Homeಅಂಕಣಗಳುಸಿದ್ದರಾಮಯ್ಯ ರಾವಣನಂತಲ್ಲಾ!

ಸಿದ್ದರಾಮಯ್ಯ ರಾವಣನಂತಲ್ಲಾ!

- Advertisement -
- Advertisement -

ಪಾಪಾಸು ಕಳ್ಳಿಯ ಟಿಸಿಲಿನಂತಿರುವ ಬಿಜೆಪಿಯ ಭಜರಂಗಿ ಪಡೆ ಹಿಜಾಬ್‌ಗೆ ಕೈಹಾಕಿ ಎಳೆದು ನಂತರ, ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಮರ ಅಂಗಡಿಗಳಿರಬಾರದೆಂದು ಬೊಬ್ಬೆಹೊಡೆದ ಕೂಡಲೇ ಕರ್ನಾಟಕದ ತುಂಬೆಲ್ಲಾ ಬೊಬ್ಬೆಯದನಿ ಕೇಳಿತಲ್ಲಾ. ಏಕೆಂದರೆ ಈ ಬಿಜೆಪಿ ಅಥವಾ ಇನ್ನಾವುದೇ ಅದರ ಅಂಗ ಸಂಸ್ಥೆಗಳಿಗೆಲ್ಲಾ ಸ್ವಿಚ್‌ಬೋರ್ಡಿರುವುದು ಒಂದೇ ಜಾಗದಲ್ಲಿ. ಅದನ್ನು ಒತ್ತಿದ ಕೂಡಲೇ ಇಡೀ ನಾಡಿನ ತುಂಬೆಲ್ಲಾ ಒಂದೇ ಗಳಿಗೆಯಲ್ಲಿ ಮತೀಯ ತಲೆಗಳಿಗೆ ವಿದ್ಯುತ್ ಹರಿದಂತಾಗಿ ಶಾರ್ಟ್ ಸರ್ಕ್ಯೂಟ್ ಆಗುವುದು ಹಿಂದಿನಿಂದಲೂ ನಡೆದು ಬಂದಿದೆಯಂತಲ್ಲಾ. ಆದರೇನು ಈಗ ಇಂತಹ ಸ್ವಿಚ್ ಲೈನನ್ನ ಮಾಧ್ಯಮದವರೂ ಎಳೆದುಕೊಂಡು ಇಡೀ ದಿನ ಅಳೆದು, ಸುರಿದು, ಕೇರಿ, ತೂರಿ, ಅಯ್ಯೋಪಾಪಾ ಎಂಬ ಉದ್ಘಾರಕ್ಕೆ ತುತ್ತಾಗಿವೆಯಲ್ಲಾ. ಸಿದ್ದು ಜಗದ್ಗುರುಗಳು ಕೇಸರಿ ಬಟ್ಟೆ ತಲೆ ಮೇಲೆ ಹಾಕುವುದಿಲ್ಲವೆ ಎಂಬ ಮಾತೇ ಕಾರಣವಾಗಿ, ಮಾಧ್ಯಮದವರು ಮನಸೊ ಇಚ್ಛೆ ವದರೀ ವದರೀ ಜಗದ್ಗುರುಗಳನ್ನ ಎಬ್ಬಿಸಿ ಸಿದ್ದು ಮೇಲೆ ದಾಳಿ ಮಾಡಿಸಿದವಲ್ಲಾ. ವಾಸ್ತವವಾಗಿ ರಾಮಚಂದ್ರಾಪುರ ಮಠ, ಉಡುಪಿ ಮಠದ ಯತಿಗಳಿದ್ದವರೆಲ್ಲಾ ಸುಮ್ಮನಿದ್ದು ಎಡೂರಪ್ಪನವರಿಂದ ಧನ ಸಹಾಯ ಪಡೆದ ಧರ್ಮಗುರುಗಳೇ ಸಿದ್ದು ಮೇಲೆ ಬಿದ್ದಿದ್ದು ನೋಡಿ ಈ ಬಿಜೆಪಿಗಳಿಗೆ ಪರಮಾನ್ನ ಉಂಡಷ್ಟು ಖುಷಿಯಾಯ್ತಂತಲ್ಲಾ. ಥೂತ್ತೇರಿ.

*******

ಇನ್ನ ಬಿಜೆಪಿ ಪಾರ್ಟಿಯ ಅಧ್ಯಕ್ಷ ನಳೀನ್ ಕಟೀಲು ಎಂಬ ಬೃಹಸ್ಪತಿಗಳು ಸಿದ್ದುವನ್ನು ರಾವಣನಿಗೆ ಹೋಲಿಸಿದ್ದಾರೆ. ದಕ್ಷಿಣ ಕನ್ನಡದ ಈತ ಯಕ್ಷಗಾನವನ್ನು ನೋಡಿಯಾದರೂ ರಾವಣನ ಬಗ್ಗೆ ತಿಳಿದುಕೊಳ್ಳಬೇಕಿತ್ತು. ವಾಸ್ತವವಾಗಿ ಸಿದ್ದುಗೆ ರಾವಣನನ್ನು ಹೋಲಿಸಿದ್ದೇ ಸರಿಯಿಲ್ಲವೆಂಬುದು ರಾವಣಾಭಿಮಾನಿಗಳ ಅಭಿಪ್ರಾಯ. ರಾವಣ ಅಪ್ಪಟ ಶಿವಭಕ್ತ, ಸಂಗೀತಗಾರ, ವೀಣೆ ಶೇಷಣ್ಣನಿಗಿಂತ ಒಳ್ಳೆ ವೈಣಿಕ, ಒಳ್ಳೆಯ ನೃತ್ಯಪಟು. ಅಜೇಯನೆನಿಸಿಕೊಂಡಿದ್ದ ಒಳ್ಳೆ ಆಡಳಿತಗಾರ ಕುಬೇರನನ್ನ ಸೋಲಿಸಿ ಪುಷ್ಪಕ ವಿಮಾನವನ್ನ ಪಡೆದವನು. ಭುಜಂಗ ಸ್ತ್ರೋತ್ರ ರಚಿಸಿದ ಕರ್ತೃ. ಜ್ವಲಿಸುವ ಅಗ್ನಿಯಂತಿದ್ದ
ರಾಜಲಕ್ಷಣದಿಂದ ಶೋಭಿತನಾಗಿದ್ದ ತನ್ನ ರಾಜ್ಯದಲ್ಲಿ ಮಹಿಳಾ ಮೀಸಲಾತಿ ತಂದಿದ್ದ ಪ್ರಥಮ ದೊರೆ. ಲಂಕೆಯನ್ನ ರಕ್ಷಿಸಲು ಲಂಕಿಣಿ ನಿಲ್ಲಿಸಿದ್ದ. ದಂಡಕಾರಣ್ಯ ರಕ್ಷಿಸಲು ತಾಟಕಿ ನೇಮಿಸಿದ್ದ. ಲಂಕೆಯ ಹೆಬ್ಬಾಗಿಲು ಕಾಯಲು ಸಿಂಹಿಣಿ ನೇಮಿಸಿದ್ದ. ಅಶೋಕ ವನ ನೋಡಿಕೊಳ್ಳಲು ತ್ರಿಜಟಿಯನ್ನು ಬಿಟ್ಟಿದ್ದ. ನಮ್ಮ ಪುರಾಣಕಾಲದ ರಾವಣನೆ ಮೊದಲು ಮಹಿಳಾ ಮೀಸಲಾತಿ ಜಾರಿಗೆ ತಂದವನು. ಇಂತಹ ವಿಪ್ರೋತ್ತಮನಿಗೆ ಕುರುಬ ಸಮುದಾಯದವರ ಪೈಕಿಯಾದ ಸಿದ್ದರಾಮಯ್ಯನವರನ್ನ ಹೋಲಿಸಬಾರದಿತ್ತೆಂದು ರಾಮಾಯಣ ಪ್ರಿಯ ವಿಪ್ರೊತ್ತಮರು ಕಟಿಲರ ಬಗ್ಗೆ ಕೆಂಡಾಮಂಡಲವಾಗಿ ದ್ದಾರಂತಲ್ಲಾ. ಥೂತ್ತೇರಿ.

ನಳಿನ್

*******

ಪುರಾಣಪ್ರಿಯರು ರಾಜಕೀಯ ವಿಶ್ಲೇಷಕರ ಪ್ರಕಾರ ಸಿದ್ದು ಪ್ರೊತ್ಸಾಹಿಸಿದ್ದು ಒಂದೆರಡು ಮಹಿಳೆಯರನ್ನ ಮಾತ್ರ. ಆ ಪೈಕಿ ಜಯಮಾಲ ಮಂಜುಳ ಮಾನಸೆ, ಕೆ.ಆರ್ ಪೇಟೆ ಮೀನಾಕ್ಷಿ ಮತ್ತಿನ್ನಿಬ್ಬರು ಮಹಿಳಾ ಮಣಿಗಳನ್ನು ಬಿಟ್ಟರೆ ರಾವಣನಂತೆ ಇಡೀ ರಾಜ್ಯ ನೋಡಿಕೊಳ್ಳಲು ಮಹಿಳೆಯರನ್ನ ನೇಮಿಸಲಿಲ್ಲ. ಈ ಹೋಲಿಕೆ ತಪ್ಪು. ಇನ್ನ ಸಿದ್ದು ರಂಗದ ಕುಣಿತಕ್ಕೆ ಮೀಸಲೇ ಹೊರತು ನೃತ್ಯಪಟುವಲ್ಲ. ಇನ್ನು ವೀಣೆಗೂ ತಂಬೂರಿ ಸರೋಟ್‌ಗೂ ವ್ಯತ್ಯಾಸ ಸಿದ್ದುರವರಿಗೆ ಗೊತ್ತೋ ಇಲ್ಲವೋ ಅವರೇ ಬಲ್ಲರು. ಒಳ್ಳೆ ಆಡಳಿತಗಾರ ಎಂಬುದನ್ನ ಒಪ್ಪಿಕೊಳ್ಳಬೇಕು. ಇನ್ನು ಅವರ ಬಜೆಟ್ ಮಂಡನೆ ಭುಜಂಗ ಸ್ತ್ರೋತ್ರಕ್ಕೆ ಸಮ ಅನ್ನಬಹುದು. ಸದನದಲ್ಲಿ ಅಗ್ನಿಯಂತೆ ಜ್ವಲಿಸಿದರೂ ಜೊತೆಯಲ್ಲಿ ಕುಳಿತು ಹೊಟ್ಟೆತುಂಬಾ ಭೋಜನ ಬಾರಿಸುವ ವ್ಯಕ್ತಿ. ರಾವಣನಂತೆ ರಾಜ ಲಕ್ಷಣವೇನೂ ಸಿದ್ದು ಮುಖದಲ್ಲಿಲ್ಲ. ಇನ್ನ ಕುಬೇರನನ್ನು ಸೋಲಿಸಿ ಪುಷ್ಪಕ ವಿಮಾನ ಪಡೆದ ರಾವಣನಿಗೆ ಸಿದ್ದು ಹೋಲಿಸುವುದಾದರೆ, ದೇವು ಫ್ಯಾಮಿಲಿಯನ್ನ ಮೂಲೆಗೆ ಸರಿಸಿ ವಿರೋಧಪಕ್ಷದ ಸಾರಥ್ಯ ಪಡೆದದ್ದು. ಸೀತಾಪಹರಣದಂತ ಕೃತ್ಯ ಎಸಗಿದವರಲ್ಲ. ಆದ್ದರಿಂದ ಕಟೀಲರ ವ್ಯಾಖ್ಯಾನಕ್ಕೆ ಇತ್ತು ಸಿದ್ದು ಅಭಿಮಾನಿಗಳು ಮತ್ತು ಅತ್ತ ವಿಪ್ರೋತ್ತಮರು ಶ್ಯಾನೆ ಸಿಟ್ಟಾಗಿದ್ದಾರಂತಲ್ಲಾ.

********

ಕಟೀಲರ ಇನ್ನೊಂದು ಮಾತು, ರಾಮ ಜನರನ್ನು ನಂಬುತ್ತಿದ್ದ ಎಂಬುದು. ಇದರ ಅನಾಹುತವೆಂದರೆ ಅಗಸನ ಮಾತನ್ನು ನಂಬಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿನ ಮಧ್ಯೆ ಬಿಟ್ಟು ಬಂದಿದ್ದು, ಮೊದಲು ಹನ್ನೆರಡು ವರ್ಷ ವನವಾಸ, ಆ ನಂತರ ಮತ್ತೆ ವನವಾಸ ಅನುಭವಿಸಿದ ಸೀತೆ ಕಡೆಗೆ ಸಾಕಪ್ಪ ಈ ರಾಮನ ಸಹವಾಸ ಎಂದು ತವರು ಮನೆಗೆ ಹೋಗಿ ತರಕಾರಿ ಬೆಳೆದುಕೊಂಡು ಕಾಲ ಹಾಕಿದಳಲ್ಲಾ. ಈ ಸಾಲುಗಳ ಬಗ್ಗೆ ಅನುಮಾನವಿದ್ದವರು ಎಸ್.ಎಲ್ ಭೈರಪ್ಪನವರ ಉತ್ತರಕಾಂಡ ಓದುವುದು ಒಳ್ಳೆಯದು. ಅಂದ ಹಾಗೆ ಅವರಣವನ್ನು ತಲೆಮೇಲೆ ಹೊತ್ತುಕೊಂಡು ಮಾರಿದೆ ಸಂಘಪರಿವಾರ ಸಮೂಹ ಉತ್ತರಕಾಂಡದ ಬಗ್ಗೆ ಉಸಿರೆತ್ತಿಲ್ಲವಂತಲ್ಲಾ. ಇದೆಲ್ಲಕಿಂತ ಮಜಾ ಅಂದರೆ ಬಷೀರಣ್ಣನವರು ರಾಮಾಯಣವನ್ನು ವ್ಯಾಖ್ಯಾನಿಸಿರುವ ಪರಿ ಭೈರಪ್ಪನವರಿಗೆ ಹತ್ತಿರವಾಗಿದೆಯಲ್ಲಾ. “ನೋಡಿ ಸಾರ್ ಒಬ್ಬ ಮನುಷ್ಯ ತಂಗಿಗಾಗಿ ತನ್ನ ಪ್ರಾಣವನ್ನೇ ಕೊಟ್ಟು ರಾಜ್ಯನೂ ಕಳಕೊಂಡ. ತಂದೆ ಮಾಡಿದ ಕೆಲ್ಸಕ್ಕೆ ರಾಜ್ಯ ಬಿಟ್ಟು ಬಂದ ರಾಮ ದೊಡ್ಡವುನೊ, ರಾವಣ ದೊಡ್ಡವುನೊ, ನೀವೇ ಹೇಳಿ ಸಾರ್. ಪಾಪ ಶೂರ್ಪನಕಿ ಸ್ಟೋರಿ ಈ ಕಾಲದಲ್ಲಿ ಅಸಿಡ್ ದಾಳಿಗೆ ತುತ್ತಾಗಿ ಬುರ್ಖಾ ಹಾಯ್ಕಂಡು ಓಡಾಡ್ತರಲ್ಲ, ಅಂತ ಹೆಂಗಸರ ಕತೆ ಆಗಿರಬೌದು, ಯಾವುದಾದ್ರು ಹುಡುಗಿ ಲವ್ ಮಾಡು ಅಂದ್ರೆ ಆಗಲ್ಲ ಸ್ವಲ್ಪ ಪ್ರಾಬ್ಲಂ ಅನ್ನಬೇಕು ಸಾರ್! ಮೂಗುಕುಯ್ದಾಕ್‌ಬುಡದ” ಎಂದು ಚಿಂತಾಕ್ರಾಂತರಾದರಲ್ಲಾ. ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...