Homeಅಂತರಾಷ್ಟ್ರೀಯಅಪರಾಧಗಳಲ್ಲಿ ಹೆಚ್ಚಳ: 'ಒಡೆದ ಕಿಟಕಿ ಗಾಜು' ಹೇಳುವ ಸಾರ್ವಕಾಲೀನ ಕತೆ

ಅಪರಾಧಗಳಲ್ಲಿ ಹೆಚ್ಚಳ: ‘ಒಡೆದ ಕಿಟಕಿ ಗಾಜು’ ಹೇಳುವ ಸಾರ್ವಕಾಲೀನ ಕತೆ

- Advertisement -
- Advertisement -

ಒಡೆದ ಕಿಟಕಿಯ ಗಾಜು ಕತೆ ಹೇಳಬಹುದೇ ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಮೇಲೆ ತೋರಿಸಿದ ಕಿಟಕಿಯನ್ನು ನೋಡಿದ ತಕ್ಷಣ ಅದರಲ್ಲಿ ಏನೋ ಕತೆ ಇದೆ ಎಂದು ನಿಮಗೆ ಅನಿಸಲಿಲ್ಲವೇ?

ತಕ್ಷಣ ಗೋಚರಿಸುವುದು “ಇಲ್ಲಿ ಏನೋ ಅಪರಾಧ ನಡೆದಿದೆ” ಎಂಬುದನ್ನು ತಿಳಿಸಲು ಉಳಿದಿರುವ ಮೂಕ ಸಾಕ್ಷಿ. ಹಾಗಾದರೆ ಯಾರು, ಯಾವಾಗ ಮತ್ತು ಹೇಗೆ ಈ ಕೃತ್ಯ ಎಸಗಿದರು ಎಂಬುದು ನಿಮ್ಮ ಮುಂದಿನ ಪ್ರಶ್ನೆ ಆಗಿರಬಹುದು. ಇರಲಿ, ಅದಕ್ಕೆ ಮುನ್ನ, ಒಡೆದ ಕಿಟಕಿ ಗಾಜು ಸಾರಿ ಹೇಳುತ್ತಿರುವುದು “ಇಲ್ಲಿಯ ಕಾನೂನು ಸುವ್ಯವಸ್ಥೆ ಸರಿ ಇಲ್ಲ” ಎಂದು. ಹೌದು, ಇದನ್ನು ಅಪರಾಧ ತನಿಖಾ ಶಾಸ್ತ್ರದಲ್ಲಿ “ದಿ ಬ್ರೋಕನ್ ವಿಂಡೋ ಥಿಯರಿ” ಎನ್ನುತ್ತಾರೆ.

1982ರಲ್ಲಿ ಸಾಮಾಜಿಕ ಶಾಸ್ತ್ರಜ್ಞರಾದ ಜೇಮ್ಸ್ ಕ್ಯೂ. ವಿಲ್ಸನ್ ಮತ್ತು ಜಾರ್ಜ್ ಎಲ್. ಕೆಲ್ಲಿಂಗ್ ಅವರು ಬರೆದ ಲೇಖನ. ಎಲ್ಲರ ಕಣ್ಣಿಗೆ ಕಾಣುವಂತಹ ಸಣ್ಣ ಪುಟ್ಟ ಅಪರಾಧದ ಕುರುಹುಗಳು ಸಮಾಜಘಾತಕರನ್ನು ಇನ್ನಷ್ಟು ಗಂಭೀರ ಅಪರಾಧವೆಸಗಲು ಪ್ರಚೋದಿಸುತ್ತವೆ ಮತ್ತು ಸಮಾಜದಲ್ಲಿ ಕಾನೂನು ಪಾಲಿಸುವ ಜನಸಾಮಾನ್ಯರಿಗೆ “ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ, ಹೇಳುವವರು-ಕೇಳುವವರು ಯಾರೂ ಇಲ್ಲ. ಈ ಪ್ರದೇಶ ಸುರಕ್ಷಿತವಲ್ಲ, ಇಲ್ಲಿಂದ ಬೇಗನೇ ಕಾಲು ಕೀಳುವುದು ಉತ್ತಮ” ಎಂಬ ಸಂದೇಶ ರವಾನಿಸುತ್ತದೆ. ಕೇವಲ ಕಿಟಕಿಯ ಒಡೆದ ಗಾಜು ಮಾತ್ರವಲ್ಲ, ಗೋಡೆಯ ಮೇಲೆ ಬರೆದ ಗ್ರಾಫಿಟಿ (ಅಸಂಬದ್ಧ ಬರಹ/ಚಿತ್ರಗಳು), ಎಲ್ಲೆಡೆ ಬಿದ್ದಿರುವ ಕಸದ ರಾಶಿ, ಸಮಯಕ್ಕೆ ಸರಿಯಾಗಿ ಸಂಚರಿಸದ ಸಾರಿಗೆ ವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ, ಎಲ್ಲವೂ ಸಹ ಇದೇ ರೀತಿಯ ಸಂದೇಶ ರವಾನಿಸುತ್ತವೆ.

1980-1994ರ ಕಾಲಘಟ್ಟದಲ್ಲಿ ಅಮೇರಿಕದ ನ್ಯೂಯಾರ್ಕ್ ನಗರ ಅತೀವ ಅಪರಾಧ ಹಾವಳಿಗೆ ಒಳಗಾಗಿತ್ತು. ನಗರದ ಕೇಂದ್ರ ಭಾಗದಲ್ಲಿ ಸಂಜೆಯ ನಂತರ, ರಸ್ತೆಯಲ್ಲಾಗಲೀ, ನಗರದ ಜೀವನಾಡಿಯಾದ ಸಬ್-ವೇ (ನಮ್ಮ ಮೆಟ್ರೋ) ರೈಲಿನಲ್ಲಾಗಲೀ ಸಭ್ಯ ಜನರು ಓಡಾಡುವುದೇ ದುಸ್ತರವಾಗಿತ್ತು. ಆ ಸಮಯದಲ್ಲಿ ವರ್ಷಕ್ಕೆ ಸರಾಸರಿ 2,000 ಕೊಲೆಗಳು, ಆರು ಲಕ್ಷ ಲೂಟಿ, ಬೆದರಿಕೆ, ಮಾರಕಾಸ್ತ್ರಗಳಿಂದ ಹೊಡೆದಾಟ ಮುಂತಾದ ಗಂಭೀರ ಅಪರಾಧಗಳು ನಡೆಯುತ್ತಿತ್ತು ಎಂದರೆ ಆಘಾತಕಾರಿಯಲ್ಲವೇ? ಸಬ್-ವೇ ಸಮಯಕ್ಕೆ ಸರಿಯಾಗಿ ಓಡುತ್ತಿರಲಿಲ್ಲ, ರೈಲಿನ ಬೋಗಿಯ ಒಳಗಡೆ ಕಸ, ಅಶ್ಲೀಲ ಬರಹ, ಚಿತ್ರಗಳು, ಮುರಿದ ಬೆಂಚು, ದೀಪಗಳು, ಕೆಲಸ ಮಾಡದ ವಾತಾನುಕೂಲ ವ್ಯವಸ್ಥೆ, ಭಿಕ್ಷುಕರ ಮತ್ತು ಕುಡುಕರ ಹಾವಳಿ, ರೌಡಿಗಳ ಕಾಟ ಎಲ್ಲರಿಗೂ ಎಲ್ಲವೂ ಅಸಹ್ಯವಾಗಿತ್ತು.


ಇದನ್ನೂ ಓದಿ: 2020 ರಲ್ಲಿ ಅತಿ ಹೆಚ್ಚು ಅಪಹರಣ ಮತ್ತು ಕೊಲೆ ನಡೆದ ರಾಜ್ಯ ಯುಪಿ – NCRB


1990ರಲ್ಲಿ ನ್ಯೂಯಾರ್ಕ್ ನಗರ ಸಾರಿಗೆ ಪೋಲಿಸ್ ಆಯುಕ್ತರಾಗಿ, ನಂತರ 1994ರಲ್ಲಿ ನ್ಯೂಯಾರ್ಕ್ ನಗರ ಪೋಲಿಸ್ ಆಯುಕ್ತರಾಗಿ ಬಂದ ವಿಲಿಯಮ್ ಬ್ರಾಟನ್ ಮತ್ತು ನ್ಯೂಯಾರ್ಕ್ ಮಹಾಪೌರರಾಗಿದ್ದ ರುಡಿ ಜುಲಿಯಾನಿ ದಿ ಬ್ರೋಕನ್ ವಿಂಡೋ ಥಿಯರಿಯಿಂದ ಪ್ರಭಾವಿತಗೊಂಡವರು. ಸಣ್ಣ ಅಪರಾಧಗಳಾದ ಸಾರ್ವಜನಿಕ ಸಂಪತ್ತನು ನಾಶಗೊಳಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಕುಡಿಯುವುದು, ಹೇಸಿಗೆ ಮಾಡುವುದು,  ಸಾರ್ವಜನಿಕ ಸಾರಿಗೆಯಲ್ಲಿ ಚೀಟಿ ಪಡೆಯದೆ ಪ್ರಯಾಣ ಮಾಡುವುದು, ಮುಂತಾದವುಗಳನ್ನು ನಿಯಂತ್ರಿಸಿದರೆ ಮುಂದೆ ದೊಡ್ಡ ಅಪರಾಧವಾಗುವುದನ್ನು ತಡೆಗಟ್ಟಬಹುದು ಎಂದು ಕಾರ್ಯನಿರತರಾದರು.

ಇವರ ಪೋಲಿಸ್ ಗಿರಿಗೆ ಮಾನವ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಆಲೋಚನೆಗೆ ಸಿಲುಕಿದರೂ ಮತ್ತು ಈ ತತ್ವದ ಪರ-ವಿರೋಧ ಎಷ್ಟೇ ಚರ್ಚೆ ನಡೆದಿದ್ದರೂ ಸಹ, ಇದರ ಮೂಲ ಅನಿಸಿಕೆ “ಯಾವುದೇ ಕಾರಣದಿಂದ ಒಡೆದ ಒಂದು ಕಿಟಕಿಯ ಗಾಜನ್ನು ಕೂಡಲೇ ಬದಲಾಯಿಸದಿದ್ದಲ್ಲಿ ಮಾರನೆಯ ದಿನ ಇನ್ನೊಂದು ಗಾಜು ಪುಡಿಪುಡಿಯಾಗಬಹುದು” ಎಂಬ ಮಾತು ಅಷ್ಟೇ ಖಚಿತ.

ಕಾನೂನು ಪಾಲನೆ ಕೇವಲ ನಾಗರಿಕರ ಕೆಲಸವಷ್ಟೇ ಅಲ್ಲ ಪೋಲಿಸರೂ ಸಹ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ ಪೋಲಿಸರು ಜನರ ಮೇಲೆ ದೌರ್ಜನ್ಯವೆಸಗದೆ, ಅಪರಾಧಿಗಳಿಗೆ ಅವರ ಸಂಪೂರ್ಣ ಹಕ್ಕುಗಳನ್ನು ನೀಡಿ, ಕೇವಲ ಅವರ ಅಪರಾಧಕ್ಕೆ ತಕ್ಕ ಶಿಕ್ಷೆಯಾಗಲೇಬೇಕು. ಅಂದು ನಡೆದ ಪೋಲಿಸ್ಗಿರಿ, ಅದರಲ್ಲೂ ರಸ್ತೆಯಲ್ಲಿ ನಡೆಯುತ್ತಿದ್ದ ಎಲ್ಲ ಸಂಶಯಾಸ್ಪದ ಜನರ “ತಡೆ ಮತ್ತು ತಪಾಸಣೆ”ಯನ್ನು ಅಪರಾಧಕ್ಕೆ ಸೊನ್ನೆ ಸಹನೆ ಅಥವಾ ಅನಾವಶ್ಯಕ ದೌರ್ಜನ್ಯ ಎಂದು ಕೆಲವರಿಂದ ಪರಿಗಣಿಸಲ್ಪಟ್ಟರೂ ಸಹ, ಜೊತೆಗೆ ಪೋಲಿಸರಿಗೆ ಬೇಕಾದ ಸೂಕ್ಷ್ಮತೆ ತರಬೇತಿ, ಸಾಧನಗಳು, ಸಮಾಜದ ಜೊತೆ ಮಾನವೀಯ ಸಂಬಂಧ, ಸ್ಪಷ್ಟವಾದ ಆದೇಶಗಳು ಮತ್ತು ಸಮುದಾಯದ ಪೋಲಿಸ್ ಗಸ್ತು ಇಂತಹ ಧನಾತ್ಮಕ ಬದಲಾವಣೆಗಳೂ ಬಂದವು.

ನ್ಯೂಯಾರ್ಕ್ ನಗರ ಸಾರಿಗೆಯ ಅಧ್ಯಕ್ಷರಾಗಿ 1984ರಲ್ಲಿ ಬಂದ ಡೇವಿಡ್ ಎಲ್. ಗನ್ನ್ ಮತ್ತು ಸಲಹೆಗಾರರಾದ ಜಾರ್ಜ್ ಕೆಲ್ಲಿಂಗ್ ಕೂಡಲೇ ಎಲ್ಲ ಮುರಿದ ಗಾಜು, ಕಿಟಕಿಗಳನ್ನು ದುರಸ್ತಿಗೊಳಿಸಿದರು, ಗೋಡೆ ಮತ್ತು ರೈಲಿನ ಬೋಗಿಗಳ ಬರಹವನ್ನು ಸ್ವಚ್ಛಗೊಳಿಸಿದರು. ಟಿಕೇಟು ರಹಿತ ಪ್ರಯಾಣಿಕರನ್ನು ಹಿಡಿಯುವುದರಲ್ಲಿ ಅರ್ಥವಿರಲಿಲ್ಲ. ಏಕೆಂದರೆ ಅವರ ಈ ಅಪರಾಧಕ್ಕೆ ಯಾವ ನ್ಯಾಯಾಲಯವೂ ಕಠಿಣ ಶಿಕ್ಷೆ ವಿಧಿಸುವುದಿಲ್ಲ ಮತ್ತೆ ಅದಕ್ಕೋಸ್ಕರ ಪೋಲಿಸರಿಗೆ ಕಾರಕೂನಿ, ಓಡಾಟವೇ ಜಾಸ್ತಿ ಆಗುತ್ತದೆ ಎಂದು ತಿಳಿದಿದ್ದರೂ ಸಹ ಅವರನ್ನು ಅಟ್ಟಿಸಿಕೊಂಡು ಹೋಗಿ, ಹಿಡಿದು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಅಪರಾಧಿಗಳಿಂದ ವಸೂಲಾದ ಚಾಕು, ಚೂರಿ, ಬಂದೂಕು, ಮಾದಕ ವಸ್ತು, ಹಿಂದಿನ ಅಪರಾಧ ಇತಿಹಾಸ ಎಲ್ಲವೂ ಅಪರಾಧಿಗಳ ಕಠಿಣ ಶಿಕ್ಷೆಗೆ ನೆರವಾಗುತ್ತಿತ್ತು. ಅಪರಾಧಿಗಳಿಗೆ ನಡುಕ ಹುಟ್ಟಿತ್ತು, ಅವರ ಧೈರ್ಯದ ಬೆನ್ನು ಮೂಳೆ ಮುರಿದಿತ್ತು.

1980ರ ದಶಕದಲ್ಲಿ ಅಪರಾಧ ಹೆಚ್ಚಾಗಿರುವುದಕ್ಕೆ ಇನ್ನೂ ಕೆಲವಾರು ಕಾರಣಗಳಿದ್ದವು. ಉದಾಹರಣೆಗೆ ಅಮೇರಿಕದ ಮತ್ತು ನ್ಯೂಯಾರ್ಕ್ ನಗರದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಸುಲಭವಾಗಿತ್ತು. 1994ರ ನಂತರ ನ್ಯೂಯಾರ್ಕ್ ನಗರದ ಅಪರಾಧಿಕ ಕೃತ್ಯದಲ್ಲಿ ಇದ್ದಕ್ಕಿದಂತೆ ತೀವ್ರ ಇಳಿತ ಕಂಡುಬಂತು. ಈ ಇಳಿತಕ್ಕೂ ಅನೇಕ ಕಾರಣಗಳಿವೆ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಜನರಿಗೆ ಒಳ್ಳೆಯ ಕೆಲಸ ಸಿಗಲು ಪ್ರಾರಂಭವಾಯಿತು. ನಗರದ ಪೋಲಿಸ್ಗಿರಿಯಿಂದ ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಕಡಿಮೆಯಾಯಿತು. ಇನ್ನೂ ಅನೇಕ ಕಾರಣಗಳಿಂದಾಗಿ ಅಪರಾಧದ ಇಳಿತ ಸಾಧ್ಯವಾಯಿತು.

ಅಮೇರಿಕದ ಕತೆ ಹಾಗಿರಲಿ, ನಮ್ಮ ದೇಶಕ್ಕೆ ಮರಳಿ ಬರೋಣ.

ಎಲ್ಲೆಡೆ ಕಸದ ರಾಶಿ ಬಿದ್ದಿರುವ ಬೆಂಗಳೂರನ್ನೇ ತೆಗೆದುಕೊಳ್ಳಿ. ಕಸದ ರಾಶಿ ಏನು ಸಂದೇಶ ರವಾನಿಸುತ್ತದೆ? ಕಸ ಬಿದ್ದಿರುವ ಕಡೆಯಲ್ಲೇ ಇನ್ನಷ್ಟು ಹೆಚ್ಚಿನ ಕಸ ಬಂದು ಬೀಳುವುದು ಏಕೆ? ಜನರು ಅಲ್ಲೇ ಹೇಸಿಗೆ ಮಾಡುವುದು ಏಕೆ?

ಹೊಂಡ ತುಂಬಿದ ರಸ್ತೆ, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಮಳೆ-ಚರಂಡಿ ನೀರು, ಒತ್ತುವರಿಯಾದ ಅರಣ್ಯ, ಮಾಯವಾದ ಕೆರೆಗಳು-ರಾಜಾಕಾಲುವೆಗಳು ಏನು ಸಂದೇಶ ರವಾನಿಸುತ್ತದೆ? ಬೆಂಗಳೂರಿನ ತೆರಿಗೆ ಪಾವತಿಸುವ ಜನರಿಗೆ ಬಿಬಿಎಂಪಿಯ ಅನಧಿಕೃತ ಬಡಾವಣೆಗಳು, ಸರಕಾರದ ಅಕ್ರಮ-ಸಕ್ರಮ ನೀತಿ, ಏನು ಸಂದೇಶ ರವಾನಿಸುತ್ತದೆ? ಐಎಂಎ ಜುವೆಲರ್ಸ್ ಹಗರಣ ಏನು ಸಂದೇಶ ರವಾನಿಸುತ್ತದೆ?

ಇದನ್ನೂ ಓದಿ: SC/ST ಗಳ ವಿರುದ್ಧದ ಅಪರಾಧಗಳು 2020 ರಲ್ಲಿ 9% ಹೆಚ್ಚಳ – NCRB ಮಾಹಿತಿ

ನಗರದಿಂದ ಹೊರಬಂದು ದೇಶದ ಪರಿಸ್ಥಿತಿ ಅವಲೋಕಿಸೋಣ. ದೇಶದ ಬ್ಯಾಂಕುಗಳಿಗೆ ನಾಮ ಹಾಕಿ ಓಡಿ ಹೋದವರ ಕತೆ ಏನು ಸಂದೇಶ ರವಾನಿಸುತ್ತದೆ? 2ಜಿ, ಕಲ್ಲಿದ್ದಲಿ ಮತ್ತು ಇತರ ಆರ್ಥಿಕ ಹಗರಣದಲ್ಲಿ ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯಾಗದಿರುವುದು ಏನು ಸಂದೇಶ ರವಾನಿಸುತ್ತದೆ? ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಹತ್ಯೆ ಏನು ಸಂದೇಶ ರವಾನಿಸುತ್ತದೆ? ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ ಏನು ಸಂದೇಶ ರವಾನಿಸುತ್ತದೆ?

ಇವೂ ಸಹ ಒಡೆದ ಗಾಜಿನ ಕತೆಯಲ್ಲವೇ?


ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: BJP ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಿರುದ್ದ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...