Homeಅಂಕಣಗಳುದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

ದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

- Advertisement -
- Advertisement -

ಈ ಸರಕಾರಕ್ಕೆ ನರಬಲಿ ಬೇಕಿದೆ ಎಂದು ದೇವನೂರ ಮಹಾದೇವ ಭವಿಷ್ಯ ನುಡಿದಿದ್ದಾರಲ್ಲಾ. ಸಾಹಿತ್ಯ ಲೋಕ ಕಂಡ ಅಪರೂಪದ ಪ್ರತಿಭೆ ದೇವನೂರ. ಶತಮಾನಗಳಿಂದ ತುಳಿದವರು ಮತ್ತು ತುಳಿಸಿಕೊಂಡವರ ಮನಸ್ಥಿತಿಯನ್ನು ಬಿಚ್ಚಿ ಹರವಿ, ಇದೇ ನೋಡಿ ನಿಮ್ಮ ಹಣೆಬರಹವೆಂದು ಎತ್ತರದಲ್ಲಿ ನಿಂತು ತೋರಿದವರು.
ಅದೆಲ್ಲಕ್ಕಿಂತ ಮುಖ್ಯವಾಗಿ ಹೊಲೆ ಮಾದಿಗರು ಎಂದಕೂಡಲೇ ಸೋ ಕಾಲ್ಡ್ ಮೇಲು ಜಾತಿಗಳೆನಿಸಿಕೊಂಡವರಲ್ಲಿ ಮೂಡುವ ತಿರಸ್ಕಾರವನ್ನು ಪತ್ತೆಹಚ್ಚಿ ಹೇಳಿದವರು. ಮೇಲು ಜನರ ಈ ಕಾಯಿಲೆ ಇನ್ನು ಗುಣವಾಗಿಲ್ಲದ ಈ ಸಂದರ್ಭದಲ್ಲಿ, ಮುಸ್ಲಿಮ್ ಎಂದ ಕೂಡಲೇ ಎಲ್ಲರಿಗೂ ಅಸಹನೆ ಮೂಡುವಂತೆ ಶ್ರಮಿಸುತ್ತಿರುವವರ ವಿರುದ್ಧ ಇದೇ ಮಹಾದೇವ ತಿರುಗಿ ಬಿದಿದ್ದಾರಲ್ಲಾ. ಏಕೆಂದರೆ ಮುಸ್ಲಿಮರನ್ನ ಮುರಿದು ಮೂಟೆಕಟ್ಟಿ ಮಡಗಿದ ನಂತರ, ರಾಮಸೇನೆ ಎಂಬ ವಾನರರ ಸಮರ ದಲಿತರ ವಿರುದ್ಧ ಆರಂಭವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಏಕೆಂದರೆ ಪ್ರಪಂಚದ ಸಂವಿಧಾನಗಳನ್ನೆಲ್ಲಾ ಓದಿ ಭಾರತಕ್ಕೆಂದು ಅಪರೂಪದ ಸಂವಿಧಾನ ನೀಡಿದ ಅಂಬೇಡ್ಕರ್ ಬಗ್ಗೆ ಪುರೋಹಿತಶಾಹಿ ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ ನೈಜವನ್ನು ಮರೆಮಾಚಿ ಅವರಿಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ಅಂಬೇಡ್ಕರ್ ಘನತೆ ಕಲ್ಪಿಸಿಕೊಟ್ಟ ಜನರ ಮೇಲೆ ಬೀಳಲು ಇಷ್ಟು ಸಾಕಲ್ಲವೆ ಸಂಘಿಗಳಿಗೆ. ಥೂತ್ತೇರಿ.

*****

ಮಹಿಷ ಮಂಡಲದಲ್ಲಿ ನಿಂತು ಬಿಜೆಪಿಯವರ ಮನಸ್ಥಿತಿಯನ್ನ ಅನಾವರಣ ಮಾಡಿದ ದೇವನೂರ ನಡವಳಿಕೆ ಕರ್ನಾಟಕದ ಇತರ ಸಾಹಿತಿಗಳಿಗೆ ಸ್ಪೂರ್ತಿಯುಂಟು ಮಾಡಬೇಕಿತ್ತು. ಏಕೆಂದರೆ ಬರೆಯುವ ಸಾಹಿತಿಗಳು ಏನು ಬರೆಯಬೇಕೆಂದು ಚಿಂತಿಸುವಂತಾಗಿದೆ. ತನ್ನ ಯಾವ ಪದ ಏನು ಅರ್ಥಕೊಡಬಹುದು, ಯಾವ ವಾಕ್ಯದಿಂದ ಯಾರು ಕೆರಳಬಹುದು, ನನ್ನ ಪುಸ್ತಕದಿಂದ ಯಾರಾದರೂ ರೊಚ್ಚಿಗೇಳುವರೆ ಎಂಬ ಗೊಂದಲಕ್ಕೆ ಸಿಕ್ಕಿಬಿದ್ದಿರುವಾಗ ಈ ಸಾಹಿತಿಗಳು ದೇವನೂರರಂತೆ ಬೀದಿಗೆ ಬರಬೇಕಿತ್ತು. ಒಂದು ಪ್ರೆಸ್‌ಮಿಟ್ ಮಾಡಬಹುದಿತ್ತು. ತನ್ನ ಮನೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದುಕೊಂಡು ಹೋಗಿ ಸರ್ವಜನಾಂಗದ ಮನವಿ ಕೊಡಬಹುದಿತ್ತು. ಜನರಿಗಾಗಿ ಬರೆಯುವ ಇವರು ಜನರಿಗೆ ತೊಂದರೆಯಾದಾಗ ಸುಮ್ಮನಿರಬಾರದಿತ್ತು ಎಂದು ಕರ್ನಾಟಕದ ಒಳ್ಳೆಯ ಮನಸ್ಸುಗಳು ಆಲೋಚಿಸುತ್ತಿರುವಾಗಲೇ ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿಪಡೆದಿರುವ ಧಾರವಾಡದ ನುಗ್ಗಿಕೇರಿಗೆ ನುಗ್ಗಿದ ವಾನರ ಸೇನೆ ನಬೀಸಾಬಿಯ ಕಲ್ಲಂಗಡಿ ಹಣ್ಣನ್ನು ಕಿತ್ತು ತಿಂದಿವೆಯಂತಲ್ಲಾ. ಥೂತ್ತೇರಿ.

ರಣಬಿಸಿಲ ದಾಹ ನೀಗಿಸಲೆಂದು ರೈತ ಬೆಳೆವ ಬೇಸಿಗೆ ಬೆಳೆ ಕಲ್ಲಂಗಡಿ ಹಣ್ಣು. ಬೆಳೆದವನು ಮಾರುವವನನ್ನ ಕಾಯುತ್ತಾನೆ, ಮಾರುವವನು ಕೊಂಡು ತಿನ್ನುವ ಗಿರಾಕಿಗಾಗಿ ಕಾಯುತ್ತಾನೆ, ಇದು ಒಬ್ಬರನ್ನೊಬ್ಬರು ಅವಲಂಬಿಸಿದ ಬದುಕು. ಇಂತಲ್ಲಿಗೆ ನುಗ್ಗಿದ ವಾನರ ಸೇನೆಯ ಇತಿಹಾಸ ಕೆದಕಿದರೆ ಅವು ಎಂದೂ ಭೂಮಿ ನೆಚ್ಚಿ ಬದುಕಿದವಲ್ಲ. ಭೂಮಿ ನೆಚ್ಚಿದವರನ್ನ ಗೌರವಿಸಿದ್ದು ಈ ವಾನರ ಸೇನೆಯ ಸಂಸ್ಕೃತಿಯಲ್ಲೇ ಇಲ್ಲ. ಅದು ಭೂಮಿ ನೆಚ್ಚಿ ಬದುಕಿದವನನ್ನ ಹೊಲ ಉಳುವ ಎತ್ತಿನಂತೆ ನೋಡುತ್ತಾ ಬಂದಿದೆ. ಇದನ್ನು ಕಂಡು ಕುವೆಂಪು ಉಳುವಾ ಯೋಗಿಯ ನೋಡಲ್ಲಿ ಎಂದು ತೋರಿಸಿದರು. ಅಲ್ಲಿಯವರೆಗೂ ಎತ್ತಿನ ಹಿಂದೆ ಎತ್ತಾಗಿ ತಿರುಗುವವನನ್ನು ಎತ್ತೆಂದೇ ಪರಿಗಣಿಸಿದ್ದ ಭೂಸುರೋತ್ತಮರು, ಅವನನ್ನ ಯೋಗಿ ಎಂದದ್ದು ಎಷ್ಟು ಸರಿ ಎಂದು ಕೊಂಕು ನುಡಿದಿದ್ದವು. ಸೂರ್ಯನಿಗಿಂತಲೂ ಮೊದಲೇ ತನ್ನ ಹೊಲದಲ್ಲಿ ಆರೂಡಿದ ರೈತ ಹುಕ್ಕೆ ಗೆರೆಯಲ್ಲೇ ನೇಗಿಲು ಬಿಡಬೇಕು. ಅತ್ತ ಇತ್ತ ತಿರುಗಿದರೆ ಮೊದಲ ಸೀಳಿಗೇ ನುಗ್ಗುತ್ತದೆ. ಅಂದರೆ ಉತ್ತ ಪಾತಿಯನ್ನೆ ಉಳಬೇಕಾಗುತ್ತದೆ. ಆದ್ದರಿಂದ ತಲೆ ಎತ್ತದ ರೈತ, ಹೆಂಡತಿ ರೊಟ್ಟಿ ತಂದಾಗಲೇ ತಲೆ ಎತ್ತಿ ನೋಡುತ್ತಿದ್ದುದು. ಯೋಗಿಯ ಧ್ಯಾನವಿಲ್ಲದೆ ಹೊಲ ಉಳಲಾಗುವುದಿಲ್ಲ. ಈ ಸಂಸ್ಕೃತಿಯೇ ಗೊತ್ತಿಲ್ಲದವುಗಳಿಗೆ ಭೂಮಿಯಿಂದ ಬೆಳೆದ ದವಸ ಧಾನ್ಯ ಹಣ್ಣುಗಳ ಬಗ್ಗೆ ಗೌರವವೇ ಇರುವುದಿಲ್ಲ. ಇಂತವರೇ ನಬೀಸಾಬ್ ಅಂಗಡಿಗೆ ದಾಳಿಯಿಟ್ಟವಂತಲ್ಲಾ. ಥೂತ್ತೇರಿ.

*****

ಕರ್ನಾಟಕದಲ್ಲೀಗ ರಾಜನ ಭಯ, ರಾಜನಿಲ್ಲದ ಭಯ ಎರಡೂ ಮನಸ್ಥಿತಿ ಅಮರಿಕೊಂಡಿವೆಯಂತಲ್ಲಾ. ಆಗೊಮ್ಮೆ ಗುಜರಾತಿನಲ್ಲಿ ಈ ಸ್ಥಿತಿಯುಂಟಾಗಿತ್ತು. ಅಲ್ಲಿ ಮೋದಿ ಎಂದಕೂಡಲೇ ಮುಸ್ಲಿಮರು ಬೆಚ್ಚಿ ಬೀಳುತ್ತಿದ್ದರು. ಮುಖ್ಯಮಂತ್ರಿಯ ಹುಕುಂನಂತೆಯೇ ವಿಶ್ವಹಿಂದುಗಳು ಭಜರಂಗಿಗಳು ರಾಮಸೇನೆ ವಾನರಸೇನೆಯೆಲ್ಲಾ ಸೇರಿಕೊಂಡು ಮೂರುದಿನ ಮುಸ್ಲಿಮರನ್ನ ಹುರಿದು ಮುಕ್ಕಿದ್ದರು. ಇದೀಗ ಕರ್ನಾಟಕದಲ್ಲಿ ಅಂತಹ ತಯಾರಿಯೊಂದು ನಡೆಯುತ್ತಿದೆಯಂತಲ್ಲಾ. ಪ್ರಕ್ಷುಬ್ದವಾದ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಮಿಂಚಿನ ಕಾರ್ಯಾಚರಣೆ ನಡೆಸುವುದರ ಬದಲು ನೊಂದವರು ಬಂದು ದೂರು ಕೊಡುವುದನ್ನೆ ಕಾಯುತ್ತಿದ್ದಾರಂತಲ್ಲಾ. ಅದೇ ಬಿಜೆಪಿ ಜನರಿಗೆ ತೊಂದರೆ ಕೊಟ್ಟವರನ್ನ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವ ಪೊಲೀಸರು ಕರ್ನಾಟಕ ಈವರೆಗೆ ಕಾಣದಿದ್ದ ಹೋಂ ಮಿನಿಸ್ಟರ್ ಏನು ಹೇಳುತ್ತಿದ್ದಾರೆಂದು ಕಾಯುತ್ತಿದ್ದಾರಂತಲ್ಲಾ. ಹೋಂ ಮಿನಿಸ್ಟರ್ ಸಾಧನೆ ಯಾವುದೆಂದರೆ ಭದ್ರಾವತಿಯ ಕಾಗದ ಕಾರ್ಖಾನೆ ಉದ್ಧಾರ ಮಾಡಪ್ಪ ಎಂದು ಅಧ್ಯಕ್ಷನನ್ನಾಗಿ ಕೂರಿಸಿದರೆ ವಾರೊಪ್ಪತ್ತಿನಲ್ಲಿ ಅದನ್ನು ಹಾಳು ಮಾಡಿದ್ದೂ ಅಲ್ಲದೆ ಅದರ ಬಾಗಿಲಿಗೆ ಬೀಗ ಜಡಿದು ಅರಗದ ಕಡೆ ಹೋದದ್ದು. ಇಂತಹ ವ್ಯಕ್ತಿಯನ್ನು ಕರ್ನಾಟಕವನ್ನ ಹದ್ದುಬಸ್ತಿನಲ್ಲಿಡಬೇಕಾದ ಜವಾಬ್ದಾರಿ ಹೊರೆಸಿ ಕೂರಿಸಿದರೆ ಏನಾಗಬೇಕೋ ಅದೇ ಆಗುತ್ತಿದೆ. ಅಂದರೆ ಕೇಶವ ಕೃಪದ ಸೂಚನೆಗಳು ಜಾರಿಯಾಗುತ್ತಿವೆಯಂತಲ್ಲಾ. ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ:  ಸಿದ್ದರಾಮಯ್ಯ ರಾವಣನಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...