Homeಕರ್ನಾಟಕ‘ನಾನೇಕೆ ಹಿಂದೂ ಅಲ್ಲ’: ನಟ, ಚಿಂತಕ ಕಿರಣ್‌ ಶ್ರೀನಿವಾಸ ಪತ್ರ

‘ನಾನೇಕೆ ಹಿಂದೂ ಅಲ್ಲ’: ನಟ, ಚಿಂತಕ ಕಿರಣ್‌ ಶ್ರೀನಿವಾಸ ಪತ್ರ

- Advertisement -
- Advertisement -

“ನಾನೇಕೆ ಹಿಂದೂವಲ್ಲ ಮತ್ತು ಹಿಂದೂಯಿಸಂಗೆ ಅದರಿಂದ ಅಪಚಾರವಾಗುವುದಿಲ್ಲ ಏಕೆ?” ಎಂಬ ಶೀರ್ಷಿಕೆಯಲ್ಲಿ ಚಿಂತಕ, ನಟ ಕಿರಣ್‌ ಶ್ರೀನಿವಾಸ ಅವರು ಪತ್ರ ಬರೆದಿದ್ದಾರೆ. “ನಿಜವಾದ ಹಿಂದೂವಾಗಿಲ್ಲದಿದ್ದರೆ ಅದಕ್ಕಾಗಿ ಹೋರಾಡುವುದನ್ನು ನಿಲ್ಲಿಸಿ” ಎಂದು ಮನವಿಯನ್ನೂ ಮಾಡಿದ್ದಾರೆ.

ಫೇಸ್‌ಬು‌ಕ್‌ನಲ್ಲಿ ಈ ಕುರಿತು ಎರಡು ಪುಟಗಳ ಟಿಪ್ಪಣಿಯನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ಕಿರಣ್ ಶ್ರೀನಿವಾಸ್ ಅವರ ಪತ್ರ:

ಪ್ರೀತಿಯ ಹಿಂದೂಗಳೇ,

ನಾನು ಹಿಂದೂ ಅಲ್ಲ ಎಂದು ಆಸಕ್ತಿ ಅಥವಾ ಕಾಳಜಿ ಇರುವ ಯಾರಿಗಾದರೂ ತಿಳಿಸಲು ನಾನು ಇದನ್ನು ಬರೆಯುತ್ತಿದ್ದೇನೆ. ನಾನು ಹಿಂದೂ ಅಲ್ಲ ಎಂದು ನಾನು ಭಾವಿಸಲು ಇರುವ ಕಾರಣಗಳನ್ನು ಪಟ್ಟಿ ಮಾಡುತ್ತೇನೆ. ನಾನು ಪಟ್ಟಿ ಮಾಡುತ್ತಿರುವ ಕಾರಣಗಳನ್ನು ಚೆನ್ನಾಗಿ ಚಿಂತಿಸಿದ್ದೇನೆ, ಸೂಕ್ಷ್ಮವಾಗಿ, ತರ್ಕಬದ್ಧ ವಿಚಾರಣೆಯ ಮೂಲಕ ಪರಿಶೀಲಿಸಿದ್ದೇನೆ. ನೀವು ಇದನ್ನು ಓದಿದ ನಂತರ, ನೀವು ಹಿಂದೂ ಆಗಿರಲು ಅರ್ಹರಾಗಿದ್ದೀರಾ, ಇಲ್ಲವಾ ಎಂದು ಪರಿಶೀಲಿಸುವಂತೆ ನನ್ನ ವಿನಮ್ರ ಮತ್ತು ಪ್ರಾಮಾಣಿಕ ಮನವಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನನ್ನ ಅಭಿಪ್ರಾಯದಲ್ಲಿ ಹಿಂದೂ ಆಗಿರುವುದು ಎಂದರೆ ಗೀತೆ, ವೇದ, ಉಪನಿಷತ್‌, ಪುರಾಣ ಪವಿತ್ರ ಗ್ರಂಥಗಳನ್ನು ಅಥವಾ ಹಿಂದೂ ಧರ್ಮದ ಪವಿತ್ರ ತತ್ವಗಳನ್ನು ಪಾಲಿಸುವವನು ಎಂದರ್ಥ. ಹಿಂದೂ ಆಗಿರಲು ಬೇಕಾದ ಮೂಲ, ಪ್ರವೇಶ ಮಟ್ಟದ ಅರ್ಹತೆ ಇದೆಂದು ನಾನು ಭಾವಿಸುತ್ತೇನೆ.

ನಾನು ಹಿಂದೂ ಕುಟುಂಬದಲ್ಲಿ ಜನಿಸಿದರೂ, ನನ್ನ ಪೂರ್ವಜರೆಲ್ಲರೂ ಮೇಲೆ ತಿಳಿಸಿದ ಎಲ್ಲಾ ಸಾಹಿತ್ಯವನ್ನು ಓದದ ಹೊರತು ನಾನು ನಿಜವಾದ ಹಿಂದೂ ಎನ್ನಲು ಸಾಧ್ಯವಿಲ್ಲ. ನನ್ನ ತಂದೆ ತಾಯಿಯರಿಬ್ಬರೂ ಇದನ್ನು ಮಾಡಿಲ್ಲವೆಂದು ನನಗೆ ಚೆನ್ನಾಗಿ ತಿಳಿದಿದೆ. ನಾನು ಈ ಗ್ರಂಥಗಳನ್ನು ಸಂಪೂರ್ಣವಾಗಿ ಓದಿಲ್ಲ. ಇದರಿಂದಾಗಿ ನಾನು ಹಿಂದೂ ಅಲ್ಲ ಎಂದು ಸ್ವಯಂ ಭಾವಿಸುತ್ತೇನೆ.

ಹಿಂದೂ ಎಂಬ ನಿಜವಾದ ಸಾರವನ್ನು ವಿವರಿಸಲು ಪ್ರಯತ್ನಿಸುವ ಬಹಳಷ್ಟು ವ್ಯಾಖ್ಯಾನಗಳಿವೆ. ಇದು ನೀವು ಯಾರನ್ನು ಕೇಳುತ್ತಿದ್ದೀರಿ ಮತ್ತು ಅದರ ಹಿಂದಿನ ಅಜೆಂಡಾವನ್ನು ಅವಲಂಬಿಸಿರುತ್ತದೆ. ಆದರೆ ಹಿಂದೂ ಎಂಬ ಒಂದೇ ಒಂದು ಮಾರ್ಗವಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಅದು ಆಳವಾದ, ಅರ್ಥಪೂರ್ಣ, ಆಧ್ಯಾತ್ಮಿಕ, ಸಂಕೀರ್ಣ, ಧಾರ್ಮಿಕ ಮತ್ತು ಚಿಂತನಾ ಪ್ರಚೋದಕ ಜೀವನ ಕಲ್ಪನೆಗಳಲ್ಲಿ ಸಂಪೂರ್ಣವಾಗಿ ಅಂತರ್ಗತವಾಗಿರುವ ಜೀವನ ವಿಧಾನವನ್ನು ಮುನ್ನಡೆಸುತ್ತದೆ. ಆದ್ದರಿಂದ “ಹಿಂದೂ ಧರ್ಮ ಒಂದು ಜೀವನ ವಿಧಾನ” ಮತ್ತು ಆದ್ದರಿಂದ ನಾನು ಇಲ್ಲಿ ಪ್ರಾಮಾಣಿಕವಾಗಿರಬೇಕು. ನಾನು ಹಿಂದೂ ಅಲ್ಲ ಎಂದು ಒಪ್ಪಿಕೊಳ್ಳಬೇಕು.

…ಸತ್ಯವಾಗಿ ನಡೆದುಕೊಂಡಿರುವ ಎಲ್ಲ ಹಿಂದೂಗಳ ಬಗ್ಗೆ ನನಗೆ ಅತ್ಯುನ್ನತ ಗೌರವ ಹೊರತುಪಡಿಸಿ ಬೇರೇನೂ ಇಲ್ಲ. ನಾನು ಈ ಹಿಂದೆ ಹೇಳಿರುವ ಯಾವುದೇ ಅಸೂಕ್ಷ್ಮ, ಅಪಹಾಸ್ಯ, ನೋವುಂಟುಮಾಡುವ ವಿಷಯಗಳಿಗಾಗಿ ನಿಜವಾದ ಹಿಂದೂಗಳಲ್ಲಿ (ಪವಿತ್ರ ಗ್ರಂಥಗಳನ್ನು ಓದಿದವರಲ್ಲಿ) ಕ್ಷಮೆಯಾಚಿಸುತ್ತೇನೆ. ನನ್ನ ಅಜ್ಞಾನಕ್ಕಾಗಿ ನೀವೆಲ್ಲರೂ ನನ್ನನ್ನು ಕ್ಷಮಿಸುತ್ತೀರಿ ಎಂದು ನನಗೆ ತಿಳಿದಿದೆ.

ಇದನ್ನೂ ಓದಿರಿ: ಬೆಂಗಳೂರಿನ ಗುಂಡಿಗಳನ್ನು ತುಂಬುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ: ರಾಜ್ಯ ಹೈಕೋರ್ಟ್ ಕಿಡಿ

ಹಾಗಾದರೆ ಈಗ ಉಳಿದಿರುವುದು ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳುವುದು. ನೀವು ಹಿಂದೂ ಧರ್ಮದ ಎಲ್ಲಾ ಪವಿತ್ರ ಪುಸ್ತಕಗಳನ್ನು ಓದಿದ್ದೀರಾ? ಏಕೆಂದರೆ ಅಲ್ಲಿಯೇ ಮೊದಲ ಹೆಜ್ಜೆ ಪ್ರಾರಂಭವಾಗುತ್ತದೆ. ಅದು ಹಿಂದೂವಾಗಲು ಅಥವಾ ಹಿಂದೂ ಜೀವನ ವಿಧಾನವನ್ನು ಮುನ್ನಡೆಸಲು ಇರುವ ಪ್ರವೇಶವಾಗಿದೆ. ಈ ಮೂಲಭೂತ ಹಂತಗಳನ್ನು ಹಾದುಹೋಗದಿದ್ದರೆ ಉಳಿದವುಗಳು ನಗಣ್ಯ. ಆದ್ದರಿಂದ ನಿಲ್ಲಿಸಿ, ಅದರ ಬಗ್ಗೆ ಯೋಚಿಸಿ. ನಾನು ಇಲ್ಲಿ ಹೇಗೆ ಇದ್ದೇನೆಯೋ ಹಾಗೆ ನೀವು ನಿಮ್ಮ ಬಗ್ಗೆ ಪ್ರಾಮಾಣಿಕರಾಗಿದ್ದರೆ, ನೀವು ಒಂದು ತೀರ್ಮಾನಕ್ಕೆ ಬರುತ್ತೀರಿ. ನೀವು ನಿಜವಾದ ಹಿಂದೂ ಆಗಿದ್ದರೆ ನಿಮಗೆ ಗೌರವ, ಪ್ರೀತಿ ಮತ್ತು ವಂದನೆಗಳು. ಆದರೆ ನೀವು ಹಿಂದೂವಾಗಿಲ್ಲದಿದ್ದರೆ ಅದಕ್ಕಾಗಿ ಹೋರಾಡುವುದನ್ನು ನಿಲ್ಲಿಸಿ, ಅದನ್ನು ಉಳಿಸುವುದನ್ನು ನಿಲ್ಲಿಸಿ, ಅದನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಿ, ಅದರೊಳಗೆ ಕೋಮುವಾದ ಮಾಡುವುದನ್ನು ನಿಲ್ಲಿಸಿ! ಈಗಲೇ ನಿಲ್ಲಿಸಿ. ಏಕೆಂದರೆ ನೀವು ಹಿಂದೂ ಎಂಬ ಹೆಸರಿನಲ್ಲಿ ಸಂಪೂರ್ಣವಾಗಿ ಹಿಂದೂ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದೀರಿ.

-ನಿಮ್ಮ ವಿಶ್ವಾಸಿ,
ಕಿರಣ್ ಶ್ರೀನಿವಾಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...