Homeಮುಖಪುಟಒಂದು ವರ್ಷದಲ್ಲಿ 5.18 ಕೋಟಿ ಕಾರ್ಮಿಕರನ್ನು ನರೇಗಾ ಯೋಜನೆಯ ಪಟ್ಟಿಯಿಂದ ತೆಗೆಯಲಾಗಿದೆ: ಕೇಂದ್ರ ಸಚಿವರ ಮಾಹಿತಿ

ಒಂದು ವರ್ಷದಲ್ಲಿ 5.18 ಕೋಟಿ ಕಾರ್ಮಿಕರನ್ನು ನರೇಗಾ ಯೋಜನೆಯ ಪಟ್ಟಿಯಿಂದ ತೆಗೆಯಲಾಗಿದೆ: ಕೇಂದ್ರ ಸಚಿವರ ಮಾಹಿತಿ

- Advertisement -
- Advertisement -

2022-23ರಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MGNREGA)ಯ ಪಟ್ಟಿಯಿಂದ 5.18 ಕೋಟಿ ಕಾರ್ಮಿಕರ ಹೆಸರನ್ನು ಅಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಮಂಗಳವಾರ ಲೋಕಸಭೆಗೆ ತಿಳಿಸಿದರು.

ಅಳಿಸಲಾದ ಹೆಸರುಗಳ ಸಂಖ್ಯೆಯು 2021-’22 ಕ್ಕಿಂತ 247% ಹೆಚ್ಚಾಗಿದೆ. ಈ ಯೋಜನೆಯು ದೇಶದ ಪ್ರತಿ ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ.

ಜನವರಿಯಲ್ಲಿ, ನರೇಂದ್ರ ಮೋದಿ ಸರ್ಕಾರವು MGNREGA ಜಾಬ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಇದಕ್ಕೆ ಕಾರ್ಮಿಕರು ಮತ್ತು ಕಾರ್ಯಕರ್ತರ ಪ್ರತಿಭಟನೆಯ ನಡೆಸಿದರು. ಆದರೂ ಆಧಾರ್ ಆಧಾರಿತ ಪಾವತಿಗಳ ಅನುಷ್ಠಾನದ ಗಡುವನ್ನು ನಾಲ್ಕನೇ ಬಾರಿಗೆ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.

ಗಡುವನ್ನು ಪೂರೈಸಲು ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರಗಳು ಎರಡು ಡೇಟಾಬೇಸ್‌ಗಳಲ್ಲಿ ದಾಖಲೆಗಳಲ್ಲಿ ವ್ಯತ್ಯಾಸಗಳನ್ನು ಹೊಂದಿರುವ ಕಾರ್ಮಿಕರ ಹೆಸರನ್ನು ತೆಗೆದುಹಾಕುತ್ತಿವೆ, ಹಾಗಾಗಿಯೇ ಯೋಜನೆಯ ಪಟ್ಟಿಯಿಂದ ಕಾರ್ಮಿಕರ ಹೆಸರು ಕೈಬಿಡುವುದಕ್ಕೆ ಕಾರಣವಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

2021-22 ಕ್ಕೆ ಹೋಲಿಸಿದರೆ ಹಿಂದಿನ ಹಣಕಾಸು ವರ್ಷದಲ್ಲಿ 244.3% ರಷ್ಟು ಅಳಿಸುವಿಕೆಯಲ್ಲಿ ಹೆಚ್ಚಳವಾಗಿದೆಯೇ ಎಂದು ಕಾಂಗ್ರೆಸ್ ಸಂಸದರಾದ ಗೌರವ್ ಗೊಗೊಯ್ ಮತ್ತು ವಿಕೆ ಶ್ರೀಕಂದನ್ ಅವರು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಪ್ರಶ್ನೆಯೊಂದನ್ನು ಕೇಳಿದ್ದರು.

ಅದಕ್ಕೆ ಉತ್ತರಿಸಿದ ಸಚಿವ ಗಿರಿರಾಜ್ ಸಿಂಗ್ ಅವರು, ”2021-’22ರಲ್ಲಿ 1,49,51,247 ಕಾರ್ಮಿಕರ MGNREGA ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ ಮತ್ತು 2022-’23 ರಲ್ಲಿ ಈ ಸಂಖ್ಯೆ 5,18,91,168 ಆಗಿದೆ ಎಂದು ಹೇಳಿದರು.

ಜಾಬ್ ಕಾರ್ಡ್‌ಗಳನ್ನು ಅಳಿಸಲು ವಿವಿಧ ಕಾರಣಗಳು:

”ನಕಲಿ ಜಾಬ್ ಕಾರ್ಡ್, ಕೆಲಸ ಮಾಡಲು ಸಿದ್ಧರಿಲ್ಲದವರು, ಕುಟುಂಬವನ್ನು ಗ್ರಾಮ ಪಂಚಾಯತ್‌ನಿಂದ ಶಾಶ್ವತವಾಗಿ ಸ್ಥಳಾಂತಗೊಂಡಿರುವವರು ಮತ್ತು ಉದ್ಯೋಗ ಕಾರ್ಡ್‌ನಲ್ಲಿರುವ ವ್ಯಕ್ತಿಯ ಅವಧಿ ಮುಗಿದಿದೆ” ಹಾಗಾಗಿ ಅಂತವರ ಜಾಬ್‌ ಕಾರ್ಡ್‌ಗಳನ್ನು ತಗೆಯಲಾಗಿದೆ ಎಂದು ಲೋಕಸಭೆಗೆ ಲಿಖಿತ ಪ್ರತಿಕ್ರಿಯೆಯಲ್ಲಿ ಸಿಂಗ್ ಹೇಳಿದ್ದಾರೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, 2022-23ರಲ್ಲಿ ಪಶ್ಚಿಮ ಬಂಗಾಳ (83.36 ಲಕ್ಷ) ಅತಿ ಹೆಚ್ಚು ಅಳಿಸುವಿಕೆಗಳನ್ನು ವರದಿ ಮಾಡಿದೆ, ಆಂಧ್ರ ಪ್ರದೇಶ (78.05 ಲಕ್ಷ), ಒಡಿಶಾ (77.78 ಲಕ್ಷ), ಬಿಹಾರ (76.68 ಲಕ್ಷ) ಮತ್ತು ಉತ್ತರ ಪ್ರದೇಶ (62.98 ಲಕ್ಷ).

ಇದನ್ನೂ ಓದಿ: ಇಂದು ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ: INDIA ಒಕ್ಕೂಟದ ನಿರ್ಧಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...