Homeಅಂತರಾಷ್ಟ್ರೀಯಅಪರಾಧಗಳಲ್ಲಿ ಹೆಚ್ಚಳ: 'ಒಡೆದ ಕಿಟಕಿ ಗಾಜು' ಹೇಳುವ ಸಾರ್ವಕಾಲೀನ ಕತೆ

ಅಪರಾಧಗಳಲ್ಲಿ ಹೆಚ್ಚಳ: ‘ಒಡೆದ ಕಿಟಕಿ ಗಾಜು’ ಹೇಳುವ ಸಾರ್ವಕಾಲೀನ ಕತೆ

- Advertisement -
- Advertisement -

ಒಡೆದ ಕಿಟಕಿಯ ಗಾಜು ಕತೆ ಹೇಳಬಹುದೇ ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಮೇಲೆ ತೋರಿಸಿದ ಕಿಟಕಿಯನ್ನು ನೋಡಿದ ತಕ್ಷಣ ಅದರಲ್ಲಿ ಏನೋ ಕತೆ ಇದೆ ಎಂದು ನಿಮಗೆ ಅನಿಸಲಿಲ್ಲವೇ?

ತಕ್ಷಣ ಗೋಚರಿಸುವುದು “ಇಲ್ಲಿ ಏನೋ ಅಪರಾಧ ನಡೆದಿದೆ” ಎಂಬುದನ್ನು ತಿಳಿಸಲು ಉಳಿದಿರುವ ಮೂಕ ಸಾಕ್ಷಿ. ಹಾಗಾದರೆ ಯಾರು, ಯಾವಾಗ ಮತ್ತು ಹೇಗೆ ಈ ಕೃತ್ಯ ಎಸಗಿದರು ಎಂಬುದು ನಿಮ್ಮ ಮುಂದಿನ ಪ್ರಶ್ನೆ ಆಗಿರಬಹುದು. ಇರಲಿ, ಅದಕ್ಕೆ ಮುನ್ನ, ಒಡೆದ ಕಿಟಕಿ ಗಾಜು ಸಾರಿ ಹೇಳುತ್ತಿರುವುದು “ಇಲ್ಲಿಯ ಕಾನೂನು ಸುವ್ಯವಸ್ಥೆ ಸರಿ ಇಲ್ಲ” ಎಂದು. ಹೌದು, ಇದನ್ನು ಅಪರಾಧ ತನಿಖಾ ಶಾಸ್ತ್ರದಲ್ಲಿ “ದಿ ಬ್ರೋಕನ್ ವಿಂಡೋ ಥಿಯರಿ” ಎನ್ನುತ್ತಾರೆ.

1982ರಲ್ಲಿ ಸಾಮಾಜಿಕ ಶಾಸ್ತ್ರಜ್ಞರಾದ ಜೇಮ್ಸ್ ಕ್ಯೂ. ವಿಲ್ಸನ್ ಮತ್ತು ಜಾರ್ಜ್ ಎಲ್. ಕೆಲ್ಲಿಂಗ್ ಅವರು ಬರೆದ ಲೇಖನ. ಎಲ್ಲರ ಕಣ್ಣಿಗೆ ಕಾಣುವಂತಹ ಸಣ್ಣ ಪುಟ್ಟ ಅಪರಾಧದ ಕುರುಹುಗಳು ಸಮಾಜಘಾತಕರನ್ನು ಇನ್ನಷ್ಟು ಗಂಭೀರ ಅಪರಾಧವೆಸಗಲು ಪ್ರಚೋದಿಸುತ್ತವೆ ಮತ್ತು ಸಮಾಜದಲ್ಲಿ ಕಾನೂನು ಪಾಲಿಸುವ ಜನಸಾಮಾನ್ಯರಿಗೆ “ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ, ಹೇಳುವವರು-ಕೇಳುವವರು ಯಾರೂ ಇಲ್ಲ. ಈ ಪ್ರದೇಶ ಸುರಕ್ಷಿತವಲ್ಲ, ಇಲ್ಲಿಂದ ಬೇಗನೇ ಕಾಲು ಕೀಳುವುದು ಉತ್ತಮ” ಎಂಬ ಸಂದೇಶ ರವಾನಿಸುತ್ತದೆ. ಕೇವಲ ಕಿಟಕಿಯ ಒಡೆದ ಗಾಜು ಮಾತ್ರವಲ್ಲ, ಗೋಡೆಯ ಮೇಲೆ ಬರೆದ ಗ್ರಾಫಿಟಿ (ಅಸಂಬದ್ಧ ಬರಹ/ಚಿತ್ರಗಳು), ಎಲ್ಲೆಡೆ ಬಿದ್ದಿರುವ ಕಸದ ರಾಶಿ, ಸಮಯಕ್ಕೆ ಸರಿಯಾಗಿ ಸಂಚರಿಸದ ಸಾರಿಗೆ ವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ, ಎಲ್ಲವೂ ಸಹ ಇದೇ ರೀತಿಯ ಸಂದೇಶ ರವಾನಿಸುತ್ತವೆ.

1980-1994ರ ಕಾಲಘಟ್ಟದಲ್ಲಿ ಅಮೇರಿಕದ ನ್ಯೂಯಾರ್ಕ್ ನಗರ ಅತೀವ ಅಪರಾಧ ಹಾವಳಿಗೆ ಒಳಗಾಗಿತ್ತು. ನಗರದ ಕೇಂದ್ರ ಭಾಗದಲ್ಲಿ ಸಂಜೆಯ ನಂತರ, ರಸ್ತೆಯಲ್ಲಾಗಲೀ, ನಗರದ ಜೀವನಾಡಿಯಾದ ಸಬ್-ವೇ (ನಮ್ಮ ಮೆಟ್ರೋ) ರೈಲಿನಲ್ಲಾಗಲೀ ಸಭ್ಯ ಜನರು ಓಡಾಡುವುದೇ ದುಸ್ತರವಾಗಿತ್ತು. ಆ ಸಮಯದಲ್ಲಿ ವರ್ಷಕ್ಕೆ ಸರಾಸರಿ 2,000 ಕೊಲೆಗಳು, ಆರು ಲಕ್ಷ ಲೂಟಿ, ಬೆದರಿಕೆ, ಮಾರಕಾಸ್ತ್ರಗಳಿಂದ ಹೊಡೆದಾಟ ಮುಂತಾದ ಗಂಭೀರ ಅಪರಾಧಗಳು ನಡೆಯುತ್ತಿತ್ತು ಎಂದರೆ ಆಘಾತಕಾರಿಯಲ್ಲವೇ? ಸಬ್-ವೇ ಸಮಯಕ್ಕೆ ಸರಿಯಾಗಿ ಓಡುತ್ತಿರಲಿಲ್ಲ, ರೈಲಿನ ಬೋಗಿಯ ಒಳಗಡೆ ಕಸ, ಅಶ್ಲೀಲ ಬರಹ, ಚಿತ್ರಗಳು, ಮುರಿದ ಬೆಂಚು, ದೀಪಗಳು, ಕೆಲಸ ಮಾಡದ ವಾತಾನುಕೂಲ ವ್ಯವಸ್ಥೆ, ಭಿಕ್ಷುಕರ ಮತ್ತು ಕುಡುಕರ ಹಾವಳಿ, ರೌಡಿಗಳ ಕಾಟ ಎಲ್ಲರಿಗೂ ಎಲ್ಲವೂ ಅಸಹ್ಯವಾಗಿತ್ತು.


ಇದನ್ನೂ ಓದಿ: 2020 ರಲ್ಲಿ ಅತಿ ಹೆಚ್ಚು ಅಪಹರಣ ಮತ್ತು ಕೊಲೆ ನಡೆದ ರಾಜ್ಯ ಯುಪಿ – NCRB


1990ರಲ್ಲಿ ನ್ಯೂಯಾರ್ಕ್ ನಗರ ಸಾರಿಗೆ ಪೋಲಿಸ್ ಆಯುಕ್ತರಾಗಿ, ನಂತರ 1994ರಲ್ಲಿ ನ್ಯೂಯಾರ್ಕ್ ನಗರ ಪೋಲಿಸ್ ಆಯುಕ್ತರಾಗಿ ಬಂದ ವಿಲಿಯಮ್ ಬ್ರಾಟನ್ ಮತ್ತು ನ್ಯೂಯಾರ್ಕ್ ಮಹಾಪೌರರಾಗಿದ್ದ ರುಡಿ ಜುಲಿಯಾನಿ ದಿ ಬ್ರೋಕನ್ ವಿಂಡೋ ಥಿಯರಿಯಿಂದ ಪ್ರಭಾವಿತಗೊಂಡವರು. ಸಣ್ಣ ಅಪರಾಧಗಳಾದ ಸಾರ್ವಜನಿಕ ಸಂಪತ್ತನು ನಾಶಗೊಳಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಕುಡಿಯುವುದು, ಹೇಸಿಗೆ ಮಾಡುವುದು,  ಸಾರ್ವಜನಿಕ ಸಾರಿಗೆಯಲ್ಲಿ ಚೀಟಿ ಪಡೆಯದೆ ಪ್ರಯಾಣ ಮಾಡುವುದು, ಮುಂತಾದವುಗಳನ್ನು ನಿಯಂತ್ರಿಸಿದರೆ ಮುಂದೆ ದೊಡ್ಡ ಅಪರಾಧವಾಗುವುದನ್ನು ತಡೆಗಟ್ಟಬಹುದು ಎಂದು ಕಾರ್ಯನಿರತರಾದರು.

ಇವರ ಪೋಲಿಸ್ ಗಿರಿಗೆ ಮಾನವ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಆಲೋಚನೆಗೆ ಸಿಲುಕಿದರೂ ಮತ್ತು ಈ ತತ್ವದ ಪರ-ವಿರೋಧ ಎಷ್ಟೇ ಚರ್ಚೆ ನಡೆದಿದ್ದರೂ ಸಹ, ಇದರ ಮೂಲ ಅನಿಸಿಕೆ “ಯಾವುದೇ ಕಾರಣದಿಂದ ಒಡೆದ ಒಂದು ಕಿಟಕಿಯ ಗಾಜನ್ನು ಕೂಡಲೇ ಬದಲಾಯಿಸದಿದ್ದಲ್ಲಿ ಮಾರನೆಯ ದಿನ ಇನ್ನೊಂದು ಗಾಜು ಪುಡಿಪುಡಿಯಾಗಬಹುದು” ಎಂಬ ಮಾತು ಅಷ್ಟೇ ಖಚಿತ.

ಕಾನೂನು ಪಾಲನೆ ಕೇವಲ ನಾಗರಿಕರ ಕೆಲಸವಷ್ಟೇ ಅಲ್ಲ ಪೋಲಿಸರೂ ಸಹ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ ಪೋಲಿಸರು ಜನರ ಮೇಲೆ ದೌರ್ಜನ್ಯವೆಸಗದೆ, ಅಪರಾಧಿಗಳಿಗೆ ಅವರ ಸಂಪೂರ್ಣ ಹಕ್ಕುಗಳನ್ನು ನೀಡಿ, ಕೇವಲ ಅವರ ಅಪರಾಧಕ್ಕೆ ತಕ್ಕ ಶಿಕ್ಷೆಯಾಗಲೇಬೇಕು. ಅಂದು ನಡೆದ ಪೋಲಿಸ್ಗಿರಿ, ಅದರಲ್ಲೂ ರಸ್ತೆಯಲ್ಲಿ ನಡೆಯುತ್ತಿದ್ದ ಎಲ್ಲ ಸಂಶಯಾಸ್ಪದ ಜನರ “ತಡೆ ಮತ್ತು ತಪಾಸಣೆ”ಯನ್ನು ಅಪರಾಧಕ್ಕೆ ಸೊನ್ನೆ ಸಹನೆ ಅಥವಾ ಅನಾವಶ್ಯಕ ದೌರ್ಜನ್ಯ ಎಂದು ಕೆಲವರಿಂದ ಪರಿಗಣಿಸಲ್ಪಟ್ಟರೂ ಸಹ, ಜೊತೆಗೆ ಪೋಲಿಸರಿಗೆ ಬೇಕಾದ ಸೂಕ್ಷ್ಮತೆ ತರಬೇತಿ, ಸಾಧನಗಳು, ಸಮಾಜದ ಜೊತೆ ಮಾನವೀಯ ಸಂಬಂಧ, ಸ್ಪಷ್ಟವಾದ ಆದೇಶಗಳು ಮತ್ತು ಸಮುದಾಯದ ಪೋಲಿಸ್ ಗಸ್ತು ಇಂತಹ ಧನಾತ್ಮಕ ಬದಲಾವಣೆಗಳೂ ಬಂದವು.

ನ್ಯೂಯಾರ್ಕ್ ನಗರ ಸಾರಿಗೆಯ ಅಧ್ಯಕ್ಷರಾಗಿ 1984ರಲ್ಲಿ ಬಂದ ಡೇವಿಡ್ ಎಲ್. ಗನ್ನ್ ಮತ್ತು ಸಲಹೆಗಾರರಾದ ಜಾರ್ಜ್ ಕೆಲ್ಲಿಂಗ್ ಕೂಡಲೇ ಎಲ್ಲ ಮುರಿದ ಗಾಜು, ಕಿಟಕಿಗಳನ್ನು ದುರಸ್ತಿಗೊಳಿಸಿದರು, ಗೋಡೆ ಮತ್ತು ರೈಲಿನ ಬೋಗಿಗಳ ಬರಹವನ್ನು ಸ್ವಚ್ಛಗೊಳಿಸಿದರು. ಟಿಕೇಟು ರಹಿತ ಪ್ರಯಾಣಿಕರನ್ನು ಹಿಡಿಯುವುದರಲ್ಲಿ ಅರ್ಥವಿರಲಿಲ್ಲ. ಏಕೆಂದರೆ ಅವರ ಈ ಅಪರಾಧಕ್ಕೆ ಯಾವ ನ್ಯಾಯಾಲಯವೂ ಕಠಿಣ ಶಿಕ್ಷೆ ವಿಧಿಸುವುದಿಲ್ಲ ಮತ್ತೆ ಅದಕ್ಕೋಸ್ಕರ ಪೋಲಿಸರಿಗೆ ಕಾರಕೂನಿ, ಓಡಾಟವೇ ಜಾಸ್ತಿ ಆಗುತ್ತದೆ ಎಂದು ತಿಳಿದಿದ್ದರೂ ಸಹ ಅವರನ್ನು ಅಟ್ಟಿಸಿಕೊಂಡು ಹೋಗಿ, ಹಿಡಿದು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಅಪರಾಧಿಗಳಿಂದ ವಸೂಲಾದ ಚಾಕು, ಚೂರಿ, ಬಂದೂಕು, ಮಾದಕ ವಸ್ತು, ಹಿಂದಿನ ಅಪರಾಧ ಇತಿಹಾಸ ಎಲ್ಲವೂ ಅಪರಾಧಿಗಳ ಕಠಿಣ ಶಿಕ್ಷೆಗೆ ನೆರವಾಗುತ್ತಿತ್ತು. ಅಪರಾಧಿಗಳಿಗೆ ನಡುಕ ಹುಟ್ಟಿತ್ತು, ಅವರ ಧೈರ್ಯದ ಬೆನ್ನು ಮೂಳೆ ಮುರಿದಿತ್ತು.

1980ರ ದಶಕದಲ್ಲಿ ಅಪರಾಧ ಹೆಚ್ಚಾಗಿರುವುದಕ್ಕೆ ಇನ್ನೂ ಕೆಲವಾರು ಕಾರಣಗಳಿದ್ದವು. ಉದಾಹರಣೆಗೆ ಅಮೇರಿಕದ ಮತ್ತು ನ್ಯೂಯಾರ್ಕ್ ನಗರದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಸುಲಭವಾಗಿತ್ತು. 1994ರ ನಂತರ ನ್ಯೂಯಾರ್ಕ್ ನಗರದ ಅಪರಾಧಿಕ ಕೃತ್ಯದಲ್ಲಿ ಇದ್ದಕ್ಕಿದಂತೆ ತೀವ್ರ ಇಳಿತ ಕಂಡುಬಂತು. ಈ ಇಳಿತಕ್ಕೂ ಅನೇಕ ಕಾರಣಗಳಿವೆ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಜನರಿಗೆ ಒಳ್ಳೆಯ ಕೆಲಸ ಸಿಗಲು ಪ್ರಾರಂಭವಾಯಿತು. ನಗರದ ಪೋಲಿಸ್ಗಿರಿಯಿಂದ ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಕಡಿಮೆಯಾಯಿತು. ಇನ್ನೂ ಅನೇಕ ಕಾರಣಗಳಿಂದಾಗಿ ಅಪರಾಧದ ಇಳಿತ ಸಾಧ್ಯವಾಯಿತು.

ಅಮೇರಿಕದ ಕತೆ ಹಾಗಿರಲಿ, ನಮ್ಮ ದೇಶಕ್ಕೆ ಮರಳಿ ಬರೋಣ.

ಎಲ್ಲೆಡೆ ಕಸದ ರಾಶಿ ಬಿದ್ದಿರುವ ಬೆಂಗಳೂರನ್ನೇ ತೆಗೆದುಕೊಳ್ಳಿ. ಕಸದ ರಾಶಿ ಏನು ಸಂದೇಶ ರವಾನಿಸುತ್ತದೆ? ಕಸ ಬಿದ್ದಿರುವ ಕಡೆಯಲ್ಲೇ ಇನ್ನಷ್ಟು ಹೆಚ್ಚಿನ ಕಸ ಬಂದು ಬೀಳುವುದು ಏಕೆ? ಜನರು ಅಲ್ಲೇ ಹೇಸಿಗೆ ಮಾಡುವುದು ಏಕೆ?

ಹೊಂಡ ತುಂಬಿದ ರಸ್ತೆ, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಮಳೆ-ಚರಂಡಿ ನೀರು, ಒತ್ತುವರಿಯಾದ ಅರಣ್ಯ, ಮಾಯವಾದ ಕೆರೆಗಳು-ರಾಜಾಕಾಲುವೆಗಳು ಏನು ಸಂದೇಶ ರವಾನಿಸುತ್ತದೆ? ಬೆಂಗಳೂರಿನ ತೆರಿಗೆ ಪಾವತಿಸುವ ಜನರಿಗೆ ಬಿಬಿಎಂಪಿಯ ಅನಧಿಕೃತ ಬಡಾವಣೆಗಳು, ಸರಕಾರದ ಅಕ್ರಮ-ಸಕ್ರಮ ನೀತಿ, ಏನು ಸಂದೇಶ ರವಾನಿಸುತ್ತದೆ? ಐಎಂಎ ಜುವೆಲರ್ಸ್ ಹಗರಣ ಏನು ಸಂದೇಶ ರವಾನಿಸುತ್ತದೆ?

ಇದನ್ನೂ ಓದಿ: SC/ST ಗಳ ವಿರುದ್ಧದ ಅಪರಾಧಗಳು 2020 ರಲ್ಲಿ 9% ಹೆಚ್ಚಳ – NCRB ಮಾಹಿತಿ

ನಗರದಿಂದ ಹೊರಬಂದು ದೇಶದ ಪರಿಸ್ಥಿತಿ ಅವಲೋಕಿಸೋಣ. ದೇಶದ ಬ್ಯಾಂಕುಗಳಿಗೆ ನಾಮ ಹಾಕಿ ಓಡಿ ಹೋದವರ ಕತೆ ಏನು ಸಂದೇಶ ರವಾನಿಸುತ್ತದೆ? 2ಜಿ, ಕಲ್ಲಿದ್ದಲಿ ಮತ್ತು ಇತರ ಆರ್ಥಿಕ ಹಗರಣದಲ್ಲಿ ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯಾಗದಿರುವುದು ಏನು ಸಂದೇಶ ರವಾನಿಸುತ್ತದೆ? ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಹತ್ಯೆ ಏನು ಸಂದೇಶ ರವಾನಿಸುತ್ತದೆ? ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ ಏನು ಸಂದೇಶ ರವಾನಿಸುತ್ತದೆ?

ಇವೂ ಸಹ ಒಡೆದ ಗಾಜಿನ ಕತೆಯಲ್ಲವೇ?


ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: BJP ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಿರುದ್ದ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ದ್ವೇಷ ಭಾಷಣ-ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು AI ತಂತ್ರಜ್ಞಾನ ಬಳಕೆಗೆ ಮುಂದಾದ ರಾಜ್ಯ ಸರ್ಕಾರ: 67.26 ಕೋಟಿ ರೂ ವೆಚ್ಚದಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ..!

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆ, 2025 ಬಾಕಿ ಉಳಿದಿರುವುದರಿಂದ, ದ್ವೇಷ ಭಾಷಣ, ನಕಲಿ ಸುದ್ದಿ ಮತ್ತು ಸಂಘಟಿತ ಆನ್‌ಲೈನ್ ತಪ್ಪು ಮಾಹಿತಿಯ ಹೆಚ್ಚಳವನ್ನು ನಿಭಾಯಿಸಲು ರಾಜ್ಯ ಸರ್ಕಾರ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ : ಭಾರತದ ಮೇಲಿನ ಸುಂಕ ಶೇ.18ಕ್ಕೆ ಇಳಿಕೆ

ವ್ಯಾಪಾರ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಭಾರತ ಮತ್ತು ಅಮೆರಿಕ ಶನಿವಾರ (ಫೆ.7) ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು (Interim Trade Agreement Framework) ಅಂತಿಮಗೊಳಿಸಿರುವುದಾಗಿ ತಿಳಿಸಿವೆ. ಈ ಒಪ್ಪಂದದ ಅಡಿಯಲ್ಲಿ,...

‘ಮಹಿಳೆಯನ್ನು ಗರ್ಭಧಾರಣೆ ಪೂರ್ಣಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ’: ಅಪ್ರಾಪ್ತೆಗೆ 30 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಸುಪ್ರೀಂ ಅನುಮತಿ

ನವದೆಹಲಿ: 17 ವರ್ಷದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು ಮಹಿಳೆಯನ್ನು, ಅಪ್ರಾಪ್ತ ವಯಸ್ಕಳನ್ನು ಹೊರತುಪಡಿಸಿ, ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 30 ಸಾವು, 160 ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್‌ನ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ವೇಳೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿ, 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಪಾಕಿಸ್ತಾನ ರಾಜಧಾನಿಯ ಶೆಹಜಾದ್ ಟೌನ್ ಪ್ರದೇಶದ...

ನಾಳೆ ದೊರೈರಾಜ್‌ ಅವರ ‘ನಮ್ಮ ಹಟ್ಟಿ’ ಆತ್ಮಕಥೆ ಬಿಡುಗಡೆ

ದಲಿತ ಚಳವಳಿಯ ಹಿರಿಯ ಮುಖಂಡರಾದ ತುಮಕೂರಿನ ಕೆ.ದೊರೈರಾಜ್‌ ಅವರ 'ನಮ್ಮಹಟ್ಟಿ' ಆತ್ಮಕಥೆ ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ. ಸರ್ಕಾರಿ ಅಧಿಕಾರಿಯಾಗಿದ್ದ ದೊರೈರಾಜ್‌ ಅವರು, ತಮ್ಮ ವಿದ್ಯಾರ್ಥಿ ಜೀವನದಿಂದಲೇ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡವರು....

‘ತಿರುಪತಿ ಲಡ್ಡುಗಳಲ್ಲಿ ರಾಸಾಯನಿಕಗಳಿಂದ ಮಾಡಿದ ತುಪ್ಪ ಬಳಸಲಾಗುತ್ತಿತ್ತು’: ವೈಎಸ್ಆರ್ಸಿಪಿ ಸರ್ಕಾರದ ವಿರುದ್ಧ ಆಂಧ್ರ ಸಿಎಂ ಆರೋಪ

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತುಪ್ಪ ಬಳಸಿ ತಯಾರಿಸಲಾಗುತ್ತಿತ್ತು, ಅದರಲ್ಲಿ ಬಾತ್ ರೂಂ(ಸ್ನಾನಗೃಹಗಳನ್ನು) ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬೆರೆಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶುಕ್ರವಾರ ಆರೋಪಿಸಿದ್ದಾರೆ. ಕರ್ನೂಲು...

ಜಲಂಧರ್‌ನ ಗುರುದ್ವಾರದ ಹೊರಗೆ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಪಂಜಾಬ್‌ನ ಜಲಂಧರ್‌ನಲ್ಲಿ ಶುಕ್ರವಾರ ಹಾಡಹಗಲೇ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಮಾಡೆಲ್ ಟೌನ್ ಪ್ರದೇಶದ ಗುರುದ್ವಾರದ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.  ಈ ಘಟನೆ ಬೆಳಿಗ್ಗೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಅವರನ್ನು...

ದೆಹಲಿ: ಜಲ ಮಂಡಳಿ ತೋಡಿದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು; ತನಿಖೆಗೆ ಆದೇಶಿಸಿದ ಸರ್ಕಾರ 

ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ದೆಹಲಿ ಜಲ ಮಂಡಳಿ (ಡಿಜೆಬಿ) ನಿರ್ಮಾಣ ಕಾರ್ಯಕ್ಕಾಗಿ ಅಗೆದ ಹೊಂಡಕ್ಕೆ ಬೈಕ್ ಬಿದ್ದು ಸವಾರನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ದೆಹಲಿ...

2025ರ ಬಿಹಾರ ವಿಧಾನಸಭಾ ಚುನಾವಣೆ ಪ್ರಶ್ನಿಸಿ ಜನ ಸುರಾಜ್ ಪಕ್ಷದಿಂದ ಅರ್ಜಿ: ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್ 

2025 ರ ಬಿಹಾರ ವಿಧಾನಸಭಾ ಚುನಾವಣೆಯ ನಡವಳಿಕೆ ಮತ್ತು ಫಲಿತಾಂಶವನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ರಾಜಕೀಯ...

ಗುಜರಾತ್‌| ನರ್ಸಿಂಗ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಪ್ರಿನ್ಸಿಪಲ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಗುಜರಾತ್‌ನ ಖೇಡಾ ಜಿಲ್ಲೆಯ ನರ್ಸಿಂಗ್ ಕಾಲೇಜಿನ 19 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, "ಪುರಾವೆಗಳಿಲ್ಲದೆ ಮೇಡಂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಚಿತ್ರಹಿಂಸೆ ಉಲ್ಲೇಖಿಸುವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾದ...