Homeಚಳವಳಿಇಂದು ನಮ್ಮೀ ನಾಡು…

ಇಂದು ನಮ್ಮೀ ನಾಡು…

ನಮ್ಮ ಈ ನಾಡಿನ ನಮ್ಮಣ್ಣತಮ್ಮಂದಿರಾದ ನಬೀ-ಅಲಿ-ಮುಸ್ತಾಫಾ ಅವರಮೇಲೆ, ಮೆಲ್ವಿನ್-ಆಲ್ವಿನ್-ನಾರ್ಬರ್ಟ್ ಅವರಮೇಲೆ, ನಮ್ಮಕ್ಕತಂಗಿಯರಾದ ಫರೀದಾ-ಫಾತಿಮಾ-ಆಯಿಷಾ ಅವರಮೇಲೆ, ಆನ್ನಾ- ಜಸಿಂಡಾ-ಎಲೀಜಾ಼ ಅವರಮೇಲೆ ಫ್ಯಾಶಿಸ್ಟ್ ದಾಳಿ ನಡೆಯುತ್ತಿರುವಾಗ ಈ ನಮ್ಮವರನ್ನು ತಬ್ಬಿ ನಿಲ್ಲಬೇಕೆ,  ಇಲ್ಲ ನಮ್ಮ ಈ ಮನೆಯ ಮೇಲೆ, ಮನೆಮಂದಿಯ ಮೇಲೆ ದಾಳಿ ಆಗುತ್ತಿರುವುದನ್ನು ಕಂಡೂ ಕಾಣದವರಂತೆ ಮುಖ ತಿರುಗಿಸಿ ಇದ್ದುಬಿಡಬೇಕೆ?

- Advertisement -
- Advertisement -

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನೆಲ ಶಿವರಾಮ ಕಾರಂತ, ಕೋ. ಲ. ಕಾರಂತ,  ಬಿ. ವಿ. ಕಾರಂತ, ಗೋಪಾಲಕೃಷ್ಣ ಅಡಿಗ, ಸೇಡಿಯಾಪು ಕೃಷ್ಣಭಟ್ಟ ಅವರ ತವರು ನೆಲ; ಪಂಜೆ ಮಂಗೇಶರಾಯರ ತವರು ಆ ನೆಲ; ಗೊಲ್ಗೊಥಾ ಮತ್ತು ವೈಶಾಖಿ ಖಂಡಕಾವ್ಯಗಳನ್ನು ಬರೆದ ಗೋವಿಂದ ಪೈ ಅವರ ನೆಲ; ಲಕ್ಷ್ಮೀಶ ತೋಳ್ಪಾಡಿಯವರ  ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ ಮತ್ತು ಬೆಳಕಿಗೆ ನೆರಳಿತ್ತ ಸಂಗಾತಿ ಪುಸ್ತಕಗಳಿಂದಾಗಿ ನನ್ನಂಥವರ ಮನಮೀಟಿದ ಪುತ್ತೂರಿನ ಅಜ್ಜಂದಿರು ರಾಮಚಂದ್ರ ಭಟ್ಟ ಮತ್ತು ಇಸ್ಮಾಯಿಲ್ ಕುಂಞಪ್ಪ ಅವರ ಕರುಳ ಬೇರಿನ ಬೀಡು.

ರಾಮಚಂದ್ರ ಭಟ್ಟರು ಮತ್ತು ಇಸ್ಮಾಯಿಲ್ ಕುಂಞಪ್ಪ
Photo Courtesy: mysorepoetWordPress.com

ಶಿವಮೊಗ್ಗ ಜಿಲ್ಲೆ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ ಮತ್ತು ಕೆ. ವಿ. ಸುಬ್ಬಣ್ಣ ಅವರು ಹುಟ್ಟಿ, ಬೆಳಗಿದ ನೆಲ. ನಿತ್ಯೋತ್ಸವ ಎಂಬ ಹಾಡನ್ನು ಬರೆದು ಕರ್ನಾಟಕದ ನೆಲವನ್ನು ಕೀರ್ತಿಸಿದ ನಿಸಾರ್ ಅಹಮದ್ ಅವರು ನೆಲೆಸಿ, ಒಲಿದು, ಒಲಿಸಿಕೊಂಡ ನೆಲ ಅದು, ಬೆಣ್ಣೆ ಕದ್ದ ನಮ್ಮ ಕೃಷ್ಣದಂಥ ಮುಪ್ಪಿಲ್ಲದ ಹಾಡುಗಳನ್ನು ಅವರು ಬರೆದ ನೆಲೆವೀಡು. ಪ್ರಭುದೇವ ಅಲ್ಲಮ ಹುಟ್ಟಿ, ಸಿದ್ಧನಾದದ್ದು, ಮಹದೇವಿಯಕ್ಕ ಹುಟ್ಟಿ, ಸಿದ್ಧಳಾದದ್ದು, ಅಲ್ಲಿ.

ಧಾರವಾಡ ಎಂದರೆ ನನ್ನಂಥವರಿಗೆ ಬೇಂದ್ರೆ, ಬೇಂದ್ರೆ, ಬೇಂದ್ರೆಯೇ. ಜೊತೆಗೆ, ಸಾತ್ತ್ವಿಕ ಹರಿಹರಿತ ಸವಾಲಿಗೆ ನಿಂತ ಆ ಘನಘನ ಶಂಬಾ, ಶಂಬಾ ಜೋಷಿ. ಮತ್ತು, ಅಣ್ಣ ಬಸವಣ್ಣನ ಒಕ್ಕಲು ತಾವೆಂಬವರ ವಿದ್ಯಾಕಾಶಿ.

ಕೋಲಾರ ಎಂದರೆ ಮಾಗಿದ ಮಾತು: ಮಾಸ್ತಿಯ ಅಯ್ಯ, ಡಿವಿಜಿ. ಕೋಲಾರ ಎಂದರೆ ಎದೆಮೀಟೊ ಹಾಡು:  ಕೈವಾರ ತಾತಯ್ಯ.

ಇನ್ನು ಮೇಲುಕೋಟೆ ಎಂದರೆ, ಅದೇ… ಅಹಲ್ಯೆ, ಗೋಕುಲನಿರ್ಗಮನ, ಮಲೆದೇಗುಲ, ಯದುಗಿರಿಯ ಮೌನವಿಕಾಸ, ಶರ್ವರೀ ಸುಷಮೆ ಬರೆದ ಆರ್ದ್ರತೆ, ರಸಿಕತೆಯ ಮೂರುತಿ – ಪು. ತಿ. ನ.

 

ಆದರೆ ಈಗ, ಕಡಲ ತೀರದ ಆ ಜಿಲ್ಲೆಗಳಲ್ಲಿ, ಶಿವಮೊಗ್ಗ ಸುತ್ತಿನ ಊರೂರಲ್ಲಿ, ಧಾರವಾಡದ ನುಗ್ಗಿಕೇರಿಯಲ್ಲಿ, ಕೋಲಾರದ ಮುಳಬಾಗಿಲಲ್ಲಿ, ಮೇಲುಕೋಟೆಯ ಚೆಲುವನ ಗುಡಿಯ ಮಂದಿಯಲ್ಲಿ – ಎಲ್ಲೆಲ್ಲೂ, ಎಲ್ಲೆಲ್ಲೋ – ಆಗಿರುವುದು, ಆಗುತ್ತಿರುವುದು, ಮತ್ತು ಆಗಲಿರುವುದನ್ನು ಕಂಡು ಅಲ್ಲಿ, ಯಾವ ದಿವ್ಯಲೋಕದಲ್ಲೋ, ಗೋಷ್ಠಿ ನಡೆಸುತ್ತಿರಬಹುದಾದ ಆ ನಮ್ಮ ಹಿರಿಯರಿಗೆಲ್ಲ ಹೇಗಾಗುತ್ತಿರಬೇಕು, ಕೇಳಿಕೊಳ್ಳುವುದು ಬೇಡ: ಆ ಲೋಕದಲ್ಲೂ ವಿಲಿವಿಲಿ ಒದ್ದಾಡುತ್ತಿರಬೇಕು ಅವರು.

ಆ ಅಂಥವರನ್ನು ಓದಿ, ಮೆಚ್ಚಿಕೊಂಡ ಜನರಿದ್ದೇವಲ್ಲ ನಾವು, ನೀವು… ಮಾತುಮಾತಿಗೆ ಅವರನ್ನು ನೆನೆಯುವ… ಅವರು ಆಡಿದ್ದನ್ನು, ಮಾಡಿದ್ದನ್ನು, ಬರೆದದ್ದನ್ನು ಎತ್ತಿ ಆಡುವ, ನಮ್ಮನಮ್ಮಲ್ಲೇ ಗುನುಗಿಕೊಳ್ಳುವ, ಮೆಲುಕು ಹಾಕುವ, ಭಾಷಣ ಬಿಗಿಯುವ, ಬರೆಯುವ, ಪಾಠಮಾಡುವ, ಪರೀಕ್ಷೆ ಪಾಸುಮಾಡಲು ಓದುವ… ಅವರೆಲ್ಲ ಬೆಳೆಸಿದ ಜನ ನಾವು, ನಾವಿದ್ದೇವಲ್ಲ… ಅವರ ಹೆಸರುಗಳನ್ನು ಹೇಳಿ ಬೀಗುವ ನಾವು, ಈ ನಾನು, ಈ ನೀವು… ನಾವು  ಈಗ ಏನು ಮಾಡಬೇಕು, ಯೋಚಿಸೋಣ ಕನ್ನಡಿಗರೇ, ಕರುನಾಡಿಗರೇ…

ಜನಿವಾರ ಹಾಕಿಕೊಂಡೋ ಹಾಕಿಕೊಳ್ಳದೆಯೋ ಗಾಯತ್ರಿ ಮಂತ್ರವನ್ನು ಬಲುಶ್ರದ್ಧೆಯಿಂದ ಮನನ ಮಾಡುವ, ಮಣಮಣಿಸುವ ನಾವು; ಶಿವದಾರ, ಕರಡಿಗೆ ಹಾಕಿಯೋ ಹಾಕಿಕೊಳ್ಳದೆಯೋ ಬಸವ ಬಳಗ, ಅಕ್ಕನ ಬಳಗ ಎಂದೆಲ್ಲ ಕಟ್ಟಿಕೊಂಡು ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದೆಲ್ಲ ಗಳಹುವ ನಾವು; ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ವಿಚಾರ ಕ್ರಾಂತಿಗೆ ಆಹ್ವಾನ, ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಮುಂತಾದ್ದೆಲ್ಲ ಓದಿಕೊಂಡವರು, ಪಾಠ ಮಾಡುವವರು, ಹೇಳಿಸಿಕೊಂಡವರು ಎನ್ನುತ್ತ, ಎಂದುಕೊಳ್ಳುತ್ತ ಉಬ್ಬುವ ನಾವು; ಬಾಳ್ವೆಯೇ ಬೆಳಕು ಎಂದು ಒದರುವ ನಾವು; ವಿಶ್ವಮಾತೆಯ ಗರ್ಭಕಮಲಜಾತ ಪರಾಗ ಪರಮಾಣು ಕೀರ್ತಿ ನಾನು ಎಂದು ನಾಟಕೀಯವಾಗಿ ಹೇಳುವ, ಹೇಳಿಸುವ ನಾವು — ನಮ್ಮ ಈ ನಾಡಿನ ನಮ್ಮಣ್ಣತಮ್ಮಂದಿರಾದ ನಬೀ-ಅಲಿ-ಮುಸ್ತಾಫಾ ಅವರಮೇಲೆ, ಮೆಲ್ವಿನ್-ಆಲ್ವಿನ್-ನಾರ್ಬರ್ಟ್ ಅವರಮೇಲೆ, ನಮ್ಮಕ್ಕತಂಗಿಯರಾದ ಫರೀದಾ-ಫಾತಿಮಾ-ಆಯಿಷಾ ಅವರಮೇಲೆ, ಆನ್ನಾ- ಜಸಿಂಡಾ-ಎಲೀಜಾ಼ ಅವರಮೇಲೆ ಫ್ಯಾಶಿಸ್ಟ್ ದಾಳಿ ನಡೆಯುತ್ತಿರುವಾಗ ಈ ನಮ್ಮವರನ್ನು ತಬ್ಬಿ ನಿಲ್ಲಬೇಕೆ,  ಇಲ್ಲ ನಮ್ಮ ಈ ಮನೆಯ ಮೇಲೆ, ಮನೆಮಂದಿಯ ಮೇಲೆ ದಾಳಿ ಆಗುತ್ತಿರುವುದನ್ನು ಕಂಡೂ ಕಾಣದವರಂತೆ ಮುಖ ತಿರುಗಿಸಿ ಇದ್ದುಬಿಡಬೇಕೆ? ಈ ನಮ್ಮವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಬೇಕಾದ ಧೈರ್ಯದ ಮಾತತ್ತಿರಲಿ, ಯೋಗ್ಯತೆಯನ್ನೂ ಕಳೆದುಕೊಳ್ಳುತ್ತಿದ್ದೇವಲ್ಲ ನಾವು…

ಅಡಿಗರ ಇಂದು ನಮ್ಮೀ ನಾಡು ಕವನ ಹೇಳುವಂತೆ, ಇಲ್ಲಿ:

ತೇರ ಹಿಡಿದೆಳೆದ ಕೈ, ಬಾಗಿ ಪೊಡಮಟ್ಟ ಮೈ
ಭಕ್ತಿ ತುಳುಕಾಡಿದ್ದ ಅಂತರಂಗ
ಈಗ ನರಕಕ್ಕೆ ಕೈಮರ, ಕರಡಿಗುಹೆ, ಘೋರ
ರಾಕ್ಷಸತೆ ಭೋರಿಡುವ ನಾಟ್ಯರಂಗ

ಅದು ಬೇಡ, ಬೇಡ. ಒಮ್ಮೆ ನಮ್ಮನಮ್ಮ ಮುಖವನ್ನು  ನಮ್ಮನಮ್ಮ ಒಳಗನ್ನಡಿಯಲ್ಲಿ ನಾವೇ ನೋಡಿಕೊಳ್ಳೋಣಲಂಕೇಶರ ದೇಶಭಕ್ತಗದ್ಯಗೀತೆ ಯನ್ನು ಉಸುರಿಕೊಳ್ಳುತ್ತ ನಮ್ಮನಮ್ಮ ಮುಸುಡಿಗೆ ನಾವೇ ಥೂ ಥೂ ಎನ್ನೋಣಚೊಕ್ಕವಾಗೋಣ. ಆಗಿ, ಮನೆಮಂದಿಯ ತಬ್ಬಿ ನಿಲ್ಲೋಣ.

ಕಡೆಯ ಮಾತು. ಕನ್ನಡಕ್ಕೆ ಎಂಟೆಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ, ಕರುನಾಡಿಗೆ ಸಂದ ಗೌರವ ಅದು, ಸವಿಗನ್ನಡಕ್ಕೆ ಸಂದ ಮನ್ನಣೆ ಎಂದೆಲ್ಲ ಹಿಗ್ಗುತ್ತೇವಲ್ಲ ನಾವು. ಯೋಚಿಸೋಣ, ಆ ಪ್ರಶಸ್ತಿ ಪಡೆದ ಮೊದಲ ಏಳು ಜನ ಈಗ ಇಲ್ಲಿ ಇದ್ದಿದ್ದರೆ ಒದ್ದಾಡುತ್ತಿದ್ದರು, ಆದರೆ ಖಂಡಿತಾ ಸುಮ್ಮನಿರುತ್ತಿರಲಿಲ್ಲ: ನಮ್ಮನಿಮ್ಮ ಆ ಮನೆಮಂದಿಯನ್ನು ಅಪ್ಪಿಕೊಂಡು, ಇಂದಿನ ಫ್ಯಾಶಿಸ್ಟರಿಗೆ ಖಂಡಿತಾ ಅಡ್ಡ ನಿಲ್ಲುತ್ತಿದ್ದರು ಅವರು.

ಈಗ ನಮ್ಮ ನಡುವೆ ಇರುವ ಜ್ಞಾನಪೀಠಸ್ಥರು ಒಬ್ಬರು ಮಾತ್ರ. ಆ ಹಿರಿಯರಿಂದ, ಮನೆಮಂದಿಯ ಕಾಯುವ ಸೊಲ್ಲೇ ಇಲ್ಲ, ಏಕೆ?

  • ರಘುನಂದನ

(ಲೇಖಕರು, ಕವಿ, ರಂಗನಿರ್ದೇಶಕರು, ಬೆಂಗಳೂರು)

*******


ಇದನ್ನೂ ಓದಿ: ಅಧ್ಯಾಪನದ ಧರ್ಮ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನೀವು ಹೇಳಿದ ಮಾತುಗಳು ೧೦೦ಕ್ಕೆ ೧೦೦%ಸತ್ಯ ಸರ್ ಇದರ ಬಗ್ಗೆ ನಾವೆಲ್ಲ ಯೋಚಿಸಲೇ ಬೇಕು, ತಡೆಯಬೇಕು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...