Homeಅಂಕಣಗಳುಸಾಚಾರ್ ವರದಿಯ ನಂತರವೂ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ

ಸಾಚಾರ್ ವರದಿಯ ನಂತರವೂ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ

- Advertisement -
- Advertisement -

ಆ ದೇವೇಂದ್ರನೇ ಎರಡನೇ ಬಾರಿಗೆ ಬಂದಾಗ ನೋಡುಗರಿಗೆ ಯಾವ ಉತ್ಸಾಹವೂ ಇರುವುದಿಲ್ಲವಂತೆ; ಅದರಿಂದ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಹೋಗಿ ಮೋದಿ ಫ್ಲೈಟ್ ಹತ್ತುವಾಗ ಆ ಪ್ರದೇಶದಲ್ಲಿ ಯಾವ ಕುತೂಹಲವೂ ಇರಲಿಲ್ಲ. ಏಕೆಂದರೆ ಅವರ ಪಾರ್ಟಿಯ ಮಾಡಾಳು ವಿರುಪಾಕ್ಷಪ್ಪ ಜೈಲುಪಾಲಾಗಿದ್ದರು; ಹಿಂದೊಮ್ಮೆ ಅಡ್ವಾನಿ ಕರ್ನಾಟಕಕ್ಕೆ ಬಂದಾಗ ಎಡೂರಪ್ಪನವರು ಜೈಲುಪಾಲಾಗಿದ್ದರು. ಆಗ ಅಡ್ವಾನಿ ತಮ್ಮ ಪಕ್ಷದವರ ಬಗ್ಗೆ ಯಾವ ಮುಲಾಜು ಇಲ್ಲದೆ ಕರ್ನಾಟಕದ ಬಿಜೆಪಿ ಸರಕಾರ ಶುದ್ಧ ಜೇಬುಗಳ್ಳರ ಪಕ್ಷವಾಗಿವೆ ಎಂದು ಟಿಕೀಸಿದ್ದರು; ಆದರೆ ಈಗ ಆ ಜೇಬುಗಳ್ಳರು ದರೋಡೆಕೋರರಾಗಿದ್ದಾರೆ! ದರೋಡೆಕೋರರು ಬಲಿಷ್ಠರಾಗಿರುತ್ತಾರೆ. ಅವರಿಗೆ ಯಾವ ಭಯವೂ ಇರುವುದಿಲ್ಲ; ಜನರ ಭಯವಂತೂ ಇಲ್ಲವೇಇಲ್ಲ. ಸಾಮಾನ್ಯವಾಗಿ ದರೋಡೆಕೋರರ ಲೀಡರು ದೋಚಿದ್ದರಲ್ಲಿ ಒಂದಿಷ್ಟು ದಾನವನ್ನ ಮಾಡುತ್ತಾನಂತೆ. ಹಾಗೆಯೇ ಅಂತಹ ಕರ್ನಾಟಕದ ಲೀಡರ್ ಉದ್ಯೋಗವೇ ಇಲ್ಲದ ಸಮಯದಲ್ಲಿ ಮೀಸಲಾತಿ ಹಂಚುತ್ತಿದ್ದಾರಲ್ಲ, ಥೂತ್ತೇರಿ.

****

ಈಜುಬಾರದೆ ಮುಳುಗುತ್ತಿರುವ ವ್ಯಕ್ತಿ ಕೈಗೆ ಸಿಕ್ಕಿದ್ದನ್ನೆಲ್ಲಾ ಹಿಡಿಯುವಂತೆ ಮನೆಗೆ ಹೊರಟಿರುವ ಬೊಮ್ಮಾಯಿ ಸಿಕ್ಕಸಿಕ್ಕವರಿಗೆಲ್ಲಾ ಮೀಸಲಾತಿ ಹಂಚುತ್ತ, ಬಿಜೆಪಿಗಳ ಅಜೆಂಡಾದಂತೆ ಮುಸ್ಲಿಮರನ್ನ ಸಂಪೂರ್ಣ ಮೀಸಲಾತಿಯಿಂದ ಹೊರಗಿಡಲು ನಿಂತಿದ್ದಾರಲ್ಲ. ಅವರ ತಟ್ಟೆಯಲ್ಲಿದ್ದ ನಾಲ್ಕು ಪೀಸು ಮಟನ್ ಎಗರಿಸಿ ಅದರಲ್ಲಿ ಲಿಂಗಾಯಿತರಿಗೆ ಎರಡು ಪೀಸು ಮತ್ತು ಒಕ್ಕಲಿಗರಿಗೆ ಎರಡು ಪೀಸು ಎಸೆದುಬಿಟ್ಟರಲ್ಲಾ. ಈ ಕೃತ್ಯದಿಂದ ಸಿಟ್ಟುಗೊಂಡು, ಒಕ್ಕಲಿಗ ಮತ್ತು ಲಿಂಗಾಯಿತರು ಇನ್ನೊಬ್ಬರಿಂದ ಕಸಿದುಕೊಟ್ಟದ್ದು ಬೇಡವೆಂದು ಭುಗಿಲೇಳುತ್ತಾರೆಂದು ಕಾದರೆ ಹಾಗೇನೂ ಆಗದೆ ಸುಮ್ಮನಿದ್ದಾರಂತಲ್ಲಾ. ಲಿಂಗಾಯಿತರು ಹಿಂದೆ ಬಸವ ತತ್ವವಿದೆ ಒಕ್ಕಲಿಗರ ಹಿಂದೆ ವಿಶ್ವಮಾನವ ತತ್ವವಿದೆ ಮತ್ತು ಸರ್ವಜನಾಂಗದ ಹಿತವಿದೆ ಎಂದು ಭಾವಿಸಿದ್ದವರೆಲ್ಲಾ ಬೇಸ್ತು ಬೀಳುವಂತೆ ಈ ಬಲಾಢ್ಯ ಕೋಮುಗಳು ಯಾರ ತಟ್ಟೆಯಿಂದ ಕಿತ್ತುಕೊಟ್ಟರೇನು, ಅಂತೂ ದಕ್ಕಿತಲ್ಲಾ ಎಂಬಂತೆ ಸುಮ್ಮನಾಗಿರುವಾಗ, ಸರಕಾರ ಸೃಷ್ಟಿಮಾಡುವ ಉದ್ಯೋಗದ ಕಡೆ ಸಾಮಾನ್ಯವಾಗಿ ಹೆಚ್ಚು ತಿರುಗಿ ನೋಡದ ಮುಸಲ್ಮಾನರು, ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ತಮ್ಮ ಜನಾಂಗದ ರಾಜಕಾರಣಿಗಳು ಮತ್ತು ಮುಲ್ಲಾಗಳ ವ್ಯಾಪ್ತಿಗೆ ಮೀಸಲಾತಿ ವಿಷಯ ಬಿಟ್ಟು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರಂತಲ್ಲಾ, ಥೂತ್ತೇರಿ.

****

ಇಸ್ಲಾಂ ಧರ್ಮದಲ್ಲಿ ಬಡವರಿರಬಹುದು, ನಿರ್ಗತಿಕರೂ ಇದ್ದಾರೆ ಆದರೆ ಶ್ರೇಣಿಕರಣವಿಲ್ಲ. ಅಲ್ಲಿನ ಮಸೀದಿಯಲ್ಲಿ ಜಟಕಾ ಗಾಡಿ ಓಡಿಸುವ ಮುಸ್ಲಿಂ ವ್ಯಕ್ತಿಯ ಜೊತೆಗೆ ರತ್ನದ ವ್ಯಾಪಾರಿಯೂ ನಿಂತು ನಮಾಜು ಮಾಡುತ್ತಾನೆ, ಇಂತಹ ಸಮಾನತೆಗಾಗಿಯೇ ಆ ಧರ್ಮ ಜಗತ್ತಿನಾದ್ಯಂತ ವೇಗವಾಗಿ ಹಬ್ಬಿದ್ದು ಎನ್ನಲಾಗುತ್ತದೆ. ದುಡಿದು ತಿನ್ನುವಂತೆ ಪೈಗಂಬರರೇ ಶಾಸನಮಾಡಿರುವುದರಿಂದ ದುಡಿದು ತಿನ್ನುವ ಮುಸ್ಲಿಮರು ದೇಶದ ಸಂಪತ್ತು ಹೆಚ್ಚಿಸುವ ಶ್ರಮಜೀವಿಗಳು. ಅದಕ್ಕೆ ಅಲ್ಲಿ ಏನಾದರೊಂದು ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು ಸಾಮಾನ್ಯ. ತನ್ನ ಓದಿಗೆ ತಕ್ಕ ಕೆಲಸ ಬೇಕೆಂದು ಹಠ ಹಿಡಿದು ಕೂತಿರುವ ಇತರ ಕೋಮುಗಳಲ್ಲೇ ನಿರುದ್ಯೋಗ ಜಾಸ್ತಿ. ಇನ್ನೊಂದು ಮುಖ್ಯ ಸಂಗತಿ ಯಾವುದೆಂದರೆ ಭಾರತದಲ್ಲಿ ನಿರುದ್ಯೋಗ ಭೀಕರವಾಗಿರುವುದು. ಹೀಗೆ ದುಡಿದು ತಿನ್ನುವ ಮುಸ್ಲಿಮರು ಎಲ್ಲ ಜನಾಂಗಕ್ಕೂ ಮಾದರಿಯಾದವರು. ಸಾಚಾರ್ ವರದಿಯ ನಂತರವೂ ಸರಕಾರ ಅವರ ಕಡೆ ತಿರುಗಿಯೂ ನೋಡದೆ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ. ಹೀಗೆ ಕಿತ್ತುಕೊಳ್ಳಲು ಮುಂದಾದವರು, ಮಿಕವನ್ನು ಜೀವಂತವಾಗಿಯೇ ಹಿಂದಿನಿಂದ ಬಾಯಿಹಾಕಿ ತಿನ್ನುವ ಹೈನಾಗಳ ಮನಸ್ಥಿತಿಯವರಂಥಲ್ಲಾ, ಥೂತ್ತೇರಿ.

****

ಜೆಡಿಎಸ್ ಮತ್ತು ಕಾಂಗ್ರೆಸ್ ಪಾರ್ಟಿಗೆ ಬೇಡವಾದ ಶಿವರಾಮೇಗೌಡರನ್ನ ಬಿಜೆಪಿ ಆಹ್ವಾನಿಸಿದೆ. ಈಗಾಗಲೇ ಚುನಾವಣೆಗಾಗಿ ಸಿಕ್ಕಾಪಟ್ಟೆ ಹಣ ಚೆಲ್ಲಿರುವ ಫೈಟರ್ ರವಿ ಎಂಬ ಮೋದಿ ಅಭಿಮಾನಿ, ’ಯಾವ ಕಾರಣಕ್ಕೂ ನಾನು ಹಿಂದೆ ಸರಿಯುವುದಿಲ್ಲ ನನಗೇ ಬಿಜೆಪಿ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರಂತಲ್ಲಾ. ಆತನ ಮೇಲಿದ್ದ ಪೋಲಿಸ್ ಕೇಸುಗಳನ್ನು ಜ್ಞಾಪಿಸಿ ಸುಮ್ಮನಿರುವಂತೆ ಮಾಡುವುದು ಬಿಜೆಪಿಗೆ ಅಸಾಧ್ಯವಾದ ಕೆಲಸವೇನಲ್ಲ ಎಂದು ವಾದಿಸುತ್ತಿರುವ ಶಿವರಾಮೇಗೌಡರ ಕಡೆಯ ಪಡ್ಡೆ ಹುಡುಗರಾಗಲೇ, ಆ ಗಿರೀಶ್ ಕಾರ್ನಾಡ್ ನಮಗೆ ಸಿಗಬೇಕಿತ್ತು; ಈ ಸಾಹಿತಿಗಳು ಏನೇನೂ ಬಾಯಿಗೆ ಬಂದಂತೆ ಮಾತನಾಡುತ್ತಾರಂತೆ. ಉರಿಗೌಡ ನಂಜೇಗೌಡ ನಮ್ಮ ತಾಲೂಕಿನವರು. ಅದರಲ್ಲೂ ನಂಜೇಗೌಡ ನಮ್ಮ ಜನಾಂಗದ ಇತಿಹಾಸ ಸಂಶೋಧಕ ಹ.ಕ. ರಾಜೇಗೌಡರ ಊರಿನವನು. ಯಾರೂ ಕೊಲ್ಲಲಾಗದ ಟಿಪ್ಪು ಸುಲ್ತಾನನ ಎದೆಗೆ ಭರ್ಜಿ ಹಾಕಿ ಸಾಯಿಸಿದವರು ನಮ್ಮ ಉರಿಗೌಡ ನಂಜೇಗೌಡ ಗೊತ್ತ? ಎಂದು ಚುನಾವಣಾ ಪ್ರಚಾರವನ್ನೇ ಆರಂಭಿಸಿದ್ದಾರಂತಲ್ಲಾ. ಹಾಗಾದರೆ ಈ ಮುಗ್ದ ಹುಡುಗರು ಮುಂದೆ ಇನ್ನೂ ಏನೇನು ಮಾತನಾಡಬಹುದೆಂದು ಊಹಿಸಲಾಗದೆ, ಪ್ರಜ್ಞಾವಂತ ಜನ ಉರಿಯತ್ತಿಸಿಕೊಂಡು ಕಂಗಾಲಾಗಿದ್ದಾರಂತಲ್ಲಾ, ಥೂತ್ತೇರಿ.

****

ಎಡೂರಪ್ಪನವರ ರಾಜಕೀಯ ಇತಿಹಾಸದಲ್ಲಿ ಪಾರ್ಟಿಗಾಗಿ ಕೆಲವು ಜನಗಳ ಬಗ್ಗೆ ಕೆಲವು ಕೆಟ್ಟ ಮಾತುಗಳನ್ನು ಮಾತನಾಡಿರಬಹುದೇ ಹೊರತು ಎಂದೂ ಯಾವ ಜನಾಂಗವನ್ನ ನಿಂದಿಸಿದವರಲ್ಲ. ಹಾಗಾಗಿ ಶಿಕಾರಿಪುರದಲ್ಲಿ ಮುಸ್ಲಿಮರು ಮತ್ತು ಲಂಬಾಣಿಗರು ಅವರನ್ನ ಪೂರ್ಣ ಬೆಂಬಲಿಸುತ್ತಿದ್ದರು. ಅದರಲ್ಲೂ ಕುವೆಂಪು ಯೂನಿಯರ್ಸಿಟಿಯಲ್ಲಿ ನಡೆದ ಪೇಕ್ ಸರ್ಟಿಫಿಕೇಟ್ ಮಾರಾಟದ ದಂಧೆಯಲ್ಲಿ ಸಿಕ್ಕ ಮುಕ್ಕಾಲು ಜನ ಲಂಬಾಣಿಗರು; ಅವರನ್ನೆಲ್ಲಾ ಬಚಾವು ಮಾಡಲು ಓಡಾಡಿದವರು ರಾಘವೇಂದ್ರ. ಆದರೀಗ ಒಳಮೀಸಲು ಜಾರಿ ಶಿಫಾರಸ್ಸಿನಿಂದ ಸಿಟ್ಟಾದ ಲಂಬಾಣಿಗರು, ಎಡೂರಪ್ಪನ ಮನೆಗೆ ಎರ್ರಾಬಿರ್ರಿ ಕಲ್ಲು ಬೀರಿದ್ದಾರಲ್ಲಾ. ಒಳ ಮೀಸಲು ಜಾರಿ ಶಿಫಾರಸ್ಸು ಮಾಡಿದವರು ಬೊಮ್ಮಾಯಿ. ಕಲ್ಲು ಬೀಸಿಸಿಕೊಂಡವರು ಎಡೂರಪ್ಪ. ಈ ಕೃತ್ಯದಿಂದ ಜಮದಗ್ನಿಯುಂತಾಗಿರುವ ಎಡೂರಪ್ಪ ಯಾವಾಗ ಭುಗಿಲೇಳುತ್ತಾರೊ ಏನೋ ಅಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...