Homeಮುಖಪುಟಬೆಳ್ಳಿಚುಕ್ಕಿ; ಭೂಮಿಯು ವೇಗವಾಗಿ ತಿರುಗಿದ್ದು ನಿಮಗೇನಾದರೂ ಭಾಸವಾಯಿತೇ?

ಬೆಳ್ಳಿಚುಕ್ಕಿ; ಭೂಮಿಯು ವೇಗವಾಗಿ ತಿರುಗಿದ್ದು ನಿಮಗೇನಾದರೂ ಭಾಸವಾಯಿತೇ?

- Advertisement -
- Advertisement -

ನೀವು ಕೆಲಸಕಾರ್ಯಗಳಲ್ಲಿ ತಲ್ಲೀನರಾಗಿರಬೇಕಾದರೆ ಗಡಿಯಾರ ನೋಡಿದಾಗ, ಅಯ್ಯೋ ಎಷ್ಟು ಬೇಗ ಸಮಯ ಆಗಿದೆ ಅಥವಾ ಇನ್ನೂ ಟೈಮೇ ಹೋಗುತ್ತಿಲ್ಲ ಎಂದೆನ್ನಿಸಿರುವುದಕ್ಕೆ ಸಾಧ್ಯವಿದೆ. ಆದರೆ ನಿಸರ್ಗದಲ್ಲಿ ಸ್ವಾಭಾವಿಕವಾಗಿ ನಡೆಯುವ ದಿನದ ಅವಧಿಯಲ್ಲಿನ ಏರುಪೇರುಗಳ ಬಗೆಗಿನ ವಿಷಯ ನಿಮ್ಮ ಅರಿವಿಗೆ ಬಂದಿದೆಯಾ? ವೈಜ್ಞಾನಿಕವಾಗಿ ನಾವು ದಿನದ ಅವಧಿಯಲ್ಲಿನ ಏರುಪೇರುಗಳನ್ನು ಗ್ರಹಿಸಿದ್ದೇವೆ. ಅದು ಏಕೆ, ಹೇಗೆ ಮತ್ತು ಯಾರು ಈ ದಿನದ ಅವಧಿಯನ್ನು ಏರುಪೇರಾಗಿಸುತ್ತಿರುವುದು ಎಂಬ ಪ್ರಶ್ನೆ ಕೇಳಿಕೊಂಡರೆ, ಇದಕ್ಕೆ ಸರಿ ಉತ್ತರ: ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತಿರುವುದು ಅಂದರೆ ಭೂಮಿಯ ತಿರುಗುವಿಕೆ!

ಈ ವರ್ಷ ಜೂನ್ 29ರಂದು, ಭೂಮಿಯ ಒಂದು ಅಸಾಮಾನ್ಯ ವಿದ್ಯಮಾನವನ್ನು ನಾವು ಗ್ರಹಿಸಿದ್ದೇವೆ. ಭೂಮಿಯು ಸೂರ್ಯನ ಸುತ್ತ ಸುತ್ತಲು ಒಂದು ವರ್ಷ ಅಂದರೆ 365.25 ದಿನಗಳನ್ನು ತೆಗೆದುಕೊಳ್ಳುವುದು ಹಾಗೂ ತನ್ನ ಅಕ್ಷದ ಸುತ್ತ ತಿರುಗುವುದಕ್ಕೆ 24 ಗಂಟೆಗಳನ್ನು ತೆಗೆದುಕೊಳ್ಳುವ ವಿಚಾರ ನಮಗೆ ತಿಳಿದಿದೆ. 1960ರ ದಶಕದ ನಂತರ ವಿಜ್ಞಾನಿಗಳು ಗ್ರಹದ ತಿರುಗುವಿಕೆಯನ್ನು ಮತ್ತು ಇತರೆ ಚಲನೆಗಳ ಅವಧಿಯನ್ನು ಪರಮಾಣು ಗಡಿಯಾರಗಳೊಂದಿಗೆ ಇನ್ನಷ್ಟು ನಿಖರವಾಗಿ ಅಳೆಯಲು ಪ್ರಾರಂಭಿಸಿದರು. ಇಂತಹ ಪರಮಾಣು ಗಡಿಯಾರದ ಸಹಾಯದಿಂದ ಜೂನ್ 29ರಂದು ಭೂಮಿಯು ತನ್ನ ಅಕ್ಷದ ಸುತ್ತ ಅತೀ ವೇಗವಾಗಿ ತಿರುಗಿದೆ ಎಂದು ತಿಳಿದುಬಂದಿದೆ. ಅಂದಿನ ದಿನದ ಅವಧಿಯು 1960ರಿಂದೀಚೆಗೆ ದಾಖಲಾದ ಅತೀ ಕಡಿಮೆ ದಿನದ ಅವಧಿ ಎಂದು ಕಂಡುಕೊಂಡಿದ್ದೇವೆ! ಅಂದರೆ ದಿನದ ಸಮಯ ಬೇಗ ಮುಗಿದಿದೆ ಎಂದು ಅರ್ಥ. ಅಂದು ನೀವು ಏನು ಕೆಲಸ ಮಾಡುತ್ತಿದ್ದಿರಿ? ಆ ದಿನದಂದು ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸದೆ ಇರುವುದಕ್ಕೆ ಕಾರಣ ಭೂಮಿಯ ತಿರುಗುವಿಕೆಯು ಇರಬಹುದು! ಅಂದು ಭೂಮಿ ವೇಗವಾಗಿ ತಿರುಗಿದೆ.

ಭೂಮಿ ತನ್ನ ಅಕ್ಷದ ಸುತ್ತ ಪಶ್ಚಿಮದಿಂದ ಪೂರ್ವದಿಕ್ಕೆಗೆ ತಿರುಗುತ್ತಿರುವುದರಿಂದ, ಭೂಮಿಯ ಮೇಲೆ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತಂಗತವಾಗುತ್ತಿರುವುದು. ದಿನದಲ್ಲಿ ನಾವು ನೋಡುವ ಸೂರ್ಯನ ಚಲನೆ ಸೂರ್ಯನ ವಾಸ್ತವಿಕ ಚಲನೆಯಲ್ಲ. ಬದಲಾಗಿ ಭೂಮಿ ತಿರುಗುತ್ತಿರುವುದರಿಂದ ಮತ್ತು ತಿರುಗುವ ಭೂಮಿಯ ಮೇಲೆ ನಾವಿರುವುದರಿಂದ ಸೂರ್ಯನು ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಚಲಿಸುತ್ತಿರುವಂತೆ ಕಾಣುತ್ತದೆ. ಭೂಮಿಯು ಪ್ರತಿ 24 ಗಂಟೆಗಳಿಗೊಮ್ಮೆ ತನ್ನ ಅಕ್ಷದ ಮೇಲೆ ಒಂದು ಪೂರ್ಣ ತಿರುಗುವಿಕೆಯನ್ನು ಪೂರ್ಣಗೊಳಿಸುತ್ತದೆ. ಭೂಮಿಯ ಈ ಒಂದು ತಿರುವು ದಿನವನ್ನು ಗುರುತಿಸುತ್ತದೆ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ಚಕ್ರವನ್ನು ಚಾಲನೆ ಮಾಡುತ್ತದೆ. ಈ ಚಲನೆಯ ಪರಿಣಾಮದಿಂದಲೇ ಭೂಮಿಯ ಮೇಲೆ ಶತಕೋಟಿ ವರ್ಷಗಳವರೆಗೆ ಜೀವಸಂಕುಲಗಳನ್ನು ರೂಪಿಸಿ, ಬದುಕಿಸುತ್ತಿದೆ. ಇಂತಹ ಚಲನೆಗಳ ಅಧ್ಯಯನದಲ್ಲಿ ಕುತೂಹಲ ವಿಷಯವೇನೆಂದರೆ, ಈ ವರ್ಷದ ಜೂನ್ 29ರ ಮಧ್ಯರಾತ್ರಿಯು ನಿರೀಕ್ಷೆಗಿಂತ 1.59 ಮಿಲಿಸೆಕೆಂಡ್‌ಗಳಷ್ಟು ಮುಂಚಿತವಾಗಿ ಆಗಮಿಸಿದೆ ಎಂದು ಪರಮಾಣು ಗಡಿಯಾರವು ದಾಖಲಿಸಿರುವುದು!

ಕಳೆದ ಕೆಲವು ವರ್ಷಗಳಲ್ಲಿ ಇಂತಹ ಕಡಿಮೆ ದಿನದ ಅವಧಿಯನ್ನು ಹೆಚ್ಚೆಚ್ಚು ಗುರುತಿಸಲಾಗಿದೆ. ಕಳೆದ 50 ವರ್ಷಗಳಲ್ಲಿ ಸುಮಾರು 28 ಕಡಿಮೆ ದಿನದ ಅವಧಿಯ ದಿನಗಳು 2020ರಲ್ಲಿಯೇ ದಾಖಲಾಗಿವೆ. ಇದರಲ್ಲಿ ಜುಲೈ 19 ರಂದು ದಾಖಲಾಗಿರುವುದು ಆ ವರ್ಷದ ಅತೀ ಕಡಿಮೆ ದಿನದ ಅವಧಿ. ಅಂದರೆ, 2020 ಜುಲೈ 19ರ ಮಧ್ಯರಾತ್ರಿಯು 1.47 ಮಿಲಿಸೆಕೆಂಡ್‌ಗಳಷ್ಟು ಮುಂಚಿತವಾಗಿಯೇ ಆಗಮಿಸಿತ್ತು. ಜೊತೆಗೆ, ಈ ವರ್ಷದ ಜುಲೈ 26ರಂದೂ ಕೂಡ ಮಧ್ಯರಾತ್ರಿಯು 1.50 ಮಿಲಿಸೆಕೆಂಡ್‌ಗಳಷ್ಟು ಮುಂಚಿತವಾಗಿಯೇ ಆಗಮಿಸಿ, ಜೂನ್ 29ರ ದಾಖಲೆಯನ್ನು ಮುರಿಯುವ ಹಂತದಲ್ಲಿತ್ತು.

ಇದೆಲ್ಲವನ್ನು ಗಮನಿಸಿದರೆ ಜಗತ್ತು ವೇಗವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಮನುಷ್ಯನ ಜೀವಿತಾವಧಿಯ ಕಾಲಮಾನದಂತೆ ಭೂಮಿಯ ಜೀವಿತಾವಧಿಯ ಕಾಲಮಾನವನ್ನು ಗ್ರಹಿಸಿ ಹೇಳುವುದಾದರೆ ನಾವು ಕಣ್ಣು ಮಿಟುಕಿಸುವ ಸಮಯದ ಅವಧಿಯಲ್ಲಿ ಭೂಮಿಯ ಮೇಲೆ ಡೈನೋಸಾರ್‌ಗಳು ಜೀವಿಸಿ, ನಶಿಸಿಹೊಗಿವೆ. ಅಷ್ಟು ಅನಂತವಾಗಿದೆ ಈ ಭೂಮಿಯ ಭೌಗೊಳಿಕ ಕಾಲಮಾನ (Geological Timescale). ಈ ಕಾಲಮಾನದ ದೀರ್ಘಾವಧಿಯಲ್ಲಿ ನಾವು ಭೂಮಿಯ ತಿರುಗುವಿಕೆಯನ್ನು ಅಧ್ಯಯನ ಮಾಡಿದರೆ ಈಗ ಭೂಮಿಯು ಕಡಿಮೆ ವೇಗದಲ್ಲಿ ತಿರುಗುತ್ತಿದ್ದು, ಹಿಂದೆ ಇದು ವೇಗವಾಗಿ ತಿರುಗುತ್ತಿದ್ದನ್ನು ನಾವು ಕಂಡುಕೊಂಡಿದ್ದೇವೆ. ಸುಮಾರು 140 ಕೋಟಿ ವರ್ಷಗಳ ಹಿಂದೆ ಭೂಮಿಯ ಒಂದು ದಿನ 19 ಗಂಟೆಗಳಿಗೂ ಕಡಿಮೆ ಇತ್ತು, ಈಗ ಇದು 24 ಗಂಟೆಗಳಾಗಿದೆ. ವೈಜ್ಞಾನಿಕವಾಗಿ ಲೆಕ್ಕ ಹಾಕಿರುವ ಪ್ರಕಾರ ಪ್ರತಿ ವರ್ಷ ಒಂದು ದಿನದ ಅವಧಿಯು (Both Day and Night) ಎಪ್ಪತ್ತ ನಾಲ್ಕು ಸಾವಿರದ ಒಂದನೇ ಬಾಗದಷ್ಟು ಸೆಕೆಂಡುಗಳಷ್ಟು ದೀರ್ಘವಾಗುತ್ತಿದೆ. ಇದಕ್ಕೆ ಕಾರಣ ಬೆಳದಿಂಗಳಾಗಿ ಹೊಳೆಯುವ, ಭೂಮಿಯ ಉಪಗ್ರಹವಾದ ಚಂದಿರ. ಭೂಮಿ ಮತ್ತು ಚಂದ್ರನ ಗುರುತ್ವ ಬಲದ ಎಳೆತವು ಭೂಮಿಯ ತಿರುಗುವಿಕೆಯನ್ನು ನಿಧಾನಗೊಳಿಸುತ್ತಿದೆ.

ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವು ನಮ್ಮ (ನಾಗರಿಕರು ಬಳಸುವ ಸಮಯ- Civil Time) ಗಡಿಯಾರಗಳ ಸಮಯವನ್ನು ಗ್ರಹಗಳ ತಿರುಗುವಿಕೆಯ ಸಮಯದಲ್ಲಾಗುವ ಬದಲಾವಣೆಯ ಅನುಗುಣವಾಗಿ ಇರಿಸಲು ಕಲವೊಂದು ವಿಧಾನವನ್ನು ಕಂಡುಕೊಂಡಿದೆ. ಗ್ರಹಗಳ ತಿರುಗುವಿಕೆ ಅಂದರೆ ಭೂಮಿಯ ತಿರುಗುವಿಕೆಯ ಅವಧಿಯ ಆಧಾರದಲ್ಲಿ ವರ್ಷದ ಜೂನ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಅಧಿಕ ಸೆಕೆಂಡ್‌ಗಳನ್ನು ಸೇರಿಸಲು ನಿರ್ಧರಿಸಿದೆ. ನಿಮಗೆ ನೆನಪಿದ್ದರೆ 2016ರಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿಯಂದು ಗಡಿಯಾರಕ್ಕೆ ಒಂದು ಅಧಿಕ ಸೆಕೆಂಡ್‌ಅನ್ನು ಸೇರಿಸಿ 2017ರ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಅಂದರೆ ಡಿಸೆಂಬರ್ 31ರ ಮಧ್ಯರಾತ್ರಿ 11 ಗಂಟೆ 59 ನಿಮಿಷ 59 ಸೆಕೆಂಡ್‌ನಿಂದ 2017ರ ಮುಂಜಾನೆ 00:00:00 ಸಮಯವಾಗಲು ಎರಡು ಸೆಕೆಂಡಿನ ಕಾಲಾವಕಾಶ ನೀಡಲಾಯಿತು! ಈ ಮೊದಲು 1972ರಲ್ಲಿಯೂ ಹೀಗೆ ಅಧಿಕ ಸೆಕೆಂಡ್ ಸೇರಿಸಲಾಗಿತ್ತು. ಈ ರೀತಿ ಲೆಕ್ಕಹಾಕಿರುವ ಪ್ರಕಾರ ಈ ವರ್ಷ ಡಿಸೆಂಬರ್ 31ರ ಮಧ್ಯರಾತ್ರಿಯೂ ಕೂಡ ಅಧಿಕ ಸೆಕೆಂಡ್ ಸೇರಿಸುವ ಪ್ರಸ್ತಾವನೆ ಇದೆ. ಆದರೆ, ಭೂಮಿಯ ಈ ಅನಿರೀಕ್ಷಿತ ವೇಗವಾಗಿ ತಿರುಗುವಿಕೆಯು ವರ್ಷಾಂತ್ಯದಲ್ಲಿ ಅಧಿಕ ಸೆಕೆಂಡ್ ಸೇರಿಸಲು ಅವಕಾಶ ನೀಡುವುದೋ ಇಲ್ಲವೋ ಇನ್ನೂ ತಿಳಿಯದ ವಿಚಾರ.

ಭೂಮಿಯ ಭೌಗೋಳಿಕ ಕಾಲಮಾನದಲ್ಲಿ ಭೂಮಿಯ ತಿರುಗುವಿಕೆಯ ಅವಧಿ ಕಡಿಮೆಯಾಗುತ್ತಿದ್ದರೆ, ಕೆಲವು ನಿರ್ದಿಷ್ಠ ದಿನದಂದು ಭೂಮಿಯ ತಿರುಗುವಿಕೆಯ ಅವಧಿಯು ಏರುವುದು ಮತ್ತು ಇಳಿಯುವುದನ್ನು ಗಮನಿಸುತ್ತಿದ್ದೇವೆ. ಭೂಮಿಯ ಕೇಂದ್ರಭಾಗದಲ್ಲಿ ಅತೀ ಭಾರವಾದ ಲೋಹಗಳು ಕರಗಿದ ತಿರುಳಿದೆ, ಇದರೆ ಮೇಲೆ ಅತ್ಯಂತ ನಿಧಾನವಾಗಿ ಚಲಿಸಬಹುದಾದ ಭೂ ಪ್ರದೇಶವಾದ ಖಂಡಗಳು ಮತ್ತು ಸಾಗರಗಳಿವೆ; ಇದರೆ ಜೊತೆಗೆ ಅನಿಲದ ವಾತಾವರಣದ ಹೊದಿಕೆಯು ಭೂಮಿಯನ್ನು ಸುತ್ತುವರಿದಿದೆ. ಜೊತೆಗೆ ಭೂಮಿ ತನ್ನ ಅಕ್ಷದ ಸುತ್ತ ತಿರುಗುವಾಗ ಕೂಡ ಬುಗರಿಯಂತೆ ಅತ್ತಿತ್ತಾ ವಾಲಾಡುತ್ತಾ ತಿರುಗುತ್ತಿದೆ. ಭೂಮಿಯ ಈ ಎಲ್ಲಾ ಭಾಗಗಳು ಮತ್ತು ಇದರೆ ಒಟ್ಟು ಚಲನೆಗಳಿಂದ ಭೂಮಿಯ ತಿರುಗುವಿಕೆಯ ಅವಧಿ ಏರಬಹುದು ಅಥವಾ ಇಳಿಯಬಹುದು. ಸಾಮಾನ್ಯವಾಗಿ ಇಂತಹ ಅತೀ ಸೂಕ್ಷ್ಮ ಬದಲಾವಣೆಗಳು ನಮ್ಮ ಗ್ರಹಿಕೆಗೆ ಬರುವುದಿಲ್ಲ.

ಸಾಗರಗಳ ತಾಪಮಾನವು ಸರಾಸರಿ ತಾಪಮಾನಕ್ಕಿಂತಲೂ ಹೆಚ್ಚಾದಾಗ ವಾತಾವರಣದಲ್ಲಿ ಒಣಹವೆ ಹೆಚ್ಚಾಗಿ ಅತಿ ಹೆಚ್ಚು ಬಲವಾದ ಗಾಳಿ ಬೀಸುವುದರಿಂದ ಭೂಮಿಯ ತಿರುಗುವಿಕೆಯ ಅವಧಿ ಕಡಿಮೆಯಾಗಿ ದಿನದ ಅವಧಿಯು ಕೆಲವು ಮಿಲಿ ಸೆಕೆಂಡುಗಳ ಕಾಲ ಹೆಚ್ಚುತ್ತದೆ. ಭೂಕಂಪನವು ಇದರ ವಿರುದ್ಧವಾದ ಪರಿಣಾಮವನ್ನು ಬೀರುತ್ತದೆ. 2004ರಲ್ಲಿ ಇಂಡೋನೆಷಿಯಾದಲ್ಲಿ ನಡೆದ ಭೂಕಂಪನದಿಂದ ಮತ್ತು ಸುನಾಮಿಯಿಂದ ನಡುಗಿದ ಭೂಪ್ರದೇಶದ ಕಾರಣದಿಂದ ಅಂದಿನ ದಿನದ ಅವಧಿಯು ಮೈಕ್ರೊ ಸೆಕೆಂಡಿನಷ್ಟು ಕಡಿಮೆಯಾಗಿದ್ದನ್ನು ಗಮನಿಸಲಾಗಿದೆ. ಭೂಮಿಯ ತಿರುಳಿನ ದಿಕ್ಕಿಗೆ ದ್ರವ್ಯವು ಚಲಿಸಿದರೆ ಭೂಮಿಯ ತಿರುಗುವಿಕೆಯ ಅವಧಿ ಏರಿಕೆಯಾಗುತ್ತದೆ. ಭೂಮಿಯ ತಿರುಳಿನ ಭಾಗದಿಂದ ದ್ರವ್ಯವು ಹೊರದೂಡಲ್ಪಟ್ಟರೆ, ಅದು ಭೂಮಿಯ ತಿರುಗುವಿಕೆಯ ಅವಧಿಯನ್ನು ಕಡಿಮೆ ಮಾಡುತ್ತದೆ; ಇದು ಭೌತವಿಜ್ಞಾನ ಹೇಳುವ ನಿಯಮ.

ಭೂಮಿಯ ಈ ಎಲ್ಲಾ ವಿಭಿನ್ನ ವಿದ್ಯಮಾನಗಳು ದಿನದ ಅವಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ವಿಜ್ಞಾನಿಗಳಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಭೂಮಿಯು ಕೆಲವೊಮ್ಮೆ ಅನಿರೀಕ್ಷಿತವಾಗಿ ವೇಗವಾಗಿ ತಿರುಗುವುದು ಮುಂದಿನ ದಿನಗಳಲ್ಲಿಯೂ ಮುಂದುವರಿದರೆ ಇಲ್ಲಿಯವರೆಗೂ ವರ್ಷಾರ್ಧ ಅಥವಾ ವರ್ಷಾಂತ್ಯದಲ್ಲಿ ನಮ್ಮ ಗಡಿಯಾರಗಳಿಗೆ ಅಧಿಕ ಸೆಕೆಂಡ್ ಸೇರಿಸುವ ಬದಲಾಗಿ, ಒಂದು ಸೆಕೆಂಡ್‌ಅನ್ನು ಕಡಿತಗೊಳಿಸಬೇಕಾಗಬಹುದೇನೋ?

ಈ ಲೇಖನಕ್ಕೆ ಸ್ಪೂರ್ತಿಯಾದದ್ದು: https://www.theguardian.com/science/2022/aug/01/midnight-sooner-earth-spins-faster-shortest-day


ಇದನ್ನೂ ಓದಿ: ನಭೋಮಂಡಲ ಕೌತುಕವನ್ನು ಸೊಬಗಿನಲ್ಲಿ ಸೆರೆಹಿಡಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...