Homeಕರ್ನಾಟಕನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ...

ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ ಡಾ. ಅನಂತಕೃಷ್ಣ ಭಟ್‌

ನಮ್ಮ ವರದಿ ಸಲ್ಲಿಸಿದ್ದು, ನಾನು ಇದಕ್ಕೆಲ್ಲಾ ಉತ್ತರಿಸಲೇ ಬೇಕು ಎಂಬುವುದು ನಿಮ್ಮ ‘ಉದ್ಧಟತನ’ ಎಂದು ಅವರು ಹೇಳಿದ್ದಾರೆ

- Advertisement -
- Advertisement -

ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ, ನಾರಾಯಣ ಗುರುಗಳು ಮತ್ತು ಪೆರಿಯಾರ್‌ ಪಾಠಗಳನ್ನು ಕತ್ತರಿಸಿದ್ದೀರ ಎಂಬ ಪ್ರಶ್ನೆಗೆ, ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ಮರು ಪರಿಷ್ಕರಣೆ ಮಾಡಿರುವ ಸಮಿತಿಯ ಸದಸ್ಯ ಡಾ. ಅನಂತಕೃಷ್ಣ ಭಟ್‌ ಪ್ರತಿಕ್ರಿಯಿಸಿ, “ನನಗೆ ಅದು ನೆನಪಾಗುತ್ತಿಲ್ಲ” ಎಂದು ಹೇಳಿದರು.

ರಾಜ್ಯದ ಪಠ್ಯ ಪುಸ್ತಕ ಹಗರಣದ ಮತ್ತಷ್ಟು ಹುಳುಕುಗಳು ಹೊರಬೀಳುತ್ತಿವೆ. ಮಂಗಳವಾರದಂದು ಸುದ್ದಿ ಪೋರ್ಟಾಲ್‌ ‘ಈದಿನ.ಕಾಂ’ ಹೊರಗೆಡವಿದ ಮಾಹಿತಿಯಂತೆ, ಪರಿಷ್ಕರಣೆಗೆ ಸಮಿತಿ ಸದಸ್ಯರು ನೀಡಿದ್ದ ವರದಿ ಧಿಕ್ಕರಿಸಿ, ಸಮಿತಿ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರು ರಹಸ್ಯ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಮಂಗಳೂರಿನ ಕೆನರಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕರೂ ಆಗಿರುವ ಡಾ. ಅನಂತಕೃಷ್ಣ ಭಟ್‌ ಅವರು, “ಈ ಬಗ್ಗೆಗಿನ ಸುದ್ದಿಯನ್ನು ನಾನು ಇನ್ನೂ ನೋಡಿಲ್ಲ ಹಾಗೂ ಅದರ ವಾಸ್ತವಿಕತೆಯೂ ನನಗೆ ಗೊತ್ತಿಲ್ಲ. ಅಲ್ಲದೆ ಪರಿಷ್ಕೃತ ಪಾಠ ಪುಸ್ತಕಗಳು ನನ್ನ ಕೈಗೆ ಬಂದಿಲ್ಲ” ಎಂದು ತಿಳಿಸಿದ್ದಾರೆ. ವಾಸ್ತವದಲ್ಲಿ 80% ಪಠ್ಯ ಪುಸ್ತಕಗಳನ್ನು ಶಾಲೆಗಳಲ್ಲಿ ಹಂಚಿಕೆ ಮಾಡಿದ್ದಾಗಿ ರಾಜ್ಯದ ಬಿಜೆಪಿ ಸರ್ಕಾರವು ಹೇಳಿಕೊಂಡಿದೆ.

ಡಾ. ಅನಂತಕೃಷ್ಣ ಭಟ್‌ ಅವರು 2014ರಂದು ರಚಿತವಾಗಿದ್ದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಪಠ್ಯ ಪುಸ್ತಕವನ್ನು ನಂತರದಲ್ಲಿ ಪ್ರೊಫೆಸರ್‌ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಪರಿಷ್ಕರಿಸಲಾಗಿತ್ತು. ಆದರೆ ಇದೀಗ ಅದನ್ನು ಮತ್ತೆ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಮರು ಪರಿಷ್ಕರಣೆ ಮಾಡಿಸಲಾಗಿದೆ. ಈ ಸಮಿತಿಯಲ್ಲಿ ಇರುವ ಸದಸ್ಯರಲ್ಲಿ ಅನಂತಕೃಷ್ಣ ಭಟ್ ಅವರೂ ಒಬ್ಬರು.

ಪಠ್ಯ ಪುಸ್ತಕವನ್ನು ಮರು ಪರಿಷ್ಕರಣೆ ಮಾಡಿರುವ ಸಮಿತಿಯ ಯಾವ ಸದಸ್ಯರು ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ, ಈ ಬಗ್ಗೆ ನಿಮಗೆ ಯಾರಾದರೂ ಬೆದರಿಕೆ ಹಾಕಿದ್ದಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಆ ರೀತಿಯಾಗಿ ಏನೂ ಇಲ್ಲ’’ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

ಜನರಿಗಾಗಿ ಸರ್ಕಾರಿ ಸೇವೆಗಳನ್ನು ಮಾಡಿರುವವರು, ಅವುಗಳ ಬಗ್ಗೆ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಬೇಕಲ್ಲವೆ ಎಂಬ ಪ್ರಶ್ನೆಗೆ ಅವರು,“ಉತ್ತರಿಸಲೇ ಬೇಕು ಎಂಬುವುದು ನಿಮ್ಮ ‘ಉದ್ಧಟತನ’. ನಾನು ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಯಾವುದೇ ಶೈಕ್ಷಣಿಕ ಅರ್ಹತೆಯನ್ನು ಈ ವರೆಗೆ ಬಹಿರಂಗಪಡಿಸದ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣೆಯ ಅಧ್ಯಕ್ಷರನ್ನಾಗಿ ಮಾಡಿದ್ದು, ಪಠ್ಯದಲ್ಲಿ ತಪ್ಪುಗಳಾಗಿವೆ ಎಂಬ ಆಕ್ಷೇಪಗಳಿಗೆ ವಿದ್ವಾಂಸರುಗಳಾದ ನೀವು ಯಾರೂ ಮಾತನಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಇದಕ್ಕೆ ನಾನು ಏನು ಕಮೆಂಟ್ ಮಾಡಲಿ ಎಂದು ನೀವೇ ಹೇಳಿ. ನಮ್ಮ ಕೆಲಸಗಳನ್ನು ಮಾಡಿ ಮುಗಿಸಿ ನಾವು ಬಂದಿದ್ದೇವೆ. ಇದರ ನಂತರ ನಮ್ಮ ನಡುವೆ ಸಂವಹನ ನಡೆದಿಲ್ಲ. ಸಂವಹನವೇ ನಡೆಯದಿದ್ದರೆ ನಾವು ಏನು ಕಮೆಂಟ್ ಮಾಡಲಿ?” ಎಂದು ಅವರು ಹೇಳಿದ್ದಾರೆ.

“ನಿಜಾ ಹೇಳಬೇಕೆಂದರೆ, ಈ ವರದಿ ಕೊಟ್ಟು ನಾಲ್ಕು ತಿಂಗಳಾಗಿವೆ. ನಾವು ವರದಿ ಕೊಟ್ಟು ಬಂದೆವು. ಅದರ ನಂತರ ನಮ್ಮ ನಡುವೆ ಸಂವಹನ ನಡೆದಿಲ್ಲ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಅದೂ ಅಲ್ಲದೆ ನಾನು ಮಾಡಿದ್ದು ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕವಾಗಿದೆ.” ಎಂದು ಹೇಳಿದರು.

ಅಲ್ಲದೆ, ಪಠ್ಯಪುಸ್ತಕವನ್ನು ಹೇಗೆ ಪರಿಷ್ಕರಣೆ ಮಾಡಬಹುದು ಎಂಬ ವರದಿಯನ್ನಷ್ಟೆ ಕೊಟ್ಟು ಬಂದಿದ್ದೇನೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. “ನಮ್ಮ ಕೆಲಸ ಇಷ್ಟೆ ಇದ್ದಿದ್ದು. ಉಳಿದಿದ್ದು ಸರ್ಕಾರಕ್ಕೆ ಬಿಟ್ಟಿದ್ದು. ಅದನ್ನು ಅವರು ಅಳವಡಿಸಿಕೊಂಡಿದ್ದಾರೆಯೆ ಎಂಬುವುದು ನನಗೆ ಗೊತ್ತಿಲ್ಲ” ಎಂದು ಅವರು ಹೇಳಿದರು.

ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

ನಿಮ್ಮ ಸಮಿತಿಯಿಂದ ಆಗಿರುವ ತಪ್ಪಿಗೆ ನೀವು ಉತ್ತರ ಹೇಳಬೇಕಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ತಪ್ಪು ಆಗಿಲ್ಲ. ತಪ್ಪು ಎಂದು ಹೇಳುವವರು ಅವುಗಳನ್ನು ಅಧ್ಯಯನ ನಡೆಸಿ ಹೇಳಬೇಕು. ನನ್ನ ದೃಷ್ಟಿಯಲ್ಲಿ ಏನು ಸರಿ ಇದೆಯೋ ಅದನ್ನು ನಾನು ಮಾಡಿದ್ದೇನೆ”  ಎಂದು ತಿಳಿಸಿದರು.

“ಬರಗೂರು ರಾಮಚಂದ್ರಪ್ಪ ಎಲ್ಲವನ್ನೂ ಸತ್ಯನಾಶ ಮಾಡಿ ಹಾಕಿದ್ದಾರೆ. ಆರ್ಯರ ಪಾಠದಲ್ಲಿ, ‘ಸಂಸ್ಕೃತ ಎಂಬ ಭಾಷೆಯಿತ್ತು. ವೇದಗಳು ಸಂಸ್ಕೃತದಲ್ಲಿ ಇತ್ತು’ ಎಂದು ತಪ್ಪಿ ಕೂಡಾ ಹಾಕಿಲ್ಲ. ‘ಸಂಸ್ಕೃತ’ ಎಂಬ ಶಬ್ಧವನ್ನು ಇಡೀ ಪಾಠದಲ್ಲಿ ಉಪಯೋಗ ಮಾಡಿಲ್ಲ. ಅವರಿಗೆ ಭಾರತೀಯತೆಯ ಬಗ್ಗೆ ಅಷ್ಟೊಂದು ವಿರೋಧವಿದೆ.” ಎಂದು ಹೇಳಿದರು.

“ಏನಾಗಿದೆಯೆಂದರೆ, 1947 ರಿಂದ ಇವತ್ತಿನವರೆಗೆ ‘ಜಾತ್ಯಾತೀತ ಸಿದ್ದಾಂತದ ತುಂಬಿಸಬೇಕು’ ಎಂದು ಹೇಳಿ ತಪ್ಪು ದಾರಿಯಲ್ಲಿ ಹೋಗಿ ಈ ರೀತಿಯಲ್ಲಿ ಆಗಿದೆ. ಇನ್ನೊಂದು ವಿಷಯ ಏನೆಂದರೆ, ಈ ರೀತಿ ‘ತಪ್ಪು-ತಪ್ಪು’ ಎಂದು ತೀರ್ಪು ನೀಡಲು ಅವರು ಯಾರು? ಇದನ್ನು ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ನೀಡಲಿ” ಎಂದು ತಿಳಿಸಿದರು.

ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ತಪ್ಪಾಗಿದೆ ಎಂದು ನೀವು ಗುರುತಿಸಿದ ಹಾಗೆಯೆ, ನಿಮ್ಮ ಸಮಿತಿಯಿಂದ ತಪ್ಪಾಗಿದೆ ಎಂಬುವುದನ್ನು, ತಜ್ಞರು ಗುರುತಿಸಬಹುದಲ್ಲವೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, “ಪತ್ರಿಕೆಯವರಾಗಲಿ, ಟಿವಿ ಮಾಧ್ಯಮವಾಗಲಿ ಯಾರೂ ಕೂಡಾ ಅಧ್ಯಯನ ನಡೆಸದೆ ತಪ್ಪು-ತಪ್ಪು ಎಂದು ಹೇಳುವುದು ಸರಿಯೇ” ಎಂದು ಹೇಳಿದರು.

ಇದನ್ನೂ ಓದಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ ಪಠ್ಯ ಪರಿಶೀಲನೆ ಸಮಿತಿ ಸದಸ್ಯನ ಸಮರ್ಥನೆ

“ನಿಜ ಇಷ್ಟೆ. ನಾವೆಲ್ಲಾ ಕೆಲಸ ಮುಗಿಸಿ ನಾಲ್ಕು ತಿಂಗಳು ಆ‌ಯ್ತು. ಅದನ್ನು ಕೊಟ್ಟು ಬಂದಿದ್ದೇವೆ. ಈಗ ನಮಗೆ ನಮ್ಮದೆ ಕೆಲಸಗಳು ಇವೆ. ನಾನು ಪರಿಷ್ಕರಣೆ ಮಾಡಿರುವ ಪಠ್ಯ ಪುಸ್ತಕ ಹತ್ತನೆ ತರಗತಿಯ ಸಮಾಜ ವಿಜ್ಞಾನ. ಈ ಪುಸ್ತಕವನ್ನು ನನ್ನ ಅಧ್ಯಕ್ಷತೆಯಲ್ಲಿ 2014ರಲ್ಲಿ ಪರಿಚಯಿಸಲಾಗಿತ್ತು. ಈಗಲೂ ಅದನ್ನೇ ಮುಂದುವರೆಸಲಾಗಿದೆ. ಇದನ್ನು ಆರೇಳು ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ. ಈ ನಡುವೆ ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಣೆ ಮಾಡಿದ್ದಾರೆ” ಎಂದು ಅವರು ಹೇಳಿದರು.

“ನನಗೆ ನೆನಪಿರುವಂತೆ, ಹತ್ತನೇ ತರಗತಿ ಸಮಾಜ ವಿಜ್ಞಾನದ 6 ಅಥವಾ 7ನೇ ಅಧ್ಯಾಯವನ್ನು ಪರಿಷ್ಕರಿಸುವಂತೆ ನೀಡಲಾಗಿತ್ತು. ಅದನ್ನು ನಾನು ಅವರಿಗೆ ಸಲ್ಲಿಸಿದ್ದೇನೆ. ಈ ನಡುವೆ ಕೊರೊನಾ ಸಮಯದಲ್ಲಿ ಒಮ್ಮೆ ಕರೆ ಬಂದಿತ್ತು. ಆದರೆ ನಾನು ಮನೆಯಲ್ಲೇ ಕೂತು ಕೆಲಸ ಮಾಡುವುದಾಗಿ ಹೇಳಿದೆ. ಇವಿಷ್ಟು ಸತ್ಯ” ಎಂದು ಹೇಳಿದರು.

ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಬಗ್ಗೆ ಅವರು ಕೊಟ್ಟಿರುವ ವರದಿ ಪ್ರಕಾರ ತಿದ್ದುಪಡಿ ಆಗಿದೆಯೆ ಅಥವಾ ಅಧ್ಯಕ್ಷರು ಅದನ್ನು ಬದಲಾಯಿಸಿ ಬೇರೆ ಬರೆದಿದ್ದಾರೆಯೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಈಗಾಗಲೇ ಅವುಗಳನ್ನು ಕಳುಹಿಸಿದ್ದೇನೆ. ಇದಕ್ಕಿಂತ ಹೆಚ್ಚು ಏನೂ ಹೇಳಲು ಸಾಧ್ಯವಿಲ್ಲ” ಎಂದು ಹೇಳಿದರು. ಮರು ಪರಿಷ್ಕರಣೆ ಮಾಡಿರುವ ಹೊಸ ಪಠ್ಯ ಪುಸ್ತಕ ನನಗೆ ತಲುಪಿಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

ಹತ್ತನೇ ತರಗತಿ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಬಗ್ಗೆ ಮತ್ತು ಪೆರಿಯಾರ್‌ ಪಾಠಗಳನ್ನು ನೀವು ಕತ್ತರಿಸಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದು ನನಗೆ ನೆನಪಾಗುತ್ತಿಲ್ಲ. ನಾರಾಯಣ ಗುರುಗಳ ವಿಚಾರಗಳನ್ನು ಅವರು ಹತ್ತನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಹಾಕಿದ್ದಾರೆ ಎಂದು ಅವರು ಹೇಳುವುದನ್ನು ನಾನು ಕೇಳಿದ್ದೇನೆ. ಇದರ ಆಚೆಗೆ ಬೇರೆ ಯಾವ ವಿಚಾರವೂ ನನಗೆ ಗೊತ್ತಿಲ್ಲ” ಎಂದು ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....