ತಮಿಳುನಾಡಿನ ಚೆನ್ನೈ ನಗರದ ನಂದನಂ ವೈಎಂಸಿಎ ಮೈದಾನದಲ್ಲಿ ದಕ್ಷಿಣ ಭಾರತದ ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ (BAPASI) ಆಯೋಜಿಸಿದ್ದ 45ನೇ ಚೆನ್ನೈ ಪುಸ್ತಕ ಮೇಳಕ್ಕೆ ದೇಶದ ನಾನಾ ಭಾಗಗಳಿಂದ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ.
’ಈ ಪುಸ್ತಕ ಮೇಳದಲ್ಲಿ 12 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ’ ಎಂದು BAPASI ಅಧ್ಯಕ್ಷ ಎಸ್. ವೈರವನ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾದ ನಂತರ ಫೆಬ್ರವರಿ 16 ರಂದು ಪುಸ್ತಕ ಮೇಳ ಆರಂಭವಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಉದ್ಘಾಟಿಸಿದ ಈ ಮೇಳದಲ್ಲಿ ದೇಶಾದ್ಯಂತದ ಪುಸ್ತಕ ಮಾರಾಟಗಾರರ 800 ಕ್ಕೂ ಹೆಚ್ಚು ಮಳಿಗೆಗಳು ಇದ್ದವು.
ಭಾನುವಾರ ಈ ಮೇಳಕ್ಕೆ ತೆರೆ ಎಳೆಯಲಾಗಿದೆ. ನಿರೀಕ್ಷೆಯಂತೆ, ಮೇಳದ ಕೊನೆ ದಿನ ಸಾವಿರಾರು ಜನರು ಸೇರಿದ್ದು, ಪುಸ್ತಕಗಳ ಮಾರಾಟದಲ್ಲಿ ಅತ್ಯಂತ ಏರಿಕೆ ಕಂಡುಬಂದಿದೆ. ಜನರನ್ನು ನಿಯಂತ್ರಿಸಲು ಮೈದಾನದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ರಾಜೇಶ್ವರಿ ತೇಜಸ್ವಿಯವರ ಹೊಸ ಪುಸ್ತಕದ ಆಯ್ದ ಭಾಗ – ‘ನನ್ನ ಡ್ರೈವಿಂಗ್ ಡೈರಿ’
ಈ ಬಾರಿಯ ಮೇಳದಲ್ಲಿ ರಾಜ್ಯ ಸರ್ಕಾರದ ‘ಇಲ್ಲಂ ತೇಡಿ ಕಲ್ವಿ’ (Illam Thedi Kalvi)ಯೋಜನೆ, ವಿಜ್ಞಾನ ಪ್ರದರ್ಶನ, Keezhadi ಛಾಯಾಚಿತ್ರ ಗ್ಯಾಲರಿ ಮತ್ತು ಹಳೆಯ ಕುಂಬಾರಿಕೆ ಕಲಾಕೃತಿಗಳ ಪ್ರದರ್ಶನಕ್ಕೆ ಸಂಬಂಧಿಸಿದ ಮಳಿಗೆಗಳು ಸಹ ಇದ್ದವು.
ಪ್ರಸಿದ್ಧ ನಾಯಕರ ಶಿಲ್ಪಗಳು ಮೇಳದಲ್ಲಿ ಮತ್ತೊಂದು ಆಕರ್ಷಣೆಯಾಗಿದ್ದವು. ಮಾಜಿ ಸಿಎಂ ಎಂ. ಕರುಣಾನಿಧಿ, ಜನಪ್ರಿಯ ತಮಿಳು ಕವಿ ತಿರುವಳ್ಳುವರ್, ಬುದ್ಧ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ದ್ರಾವಿಡ ಧೀಮಂತ ‘ಪೆರಿಯಾರ್’ ಇವಿ ರಾಮಸಾಮಿ ಮತ್ತಿತರ ನಾಯಕರ ಕಲಾಕೃತಿಗಳು ಮಾರಾಟಕ್ಕೆ ಲಭ್ಯವಿದ್ದವು.
’ಜಲ್ಲಿಕಟ್ಟು ಪ್ರತಿಭಟನೆಯ ನಂತರ ಯುವಕರಲ್ಲಿ ರಾಜಕೀಯದ ಪ್ರಜ್ಞೆ ಹೆಚ್ಚಾಗಿದೆ. ಕಳೆದೆರಡು ವರ್ಷಗಳಿಂದ ಜಾತ್ರೆಯಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದು, ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಿರುವಳ್ಳುವರ್ ಮತ್ತು ಪೆರಿಯಾರ್ ಕಲಾಕೃತಿಗಳು ಹೆಚ್ಚು ಮಾರಾಟವಾಗಿವೆ’ ಎಂದು ಶಿಲ್ಪ ಕಲಾವಿದ ಅರುಣ್ ತೈತನ್ ಹೇಳಿದ್ದಾರೆ.
ಈ ಬಾರಿಯ ಮೇಳದಲ್ಲಿ ಅತಿ ಹೆಚ್ಚಿನ ಶಾಲಾ ವಿದ್ಯಾರ್ಥಿಗಳು ಭಾವಹಿಸಿದ್ದರು ಎಂದು BAPASI ಕಾರ್ಯದರ್ಶಿ ಎಸ್.ಕೆ.ಮುರುಗನ್ ಹೇಳಿದ್ದಾರೆ.
ಇದನ್ನೂ ಓದಿ: ಭ್ರಮೆ ಮತ್ತು ವಾಸ್ತವಗಳ ನಡುವೆ ಪುಸ್ತಕದ ಆಯ್ದ ಭಾಗ; ಯು.ಜಿ.ಕೃಷ್ಣಮೂರ್ತಿ ರಮಣರನ್ನು ಭೇಟಿಯಾದುದು