Homeಅಂಕಣಗಳುಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

ಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

- Advertisement -
- Advertisement -

ಅದು 1991ನೇ ಇಸವಿಯ ಆಗಸ್ಟ್ ತಿಂಗಳು. ಭಾರತ ದೇಶವು 45ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿತ್ತು. ಸಂಭ್ರಮಾಚರಣೆಗೆ ಇನ್ನೊಂದು ವಾರವಿತ್ತಷ್ಟೆ. ಆ ಆಗಸ್ಟ್ 6ರ ಸಂಜೆ ಆಂಧ್ರಪ್ರದೇಶದ ತೆನಾಲಿ ಬಳಿಯಿರುವ ಚುಂಡೂರು ಗ್ರಾಮದಲ್ಲಿನ ದಲಿತರು ರೌರವ ನರಕ ನೋಡಿದರು. ಈ ದೇಶದಲ್ಲಿ ಇದನ್ನು ಆಶ್ಚರ್ಯವೆನ್ನಬೇಕೋ, ಅಥವಾ ಸಾಮಾನ್ಯ ಸಂಗತಿಯೆನ್ನಬೇಕೋ ಕೊಲೆಗಾರರಿಗೆ ಪೊಲೀಸರು ನೀಡಿದ ಸಹಾಯದಿಂದಲೇ ಈ ಕೊಲೆಗಳು ನಡೆದುಹೋಗಿದ್ದವು.

ಅದು ಚುಂಡೂರು. ಗುಂಟೂರು ಜಿಲ್ಲೆಯ ಗ್ರಾಮಪಂಚಾಯಿತಿ. ವೇಮೂರು ವಿಧಾನಸಭಾ ಕ್ಷೇತ್ರದಲ್ಲಿದೆ. ಈ ಚುಂಡೂರು ಬ್ರಿಟಿಷರ ಕಾಲದಲ್ಲಿ ಹಲವು ಯೋಜನೆಗಳನ್ನು ಕಂಡ ಗ್ರಾಮವಾಗಿತ್ತು. ಮದ್ರಾಸ್-ಕಲಕತ್ತಾ ರೈಲು ಮಾರ್ಗ ಈ ಗ್ರಾಮದ ಪಕ್ಕದಲ್ಲಿಯೇ ಹಾದುಹೋಗುತ್ತಿತ್ತು. ಈ ಕಾರಣವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನೂ ಚುಂಡೂರಿನ ಜನ ಭೇಟಿಯಾಗಿದ್ದರು. ಬ್ರಿಟಿಷರು ಇಲ್ಲೊಂದು ಪೊಲೀಸ್ ಠಾಣೆಯನ್ನೂ ಸಹ ತೆರೆದಿದ್ದರು. ಇಡೀ ಗುಂಟೂರು ಜಿಲ್ಲೆಯ ಭೂಮಿಯೆಲ್ಲಾ ಕೃಷ್ಣಾ ನದಿಯಿಂದ ಹಚ್ಚಹಸಿರಾಗಿತ್ತು. ಈ ಭೂಮಿಯೆಲ್ಲ ರೆಡ್ಡಿಗಳ ಪಾಲಾಗಿತ್ತು. ಹಾಗೆಯೇ ಚುಂಡೂರಿನ ಸುಮಾರು 3000 ಎಕರೆ ಜಮೀನಿನಲ್ಲಿ ಬರೋಬ್ಬರಿ 2500 ಎಕರೆ ಜಮೀನು ರೆಡ್ಡಿ ಭೂಮಾಲೀಕರದ್ದಾಗಿತ್ತು. ಅವರ ಜಮೀನುಗಳಲ್ಲಿನ ದಲಿತರು ಕೂಲಿಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ಭೂಮಾಲೀಕತೆಯ ವಿಚಾರದಲ್ಲಿ ಅಲ್ಲಿನ ಪರಿಸ್ಥಿತಿ ಇಂದಿಗೂ ಹಾಗೆಯೇ ಇದೆ. ಆದರೆ ದಲಿತರು ಗ್ರಾಮ ತೊರೆದು ಪಟ್ಟಣ ಸೇರಿಕೊಂಡಿದ್ದಾರೆ.

ಇಂದಿಗೂ ಚುಂಡೂರಿನ ದಲಿತರು ಹಾಗೂ ದಲಿತೇತರ ವಸತಿಗಳು ಪ್ರತ್ಯೇಕವಾಗಿಯೇ ಉಳಿದಿವೆ. ಚುಂಡೂರಿನ ಮಧ್ಯಭಾಗದಲ್ಲಿ ಹಾದುಹೋಗಿರುವ ರಸ್ತೆಯ ಎರಡೂ ಬದಿಗಳಲ್ಲಿ ಈ ಎರಡು ಸಮುದಾಯಗಳು ಪ್ರತ್ಯೇಕವಾಗಿ ಜೀವಿಸುತ್ತಿವೆ.

ಆಗಸ್ಟ್ 6 ರಂದು ಆಗಿದ್ದೇನು?

1991 ಜುಲೈ 7ರಂದು ಚುಂಡೂರಿನ ದಲಿತ ಯುವಕರು ಸಿನೆಮಾ ನೋಡಲು ಥಿಯೇಟರಿಗೆ
ಹೋಗಿರುತ್ತಾರೆ. ಅಂದು ದಲಿತ ಯುವಕ ತನ್ನ ಕಾಲುಗಳನ್ನು ಚಾಚಿಕೊಂಡಾಗ ಅಕಸ್ಮಿಕವಾಗಿ ರೆಡ್ಡಿ ಭೂಮಾಲೀಕನ ಮಗ ಶ್ರೀನಿವಾಸರೆಡ್ಡಿಗೆ ತಗಲುತ್ತದೆ. ಇದೇ ವಿಚಾರಕ್ಕೆ ಆ ಎರಡು ಗುಂಪುಗಳ ನಡುವೆಯೂ ಗಲಾಟೆಗಳಾಗುತ್ತವೆ. ದಲಿತ ಯುವಕರು ರೆಡ್ಡಿ ಯುವತಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡರೆಂಬ ಸುಳ್ಳನ್ನು ಸಹ ಹರಿಯಬಿಡಲಾಗುತ್ತದೆ.

ರೆಡ್ಡಿಗಳು ಈ ರೀತಿಯ ಊಹಾಪೋಹವನ್ನು ಹರಡಿ ದಲಿತರ ಮೇಲೆ ಮುಗಿ ಬೀಳಬೇಕೆಂದುಕೊಂಡದ್ದರ ಹಿಂದೆ ದಲಿತರು ಪಡೆದ ಸಾಮಾಜಿಕ-ಆರ್ಥಿಕ-ಧಾರ್ಮಿಕ ಮೇಲ್ಚನೆಯೇ ಮುಖ್ಯ ಕಾರಣವಾಗಿದೆ. ಸುಮಾರು 500 ಕುಟುಂಬಗಳಿದ್ದ ದಲಿತರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರ ಪ್ರಭಾವ 80ರ ದಶಕದಲ್ಲಿ ಹೆಚ್ಚಾಯಿತು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳು ಸ್ವಾಭಿಮಾನ ತುಂಬಿದವು. ಕೇವಲ 10 ವರ್ಷಗಳ ಹಿಂದೆ ರೆಡ್ಡಿ ಭೂಮಾಲೀಕರ ಹೊಲಗಳಲ್ಲಿ ಜೀತಗಾರಿಕೆ ಮಾಡುತ್ತಿದ್ದ ದಲಿತರ ಮಕ್ಕಳು ಅಂದು ವಿದ್ಯಾವಂತರಾಗಿ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದು ಕಡಿಮೆ ಅಕ್ಷರಸ್ಥರಾಗಿದ್ದ ರೆಡ್ಡಿ ಮತ್ತು ಕಾಪುಗಳಲ್ಲಿ ಅಸೂಯೆ ಮೂಡಿಸಿತು. ದಲಿತರು ಕ್ರೈಸ್ತ ಧರ್ಮ ಸ್ವೀಕರಿಸುತ್ತಿದ್ದದ್ದನ್ನು ಸಹಿಸದಾದರು. ಆ ಕಾಲಕ್ಕೆ ರೈಲ್ವೇ ಇಲಾಖೆಯಲ್ಲಿ ಚುಂಡೂರಿನ 300ಕ್ಕೂ ಹೆಚ್ಚು ಯುವಕರು ಕೆಲಸಕ್ಕೆ ಸೇರಿಕೊಂಡಿದ್ದರು. ಬ್ಯಾಂಕು ಹಾಗೂ ಕಂದಾಯ ಇಲಾಖೆಯಲ್ಲಿಯೂ ಕೆಲಸ ಗಿಟ್ಟಿಸಿಕೊಂಡರು. ಇದರಿಂದಾಗಿ ದಲಿತ ಯುವಕರು ಪಾರಂಪರಿಕ ಚಾಕರಿಗಳನ್ನು ಕೈಬಿಟ್ಟರು. ತಮ್ಮ ತಂದೆತಾಯಂದಿರು ಬಳಲಿದ್ದ ಜೀತಗಾರಿಕೆಯಿಂದ ದೂರವೇ ಉಳಿದರು. ದಲಿತರಲ್ಲಿ ಈ ಸ್ವಾಭಿಮಾನವನ್ನು ಬಗ್ಗುಬಡಿಯಲು ಹಾಗೂ ಬುದ್ಧಿ ಕಲಿಸಲು ಹೊಂಚುಹಾಕುತ್ತಿದ್ದ ಮೇಲ್ಜಾತಿ ಭೂಮಾಲೀಕರಿಗೆ ಸಿನೆಮಾ
ಥಿಯೇಟರಿನ ಪ್ರಸಂಗ ಒಂದು ಕಾರಣವಾಗಿತ್ತು.

ಈ ಘಟನೆಯ ನಂತರ ಪದೇಪದೇ ದಲಿತರ ಮೇಲೆ ಮೇಲ್ಜಾತಿ ರೆಡ್ಡಿ ಭೂಮಾಲೀಕರು ಜಗಳಕ್ಕೆ ಇಳಿದರು. ಇಡೀ ಸಮುದಾಯವನ್ನೇ ಬಹಿಷ್ಕರಿಸಿದರು. ಆದರೆ ಅಷ್ಟಕ್ಕೂ ತಲೆಬಾಗದ ದಲಿತರಿಗೆ ಮೇಲ್ಜಾತಿ ಪರಂಪರೆಯಲ್ಲಿಯೇ ಹಾಸು ಹೊಕ್ಕಾಗಿರುವ ’ಬುದ್ಧಿ ಕಲಿಸೋಣ’ ಎಂಬ ಅಹಂಕಾರ ಬಹಿರಂಗವಾಯಿತು. ಆಗಸ್ಟ್ 6ರಂದು ಸಂಜೆ ದಲಿತರ ಕೇರಿಗೆ ಬಂದ ಪೊಲೀಸರು, ’ರೆಡ್ಡಿ’ ಭೂಮಾಲೀಕರು ’ನಿಮ್ಮ ಮೇಲೆ ಮುಗಿಬೀಳುವವರಿದ್ದಾರೆ, ಕೂಡಲೇ ಊರು ಬಿಟ್ಟು ಹೊರಡಿ’ ಎಂದು ಹೇಳಿದರು. ಆದರೆ ದಲಿತ ಯುವಕರು ಬೆದರಿಕೆಗೆ ಜಗ್ಗಲಿಲ್ಲ. ಪೊಲೀಸರು ಸುಮ್ಮನಿರಲಿಲ್ಲ. ಮನೆಮನೆಗೆ ನುಗ್ಗಿ ದಲಿತರನ್ನು ಲಾಟಿಯಿಂದ ಥಳಿಸುತ್ತಾ ಹೊರ ಓಡಿಸಿದರು. ಇದು ಯಾಕೆ ಹೀಗೆ ಎಂದು ಅರ್ಥವಾಗುವಷ್ಟರಲ್ಲಿ ದಲಿತ ಯುವಕರನ್ನು ರೆಡ್ಡಿ ಭೂಮಾಲೀಕರು ಶಸ್ತ್ರಾಸ್ತ್ರಗಳನ್ನು ಹಿಡಿದು ಸುತ್ತುವರಿದರು. ಸಿಕ್ಕಸಿಕ್ಕ ದಲಿತ ಯುವಕರನ್ನು ಕೊಚ್ಚುತ್ತಾ ಹೋದರು. ಕೆಲವರ ದೇಹವನ್ನು ಅಕ್ಷರಶಃ ಸೀಳಿ ದಿಕ್ಕುದಿಕ್ಕುಗಳಿಗೆ ಎಸೆದರೆಂದು ಕಣ್ಣಾರೆ ಕಂಡ ದಯಾರಿ ಧನರಾಜ್ ಹೇಳುತ್ತಾರೆ. ತನ್ನ ಕುಟುಂಬದ ಮೂವರನ್ನು ಕಳೆದುಕೊಂಡ ಜಲಾಡಿ ಮೋಸಸ್ ಕಣ್ಣೀರಾಕುತ್ತಾರೆ. ಕೃಷ್ಣ ನದಿಯ ಕಾಲುವೆಗಳಲ್ಲಿ ಅಂದು ತುಂಡುತುಂಡಾಗಿ ಎಸೆಯಲ್ಪಟ್ಟಿದ್ದ ದಲಿತ ಯುವಕರ ಹೆಣಗಳು ಮೂರು ದಿನದ ನಂತರ ಗುರುತು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿ ದೊರಕುತ್ತವೆ. ಈ ನರಮೇಧದ ನಡುವೆ ಕೊಲೆಗಾರರ ಕೈಗೆ ಸಿಕ್ಕಿದರೂ ಸಾವಿನಿಂದ ತಪ್ಪಿಸಿಕೊಂಡ ಧನರಾಜ್ ಕತೆ ಈ ಜಾತಿವ್ಯಾಧಿಗಳ ಮನಸ್ಥಿತಿಯನ್ನು ಹಾಗೂ ಅವರ ಕ್ರೌರ್ಯವನ್ನು ಜಗಜ್ಜಾಹೀರುಗೊಳಿಸುತ್ತದೆ. ಧನರಾಜನನ್ನು ಹಿಡಿದ ರೆಡ್ಡಿಗಳು ಸರಳಿನಿಂದ ಹೊಡೆದು ಗಾಯಗೊಳಿಸುತ್ತಾರೆ. ಆದರೆ ಸಾಯಿಸುವುದಿಲ್ಲ. ಕೇವಲ ಕಾಲು ತಿರುಚಿ ಮುರಿದು ಅವನನ್ನು ಓಡದಂತೆ ಮಾಡುತ್ತಾರೆ. ಇದಕ್ಕೆ ಕಾರಣ ಅದೇ ಊರಿನ ಮಲ್ಲಿಕಾರ್ಜುನ ರೆಡ್ಡಿಗೆ ಒಂದು ಆಸೆ ಇರುತ್ತದೆ. ಅದೇನೆಂದರೆ ಜೀವಮಾನದಲ್ಲಿ ಒಬ್ಬ ದಲಿತನನ್ನಾದರೂ ಕೊಲೆ ಮಾಡಬೇಕೆಂಬುದು. ಆದರೆ ಅವನು ಕಾಲಿಲ್ಲದವನಾಗಿರುತ್ತಾನೆ. ಹಾಗಾಗಿ ಅವನ ಆಸೆ ತೀರಿಸಲು ಧನರಾಜನ ಕಾಲು ಮುರಿದು ಮಲ್ಲಿಕಾರ್ಜುನ ರೆಡ್ಡಿಯನ್ನು ಕರೆದುಕೊಂಡು ಬರಲು ಗುಂಪು ಹೋಗಿರುತ್ತದೆ. ಆದರೆ ಅದೃಷ್ಟವಶಾತ್ ಕೆಲವು ಮಹಿಳೆಯರು ಶ್ರಮವಹಿಸಿ ಧನರಾಜ್‌ನನ್ನು ಉಳಿಸಿಕೊಳ್ಳುತ್ತಾರೆ.

ಹೀಗೆ ಅಂದು ರೆಡ್ಡಿಗಳು ಹಾಗೂ ಕಾಪುಗಳು ನಡೆಸಿದ ದಲಿತರ ನರಮೇಧದಲ್ಲಿ ಎಂಟು ಜನ ದಲಿತರನ್ನು ಕೊಲೆ ಮಾಡಲಾಗುತ್ತದೆ. ಅದೆಷ್ಟು ಕ್ರೂರವಾಗಿ ಕೊಂದಿರುತ್ತಾರೆಂದರೆ ಆ ದೇಹಗಳನ್ನು ಶವಪರೀಕ್ಷೆ ಮಾಡಿದ ವೈದ್ಯ ಮನನೊಂದು ಆತ್ಮಹತ್ಯೆ ಮಾಡಿಕೊಂಡನಂತೆ! ಒಂದು ಶವವೂ ಸಹ ಪೂರ್ಣಪ್ರಮಾಣದಲ್ಲಿ ದೊರೆತಿರಲಿಲ್ಲ!

ಸೆಷನ್ ಕೋರ್ಟ್ 21 ರೆಡ್ಡಿಗಳಿಗೆ ಜೀವಾವಧಿ ಶಿಕ್ಷೆಯನ್ನೂ 35 ಮಂದಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಆದರೆ 2014ರಲ್ಲಿ ಆಂಧ್ರಪ್ರದೇಶದ ಹೈಕೋರ್ಟ್ ಈ ಮೇಲಿನ ತೀರ್ಪನ್ನು ಅನೂರ್ಜಿತಗೊಳಿಸಿ ಎಲ್ಲರನ್ನೂ ಬಿಡುಗಡೆಗೊಳಿಸಿತು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್‌ಗೆ ತೆರಳಿತಾದರೂ, ಅಲ್ಲಿಯೂ ದಲಿತರಿಗೆ ನ್ಯಾಯ ಸಿಗದೇ ಏದುಸಿರುಬಿಟ್ಟಿತು.


ಇದನ್ನೂ ಓದಿ: ಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...