Homeಅಂಕಣಗಳುಸಿದ್ದರಾಮಯ್ಯ ರಾವಣನಂತಲ್ಲಾ!

ಸಿದ್ದರಾಮಯ್ಯ ರಾವಣನಂತಲ್ಲಾ!

- Advertisement -
- Advertisement -

ಪಾಪಾಸು ಕಳ್ಳಿಯ ಟಿಸಿಲಿನಂತಿರುವ ಬಿಜೆಪಿಯ ಭಜರಂಗಿ ಪಡೆ ಹಿಜಾಬ್‌ಗೆ ಕೈಹಾಕಿ ಎಳೆದು ನಂತರ, ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಮರ ಅಂಗಡಿಗಳಿರಬಾರದೆಂದು ಬೊಬ್ಬೆಹೊಡೆದ ಕೂಡಲೇ ಕರ್ನಾಟಕದ ತುಂಬೆಲ್ಲಾ ಬೊಬ್ಬೆಯದನಿ ಕೇಳಿತಲ್ಲಾ. ಏಕೆಂದರೆ ಈ ಬಿಜೆಪಿ ಅಥವಾ ಇನ್ನಾವುದೇ ಅದರ ಅಂಗ ಸಂಸ್ಥೆಗಳಿಗೆಲ್ಲಾ ಸ್ವಿಚ್‌ಬೋರ್ಡಿರುವುದು ಒಂದೇ ಜಾಗದಲ್ಲಿ. ಅದನ್ನು ಒತ್ತಿದ ಕೂಡಲೇ ಇಡೀ ನಾಡಿನ ತುಂಬೆಲ್ಲಾ ಒಂದೇ ಗಳಿಗೆಯಲ್ಲಿ ಮತೀಯ ತಲೆಗಳಿಗೆ ವಿದ್ಯುತ್ ಹರಿದಂತಾಗಿ ಶಾರ್ಟ್ ಸರ್ಕ್ಯೂಟ್ ಆಗುವುದು ಹಿಂದಿನಿಂದಲೂ ನಡೆದು ಬಂದಿದೆಯಂತಲ್ಲಾ. ಆದರೇನು ಈಗ ಇಂತಹ ಸ್ವಿಚ್ ಲೈನನ್ನ ಮಾಧ್ಯಮದವರೂ ಎಳೆದುಕೊಂಡು ಇಡೀ ದಿನ ಅಳೆದು, ಸುರಿದು, ಕೇರಿ, ತೂರಿ, ಅಯ್ಯೋಪಾಪಾ ಎಂಬ ಉದ್ಘಾರಕ್ಕೆ ತುತ್ತಾಗಿವೆಯಲ್ಲಾ. ಸಿದ್ದು ಜಗದ್ಗುರುಗಳು ಕೇಸರಿ ಬಟ್ಟೆ ತಲೆ ಮೇಲೆ ಹಾಕುವುದಿಲ್ಲವೆ ಎಂಬ ಮಾತೇ ಕಾರಣವಾಗಿ, ಮಾಧ್ಯಮದವರು ಮನಸೊ ಇಚ್ಛೆ ವದರೀ ವದರೀ ಜಗದ್ಗುರುಗಳನ್ನ ಎಬ್ಬಿಸಿ ಸಿದ್ದು ಮೇಲೆ ದಾಳಿ ಮಾಡಿಸಿದವಲ್ಲಾ. ವಾಸ್ತವವಾಗಿ ರಾಮಚಂದ್ರಾಪುರ ಮಠ, ಉಡುಪಿ ಮಠದ ಯತಿಗಳಿದ್ದವರೆಲ್ಲಾ ಸುಮ್ಮನಿದ್ದು ಎಡೂರಪ್ಪನವರಿಂದ ಧನ ಸಹಾಯ ಪಡೆದ ಧರ್ಮಗುರುಗಳೇ ಸಿದ್ದು ಮೇಲೆ ಬಿದ್ದಿದ್ದು ನೋಡಿ ಈ ಬಿಜೆಪಿಗಳಿಗೆ ಪರಮಾನ್ನ ಉಂಡಷ್ಟು ಖುಷಿಯಾಯ್ತಂತಲ್ಲಾ. ಥೂತ್ತೇರಿ.

*******

ಇನ್ನ ಬಿಜೆಪಿ ಪಾರ್ಟಿಯ ಅಧ್ಯಕ್ಷ ನಳೀನ್ ಕಟೀಲು ಎಂಬ ಬೃಹಸ್ಪತಿಗಳು ಸಿದ್ದುವನ್ನು ರಾವಣನಿಗೆ ಹೋಲಿಸಿದ್ದಾರೆ. ದಕ್ಷಿಣ ಕನ್ನಡದ ಈತ ಯಕ್ಷಗಾನವನ್ನು ನೋಡಿಯಾದರೂ ರಾವಣನ ಬಗ್ಗೆ ತಿಳಿದುಕೊಳ್ಳಬೇಕಿತ್ತು. ವಾಸ್ತವವಾಗಿ ಸಿದ್ದುಗೆ ರಾವಣನನ್ನು ಹೋಲಿಸಿದ್ದೇ ಸರಿಯಿಲ್ಲವೆಂಬುದು ರಾವಣಾಭಿಮಾನಿಗಳ ಅಭಿಪ್ರಾಯ. ರಾವಣ ಅಪ್ಪಟ ಶಿವಭಕ್ತ, ಸಂಗೀತಗಾರ, ವೀಣೆ ಶೇಷಣ್ಣನಿಗಿಂತ ಒಳ್ಳೆ ವೈಣಿಕ, ಒಳ್ಳೆಯ ನೃತ್ಯಪಟು. ಅಜೇಯನೆನಿಸಿಕೊಂಡಿದ್ದ ಒಳ್ಳೆ ಆಡಳಿತಗಾರ ಕುಬೇರನನ್ನ ಸೋಲಿಸಿ ಪುಷ್ಪಕ ವಿಮಾನವನ್ನ ಪಡೆದವನು. ಭುಜಂಗ ಸ್ತ್ರೋತ್ರ ರಚಿಸಿದ ಕರ್ತೃ. ಜ್ವಲಿಸುವ ಅಗ್ನಿಯಂತಿದ್ದ
ರಾಜಲಕ್ಷಣದಿಂದ ಶೋಭಿತನಾಗಿದ್ದ ತನ್ನ ರಾಜ್ಯದಲ್ಲಿ ಮಹಿಳಾ ಮೀಸಲಾತಿ ತಂದಿದ್ದ ಪ್ರಥಮ ದೊರೆ. ಲಂಕೆಯನ್ನ ರಕ್ಷಿಸಲು ಲಂಕಿಣಿ ನಿಲ್ಲಿಸಿದ್ದ. ದಂಡಕಾರಣ್ಯ ರಕ್ಷಿಸಲು ತಾಟಕಿ ನೇಮಿಸಿದ್ದ. ಲಂಕೆಯ ಹೆಬ್ಬಾಗಿಲು ಕಾಯಲು ಸಿಂಹಿಣಿ ನೇಮಿಸಿದ್ದ. ಅಶೋಕ ವನ ನೋಡಿಕೊಳ್ಳಲು ತ್ರಿಜಟಿಯನ್ನು ಬಿಟ್ಟಿದ್ದ. ನಮ್ಮ ಪುರಾಣಕಾಲದ ರಾವಣನೆ ಮೊದಲು ಮಹಿಳಾ ಮೀಸಲಾತಿ ಜಾರಿಗೆ ತಂದವನು. ಇಂತಹ ವಿಪ್ರೋತ್ತಮನಿಗೆ ಕುರುಬ ಸಮುದಾಯದವರ ಪೈಕಿಯಾದ ಸಿದ್ದರಾಮಯ್ಯನವರನ್ನ ಹೋಲಿಸಬಾರದಿತ್ತೆಂದು ರಾಮಾಯಣ ಪ್ರಿಯ ವಿಪ್ರೊತ್ತಮರು ಕಟಿಲರ ಬಗ್ಗೆ ಕೆಂಡಾಮಂಡಲವಾಗಿ ದ್ದಾರಂತಲ್ಲಾ. ಥೂತ್ತೇರಿ.

ನಳಿನ್

*******

ಪುರಾಣಪ್ರಿಯರು ರಾಜಕೀಯ ವಿಶ್ಲೇಷಕರ ಪ್ರಕಾರ ಸಿದ್ದು ಪ್ರೊತ್ಸಾಹಿಸಿದ್ದು ಒಂದೆರಡು ಮಹಿಳೆಯರನ್ನ ಮಾತ್ರ. ಆ ಪೈಕಿ ಜಯಮಾಲ ಮಂಜುಳ ಮಾನಸೆ, ಕೆ.ಆರ್ ಪೇಟೆ ಮೀನಾಕ್ಷಿ ಮತ್ತಿನ್ನಿಬ್ಬರು ಮಹಿಳಾ ಮಣಿಗಳನ್ನು ಬಿಟ್ಟರೆ ರಾವಣನಂತೆ ಇಡೀ ರಾಜ್ಯ ನೋಡಿಕೊಳ್ಳಲು ಮಹಿಳೆಯರನ್ನ ನೇಮಿಸಲಿಲ್ಲ. ಈ ಹೋಲಿಕೆ ತಪ್ಪು. ಇನ್ನ ಸಿದ್ದು ರಂಗದ ಕುಣಿತಕ್ಕೆ ಮೀಸಲೇ ಹೊರತು ನೃತ್ಯಪಟುವಲ್ಲ. ಇನ್ನು ವೀಣೆಗೂ ತಂಬೂರಿ ಸರೋಟ್‌ಗೂ ವ್ಯತ್ಯಾಸ ಸಿದ್ದುರವರಿಗೆ ಗೊತ್ತೋ ಇಲ್ಲವೋ ಅವರೇ ಬಲ್ಲರು. ಒಳ್ಳೆ ಆಡಳಿತಗಾರ ಎಂಬುದನ್ನ ಒಪ್ಪಿಕೊಳ್ಳಬೇಕು. ಇನ್ನು ಅವರ ಬಜೆಟ್ ಮಂಡನೆ ಭುಜಂಗ ಸ್ತ್ರೋತ್ರಕ್ಕೆ ಸಮ ಅನ್ನಬಹುದು. ಸದನದಲ್ಲಿ ಅಗ್ನಿಯಂತೆ ಜ್ವಲಿಸಿದರೂ ಜೊತೆಯಲ್ಲಿ ಕುಳಿತು ಹೊಟ್ಟೆತುಂಬಾ ಭೋಜನ ಬಾರಿಸುವ ವ್ಯಕ್ತಿ. ರಾವಣನಂತೆ ರಾಜ ಲಕ್ಷಣವೇನೂ ಸಿದ್ದು ಮುಖದಲ್ಲಿಲ್ಲ. ಇನ್ನ ಕುಬೇರನನ್ನು ಸೋಲಿಸಿ ಪುಷ್ಪಕ ವಿಮಾನ ಪಡೆದ ರಾವಣನಿಗೆ ಸಿದ್ದು ಹೋಲಿಸುವುದಾದರೆ, ದೇವು ಫ್ಯಾಮಿಲಿಯನ್ನ ಮೂಲೆಗೆ ಸರಿಸಿ ವಿರೋಧಪಕ್ಷದ ಸಾರಥ್ಯ ಪಡೆದದ್ದು. ಸೀತಾಪಹರಣದಂತ ಕೃತ್ಯ ಎಸಗಿದವರಲ್ಲ. ಆದ್ದರಿಂದ ಕಟೀಲರ ವ್ಯಾಖ್ಯಾನಕ್ಕೆ ಇತ್ತು ಸಿದ್ದು ಅಭಿಮಾನಿಗಳು ಮತ್ತು ಅತ್ತ ವಿಪ್ರೋತ್ತಮರು ಶ್ಯಾನೆ ಸಿಟ್ಟಾಗಿದ್ದಾರಂತಲ್ಲಾ.

********

ಕಟೀಲರ ಇನ್ನೊಂದು ಮಾತು, ರಾಮ ಜನರನ್ನು ನಂಬುತ್ತಿದ್ದ ಎಂಬುದು. ಇದರ ಅನಾಹುತವೆಂದರೆ ಅಗಸನ ಮಾತನ್ನು ನಂಬಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿನ ಮಧ್ಯೆ ಬಿಟ್ಟು ಬಂದಿದ್ದು, ಮೊದಲು ಹನ್ನೆರಡು ವರ್ಷ ವನವಾಸ, ಆ ನಂತರ ಮತ್ತೆ ವನವಾಸ ಅನುಭವಿಸಿದ ಸೀತೆ ಕಡೆಗೆ ಸಾಕಪ್ಪ ಈ ರಾಮನ ಸಹವಾಸ ಎಂದು ತವರು ಮನೆಗೆ ಹೋಗಿ ತರಕಾರಿ ಬೆಳೆದುಕೊಂಡು ಕಾಲ ಹಾಕಿದಳಲ್ಲಾ. ಈ ಸಾಲುಗಳ ಬಗ್ಗೆ ಅನುಮಾನವಿದ್ದವರು ಎಸ್.ಎಲ್ ಭೈರಪ್ಪನವರ ಉತ್ತರಕಾಂಡ ಓದುವುದು ಒಳ್ಳೆಯದು. ಅಂದ ಹಾಗೆ ಅವರಣವನ್ನು ತಲೆಮೇಲೆ ಹೊತ್ತುಕೊಂಡು ಮಾರಿದೆ ಸಂಘಪರಿವಾರ ಸಮೂಹ ಉತ್ತರಕಾಂಡದ ಬಗ್ಗೆ ಉಸಿರೆತ್ತಿಲ್ಲವಂತಲ್ಲಾ. ಇದೆಲ್ಲಕಿಂತ ಮಜಾ ಅಂದರೆ ಬಷೀರಣ್ಣನವರು ರಾಮಾಯಣವನ್ನು ವ್ಯಾಖ್ಯಾನಿಸಿರುವ ಪರಿ ಭೈರಪ್ಪನವರಿಗೆ ಹತ್ತಿರವಾಗಿದೆಯಲ್ಲಾ. “ನೋಡಿ ಸಾರ್ ಒಬ್ಬ ಮನುಷ್ಯ ತಂಗಿಗಾಗಿ ತನ್ನ ಪ್ರಾಣವನ್ನೇ ಕೊಟ್ಟು ರಾಜ್ಯನೂ ಕಳಕೊಂಡ. ತಂದೆ ಮಾಡಿದ ಕೆಲ್ಸಕ್ಕೆ ರಾಜ್ಯ ಬಿಟ್ಟು ಬಂದ ರಾಮ ದೊಡ್ಡವುನೊ, ರಾವಣ ದೊಡ್ಡವುನೊ, ನೀವೇ ಹೇಳಿ ಸಾರ್. ಪಾಪ ಶೂರ್ಪನಕಿ ಸ್ಟೋರಿ ಈ ಕಾಲದಲ್ಲಿ ಅಸಿಡ್ ದಾಳಿಗೆ ತುತ್ತಾಗಿ ಬುರ್ಖಾ ಹಾಯ್ಕಂಡು ಓಡಾಡ್ತರಲ್ಲ, ಅಂತ ಹೆಂಗಸರ ಕತೆ ಆಗಿರಬೌದು, ಯಾವುದಾದ್ರು ಹುಡುಗಿ ಲವ್ ಮಾಡು ಅಂದ್ರೆ ಆಗಲ್ಲ ಸ್ವಲ್ಪ ಪ್ರಾಬ್ಲಂ ಅನ್ನಬೇಕು ಸಾರ್! ಮೂಗುಕುಯ್ದಾಕ್‌ಬುಡದ” ಎಂದು ಚಿಂತಾಕ್ರಾಂತರಾದರಲ್ಲಾ. ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...