Homeಕರ್ನಾಟಕ‘ಪೇಸಿಎಂ ಆಕ್ಷನ್ ಕಮಿಟಿ’ ವಾಟ್ಸ್‌ಅಪ್‌ ಗ್ರೂಪ್‌: ಪೋಸ್ಟರ್‌ ಅಭಿಯಾನ ಬಳಿಕ ವಿಡಿಯೊ ಪ್ರಯೋಗ ಮಾಡಿದ ಕಾಂಗ್ರೆಸ್!

‘ಪೇಸಿಎಂ ಆಕ್ಷನ್ ಕಮಿಟಿ’ ವಾಟ್ಸ್‌ಅಪ್‌ ಗ್ರೂಪ್‌: ಪೋಸ್ಟರ್‌ ಅಭಿಯಾನ ಬಳಿಕ ವಿಡಿಯೊ ಪ್ರಯೋಗ ಮಾಡಿದ ಕಾಂಗ್ರೆಸ್!

ಕಾಂಗ್ರೆಸ್‌ ಸೃಷ್ಟಿಸಿರುವ ಕಾಲ್ಪನಿಕ ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ ಬಿಜೆಪಿ ನಾಯಕರು ನಡೆಸುವ ಚರ್ಚೆ ಹೀಗಿದೆ...

- Advertisement -
- Advertisement -

‘ಪೇಸಿಎಂ’ ಪೋಸ್ಟರ್‌ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಕಾಂಗ್ರೆಸ್‌, ಮತ್ತೊಂದು ಸೃಜನಶೀಲ ಪ್ರಯೋಗವನ್ನು ಮಾಡಿದೆ. ‘ಪೇಸಿಎಂ ಆಕ್ಷನ್‌ ಕಮಿಟಿ’ (PayCM Action Committee) ಎಂಬ ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ ಬಿಜೆಪಿ ನಾಯಕರು ಚರ್ಚಿಸುತ್ತಿರುವಂತೆ ವಿಡಿಯೊ ರಚಿಸಲಾಗಿದೆ.

ಈ ವಿಡಿಯೊವನ್ನು ‘40% ಸರ್ಕಾರ’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಗ್ರೂಪ್‌ನಲ್ಲಿ ಆಗುವ ಚರ್ಚೆಗಳು ಸ್ವಾರಸ್ಯಕರವಾಗಿವೆ. ಬಿಜೆಪಿಯವರು ಹೀಗೆ ಚರ್ಚೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಅಣಕ ಮಾಡಿದೆ.

ಕಾಂಗ್ರೆಸ್‌ ಸೃಷ್ಟಿಸಿರುವ ಕಾಲ್ಪನಿಕ ವಾಟ್ಸ್‌ಅಪ್‌ ಗ್ರೂಪ್‌ ಹೀಗಿದೆ…

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಅವರು ಗ್ರೂಪ್ ರಚಿಸಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಡಾ.ಕೆ.ಸುಧಾಕರ್‌, ಅಶ್ವತ್ಥ್ ನಾರಾಯಣ್, ವಿಜಯೇಂದ್ರ, ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ ಇದ್ದಾರೆ.

ಬೊಮ್ಮಾಯಿ ಮಾತು ಆರಂಭಿಸುತ್ತಾರೆ.

ಬೊಮ್ಮಾಯಿ: ಎಲ್ಲಿಗೆ ಬಂತಪ್ಪ? ಅಪ್‌ಡೇಟ್ ಏನು?

ಆರಗ: ತನಿಖೆ ನಡೆಯುತ್ತಿದೆ.

ಕಟೀಲ್: ನಾವು ಹೊಸ ಅಭಿಯಾನ ಮಾಡುತ್ತಿದ್ದೇವೆ.

ಬೊಮ್ಮಾಯಿ: ಟಾಬ್ಲೇಟ್ ತಗೊಂಡ್ರು ನಿದ್ದೆ ಬರುತ್ತಿಲ್ಲ.

ಕಟೀಲ್: ನಾವು ಹೊಸ ಅಭಿಯಾನ ಮಾಡುತ್ತಿದ್ದೇವೆ.

ಬೊಮ್ಮಾಯಿ: ಜನ ಬಿಜೆಪಿಯವರು ಪೇಸಿಎಂ ಕಾಪಿ ಮಾಡಿರೋದು ಮಜಾ ಬರುತ್ತಿಲ್ಲ ಅಂತಿದ್ದಾರೆ.

ಸುಧಾಕರ್‌: ಲೆಸ್ಟ್ ಬ್ರಿಂಗ್‌ ಔಟ್ ಲಿಂಗಾಯತ್ ಕಾರ್ಡ್ (ಲಿಂಗಾಯತ ಕಾರ್ಡ್ ಹಾಕೋಣ)

ಬೊಮ್ಮಾಯಿ: ಮಾಸ್ಟರ್‌ ಸ್ಟ್ರೋಕ್‌ ಸುಧಾಕರ್‌, ಯೂ ಡು ಇಟ್‌

ಸುಧಾಕರ್‌: ಓಕೆ (ಇಮೋಜಿ ಬಳಸಿದ್ದಾರೆ.)

(ವಿಜಯೇಂದ್ರ ಲೆಫ್ಟ್‌)

ಬೊಮ್ಮಾಯಿ: ಛೇ ಇವ್ನು ಇರೋದು ಮರೆತುಬಿಟ್ಟೆ.

ಬೊಮ್ಮಾಯಿ: (‘ಸುಧಾಕರ್‌ ಮೋಸ್ಟ್‌ಲಿ ಮೂರ್ಖ ಅನಿಸುತ್ತೆ: ಸಿದ್ದರಾಮಯ್ಯ’ ಎಂದಿರುವ ಸುದ್ದಿ ಶೇರ್‌ ಮಾಡುತ್ತಾರೆ)

ಬೊಮ್ಮಾಯಿ: ಇವಾಗ ಏನ್ ಮಾಡೋಣ.

ಈಶ್ವರಪ್ಪ: ನನಗೆ ಮಂತ್ರಿ ಸ್ಥಾನ ಕೊಟ್ಟರೆ ಐಡಿಯಾ ಕೊಡ್ತೀನಿ.

(ಬೊಮ್ಮಾರಿ ರಿಮೂವ್ಡ್‌ ಈಶ್ವರಪ್ಪ)

ಬೊಮ್ಮಾಯಿ: ಕಟೀಲ್‌ ಮೋದೀಜಿ ಹತ್ತಿರ ಮಾತಾಡಿ, ಏನಾದರೂ ಐಡಿಯಾ ಕೊಡ್ತಾರೆ.

ಕಟೀಲ್: ಮೋದೀಜಿ ನವಿಲಿನೊಟ್ಟಿಗೆ ಫೋಟೋಶೂಟ್ ಮಾಡ್ತಾ ಇದ್ದಾರಂತೆ.  ಮೆಸೇಜ್ ಮಾಡಿದ್ದೇನೆ.

ಬೊಮ್ಮಾಯಿ: ಓಕೆ, ಅಶ್ವತ್ಥ್ ಎನಿ ಐಡಿಯಾ?

ಅಶ್ವತ್ಥ್‌: ವೀ ಕೆನ್‌ ಮೇಕ್ ಎ ಮೂವಿ. ಯೂವರ್‌ ಬಯೋಗ್ರಫಿ.

ಮಾಧುಸ್ವಾಮಿ: ಪೂರ್ತಿ ಮೂವಿ ಟ್ರೇಲರ್‌ರಷ್ಟು ಉದ್ದ ಕೂಡ ಬರಲ್ಲ.

ಬೊಮ್ಮಾಯಿ: ಕಟೀಲ್, ಸಮ್‌ಥಿಂಗ್ ಬಿಗ್ ವೀ ಶುಡ್ ಡೂ.

ನಳೀನ್‌: ಹಿಂದುತ್ವ ತರೋಣ.

ಬೊಮ್ಮಾಯಿ: ಹೌ? (ಹೇಗೆ)

ನಳೀನ್: ಸೇಮ್‌ ಆಸ್ ಆಲ್ವೇಸ್‌ (ನಗುವ ಇಮೋಜಿ.)

ಆರಗ: ನೋ. ಆಮೇಲೆ ನಾನು ತನಿಖೆ ಮಾಡಿಸಬೇಕು.

ಇದನ್ನೂ ಓದಿರಿ: ವಿಶ್ಲೇಷಣೆ: ರಾಜ್ಯ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬದಲಾಗಿದೆಯೇ?

ಸಿ.ಟಿ.ರವಿ: ಯೆಸ್ ಟಿಪ್ಪು ಸುಲ್ತಾನ್ ತರೋಣ.

ಬೊಮ್ಮಾಯಿ: (ಹಣೆಚಚ್ಚಿಕೊಳ್ಳುತ್ತಿರುವ ಇಮೋಜಿ ಹಾಕಿದ್ದಾರೆ.)

ಕಟೀಲ್: ಮೋದೀಜಿ ಮೆಸೇಜ್ ಮಾಡಿದ್ದಾರೆ. (ಬ್ಯುಸಿ ಎಂಬ ಆಡಿಯೋ ಸಂದೇಶ ಬಂದಿದೆ.)

ಸಿಟಿ ರವಿ: ಪಿಎಫ್‌ಐನವರು ದೇವಸ್ಥಾನದಲ್ಲಿ ಪಾಕಿಸ್ತಾನ್ ಬಾವುಟ ಹಾರಿಸಲಿ. ಬೊಮ್ಮಾಯಿ ಸರ್‌ ಅದಕ್ಕೆ ಬೆಂಗಳೂರಿಂದ ಪಾದಯಾತ್ರೆ ಹೋಗಿ ಹಿಂದುತ್ವ ಫ್ಲಾಗ್ ಹಾರಿಸಬೇಕು.

ಕಟೀಲ್: ಗುಡ್ ಐಡಿಯಾ

ಬೊಮ್ಮಾಯಿ: ನೋ. ನನಗೆ ಪಾದೆಯಾತ್ರೆ ಆಗಲ್ಲ, ಕಾಲ್ ನೋವು.

ಕಟೀಲ್: ಶಾ ಟೆಕ್ಸ್ಟ್‌ ಮಾಡಿದ್ದಾರೆ.

ಬೊಮ್ಮಾಯಿ: ವಾಟ್ ಡಿಡ್ ಶಾ ಟೆಲ್?

(ನಳೀನ್‌ ಕುಮಾರ್ ಕಟೀಲ್‌ ಬೊಮ್ಮಾಯಿಯವರನ್ನು ರಿಮೂವ್ ಮಾಡುತ್ತಾರೆ.)

– ಈ ರೀತಿಯಲ್ಲಿ ಸಂಭಾಷಣೆ ನಡೆದಿರುವಂತೆ ಟ್ರೋಲ್ ಮಾಡಲಾಗಿದೆ.

40 % ಕಮಿಷನ್ ಸರ್ಕಾರ ಎಂಬ ಅಸ್ತ್ರವನ್ನು ಕಾಂಗ್ರೆಸ್ ಬಲವಾಗಿ ಪ್ರಯೋಗಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...