Homeಕರ್ನಾಟಕಮಾನವತಾವಾದಿ ಕವಿಯ ಕಣ್ಮರೆ

ಮಾನವತಾವಾದಿ ಕವಿಯ ಕಣ್ಮರೆ

- Advertisement -
- Advertisement -

ನಾನು ಎಂ.ಎ. ಕಲಿಯುವಾಗ ಗುರುಗಳಾದ ಜಿ.ಎಚ್. ನಾಯಕರು ತರಗತಿಗಳಲ್ಲಿ ಬೇಂದ್ರೆ ಮತ್ತು ಅಡಿಗರನ್ನು ವಿಶೇಷವಾಗಿ ಚರ್ಚಿಸುತ್ತಿದ್ದರು. ಕಣವಿ-ನರಸಿಂಹಸ್ವಾಮಿ ಮುಂತಾದವರನ್ನು ಪ್ರಸ್ತಾಪಿಸಿದರೂ ಅವರನ್ನು ಮೈನರ್ ಕವಿಗಳೆಂದು ಕರೆಯುತ್ತಿದ್ದರು. ಅದೊಂದು ಬಗೆಯಲ್ಲಿ ಗಂಭೀರ ಚರ್ಚೆಗೆ ಅರ್ಹರಲ್ಲ ಎಂಬ ಉಪೇಕ್ಷಿತ ದನಿಯನ್ನು ಒಳಗೊಂಡಿತ್ತು. ಅಡಿಗರು ರೂಪಿಸಿದ ಈ ಕ್ಲಾಸಿಕಲ್ ಕಾವ್ಯಧೋರಣೆಯು ನವ್ಯವಿಮರ್ಶೆಯ ಬಹುತೇಕ ನಿಲುವಾಗಿತ್ತು. ಇದು ತರುಣರಾದ ನಮಗ ಗಾಢವಾಗಿ ಆವರಿಸಿಕೊಂಡಿತ್ತು. ಹೀಗಿರುತ್ತ ಕಣವಿಯವರ ‘ಜೀವಧ್ವನಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿತು. ಶಿವಮೊಗ್ಗೆಯಲ್ಲಿ ಒಂದು ವಿಚಾರಸಂಕಿರಣ (1988) ಏರ್ಪಟ್ಟಿತು. ಆಗ ಸಾಹಿತ್ಯ ವಿಮರ್ಶೆಯ ಹತ್ಯಾರಗಳನ್ನು ಮಸೆಯುತ್ತ ತಿರುಗುತ್ತಿದ್ದ ಮತ್ತು ಆ ಕ್ಷೇತ್ರಕ್ಕೆ ಹೊಸಬನಾಗಿದ್ದ ನಾನು, ಪ್ರಬಂಧ ಮಂಡನೆ ಮಾಡಲೆಂದು ಕಣವಿಯವರ ಕಾವ್ಯವನ್ನು ಮೊದಲ ಸಲಕ್ಕೆ ಓದಿದೆ. ನವ್ಯವಿಮರ್ಶೆಯು ಹೇಗೆ ನಮ್ಮ ಕಾವ್ಯದ ಬಹುತ್ವವನ್ನು ಕಾಣಲು ಕಣ್ಣಿಗೆ ಪೊರೆಯನ್ನು ಕವಿಸಿದೆ ಎಂದು ಅರಿವಾಯಿತು.

‘ಕುಸುಮಾದಪಿ ಮೃದೂನಿ ವಜ್ರಾದಪಿ ಕಠೋರಾಣಿ’ ಎಂಬ ಮಾತಿದೆ. ವಜ್ರ ಮತ್ತು ಹೂವುಗಳ ಮೃದುತ್ವ ಮತ್ತು ಕಾಠಿಣ್ಯಗಳನ್ನು ಮಾನವ ಸ್ವಭಾವದ ಎರಡು ಅತ್ಯಂತಿಕ ರೂಪಕಗಳಾಗಿ ನೋಡುವ ಮಾತಿದು. ಈ ಅರ್ಥದಲ್ಲಿ ನರಸಿಂಹಸ್ವಾಮಿ, ಚೆನ್ನವೀರ ಕಣವಿ, ಹೂಮನಸ್ಸಿನ ಕವಿಗಳು. ಕಣವಿ ಕಾವ್ಯದಲ್ಲಿರುವ ಸಾರ್ವಜನಿಕರನ್ನು ಕುರಿತ ವ್ಯಕ್ತಿಚಿತ್ರಗಳು, ಸಮಾಜದ ಕೇಡುಗಳಿಗೆ ಮಾಡಿದ ಪ್ರತಿಕ್ರಿಯೆಗಳು, ನಿಸರ್ಗದ ವರ್ಣನೆಗಳು, ಸಾವಿನ ಧ್ಯಾನಗಳು ಎಲ್ಲವೂ ಅವರ ಸೌಮ್ಯತನದ ಗುಣವನ್ನು ಕಾಣಿಸುತ್ತವೆ. ತಾವು ಕೇಡೆಂದು ಪರಿಭಾವಿಸಿದ್ದನ್ನು ಆಕ್ರೋಶದಿಂದ ಮುಖಾಮುಖಿ ಮಾಡುವ ಕುವೆಂಪು-ಅಡಿಗ-ಲಂಕೇಶರಿಗೆ ಹೋಲಿಸಿದರೆ, ಕಣವಿ ಅವರದು ನವಿರಾದ ವಿಡಂಬನೆ. ಉದಾಹರಣೆಗೆ ಶಿಲಾವಿಗ್ರಹಗಳಿಗೆ ಕ್ಷೀರಾಭಿಷೇಕ ಮಾಡುವ ಆಚರಣೆಯನ್ನು ಮೌಢ್ಯವೆಂದು ಆರ್ಭಟಿಸಿ ಖಂಡಿಸುವುದಿಲ್ಲ. ಬದಲಿಗೆ “ಒಂದು ಹಾನಿಯೂ ಚೆಲ್ಲದಂತೆ ಬಯಲ ಬೊಗಸೆಯಲ್ಲಿ ಹಿಡಿದು ದೂರದೂರದ ಕಪ್ಪುಮಕ್ಕಳನೆಲ್ಲ ಕರೆದು ಬೆಳ್ಳಗೆ ಕುಡಿಸಿದಂತೆ ನಾನೊಂದು ಕನಸುಕಂಡೆ” ಎಂದು ಬರೆದು, ಅದನ್ನು ನೋಡುವ ಇನ್ನೊಂದು ನೋಟವನ್ನು ಕೊಟ್ಟುಬಿಡುತ್ತಾರೆ. ಇಲ್ಲಿ ‘ನಾನೊಂದು’ ಎನ್ನುವಲ್ಲಿ ನೊಂದ ಭಾವವೂ ಇರುವುದು ಗಮನಾರ್ಹ. ಈ ಸೌಮ್ಯತನ ಅವರ ಕಾವ್ಯವನ್ನು ಮತ್ತೊಂದು ಎತ್ತರಕ್ಕೆ ಹೋಗದಂತೆ ತಡೆದ ತೊಡಕೂ ಆಯಿತು. ಬಾಳನ್ನು ಲೋಕವನ್ನು ಒಂದು ಕೇಡಿನ ಭಾವವಿಲ್ಲದೆ, ಅದರೊಳಗಿನ ಸಮೃದ್ಧಿಯ ಮೂಲಕ ಬದುಕಬೇಕೆಂದು ಸದಾ ಹಂಬಲಿಸಿದವರು ಅವರು. ಹೀಗಾಗಿಯೇ ಅವರಲ್ಲಿ ನಿಸರ್ಗ ಕವಿತೆಗಳು ಪ್ರಕೃತಿವರ್ಣನೆಗೆ ಸೀಮಿತವಾಗುವುದಿಲ್ಲ. ಅವು ಬದುಕಿನ ರಹಸ್ಯವನ್ನು ಹೇಳುವ ಪ್ರತೀಕಗಳಾಗುತ್ತವೆ:

ನೆಲಕುದುರಿ ಬಿದ್ದ ಹಣ್ಣೆಲೆಯ ಮಣ್ಣುಗೊಬ್ಬರ ಮಾಡಿ
ತನ್ನೊಳಗೆ ರುಬ್ಬುವುದು
ಹೂವು-ಹಣ್ಣು ಗಿಡದ ಎಡೆಬಿಡದ ಕಾಣಿಕೆ
ಸಾವು-ನೋವು ನಮ್ಮ ದಿನದ ಹೊಂದಾಣಿಕೆ

ಇಲ್ಲಿ ಅಡಗಿರುವ ಜೀವನ ದರ್ಶನ ಗಮನಿಸಬೇಕು. ಈ ಲೋಕದ ಯಾವ ವಸ್ತುವೂ, ಕ್ರಿಯೆಯೂ ವ್ಯರ್ಥವಲ್ಲ. ಅವುಗಳಲ್ಲಿ ಬದುಕು ಚಲಿಸುವ ಯಾವುದೊ ಅರ್ಥಪೂರ್ಣವಾದ ಒಂದು ಸತ್ಯವಿರುತ್ತದೆ. ಹೀಗಾಗಿ ಎಲ್ಲವನ್ನು ಸೂಕ್ಷ್ಮವಾಗಿ ನಿರುಕಿಸುವ ಸಂವೇದನೆಯನ್ನು ಅವರ ಕಾವ್ಯ ಓದುಗರಿಗೆ ದಾಟಿಸುತ್ತದೆ. ಮರವು ಮಾಗಿದ ಫಲವನ್ನು ಬಿಡಲು ಕಾಯುವಂತೆ, ಹೆಪ್ಪುಂಡ ಹಾಲು ತುಪ್ಪವಾಗಲು ಕಾಯುವಂತೆ, ಕಾಯುವಿಕೆಯಲ್ಲಿ ಜೀವನದ ಅರ್ಥವಿದೆ ಎಂದು ಕಾಣಿಸುತ್ತದೆ. ಕಣವಿಯವರಷ್ಟು ನೆಲಮುಗಿಲುಗಳ ಸಂಬಂಧವನ್ನು ಶೋಧಿಸಿದವರು ಬೇರೆಯಿಲ್ಲ. ಮಗು ದುಂಬಿಯಂತೆ ಗುಂಜನ ಮಾಡುವಂತೆ ಆಡುವುದನ್ನು ಸಂಭ್ರಮದಿಂದಲೂ, ನಿರ್ದಯವಾದ ಮೃತ್ಯು ಜೀವವನ್ನು ಸೆಳೆದುಕೊಂಡು ಹೋಗಬಲ್ಲ ಕಟುತ್ವವನ್ನು ಅಸಹಾಯಕ ವಿಷಾದದಿಂದಲೂ ಏಕಕಾಲಕ್ಕೆ ಅವರ ಕಾವ್ಯ ಹೇಳಬಲ್ಲದಾಗಿತ್ತು.

ಚನ್ನವೀರ ಕಣವಿ

ಕನ್ನಡದಲ್ಲಿ ಉತ್ತರ ಕರ್ನಾಟಕದ ಕೃಷಿಕ ಜನಪದ ಪರಂಪರೆಯ ಸತ್ವವನ್ನು ಚೆನ್ನಾಗಿ ದುಡಿಸಿಕೊಂಡ ಕವಿಗಳಲ್ಲಿ ಬೇಂದ್ರೆಯವರಂತೆ ಕಣವಿಯವರೂ ಬರುತ್ತಾರೆ. ತಮ್ಮದೇ ಪರಿಸರದಲ್ಲಿ ತಮ್ಮದೇ ಪ್ರಕಾರದಲ್ಲಿ ಪ್ರಭಾವಶಾಲಿಯಾಗಿದ್ದ ಬೇಂದ್ರೆಯವರ ಅನುಕರಣೆ ಆಗದಂತೆ, ತಮ್ಮದೇ ಹಾದಿಯನ್ನು ರೂಪಿಸಿಕೊಳ್ಳಲು ಮಾಡಿದ ಸೆಣಸಾಟವು ಅವರ ಕಾವ್ಯದ ಚಹರೆಯನ್ನು ರೂಪಿಸಿತು. ಇದಕ್ಕಾಗಿ ಅವರು ಭೌತಿಕವಾಗಿ ದೂರದ ಮೈಸೂರಲ್ಲಿದ್ದ ಕುವೆಂಪು ಅವರ ವಿಶ್ವಮಾನವ ಪ್ರಜ್ಞೆಯನ್ನು ಸ್ವೀಕರಿಸಿದರು. ಕಾಲದ ದೃಷ್ಟಿಯಿಂದ ದೂರದಲ್ಲಿದ್ದ ಶರಣರ ತತ್ವಗಳನ್ನು ತಮ್ಮ ಕಾವ್ಯದಲ್ಲಿ ಮರುಶೋಧ ಮಾಡಿದರು. ಮಹತ್ವಾಕಾಂಕ್ಷೆಯಿಲ್ಲದೆ, ತಾನು ಕಂಡ ಲೋಕವನ್ನು ಉಂಡ ಅನುಭವವನ್ನು ಸೂಕ್ಷ್ಮಸಂವೇದನೆಯ ಕಾವ್ಯವಾಗಿ ರೂಪಿಸಿದ ಕಣವಿಯವರ ಕವನಗಳು, ಸಾಗರದಲೆಗಳಲ್ಲ. ಕಾಡಿನಂಚಿನಲ್ಲಿ ಜುಳುಜುಳು ಹರಿವ ತಣ್ಣನೆಯ ತೊರೆಗಳು. ಕೈಮಗ್ಗದಲ್ಲಿ ನೇದ ಬಣ್ಣಬಣ್ಣದ ಕರವಸ್ತ್ರಗಳು. ಲೋಕವನ್ನು ಬಿಟ್ಟು ತೆರಳುವ ಎಲ್ಲ ದೊಡ್ಡಲೇಖಕರು, ಸಾಧಕರು, ಸಾಂಪ್ರದಾಯಿಕ ಶ್ರದ್ಧಾಂಜಲಿಯನ್ನು ಹೊಸತಲೆಮಾರಿನಿಂದ ಬಯಸುವುದಿಲ್ಲ. ತಮ್ಮ ಕಾವ್ಯವನ್ನು ಅಥವಾ ಕಾರ್ಯವನ್ನು ಹೊಸಗಣ್ಣಲ್ಲಿ ಓದುವ, ಅರ್ಥೈಸುವ, ಅವರ ಜೀವನತತ್ವವನ್ನು ಹೊಸ ಪರಿಭಾಷೆಯಲ್ಲಿ ಗ್ರಹಿಸುವ ಹೊಣೆಯನ್ನು ಹೊಸತಲೆಮಾರಿನ ಮುಂದಿಟ್ಟು ಹೋಗುತ್ತಾರೆ. ಕಣವಿಯವರಂತಹ ಮಾನವತಾವಾದಿ ಕವಿಯೂ ಈ ಸವಾಲನ್ನು ಮುಂದಿಟ್ಟು ನಿರ್ಗಮಿಸಿದ್ದಾರೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಹಳತು-ವಿವೇಕ; ‘ಸಮನ್ವಯ ಮಾಡಿಕೊಳ್ಳದಿದ್ದರೆ ಕಾವ್ಯ ಹೇಗಾಗುತ್ತೆ?’ ಚೆನ್ನವೀರ ಕಣವಿ ಅವರ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...