Homeಅಂಕಣಗಳುಸಿದ್ದರಾಮಯ್ಯ ರಾವಣನಂತಲ್ಲಾ!

ಸಿದ್ದರಾಮಯ್ಯ ರಾವಣನಂತಲ್ಲಾ!

- Advertisement -
- Advertisement -

ಪಾಪಾಸು ಕಳ್ಳಿಯ ಟಿಸಿಲಿನಂತಿರುವ ಬಿಜೆಪಿಯ ಭಜರಂಗಿ ಪಡೆ ಹಿಜಾಬ್‌ಗೆ ಕೈಹಾಕಿ ಎಳೆದು ನಂತರ, ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಮರ ಅಂಗಡಿಗಳಿರಬಾರದೆಂದು ಬೊಬ್ಬೆಹೊಡೆದ ಕೂಡಲೇ ಕರ್ನಾಟಕದ ತುಂಬೆಲ್ಲಾ ಬೊಬ್ಬೆಯದನಿ ಕೇಳಿತಲ್ಲಾ. ಏಕೆಂದರೆ ಈ ಬಿಜೆಪಿ ಅಥವಾ ಇನ್ನಾವುದೇ ಅದರ ಅಂಗ ಸಂಸ್ಥೆಗಳಿಗೆಲ್ಲಾ ಸ್ವಿಚ್‌ಬೋರ್ಡಿರುವುದು ಒಂದೇ ಜಾಗದಲ್ಲಿ. ಅದನ್ನು ಒತ್ತಿದ ಕೂಡಲೇ ಇಡೀ ನಾಡಿನ ತುಂಬೆಲ್ಲಾ ಒಂದೇ ಗಳಿಗೆಯಲ್ಲಿ ಮತೀಯ ತಲೆಗಳಿಗೆ ವಿದ್ಯುತ್ ಹರಿದಂತಾಗಿ ಶಾರ್ಟ್ ಸರ್ಕ್ಯೂಟ್ ಆಗುವುದು ಹಿಂದಿನಿಂದಲೂ ನಡೆದು ಬಂದಿದೆಯಂತಲ್ಲಾ. ಆದರೇನು ಈಗ ಇಂತಹ ಸ್ವಿಚ್ ಲೈನನ್ನ ಮಾಧ್ಯಮದವರೂ ಎಳೆದುಕೊಂಡು ಇಡೀ ದಿನ ಅಳೆದು, ಸುರಿದು, ಕೇರಿ, ತೂರಿ, ಅಯ್ಯೋಪಾಪಾ ಎಂಬ ಉದ್ಘಾರಕ್ಕೆ ತುತ್ತಾಗಿವೆಯಲ್ಲಾ. ಸಿದ್ದು ಜಗದ್ಗುರುಗಳು ಕೇಸರಿ ಬಟ್ಟೆ ತಲೆ ಮೇಲೆ ಹಾಕುವುದಿಲ್ಲವೆ ಎಂಬ ಮಾತೇ ಕಾರಣವಾಗಿ, ಮಾಧ್ಯಮದವರು ಮನಸೊ ಇಚ್ಛೆ ವದರೀ ವದರೀ ಜಗದ್ಗುರುಗಳನ್ನ ಎಬ್ಬಿಸಿ ಸಿದ್ದು ಮೇಲೆ ದಾಳಿ ಮಾಡಿಸಿದವಲ್ಲಾ. ವಾಸ್ತವವಾಗಿ ರಾಮಚಂದ್ರಾಪುರ ಮಠ, ಉಡುಪಿ ಮಠದ ಯತಿಗಳಿದ್ದವರೆಲ್ಲಾ ಸುಮ್ಮನಿದ್ದು ಎಡೂರಪ್ಪನವರಿಂದ ಧನ ಸಹಾಯ ಪಡೆದ ಧರ್ಮಗುರುಗಳೇ ಸಿದ್ದು ಮೇಲೆ ಬಿದ್ದಿದ್ದು ನೋಡಿ ಈ ಬಿಜೆಪಿಗಳಿಗೆ ಪರಮಾನ್ನ ಉಂಡಷ್ಟು ಖುಷಿಯಾಯ್ತಂತಲ್ಲಾ. ಥೂತ್ತೇರಿ.

*******

ಇನ್ನ ಬಿಜೆಪಿ ಪಾರ್ಟಿಯ ಅಧ್ಯಕ್ಷ ನಳೀನ್ ಕಟೀಲು ಎಂಬ ಬೃಹಸ್ಪತಿಗಳು ಸಿದ್ದುವನ್ನು ರಾವಣನಿಗೆ ಹೋಲಿಸಿದ್ದಾರೆ. ದಕ್ಷಿಣ ಕನ್ನಡದ ಈತ ಯಕ್ಷಗಾನವನ್ನು ನೋಡಿಯಾದರೂ ರಾವಣನ ಬಗ್ಗೆ ತಿಳಿದುಕೊಳ್ಳಬೇಕಿತ್ತು. ವಾಸ್ತವವಾಗಿ ಸಿದ್ದುಗೆ ರಾವಣನನ್ನು ಹೋಲಿಸಿದ್ದೇ ಸರಿಯಿಲ್ಲವೆಂಬುದು ರಾವಣಾಭಿಮಾನಿಗಳ ಅಭಿಪ್ರಾಯ. ರಾವಣ ಅಪ್ಪಟ ಶಿವಭಕ್ತ, ಸಂಗೀತಗಾರ, ವೀಣೆ ಶೇಷಣ್ಣನಿಗಿಂತ ಒಳ್ಳೆ ವೈಣಿಕ, ಒಳ್ಳೆಯ ನೃತ್ಯಪಟು. ಅಜೇಯನೆನಿಸಿಕೊಂಡಿದ್ದ ಒಳ್ಳೆ ಆಡಳಿತಗಾರ ಕುಬೇರನನ್ನ ಸೋಲಿಸಿ ಪುಷ್ಪಕ ವಿಮಾನವನ್ನ ಪಡೆದವನು. ಭುಜಂಗ ಸ್ತ್ರೋತ್ರ ರಚಿಸಿದ ಕರ್ತೃ. ಜ್ವಲಿಸುವ ಅಗ್ನಿಯಂತಿದ್ದ
ರಾಜಲಕ್ಷಣದಿಂದ ಶೋಭಿತನಾಗಿದ್ದ ತನ್ನ ರಾಜ್ಯದಲ್ಲಿ ಮಹಿಳಾ ಮೀಸಲಾತಿ ತಂದಿದ್ದ ಪ್ರಥಮ ದೊರೆ. ಲಂಕೆಯನ್ನ ರಕ್ಷಿಸಲು ಲಂಕಿಣಿ ನಿಲ್ಲಿಸಿದ್ದ. ದಂಡಕಾರಣ್ಯ ರಕ್ಷಿಸಲು ತಾಟಕಿ ನೇಮಿಸಿದ್ದ. ಲಂಕೆಯ ಹೆಬ್ಬಾಗಿಲು ಕಾಯಲು ಸಿಂಹಿಣಿ ನೇಮಿಸಿದ್ದ. ಅಶೋಕ ವನ ನೋಡಿಕೊಳ್ಳಲು ತ್ರಿಜಟಿಯನ್ನು ಬಿಟ್ಟಿದ್ದ. ನಮ್ಮ ಪುರಾಣಕಾಲದ ರಾವಣನೆ ಮೊದಲು ಮಹಿಳಾ ಮೀಸಲಾತಿ ಜಾರಿಗೆ ತಂದವನು. ಇಂತಹ ವಿಪ್ರೋತ್ತಮನಿಗೆ ಕುರುಬ ಸಮುದಾಯದವರ ಪೈಕಿಯಾದ ಸಿದ್ದರಾಮಯ್ಯನವರನ್ನ ಹೋಲಿಸಬಾರದಿತ್ತೆಂದು ರಾಮಾಯಣ ಪ್ರಿಯ ವಿಪ್ರೊತ್ತಮರು ಕಟಿಲರ ಬಗ್ಗೆ ಕೆಂಡಾಮಂಡಲವಾಗಿ ದ್ದಾರಂತಲ್ಲಾ. ಥೂತ್ತೇರಿ.

ನಳಿನ್

*******

ಪುರಾಣಪ್ರಿಯರು ರಾಜಕೀಯ ವಿಶ್ಲೇಷಕರ ಪ್ರಕಾರ ಸಿದ್ದು ಪ್ರೊತ್ಸಾಹಿಸಿದ್ದು ಒಂದೆರಡು ಮಹಿಳೆಯರನ್ನ ಮಾತ್ರ. ಆ ಪೈಕಿ ಜಯಮಾಲ ಮಂಜುಳ ಮಾನಸೆ, ಕೆ.ಆರ್ ಪೇಟೆ ಮೀನಾಕ್ಷಿ ಮತ್ತಿನ್ನಿಬ್ಬರು ಮಹಿಳಾ ಮಣಿಗಳನ್ನು ಬಿಟ್ಟರೆ ರಾವಣನಂತೆ ಇಡೀ ರಾಜ್ಯ ನೋಡಿಕೊಳ್ಳಲು ಮಹಿಳೆಯರನ್ನ ನೇಮಿಸಲಿಲ್ಲ. ಈ ಹೋಲಿಕೆ ತಪ್ಪು. ಇನ್ನ ಸಿದ್ದು ರಂಗದ ಕುಣಿತಕ್ಕೆ ಮೀಸಲೇ ಹೊರತು ನೃತ್ಯಪಟುವಲ್ಲ. ಇನ್ನು ವೀಣೆಗೂ ತಂಬೂರಿ ಸರೋಟ್‌ಗೂ ವ್ಯತ್ಯಾಸ ಸಿದ್ದುರವರಿಗೆ ಗೊತ್ತೋ ಇಲ್ಲವೋ ಅವರೇ ಬಲ್ಲರು. ಒಳ್ಳೆ ಆಡಳಿತಗಾರ ಎಂಬುದನ್ನ ಒಪ್ಪಿಕೊಳ್ಳಬೇಕು. ಇನ್ನು ಅವರ ಬಜೆಟ್ ಮಂಡನೆ ಭುಜಂಗ ಸ್ತ್ರೋತ್ರಕ್ಕೆ ಸಮ ಅನ್ನಬಹುದು. ಸದನದಲ್ಲಿ ಅಗ್ನಿಯಂತೆ ಜ್ವಲಿಸಿದರೂ ಜೊತೆಯಲ್ಲಿ ಕುಳಿತು ಹೊಟ್ಟೆತುಂಬಾ ಭೋಜನ ಬಾರಿಸುವ ವ್ಯಕ್ತಿ. ರಾವಣನಂತೆ ರಾಜ ಲಕ್ಷಣವೇನೂ ಸಿದ್ದು ಮುಖದಲ್ಲಿಲ್ಲ. ಇನ್ನ ಕುಬೇರನನ್ನು ಸೋಲಿಸಿ ಪುಷ್ಪಕ ವಿಮಾನ ಪಡೆದ ರಾವಣನಿಗೆ ಸಿದ್ದು ಹೋಲಿಸುವುದಾದರೆ, ದೇವು ಫ್ಯಾಮಿಲಿಯನ್ನ ಮೂಲೆಗೆ ಸರಿಸಿ ವಿರೋಧಪಕ್ಷದ ಸಾರಥ್ಯ ಪಡೆದದ್ದು. ಸೀತಾಪಹರಣದಂತ ಕೃತ್ಯ ಎಸಗಿದವರಲ್ಲ. ಆದ್ದರಿಂದ ಕಟೀಲರ ವ್ಯಾಖ್ಯಾನಕ್ಕೆ ಇತ್ತು ಸಿದ್ದು ಅಭಿಮಾನಿಗಳು ಮತ್ತು ಅತ್ತ ವಿಪ್ರೋತ್ತಮರು ಶ್ಯಾನೆ ಸಿಟ್ಟಾಗಿದ್ದಾರಂತಲ್ಲಾ.

********

ಕಟೀಲರ ಇನ್ನೊಂದು ಮಾತು, ರಾಮ ಜನರನ್ನು ನಂಬುತ್ತಿದ್ದ ಎಂಬುದು. ಇದರ ಅನಾಹುತವೆಂದರೆ ಅಗಸನ ಮಾತನ್ನು ನಂಬಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿನ ಮಧ್ಯೆ ಬಿಟ್ಟು ಬಂದಿದ್ದು, ಮೊದಲು ಹನ್ನೆರಡು ವರ್ಷ ವನವಾಸ, ಆ ನಂತರ ಮತ್ತೆ ವನವಾಸ ಅನುಭವಿಸಿದ ಸೀತೆ ಕಡೆಗೆ ಸಾಕಪ್ಪ ಈ ರಾಮನ ಸಹವಾಸ ಎಂದು ತವರು ಮನೆಗೆ ಹೋಗಿ ತರಕಾರಿ ಬೆಳೆದುಕೊಂಡು ಕಾಲ ಹಾಕಿದಳಲ್ಲಾ. ಈ ಸಾಲುಗಳ ಬಗ್ಗೆ ಅನುಮಾನವಿದ್ದವರು ಎಸ್.ಎಲ್ ಭೈರಪ್ಪನವರ ಉತ್ತರಕಾಂಡ ಓದುವುದು ಒಳ್ಳೆಯದು. ಅಂದ ಹಾಗೆ ಅವರಣವನ್ನು ತಲೆಮೇಲೆ ಹೊತ್ತುಕೊಂಡು ಮಾರಿದೆ ಸಂಘಪರಿವಾರ ಸಮೂಹ ಉತ್ತರಕಾಂಡದ ಬಗ್ಗೆ ಉಸಿರೆತ್ತಿಲ್ಲವಂತಲ್ಲಾ. ಇದೆಲ್ಲಕಿಂತ ಮಜಾ ಅಂದರೆ ಬಷೀರಣ್ಣನವರು ರಾಮಾಯಣವನ್ನು ವ್ಯಾಖ್ಯಾನಿಸಿರುವ ಪರಿ ಭೈರಪ್ಪನವರಿಗೆ ಹತ್ತಿರವಾಗಿದೆಯಲ್ಲಾ. “ನೋಡಿ ಸಾರ್ ಒಬ್ಬ ಮನುಷ್ಯ ತಂಗಿಗಾಗಿ ತನ್ನ ಪ್ರಾಣವನ್ನೇ ಕೊಟ್ಟು ರಾಜ್ಯನೂ ಕಳಕೊಂಡ. ತಂದೆ ಮಾಡಿದ ಕೆಲ್ಸಕ್ಕೆ ರಾಜ್ಯ ಬಿಟ್ಟು ಬಂದ ರಾಮ ದೊಡ್ಡವುನೊ, ರಾವಣ ದೊಡ್ಡವುನೊ, ನೀವೇ ಹೇಳಿ ಸಾರ್. ಪಾಪ ಶೂರ್ಪನಕಿ ಸ್ಟೋರಿ ಈ ಕಾಲದಲ್ಲಿ ಅಸಿಡ್ ದಾಳಿಗೆ ತುತ್ತಾಗಿ ಬುರ್ಖಾ ಹಾಯ್ಕಂಡು ಓಡಾಡ್ತರಲ್ಲ, ಅಂತ ಹೆಂಗಸರ ಕತೆ ಆಗಿರಬೌದು, ಯಾವುದಾದ್ರು ಹುಡುಗಿ ಲವ್ ಮಾಡು ಅಂದ್ರೆ ಆಗಲ್ಲ ಸ್ವಲ್ಪ ಪ್ರಾಬ್ಲಂ ಅನ್ನಬೇಕು ಸಾರ್! ಮೂಗುಕುಯ್ದಾಕ್‌ಬುಡದ” ಎಂದು ಚಿಂತಾಕ್ರಾಂತರಾದರಲ್ಲಾ. ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....