Homeಅಂಕಣಗಳುರಂಜಿಸಿ ವಂಚಿಸುವ ಕಾಂತಾರ

ರಂಜಿಸಿ ವಂಚಿಸುವ ಕಾಂತಾರ

- Advertisement -
- Advertisement -

ಚಂಡಮಾರುತ, ಭೂಕಂಪ, ಪ್ರವಾಹ ಇತ್ಯಾದಿ ನೈಸರ್ಗಿಕ ದುರಂತಗಳಂತೆಯೇ ಬಿಜೆಪಿ ಸರಕಾರದಲ್ಲಿ ನಡೆದ ನೋಟುಬ್ಯಾನು, ಜಿಎಸ್‌ಟಿ, ಕೃಷಿಕಾಯ್ದೆಗಳಿಂದಾಗಿರಬಹುದಾದ ಅನಾಹುತಗಳನ್ನು ದಾಖಲಿಸುವ ಬದಲು, ಮಾಧ್ಯಮದವರು ಚೀನಾದಲ್ಲಿ ಏನಾಗಿದೆ ಆಫ್ಘಾನಿನ ಕತೆಯೇನು, ಪಾಕಿಸ್ತಾನ ಉಳಿಯುವುದೆ, ಶ್ರೀಲಂಕಾದಲ್ಲಿ ಅರಮನೆಗೇ ನುಗ್ಗಿ ಆಹಾರ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂಬಿತ್ಯಾದಿಯಾಗಿ ಹುಡುಕುತ್ತಾ ಕುಳಿತಿರಬೇಕಾದರೆ ಹಸಿವಿನ ವಿಷಯದಲ್ಲಿ ನಮ್ಮ ಸುತ್ತಮುತ್ತಲ ದೇಶಗಳನ್ನ ಭಾರತ ಹಿಂದಿಕ್ಕಿದೆಯಂತಲ್ಲಾ. ಈ ಬಗ್ಗೆ ಮಾಧ್ಯಮದವರನ್ನ ಕೇಳಿದರೆ, ಅದೆಲ್ಲಾ ಕಾಂಗ್ರೆಸ್ಸಿಗರು ಹರಡುತ್ತಿರುವ ಸುಳ್ಳು ಸುದ್ದಿ; ಈಗ ನಮ್ಮನ್ನೇ ನೋಡಿ, ದಿನಬೆಳಗಾಯ್ತೆಂದರೆ ಯಾರಾದರೂ ಕಾಫಿ, ತಿಂಡಿ ಕೊಡಿಸುವವರು ಸಿಗುತ್ತಾರ ಎಂದು ಹುಡುಕುತ್ತಿದ್ದೆವು. ಮಧ್ಯಾಹ್ನದ ಊಟಕ್ಕೂ ಅದೇ ಸ್ಥಿತಿಯಿತ್ತು. ಸಾಯಂಕಾಲಕ್ಕೆ ಯಾರಾದರೂ ಪಾರ್ಟಿಗೆ ಕರೆಯುತ್ತಿದ್ದರು. ಈಗ ನಾವೇ ಕರೆಯುತ್ತೇವೆ. ಅಲ್ಲದೆ ಅವರವರ ಮನೆಯವರೆಗೂ ಬಿಟ್ಟುಕೊಡುವ ವಾಹನವೂ ನಮ್ಮಲ್ಲಿದೆ. ನಾವೇ ಹೀಗೆ ಸುಧಾರಿಸುತ್ತಿರಬೇಕಾದರೆ, ಇನ್ನು ನಮ್ಮ ದೇಶದ ಜನ ಹಸಿದು ಮಲಗುತ್ತಾರೆಂಬುದು ಹಸಿಸುಳ್ಳು ಎಂದು ಮಾರಿಕೊಂಡ ಮಾಧ್ಯಮದವರು ಬೊಮ್ಮಾಯಿ ಕೊಟ್ಟ ಗಿಫ್ಟನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋದರಂತಲ್ಲಾ, ಥೂತ್ತೇರಿ.

******

ಒಂದಲ್ಲಾ ಒಂದು ದಿನ ಶುದ್ಧ ಸಾಹಿತ್ಯದ ಕಡೆಗೆ ಸಾಹಿತಿ ತಿರುಗಲೇಬೇಕೆಂದು ನಮ್ಮ ಸಂತೆಶಿವರದ ಭೈರಪ್ಪ ಹಾಸನಕ್ಕೆ ಬಂದು ಭೈರಿಗೆ ಹಿಡಿದು ಹೋಗಿದ್ದಾರಲ್ಲಾ! ಸದರಿ ಸಾಹಿತಿಗೆ ಈ ಜ್ಞಾನೋದಯ ತಡವಾಗಿ ಸಂಭವಿಸಿದೆ. ಭೈರಪ್ಪನವರು ಧರ್ಮಶ್ರೀ, ದಾಟು, ಆವರಣ ಇತ್ಯಾದಿ ಶುದ್ಧವಲ್ಲದ ಸಾಹಿತ್ಯ ರಚಿಸಿದ ಮೇಲೆ ಕಡೆಗೂ ಶುದ್ಧ ಸಾಹಿತ್ಯದ ಬಗ್ಗೆ ಹಲುಬಿದ್ದಾರೆ. ಪರಂಪರೆಯ ಹಾಳುಗುಡಿಯಲ್ಲೇ ಕುಳಿತು ರಿಮ್ಮುಗಟ್ಟಲೆ ಬರೆದ ಭೈರಪ್ಪನವರಿಗೆ ಆಧುನಿಕತೆ ಚಿಂತನೆಯ ಸಾಹಿತಿಗಳನ್ನು ಕಂಡರಾಗುವುದಿಲ್ಲ. ಅವರೆಲ್ಲಾ ವಿಜೃಂಭಿಸುತ್ತಿದ್ದ ಕಾಲದಲ್ಲಿ ಕೀಳರಿಮೆಯಿಂದ ಹಿಂದೂ ಧರ್ಮದ ಕಗ್ಗ ಹೊಸೆಯುತ್ತಿದ್ದ ಭೈರಣ್ಣ ಅವರೆಲ್ಲಾ ಕಾಲವಾದ ನಂತರ ಅವರ ಸಾಹಿತ್ಯವನ್ನು ಅಣಕಿಸುತ್ತಿದ್ದಾರೆ. ಸುದೈವದಿಂದ ಅವರೆಲ್ಲಾ ಭೈರಪ್ಪನ ಸಾಹಿತ್ಯ ಅಂದರೆ ಏನು ಎಂದು ದಾಖಲಿಸಿ ಹೋಗಿದ್ದಾರೆ. ಅವು ನೆನಪಿಗೆ ಬಂದಾಗಲೆಲ್ಲಾ ಆಧುನಿಕ ಸಾಹಿತಿಗಳು ಮತ್ತು ಕವಿಗಳನ್ನ ಟೀಕಿಸುತ್ತಲೇ ಬರುತ್ತಿದ್ದಾರಲ್ಲಾ, ಥೂತ್ತೇರಿ.

ಇದನ್ನೂ ಓದಿ: ಸಿನಿಮಾ, ಮಿಥ್ ಮತ್ತು ರಾಜಕೀಯ; ಕಾಂತಾರ ಮತ್ತದರ ಯಶಸ್ಸಿನ ಸುತ್ತ…

******

ಭೈರಪ್ಪನವರ ಬರವಣಿಗೆಯ ಬೆಲೆ ಕಟ್ಟಿದ ಯು.ಆರ್ ಅನಂತಮೂರ್ತಿಯವರು ಭೈರಪ್ಪ ರಂಜಿಸಿ ವಂಚಿಸುವ ಲೇಖಕ ಎಂದು ಸಾಕ್ಷಿಸಮೇತ ತೋರಿ ಹೋಗಿದ್ದರು. ಈ ವ್ಯಾಖ್ಯಾನ ಕಾಂತಾರ ಎಂಬ ಕಂತೆ ಪುರಾಣದ ಸಿನಿಮಾ ನೋಡುವಾಗ ಜ್ಞಾಪಕಕ್ಕೆ ಬಂತಲ್ಲಾ. ಕಾಂತಾರದ ನಿರ್ದೇಶಕ ಜಗ್ಗೇಶ್ ಚೇಷ್ಟೆಗಳನ್ನು ಅನುಕರಿಸಿ ಮೇಲೆ ಬಂದವರು. ಹಾಗೆಯೇ ಜನ ಹಗುರವಾಗಿ ನಗುವ ದೃಶ್ಯಗಳನ್ನು ತೆಗೆದು ತೋರಿದವರು. ಹೀಗೆ ತೋರುತ್ತ ಬಂದ ಆತನೊಳಗೆ ಅಮಾನುಷತೆ ಅಡಗಿರುವುದು ಅವರಿಗೇ ಗೊತ್ತಿಲ್ಲ. ಉಬ್ಬುಹಲ್ಲಿರುವ ಪಾತ್ರವೊಂದನ್ನು ಸೃಷ್ಠಿ ಮಾಡಿ ಆಡಿಕೊಳ್ಳುವ ಈತ ಜನರನ್ನು ನಗಿಸುವ ಬರದಲ್ಲಿ ಎಂತಹ ಹೀನ ಕೆಲಸ ಮಾಡುತ್ತೇನೆಂದು ಗ್ರಹಿಸಿದಂತೆ ಕಾಣುವುದಿಲ್ಲ. ಹಾಗೇ ನೋಡಿದರೆ ದಕ್ಷಿಣ ಕನ್ನಡದ ಯಕ್ಷಗಾನ ಯಕ್ಕುಟ್ಟಿ ಹೋಗಿ ಬಹಳ ದಿನಗಳಾಗಿವೆ. ಕಪ್ಪು ಬಣ್ಣ ಬಳಿದ ಪಾತ್ರ ತಂದು ನಿಲ್ಲಿಸಿಕೊಂಡು ಆಡಿಕೊಳ್ಳುವುದು, ಸಾಬರನ್ನ ಅಣಕಿಸುವುದು ಅದ್ಭುತ ಕಲೆಯಾದ ಯಕ್ಷಗಾನದೊಳಕ್ಕೆ ತಂದು ಬಹಳ ದಿನಗಳಾಗಿವೆ. ಮನುಷ್ಯನ ಆಕಾರವನ್ನ ಆಡಿಕೊಳ್ಳುವುದು, ಪುರೋಹಿತರ ಶ್ರೇಷ್ಠತೆ ಮೆರೆಯುವುದು ಇವೆಲ್ಲಾ ಸಾಮಾನ್ಯ ಸಂಗತಿಗಳಾಗಿವೆ. ಇಂತಹ ಸಮಯದಲ್ಲಿ ಭೂತ, ಕೋಲ, ಪಂಜುರ್ಲಿ ಎಂದುಕೊಂಡು ಮನಸ್ಸಿನ ವಿಕಾರಗಳನ್ನು ಮೆರೆಸುತ್ತ, ಅವುಗಳನ್ನು ದೈವೀಕರಿಸಿ ನಿಂದಿಸಿದವರು ರಕ್ತ ಕಾರಿಕೊಂಡು ಸಾಯುತ್ತಾರೆಂದು ನಂಬಿಸಲು ಹೊರಟಿರುವುದು ಒಂದು ಸಮೂಹದ ತಲೆ ಯಕ್ಕುಟ್ಟಿ ಹೋಗಿರುವುದರ ಸೂಚನೆಯಂತಲ್ಲಾ, ಥೂತ್ತೇರಿ.

******

ಗುಜರಾತಿನ ಮೋರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗು ಸೇತುವೆ ಕುಸಿದುಬಿದ್ದು 135 ಜನ ಸಾವಿಗೀಡಾಗಿದ್ದಾರೆ. ಸೇತುವೆ ಕುಸಿಯುವುದು, ಜನರ ಆಕ್ರಂದನ, ಅಸಹಾಯಕರಾಗಿ ಅಸುನೀಗುವುದು ಇವೆಲ್ಲಾ ಬದುಕಿರುವವರನ್ನ ಕಾಡುವ ಸಂಗತಿಗಳು. ಈ ಸೇತುವೆ ದುರಸ್ತಿಗೊಂಡು ಉದ್ಘಾಟನೆಗೊಂಡ ನಾಲ್ಕೇ ದಿನದಲ್ಲಿ ಕುಸಿದುಬಿದ್ದು 135 ಜನ ಸತ್ತಿದ್ದಾರೆ. ಜನ ಸತ್ತಿದ್ದಕ್ಕೆ ಮೋದಿ ಸರ್ಕಾರ ಇಲ್ಲಿಯವರೆಗೆ ತಮ್ಮ ತವರು ರಾಜ್ಯದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿಲ್ಲ. ಕ್ರಮವಂತೂ ದೂರವೇ ಹೋಯ್ತು. ಹಿಂದೆ ಅವರ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಗುಜರಾತಿನಲ್ಲಿ ಮೂರ್ನಾಕು ದಿನದಲ್ಲಿ ಮೂರು ಸಾವಿರ ಜನ ಸತ್ತಾಗ ಅದು ಅವರನ್ನು ಕಾಡಲಿಲ್ಲ. ರೈತ ಹೋರಾಟದ ಸಮಯದಲ್ಲಿ ದೆಹಲಿ ಗಡಿಯಲ್ಲಿ ಏಳುನೂರ ಐವತ್ತು ಜನ ರೈತರು ಅಸುನೀಗಿದಾಗ ಮಾತನಾಡಲಿಲ್ಲ. ಪ್ರಧಾನಿಯವರ ಈ ವಿಲಕ್ಷಣ ನಡೆಗೆ ಏನು ಹೇಳುವುದೆಂಬುದೇ ಸಮಸ್ಯೆಯಾಗಿದೆಯಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...