Homeಅಂಕಣಗಳುಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..

ಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..

- Advertisement -
- Advertisement -

ಚಕ್ರತೀರ್ಥನ ಕಾಯಿಲೆ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಷಿಗೂ ಬಡಿದುಕೊಂಡಿದೆಯಂತಲ್ಲಾ. ಈ ಬಿಜೆಪಿಗಳದ್ದು ಅಂಟು ರೋಗ. ಈ ರೋಗದ ವಿಶೇಷ ಏನೆಂದರೆ ಎಲ್ಲವೂ ಒಂದೇ ತರಹ ಮಾತನಾಡುತ್ತವೆ ಮತ್ತು ಆಡಿದ್ದನ್ನು ಮಾಡಲು ಹೋಗುತ್ತವೆ. ಇದಕ್ಕೆ ನೂರಾರು ಉದಾಹರಣೆಗಳಿವೆ. ಈ ಸಾಹಿತ್ಯ ಪರಿಷತ್ ಜೋಷಿಯವರನ್ನೇ ನೋಡಿ; ಈತ ಆಯ್ಕೆಯಾಗಿ ಬಂದಾಗ ಬಡಿದುಕೊಂಡ ರೋಗ ಯಾವುದೆಂದರೆ ಜನರನ್ನು ಶುದ್ಧ ಕನ್ನಡದಲ್ಲಿ ಮಾತನಾಡುವಂತೆ ಮಾಡಬೇಕೆಂಬುದು; ಶುದ್ಧ ಕನ್ನಡ ಅಂದರೆ ಏನು ಎಂಬುದು ಆತನಿಗೇ ಗೊತ್ತಿರಲಿಲ್ಲ. ಹಲವು ಕನ್ನಡಗಳಲ್ಲಿ ಅದ್ಲಿಸಿದಾಗ ಸುಮ್ಮನಾದರು. ಆದರೆ ಕಾಯಿಲೆ ಜನಕ್ಕೆ ಹಲವು ಕಾಯಿಲೆಗಳು ಅಂಟುವುದು ಸಾಮಾನ್ಯ. ಈಗ ಜೋಷಿಗೆ ಪಂಪ ಮಹಾಕವಿಯ ರಸ್ತೆ ಹೆಸರು ಬದಲಿಸುವ ಕಾಯಿಲೆ ಕಾಣಿಸಿಕೊಂಡಿದೆ. ಅದಕ್ಕಾಗಿ ಆತನ ಅಣ್ಣನಂತಿರುವ ಬೊಮ್ಮಾಯಿಗೆ ಪರಮಿಷನ್ ಕೇಳಿದ್ದಾರಂತೆ! ಇಂಗ್ಲಿಷ್ ಭಾಷೆಯನ್ನ ಮಾತನಾಡುವ ಜನಗಳು ತೊಗಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ನಾಗರಿಕ ಜಗತ್ತಿನೆಡೆಗೆ ನಡೆಯಲು ಯತ್ನಿಸುತ್ತಿದ್ದಾನೆ ಇಲ್ಲಿ ಕನ್ನಡದ ಆದಿಕವಿ ಪಂಪ ಮಹಾಕಾವ್ಯವನ್ನೆ ಬರೆದಿದ್ದ ಎಂದು ಕುವೆಂಪು ಹೇಳಿದ್ದಾರೆ. ಜೋಷಿ ಆ ಮಹಾಕಾವ್ಯವನ್ನು ಓದಿ ಜೀರ್ಣಿಸಿಕೊಂಡು ಮಾತನಾಡುವುದಬಿಟ್ಟು ರಸ್ತೆ ಹೆಸರನ್ನೇ ಬದಲಿಸಹೊರಟಿರುವುದು ಶುದ್ದ ಮೂರ್ಖತನ. ಪಂಪನ ಮಾರ್ಗದಿಂದಲೇ ಸಾಹಿತ್ಯ ಪರಿಷತ್ ಪ್ರವೇಶ ನಡೆಯುತ್ತ ಬಂದಿದೆ ಎಂಬುದೇ ಜೋಷಿಗೆ ಗೊತ್ತಿಲ್ಲವಂತಲ್ಲಾ, ಥೂತ್ತೇರಿ.

******

ತೇಜಸ್ವಿ ಸೂರ್ಯ ಎಂಬ ಸಂಸದ ಹೋಟಲಿಗೆ ಹೋಗಿ ದೋಸೆ ತಿನ್ನುವುದನ್ನು ಆಡಿಕೊಂಡ ಕೆಲವರು ದೋಸೆ ಸೂರ್ಯ ಎಂದು ನಾಮಕರಣ ಮಾಡಿದ್ದಾರಲ್ಲಾ. ಇಂತಹ ಹೆಸರನ್ನು ಸಂಪಾದಿಸುವುದು ಸಾಮಾನ್ಯವಲ್ಲ. ಬೊಂಡ ರಮೇಶ ಮುದ್ದೇಗೌಡರು, ಬಿರಿಯಾನಿ ಜಮೀರು, ಉಪ್ಪೆಸಾರಿನ ಪುಟ್ಟಸ್ವಾಮಿ, ತೂತುವಡೆ ಶ್ರೀಕಂಠಯ್ಯ, ಬಾಡೂಟದ ಕೃಷ್ಣಪ್ಪ ಇವೆಲ್ಲ ನಮ್ಮ ರಾಜಕಾರಣದಲ್ಲಿ ಹಿಂದೆ ನಮ್ಮ ನಾಯಕರು ಸಂಪಾದಿಸಿದ ಹೆಸರುಗಳು. ಅದರೊಳಕ್ಕೆ ಈಗ ದೋಸೆ ಸೂರ್ಯ ಸೇರಿಕೊಂಡಿದ್ದಾರೆ ಅಷ್ಟೇ. ಮುಖ್ಯವಾಗಿ ಆತನ ಕಡೆಯವರಿಗೆ ದೋಸೆ ಅಂದರೆ ಪ್ರಾಣ. ಮೂರು ದೋಸೆ ಕೊಟ್ಟರೆ ಈ ಕಡೆ ಬರುತ್ತವೆ ಆರು ದೋಸೆ ಕೊಟ್ಟರೆ ಈ ಕಡೆ ಹೋಗುತ್ತವೆ. ಅದರಲ್ಲೂ ಮಸಾಲದೋಸೆ ಎಂದರೆ ಮುಗಿದೇ ಹೋಯ್ತು, ಮೈ ಮರೆತು ತಿನ್ನುತ್ತವೆ. ಹಾಗೇ ತೇಜಸ್ವಿಸೂರ್ಯ ಇಡೀ ಬೆಂಗಳೂರು ಸೊಂಟಮಟ ಮುಳುಗಿರುವಾಗ ಬಿಸಿಬಿಸಿ ದೋಸೆ ತಿನ್ನುತ್ತ ನೀವು ಬಂದು ತಿನ್ನಿ ಎಂದು ಹೋಟೆಲ್ ಅಡ್ರೆಸ್ ಹೇಳಿದ್ದಕ್ಕೆ ಜನಗಳು ನಖಶಿಖಾಂತ ಕೆರಳಿ ಕ್ಯಾಕರಿಸಿದ್ದಾರೆ. ಸಿಟ್ಟಾಗಿರುವ ಆತನ ಸಂಬಂಧಿ ಭಗವಾನ್ ಎಂಬ ದೋಸೆ ಪ್ರಿಯ, ನಮ್ಮ ಸೂರ್ಯ ಸುಮ್ಮಸುಮ್ಮನೆ ದೋಸೆ ತಿಂದಿಲ್ಲ; ಕೆರೆಯಂತಾಗಿರುವ ಬೆಂಗಳೂರು ನೀರನ್ನು ಹೊರಗೆ ಹಾಕಲು ಏನು ಮಾಡಬೇಕೆಂದು ಯೋಚಿಸುತ್ತ ದೋಸೆ ಅಗಿದಿದ್ದಾರೆ; ಸಾರ್ವಜನಿಕರೊಂದಿಗೆ ಸೇರಲು ದೋಸೆಗಿಂತ ತಿನಿಸೇ ಇಲ್ಲ ಎಂದು ಕೂಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಕರ್ನಾಟಕಕ್ಕೆ ಇದು ಕೆಟ್ಟ ಕಾಲ. ಏಕೆಂದರೆ ಜನಾಭಿಪ್ರಾಯವಿಲ್ಲದ ಮತ್ತು ಶಾಸಕರ ಬೆಂಬಲವೂ ಇಲ್ಲದ ಮುಖ್ಯಮಂತ್ರಿಯೊಬ್ಬರು ಅಕಸ್ಮಾತ್ ವಕ್ಕರಿಸಿ ಅಬ್ಬರಿಸಿದ್ದಾರಂತಲ್ಲಾ. ಈ ಅಬ್ಬರದ ಹೆಸರು ’ಜನೋತ್ಸವ’. ಈ ಸರಕಾರದ ಸಾಧನೆಯ ಪಟ್ಟಿ ಮಾಡುವುದಾದರೆ ಜೋಗದಲ್ಲಿ ಜನರೇಟರ್ ಆನ್ ಆದ ಕೂಡಲೆ ಅರ್ಧ ನಾಡಿನ ಲೈಟ್ ಹಚ್ಚಿಕೊಳ್ಳುವಂತೆ, ಮುಸ್ಲಿಂ ಹೆಣ್ಣು ಮಕ್ಕಳ ಹಿಜಾಬ್ ಪ್ರತಿಭಟನೆ ಉಡುಪಿಯಿಂದ ಬೇರೆ ಕಡೆಗೆ ಹರಡಿಸಿದ್ದು. ನಂತರ ಮುಸ್ಲಿಮರ ಅಂಗಡಿಗೆ ಹೋಗದಂತೆ ಮಾಡಿ ಎಂದದ್ದು, ಮುಸ್ಲಿಂ ಹಣ್ಣಿನ ಅಂಗಡಿ ಧ್ವಂಸ ಮಾಡಿದ್ದು, ಅವರ ಆಜಾನ್ ಶಬ್ದ ನಿಲ್ಲಿಸಲು ಹೋರಾಡಿದ್ದು ಇತ್ಯಾದಿ. ಸುದೈವಕ್ಕೆ ನಲವತ್ತು ಪರಸೆಂಟ್ ಲಂಚ, ಪಿಎಸ್‌ಐ ಹಗರಣ, ಶಿಕ್ಷಣ ಇಲಾಖೆಯಲ್ಲಿನ ಹಗರಣ ಎಲ್ಲವೂ ಮುಸ್ಲಿಮರ ವಿರುದ್ಧದ ಹೋರಾಟಗಳು ಹಿನ್ನಡೆಯಾಗುವಂತೆ ಮಾಡಿದವು. ಇದರ ಜೊತೆಗೆ ಬೆಂಗಳೂರು ಹಿಂದೆಂದೂ ಕಂಡರಿಯದ ಜಲಪ್ರಳಯಕ್ಕೆ ಸಿಕ್ಕಿ ಮುಳುಗಿತು. ಇಂತಹ ಸಮಯದಲ್ಲಿ ಸಾಧನೆಯ ಸಮಾವೇಶ ಮಾಡಿ ನಿಮಗೆ ತಾಕತ್ತಿದ್ದರೆ ತಡೆಯಿರಿ ಎಂದು ಕೀರಲು ಗಂಟಲಲ್ಲಿ ಕಿರುಚಿದ ಬೊಮ್ಮಯಿ ಮಾತಿಗೆ ಜಾಕ್ಸನ್ ಮತ್ತು ಪ್ರಭುದೇವನೆ ನಾಚಿಕೊಳ್ಳುವಂತೆ ಎಂಟಿಬಿ ಫ್ರೆಂಡ್ಸ್ ಕುಣಿದರಂತಲ್ಲಾ. ಇತ್ತ ಕಾಂಗೈನ ಕಿಡಿಗೇಡಿಗಳು ಬೊಮ್ಮಾಯಿಯ ಮಾತಿಗೆ ಬಿದ್ದುಬಿದ್ದು ನಗುತ್ತ ನಮ್ಮ ಸಿದ್ದರಾಮಯ್ಯನ ತಾಕತ್ತಿನ ಬಗ್ಗೆ ಮಾತಾಡ್ತೀರಾ, ನಿಮಗೆ ತಾಕತ್ತಿದ್ದರೆ ಸಂಪುಟ ವಿಸ್ತರಿಸಿ ಸರಿಯಾಗಿ ನಡೆಯಿರಿ ನೋಡೋಣ ಎಂದವಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ‘ನಿಮ್ಮ ಪಾರ್ಟಿಲಿ ಶೀಲವಂತ್ರೆ ಇಲ್ಲವಲ್ಲ ಸಾರ್?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...