Homeಮುಖಪುಟಜನಪರ ಸಿದ್ಧಾಂತಗಳಿಗೆ ಬದ್ಧವಾಗಿ ಬದುಕಿದ ಸಾರಾ

ಜನಪರ ಸಿದ್ಧಾಂತಗಳಿಗೆ ಬದ್ಧವಾಗಿ ಬದುಕಿದ ಸಾರಾ

- Advertisement -
- Advertisement -

ಸಾರಾ ಅಬೂಬಕ್ಕರ್ ನಿರ್ಗಮಿಸಿದ್ದಾರೆ. 86 ವರ್ಷಗಳ ತುಂಬು ಜೀವನವನ್ನು ತಮ್ಮ ಪ್ರಾಮಾಣಿಕ ಕ್ರಿಯಾಶೀಲ ಬದುಕಿನಿಂದ ಸಾರ್ಥಕಗೊಳಿಸಿದ್ದಾರೆ. ಸಾರಾ ಅವರ ಬರವಣಿಗೆಯನ್ನು ಕನ್ನಡಿಗರಿಗೆ ಪರಿಚಯಿಸಿದ್ದು ಲಂಕೇಶ್. ಅದು ಎಂಬತ್ತರ ದಶಕದ ಆರಂಭ. ಲಂಕೇಶ್ ಪತ್ರಿಕೆ ಕನ್ನಡದ ಸಾಂಸ್ಕೃತಿಕ ಲೋಕದ ಒಂದು ಘಟನೆಯಾಗಿ ಬರಹಗಾರರು ಮತ್ತು ಓದುಗರಲ್ಲಿ ಸಂಚಲವನ್ನೇ ಉಂಟುಮಾಡಿತ್ತು. ಹೊಸ ಸಂವೇದನೆಗೆ ಕಾರಣವಾಗಿತ್ತು. ಹೊಸ ಜನಾಂಗದ ತರುಣರು ಮತ್ತು ತಾಯಿಯರು ತಮ್ಮ ಅಂತರಂಗವನ್ನು ಹೇಳಿಕೊಳ್ಳುವಂತೆ ಲಂಕೇಶ್ ಬರವಣಿಗೆ ಪ್ರಚೋದಿಸಿತ್ತು. ಆ ಸಮಯದಲ್ಲಿಯೇ ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳು ತಲೆಎತ್ತಿ ಜನರ ನೆಮ್ಮದಿಯ ಬದುಕಿಗೆ ಗಂಡಾಂತರ ತಂದಿದ್ದವು. ಜನರ ಸಹಬಾಳ್ವೆಯನ್ನು ಕದಡಿ ಪ್ರತ್ಯೇಕಿಸುವಂತಹ ಮನೆಹಾಳು ಕೆಲಸಗಳು ಆರಂಭಗೊಂಡಿದ್ದವು. ಅಂತಹ ಸಮಯದಲ್ಲಿ ಒಬ್ಬ ಮುಸ್ಲಿಂ ಹೆಣ್ಣುಮಗಳಿಂದ ಪತ್ರವೊಂದು ಲಂಕೇಶರಿಗೆ ಬಂದಿತ್ತು. ಆ ಪತ್ರದಲ್ಲವರು ’ನನ್ನ ಸಹೋದರನೊಬ್ಬ ಸೈನ್ಯದಲ್ಲಿದ್ದು ಈ ದೇಶ ಕಾಯುತ್ತಿದ್ದಾನೆ ಆದರೂ ನಮ್ಮನ್ನಿಲ್ಲಿ ದೇಶದ್ರೋಹಿಗಳು ಎಂಬಂತೆ ಮೂದಲಿಸುತ್ತಿದ್ದಾರೆ. ನಾವು ಹೇಗೆ ಸಹಿಸಿಕೊಳ್ಳಬೇಕು ಮತ್ತು ಪ್ರತಿಕ್ರಿಯಿಸಬೇಕು’ ಎಂದು ಬರೆದುಕೊಂಡಿದ್ದರು. ಇದಕ್ಕೆ ಉತ್ತರವಾಗಿ ಲಂಕೇಶರು ನೀವು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ; ನಮ್ಮಲ್ಲಿ ಬರೆಯಿರಿ ಎಂದು ಉತ್ತರಿಸಿದರು. ಅಂದಿನಿಂದ ಸಾರಾ ಅಬೂಬಕ್ಕರ್ ನಿರಂತರವಾಗಿ ಲಂಕೇಶ್ ಪತ್ರಿಕೆಗೆ ಬರೆಯತೊಡಗಿದರು.

ಸಾರಾ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿದ್ದು ’ಚಂದ್ರಗಿರಿ ತೀರದಲಿ’ ಎಂಬ ಪುಟ್ಟ ಕಾದಂಬರಿ. ಆವರೆಗೆ ನಮಗೆ ಅಪರಿಚಿತವಾಗಿದ್ದ ಮುಸ್ಲಿಂ ಲೋಕದ ಹೆಣ್ಣು ಮಕ್ಕಳ ವಿವರ ತಿಳಿದದ್ದೇ ’ಚಂದ್ರಗಿರಿ ತೀರದಲ್ಲಿ’ ಎಂಬ ಧಾರವಾಹಿಯಿಂದ. ಬರವಣಿಗೆಯಲ್ಲಿನ ಪ್ರಾಮಾಣಿಕತೆ ಹೇಗಿರಬೇಕೆಂಬುದನ್ನು ಸಾರಾ ತೋರಿಸಿದ್ದರು. ಸೈಕಲ್ ಶಾಪು, ಗುಜರಿ ಅಂಗಡಿಗಳಲ್ಲಿನ ಬಡವರ ಮದುವೆ ಸಂಬಂಧಗಳು, ಕೊಡುಕೊಳ್ಳುವಿಕೆ ಮತ್ತು ವ್ಯವಹಾರಗಳು, ಅದರ ಪರಿಣಾಮ, ಮಹಿಳೆಯರ ಅತಂತ್ರ ಬದುಕು ಇವೆಲ್ಲಾ ಲೇಖಕಿಯಿಂದ ಯಾವ ಉತ್ಪ್ರೇಕ್ಷಿತ ಪದಪುಂಜಗಳಿಲ್ಲದೆ ಅನಾವರಣಗೊಂಡು ಮನಸ್ಸನ್ನು ಕಲಕಿದ್ದವು. ಸಾಮಾನ್ಯವಾಗಿ ಧಾರವಾಹಿಗಳನ್ನು ಓದುವವರೆಲ್ಲಾ ಆಗ ’ಚಂದ್ರಗಿರಿ ತೀರದಲ್ಲಿ’ ಕಾದು ಓದಿದ್ದರು. ಇನ್ನೆರಡು ವರ್ಷ ಕಳೆದರೆ ನಲವತ್ತು ವರ್ಷ ತುಂಬುವ ಆ ಕಾದಂಬರಿ ಇನ್ನೂ ಓದುಗರ ಮನಸ್ಸಿನಲ್ಲಿ ಉಳಿದಿರುವುದಕ್ಕೆ ಕಾರಣ ಅದರ ತಾಜಾತನ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯಾಗಿದೆ. ಆ ನಂತರ ಸಾರ ನಿರಂತರವಾಗಿ ಬರೆದರು. ಮುಸ್ಲಿಂ ಮಹಿಳೆಯರ ಬದುಕು ಮತ್ತು ಸ್ಥಿತಿಗತಿಗಳನ್ನು ಅನಾವರಣ ಮಾಡಿದರು. ಬರೆದಂತೆ ಬದುಕಿದ ಮಹಿಳೆಯಾಗಿದ್ದರು. ಅವರ ದನಿ ಮತಾಂಧರಿಗೆ ಸಿಟ್ಟು ತಂದಿದ್ದವು. ಆ ಸಮಯದಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಕುರ್ಚಿಯನ್ನು ಅವರ ಮೇಲೆ ಎಸೆದು ಗಲಭೆ ಎಬ್ಬಿಸಿದರು. ಇದರಿಂದೇನೂ ಅಂಜದ ಸಾರಾ, ’ನಾನು ಸತ್ಯವನ್ನು ಹೇಳುತ್ತೇನೆ, ಅದನ್ನೇ ಬರೆಯುತ್ತೇನೆ’ ಎಂದು ಕೂಗಿದರು. ಆಗ ಲಂಕೇಶ್, ಸಾರ ಅವರಿಗೆ ಧೈರ್ಯ ತುಂಬಿ, ’ಸಾರಾ ಅವರು ಮುಸ್ಲಿಂ ಸಂಪ್ರದಾಯಗಳನ್ನು ಪಾಲಿಸುತ್ತಿರುವವರು. ಅವರೆಂದೂ ಸಂಪ್ರದಾಯವನ್ನು ಬಿಟ್ಟವರಲ್ಲ. ಸಮಯಕ್ಕೆ ಸರಿಯಾಗಿ ಪ್ರಾರ್ಥನೆ ಮಾಡುವ ಮಹಿಳೆ. ಅಂಥವರನ್ನು ಸಹಿಸಿಕೊಳ್ಳಲಾಗದ ನಿಮಗೆ ಕೆಟ್ಟ ದಿನಗಳಿವೆ’ ಎಂದು ಟೀಕಿಸಿದ್ದರು. ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳಿಗೆ ಉಗ್ರ ಪ್ರತಿಭಟನೆ ಬಂದರೆ ತಮ್ಮ ಅಭಿವ್ಯಕ್ತಿ ಶೈಲಿಯನ್ನ ಮೆತ್ತಗಾಗಿಸಿಕೊಳ್ಳುತ್ತಾರೆ ಇಲ್ಲ ಬದಲಿಸಿಕೊಳ್ಳುತ್ತಾರೆ. ಆದರೆ ಸಾರಾ ಹಾಗಾಗಲಿಲ್ಲ ಬದುಕಿನ ಕಡೆಯವರೆಗೂ ಅಭಿವ್ಯಕ್ತಿ ಪ್ರಾಮಾಣಿಕವಾಗಿಯೇ ಇತ್ತು.

ನಮ್ಮೆಲ್ಲರ ಇಷ್ಟದ ಲೇಖಕಿಯಾದ ಸಾರಾ ಅವರನ್ನು ಲಂಕೇಶ್ ಪತ್ರಿಕೆ ಇಪ್ಪತ್ತು ವರ್ಷ ತುಂಬಿದ ಸಮಾರಂಭಕ್ಕೆ ಕರೆಸಬೇಕೆಂದು ಆಲೋಚಿಸಿದೆವು. ಅದರಂತೆ 1999ರ ಡಿಸೆಂಬರ್ 6ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಭೆ ಏರ್ಪಡಿಸಲಾಯಿತು. ಸಾರಾ ಅವರಿಗೆ ಫೋನ್ ಮಾಡಲಾಗಿ ಒಪ್ಪಿಕೊಂಡು ಬರುವುದಾಗಿ ಹೇಳಿದರು. ಆಹ್ವಾನ ಪತ್ರಿಕೆ ಪ್ರಿಂಟ್ ಹಾಕಿಸಿಕೊಂಡು ಬರುವುದಾಗಿ ಲಂಕೇಶರಿಗೆ ತೋರಲು ಹೋದರೆ, ಅವರು ರೇಗಿ “ಅದೇನಯ್ಯ ಡಿಸೆಂಬರ್ ಆರಿಗೆ ಗಂಟು ಬಿದ್ದಿದ್ದೀರಿ. ಬೇರೆ ದಿನಾಂಕ ಗೊತ್ತು ಮಾಡು” ಎಂದರು. ನಾನು ಮುಂದಿನ ಹದಿನಾಲ್ಕನೇ ತಾರೀಕು ನಿಗದಿ ಮಾಡುವ ಗಡಿಬಿಡಿಯಲ್ಲಿ ಕಾರ್ಯಕ್ರಮ ಮುಂದೆ ಹೋದದ್ದನ್ನು ಸಾರ ಅವರಿಗೆ ತಿಳಿಸಲಿಲ್ಲ. ಆದರೆ ಸಾರಾ ಆರನೇ ತಾರೀಕು ಶಿವಮೊಗ್ಗಕ್ಕೆ ಬಂದು ಕುವೆಂಪು ರಂಗಮಂದಿರಕ್ಕೆ ಹೋಗಿದ್ದಾರೆ. ಅಲ್ಲಿ ಯಾರೂ ಇರದಿದ್ದನ್ನು ಕಂಡು, ಕಡೆಗೆ ಇಲಾಖೆ ನಿರ್ದೇಶಕನ ಛೇಂಬರಿಗೆ ಹೋಗಿ ಕೇಳಿದಾಗ ಅವರು, ’ಈ ದಿನ ಯಾವ ಸಮಾರಂಭವೂ ಇಲ್ಲ’ ಎಂದಿದ್ದಾರೆ. ಸಾರಾ ವಾಪಸು ಹೊರಟುಹೋಗಿದ್ದಾರೆ. ಇದನ್ನು ನನ್ನ ಗಮನಕ್ಕೆ ನಿರ್ದೇಶಕರು ತಂದಾಗ, ನಾನು ಕ್ಷಮೆ ಯಾಚಿಸಲು ಫೋನ್ ಮಾಡಿ ಮಾತಾಡಿದೆ. ಆದರೆ ಸಾರಾ, ’ನಾನು ಅಲ್ಲಿ ಬಂದೇ ಇಲ್ಲ’ ಎಂದರು. ನನ್ನ ಅಜಾಗರೂಕತೆಯಿಂದ ನನಗೆ ನೋವಾಗಬಾರದೆಂದು ನಾನಲ್ಲಿಗೆ ಬಂದೇ ಇಲ್ಲವೆಂದು ವಾದಿಸಿದರು. ಅದು ಅವರ ಶ್ರೇಷ್ಠ ಗುಣ. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಂಡು ಅದನ್ನು ತಮ್ಮ ಬದುಕಿನುದ್ದಕ್ಕೂ ವ್ರತದಂತೆ ಪಾಲಿಸಿದ ಸಾರಾ ಈ ನಾಡು ತಲುಪಿರುವ ಸ್ಥಿತಿ ನೆನಸಿಕೊಂಡು ಕೊರಗುವಂತಾಗಿದ್ದರು.

ಲಂಕೇಶ್ ಪತ್ರಿಕೆ ಮುಖಾಂತರ ಬರವಣಿಗೆಯ ಉತ್ತುಂಗಕ್ಕೇರಿದ ಒಂದು ಡಜನ್ ಮಹಿಳಾ ಲೇಖಕಿಯರ ಪೈಕಿ ಲಂಕೇಶರ ಮತ್ತು ಲಂಕೇಶ್ ಪತ್ರಿಕೆಯ ಸಿದ್ಧಾಂತಗಳಿಗೆ ಚ್ಯುತಿಬಾರದಂತೆ ಬದುಕಿದ ವಿರಳ ಮಹಿಳೆ ಸಾರಾ. ಕಳೆದ 8ನೇ ತಾರೀಕಿನಂದು ಬೆಂಗಳೂರಲ್ಲಿ ನಡೆದ ಜನಸಾಹಿತ್ಯ ಸಮಾವೇಶದ ಅಂಗಳದಲ್ಲಿ ಹಲವಾರು ಕಲಾವಿದರು ತಮ್ಮ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿದ್ರು. ಒಬ್ಬ ಕಲಾವಿದರು (ಅವರ ಚಿತ್ರವನ್ನೇ ದಿಟ್ಟಿಸುತ್ತಾ ಕಲಾವಿದರ ಹೆಸರನ್ನು ಗಮನಿಸುವುದನ್ನೇ ಮರೆತೆ) ಅತ್ಯಂತ ಕಡಿಮೆ ಗೆರೆಯಲ್ಲಿ ಸಾರ ಅವರ ದುಂಡದ ಮುಖವನ್ನು ಚಿತ್ರಿಸಿದ್ದರು. ಅಲ್ಲೇ ಬೊಳುವಾರು ಚಿತ್ರವೂ ಇತ್ತು. ಅದು ಎಂದಿನಂತೆ ದಿಗ್ಭ್ರಮೆಯ ನೋಟದಲ್ಲಿತ್ತು. ಆದರೆ ಅತ್ಯಂತ ಕಡಿಮೆ ರೇಖೆಗಳಲ್ಲಿ ಸಾರಾ ಅವರ ಚಿತ್ರ ಬಿಡಿಸಿದ್ದ ಬಗೆಯನ್ನು ಮೆಚ್ಚಿಕೊಂಡ ನಾನು ನಟರಾಜ್ ಹುಳಿಯಾರ್‌ರನ್ನು ಕರೆದು ಆ ಚಿತ್ರ ತೋರಿಸಿದೆ. ಅವರೂ ಮೆಚ್ಚಿಕೊಂಡರು. ಮಹಿಳಾ ಲೋಕದ ಸಮಸ್ಯೆಗಳನ್ನ ತಮ್ಮ ಗಂಭೀರ ಮುಖದಲ್ಲಿ ಪ್ರತಿಬಿಂಬಿಸುತ್ತಿದ್ದ ಸಾರಾ ತುಂಬ ಆತಂಕದಿಂದಲೇ ನಿರ್ಗಮಿಸಿದ್ದಾರೆ. ಆದರೆ ಜನಸಾಹಿತ್ಯ ಸಮಾವೇಶದಲ್ಲಿ ಕಂಡ ಹಲವಾರು ಮುಸ್ಲಿಂ ತರುಣಿಯರು ಸಾರಾ ಅವರ ಸ್ಥಾನ ತುಂಬಲಿದ್ದಾರೆ. ಹಾಗಾಗಿ ನಿಮ್ಮ ಬದುಕು ಸಾರ್ಥಕವಾಗಿದೆ, ಹೋಗಿ ಬನ್ನಿ ಸಾರಾ ಅನ್ನಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...