎಲ್ಯಾರ ಇದ್ರೂ ನಿಮ್ಮೆದುರಿಗೆ ನಿಂತಂಗಲವ ಸಾ, ಅದ್ಕೆ ಹಂಡ್ರೆಂಡ್ ರುಪೀಸ್ ಕರೆನ್ಸಿ ಹಾಕ್ಸಿ”
“ಹಾಕುಸ್ತಿನಿ ಕರ್ನಾಟಕದ ರಾಜಕಾರಣ ಏನನ್ನಸ್ತಾ ಅದೆ”
“ಏನಾಗಬೇಕೊ ಅದಾಯ್ತ ಅದೆ ಸಾ”
“ಎಮ್ಮೆಲ್ಲೆಗಳ ರಾಜೀನಾಮೆ ಬಗ್ಗೆ ಏನೇಳ್ತಿ”
“ಅವೊಂತರಾ ಬ್ರಾಂಬ್ರು ಕೇರಿಯ ನಾಯಿದ್ದಂಗೆ ಸಾ”
“ಅಂದ್ರೆ”
“ಈ ಬ್ರಾಂಬ್ರು ಕೇರಿ ನಾಯಿಗಳು ಅಕಸ್ಮಾತ್ ಶೂದ್ರ ಕೇರಿಗೋಯ್ತವೆ. ಅಲ್ಲಿ ಚರಂಡೀಲಿ ಕುರಿ, ಆಡಿನ ಮೂಳೆ, ಕೋಳಿ ಮೂಳೆ ರುಚಿ ನೋಡಿದೂ ಅಂದ್ರೇ ತಿರಗಿ ಬ್ರಾಂಬ್ರು ಕೇರಿಗೋಗದಿಲ್ಲ”
“ಅಂಗಂತಿಯಾ”
“ಹೂ ಮತ್ತೆ. ಆ ಬಿಜೆಪಿಗಳು ಕೊಡೋ ದುಡ್ಡಿಗೆ, ಅಧಿಕಾರಕ್ಕೆ, ಮನಸು ಕೊಟ್ಟವೆ ಅನ್ನಸ್ತದೆ ಅದ್ಕೆ ಹೋದೊ ಬುಡಿ ಅತ್ತಗೆ”
“ಹೋಗಿಲ್ಲ ಇನ್ನ ಇಲ್ಲೆ ಇದ್ದಿವಿ ಅಂತಾರಲ್ಲಾ”
“ಇನ್ನ ಇಲ್ಲೇ ಇದ್ದಿವಿ ಅಂದ್ರೆ ಅವುರಿಗೇನಾಗ್ಯದೆ ಕೇಳಬೇಕು ಸಾ.”
“ಯಾರು ಕೇಳಬೇಕು.”
“ಇನ್ಯಾರು ಮುಖ್ಯಮಂತ್ರಿನೇ ಕೇಳಬೇಕು. ಇವುನು ಗ್ರಾಮ ವಾಸ್ತವ್ಯಕ್ಕೋದ್ರೆ ಹಿಂಗೆ ಆಗದು”
“ಈಗೇನಾಗಬವುದು”
“ಅಲ್ಲ ಸಾ, ಬೆಂಗಳೂರಲ್ಲಿರೊ ನೀವು ಹೇಳಬೇಕು.”
“ಜನಗಳಭಿಪ್ರಾಯ ಹೇಳು.”
“ಜನಗಳು ವಿಶ್ವನಾಥನ್ನ ಉಗೀತಾ ಅವುರೆ ಸಾ”
“ಯಾಕೆ?”
“ಯಾಕೆ ಅಂದ್ರೆ ಸಿದ್ದರಾಮಯ್ಯ ಇವುನೇಗ್ತಿ ನೋಡಿ ಕುರಿ ಕ್ವಟಗೆ ಒಳಿಕೆ ನೂಕಿದ್ದ. ದ್ಯಾವೇಗೌಡ ಹೋಗಿ ಕರದು ತಲೆ ಸವುರಿದ. ಆಗ ತನ್ನ ತಲೇನೆ ಸವುರಿಕೊಂಡಂಗಾಯ್ತು. ಕೂಡ್ಳೆ ಪಾರ್ಟಿ ಪ್ರೆಸಿಡೆಂಟ್ ಮಾಡಿ ಎಮ್ಮೆಲ್ಲೆ ಮಾಡಿದ್ರೆ, ಇವುನು ಕೈ ಕೊಡದ ಅಂತ ಅವುರೆ”
“ನಿನಗೇನನ್ಸುತ್ತೆ”
“ಮಂತ್ರಿ ಮಾಡಿದ್ರೆ ಖಾತೆ ಚನ್ನಾಗಿ ನಿಭಾಯಿಸೋನು, ಅಂಗೆ ನೋಡಿದ್ರೆ ಸಾ.ರಾ. ಮಯೇಶ, ಪುಟ್ಟರಾಜ, ತಮ್ಮಣ್ಣ ಇಂತ ಸ್ಕ್ರಾಪ್ ಮಾಲಿಗಿಂತ ವಿಶ್ವನಾಥ್ ಯೋಗ್ಯ, ಈಗ ಮಾತ್ರ ಅಯೋಗ್ಯ”
“ಕೆ.ಆರ್.ಪೇಟೆ ನಾರಾಯಣಗೌಡನ ಬಗ್ಗೆ ಏನೇಳ್ತಿ’.’
“ಅವುನು ಬಾಂಬೆಯಿಂದ ತಪ್ಪಿಸಿಕೊಂಡು ಬಂದ ಮಾರವಾಡಿ ಹುಡುಗನಂಗೆ ಕಾಣ್ತನೆ ಸಾರ್. ಜೆಡಿಎಸ್‍ಗೆ ಬೇಕಾದಷ್ಟು ಮಾಡ್ಯವುನೆ, ಚುಂಚನಗಿರಿ ಮಠಕ್ಕೆ ಬೊಂಬಾಯಿಲೆ ಜಾಗ ಕೊಡಿಸ್ಯಾವುನೆ, ಅಂಥೊನ್ನ ದ್ಯಾವೇಗೌಡನ ಮನೆವ್ರು ಚಪ್ರಾಸಿಯಂಗೆ ನ್ಯಡಿಸಿಕೊಬಾರದಿತ್ತು.”
“ಒಟ್ಟಾರೆ ಈ ರಾಜೀನಾಮೆ ಪ್ರಕರಣ ಏನನ್ನಸುತ್ತೆ”
“ನನಿಗೇನನ್ನಸ್ತದೆ ಅಂದ್ರೆ, ಒಂದು ಅವಿಭಕ್ತ ಕುಟುಂಬದಲ್ಲಿ ಅತೃಪ್ತ ಜನ ಏನೇನೊ ನಾಟಗ ಮಾಡ್ತರೆ. ಹೊಟ್ಟೆನೊವ್ವು ಅಂತರೆ, ಬೇಧಿ ಅಂತರೆ, ಹಲ್ಲುನೋವು ಅಂತರೆ, ಸುಮ್ಮನೆ ಮೂಲೇಲಿ ಮನಿಕತ್ತರೆ, ಅದು ಅವುರ ಪ್ರತಿಭಟನೆ ಸಾ. ಈಗ್ಲು ನ್ಯಡದಿರದು ಈ ಕುಮಾರಸ್ವಾಮಿ ಬ್ಯಾಡ ಅನ್ನೊ ಪ್ರತಿಭಟನೆ ಅಷ್ಟೆ ಸಾ”
“ಅಂಗಾರೆ ಕುಮಾರಣ್ಣ ಬ್ಯಾಡವಾ”
“ಇವುನು ಹೋಯ್ತನೆ ಅಂದ್ರೆ ಯಾರಿಗೂ ಫೀಲಾಗಲ್ಲ ಸಾರ್, ಯಾಕಂದ್ರೆ ಇವುರಿಂದ್ಲೆ ಹಾರವರು ಲಕ್ಕಪತಿಗಳಾದ್ರು, ಅದೇನು ಯಜ್ಞ – ಅದೇನು ಯಾಗ, ಅದೇನು ಹೋಮ, ಅದಿರ್ಲಿ ಯಾರಾರ ತಲೆಯಿದ್ದೋರು, ನಾಮಪತ್ರ ತಗಂಡೋಗಿ ಶೃಂಗೇರೀಲಿ ಪೂಜೆ ಮಾಡಿಸಿಗಂಡು ಬತ್ತರ ಸಾ”
“ಇಲ್ಲ ಬುಡು ಇತಿಹಾಸದಲ್ಲಿ ಯಾರು ಅಂಗೆ ಮಾಡಿಲ್ಲ”
“ದ್ಯಾವೇಗೌಡ್ರು ಫ್ಯಾಮಿಲಿ ಪವರಿಂದ ಇಳದ್ರೆ ಬ್ರಾಂಬ್ರಿಗೆ ಲಾಸಾಗಬಹುದು. ನನಿಗಂತು ಯಾವ ನಷ್ಟನೂ ಇಲ್ಲ ಸಾ”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ| ಕೆಸಿಆರ್‌ ಮನೆ ಮುಂದೆ ದಲಿತ ಮುಖಂಡರಿಂದ ಪ್ರತಿಭಟನೆ; ಬಿಆರ್‌ಎಸ್‌ ಕಾರ್ಯಕರ್ತರಿಂದ ನೀರು-ಅರಿಶಿನ ಬಳಸಿ ರಸ್ತೆ ಶುದ್ಧೀಕರಣ

ತೆಲಂಗಾಣದ ಸಿದ್ಧಾಪೇಟೆ ಜಿಲ್ಲೆಯ ಎರ್ರವಳ್ಳಿಯಲ್ಲಿರುವ ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರ ಫಾರ್ಮ್ ಹೌಸ್ ಬಳಿ ದಲಿತ ಮುಖಂಡರು ಮತ್ತು ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ನಂತರ, ಬಿಆರ್‌ಎಸ್ ನಾಯಕರು ನಡೆಸಿದ...

ಉದ್ಯಮಿಗಳಾದ ನಂದನ್ ನಿಲೇಕಣಿ- ನಿಖಿಲ್ ಕಾಮತ್, ನಟ ಶಿವರಾಜ್‌ಕುಮಾರ್ ಅವರಿಗೂ ಎಸ್‌ಐಆರ್ ನೋಟಿಸ್‌

ಇನ್ಫೋಸಿಸ್ ಸಹ-ಸಂಸ್ಥಾಪಕ, ಕೇಂದ್ರ ಸರ್ಕಾರದ 'ಪರೀಕ್ಷಾ ಸುಧಾರಣಾ ಉನ್ನತ ಮಟ್ಟದ ಕಾರ್ಯಪಡೆ' ಮುಕ್ಯಸ್ಥ ನಂದನ್ ನಿಲೇಕಣಿ ಹಾಗೂ ಅವರ ಇಡೀ ಕುಟುಂಬವು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಚುನಾವಣಾ...

ರಾಷ್ಟ್ರೀಯ ಮಹಿಳಾ ಆಯೋಗದ ಕಾರ್ಯಾಗಾರದಲ್ಲಿ ಬರೀ ಹಿಂದಿ ಮಾತು : ಆಕ್ಷೇಪ ವ್ಯಕ್ತಪಡಿಸಿ ಹೊರನಡೆದ ಕೇರಳದ ಶಾಸಕರು

ರಾಷ್ಟ್ರೀಯ ಮಹಿಳಾ ಆಯೋಗ (NCW) ಮಂಗಳವಾರ (ಸೆ.8) ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ, ಬಹುಪಾಲು ಸೆಷನ್‌ಗಳನ್ನು ಹಿಂದಿ ಭಾಷೆಯಲ್ಲೇ ನಡೆಸಲಾಗುತ್ತಿದೆ ಮತ್ತು ಹಿಂದಿ ಮಾತನಾಡದ ರಾಜ್ಯಗಳ ಭಾಗವಹಿಸುವಿಕೆಗೆ ಕರಾರುವಕ್ಕಾಗಿ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಆರೋಪಿಸಿ,...

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...