Homeಮುಖಪುಟಜನಪರ ಸಿದ್ಧಾಂತಗಳಿಗೆ ಬದ್ಧವಾಗಿ ಬದುಕಿದ ಸಾರಾ

ಜನಪರ ಸಿದ್ಧಾಂತಗಳಿಗೆ ಬದ್ಧವಾಗಿ ಬದುಕಿದ ಸಾರಾ

- Advertisement -
- Advertisement -

ಸಾರಾ ಅಬೂಬಕ್ಕರ್ ನಿರ್ಗಮಿಸಿದ್ದಾರೆ. 86 ವರ್ಷಗಳ ತುಂಬು ಜೀವನವನ್ನು ತಮ್ಮ ಪ್ರಾಮಾಣಿಕ ಕ್ರಿಯಾಶೀಲ ಬದುಕಿನಿಂದ ಸಾರ್ಥಕಗೊಳಿಸಿದ್ದಾರೆ. ಸಾರಾ ಅವರ ಬರವಣಿಗೆಯನ್ನು ಕನ್ನಡಿಗರಿಗೆ ಪರಿಚಯಿಸಿದ್ದು ಲಂಕೇಶ್. ಅದು ಎಂಬತ್ತರ ದಶಕದ ಆರಂಭ. ಲಂಕೇಶ್ ಪತ್ರಿಕೆ ಕನ್ನಡದ ಸಾಂಸ್ಕೃತಿಕ ಲೋಕದ ಒಂದು ಘಟನೆಯಾಗಿ ಬರಹಗಾರರು ಮತ್ತು ಓದುಗರಲ್ಲಿ ಸಂಚಲವನ್ನೇ ಉಂಟುಮಾಡಿತ್ತು. ಹೊಸ ಸಂವೇದನೆಗೆ ಕಾರಣವಾಗಿತ್ತು. ಹೊಸ ಜನಾಂಗದ ತರುಣರು ಮತ್ತು ತಾಯಿಯರು ತಮ್ಮ ಅಂತರಂಗವನ್ನು ಹೇಳಿಕೊಳ್ಳುವಂತೆ ಲಂಕೇಶ್ ಬರವಣಿಗೆ ಪ್ರಚೋದಿಸಿತ್ತು. ಆ ಸಮಯದಲ್ಲಿಯೇ ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳು ತಲೆಎತ್ತಿ ಜನರ ನೆಮ್ಮದಿಯ ಬದುಕಿಗೆ ಗಂಡಾಂತರ ತಂದಿದ್ದವು. ಜನರ ಸಹಬಾಳ್ವೆಯನ್ನು ಕದಡಿ ಪ್ರತ್ಯೇಕಿಸುವಂತಹ ಮನೆಹಾಳು ಕೆಲಸಗಳು ಆರಂಭಗೊಂಡಿದ್ದವು. ಅಂತಹ ಸಮಯದಲ್ಲಿ ಒಬ್ಬ ಮುಸ್ಲಿಂ ಹೆಣ್ಣುಮಗಳಿಂದ ಪತ್ರವೊಂದು ಲಂಕೇಶರಿಗೆ ಬಂದಿತ್ತು. ಆ ಪತ್ರದಲ್ಲವರು ’ನನ್ನ ಸಹೋದರನೊಬ್ಬ ಸೈನ್ಯದಲ್ಲಿದ್ದು ಈ ದೇಶ ಕಾಯುತ್ತಿದ್ದಾನೆ ಆದರೂ ನಮ್ಮನ್ನಿಲ್ಲಿ ದೇಶದ್ರೋಹಿಗಳು ಎಂಬಂತೆ ಮೂದಲಿಸುತ್ತಿದ್ದಾರೆ. ನಾವು ಹೇಗೆ ಸಹಿಸಿಕೊಳ್ಳಬೇಕು ಮತ್ತು ಪ್ರತಿಕ್ರಿಯಿಸಬೇಕು’ ಎಂದು ಬರೆದುಕೊಂಡಿದ್ದರು. ಇದಕ್ಕೆ ಉತ್ತರವಾಗಿ ಲಂಕೇಶರು ನೀವು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ; ನಮ್ಮಲ್ಲಿ ಬರೆಯಿರಿ ಎಂದು ಉತ್ತರಿಸಿದರು. ಅಂದಿನಿಂದ ಸಾರಾ ಅಬೂಬಕ್ಕರ್ ನಿರಂತರವಾಗಿ ಲಂಕೇಶ್ ಪತ್ರಿಕೆಗೆ ಬರೆಯತೊಡಗಿದರು.

ಸಾರಾ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿದ್ದು ’ಚಂದ್ರಗಿರಿ ತೀರದಲಿ’ ಎಂಬ ಪುಟ್ಟ ಕಾದಂಬರಿ. ಆವರೆಗೆ ನಮಗೆ ಅಪರಿಚಿತವಾಗಿದ್ದ ಮುಸ್ಲಿಂ ಲೋಕದ ಹೆಣ್ಣು ಮಕ್ಕಳ ವಿವರ ತಿಳಿದದ್ದೇ ’ಚಂದ್ರಗಿರಿ ತೀರದಲ್ಲಿ’ ಎಂಬ ಧಾರವಾಹಿಯಿಂದ. ಬರವಣಿಗೆಯಲ್ಲಿನ ಪ್ರಾಮಾಣಿಕತೆ ಹೇಗಿರಬೇಕೆಂಬುದನ್ನು ಸಾರಾ ತೋರಿಸಿದ್ದರು. ಸೈಕಲ್ ಶಾಪು, ಗುಜರಿ ಅಂಗಡಿಗಳಲ್ಲಿನ ಬಡವರ ಮದುವೆ ಸಂಬಂಧಗಳು, ಕೊಡುಕೊಳ್ಳುವಿಕೆ ಮತ್ತು ವ್ಯವಹಾರಗಳು, ಅದರ ಪರಿಣಾಮ, ಮಹಿಳೆಯರ ಅತಂತ್ರ ಬದುಕು ಇವೆಲ್ಲಾ ಲೇಖಕಿಯಿಂದ ಯಾವ ಉತ್ಪ್ರೇಕ್ಷಿತ ಪದಪುಂಜಗಳಿಲ್ಲದೆ ಅನಾವರಣಗೊಂಡು ಮನಸ್ಸನ್ನು ಕಲಕಿದ್ದವು. ಸಾಮಾನ್ಯವಾಗಿ ಧಾರವಾಹಿಗಳನ್ನು ಓದುವವರೆಲ್ಲಾ ಆಗ ’ಚಂದ್ರಗಿರಿ ತೀರದಲ್ಲಿ’ ಕಾದು ಓದಿದ್ದರು. ಇನ್ನೆರಡು ವರ್ಷ ಕಳೆದರೆ ನಲವತ್ತು ವರ್ಷ ತುಂಬುವ ಆ ಕಾದಂಬರಿ ಇನ್ನೂ ಓದುಗರ ಮನಸ್ಸಿನಲ್ಲಿ ಉಳಿದಿರುವುದಕ್ಕೆ ಕಾರಣ ಅದರ ತಾಜಾತನ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯಾಗಿದೆ. ಆ ನಂತರ ಸಾರ ನಿರಂತರವಾಗಿ ಬರೆದರು. ಮುಸ್ಲಿಂ ಮಹಿಳೆಯರ ಬದುಕು ಮತ್ತು ಸ್ಥಿತಿಗತಿಗಳನ್ನು ಅನಾವರಣ ಮಾಡಿದರು. ಬರೆದಂತೆ ಬದುಕಿದ ಮಹಿಳೆಯಾಗಿದ್ದರು. ಅವರ ದನಿ ಮತಾಂಧರಿಗೆ ಸಿಟ್ಟು ತಂದಿದ್ದವು. ಆ ಸಮಯದಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಕುರ್ಚಿಯನ್ನು ಅವರ ಮೇಲೆ ಎಸೆದು ಗಲಭೆ ಎಬ್ಬಿಸಿದರು. ಇದರಿಂದೇನೂ ಅಂಜದ ಸಾರಾ, ’ನಾನು ಸತ್ಯವನ್ನು ಹೇಳುತ್ತೇನೆ, ಅದನ್ನೇ ಬರೆಯುತ್ತೇನೆ’ ಎಂದು ಕೂಗಿದರು. ಆಗ ಲಂಕೇಶ್, ಸಾರ ಅವರಿಗೆ ಧೈರ್ಯ ತುಂಬಿ, ’ಸಾರಾ ಅವರು ಮುಸ್ಲಿಂ ಸಂಪ್ರದಾಯಗಳನ್ನು ಪಾಲಿಸುತ್ತಿರುವವರು. ಅವರೆಂದೂ ಸಂಪ್ರದಾಯವನ್ನು ಬಿಟ್ಟವರಲ್ಲ. ಸಮಯಕ್ಕೆ ಸರಿಯಾಗಿ ಪ್ರಾರ್ಥನೆ ಮಾಡುವ ಮಹಿಳೆ. ಅಂಥವರನ್ನು ಸಹಿಸಿಕೊಳ್ಳಲಾಗದ ನಿಮಗೆ ಕೆಟ್ಟ ದಿನಗಳಿವೆ’ ಎಂದು ಟೀಕಿಸಿದ್ದರು. ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳಿಗೆ ಉಗ್ರ ಪ್ರತಿಭಟನೆ ಬಂದರೆ ತಮ್ಮ ಅಭಿವ್ಯಕ್ತಿ ಶೈಲಿಯನ್ನ ಮೆತ್ತಗಾಗಿಸಿಕೊಳ್ಳುತ್ತಾರೆ ಇಲ್ಲ ಬದಲಿಸಿಕೊಳ್ಳುತ್ತಾರೆ. ಆದರೆ ಸಾರಾ ಹಾಗಾಗಲಿಲ್ಲ ಬದುಕಿನ ಕಡೆಯವರೆಗೂ ಅಭಿವ್ಯಕ್ತಿ ಪ್ರಾಮಾಣಿಕವಾಗಿಯೇ ಇತ್ತು.

ನಮ್ಮೆಲ್ಲರ ಇಷ್ಟದ ಲೇಖಕಿಯಾದ ಸಾರಾ ಅವರನ್ನು ಲಂಕೇಶ್ ಪತ್ರಿಕೆ ಇಪ್ಪತ್ತು ವರ್ಷ ತುಂಬಿದ ಸಮಾರಂಭಕ್ಕೆ ಕರೆಸಬೇಕೆಂದು ಆಲೋಚಿಸಿದೆವು. ಅದರಂತೆ 1999ರ ಡಿಸೆಂಬರ್ 6ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಭೆ ಏರ್ಪಡಿಸಲಾಯಿತು. ಸಾರಾ ಅವರಿಗೆ ಫೋನ್ ಮಾಡಲಾಗಿ ಒಪ್ಪಿಕೊಂಡು ಬರುವುದಾಗಿ ಹೇಳಿದರು. ಆಹ್ವಾನ ಪತ್ರಿಕೆ ಪ್ರಿಂಟ್ ಹಾಕಿಸಿಕೊಂಡು ಬರುವುದಾಗಿ ಲಂಕೇಶರಿಗೆ ತೋರಲು ಹೋದರೆ, ಅವರು ರೇಗಿ “ಅದೇನಯ್ಯ ಡಿಸೆಂಬರ್ ಆರಿಗೆ ಗಂಟು ಬಿದ್ದಿದ್ದೀರಿ. ಬೇರೆ ದಿನಾಂಕ ಗೊತ್ತು ಮಾಡು” ಎಂದರು. ನಾನು ಮುಂದಿನ ಹದಿನಾಲ್ಕನೇ ತಾರೀಕು ನಿಗದಿ ಮಾಡುವ ಗಡಿಬಿಡಿಯಲ್ಲಿ ಕಾರ್ಯಕ್ರಮ ಮುಂದೆ ಹೋದದ್ದನ್ನು ಸಾರ ಅವರಿಗೆ ತಿಳಿಸಲಿಲ್ಲ. ಆದರೆ ಸಾರಾ ಆರನೇ ತಾರೀಕು ಶಿವಮೊಗ್ಗಕ್ಕೆ ಬಂದು ಕುವೆಂಪು ರಂಗಮಂದಿರಕ್ಕೆ ಹೋಗಿದ್ದಾರೆ. ಅಲ್ಲಿ ಯಾರೂ ಇರದಿದ್ದನ್ನು ಕಂಡು, ಕಡೆಗೆ ಇಲಾಖೆ ನಿರ್ದೇಶಕನ ಛೇಂಬರಿಗೆ ಹೋಗಿ ಕೇಳಿದಾಗ ಅವರು, ’ಈ ದಿನ ಯಾವ ಸಮಾರಂಭವೂ ಇಲ್ಲ’ ಎಂದಿದ್ದಾರೆ. ಸಾರಾ ವಾಪಸು ಹೊರಟುಹೋಗಿದ್ದಾರೆ. ಇದನ್ನು ನನ್ನ ಗಮನಕ್ಕೆ ನಿರ್ದೇಶಕರು ತಂದಾಗ, ನಾನು ಕ್ಷಮೆ ಯಾಚಿಸಲು ಫೋನ್ ಮಾಡಿ ಮಾತಾಡಿದೆ. ಆದರೆ ಸಾರಾ, ’ನಾನು ಅಲ್ಲಿ ಬಂದೇ ಇಲ್ಲ’ ಎಂದರು. ನನ್ನ ಅಜಾಗರೂಕತೆಯಿಂದ ನನಗೆ ನೋವಾಗಬಾರದೆಂದು ನಾನಲ್ಲಿಗೆ ಬಂದೇ ಇಲ್ಲವೆಂದು ವಾದಿಸಿದರು. ಅದು ಅವರ ಶ್ರೇಷ್ಠ ಗುಣ. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಂಡು ಅದನ್ನು ತಮ್ಮ ಬದುಕಿನುದ್ದಕ್ಕೂ ವ್ರತದಂತೆ ಪಾಲಿಸಿದ ಸಾರಾ ಈ ನಾಡು ತಲುಪಿರುವ ಸ್ಥಿತಿ ನೆನಸಿಕೊಂಡು ಕೊರಗುವಂತಾಗಿದ್ದರು.

ಲಂಕೇಶ್ ಪತ್ರಿಕೆ ಮುಖಾಂತರ ಬರವಣಿಗೆಯ ಉತ್ತುಂಗಕ್ಕೇರಿದ ಒಂದು ಡಜನ್ ಮಹಿಳಾ ಲೇಖಕಿಯರ ಪೈಕಿ ಲಂಕೇಶರ ಮತ್ತು ಲಂಕೇಶ್ ಪತ್ರಿಕೆಯ ಸಿದ್ಧಾಂತಗಳಿಗೆ ಚ್ಯುತಿಬಾರದಂತೆ ಬದುಕಿದ ವಿರಳ ಮಹಿಳೆ ಸಾರಾ. ಕಳೆದ 8ನೇ ತಾರೀಕಿನಂದು ಬೆಂಗಳೂರಲ್ಲಿ ನಡೆದ ಜನಸಾಹಿತ್ಯ ಸಮಾವೇಶದ ಅಂಗಳದಲ್ಲಿ ಹಲವಾರು ಕಲಾವಿದರು ತಮ್ಮ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿದ್ರು. ಒಬ್ಬ ಕಲಾವಿದರು (ಅವರ ಚಿತ್ರವನ್ನೇ ದಿಟ್ಟಿಸುತ್ತಾ ಕಲಾವಿದರ ಹೆಸರನ್ನು ಗಮನಿಸುವುದನ್ನೇ ಮರೆತೆ) ಅತ್ಯಂತ ಕಡಿಮೆ ಗೆರೆಯಲ್ಲಿ ಸಾರ ಅವರ ದುಂಡದ ಮುಖವನ್ನು ಚಿತ್ರಿಸಿದ್ದರು. ಅಲ್ಲೇ ಬೊಳುವಾರು ಚಿತ್ರವೂ ಇತ್ತು. ಅದು ಎಂದಿನಂತೆ ದಿಗ್ಭ್ರಮೆಯ ನೋಟದಲ್ಲಿತ್ತು. ಆದರೆ ಅತ್ಯಂತ ಕಡಿಮೆ ರೇಖೆಗಳಲ್ಲಿ ಸಾರಾ ಅವರ ಚಿತ್ರ ಬಿಡಿಸಿದ್ದ ಬಗೆಯನ್ನು ಮೆಚ್ಚಿಕೊಂಡ ನಾನು ನಟರಾಜ್ ಹುಳಿಯಾರ್‌ರನ್ನು ಕರೆದು ಆ ಚಿತ್ರ ತೋರಿಸಿದೆ. ಅವರೂ ಮೆಚ್ಚಿಕೊಂಡರು. ಮಹಿಳಾ ಲೋಕದ ಸಮಸ್ಯೆಗಳನ್ನ ತಮ್ಮ ಗಂಭೀರ ಮುಖದಲ್ಲಿ ಪ್ರತಿಬಿಂಬಿಸುತ್ತಿದ್ದ ಸಾರಾ ತುಂಬ ಆತಂಕದಿಂದಲೇ ನಿರ್ಗಮಿಸಿದ್ದಾರೆ. ಆದರೆ ಜನಸಾಹಿತ್ಯ ಸಮಾವೇಶದಲ್ಲಿ ಕಂಡ ಹಲವಾರು ಮುಸ್ಲಿಂ ತರುಣಿಯರು ಸಾರಾ ಅವರ ಸ್ಥಾನ ತುಂಬಲಿದ್ದಾರೆ. ಹಾಗಾಗಿ ನಿಮ್ಮ ಬದುಕು ಸಾರ್ಥಕವಾಗಿದೆ, ಹೋಗಿ ಬನ್ನಿ ಸಾರಾ ಅನ್ನಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...

ತಿರುವನಂತಪುರಂ | 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧು : ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳಿಗೆ ನಾಲ್ಕು ವಾರಗಳ ಒಳಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ಜೂ.24) ಆದೇಶಿಸಿದೆ. ಜನವರಿ ತಿಂಗಳಲ್ಲಿ ಕೌನ್ಸಿಲರ್‌ಗಳ ಪ್ರಮಾಣವಚನ ನಡೆದಿತ್ತು. ಡೆಪ್ಯುಟಿ ಮೇಯರ್...

ಎಸ್‌ಐಆರ್‌ನಿಂದ ಹೊರಗಿಡಲಾದ ಜನರಿಗೆ ಪಡಿತರ ನಿರಾಕರಣೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸೂಚನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಸೌಲಭ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುತ್ತಿರುವ ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...