Homeಅಂಕಣಗಳುರಾಸಲೀಲೆಯ ರಾಜಕೀಯ

ರಾಸಲೀಲೆಯ ರಾಜಕೀಯ

- Advertisement -
- Advertisement -

ವಿಧಾನಸಭೆಯಲ್ಲಿ ವಿರೋಧ ಪಕ್ಷವನ್ನು ಸರಿಯಾಗಿ ಜಾಡಿಸಿದ ಕುಮಾರಣ್ಣನ ಹಾವಭಾವ ಮತ್ತು ಭಾಷೆಯನ್ನು ಮೆಚ್ಚಿಕೊಂಡ ಬಿಜೆಪಿಗಳು ಅವರಿಗೆ ಭರ್ಜರಿ ಭೋಜನ ಹಾಕಿದರಂತಲ್ಲಾ. ಕುಮಾರಣ್ಣನನ್ನು ಮಧ್ಯದಲ್ಲಿ ಕೂರಿಸಿಕೊಂಡು ಅಕ್ಕಪಕ್ಕದಲ್ಲಿ ಎಡೂರಪ್ಪ ಮತ್ತು ಬೊಮ್ಮಾಯಿ ಕುಳಿತು ವಿಶೇಷ ಕಾಳಜಿಯಿಂದ ಉಣ್ಣಿಸುತ್ತಿರುವುದನ್ನು ನೋಡಿದ ಭೋಜನಪ್ರಿಯ ಬಿಜೆಪಿಗಳೇ ದಂಗುಬಡಿದು ಹೋದರಂತಲ್ಲಾ. ಕುಮಾರಣ್ಣನ ಮಾತುಗಳನ್ನು ಮಾಜಿ ಪ್ರಧಾನಿಗಳೇ ಮೆಚ್ಚಿಕೊಂಡ ಮೇಲೆ, ಅವರಿಗೆ ಊಟಹಾಕಿ ಉಪಚರಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿದ ಬೊಮ್ಮಾಯಿ, ಕುಮಾರಣ್ಣನ ಇಷ್ಟದ ಭೋಜನ ಬಡಿಸುತ್ತಿರಬೇಕಾದರೆ ಇದನ್ನ ನೋಡಿದ ಚನ್ನಪಟ್ಟಣದ ಮಾಜಿ ಮಂತ್ರಿಯಾದ ಯೋಗೇಶ್ವರ್‌ಗೆ ಹೊಟ್ಟೆಯುರಿಯುಂಟಾಗಿ, ’ನಮ್ಮ ಪಾರ್ಟಿಯವರಿಗೇನು ಬಂದಿದೆ, ನನ್ನನ್ನು ಸೋಲಿಸಿದವನನ್ನು ಕರೆದು ಊಟ ಹಾಕುತ್ತಿರಬೇಕಾದರೆ ಇದು ನನ್ನ ವಿರುದ್ಧದ ಷಡ್ಯಂತ್ರವಲ್ಲವೇ’ ಎಂದು ಭಾವಿಸಿದರಂತಲ್ಲಾ. ಕೂಡಲೆ, ತಾನೂ ಕೂಡ ಎಡೂರಪ್ಪನ ವಿರುದ್ಧ ಪಿತೂರಿ ನಡೆಸಿ, ದೆಹಲಿ ಮಟ್ಟದವರೆಗೂ ಹೋಗಿ, ವಿಜಯೇಂದ್ರನ ಹಾವಳಿ ವಿಪರೀತವಾಗಿದೆ ಎಂದು ದೂರು ಹೇಳಿ, ಅಂತೂ ಪರೀಕ್ಷೆ ಬರೆದಿದ್ದೇನೆಂದು ರಿಸಲ್ಟಿಗಾಗಿ ಕಾಯುತ್ತಿರಬೇಕಾದರೆ, ಎಡೂರಪ್ಪ ಇಳಿದು ಬೊಮ್ಮಾಯಿ ಏರಿದ ಮೇಲೆ ಯೋಗೇಶ್ವರನ ಮಂತ್ರಿಗಿರಿಯೇ ಹೋಯ್ತಂತಲ್ಲಾ. ಥೂತ್ತೇರಿ.

*****

ಸುಮ್ಮನೆ ಮಾತಿಗೆ ಹೇಳೋದಾದ್ರೆ ಎಡೂರಪ್ಪನ ಟೀಮು ಕುಮಾರಣ್ಣನ ಋಣದಲ್ಲಿದೆಯಂತಲ್ಲಾ. ಧರ್ಮರಾಯನ ಸರಕಾರದಂತೆ ನಡೆದುಕೊಂಡು ಹೋಗುತ್ತಿದ್ದ ಧರ್ಮಸಿಂಗ್ ಸರಕಾರವನ್ನ ಕೆಡವಿ ಎಮ್ಮೆಲ್ಲೆಗಳನ್ನೆಲ್ಲಾ ರೆಸಾರ್ಟಿನಿಂದ ಜಮೀರ್ ಅಹಮದ್ದನ ನ್ಯಾಷನಲ್ ಟ್ರಾವಲ್ ಬಸ್‌ನಲ್ಲಿ ತಂದು ವಿಧಾನಸೌಧದ ಮುಂದೆ ಸುರಿದುಕೊಂಡು, ಕುಮಾರಣ್ಣ ಮುಖ್ಯಮಂತ್ರಿಯಾಗಿ ಎಡೂರಪ್ಪ ಉಪಮುಖ್ಯಮಂತ್ರಿಯಾದ ಘಟನೆ ಸಾಮಾನ್ಯವೆ. ಪವರಿಲ್ಲದೆ ಮನೆಗೆ ಹೋಗುವ ಸ್ಥಿತಿಯಲ್ಲಿದ್ದ ಎಡೂರಪ್ಪ ಉಪಮುಖ್ಯಮಂತ್ರಿಯಾದದ್ದೂ ಅಲ್ಲದೆ, ಮೂರುಬಾರಿ ಮುಖ್ಯಮಂತ್ರಿಯಾದುದ್ದರಲ್ಲಿ ಕುಮಾರಣ್ಣನ ಕಾಂಟ್ರಿಬ್ಯೂಷನ್ ಕಡಿಮೆಯೇ! ಇದೆಲ್ಲಾ ನೆನಸಿಕೊಂಡು ಬಿಜೆಪಿಗಳು ಮತ್ತು ದಳದವರು ಖುಷಿಯಿಂದ ಮೆಲುಕು ಹಾಕುತ್ತಿರುವಾಗಲೇ ಇತಿಹಾಸ ಮರುಕಳಿಸಿದಂತೆ ಕುಮಾರಣ್ಣನ ಕೆಲಸವನ್ನ ಬಿಜೆಪಿ ಪಾರ್ಟಿಯೇ ಮಾಡಿಬಿಟ್ಟಿತಲ್ಲಾ. ಕುಮಾರಣ್ಣ ಶಾಸಕರನ್ನ ರೆಸಾರ್ಟಿಗೆ ಕರೆದುಕೊಂಡು ಹೋದರೆ ಬಿಜೆಪಿಯವರು ಬಾಂಬೆಗೆ ಕರೆದುಕೊಂಡು ಹೋಗಿ ತಾವು ಕದ್ದು ತಂದ ಶಾಸಕರಿಗೆ ಏನೇನನ್ನೆಲ್ಲಾ ಒದಗಿಸಿಕೊಟ್ಟು, ನಂತರ ಸಿಡಿ ಬಿಡುಗಡೆ ಮಾಡದಂತೆ ಸ್ಟೇ ತರುಬೇಕಾಗುವಂತೆ ಮಾಡಿ, ಖೆಡ್ಡಾದೊಳಕ್ಕೆ ಕೆಡವಿಕೊಂಡು ತಾವು ಬದುಕಿರುವವರೆಗೆ ಬಿಜೆಪಿ ಬಗ್ಗೆ ಉಸಿರೆತ್ತದಂತೆ ಮಾಡಿದ್ದಾರಲ್ಲಾ. ಹೀಗೆ ರಚನೆಗೊಂಡ ಸರಕಾರದ ಬಗ್ಗೆ ಕಿಡಿಕಾರುವುದು ಬಿಟ್ಟು ಅಪ್ಪ ಮಕ್ಕಳೇ ಬಿಜೆಪಿ ಸರಕಾರಕ್ಕೆ ಬೆಂಗಾವಲಾಗಿರುವುದನ್ನು ನೋಡಿದ ಜನ ದಳ ನಿಜಕ್ಕೂ ಬಿಜೆಪಿಯ ಬಿಟೀಂ ಎಂದರಂತಲ್ಲಾ. ಥೂತ್ತೇರಿ.

ದಳ ಬಿಜೆಪಿಯ ಬಿಟೀಮ್ ಆದುದಕ್ಕೆ ಭಯಂಕರ ಸಿಟ್ಟುಮಾಡಿಕೊಂಡಿರುವ ಯೋಗೇಶ್ ಕುಮಾರಣ್ಣನ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರಂತಲ್ಲಾ. ಈತ ನೆಲಕಚ್ಚಿದ ಪಾರ್ಟಿಯ ನಾಯಕ, ಮುಖ್ಯಮಂತ್ರಿಯಾಗಿದ್ದಾಗ ಹೋಟೆಲಿನಲ್ಲಿದ್ದು ರಾಸಲೀಲೆ ನಡೆಸಿದ ಗಿರಾಕಿ. ಈತ ನಡೆಸುತ್ತಿದ್ದ ಪ್ರಣಯಾಟಕ್ಕೆ ಸಮಯವಿಲ್ಲದಿದ್ದಾಗ, ಇನ್ನು ಮಂತ್ರಿ ಶಾಸಕರು ಜನಗಳನ್ನ ಮಾತನಾಡಿಸಲು ಬಿಡುವೆಲ್ಲಿ ಎಂದು ಕಿಡಿಕಾರಿ ಕರ್ನಾಟಕದ ಜನಕ್ಕೆ ಬಿಟ್ಟಿ ಮನರಂಜನೆ ಕೊಟ್ಟಿದ್ದಾರಲ್ಲಾ. ಕುಮಾರಣ್ಣನ ರಾಜಕೀಯ ಇತಿಹಾಸದಲ್ಲಿ ಇಷ್ಟು ಕಠೋರವಾಗಿ ಯಾರೂ ಟೀಕಿಸಿರಲಿಲ್ಲವಲ್ಲಾ. ಯೋಗೇಶ್ವರನ ಮಾತಿನಿಂದ ಕೆರಳಿದ ಕುಮಾರಣ್ಣ ನೀನೇನು ಸಾಚಾನೆ, ಮೆಗಾಸಿಟಿ ಹೆಸರಲ್ಲಿ ಜನಗಳ ದುಡ್ಡನ್ನು ಲಪಟಾಯಿಸಿ ಸಿನಿಮಾ ತೆಗೆದು ಹಣ ಹಾಕಿದವರನ್ನು ಹಾಳು ಮಾಡಿದ್ದಿ. ವೆಸ್ಟೆಂಡ್ ಹೋಟೆಲಿನ ರಾಸಲೀಲೆ ವಿಷಯಕ್ಕೆ ಬಂದರೆ ನನ್ನ ಜೊತೆ ಸಾರಾ ಮಹೇಶ್ ಇದ್ದರು. ಅವರ ಎದುರಲ್ಲೇ ಇನ್ನೂ ಹಲವರ ಜೊತೆಗೆ ವಿಶ್ರಾಂತಿಗೆ ಹೋಗುತ್ತಿದ್ದುದು ಅಲ್ಲಿಗೆ. ಕದ್ದುಮುಚ್ಚಿ ಏನನ್ನೂ ಮಾಡಿಲ್ಲ. ಅದರಲ್ಲೂ ಹೊರಗಡೆ ಪೊಲೀಸರಿದ್ದರು ಎಂದಿದ್ದಾರಲ್ಲಾ. ಆ ಪೊಲೀಸರ ಮುಖಾಂತರವೇ ನಾನು ಮಾಹಿತಿ ಸಂಗ್ರಹಿಸಿದ್ದು ಎಂದು ಯೋಗೇಶ್ವರ್ ಇನ್ನ ಹೇಳಿಲ್ಲವಂತಲ್ಲಾ. ಥೂತ್ತೇರಿ.

*****

ಕುಮಾರಣ್ಣನನ್ನು ನಡುವೆ ಕೂರಿಸಿಕೊಂಡಿದ್ದನ್ನು ನೋಡಿದ ದಳದವರು ಹೆದರಿಕೊಂಡು, ಇದೇನು ಕುಮಾರಣ್ಣ ನಮ್ಮನ್ನೆ ಬಲಿಕೊಡಲು ಹೊರಟಿದ್ದಾರಲ್ಲಾ ಎಂದು ಚರ್ಚಿಸಿದರಂತಲ್ಲಾ. ಇದಕ್ಕೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಮಾಡಿದ ಮನೆಮುರುಕ ರಾಜಕಾರಣವೇ ಕಾರಣವಂತಲ್ಲಾ. ಅತ್ತ ಓವೈಸಿಯನ್ನು ಓಲೈಸುತ್ತ ಇತ್ತ ಮಾಯಾವತಿಯನ್ನು ಮರುಳುಮಾಡಿದ ಯೋಗಿ ಟೀಮು ಅವರ ಜೊತೆಯಲ್ಲೇ ಎಸ್ಪಿ ಯಾದವರನ್ನ ಮಕಾಡೆ ಮಲಗಿಸಿದ್ದನ್ನ ನೋಡಿದ ಭಾರತದ ಜನ ದಂಗುಬಡಿದು ಹೋಗಿದ್ದಾರಲ್ಲಾ. ದಳದ ಪಾರ್ಟಿ ಮುಖಂಡರಿಗೆ ಇದು ಹಳೆ ವರೆಸೆಯಾಗಿ ಕಾಣುತ್ತಿದೆ. ಕುಮಾರಣ್ಣ ವೆಸ್ಟೆಂಡ್ ಹೋಟೆಲು ಕಾಲಿ ಮಾಡುವಂತಾದುದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಸಿದ್ದರಾಮಯ್ಯ ಎಷ್ಟೇ ಹೇಳಿದರೂ ದೇವು ಟೀಮು ನಂಬುತ್ತಿಲ್ಲವಂತಲ್ಲಾ.
ಆದ್ದರಿಂದ ದಳಪತಿಗಳಿಗೆ ಸಿದ್ದರಾಮಯ್ಯನ ಟೀಮು ನಿರ್ನಾಮವಾಗದ ಹೊರತು ಉಳಿಗಾಲವಿಲ್ಲ ಎನ್ನಿಸಿ ರಾಸಲೀಲೆಗೆ ಹೆಸರಾದವರು ಹೆಚ್ಚಿರುವ ಬಿಜೆಪಿಯ ಡೈನಿಂಗ್ ಹಾಲಿನಲ್ಲಿ ಕುಳಿತರಂತಲ್ಲಾ. ಥೂತ್ತೇರಿ.


ಇದನ್ನೂ ಓದಿ:  ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....