Homeಅಂಕಣಗಳುರಂಜಿಸಿ ವಂಚಿಸುವ ಕಾಂತಾರ

ರಂಜಿಸಿ ವಂಚಿಸುವ ಕಾಂತಾರ

- Advertisement -
- Advertisement -

ಚಂಡಮಾರುತ, ಭೂಕಂಪ, ಪ್ರವಾಹ ಇತ್ಯಾದಿ ನೈಸರ್ಗಿಕ ದುರಂತಗಳಂತೆಯೇ ಬಿಜೆಪಿ ಸರಕಾರದಲ್ಲಿ ನಡೆದ ನೋಟುಬ್ಯಾನು, ಜಿಎಸ್‌ಟಿ, ಕೃಷಿಕಾಯ್ದೆಗಳಿಂದಾಗಿರಬಹುದಾದ ಅನಾಹುತಗಳನ್ನು ದಾಖಲಿಸುವ ಬದಲು, ಮಾಧ್ಯಮದವರು ಚೀನಾದಲ್ಲಿ ಏನಾಗಿದೆ ಆಫ್ಘಾನಿನ ಕತೆಯೇನು, ಪಾಕಿಸ್ತಾನ ಉಳಿಯುವುದೆ, ಶ್ರೀಲಂಕಾದಲ್ಲಿ ಅರಮನೆಗೇ ನುಗ್ಗಿ ಆಹಾರ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂಬಿತ್ಯಾದಿಯಾಗಿ ಹುಡುಕುತ್ತಾ ಕುಳಿತಿರಬೇಕಾದರೆ ಹಸಿವಿನ ವಿಷಯದಲ್ಲಿ ನಮ್ಮ ಸುತ್ತಮುತ್ತಲ ದೇಶಗಳನ್ನ ಭಾರತ ಹಿಂದಿಕ್ಕಿದೆಯಂತಲ್ಲಾ. ಈ ಬಗ್ಗೆ ಮಾಧ್ಯಮದವರನ್ನ ಕೇಳಿದರೆ, ಅದೆಲ್ಲಾ ಕಾಂಗ್ರೆಸ್ಸಿಗರು ಹರಡುತ್ತಿರುವ ಸುಳ್ಳು ಸುದ್ದಿ; ಈಗ ನಮ್ಮನ್ನೇ ನೋಡಿ, ದಿನಬೆಳಗಾಯ್ತೆಂದರೆ ಯಾರಾದರೂ ಕಾಫಿ, ತಿಂಡಿ ಕೊಡಿಸುವವರು ಸಿಗುತ್ತಾರ ಎಂದು ಹುಡುಕುತ್ತಿದ್ದೆವು. ಮಧ್ಯಾಹ್ನದ ಊಟಕ್ಕೂ ಅದೇ ಸ್ಥಿತಿಯಿತ್ತು. ಸಾಯಂಕಾಲಕ್ಕೆ ಯಾರಾದರೂ ಪಾರ್ಟಿಗೆ ಕರೆಯುತ್ತಿದ್ದರು. ಈಗ ನಾವೇ ಕರೆಯುತ್ತೇವೆ. ಅಲ್ಲದೆ ಅವರವರ ಮನೆಯವರೆಗೂ ಬಿಟ್ಟುಕೊಡುವ ವಾಹನವೂ ನಮ್ಮಲ್ಲಿದೆ. ನಾವೇ ಹೀಗೆ ಸುಧಾರಿಸುತ್ತಿರಬೇಕಾದರೆ, ಇನ್ನು ನಮ್ಮ ದೇಶದ ಜನ ಹಸಿದು ಮಲಗುತ್ತಾರೆಂಬುದು ಹಸಿಸುಳ್ಳು ಎಂದು ಮಾರಿಕೊಂಡ ಮಾಧ್ಯಮದವರು ಬೊಮ್ಮಾಯಿ ಕೊಟ್ಟ ಗಿಫ್ಟನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋದರಂತಲ್ಲಾ, ಥೂತ್ತೇರಿ.

******

ಒಂದಲ್ಲಾ ಒಂದು ದಿನ ಶುದ್ಧ ಸಾಹಿತ್ಯದ ಕಡೆಗೆ ಸಾಹಿತಿ ತಿರುಗಲೇಬೇಕೆಂದು ನಮ್ಮ ಸಂತೆಶಿವರದ ಭೈರಪ್ಪ ಹಾಸನಕ್ಕೆ ಬಂದು ಭೈರಿಗೆ ಹಿಡಿದು ಹೋಗಿದ್ದಾರಲ್ಲಾ! ಸದರಿ ಸಾಹಿತಿಗೆ ಈ ಜ್ಞಾನೋದಯ ತಡವಾಗಿ ಸಂಭವಿಸಿದೆ. ಭೈರಪ್ಪನವರು ಧರ್ಮಶ್ರೀ, ದಾಟು, ಆವರಣ ಇತ್ಯಾದಿ ಶುದ್ಧವಲ್ಲದ ಸಾಹಿತ್ಯ ರಚಿಸಿದ ಮೇಲೆ ಕಡೆಗೂ ಶುದ್ಧ ಸಾಹಿತ್ಯದ ಬಗ್ಗೆ ಹಲುಬಿದ್ದಾರೆ. ಪರಂಪರೆಯ ಹಾಳುಗುಡಿಯಲ್ಲೇ ಕುಳಿತು ರಿಮ್ಮುಗಟ್ಟಲೆ ಬರೆದ ಭೈರಪ್ಪನವರಿಗೆ ಆಧುನಿಕತೆ ಚಿಂತನೆಯ ಸಾಹಿತಿಗಳನ್ನು ಕಂಡರಾಗುವುದಿಲ್ಲ. ಅವರೆಲ್ಲಾ ವಿಜೃಂಭಿಸುತ್ತಿದ್ದ ಕಾಲದಲ್ಲಿ ಕೀಳರಿಮೆಯಿಂದ ಹಿಂದೂ ಧರ್ಮದ ಕಗ್ಗ ಹೊಸೆಯುತ್ತಿದ್ದ ಭೈರಣ್ಣ ಅವರೆಲ್ಲಾ ಕಾಲವಾದ ನಂತರ ಅವರ ಸಾಹಿತ್ಯವನ್ನು ಅಣಕಿಸುತ್ತಿದ್ದಾರೆ. ಸುದೈವದಿಂದ ಅವರೆಲ್ಲಾ ಭೈರಪ್ಪನ ಸಾಹಿತ್ಯ ಅಂದರೆ ಏನು ಎಂದು ದಾಖಲಿಸಿ ಹೋಗಿದ್ದಾರೆ. ಅವು ನೆನಪಿಗೆ ಬಂದಾಗಲೆಲ್ಲಾ ಆಧುನಿಕ ಸಾಹಿತಿಗಳು ಮತ್ತು ಕವಿಗಳನ್ನ ಟೀಕಿಸುತ್ತಲೇ ಬರುತ್ತಿದ್ದಾರಲ್ಲಾ, ಥೂತ್ತೇರಿ.

ಇದನ್ನೂ ಓದಿ: ಸಿನಿಮಾ, ಮಿಥ್ ಮತ್ತು ರಾಜಕೀಯ; ಕಾಂತಾರ ಮತ್ತದರ ಯಶಸ್ಸಿನ ಸುತ್ತ…

******

ಭೈರಪ್ಪನವರ ಬರವಣಿಗೆಯ ಬೆಲೆ ಕಟ್ಟಿದ ಯು.ಆರ್ ಅನಂತಮೂರ್ತಿಯವರು ಭೈರಪ್ಪ ರಂಜಿಸಿ ವಂಚಿಸುವ ಲೇಖಕ ಎಂದು ಸಾಕ್ಷಿಸಮೇತ ತೋರಿ ಹೋಗಿದ್ದರು. ಈ ವ್ಯಾಖ್ಯಾನ ಕಾಂತಾರ ಎಂಬ ಕಂತೆ ಪುರಾಣದ ಸಿನಿಮಾ ನೋಡುವಾಗ ಜ್ಞಾಪಕಕ್ಕೆ ಬಂತಲ್ಲಾ. ಕಾಂತಾರದ ನಿರ್ದೇಶಕ ಜಗ್ಗೇಶ್ ಚೇಷ್ಟೆಗಳನ್ನು ಅನುಕರಿಸಿ ಮೇಲೆ ಬಂದವರು. ಹಾಗೆಯೇ ಜನ ಹಗುರವಾಗಿ ನಗುವ ದೃಶ್ಯಗಳನ್ನು ತೆಗೆದು ತೋರಿದವರು. ಹೀಗೆ ತೋರುತ್ತ ಬಂದ ಆತನೊಳಗೆ ಅಮಾನುಷತೆ ಅಡಗಿರುವುದು ಅವರಿಗೇ ಗೊತ್ತಿಲ್ಲ. ಉಬ್ಬುಹಲ್ಲಿರುವ ಪಾತ್ರವೊಂದನ್ನು ಸೃಷ್ಠಿ ಮಾಡಿ ಆಡಿಕೊಳ್ಳುವ ಈತ ಜನರನ್ನು ನಗಿಸುವ ಬರದಲ್ಲಿ ಎಂತಹ ಹೀನ ಕೆಲಸ ಮಾಡುತ್ತೇನೆಂದು ಗ್ರಹಿಸಿದಂತೆ ಕಾಣುವುದಿಲ್ಲ. ಹಾಗೇ ನೋಡಿದರೆ ದಕ್ಷಿಣ ಕನ್ನಡದ ಯಕ್ಷಗಾನ ಯಕ್ಕುಟ್ಟಿ ಹೋಗಿ ಬಹಳ ದಿನಗಳಾಗಿವೆ. ಕಪ್ಪು ಬಣ್ಣ ಬಳಿದ ಪಾತ್ರ ತಂದು ನಿಲ್ಲಿಸಿಕೊಂಡು ಆಡಿಕೊಳ್ಳುವುದು, ಸಾಬರನ್ನ ಅಣಕಿಸುವುದು ಅದ್ಭುತ ಕಲೆಯಾದ ಯಕ್ಷಗಾನದೊಳಕ್ಕೆ ತಂದು ಬಹಳ ದಿನಗಳಾಗಿವೆ. ಮನುಷ್ಯನ ಆಕಾರವನ್ನ ಆಡಿಕೊಳ್ಳುವುದು, ಪುರೋಹಿತರ ಶ್ರೇಷ್ಠತೆ ಮೆರೆಯುವುದು ಇವೆಲ್ಲಾ ಸಾಮಾನ್ಯ ಸಂಗತಿಗಳಾಗಿವೆ. ಇಂತಹ ಸಮಯದಲ್ಲಿ ಭೂತ, ಕೋಲ, ಪಂಜುರ್ಲಿ ಎಂದುಕೊಂಡು ಮನಸ್ಸಿನ ವಿಕಾರಗಳನ್ನು ಮೆರೆಸುತ್ತ, ಅವುಗಳನ್ನು ದೈವೀಕರಿಸಿ ನಿಂದಿಸಿದವರು ರಕ್ತ ಕಾರಿಕೊಂಡು ಸಾಯುತ್ತಾರೆಂದು ನಂಬಿಸಲು ಹೊರಟಿರುವುದು ಒಂದು ಸಮೂಹದ ತಲೆ ಯಕ್ಕುಟ್ಟಿ ಹೋಗಿರುವುದರ ಸೂಚನೆಯಂತಲ್ಲಾ, ಥೂತ್ತೇರಿ.

******

ಗುಜರಾತಿನ ಮೋರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗು ಸೇತುವೆ ಕುಸಿದುಬಿದ್ದು 135 ಜನ ಸಾವಿಗೀಡಾಗಿದ್ದಾರೆ. ಸೇತುವೆ ಕುಸಿಯುವುದು, ಜನರ ಆಕ್ರಂದನ, ಅಸಹಾಯಕರಾಗಿ ಅಸುನೀಗುವುದು ಇವೆಲ್ಲಾ ಬದುಕಿರುವವರನ್ನ ಕಾಡುವ ಸಂಗತಿಗಳು. ಈ ಸೇತುವೆ ದುರಸ್ತಿಗೊಂಡು ಉದ್ಘಾಟನೆಗೊಂಡ ನಾಲ್ಕೇ ದಿನದಲ್ಲಿ ಕುಸಿದುಬಿದ್ದು 135 ಜನ ಸತ್ತಿದ್ದಾರೆ. ಜನ ಸತ್ತಿದ್ದಕ್ಕೆ ಮೋದಿ ಸರ್ಕಾರ ಇಲ್ಲಿಯವರೆಗೆ ತಮ್ಮ ತವರು ರಾಜ್ಯದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿಲ್ಲ. ಕ್ರಮವಂತೂ ದೂರವೇ ಹೋಯ್ತು. ಹಿಂದೆ ಅವರ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಗುಜರಾತಿನಲ್ಲಿ ಮೂರ್ನಾಕು ದಿನದಲ್ಲಿ ಮೂರು ಸಾವಿರ ಜನ ಸತ್ತಾಗ ಅದು ಅವರನ್ನು ಕಾಡಲಿಲ್ಲ. ರೈತ ಹೋರಾಟದ ಸಮಯದಲ್ಲಿ ದೆಹಲಿ ಗಡಿಯಲ್ಲಿ ಏಳುನೂರ ಐವತ್ತು ಜನ ರೈತರು ಅಸುನೀಗಿದಾಗ ಮಾತನಾಡಲಿಲ್ಲ. ಪ್ರಧಾನಿಯವರ ಈ ವಿಲಕ್ಷಣ ನಡೆಗೆ ಏನು ಹೇಳುವುದೆಂಬುದೇ ಸಮಸ್ಯೆಯಾಗಿದೆಯಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...