Homeಕರ್ನಾಟಕ‘ನಾನೇಕೆ ಹಿಂದೂ ಅಲ್ಲ’: ನಟ, ಚಿಂತಕ ಕಿರಣ್‌ ಶ್ರೀನಿವಾಸ ಪತ್ರ

‘ನಾನೇಕೆ ಹಿಂದೂ ಅಲ್ಲ’: ನಟ, ಚಿಂತಕ ಕಿರಣ್‌ ಶ್ರೀನಿವಾಸ ಪತ್ರ

- Advertisement -
- Advertisement -

“ನಾನೇಕೆ ಹಿಂದೂವಲ್ಲ ಮತ್ತು ಹಿಂದೂಯಿಸಂಗೆ ಅದರಿಂದ ಅಪಚಾರವಾಗುವುದಿಲ್ಲ ಏಕೆ?” ಎಂಬ ಶೀರ್ಷಿಕೆಯಲ್ಲಿ ಚಿಂತಕ, ನಟ ಕಿರಣ್‌ ಶ್ರೀನಿವಾಸ ಅವರು ಪತ್ರ ಬರೆದಿದ್ದಾರೆ. “ನಿಜವಾದ ಹಿಂದೂವಾಗಿಲ್ಲದಿದ್ದರೆ ಅದಕ್ಕಾಗಿ ಹೋರಾಡುವುದನ್ನು ನಿಲ್ಲಿಸಿ” ಎಂದು ಮನವಿಯನ್ನೂ ಮಾಡಿದ್ದಾರೆ.

ಫೇಸ್‌ಬು‌ಕ್‌ನಲ್ಲಿ ಈ ಕುರಿತು ಎರಡು ಪುಟಗಳ ಟಿಪ್ಪಣಿಯನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ಕಿರಣ್ ಶ್ರೀನಿವಾಸ್ ಅವರ ಪತ್ರ:

ಪ್ರೀತಿಯ ಹಿಂದೂಗಳೇ,

ನಾನು ಹಿಂದೂ ಅಲ್ಲ ಎಂದು ಆಸಕ್ತಿ ಅಥವಾ ಕಾಳಜಿ ಇರುವ ಯಾರಿಗಾದರೂ ತಿಳಿಸಲು ನಾನು ಇದನ್ನು ಬರೆಯುತ್ತಿದ್ದೇನೆ. ನಾನು ಹಿಂದೂ ಅಲ್ಲ ಎಂದು ನಾನು ಭಾವಿಸಲು ಇರುವ ಕಾರಣಗಳನ್ನು ಪಟ್ಟಿ ಮಾಡುತ್ತೇನೆ. ನಾನು ಪಟ್ಟಿ ಮಾಡುತ್ತಿರುವ ಕಾರಣಗಳನ್ನು ಚೆನ್ನಾಗಿ ಚಿಂತಿಸಿದ್ದೇನೆ, ಸೂಕ್ಷ್ಮವಾಗಿ, ತರ್ಕಬದ್ಧ ವಿಚಾರಣೆಯ ಮೂಲಕ ಪರಿಶೀಲಿಸಿದ್ದೇನೆ. ನೀವು ಇದನ್ನು ಓದಿದ ನಂತರ, ನೀವು ಹಿಂದೂ ಆಗಿರಲು ಅರ್ಹರಾಗಿದ್ದೀರಾ, ಇಲ್ಲವಾ ಎಂದು ಪರಿಶೀಲಿಸುವಂತೆ ನನ್ನ ವಿನಮ್ರ ಮತ್ತು ಪ್ರಾಮಾಣಿಕ ಮನವಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನನ್ನ ಅಭಿಪ್ರಾಯದಲ್ಲಿ ಹಿಂದೂ ಆಗಿರುವುದು ಎಂದರೆ ಗೀತೆ, ವೇದ, ಉಪನಿಷತ್‌, ಪುರಾಣ ಪವಿತ್ರ ಗ್ರಂಥಗಳನ್ನು ಅಥವಾ ಹಿಂದೂ ಧರ್ಮದ ಪವಿತ್ರ ತತ್ವಗಳನ್ನು ಪಾಲಿಸುವವನು ಎಂದರ್ಥ. ಹಿಂದೂ ಆಗಿರಲು ಬೇಕಾದ ಮೂಲ, ಪ್ರವೇಶ ಮಟ್ಟದ ಅರ್ಹತೆ ಇದೆಂದು ನಾನು ಭಾವಿಸುತ್ತೇನೆ.

ನಾನು ಹಿಂದೂ ಕುಟುಂಬದಲ್ಲಿ ಜನಿಸಿದರೂ, ನನ್ನ ಪೂರ್ವಜರೆಲ್ಲರೂ ಮೇಲೆ ತಿಳಿಸಿದ ಎಲ್ಲಾ ಸಾಹಿತ್ಯವನ್ನು ಓದದ ಹೊರತು ನಾನು ನಿಜವಾದ ಹಿಂದೂ ಎನ್ನಲು ಸಾಧ್ಯವಿಲ್ಲ. ನನ್ನ ತಂದೆ ತಾಯಿಯರಿಬ್ಬರೂ ಇದನ್ನು ಮಾಡಿಲ್ಲವೆಂದು ನನಗೆ ಚೆನ್ನಾಗಿ ತಿಳಿದಿದೆ. ನಾನು ಈ ಗ್ರಂಥಗಳನ್ನು ಸಂಪೂರ್ಣವಾಗಿ ಓದಿಲ್ಲ. ಇದರಿಂದಾಗಿ ನಾನು ಹಿಂದೂ ಅಲ್ಲ ಎಂದು ಸ್ವಯಂ ಭಾವಿಸುತ್ತೇನೆ.

ಹಿಂದೂ ಎಂಬ ನಿಜವಾದ ಸಾರವನ್ನು ವಿವರಿಸಲು ಪ್ರಯತ್ನಿಸುವ ಬಹಳಷ್ಟು ವ್ಯಾಖ್ಯಾನಗಳಿವೆ. ಇದು ನೀವು ಯಾರನ್ನು ಕೇಳುತ್ತಿದ್ದೀರಿ ಮತ್ತು ಅದರ ಹಿಂದಿನ ಅಜೆಂಡಾವನ್ನು ಅವಲಂಬಿಸಿರುತ್ತದೆ. ಆದರೆ ಹಿಂದೂ ಎಂಬ ಒಂದೇ ಒಂದು ಮಾರ್ಗವಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಅದು ಆಳವಾದ, ಅರ್ಥಪೂರ್ಣ, ಆಧ್ಯಾತ್ಮಿಕ, ಸಂಕೀರ್ಣ, ಧಾರ್ಮಿಕ ಮತ್ತು ಚಿಂತನಾ ಪ್ರಚೋದಕ ಜೀವನ ಕಲ್ಪನೆಗಳಲ್ಲಿ ಸಂಪೂರ್ಣವಾಗಿ ಅಂತರ್ಗತವಾಗಿರುವ ಜೀವನ ವಿಧಾನವನ್ನು ಮುನ್ನಡೆಸುತ್ತದೆ. ಆದ್ದರಿಂದ “ಹಿಂದೂ ಧರ್ಮ ಒಂದು ಜೀವನ ವಿಧಾನ” ಮತ್ತು ಆದ್ದರಿಂದ ನಾನು ಇಲ್ಲಿ ಪ್ರಾಮಾಣಿಕವಾಗಿರಬೇಕು. ನಾನು ಹಿಂದೂ ಅಲ್ಲ ಎಂದು ಒಪ್ಪಿಕೊಳ್ಳಬೇಕು.

…ಸತ್ಯವಾಗಿ ನಡೆದುಕೊಂಡಿರುವ ಎಲ್ಲ ಹಿಂದೂಗಳ ಬಗ್ಗೆ ನನಗೆ ಅತ್ಯುನ್ನತ ಗೌರವ ಹೊರತುಪಡಿಸಿ ಬೇರೇನೂ ಇಲ್ಲ. ನಾನು ಈ ಹಿಂದೆ ಹೇಳಿರುವ ಯಾವುದೇ ಅಸೂಕ್ಷ್ಮ, ಅಪಹಾಸ್ಯ, ನೋವುಂಟುಮಾಡುವ ವಿಷಯಗಳಿಗಾಗಿ ನಿಜವಾದ ಹಿಂದೂಗಳಲ್ಲಿ (ಪವಿತ್ರ ಗ್ರಂಥಗಳನ್ನು ಓದಿದವರಲ್ಲಿ) ಕ್ಷಮೆಯಾಚಿಸುತ್ತೇನೆ. ನನ್ನ ಅಜ್ಞಾನಕ್ಕಾಗಿ ನೀವೆಲ್ಲರೂ ನನ್ನನ್ನು ಕ್ಷಮಿಸುತ್ತೀರಿ ಎಂದು ನನಗೆ ತಿಳಿದಿದೆ.

ಇದನ್ನೂ ಓದಿರಿ: ಬೆಂಗಳೂರಿನ ಗುಂಡಿಗಳನ್ನು ತುಂಬುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ: ರಾಜ್ಯ ಹೈಕೋರ್ಟ್ ಕಿಡಿ

ಹಾಗಾದರೆ ಈಗ ಉಳಿದಿರುವುದು ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳುವುದು. ನೀವು ಹಿಂದೂ ಧರ್ಮದ ಎಲ್ಲಾ ಪವಿತ್ರ ಪುಸ್ತಕಗಳನ್ನು ಓದಿದ್ದೀರಾ? ಏಕೆಂದರೆ ಅಲ್ಲಿಯೇ ಮೊದಲ ಹೆಜ್ಜೆ ಪ್ರಾರಂಭವಾಗುತ್ತದೆ. ಅದು ಹಿಂದೂವಾಗಲು ಅಥವಾ ಹಿಂದೂ ಜೀವನ ವಿಧಾನವನ್ನು ಮುನ್ನಡೆಸಲು ಇರುವ ಪ್ರವೇಶವಾಗಿದೆ. ಈ ಮೂಲಭೂತ ಹಂತಗಳನ್ನು ಹಾದುಹೋಗದಿದ್ದರೆ ಉಳಿದವುಗಳು ನಗಣ್ಯ. ಆದ್ದರಿಂದ ನಿಲ್ಲಿಸಿ, ಅದರ ಬಗ್ಗೆ ಯೋಚಿಸಿ. ನಾನು ಇಲ್ಲಿ ಹೇಗೆ ಇದ್ದೇನೆಯೋ ಹಾಗೆ ನೀವು ನಿಮ್ಮ ಬಗ್ಗೆ ಪ್ರಾಮಾಣಿಕರಾಗಿದ್ದರೆ, ನೀವು ಒಂದು ತೀರ್ಮಾನಕ್ಕೆ ಬರುತ್ತೀರಿ. ನೀವು ನಿಜವಾದ ಹಿಂದೂ ಆಗಿದ್ದರೆ ನಿಮಗೆ ಗೌರವ, ಪ್ರೀತಿ ಮತ್ತು ವಂದನೆಗಳು. ಆದರೆ ನೀವು ಹಿಂದೂವಾಗಿಲ್ಲದಿದ್ದರೆ ಅದಕ್ಕಾಗಿ ಹೋರಾಡುವುದನ್ನು ನಿಲ್ಲಿಸಿ, ಅದನ್ನು ಉಳಿಸುವುದನ್ನು ನಿಲ್ಲಿಸಿ, ಅದನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಿ, ಅದರೊಳಗೆ ಕೋಮುವಾದ ಮಾಡುವುದನ್ನು ನಿಲ್ಲಿಸಿ! ಈಗಲೇ ನಿಲ್ಲಿಸಿ. ಏಕೆಂದರೆ ನೀವು ಹಿಂದೂ ಎಂಬ ಹೆಸರಿನಲ್ಲಿ ಸಂಪೂರ್ಣವಾಗಿ ಹಿಂದೂ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದೀರಿ.

-ನಿಮ್ಮ ವಿಶ್ವಾಸಿ,
ಕಿರಣ್ ಶ್ರೀನಿವಾಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...