HomeUncategorizedಆರ್‌ಎಸ್‌ಎಸ್ ಆಳ ಮತ್ತು ಅಗಲ; ರಾಷ್ಟ್ರ ಸೇವೆಯ ಹೆಸರಿನಲ್ಲಿ ಜನರನ್ನು ಹಳ್ಳಕ್ಕೆ ಕೆಡವಬೇಡಿ

ಆರ್‌ಎಸ್‌ಎಸ್ ಆಳ ಮತ್ತು ಅಗಲ; ರಾಷ್ಟ್ರ ಸೇವೆಯ ಹೆಸರಿನಲ್ಲಿ ಜನರನ್ನು ಹಳ್ಳಕ್ಕೆ ಕೆಡವಬೇಡಿ

- Advertisement -
- Advertisement -

ಚಕ್ರವರ್ತಿ ಸೂಲಿಬೆಲೆಯವರೆ,

ಜುಲೈ 11ರ ವಿಜಯವಾಣಿ ಪತ್ರಿಕೆಯಲ್ಲಿ ‘ಆರ್‌ಎಸ್‌ಎಸ್ ಆಳ ನೋಡಲು ಹೋಗಿ ಹಳ್ಳಕ್ಕೆ ಬಿದ್ದವರು’ ಎಂಬ ತಮ್ಮ ಅಂಕಣ ಬರಹ ಓದಿದೆ. ವಾರದ ಹಿಂದ? ಪ್ರಕಟವಾಗಿ ಭಾರೀ ಸಂಚಲನ ಉಂಟುಮಾಡಿರುವ ದೇವನೂರ ಮಹಾದೇವ ಅವರ ‘ಆರ್‌ಎಸ್‌ಎಸ್ | ಆಳ ಮತ್ತು ಅಗಲ’ ಎಂಬ ಕಿರುಪುಸ್ತಿಕೆಗೆ ತಮ್ಮ ಅಂಕಣ ಬರಹದ ಮೂಲಕ (ಆರ್‌ಎಸ್‌ಎಸ್‌ನ ಅಧಿಕೃತ ವಕ್ತಾರರಂತೆ) ನೀವಾದರೂ ಪ್ರತಿಕ್ರಿಯಿಸಿದ್ದು ಒಳ್ಳೆಯದೇ ಆಯಿತು. ಯಾಕೆಂದರೆ ಈ ಕೃತಿಯಲ್ಲಿ ಚರ್ಚಿತವಾಗಿರುವ ಬಹಳ ಗಹನವಾದ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಯಾಗಿ ‘ಧೂದ್ ಕಾ ಧೂದ್, ಪಾನಿ ಕಾ ಪಾನಿ’ ಯಾವುದೆಂದು ಈ ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕಾದ ಜರೂರು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.

ಈಗ ವಿಷಯಕ್ಕೆ ಬರೋಣ. ಮೊದಲಿಗೆ ತಾವು ನಾಡಿನ ಜನತೆಗೆ ಒಂದು ಸ್ಪಷ್ಟನೆ ನೀಡಬೇಕು.

ನೇರವಾಗಿ ಆರ್‌ಎಸ್‌ಎಸ್ ಬಗ್ಗೆ ಬರೆಯಲಾದ ಕೃತಿಗೆ ಅಧಿಕೃತವಾಗಿ ಆರ್‌ಎಸ್‌ಎಸ್‌ನವರು ಯಾಕೆ ಇದುವರೆಗೆ ಎಲ್ಲೂ ಬಾಯಿಬಿಚ್ಚಿಲ್ಲ? ಕನಿಷ್ಟ ಪಕ್ಷ ಒಂದು ಪತ್ರಿಕಾ ಹೇಳಿಕೆಯನ್ನಾದರೂ ನೀಡಿಲ್ಲ. ಆರ್‌ಎಸ್‌ಎಸ್ ನಾಯಕರು ಸುದೀರ್ಘ ರಜೆಯ ಮೇಲೆ ತೆರಳಿದ್ದಾರೆಯೆ? ಅಥವಾ ತಾವು ಆರ್‌ಎಸ್‌ಎಸ್‌ನ ಅಧಿಕೃತ ವಕ್ತಾರರೆ? ಅಥವಾ ತಮ್ಮನ್ನು ಈ ಮಹತ್ಕಾರ್ಯಕ್ಕಾಗಿ ಎರವಲು ಸೇವೆಯ ಆಧಾರದಲ್ಲಿ ನಿಯೋಜಿಸಲಾಗಿದೆಯೆ? ಈ ವಿಷಯದ ಬಗ್ಗೆ ಸ್ಪಷ್ಟತೆಯಿದ್ದರೆ ನಮ್ಮ ಮುಂದಿನ ಚರ್ಚೆಗೆ ಅನುಕೂಲವಾಗುತ್ತದೆ. ಇಲ್ಲವಾದರೆ ವೈಯಕ್ತಿಕವಾಗಿ ನಿಮ್ಮೊಂದಿಗೆ ಚರ್ಚೆ ಮಾಡುವುದು ನಿರರ್ಥಕವಾಗಿಬಿಡುತ್ತದೆ. ನಿಮ್ಮ ‘ಚಿನ್ನದ ರಸ್ತೆ’, ‘ರೂಪಾಯಿಗೊಂದು ಡಾಲರ್’, ‘ಮೂವತ್ತು ರೂಪಾಯಿಗೆ ಪೆಟ್ರೋಲ್’ ತರದ ಗಾಳಿಗೋಪುರಗಳಲ್ಲಿ ನಿಮ್ಮ ವಾದಗಳೂ ತೇಲಿಹೋಗಿಬಿಡುವುದರಿಂದ ಸಾರ್ವಜನಿಕರಿಗೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.

ಆದ್ದರಿಂದ ಫಲಪ್ರದವಾದ ಚರ್ಚೆ ಆಗಬೇಕೆಂದರೆ ಒಂದೋ ತಾವು ಅಧಿಕೃತ ವಕ್ತಾರನ ಸ್ಥಾನವನ್ನು ಕ್ಲೇಮ್ ಮಾಡಿಕೊಳ್ಳಿ. ಇಲ್ಲವೇ ನಿಮ್ಮ ಆರ್‌ಎಸ್‌ಎಸ್‌ನ ಅಧಿಕೃತ ನಾಯಕರು/ವಕ್ತಾರರು ಈ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಪ್ಲೀಸ್.

ಇನ್ನು ನಿಮ್ಮ ಅಂಕಣದ ಆಳ-ಅಗಲದ ಬಗ್ಗೆ ಸ್ವಲ್ಪ ಸಂಕ್ಷಿಪ್ತವಾಗಿ ಮಾತಾಡೋಣ. ನಿಮ್ಮ ಅಂಕಣದ ಹೂರಣ ಯಥಾಪ್ರಕಾರ ಸತ್ವವಿಲ್ಲದ ಶಬ್ದಾಡಂಬರ ಮತ್ತು ಅಪಪ್ರಚಾರದ ಮೊತ್ತ. ಸಾಲದ್ದಕ್ಕೆ ಸ್ವಯಂವೈರುಧ್ಯಪೂರ್ಣ ಬಡಬಡಿಕೆಗಳು. ನಿಮ್ಮ ಅಂಕಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳನೊಬ್ಬ ತಪ್ಪಿಸಿಕೊಳ್ಳಲು ಹೆಣಗುತ್ತಿರುವಂತೆ ಭಾಸವಾಗುತ್ತಿದೆ. ಒಂದೊಂದೇ ಅಂಶ ನೋಡೋಣ.

ಇದನ್ನೂ ಓದಿ:ಬಿಬಿಎಂಪಿ: 243 ವಾರ್ಡ್‌ ವಿಂಗಡನೆಗೆ ಅಂತಿಮ ಅಧಿಸೂಚನೆ

ದೇವನೂರರ ಕಿರುಪುಸ್ತಿಕೆಯಲ್ಲಿ ಸರಳವಾಗಿ ವಿಂಗಡಣೆಯಾದ ಐದು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಗೋಲ್ವಾಳ್ಕಾರ್, ಸಾವರ್ಕರ್ ಅವರ ಅಧಿಕೃತ ಬರಹಗಳು ಹಾಗೂ ಆರ್‌ಎಸ್‌ಎಸ್ ಮುಖವಾಣಿ ಪತ್ರಿಕೆಯ ಬರಹಗಳ ಮೂಲಕ ‘ಆರ್‌ಎಸ್‌ಎಸ್ ಪ್ರಾಣ ಎಲ್ಲೆಲ್ಲಿದೆ?’ ಎಂಬುದನ್ನು ನಿರೂಪಿಸಲಾಗಿದೆ. ಇದರ ಸಂಸ್ಥಾಪಕರ ಚಾತುರ್ವರ್ಣ ಪದ್ಧತಿಯ ಆರಾಧನೆಯನ್ನು, ಬ್ರಾಹ್ಮಣರ ಸೇವೆಗೆ ಶೂದ್ರರು ತಮ್ಮ ಜೀವನವನ್ನೇ ಮುಡುಪಾಗಿಡಬೇಕೆಂಬ ಮನುಧರ್ಮಶಾಸ್ತ್ರದ ಕಟ್ಟಳೆಗಳನ್ನು ಇಂದಿಗೂ ಆಚರಿಸಬೇಕೆನ್ನುವ ಮನುಷ ವಿರೋಧಿ ನೀತಿಯ ಬಗ್ಗೆ ಅಧಿಕೃತ ಉಲ್ಲೇಖಗಳಿವೆ. ಹಿಟ್ಲರನ ನಾಝಿ ಪಕ್ಷ ಮತ್ತು ಫ್ಯಾಸಿಸ್ಟ್ ಸಿದ್ಧಾಂತಗಳನ್ನು ಕೊಂಡಾಡುವ ಆರ್‌ಎಸ್‌ಎಸ್ ನಾಯಕರ ನಾಝಿ ಪ್ರೇಮ ಮತ್ತು ಮೆಚ್ಚುಗೆಗಳ ಬಗ್ಗೆ ನಿರಾಕರಿಸಲಾಗದ ಸತ್ಯಗಳಿವೆ. ಹಾಗೆಯೇ ಭಾರತದ ಸಂವಿಧಾನವನ್ನು ಪಾಶ್ಚಿಮಾತ್ಯ ಎಂದು ಜರೆದು ಅದರ ಸ್ಥಾನದಲ್ಲಿ ಮನುಧರ್ಮಶಾಸ್ತ್ರವನ್ನು ಸ್ಥಾಪಿಸಬೇಕೆಂಬ ಅವರ ಬಯಕೆಯನ್ನು ಸ್ಪಷ್ಟ ಮಾತುಗಳಲ್ಲಿ ದಾಖಲಿಸುತ್ತದೆ. ಬಹುಭಾಷ, ಬಹುಸಂಸ್ಕೃತಿಯ ಭಾರತ ಒಕ್ಕೂಟದ ಸ್ವರೂಪವನ್ನೇ ನಾಶ ಮಾಡಿ ಮನುಧರ್ಮ ಶಾಸ್ತ್ರದಡಿಯಲ್ಲಿ ಏಕಭಾಷೆ, ಏಕಸಂಸ್ಕೃತಿಯ ನಿರಂಕುಶ ಪ್ರಭುತ್ವವನ್ನು ಹೇರಬಯಸುವ ಸರಸಂಘಚಾಲಕರ ಹಿಡನ್ ಅಜೆಂಡಾವನ್ನು ಪುಸ್ತಿಕೆ ಬಯಲು ಮಾಡಿದೆ. ಇದು ಸಾರಾಂಶ.

ಒಂದೋ ನೀವು ಈ ಮೇಲಿನ ಅಂಶಗಳನ್ನು ಆರ್‌ಎಸ್‌ಎಸ್ ಸಿದ್ಧಾಂತದ ಸಾರವೆಂದು ಒಪ್ಪಿಕೊಳ್ಳಬೇಕು. ಅಥವಾ ಇಂಥಾ ಜೀವವಿರೋಧಿ, ಮನುಷ ವಿರೋಧಿ ಸಿದ್ಧಾಂತವನ್ನು ನಿರಾಕರಿಸಬೇಕು. ಬದಲಿಗೆ ನೀವು ಮಾಡುತ್ತಿರುವುದೇನು? ಈ ಯಾವ ಅಂಶವನ್ನೂ ಕನಿಷ್ಟಪಕ್ಷ ಸೋಂಕಿಸಿಕೊಳ್ಳದೆ ಪಲಾಯನ ಮಾಡಿಬಿಟ್ಟಿದ್ದೀರಿ. ನಿಮ್ಮ ಇಕ್ಕಟ್ಟೂ ಕೂಡ ಅರ್ಥವಾಗುವಂಥದ್ದೇ. ಈ ವಿಚಾರಗಳ ಕುರಿತು ಕೆದಕುತ್ತಾ ಹೋದಂತೆಲ್ಲಾ ಆರ್‌ಎಸ್‌ಎಸ್‌ನ ಪ್ರಾಣಕ್ಕೇ ಕುತ್ತುಬರುತ್ತದೆ ಎಂಬುದೇ ಅಸಲಿ ವಿಚಾರ.

ಮುಂದಿನ ಅಧ್ಯಾಯದಲ್ಲಿ ಬರುವ ‘ಶ್ರೇಷ್ಟ  ಮನುಷ ತಳಿ’ಯೆಂಬ ಅಸಹ್ಯಕರ ಪರಿಕಲ್ಪನೆಯ ಬಗ್ಗೆಯಾಗಲಿ, ‘ಮುಸ್ಲಿಂ ವೇಷದಲ್ಲಿ ತಮ್ಮದೇ ಜನರನ್ನು ಕಳಿಸಿ ಹಿಂದೂಗಳ ಮೇಲೆ ಹಲ್ಲೆ ಮಾಡಿಸಿ ಹಿಂದೂ ಮುಸ್ಲಿಂ ಗಲಭೆಗಳನ್ನು ಹುಟ್ಟುಹಾಕುವ ಆರ್‌ಎಸ್‌ಎಸ್‌ನ ಕುಟಿಲ ತಂತ್ರಗಳ ಬಗ್ಗೆ ಚಾರಿತ್ರಿಕ ದಾಖಲೆಗಳ ಉಲ್ಲೇಖದ ಬಗ್ಗೆಯಾಗಲಿ, ಸ್ವಯಂಸೇವಕರ ಹೆಸರಿನಲ್ಲಿ ‘ವಿವೇಚನಾರಹಿತ ಮನುಷ ವಿರೋಧಿ ರೋಬೋಟ್‌ಗಳನ್ನು ತಯಾರಿಸುತ್ತಿರುವ’ ಅಂಶದ ಬಗ್ಗೆಯಾಗಲಿ ತುಟಿಪಿಟಕ್ ಅನ್ನುವುದಿಲ್ಲ. ಇರಲಿ ಬಿಡಿ; ಬಾಯಿಬಿಟ್ಟರೆ ಬಣ್ಣಗೇಡು ಅಂತ ನಮ್ಮ ಹಿರಿಯರು ಗಾದೆ ಮಾತು ಹೇಳಿದ್ದಾರೆ.

ಇನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣರಿಗೆ ಮಾಡಿದ ಚಾರಿತ್ರಿಕ ವಿಶ್ವಾಸದ್ರೋಹದ ಬಗ್ಗೆ ನಿಮ್ಮದು ಜಾಣ ಮೌನ. ಕಳೆದ ಎಂಟು ವರ್ಷಗಳಿಂದ ಪೊಳ್ಳು ಆಶ್ವಾಸನೆಗಳ ಮೂಲಕ ದೇಶದ ಜನರನ್ನು ಯಾಮಾರಿಸಿದ್ದರ ಬಗ್ಗೆ ನೀವು ಮಾತಾಡಲು ಸಾಧ್ಯವೇ ಇಲ್ಲ. ಯಾಕೆಂದರೆ ಇದೇ ವಿಷಯದಲ್ಲಿ ತಾವು ಮೋದಿಯವರೊಂದಿಗೆ ತೀವ್ರ ಪೈಪೋಟಿಗೆ ಇಳಿದು ‘ಹೆಂಗ್ ಪುಂಗ್ಲಿ’ ಎಂಬ ಬಿರುದನ್ನು ಪಡೆದಿದ್ದೀರಿ. ದೇಶದ ಆರ್ಥಿಕತೆ ಹಳ್ಳ ಹಿಡಿದಿರುವ ಬಗ್ಗೆ, ವಿದೇಶಿ ಸಾಲ ಮೂರುಪಟ್ಟಾಗಿರುವ ಬಗ್ಗೆ, ನಿರುದ್ಯೋಗ ತಾರಕಕ್ಕೇರಿರುವ ಬಗ್ಗೆ ‘ಇಂದು, ವರ್ತಮಾನದಲ್ಲಿ’ ಎಂಬ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಊಹೂಂ? ಉಸಿರೇ ಇಲ್ಲ. ಇವೆಲ್ಲಾ ನಿಮಗೆ ಸಂಬಂಧಿಸಿದ ವಿಷಯಗಳಲ್ಲವೇ ಅಲ್ಲ. ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಧ್ವಂಸ ಮಾಡಿ ಹಿಂದುಳಿದ ಮತ್ತು ದಲಿತ ಮಕ್ಕಳನ್ನು ಶಿಕ್ಷಣದಿಂದ ಹೊರದಬ್ಬುವ ಹುನ್ನಾರಗಳು ಹೇಗೂ ಮನುಧರ್ಮಶಾಸ್ತ್ರವನ್ನು ಜಾರಿಗೆ ತರುವ ಹಿಡನ್ ಅಜೆಂಡಾದ ಭಾಗವಾಗಿರುವುದರಿಂದ ಆ ಬಗ್ಗೆ ನಿಮ್ಮಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ?!

ಸ್ವಯಂವೈರುಧ್ಯಗಳು
ಈ ಹಿಂದೆ ಪದ್ಮ ಪ್ರಶಸ್ತಿ ಮಾರಾಟವಾಗುತ್ತಿದ್ದವೆಂದು ಉಲ್ಲೇಖಿಸಿದ್ದೀರಿ. ಇಂಥಾ ವಿಷಯಗಳ ಬಗ್ಗೆ ಆಕ್ಷೇಪಣೆ, ಟೀಕೆ ಒಳ್ಳೆಯದೇ. ಆದರೆ ಆರ್‌ಎಸ್‌ಎಸ್ ಕೃಪಾಶೀರ್ವಾದದ ಆಡಳಿತದಲ್ಲಿ ‘ಪ್ರಜಾಪ್ರಭುತ್ವದ ದೇಗುಲ’ ಎನಿಸಿಕೊಂಡಿರುವ ವಿಧಾನಸಭೆಗಳೇ ಮಾರಾಟವಾಗುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೆ? ಒಂದೇ ಎರಡೇ, ಹತ್ತಾರು ರಾಜ್ಯಗಳಲ್ಲಿ ಶಾಸಕರ ವ್ಯಾಪಾರ ಸಂತೆಯಲ್ಲಿ ಕುರಿ ಕೋಳಿ ವ್ಯಾಪಾರಕ್ಕಿಂತ ಕಡೆಯಾಗಿದೆ. ಹೋಗಲಿ, ಕರ್ನಾಟಕದ ನಿಮ್ಮ ಪಕ್ಷದ ಹಿರಿಯ ನಾಯಕರೊಬ್ಬರು ‘2500 ಕೋಟಿ ಕೊಟ್ಟರೆ ನಿಮ್ಮನ್ನೇ ಸಿಎಂ ಮಾಡ್ತೀವಿ ಅಂತ ನಮ್ಮ ಪಕ್ಷದ ನಾಯಕರೊಬ್ಬರು ಹೇಳಿದರು’ ಅಂದ ವಿಷಯ ವೈರಲ್ ಆಗಿತ್ತಲ್ಲವೆ? ಪ್ರಜಾಪ್ರಭುತ್ವವನ್ನೇ ಮಾರಾಟಕ್ಕಿಟ್ಟುಬಿಟ್ಟರಲ್ಲಾ ಸ್ವಾಮಿ? ಬಹುಶಃ ಅವೆಲ್ಲಾ ನಿಮ್ಮ ಪಾಲಿಗೆ ಪವಿತ್ರ ಧರ್ಮಕಾರ್ಯಗಳಿರಬೇಕು!

ಅರಿಯಲಾಗದ ಆರ್‌ಎಸ್‌ಎಸ್‌ನ ಆಳದ ಬಗ್ಗೆ ಬರೆಯುತ್ತಾ ದೇವೇಗೌಡ, ಇಂದಿರಾಗಾಂಧಿಯವರ ನಿಗೂಢ ನಡೆಗಳನ್ನು ಎಳೆದು ತಂದಿದ್ದೀರಿ. ಅದೇ ವಾದ ಸರಣಿಯಲ್ಲಿ ಸನ್ಮಾನ್ಯ ಮೋದಿಯವರ ನಿಗೂಢ ನಡೆಗಳ ಬಗ್ಗೆ ದಾಖಲಿಸಿ ಪರೋಕ್ಷವಾಗಿ ಅವರು ಎಂಥಾ ಸರ್ವಾಧಿಕಾರಿ ಎಂಬುದನ್ನು ಬಿಚ್ಚಿಟ್ಟಿದ್ದೀರಿ. ನಮ್ಮದು ಪ್ರಜಾಪ್ರಭುತ್ವ ದೇಶ, ಇಲ್ಲಿ ಸಾಮೂಹಿಕ ಚರ್ಚೆಗಳ ಆಧಾರದಲ್ಲಿ ವಿವೇಚನಾಯುಕ್ತ ನಿರ್ಣಯಗಳಾಗಬೇಕೇ ಹೊರತು ಯಾರೋ ಒಬ್ಬ ಸರ್ವಾಧಿಕಾರಿಯ ಇಚ್ಛಾನುಸಾರ ಅಲ್ಲ ಎಂಬ ಪ್ರಾಥಮಿಕ ಜ್ಞಾನವೇ ನಿಮಗಿಲ್ಲದಿರುವುದು ವಿಷಾದನೀಯ. ರಾತ್ರೋರಾತ್ರಿ ನೋಟ್ ಬಂದ್ ಮಾಡಿದಾಗ ಹಣಕಾಸು ಸಚಿವರಿಗಾಗಲಿ, ರಿಸರ್ವ್ ಬ್ಯಾಂಕ್ ಗವರ್ನರ್‌ಗಳಿಗಾಗಲಿ ಸುಳಿವೇ ಇರಲಿಲ್ಲ. ರಫೇಲ್ ಖರೀದಿ ವ್ಯವಹಾರವನ್ನು ಎಚ್‌ಎಎಲ್‌ನಿಂದ ಕಸಿದು ಅಂಬಾನಿ ಒಡಲಿಗೆ ಹಾಕಿದ ನಿರ್ಣಯ ರಕ್ಷಣಾ ಸಚಿವರಿಗೆ ತಿಳಿದದ್ದು ಮಾಧ್ಯಮಗಳ ಮೂಲಕವೇ. ಇನ್ನು ಕೃಷಿ ಕಾನೂನುಗಳನ್ನು ತಂದಿದ್ದಾಗಲಿ, ರದ್ದು ಮಾಡಿದ್ದಾಗಲಿ ಎಲ್ಲವೂ ಏಕಪಕ್ಷೀಯ. ರೈಲ್ವೆ, ಎಲ್‌ಐಸಿ ಮುಂತಾದ ಸಂಸ್ಥೆಗಳ ಹರಾಜು ಕೂಡ ಇದೇ ಕತೆ. ಈಗಿನ ಅಗ್ನಿಪಥ್ ಯೋಜನೆ ಬಗ್ಗೆ ಸಂಬಂಧಿತ ಸಮಿತಿಗೇ ಮಾಹಿತಿಯಿಲ್ಲ. ಇಂಥಾ ಸರ್ವಾಧಿಕಾರದ ದುಷ್ಪರಿಣಾಮವನ್ನು ಈಗಾಗಲೇ ದೇಶ ಅನುಭವಿಸುತ್ತಿದೆ. ಹಾಳಾಗೋದು ದೇಶ ತಾನೇ? ನಿಮ್ಮ ಕ್ಯಾಂಪೇನ್ ಪೇಮೆಂಟ್‌ಗೆ ಯಾವುದೇ ಸಮಸ್ಯೆ ಇಲ್ಲ ಬಿಡಿ.

ಇದನ್ನೂ ಓದಿ: ಗೋವಾ ಕಾಂಗ್ರೆಸ್ ಶಾಸಕರ ಪಕ್ಷಾಂತರಕ್ಕೆ ತಾತ್ಕಾಲಿಕ ತಡೆ: ಬಿಜೆಪಿ ಸೇರಲು ತಲಾ 20 ಕೋಟಿ ರೂ ಆಮಿಷದ ಆರೋಪ

ಆರ್‌ಎಸ್‌ಎಸ್‌ನ ಕಾರ್ಯಾಚರಣೆಯ ಬಗ್ಗೆ ನಿಮ್ಮ ಸಮರ್ಥನೆ ನೋಡಿದರೆ ಮತ್ತಷ್ಟು ಅನುಮಾನಗಳು, ಪ್ರಶ್ನೆಗಳು ಮೂಡುತ್ತವೆ. “ನೂರುವರ್ಷ ಕಾಣುತ್ತಿರುವ ಸಂಘಟನೆಯೊಂದನ್ನು ಅರಿಯಲು ಎಷ್ಟು ಅಧ್ಯಯನ ಮಾಡಿದರೂ ಕಡಿಮೆಯೇ. ಇನ್ನೂ ವಿಸ್ತಾರದ ಅರಿವಾಗಬೇಕೆಂದರೆ ಅದರೊಟ್ಟಿಗೆ ಒಡನಾಡಿರಬೇಕು. ಆಗ ಮಾತ್ರ ಅದರ ಬಾಹುಗಳು ಚಾಚಿರುವ ರೀತಿಯನ್ನು ಅಂದಾಜಿಸಿಕೊಳ್ಳಬಹುದು” ಎಂದಿದ್ದೀರಿ. ಇದರೊಟ್ಟಿಗೆ ಒಡನಾಟವಿರಬೇಕು ಎಂದರೆ ಹೇಗೆ ಸಾಧ್ಯ? ಐಸಿಸ್, ಅಲ್ಕೈದಾಗಳಂತಹ ನಿಗೂಢ ಸಂಘಟನೆಗಳನ್ನು ಅರ್ಥ ಮಾಡಿಕೊಳ್ಳಲು ಅವರೊಡನೆ ಒಡನಾಟ ಇಟ್ಟುಕೊಳ್ಳಲು ಸಾಧ್ಯವೆ? ಹಾಗಂತ ಅದರ ಬಗ್ಗೆ ಅವುಗಳ ಬಗ್ಗೆ ತಾವು ಪುಟಗಟ್ಟಲೆ ಪುಂಗ್ತೀರಲ್ಲಾ, ಅವುಗಳ ಒಳಹೊಕ್ಕು ನೋಡಿದ್ದೀರಾ? ಆ ನಿಮ್ಮ ಲಾಜಿಕ್ ಹಾಗಿರಲಿ, ದಶಕಗಟ್ಟಲೆ ಒಡನಾಟವಿದ್ದದ್ದು ಮಾತ್ರವಲ್ಲ, ಸ್ವಯಂಸೇವಕರಾಗಿ ದಶಕಗಟ್ಟಲೆ ದುಡಿದ ಅನೇಕ ಶೂದ್ರರನ್ನೂ ಕೂಡ ಕತ್ತಲಲ್ಲೇ ಉಳಿಸಿ, ನಿಗೂಢ ಕಾರ್ಯಾಚರಣೆಗೆ ಮಾತ್ರ ಬಳಸಿಕೊಳ್ಳುತ್ತಿದ್ದ ವಿಧಾನವನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಕೋಟೆಯಿಂದ ಹೊರಬಂದವರ ನೋವಿನ ಕತೆಗಳನ್ನು ಕೇಳುವವರಾರು? ಅದೂ ಹಾಳಾಗಿ ಹೋಗಲಿ, ನೂರು ವರ್ಷ ಕಾಣುತ್ತಿರುವ ಸಂಘಟನೆಯ ನಾಯಕತ್ವ ಸ್ಥಾನಗಳಲ್ಲಿ ಕೇವಲ ಬ್ರಾಹ್ಮಣರೇ ತುಂಬಿರುವುದು ಯಾತಕ್ಕಾಗಿ? ಈ ಭಾರತಾಂಬೆಯ ಮಕ್ಕಳಾದ ದಲಿತ, ಶೂದ್ರ ಹಿನ್ನೆಲೆಯ ‘ಅರ್ಹ’ ಕಾರ್ಯಕರ್ತರು ನಿಮ್ಮ ಕಣ್ಣಿಗೇ ಬೀಳುತ್ತಿಲ್ಲವಲ್ಲಾ ಯಾಕೆ? ಅಥವಾ ಇದೂಕೂಡ ಮನಧರ್ಮವನ್ನು ಆಚರಿಸುವ ಹಿಡನ್ ಅಜೆಂಡಾದ ಭಾಗವೇ? ಹೀಗೆ ನಾನಾ ಪ್ರಶ್ನೆಗಳು ಏಳುತ್ತವೆ.

ದೇವನೂರು ಹೇಳಿರುವಂತೆ ಈ ಮಾಯಾವಿ ಸಂಘಟನೆಯನ್ನು ಅರ್ಥ ಮಾಡಿಕೊಳ್ಳಲು ಎಲ್ಲಿ ಅಧ್ಯಯನ ಮಾಡಿದರೂ ಕಡಿಮೆಯೇ. ನೀವೇ ಹೇಳಿರುವಂತೆ ಅದರ ಬಾಹುಗಳು ಚಾಚಿರುವ ರೀತಿ ಮತ್ತು ನಿಗೂಢ. ಗಾಂಧೀಜಿಯಿಂದ ಮೊದಲ್ಗೊಂಡು ಕಲ್ಬುರ್ಗಿ, ಗೌರಿ ಮುಂತಾದವರ ಹತ್ಯೆಗಳೂ, ಸಂಜೋತ, ಅಜ್ಮೇರ್ ಸ್ಫೋಟಗಳ ಸುತ್ತಾ ಎದ್ದಿರುವ ಜಟಿಲ ಪ್ರಶ್ನೆಗಳೇ ಇದಕ್ಕೆ ಸಾಕ್ಷಿ.

ದೇವನೂರರು ‘ಸಂಶೋಧನಾ ಕೃತಿ’ ರಚಿಸಿದ್ದಾರೆ ಎಂದುಕೊಂಡಿರುವ ತಮ್ಮ ವಿದ್ವತ್ತು ಕಂಡು ಯಾವಕಡೆಯಿಂದ ನಗಬೇಕೋ ತಿಳಿಯುತ್ತಿಲ್ಲ. ದೇವನೂರರೇ ಸ್ಪಷ್ಟ ಮಾತುಗಳಲ್ಲಿ ಹೀಗೆ ನುಡಿದಿದ್ದಾರೆ. “ಆರ್‌ಎಸ್‌ಎಸ್‌ನ ಗತಕಾಲದ ಪುರಾತನ ವಾಸನೆಯ ಬಾವಿಗೆ ಇಣುಕಿ ನೋಡಿದೆ. ಕಂಡ ದೃಶ್ಯ ಘೋರವಾಗಿದೆ. ಈ ಪುಟಾಣಿ ಪುಸ್ತಿಕೆಯಲ್ಲಿರುವುದು ಅದರ ಒಂದು ತುಣುಕು ಅಷ್ಟೇ. ಮುಂದೆ ವಿಸ್ತೃತವಾಗಿ ಬರೆಯುವವರಿಗೆ ಇದು ಒಂದಿಷ್ಟು ಪ್ರೇರಣೆಯಾದರೆ ಅದೇ ಸಾರ್ಥಕ”. ದೇವನೂರರ ಈ ಕಿರುಪುಸ್ತಿಕೆಯ ಆಘಾತಕ್ಕೆ ತತ್ತರಿಸಿ ಅಯೋಮಯವಾಗಿರುವ ನಿಮ್ಮಗಳ ಪರಿಸ್ಥಿತಿ ಅರ್ಥವಾಗುವಂಥದ್ದೇ.

ಆರ್‌ಎಸ್‌ಎಸ್ ಅರಿಯುವಲ್ಲಿ ‘ದೇವನೂರರ ಅಜ್ಞಾನ’ದ ಬಗ್ಗೆ ಲೇವಡಿ ಮಾಡಿದ್ದೀರಿ. ಇರಲಿ, ಹಾಗಾದರೆ ಆರ್‌ಎಸ್‌ಎಸ್ ಬಗ್ಗೆ ಜ್ಞಾನ ಎಲ್ಲಿದೆ ಸ್ವಾಮಿ? ಯಾವ ಕೃತಿಯಲ್ಲಿದೆ? ಯಾವ ದಾಖಲೆಯಲ್ಲಿದೆ? ಅಥವಾ ಯಾವ ಮಹಾನುಭಾವನ ಬಳಿಯಿದೆ? ಅದನ್ನಾದರೂ ಹೇಳಿ ಪುಣ್ಯ ಕಟ್ಟಿಕೊಳ್ಳಿ.

ಇಲ್ಲಾ ಅಂಥಾ ಯಾವ ಅಧಿಕೃತ ದಾಖಲೆಯೂ ಇಲ್ಲ. ಶತಮಾನಕ್ಕೆ ತಯಾರಿ ನಡೆಸಿರುವ ಮಾಯಾವಿ, ವೇಷಧಾರಿ ಆರ್‌ಎಸ್‌ಎಸ್‌ಗೆ ಒಂದು ಲಿಖಿತ ತತ್ವ ಪ್ರಣಾಳಿಕೆಯೇ ಇಲ್ಲ. ಸಂಘಟನಾತ್ಮಕ ನಿಯಮಗಳನ್ನು ನಿರೂಪಿಸಿರುವ ಒಂದು ಸಂವಿಧಾನವೂ ಇಲ್ಲ. ನಾಯಕತ್ವವನ್ನು ಆರಿಸುವ ಯಾವುದೇ ಲಿಖಿತ ಮಾನದಂಡವೂ ಇಲ್ಲ. ಇಷ್ಟುಗಳ ನನ್ನ ಪ್ರಯತ್ನದಲ್ಲಿ ಆರ್‌ಎಸ್‌ಎಸ್‌ನ ಯಾವುದೇ ಅಧಿಕೃತ ದಾಖಲೆ ಲಭ್ಯವಾಗಿಲ್ಲ. ಎಲ್ಲವೂ ನಿಗೂಢ.

ದೊಡ್ಡಿಪಾಳ್ಯ ನರಸಿಂಹಮೂರ್ತಿ

ಇದನ್ನೂ ಓದಿ: ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಮೀಸಲಾತಿ ಹೆಸರಲ್ಲಿ ಹಿಂದುಳಿದವರು ಎಂಬ ಹೆಸರಲ್ಲಿ ನೀವು ಮಾಡುತ್ತಿರುವ ಅನ್ಯಾಯ ಕಡಿಮೆನಾ? ಮಾತು ಮಾತಿಗೆ ಬ್ರಾಹ್ಮಣರು ಅನ್ನುವ ನೀವು ಜಾತ್ಯಾತೀತರೆ? ಆರ್ ಎಸ್ ಎಸ್ ನಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ಎಲ್ಲೇ ಪ್ರವಾಹ ಇರಲಿ, ಮೊದಲು ಹೋಗಿ ಜನರನ್ನು ಕಾಪಾಡೋರು ಆರ್ ಎಸ್ ಎಸ್ ನವರು, ಅನ್ನೊ ಸತ್ಯಾನ ನೀವು ಮುಚ್ಚಿಡಕ್ಕಾಗಲ್ಲ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...