ಮಂಗಳವಾರ ಪಾಟ್ನಾದಲ್ಲಿ ನಡೆದ ಯುನಿಸೆಫ್ ಮತ್ತು ರಾಜ್ಯ ಸರ್ಕಾರವು ಜಂಟಿಯಾಗಿ ಆಯೋಜಿಸಿದ ‘ಸಶಕ್ತ್ ಬೇಟಿ, ಸಮ್ರದ್ದ್ ಬಿಹಾರ’ ಎಂಬ ಕಾರ್ಯಗಾರದಲ್ಲಿ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗೆ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮ (ಡಬ್ಲ್ಯುಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್ ಕೌರ್ ಬಾಮ್ಹ್ರಾ ಉದ್ಧಟತನದಿಂದ ಉತ್ತರಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸರ್ಕಾರ ಸ್ಯಾನಿಟರಿ ಪ್ಯಾಡ್ ಯಾಕೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್, “ಇವತ್ತು ನೀವು ಸ್ಯಾನಿಟರಿ ಪ್ಯಾಡ್ ಕೇಳುತ್ತೀರಿ, ನಾಳೆ ಜೀನ್ಸ್ ಕೇಳುತ್ತಾರೆ, ಆನಂತರ ಉತ್ತಮ ಬೂಟುಗಳು ಮತ್ತು ಅಂತಿಮವಾಗಿ ಕುಟುಂಬ ಯೋಜನೆಗಾಗಿ ನಿರೋಧ್ಗಳನ್ನು ಕೂಡಾ ಕೇಳುತ್ತೀರಿ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಜಕಾರಣಿಗಳು ಮತಗಳನ್ನು ಕೇಳುತ್ತಾರೆ, ಹೀಗಿರುವಾಗ ಕೆಲವು ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿನಿ ವಾದಿಸಿದಾಗ,“ಮತವನ್ನು ಹಾಕಬೇಡಿ, ಪಾಕಿಸ್ತಾನ ಮಾಡಿ ಈ ದೇಶವನ್ನು. ಹಣ ಅಥವಾ ಸೌಕರ್ಯಗಳಿಗಾಗಿ ನೀವು ಮತ ಚಲಾಯಿಸುತ್ತೀರಾ?” ಎಂದು ಐಎಎಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಸಾವಿನ ಸಂಖ್ಯೆಯ ಚರ್ಚೆ ಮಾಡಿದ್ರೆ ಮತ್ತೆ ಅವ್ರು ಹುಟ್ಟಿ ಬರುತ್ತಾರ?: ಹರಿಯಾಣ ಸಿಎಂ ಉದ್ಧಟತನ
ಡಬ್ಲ್ಯುಡಿಸಿ ರಾಜ್ಯ ಸರ್ಕಾರದ ಸಾಮಾಜಿಕ ಕಲ್ಯಾಣ ವಿಭಾಗದ ಅಡಿಯಲ್ಲಿ ಬರುತ್ತದೆ ಮತ್ತು ಮಹಿಳೆಯರಿಗಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ನೋಡಲ್ ಏಜೆನ್ಸಿಯಾಗಿದೆ.
ಕಾರ್ಯಾಗಾರ ನಡೆಯುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿನಿ,“ಸರ್ಕಾರವು ನಮಗೆ ಸಮವಸ್ತ್ರ ಮತ್ತು ವಿದ್ಯಾರ್ಥಿವೇತನವನ್ನು ನೀಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿದೆ. ಹೀಗಿರುವಾಗ, ಕೇವಲ 20-30ರೂ. ಗಳ ಸ್ಯಾನಿಟರಿ ಪ್ಯಾಡ್ಗಳನ್ನು ಏಕೆ ನೀಡಲು ಸಾಧ್ಯವಿಲ್ಲ” ಎಂದು ಕೇಳುತ್ತಾರೆ.
ವಿದ್ಯಾರ್ಥಿನಿಯ ಪ್ರಶ್ನೆಗೆ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಪ್ರಶ್ನೆಯನ್ನು ಮೆಚ್ಚುತ್ತಿದ್ದಂತೆ ಉತ್ತರಿಸಿದ ಹರ್ಜೋತ್ ಕೌರ್, “ಇಂತಹ ಬೇಡಿಕೆಗಳಿಗೆ ಅಂತ್ಯವಿಲ್ಲ ಎಂದು ಈ ಚಪ್ಪಾಳೆ ತಿಳಿದಿರಬೇಕು. ಸರ್ಕಾರವು ಸ್ಯಾನಿಟರ್ ಪ್ಯಾಡ್ಗಳನ್ನು ನೀಡುತ್ತದೆಯೇ ಎಂಬುದು ಪ್ರಶ್ನೆ. ನಾಳೆ ಜೀನ್ಸ್ ಕೇಳುತ್ತಾರೆ, ನಾಡಿದ್ದು ಶೂಗಳಿಗೆ ಬೇಡಿಕೆ ಇಡುತ್ತಾರೆ ಮತ್ತು ಅಂತಿಮವಾಗಿ ಕುಟುಂಬ ಯೋಜನೆಗೆ ಉಚಿತ ನಿರೋಧ್ಗಳಿಗೆ ಬೇಡಿಕೆ ಬರಬಹುದು” ಎಂದು ಹೇಳುತ್ತಾರೆ.
ಇದನ್ನೂ ಓದಿ: ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ ಡಾ. ಅನಂತಕೃಷ್ಣ…
ಸರ್ಕಾರದಿಂದಲೇ ಎಲ್ಲವನ್ನೂ ಒತ್ತಾಯಿಸಬಾರದು ಎಂದು ಐಎಎಸ್ ಅಧಿಕಾರಿ ಹೇಳುತ್ತಾರೆ.“ಸರ್ಕಾರದೊಂದಿಗೆ ಎಲ್ಲವನ್ನೂ ಕೇಳುವ ಅಗತ್ಯ ಏನಿದೆ. ನಿಮಗೆ ಬೇಕಾಗಿದ್ದು ನೀವು ಸಂಪಾದನೆ ಮಾಡಿದೆ. ಸರ್ಕಾರದ ಅನೇಕ ಯೋಜನೆಗಳು ಇವೆ. ಆದರೆ ಸರ್ಕಾರವೆ ಎಲ್ಲವನ್ನೂ ನೀಡಬೇಕು, 20-30 ರೂ. ನೀಡಲು ಸಾಧ್ಯವಿಲ್ಲವೆ ಎಂಬ ಈ ಚಿಂತನೆ ತಪ್ಪಾಗಿದೆ. ಸರ್ಕಾರ ತುಂಬಾ ವಸ್ತಗಳನ್ನು ನೀಡುತ್ತಿದೆ” ಎಂದು ಅವರು ಹೇಳುತ್ತಾರೆ.
क्या सरकार 20-30 रुपए का सैनिटरी पैड नहीं दे सकती?
जवाब- इस माँग का कोई अंत है? कल को जींस पैंट भी दे सकते हैं. परसों सुंदर जूते भी दे सकते हैं. अंत में निरोध भी मुफ़्त में ही देना पड़ेगा. ये बेवकूफी की इंतहा है. पाकिस्तान चली जाओ.
बिहार महिला एवं बाल विकास निगम की MD को सुनिए. pic.twitter.com/lVMGiK7L9D
— Utkarsh Singh (@UtkarshSingh_) September 28, 2022
ಇದನ್ನೂ ಓದಿ: ಮಾತು ಮರೆತ ಭಾರತ; ಸ್ವತಂತ್ರ ಪೂರ್ವ ಭಾರತದ ಕೆಲವು ದಲಿತ್ ಫೈಲ್ಸ್
ಅಧಿಕಾರಿಯ ಉದ್ಧಟತನವನ್ನು ಬಿಹಾರ ಶಿಕ್ಷಕರ ಅರ್ಹತಾ ಪರೀಕ್ಷೆ ಸಂಘದ ಅಧ್ಯಕ್ಷ ಅಮಿತ್ ವಿಕ್ರಮ್ ಖಂಡಿಸಿದ್ದಾರೆ. “ಡಬ್ಲ್ಯುಡಿಸಿ ನಿರ್ದೇಶಕಿ ಹುಡುಗಿಯ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಅವರು ಬಹುಶಃ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳ ಲಭ್ಯತೆಯನ್ನು ಕೇಳುತ್ತಿದ್ದರು. 6 ರಿಂದ 12 ನೇ ತರಗತಿಯವರೆಗಿನ ಪ್ರತಿ ವಿದ್ಯಾರ್ಥಿನಿಯರಿಗೆ ಸರ್ಕಾರವು 300 ರೂಗಳನ್ನು ನೀಡಿದ್ದರೂ, ಅವರಲ್ಲಿ ಹೆಚ್ಚಿನವರು ಸ್ಯಾನಿಟರಿ ಪ್ಯಾಡ್ಗಳನ್ನು ಶಾಲೆಗಳಿಗೆ ಕೊಂಡೊಯ್ಯುವುದಿಲ್ಲ. ಐಎಎಸ್ ಅಧಿಕಾರಿ ವಿಭಿನ್ನವಾಗಿ ಉತ್ತರಿಸಬೇಕಾಗಿತ್ತು, ಆದರೆ ಅವರು ಪ್ರಶ್ನೆ ಕೇಳಿದ ವಿದ್ಯಾರ್ಥಿಯನ್ನು ಅವಮಾನಿಸಿದರು” ಎಂದು ಅವರು ಹೇಳಿದ್ದಾರೆ.
“ಬಾಲಕಿಯೊಂದಿಗೆ ಅಧಿಕಾರಿ ಮಾತನಾಡಿದ ರೀತಿಯು ಕಾರ್ಯಾಗಾರದ ಉದ್ದೇಶವನ್ನೇ ಬುಡಮೇಲು ಮಾಡಿದೆ. ಅವರ ಮಾತುಗಳು ಬೇಜವಾಬ್ದಾರಿಯುತವಾಗಿತ್ತು ಮತ್ತು ಅಸೂಕ್ಷ್ಮವಾಗಿತ್ತು. ಉತ್ತರದಲ್ಲಿ ಪಾಕಿಸ್ತಾನದ ಉಲ್ಲೇಖವನ್ನು ಮಾಡುವ ಅಗತ್ಯವಿರಲಿಲ್ಲ” ಎಂದು ರಾಜಕೀಯ ನಾಯಕರೊಬ್ಬರು ಹೇಳಿದ್ದಾರೆ.
ಬಿಹಾರ ಸಮಾಜ ಕಲ್ಯಾಣ ಸಚಿವ ಮದನ್ ಸಹಾನಿ ಪ್ರತಿಕ್ರಿಯಿಸಿ,“ನಮ್ಮ ಇಲಾಖೆಯು ಹುಡುಗಿಯರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಅಧಿಕಾರಿ ಹುಡುಗಿಯರನ್ನು ನಿರುತ್ಸಾಹಗೊಳಿಸಬಾರದಿತ್ತು. ಕಾರ್ಯಾಗಾರವು ಅವರನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿತ್ತು. ನಮ್ಮ ಇಲಾಖೆಯ ಕಾರ್ಯದರ್ಶಿ ಗುರುವಾರ ನಿರ್ದೇಶಕಿ ಜೊತೆ ಮಾತನಾಡಲಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶೋಷಿತರ ವಲಸೆ ಮತ್ತು ಪ್ರಭುತ್ವ; ಮರದೊಳಗಣ ಬೆಂಕಿ
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಕವಿ ಶಂಕರ್ ಎನ್. ಕೆಂಚನೂರು ಅವರು, “ಐಎಎಸ್ ಅಧಿಕಾರಿಯೊಬ್ಬರು ಪ್ರೈಮರಿ ಸ್ಕೂಲ್ ಹೆಣ್ಣು ಮಕ್ಕಳ ಎದುರು ಆಡಿದ ಮಾತು ಖಂಡನೀಯ. ಅದು ಅಲ್ಲದೆ ಆಕೆ ಕೂಡಾ ಒಬ್ಬ ಮಹಿಳೆಯಾಗಿದ್ದು, ಜೊತೆಗೆ ಬಿಹಾರದ ಸಶಕ್ತ ಬೇಟಿ, ಸದೃಢ ಬಿಹಾರ ಕಾರ್ಯಕ್ರಮದ ಮುಖ್ಯ ಅಧಿಕಾರಿ. ಕೇವಲ ರಾಜಕಾರಣಿಗಳಷ್ಟೇ ಅಲ್ಲ ಈ ದೇಶದ ಅಧಿಕಾರಶಾಹಿ ಕೂಡ ಜಡವಾಗಿ ಹೋಗಿದೆ. ಇವರ ಸಂವೇದನೆಗಳು ಸತ್ತು ಹೋಗಿವೆ. ರಾಜಕಾರಣಿಗಳಿಗಾದರೂ ಜನರ ಹಂಗಿದೆ. ಆದರೆ ಈ ಬ್ಯುರೊಕ್ರಸಿಗೆ ಯಾರ ಹಂಗೂ ಇಲ್ಲ. ಇವು ಬ್ರಿಟಿಷರ ಕಾಲದಿಂದಲೂ ಅರೊಗೆನ್ಸಿಯನ್ನೇ ಉಸಿರಾಡುತ್ತಾ ಬದುಕಿವೆ. ಈಗಲೂ ನಮ್ಮ ಬ್ಯುರೊಕ್ರಸಿ ಕೆಲಸ ಮಾಡೋದು ಬ್ರಿಟಿಷ್ ಆಡಳಿತದ ಅಧಿಕಾರಿಗಳ ಮನಸ್ಥಿತಿಯಲ್ಲಿಯೇ ಹೊರತು ಪ್ರಜಾಪ್ರಭುತ್ವದ ಆಡಳಿತ ರೀತಿಯಲ್ಲಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ



ಆ ವಿದ್ಯಾರ್ಥಿನಿ ಕೇಳಿರುವುದರಿಂದ ತಪ್ಪೇನಿಲ್ಲ ಆದರೆ ಅಧಿಕಾರಿಣಿ ಅರ್ಥಮಾಡಿ ಕೊಳ್ಳಬೇಕಿತ್ತು ಇಂತಹ ಹರಕೆ ಉತ್ತರಗಳಿಂದ ಸರಕಾರಕ್ಕೆ ಮುಜುಗರ