Homeಚಳವಳಿರೈತ ಚಳವಳಿಯನ್ನು ಯಶಸ್ವಿಗೊಳಿಸುತ್ತಿರುವ 11 ಮುಖ್ಯ ಅಂಶಗಳು: ಪುರುಷೋತ್ತಮ ಬಿಳಿಮಲೆ

ರೈತ ಚಳವಳಿಯನ್ನು ಯಶಸ್ವಿಗೊಳಿಸುತ್ತಿರುವ 11 ಮುಖ್ಯ ಅಂಶಗಳು: ಪುರುಷೋತ್ತಮ ಬಿಳಿಮಲೆ

- Advertisement -
- Advertisement -

ಅನ್ನದ ಋಣ ಆಯೋಜಿಸಿದ್ದ “ದೆಹಲಿ ರೈತ ಹೋರಾಟ- ಕನ್ನಡಿಗರ ಒಳನೋಟ” ವೆಬಿನಾರ್‌ನಲ್ಲಿ ಲೇಖಕರು, ಸಂಶೋಧಕರು ಆಗಿರುವ ಪುರುಷೋತ್ತಮ ಬಿಳಿಮಲೆ ಅವರು ಐತಿಹಾಸಿಕ ರೈತ ಹೋರಾಟವನ್ನು ಯಶಸ್ವಿಗೊಳಿಸುತ್ತಿರುವ 11 ಮುಖ್ಯ ಅಂಶಗಳನ್ನು ಪಟ್ಟಿ ಮಾಡಿದ್ದಾರೆ.

1. ಒಗ್ಗಟ್ಟು: ಸಂಯಕ್ತ ಕಿಸಾನ್ ಮೋರ್ಚಾವು ದೇಶದಾದ್ಯಂತ ಇರುವ ಸುಮಾರು 450 ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಂದು ವೇದಿಕೆಗೆ ತಂದು ಒಗ್ಗಟ್ಟು ಪ್ರದರ್ಶಿಸಿದ್ದು.


2. ಹಣಕಾಸಿನ ನಿರ್ವಹಣೆಯಲ್ಲಿ ಪಾರದರ್ಶಕತೆ: ಆಧಾರ್ ಕಾರ್ಡ್, ಪಾನ್ ನಂಬರ್, ಇತ್ಯಾದಿ ಆಧಾರಗಳಿಲ್ಲದೆ ಯಾರಿಂದಲೂ ಹಣ ಸ್ವೀಕೃತಿಯಾಗಿಲ್ಲ. ಚಳವಳಿ ಕೇಂದ್ರಗಳಲ್ಲಿ ನಗದು ಸ್ವೀಕರಣೆ ಇಲ್ಲ. ರೈತರು ತಿಂಗಳಿಗೊಮ್ಮೆ ನೀಡಿದ ದೇಣಿಗೆಯಿಂದಲೇ ಖರ್ಚುಗಳನ್ನು ಭರಿಸಿಕೊಳ್ಳಲಾಗಿದೆ. ದಾನಿಗಳು ನೀಡಿದ ಧನಸಹಾಯ ನೇರವಾಗಿ ಬ್ಯಾಂಕಿಗೇ ರವಾನೆಯಾಗಿದೆ.


3. ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ ಮತ್ತು ದೆಹಲಿ ಗುರುದ್ವಾರ ಮೇನೇಜ್ ಮೆಂಟ್ ಕಮಿಟಿ ರೈತರಿಗೆ ನೀಡಿದ ನಿರಂತರ ಬೆಂಬಲ.


4. ಲಂಗರ್: ಸಿಖ್ ಪರಂಪರೆಯ ಎಲ್ಲರಿಗೂ ಉಚಿತ ಆಹಾರ ನೀಡಿಕೆ ಮತ್ತು ಸಾಮೂಹಿಕ ಭೋಜನದ ಪರಿಕಲ್ಪನೆಯು ಹೋರಾಟವನ್ನು ಕಳೆಗುಂದದಂತೆ ನೋಡಿಕೊಂಡದ್ದು.


5. ಉಚಿತ ಸೇವೆಗಳು: ವೈದ್ಯರು, ಪ್ಲಂಬರ್ ಗಳು, ಇಲೆಕ್ಟ್ರಿಕಲ್ ಕೆಲಸಗಾರರು – ಹೀಗೆ ದೈನಂದಿನ ಅಗತ್ಯದ ಎಲ್ಲ ಸೇವೆಗಳೂ ರೈತರಿಗೆ ಉಚಿತವಾಗಿ ದೊರೆಯಿತು. ಸೇವೆ ಸಲ್ಲಿಸಿದವರೂ ಯಾವುದೇ ಸಂಭಾವನೆ ಪಡೆದಿಲ್ಲ.


6. ಪರ್ಯಾಯ ಮಾಧ್ಯಮಗಳ ಸೃಷ್ಟಿ: ಮುಖ್ಯ ಮಾಧ್ಯಮಗಳನ್ನು ಹೊರಗಿಟ್ಟು ( ಅವರಿಗೆ ಪ್ರವೇಶವಿಲ್ಲ ಎಂಬ ಫಲಕ ಹಾಕಿಯೇ) ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಂಡು ಪರಿಣಾಮಕಾರೀ ಸಂವಹನವನ್ನು ಸಾಧಿಸಿದ್ದು. ಈ ಕೆಲಸದಲ್ಲಿ ಚಂಡೀಗಡ ಮತ್ತು ಅಮೃತಸರದ ಇಂಜಿನೀಯರಿಂಗ್ ಓದುವ ವಿದ್ಯಾರ್ಥಿಗಳು ಅಸಾಧ್ಯವಾದ್ದನ್ನೇ ಸಾಧ್ಯಮಾಡಿದರು.

ಇದನ್ನೂ ಓದಿ: ಭಾಷಾ ರಾಜಕಾರಣ ಮತ್ತು ತುಳು ರಾಜ್ಯದ ಬೇಡಿಕೆ: ಪ್ರೊ. ಪುರುಷೋತ್ತಮ ಬಿಳಿಮಲೆ


7. ಕೋಮುವಾದದಿಂದ ದೂರ: ಭಾರತ ವಿಭಜನೆಗೆ ದೊಡ್ಡ ಮಟ್ಟದಲ್ಲಿ ಬಲಿಯಾದ ಪಂಜಾಬಿಗಳು ಮುಂದಿನ ದಿನಗಳಲ್ಲಿ ಕೋಮುವಾದ ತಮ್ಮೊಳಗೆ ಪ್ರವೇಶಿಸದ ಎಚ್ಚರವನ್ನು ತೋರಿಸಿದ್ದು. ಜೊತೆಗೆ ಮಹಿಳೆಯರು, ದಲಿತರು, ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಚಳವಳಿಯಲ್ಲಿ ತೊಡಗಿಸಿಕೊಳ್ಳುವಂತೆ ಸಂಘಟನೆಯನ್ನು ರೂಪಿಸಿದ್ದು.


8. ಸಕ್ರಿಯ ವಾತಾವರಣ: ಪ್ರತಿಭಟನೆಯ ಸ್ಥಳದಲ್ಲಿ ಸಂಗೀತ, ಉಪನ್ಯಾಸ, ಪ್ರವಚನ, ಜಿಮ್, ಕಲಾಶಿಬಿರ, ಗ್ರಂಥಾಲಯ ಇತ್ಯಾದಿಗಳು ಇರುವಂತೆ ಮಾಡಿ, ಹೋರಾಟದ ವಾತಾವರಣವನ್ನು ಜೀವಂತ ಇರಿಸಿದ್ದು.


9. ಒಳಗೊಳ್ಳುವಿಕೆಯ ಕೆಲಸಗಳು: ಪ್ರತಿಭಟನಕಾರರು ಸದಾ ಹೋರಾಟದೊಂದಿಗೇ ಇರುವಂತೆ ಮಾಡಲು ಟ್ರಾಕ್ಟರ್ ಮೆರವಣಿಗೆ, ಮಹಾಪಂಚಾಯತ್, ಕಿಸಾನ್ ಸಭಾ ಇತ್ಯಾದಿಗಳನ್ನು ನಿರಂತರವಾಗಿ ಆಯೋಜಿಸುತ್ತಾ ರೈತರು ಜಡವಾಗದಂತೆ ನೋಡಿಕೊಂಡದ್ದು.


10. ಹೋರಾಟವು ದೇಶ-ವಿದೇಶಗಳ ಗಮನಸೆಳೆಯುವಂತೆ ತಂತ್ರಗಳನ್ನು ರೂಪಿಸಿದ್ದು.


11. ವಿರೋಧಿಗಳು ಕಟ್ಟಿದ ಕಥನಗಳಿಗೆ ಪ್ರತಿಕ್ರಿಯೆ ನೀಡುತ್ತಾ ತಮ್ಮ ಸಮಯ ವ್ಯರ್ಥವಾಗದಂತೆ ನೋಡಿಕೊಂಡ ಹೋರಾಟಗಾರರು, ತಮ್ಮದೇ ಕಥನಗಳು ಜನರಿಗೆ ತಲುಪುವಂತೆ ಮಾಡಿದ್ದು.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರೈತ ಚಳುವಳಿಯ ಬಗೆಗಿನ ಬಿಳಿಮಲೆಯವರ ಲೇಖನ ಅತ್ಯುಪಯುಕ್ತ ವಿಶ್ಲೇಷಣೆ!ಲಂಗುಲಗಾಮು ಇಲ್ಲದೆ, ಸಾರ್ವಜನಿಕ ಎನಿಸುವ ಕನಿಷ್ಠ ನಾಚಿಕೆಯೂ ಇಲ್ಲದೆ, ಸಂಸತ್ತಿನ ಭೀಮ ಬಲ ಉಪಯೋಗಿಸಿ ಕಾರ್ಯರೂಪಕ್ಕೆ ತರಲೆತ್ನಿಸಿದ ಗುಪ್ತ ಮತ್ತು ಸಮಾಜ ವಿರೋಧಿ ಕಾರ್ಯಸೂಚಿಯನ್ನು ಸಂಘಟಿತವಲ್ಲದ ಜನಸಮೂಹ ವಿರೋಧಿಸಿ ಗೆಲ್ಲುವುದು ಕಷ್ಟಸಾಧ್ಯ! ಅದು, ವಿರೋಧ ಪಕ್ಷಗಳ ಅಸಹಾಯಕ ಸ್ಥಿತಿ; ಅದು, ಧ್ವನಿ ಇಲ್ಲದವರ ಧ್ವನಿ ಆಗಿರಬೇಕಿದ್ದ ಮಾಧ್ಯಮಗಳ ಎಗ್ಗಿಲ್ಲದ ಬಫೂನ್ಗಿರಿ ವಾತಾವರಣ; ಅಂತಹ ಸಂದರ್ಭದಲ್ಲಿ, ರೈತಾಂದೋಲನ ಸಾರ್ವಜನಿಕ ಸದಭಿಪ್ರಾಯ ಕ್ರೋಡೀಕರಿಸಿಕೊಂಡು, ಬಲಪಡೆದು, ಹೋರಾಟವನ್ನು ಮುನ್ನಡೆಸಲು ಸಹಾಯ ಮಾಡಿದ್ದು, ರೈತ ನಾಯಕರ ಮುಂದಾಲೋಚನೆ, ಸಮಯಪ್ರಜ್ಞೆ, ಕೈಚೆಲ್ಲದ ಪ್ರಯತ್ನ ಮತ್ತು, ಅದ್ಭುತ ಸಂವಹನ ಸಾದ್ಯವಾಗಿಸಿದ ಇಂಟರ್ನೆಟ್!!

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...