Homeಅಂಕಣಗಳುಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

ಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

- Advertisement -
- Advertisement -

ನಮ್ಮ ಸಿನಿಮಾರಂಗದ ಒಂದೆರೆಡು ಸುದ್ದಿಗಳು ಶಾನೆ ಸ್ವಾರಸ್ಯವಾಗಿವೆಯಂತಲ್ಲಾ! ಗೋಳಿನ ದನಿಯಿಂದ ಹಾಸ್ಯನಟನಾಗಿ ಮೇಲೆ ಬಂದ ಕೋಮಲ್, ಅದು ಬಿಟ್ಟು ಹೀರೋ ಆದಾಗ ಜನ ತಿರಸ್ಕರಿಸಿದರು. ತನ್ನನ್ನು ಜನ ಹೇಗೆ ನೋಡಲು ಬಯಸುತ್ತಾರೆ ಎಂಬುದನ್ನು ಯಾವುದೇ ನಟ ಮೊದಲು ಗ್ರಹಿಸಿಕೊಳ್ಳಬೇಕು. ಅದಾಗದಿದ್ದರೆ, ಜೋತಿಷ್ಯದ ಮೊರೆ ಹೋಗುತ್ತಾರೆ; ಆದರೆ ಕೋಮಲ್ ಜ್ಯೋತಿಷ್ಯಕ್ಕಾಗಿ ದೂರ ಹೋಗದೆ ತನ್ನ ಅಣ್ಣನನ್ನೆ ಆಶ್ರಯಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಈಗ ಜ್ಯೋತಿಷಿಯಂತೆ ಜಾತಕ ಹಿಡಿದು ಗ್ರಹಗತಿಗಳ ಸ್ಥಾನ ಗುರುತಿಸಿ ನಿಮಗೆ ಯಾವ ಗ್ರಹದ ಕಾಟವಿದೆ ಎಂದೆಲ್ಲಾ ಕರಾರುವಕ್ಕಾಗಿ ಹೇಳುತ್ತಾರಂತೆ; ಅಲ್ಲಿಗೆ ಈ ಮಾಜಿ ಹಾಸ್ಯನಟ ದಶರಸ ನಟನಾಗಿರುವ ಸುದ್ದಿ ಕೋಮಲ್‌ರಿಂದ ಹೊರಬಿದ್ದಿದೆ. ನಿನಗೆ ಕೇತು ದೆಸೆಯಿಂದ ಕೇಡಾಗಿದೆ ಎಂದು ತಮ್ಮನಿಗೆ ಹೇಳಿ ಆತ ಐದು ವರ್ಷ ಮೂಲೆಯಲ್ಲಿ ಕೂರುವಂತೆ ಮಾಡಿದ ಈ ಆಧುನಿಕ ಜ್ಯೋತಿಷಿ ಆ ಅವಧಿಯಲ್ಲಿ ತಾನೇ ಮೆರೆಯಲು ಯೋಚಿಸಿದ್ದರಾ? ದಾಯಾದಿ ಮತ್ಸರ ಹೀಗೆ ಎಂದು ಹೇಳಲು ಬರುವುದಿಲ್ಲ. ಕೇತುವಿನಿಂದ ಕೇಡಾಗುತ್ತದೆಂದು ಐದು ವರ್ಷ ಮನೆಯಲ್ಲಿರಲು ತನ್ನ ತಮ್ಮನಿಗೆ ಹೇಳಿದ ಜಗ್ಗೇಶ ತನ್ನ ಜಾತಕ ಕುಂಡಲಿ ಹರಡಿಕೊಂಡು ಗ್ರಹಗತಿಗಳ ಸ್ಥಾನಗಳನ್ನು ಗ್ರಹಿಸಿ ತನ್ನ ಸಿನಿಮಾ ತೋತಾಪುರಿ ತೋಪೆದ್ದೋಗುವ ಸತ್ಯವನ್ನು ಗ್ರಹಿಸಬಹುದಿತಲ್ಲಾ. ಆದ್ದರಿಂದ ಧಿಡೀರನೆ ಉದ್ಭವಿಸಿರುವ ಈ ಉದಯೋನ್ಮುಖ ಬಿಜೆಪಿ ಜ್ಯೋತಿಷಿಯಿಂದ ಹುಷಾರಾಗಿರಿ ಎಂದು ಕಾಂಗೈಗಳು ಪ್ರಚಾರ ಮಾಡುತ್ತಿವೆಯಂತಲ್ಲಾ, ಥೂತ್ತೇರಿ.

******

ಮಾತನಾಡಿಸಿದ ಕೂಡಲೇ ಸೋಮಾರಿ ಮತ್ತು ಜವಬ್ದಾರಿಯಿಲ್ಲದ ಸ್ವಾರ್ಥಿಯಂತೆ ಕಾಣುವ ಅನಂತನಾಗ್ ಹೀರೋ ಆಗಿ ನಲವತ್ತಾರು ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಾನು ಮೋದಿಯ ಕಟ್ಟಾ ಅಭಿಮಾನಿ ಎಂದುಬಿಟ್ಟಿದ್ದಾರಲ್ಲಾ. ಇಂತಹ ಮಾತು ಇಂತವರ ಬಾಯಲ್ಲಿ ಸುಮ್ಮಸುಮ್ಮನೆ ಬರುವುದಿಲ್ಲ. ಯಾಕೆಂದರೆ ಇಂತವರ ಬಾಯನ್ನೇ ನೋಡುತ್ತಿರುವ ಆರೆಸ್ಸೆಸ್ಸಿಗರು ತಮ್ಮ ಅಜೆಂಡಾಗಳ ರಿಜಿಸ್ಟರಿನಲ್ಲಿ ತಮ್ಮ ಪರ ಮಾತನಾಡಿದವರ ಹೆಸರನ್ನು ದಾಖಲಿಸಿಕೊಂಡು ಅವರನ್ನು ಸ್ಥಾನಮಾನ ಬಿರುದು ಬಾವಲಿಗಳ ಪಟ್ಟಿಗಳಿಗೆ ಸೇರಿಸಿಕೊಳ್ಳುತ್ತವೆ. 1985ರಲ್ಲಿ ಇದೇ ಅನಂತನಾಗ್ ರಾಮಕೃಷ್ಣ ಹೆಗಡೆ ಹೇಳಿದರೆ ನಾನು ಹಾಳು ಬಾವಿಗೂ ಬೀಳಬಲ್ಲೆ ಎಂದುಬಿಟ್ಟಿದ್ದರು. ಆ ಕೂಡಲೇ ಹೆಗಡೆ ಹಾಳು ಬಾವಿ ಮುಚ್ಚಿ ನಜೀರ್ ಸಾಹೇಬರು ಬೋರ್‌ವೆಲ್ ಮುಖಾಂತರ ಜನರಿಗೆ ನೀರುಕೊಡುವ ವ್ಯವಸ್ಥೆ ಮಾಡಿದ್ದು ಈಗ ಇತಿಹಾಸ. ಆದರೆ ಹೆಗಡೆಯವರು ಎಂತಹ ಕಿಲಾಡಿಯೆಂದರೆ ಅನಂತನಾಗ್‌ಗೆ ತಾನೇ ಸಹಾಯ ಮಾಡುವುದರ ಬದಲು ಪಟೇಲರಿಗೆ ಹೇಳಿ ಮಂತ್ರಿ ಮಾಡಿಸಿದರು. ಪಟೇಲರ ಯಣ್ಣೆಪಾರ್ಟಿಗೆ ಒಬ್ಬ ಗುಂಡಿನ ಗೆಳೆಯ ಸಿಕ್ಕಂತಾಯ್ತು. ನಗರಾಭಿವೃದ್ಧಿ ಸಚಿವನಾಗಿ ಈತ ಮಾಡಿದ ಸಾಧನೆ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಕೆಲವು ದಿನ ಖಾತೆಯೇ ಇಲ್ಲದೆ ಮಂತ್ರಿಯಾಗಿದ್ದ ದಾಖಲೆ ಮಾತ್ರ ಈತನ ಹೆಸರಿನಲ್ಲಿ ಹಾಗೇಯೇ ಇದೆ. ಅನಂತನಾಗ್ ಎಂಬ ನಟನ ಬಾಯಿಂದ ಮೋದಿ ಹೊಗಳಿಕೆ ಮಾತು ಸುಮ್ಮಸುಮ್ಮನೆ ಬರುವುದಿಲ್ಲ. ಮೋದಿ ಸರಕಾರದಿಂದ ಅದ್ಯಾವ ಸ್ಥಾನಮಾನ ಪ್ರಶಸ್ತಿ ಸಿಗುತ್ತದೋ ನೋಡಬೇಕೆಂಬುದು ಆತನನ್ನು ಕಂಡರಾಗದವರ ಅಭಿಪ್ರಾಯವಾಗಿದೆಯಲ್ಲಾ, ಥೂತ್ತೇರಿ.

*******

ಈ ದೇಶದಲ್ಲಿ ಮೀಸಲಾತಿ ವಿರೋಧಿಗಳೆಲ್ಲಾ ಹಠಾತ್ತನೆ ಮೀಸಲಾತಿಗಾಗಿ ಹೋರಾಟ ಶುರು ಮಾಡಿಕೊಂಡಿದ್ದಾರಲ್ಲಾ. ಇದೊಂದು ರೀತಿ ಬಸವಣ್ಣನವರ ವಚನದಂತೆ ’ಏರಿಯೇ ಕೆರೆನೀರು ಕುಡಿದಂತೆ, ಬೇಲಿಯೇ ಹೊಲಮೇಯ್ದು ಬಿಸಾಡಿದಂತಲ್ಲಾ’. ಹಿಂದಣದನ್ನು ನೆನಪಿಸಿಕೊಳ್ಳುವುದಾದರೆ, ಮಂಡಲ ವರದಿ ವಿರುದ್ದ ತಿರುಗಿ ಬಿದ್ದ ಬಿಜೆಪಿಯವರು ಕಂಡವರ ಮಕ್ಕಳಿಗೆ ಬೆಂಕಿ ಹಚ್ಚಿದರು. ಉತ್ತರ ಭಾರತದಲ್ಲಿ ಒಕ್ಕಲಿಗರನ್ನು ಮೀಸಲಾತಿಯ ಮಂಡಲ ಕಮೀಷನ್ ಒಳಗೆ ಸೇರಿಸಿದ್ದನ್ನು ಅರಿಯದ ಒಕ್ಕಲಿಗರು ಇಲ್ಲಿ ಮಂಡಲದ ವಿರುದ್ಧ ಪ್ರತಿಭಟಿಸಿದರು. ಮಂಡಲದೊಳಗೆ ನೀವೂ ಇದ್ದೀರಿ ಎಂದು ಯಾರೂ ಹೇಳಲಿಲ್ಲ. ಏಕೆಂದರೆ ನಮ್ಮನ್ನಾಳುವ ಜನ ಮಂಡಲ ಕಮಿಷನ್ ವರದಿಯನ್ನೇ ಓದಿಕೊಂಡಿರಲಿಲ್ಲ. ಈಗ ಈ ಸಮುದಾಯದ ಪ್ರತಿನಿಧಿ ರಾಜಕಾರಣಿಗಳು ಮೀಸಲಾತಿ ಗಲಭೆ ಎಬ್ಬಿಸಲಿದ್ದಾರಲ್ಲಾ. ಹೊಸ ತಲೆಮಾರು ಇದಕ್ಕೆ ಹುಚ್ಚೆದ್ದು ಕುಣಿಯಬಹುದು. ಈಗ ಮೀಸಲು ಗಲಭೆ ಬೇಕಿರುವುದು ಮುಂದುವರಿದ ರಾಜಕಾರಣಿಗಳಿಗೆ. ಉದ್ಯೋಗಗಳೇ ಇಲ್ಲದಿದ್ದರೂ ಎಲ್ಲರೂ ಮೀಸಲು ಕೇಳುವಂತೆ ಮಾಡಿ ಮೀಸಲನ್ನೆ ರದ್ದು ಮಾಡುವ ಸಂಚಿಗಾಗಿ ಬಿಜೆಪಿ ಕಾಯುತ್ತಿದೆಯಂತಲ್ಲಾ, ಥೂತ್ತೇರಿ.

******

ಕರ್ನಾಟಕ ಈವರೆಗೆ ಕಂಡರಿಯದ ಧಾರಾಳತನದ ಮುಖ್ಯಮಂತ್ರಿಗಳು ಏನೂ ಕೇಳಿದರೂ ಕೊಡುವಂತಹ ಕೊಡುಗೈ ದಾನಿಗಳಾಗಿದ್ದಾರಂತಲ್ಲಾ. ಮೀಸಲಾತಿ ವಿಷಯ ಬಂದರೆ ಎಷ್ಟು ಪರಸೆಂಟ್ ಬೇಕು ಹೇಳಿ ಎಂದು ಅವರೇ ಕೇಳುತ್ತಾರೆ. ಅಡಿಕೆ ತೋಟಕ್ಕೆ ಎಲೆಚುಕ್ಕೆ ರೋಗಬಂದು ಯಕ್ಕುಟ್ಟಿ ಹೋಗಿದೆ ಸ್ವಾಮಿ ಎಂದರೆ ಅದರ ಕೊತೆಗೆ ಹವಮಾನ ವೈಪರೀತ್ಯದಿಂದ ಉಂಟಾದ ನಷ್ಟವನ್ನು ಸೇರಿಸಿ ಕೇಳಿ ಎನ್ನುತ್ತಾರೆ. ಇನ್ನ ಶರಾವತಿ ಡ್ಯಾಮಿನ ಹಿನ್ನೀರಿಗೆ ಸಿಕ್ಕಿ ದಿಕ್ಕಾಪಾಲಾದ ಜನರು ಭೂಮಿ ಹಕ್ಕಿನ ಪತ್ರ ಕೇಳಿದರೆ, ಡಿಸೆಂಬರ್ ಒಳಗೆ ಹಿನ್ನೀರಿನಲ್ಲೇ ಹಕ್ಕುಪತ್ರ ಕೊಡುತ್ತೇನೆ ಎನ್ನುತ್ತಾರೆ, ಜೊತೆಗೆ ನೂರಾರು ಕೋಟಿ ರೂಗಳ ಕಾಮಗಾರಿ ಕಲ್ಲುಗಳನ್ನು ಸತ್ತವರ ಗೋರಿಕಲ್ಲುಗಳಂತೆ ನೆಡುತ್ತ ಹೋಗುತ್ತಿದ್ದಾರೆ. ಆದರೆ ಕಬ್ಬಿನ ಬೆಂಬಲ ಬೆಲೆಗಾಗಿ ಹೋರಾಟ ಮಾಡುತ್ತಿರುವ ರೈತರ ಕಡೆ ತಿರುಗಿ ನೋಡಿಲ್ಲ. ಅಕಸ್ಮಾತ್ ಅಲ್ಲಿಗೆ ಹೋದದ್ದಾದರೆ ರೈತರು ಹಿಡಿದು ಉರುಳುಸೇವೆ ಮಾಡಿಸುತ್ತಾರೆಂಬ ಇಲ್ಲದ ಮಾಹಿತಿಯನ್ನ ತಾವೇ ಊಹಿಸಿಕೊಂಡು ಸದ್ಯಕ್ಕೆ ಪರಿಹಾರ ಕಾಣದ ಅಡಿಕೆ ಚುಕ್ಕೆರೋಗ ಇರುವ ಜಾಗ ಹುಡುಕುತ್ತ ಹೊರಟರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆಯನ್ನು ಸರಿಯಾಗಿ ನೋಡಿದ್ದೀರ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...