Homeಅಂಕಣಗಳುಸಾಚಾರ್ ವರದಿಯ ನಂತರವೂ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ

ಸಾಚಾರ್ ವರದಿಯ ನಂತರವೂ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ

- Advertisement -
- Advertisement -

ಆ ದೇವೇಂದ್ರನೇ ಎರಡನೇ ಬಾರಿಗೆ ಬಂದಾಗ ನೋಡುಗರಿಗೆ ಯಾವ ಉತ್ಸಾಹವೂ ಇರುವುದಿಲ್ಲವಂತೆ; ಅದರಿಂದ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಹೋಗಿ ಮೋದಿ ಫ್ಲೈಟ್ ಹತ್ತುವಾಗ ಆ ಪ್ರದೇಶದಲ್ಲಿ ಯಾವ ಕುತೂಹಲವೂ ಇರಲಿಲ್ಲ. ಏಕೆಂದರೆ ಅವರ ಪಾರ್ಟಿಯ ಮಾಡಾಳು ವಿರುಪಾಕ್ಷಪ್ಪ ಜೈಲುಪಾಲಾಗಿದ್ದರು; ಹಿಂದೊಮ್ಮೆ ಅಡ್ವಾನಿ ಕರ್ನಾಟಕಕ್ಕೆ ಬಂದಾಗ ಎಡೂರಪ್ಪನವರು ಜೈಲುಪಾಲಾಗಿದ್ದರು. ಆಗ ಅಡ್ವಾನಿ ತಮ್ಮ ಪಕ್ಷದವರ ಬಗ್ಗೆ ಯಾವ ಮುಲಾಜು ಇಲ್ಲದೆ ಕರ್ನಾಟಕದ ಬಿಜೆಪಿ ಸರಕಾರ ಶುದ್ಧ ಜೇಬುಗಳ್ಳರ ಪಕ್ಷವಾಗಿವೆ ಎಂದು ಟಿಕೀಸಿದ್ದರು; ಆದರೆ ಈಗ ಆ ಜೇಬುಗಳ್ಳರು ದರೋಡೆಕೋರರಾಗಿದ್ದಾರೆ! ದರೋಡೆಕೋರರು ಬಲಿಷ್ಠರಾಗಿರುತ್ತಾರೆ. ಅವರಿಗೆ ಯಾವ ಭಯವೂ ಇರುವುದಿಲ್ಲ; ಜನರ ಭಯವಂತೂ ಇಲ್ಲವೇಇಲ್ಲ. ಸಾಮಾನ್ಯವಾಗಿ ದರೋಡೆಕೋರರ ಲೀಡರು ದೋಚಿದ್ದರಲ್ಲಿ ಒಂದಿಷ್ಟು ದಾನವನ್ನ ಮಾಡುತ್ತಾನಂತೆ. ಹಾಗೆಯೇ ಅಂತಹ ಕರ್ನಾಟಕದ ಲೀಡರ್ ಉದ್ಯೋಗವೇ ಇಲ್ಲದ ಸಮಯದಲ್ಲಿ ಮೀಸಲಾತಿ ಹಂಚುತ್ತಿದ್ದಾರಲ್ಲ, ಥೂತ್ತೇರಿ.

****

ಈಜುಬಾರದೆ ಮುಳುಗುತ್ತಿರುವ ವ್ಯಕ್ತಿ ಕೈಗೆ ಸಿಕ್ಕಿದ್ದನ್ನೆಲ್ಲಾ ಹಿಡಿಯುವಂತೆ ಮನೆಗೆ ಹೊರಟಿರುವ ಬೊಮ್ಮಾಯಿ ಸಿಕ್ಕಸಿಕ್ಕವರಿಗೆಲ್ಲಾ ಮೀಸಲಾತಿ ಹಂಚುತ್ತ, ಬಿಜೆಪಿಗಳ ಅಜೆಂಡಾದಂತೆ ಮುಸ್ಲಿಮರನ್ನ ಸಂಪೂರ್ಣ ಮೀಸಲಾತಿಯಿಂದ ಹೊರಗಿಡಲು ನಿಂತಿದ್ದಾರಲ್ಲ. ಅವರ ತಟ್ಟೆಯಲ್ಲಿದ್ದ ನಾಲ್ಕು ಪೀಸು ಮಟನ್ ಎಗರಿಸಿ ಅದರಲ್ಲಿ ಲಿಂಗಾಯಿತರಿಗೆ ಎರಡು ಪೀಸು ಮತ್ತು ಒಕ್ಕಲಿಗರಿಗೆ ಎರಡು ಪೀಸು ಎಸೆದುಬಿಟ್ಟರಲ್ಲಾ. ಈ ಕೃತ್ಯದಿಂದ ಸಿಟ್ಟುಗೊಂಡು, ಒಕ್ಕಲಿಗ ಮತ್ತು ಲಿಂಗಾಯಿತರು ಇನ್ನೊಬ್ಬರಿಂದ ಕಸಿದುಕೊಟ್ಟದ್ದು ಬೇಡವೆಂದು ಭುಗಿಲೇಳುತ್ತಾರೆಂದು ಕಾದರೆ ಹಾಗೇನೂ ಆಗದೆ ಸುಮ್ಮನಿದ್ದಾರಂತಲ್ಲಾ. ಲಿಂಗಾಯಿತರು ಹಿಂದೆ ಬಸವ ತತ್ವವಿದೆ ಒಕ್ಕಲಿಗರ ಹಿಂದೆ ವಿಶ್ವಮಾನವ ತತ್ವವಿದೆ ಮತ್ತು ಸರ್ವಜನಾಂಗದ ಹಿತವಿದೆ ಎಂದು ಭಾವಿಸಿದ್ದವರೆಲ್ಲಾ ಬೇಸ್ತು ಬೀಳುವಂತೆ ಈ ಬಲಾಢ್ಯ ಕೋಮುಗಳು ಯಾರ ತಟ್ಟೆಯಿಂದ ಕಿತ್ತುಕೊಟ್ಟರೇನು, ಅಂತೂ ದಕ್ಕಿತಲ್ಲಾ ಎಂಬಂತೆ ಸುಮ್ಮನಾಗಿರುವಾಗ, ಸರಕಾರ ಸೃಷ್ಟಿಮಾಡುವ ಉದ್ಯೋಗದ ಕಡೆ ಸಾಮಾನ್ಯವಾಗಿ ಹೆಚ್ಚು ತಿರುಗಿ ನೋಡದ ಮುಸಲ್ಮಾನರು, ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ತಮ್ಮ ಜನಾಂಗದ ರಾಜಕಾರಣಿಗಳು ಮತ್ತು ಮುಲ್ಲಾಗಳ ವ್ಯಾಪ್ತಿಗೆ ಮೀಸಲಾತಿ ವಿಷಯ ಬಿಟ್ಟು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರಂತಲ್ಲಾ, ಥೂತ್ತೇರಿ.

****

ಇಸ್ಲಾಂ ಧರ್ಮದಲ್ಲಿ ಬಡವರಿರಬಹುದು, ನಿರ್ಗತಿಕರೂ ಇದ್ದಾರೆ ಆದರೆ ಶ್ರೇಣಿಕರಣವಿಲ್ಲ. ಅಲ್ಲಿನ ಮಸೀದಿಯಲ್ಲಿ ಜಟಕಾ ಗಾಡಿ ಓಡಿಸುವ ಮುಸ್ಲಿಂ ವ್ಯಕ್ತಿಯ ಜೊತೆಗೆ ರತ್ನದ ವ್ಯಾಪಾರಿಯೂ ನಿಂತು ನಮಾಜು ಮಾಡುತ್ತಾನೆ, ಇಂತಹ ಸಮಾನತೆಗಾಗಿಯೇ ಆ ಧರ್ಮ ಜಗತ್ತಿನಾದ್ಯಂತ ವೇಗವಾಗಿ ಹಬ್ಬಿದ್ದು ಎನ್ನಲಾಗುತ್ತದೆ. ದುಡಿದು ತಿನ್ನುವಂತೆ ಪೈಗಂಬರರೇ ಶಾಸನಮಾಡಿರುವುದರಿಂದ ದುಡಿದು ತಿನ್ನುವ ಮುಸ್ಲಿಮರು ದೇಶದ ಸಂಪತ್ತು ಹೆಚ್ಚಿಸುವ ಶ್ರಮಜೀವಿಗಳು. ಅದಕ್ಕೆ ಅಲ್ಲಿ ಏನಾದರೊಂದು ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು ಸಾಮಾನ್ಯ. ತನ್ನ ಓದಿಗೆ ತಕ್ಕ ಕೆಲಸ ಬೇಕೆಂದು ಹಠ ಹಿಡಿದು ಕೂತಿರುವ ಇತರ ಕೋಮುಗಳಲ್ಲೇ ನಿರುದ್ಯೋಗ ಜಾಸ್ತಿ. ಇನ್ನೊಂದು ಮುಖ್ಯ ಸಂಗತಿ ಯಾವುದೆಂದರೆ ಭಾರತದಲ್ಲಿ ನಿರುದ್ಯೋಗ ಭೀಕರವಾಗಿರುವುದು. ಹೀಗೆ ದುಡಿದು ತಿನ್ನುವ ಮುಸ್ಲಿಮರು ಎಲ್ಲ ಜನಾಂಗಕ್ಕೂ ಮಾದರಿಯಾದವರು. ಸಾಚಾರ್ ವರದಿಯ ನಂತರವೂ ಸರಕಾರ ಅವರ ಕಡೆ ತಿರುಗಿಯೂ ನೋಡದೆ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ. ಹೀಗೆ ಕಿತ್ತುಕೊಳ್ಳಲು ಮುಂದಾದವರು, ಮಿಕವನ್ನು ಜೀವಂತವಾಗಿಯೇ ಹಿಂದಿನಿಂದ ಬಾಯಿಹಾಕಿ ತಿನ್ನುವ ಹೈನಾಗಳ ಮನಸ್ಥಿತಿಯವರಂಥಲ್ಲಾ, ಥೂತ್ತೇರಿ.

****

ಜೆಡಿಎಸ್ ಮತ್ತು ಕಾಂಗ್ರೆಸ್ ಪಾರ್ಟಿಗೆ ಬೇಡವಾದ ಶಿವರಾಮೇಗೌಡರನ್ನ ಬಿಜೆಪಿ ಆಹ್ವಾನಿಸಿದೆ. ಈಗಾಗಲೇ ಚುನಾವಣೆಗಾಗಿ ಸಿಕ್ಕಾಪಟ್ಟೆ ಹಣ ಚೆಲ್ಲಿರುವ ಫೈಟರ್ ರವಿ ಎಂಬ ಮೋದಿ ಅಭಿಮಾನಿ, ’ಯಾವ ಕಾರಣಕ್ಕೂ ನಾನು ಹಿಂದೆ ಸರಿಯುವುದಿಲ್ಲ ನನಗೇ ಬಿಜೆಪಿ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರಂತಲ್ಲಾ. ಆತನ ಮೇಲಿದ್ದ ಪೋಲಿಸ್ ಕೇಸುಗಳನ್ನು ಜ್ಞಾಪಿಸಿ ಸುಮ್ಮನಿರುವಂತೆ ಮಾಡುವುದು ಬಿಜೆಪಿಗೆ ಅಸಾಧ್ಯವಾದ ಕೆಲಸವೇನಲ್ಲ ಎಂದು ವಾದಿಸುತ್ತಿರುವ ಶಿವರಾಮೇಗೌಡರ ಕಡೆಯ ಪಡ್ಡೆ ಹುಡುಗರಾಗಲೇ, ಆ ಗಿರೀಶ್ ಕಾರ್ನಾಡ್ ನಮಗೆ ಸಿಗಬೇಕಿತ್ತು; ಈ ಸಾಹಿತಿಗಳು ಏನೇನೂ ಬಾಯಿಗೆ ಬಂದಂತೆ ಮಾತನಾಡುತ್ತಾರಂತೆ. ಉರಿಗೌಡ ನಂಜೇಗೌಡ ನಮ್ಮ ತಾಲೂಕಿನವರು. ಅದರಲ್ಲೂ ನಂಜೇಗೌಡ ನಮ್ಮ ಜನಾಂಗದ ಇತಿಹಾಸ ಸಂಶೋಧಕ ಹ.ಕ. ರಾಜೇಗೌಡರ ಊರಿನವನು. ಯಾರೂ ಕೊಲ್ಲಲಾಗದ ಟಿಪ್ಪು ಸುಲ್ತಾನನ ಎದೆಗೆ ಭರ್ಜಿ ಹಾಕಿ ಸಾಯಿಸಿದವರು ನಮ್ಮ ಉರಿಗೌಡ ನಂಜೇಗೌಡ ಗೊತ್ತ? ಎಂದು ಚುನಾವಣಾ ಪ್ರಚಾರವನ್ನೇ ಆರಂಭಿಸಿದ್ದಾರಂತಲ್ಲಾ. ಹಾಗಾದರೆ ಈ ಮುಗ್ದ ಹುಡುಗರು ಮುಂದೆ ಇನ್ನೂ ಏನೇನು ಮಾತನಾಡಬಹುದೆಂದು ಊಹಿಸಲಾಗದೆ, ಪ್ರಜ್ಞಾವಂತ ಜನ ಉರಿಯತ್ತಿಸಿಕೊಂಡು ಕಂಗಾಲಾಗಿದ್ದಾರಂತಲ್ಲಾ, ಥೂತ್ತೇರಿ.

****

ಎಡೂರಪ್ಪನವರ ರಾಜಕೀಯ ಇತಿಹಾಸದಲ್ಲಿ ಪಾರ್ಟಿಗಾಗಿ ಕೆಲವು ಜನಗಳ ಬಗ್ಗೆ ಕೆಲವು ಕೆಟ್ಟ ಮಾತುಗಳನ್ನು ಮಾತನಾಡಿರಬಹುದೇ ಹೊರತು ಎಂದೂ ಯಾವ ಜನಾಂಗವನ್ನ ನಿಂದಿಸಿದವರಲ್ಲ. ಹಾಗಾಗಿ ಶಿಕಾರಿಪುರದಲ್ಲಿ ಮುಸ್ಲಿಮರು ಮತ್ತು ಲಂಬಾಣಿಗರು ಅವರನ್ನ ಪೂರ್ಣ ಬೆಂಬಲಿಸುತ್ತಿದ್ದರು. ಅದರಲ್ಲೂ ಕುವೆಂಪು ಯೂನಿಯರ್ಸಿಟಿಯಲ್ಲಿ ನಡೆದ ಪೇಕ್ ಸರ್ಟಿಫಿಕೇಟ್ ಮಾರಾಟದ ದಂಧೆಯಲ್ಲಿ ಸಿಕ್ಕ ಮುಕ್ಕಾಲು ಜನ ಲಂಬಾಣಿಗರು; ಅವರನ್ನೆಲ್ಲಾ ಬಚಾವು ಮಾಡಲು ಓಡಾಡಿದವರು ರಾಘವೇಂದ್ರ. ಆದರೀಗ ಒಳಮೀಸಲು ಜಾರಿ ಶಿಫಾರಸ್ಸಿನಿಂದ ಸಿಟ್ಟಾದ ಲಂಬಾಣಿಗರು, ಎಡೂರಪ್ಪನ ಮನೆಗೆ ಎರ್ರಾಬಿರ್ರಿ ಕಲ್ಲು ಬೀರಿದ್ದಾರಲ್ಲಾ. ಒಳ ಮೀಸಲು ಜಾರಿ ಶಿಫಾರಸ್ಸು ಮಾಡಿದವರು ಬೊಮ್ಮಾಯಿ. ಕಲ್ಲು ಬೀಸಿಸಿಕೊಂಡವರು ಎಡೂರಪ್ಪ. ಈ ಕೃತ್ಯದಿಂದ ಜಮದಗ್ನಿಯುಂತಾಗಿರುವ ಎಡೂರಪ್ಪ ಯಾವಾಗ ಭುಗಿಲೇಳುತ್ತಾರೊ ಏನೋ ಅಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...